ಮಡಿಕೇರಿ ಬಳಿ ಕಾರು ಢಿಕ್ಕಿ ಹೊಡೆದು ಆರಿಕ್ಕಾಡಿ ನಿವಾಸಿ ಮಹಿಳೆ ಮೃತ್ಯು: ಪತಿ ಸಹಿತ ಇಬ್ಬರಿಗೆ ಗಾಯ
ಕುಂಬಳೆ: ಕರ್ನಾಟಕದ ಮಡಿ ಕೇರಿ ಬಳಿ ಕಾರು ಢಿಕ್ಕಿ ಹೊಡೆದು ಆರಿಕ್ಕಾಡಿ ನಿವಾಸಿಯಾದ ಮಹಿಳೆ ಮೃತಪಟ್ಟ ದಾರುಣ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.
ಅಪಘಾತದಲ್ಲಿ ಮತ್ತಿಬ್ಬರು ಗಂಭೀ ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆರಿ ಕ್ಕಾಡಿ ನಿವಾಸಿ ಅಬೂಬಕರ್ ಸಿದ್ದಿಕ್ರ ಪತ್ನಿ ರಾಬಿಯ (೫೨) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಬೂಬಕರ್ ಸಿದ್ದಿಕ್, ರಾಬಿಯಾರ ಸಹೋದರಿ ಖೈರು ಎಂಬಿವರು ಗಾಯಗೊಂಡಿದ್ದಾರೆ. ಇವರನ್ನು ಮಡಿಕೇರಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಮಡಿಕೇರಿ ಸುಂಟಿಕೊಪ್ಪದಲ್ಲಿ ಅಪಘಾತ ಸಂಭವಿಸಿದೆ. ಅಬೂಬಕರ್ ಸಿದ್ದಿಕ್ರ ಸಹೋದರನ ಮಗಳ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ನಿನ್ನೆ ಬೆಳಿಗ್ಗೆ ಆರಿಕ್ಕಾಡಿಯಿಂದ ಸುಂಟಿಕೊಪ್ಪಕ್ಕೆ ಪ್ರಯಾಣ ಹೊರಟಿತ್ತು. ಸುಂಟಿಕೊಪ್ಪದಲ್ಲಿ ಕಾರು ನಿಲ್ಲಿಸಿ ನಡೆದು ಹೋಗುತ್ತಿದ್ದಾಗ ಎದುರು ಭಾಗದಿಂದ ಆಗಮಿಸಿ ಕಾರು ಅವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ರಾಬಿಯ ಘಟನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತು. ರಾಬಿಯಾ ಕುಂಬಳೆ ಸಿಡಿಎಸ್ ಸದಸ್ಯೆಯಾಗಿದ್ದರು.