ಸೋಂಕಾಲ್‌ನಲ್ಲಿ ಎನ್‌ಡಿಎ ಚುನಾವಣಾ ಕಚೇರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಂದ ಉದ್ಘಾಟನೆ 16ರಂದು

ಮಂಗಲ್ಪಾಡಿ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಚುನಾವಣಾ ಕಚೇರಿ ಉದ್ಘಾಟನೆ ಈ ತಿಂಗಳ 16ರಂದು ಬೆಳಿಗ್ಗೆ 10.30ಕ್ಕೆ ಮಂಗಲ್ಪಾಡಿ ಪಂಚಾಯತ್‌ನ ಸೋಂಕಾಲ್‌ನಲ್ಲಿ ನಡೆಯಲಿದೆ. ಕೇಂದ್ರ ಕಾರ್ಮಿಕ, ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವೆ ಹಾಗೂ ಕೇರಳ ವಿಧಾನಸಭಾ ಚುನಾವಣಾ ರಾಜ್ಯ ಸಹ ಪ್ರಭಾರಿ ಶೋಭಾ ಕರಂದ್ಲಾಜೆ ಉದ್ಘಾಟಿಸುವರು. ಕರ್ನಾಟಕ, ಕೇರಳ ರಾಜ್ಯದ ಬಿಜೆಪಿ ಮುಖಂಡರು, ಜಿಲ್ಲಾ ಮಂಡಲ ಪಂಚಾಯತ್ ಮಟ್ಟದ ಮುಖಂಡರು ಭಾಗವಹಿಸುವರು. ಉದ್ಘಾಟನೆಯ ಬಳಿಕ ವಿಧಾನಸಭಾ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ …

ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ

ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ 7ನೇ ಪ್ರತಿಷ್ಠಾ ವಾರ್ಷಿಕ ಉತ್ಸವ ನಿನ್ನೆ ರುಧ್ರಾಭಿಷೇಕ, ಕ್ಷೀರಾಭಿಷೇಕ, ನವಕಾಭಿಷೇಕ, ವಿಶೇಷ ಮಹಾಪೂಜೆ ಜರಗಿತು. ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನಿರ್ದೇಶ ನೀಡಿದರು. ಸಂಜೆ ದೀಪಾರಾಧನೆ, ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಿಂದ ಭಜನೆ ಹಾಗೂ ಕುಣಿತ ಭಜನೆ, ಮಹಾಪೂಜೆ ಜರಗಿತು.ಕ್ಷೇತ್ರದ ಮುಖ್ಯ ಅರ್ಚಕ ಶಿವಶಂಕರ ಅಡಿಗ ಪ್ರಾರ್ಥನೆಗೈದರು. ಈ ಸಂಧರ್ಭದಲ್ಲಿ ಬಾಲ ಗೋಕುಲದ ಅಧ್ಯಾಪಿಕೆ ಶ್ರೀಲತಾ ಟೀಚರ್, ಪ್ರಮುಖರಾದ ಎಕ್ಸ್ ಟ್ರಸ್ಟೀ ಕೆ.ಎನ್. ವೆಂಕಟ್ರಮಣ ಹೊಳ್ಳ, ನಗರಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ, …

