ಅರಿಬೈಲು ಶ್ರೀ ನಾಗಬ್ರಹ್ಮ ಕ್ಷೇತ್ರದ ಪ್ರಧಾನ ಅರ್ಚಕ ನಿಧನ
ಮಂಜೇಶ್ವರ: ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದ ಪ್ರಧಾನ ಅರ್ಚಕ, ಆಡಳಿತ ಮೊಕ್ತೇಸರ ಅರಿಬೈಲು ನಿವಾಸಿ ಎ. ರಾಧಾಕೃಷ್ಣ ಅರಿನಾಯ [80] ಹೃದಯಘಾತದಿಂದ ಬೆಂಗ ಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಮೃತರು ಪತ್ನಿ ಕುಸುಮ, ಮಕ್ಕಳಾದ ಸೌಮ್ಯ, ಸುಹಾಸ್, ಅಳಿಯ ಚೇತನ್, ಸಹೋದರ ರಾಮ್ ಮೋಹನ್, ಸಹೋದರಿ ಸುಧಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಸಂತಾಪ ಸೂಚಿಸಿದ್ದಾರೆ.