ನಾಲ್ಕು ತಿಂಗಳ ಗರ್ಭಿಣಿಯಾದ ನವವಧು ನ್ಯುಮೋನಿಯ ಬಾಧಿಸಿ ಮೃತ್ಯು

ಕುಂಬಳೆ: ನಾಲ್ಕು ತಿಂಗಳ ಗರ್ಭಿಣಿ ಯಾದ ನವವಧು ನ್ಯುಮೋನಿಯಾ ಬಾಧಿಸಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಶಿರಿಯ ಕಡಪ್ಪುರದ ನಾರಾಯಣ- ಲಕ್ಷ್ಮಿ ದಂಪತಿಯ ಪುತ್ರಿಯೂ, ಚೌಕಿ ನಿವಾಸಿ ಸತೀಶ್ ಎಂಬವರ ಪತ್ನಿ ನಿಶಾ (೨೪) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಒಂದು ವಾರದಿಂದ ಇವರಿಗೆ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ.

೮ ತಿಂಗಳ ಹಿಂದೆಯಷ್ಟೇ ನಿಶಾರ ಮದುವೆ ನಡೆದಿದ್ದು, ಇದೀಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರೆನ್ನಲಾಗಿದೆ. ಮೃತರು ತಂದೆ, ತಾಯಿ, ಪತಿ, ಸಹೋದರಿ ನಮಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page