ಜ್ಯೂನಿಯರ್ ನ್ಯಾಯವಾದಿಗಳಿಗೆ ಸ್ಟೈಫಂಡ್ ಕೂಡಲೇ ನೀಡಬೇಕು- ಅಭಿಭಾಷಕ ಪರಿಷತ್

ಕಾಸರಗೋಡು: ಜ್ಯೂನಿಯರ್ ನ್ಯಾಯವಾದಿಗಳಿಗೆ ಘೋಷಿಸಿದ 5000 ರೂ. ಪ್ರತೀ ತಿಂಗಳ ಸ್ಟೈಫಂಡ್ ಕೂಡಲೇ ನೀಡಲು ಆರಂಭಿಸಬೇಕೆಂದು ಭಾರತೀಯ ಅಭಿಭಾಷಕ ಪರಿಷತ್ ಜಿಲ್ಲಾ ಸಮ್ಮೇಳನ ಠರಾವಿನಲ್ಲಿ ಆಗ್ರಹಿಸಿದೆ. ವಕಾಲತ್‌ಗಳಿಗೆ ೨೫ ರೂ.ಗಳ ಸ್ಟೈಫಂಡ್ ಸ್ಟಾಂಪ್ ಕಡ್ಡಾಯಗೊಳಿಸಿ, ವೆಲ್ಫೇರ್ ಫಂಡ್ ಸ್ಟಾಂಪ್ ೨೫ ರೂ.ನಿಂದ 100 ರೂ. ಆಗಿ ಹೆಚ್ಚಿಸಿ ನ್ಯಾಯವಾದಿಗಳ ಹೊರೆ ಹೆಚ್ಚಿಸಲಾಗಿದೆ. ಲೀಗಲ್ ಬೆನಿಫಿಟ್ ಫಂಡ್ ಸ್ಟಾಂಪ್ ರೂಪದಲ್ಲಿ ಲಭಿಸುವ ಬೃಹತ್ ಮೊತ್ತ ಸರಕಾರದ ಟ್ರಷರಿ ಅಕೌಂಟ್‌ಗೆ ಬಡ್ಡಿರಹಿತವಾಗಿ ಬದಲಿಸಲಾಗುತ್ತಿದೆ. ಪ್ರಸ್ತುತ ಮೊತ್ತಕ್ಕೆ ಸರಿಯಾದ ಬಡ್ಡಿ ನೀಡಲು …

ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನಿಂದ ರಿಸ್ಕ್ ಫಂಡ್, ಸದಸ್ಯರ ಕ್ಷೇಮನಿಧಿ ವಿತರಣೆ

ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ರಿಸ್ಕ್ ಫಂಡ್, ಸದಸ್ಯರ ಕ್ಷೇಮ ನಿಧಿ ಯೋಜನೆ ಫಲಾ ನುಭವಿಗಳಿಗೆ ಬ್ಯಾಂಕ್ ವತಿಯಿಂದ ಕೇರಳ ಸರಕಾರದಿಂದ ಕೊಡಲ್ಪಡುವ ರಿಸ್ಕ್ ಫಂಡ್, ಕ್ಷೇಮ ನಿಧಿಯನ್ನು ಸಹಕಾರಿ ಇಲಾಖೆಯ ನೂತನ ಪರಿ ಶೋಧಕ ಜಯರಾಮ್ ಮತ್ತು ಬ್ಯಾಂಕಿನ ಅಧ್ಯಕ್ಷ ಮೊಹಮ್ಮದ್ ಹನೀಫ್ ವಿತರಿಸಿದರು. ಉಪಾಧ್ಯಕ್ಷ ಸತ್ಯನಾರಾ ಯಣ ಭಟ್, ನಿರ್ದೇಶಕರಾದ ರಾಬಿಯಾ, ನಿಕೋಲಸ್ ಮೊಂತೇರೊ, ವಿನೋದ್ ಕುಮಾರ್, ಸುನಿತಾ ಡಿ ಸೋಜಾ, ಪ್ರವೀಣ ಕೆ, ಜಗದೀಶ್ ಚೆಂಡ್ಲ, ತುಳಸಿ ಕುಮಾರಿ, ಉಪಸ್ಥಿತರಿದ್ಧರು. ಕಾರ್ಯದರ್ಶಿ …

ಬದಿಯಡ್ಕ ನಿವಾಸಿ ರೈಲು ಪ್ರಯಾಣ ಮಧ್ಯೆ ಹೊಳೆಗೆ ಬಿದ್ದು ನಾಪತ್ತೆ

ಬದಿಯಡ್ಕ:  ಬದಿಯಡ್ಕ ನಿವಾಸಿಯೊಬ್ಬರು ರೈಲು ಪ್ರಯಾಣ ವೇಳೆ ನಾಪತ್ತೆಯಾದ ಘಟನೆ ನಡೆದಿದೆ. ಬದಿಯಡ್ಕ ಪೆಟ್ರೋಲ್ ಬಂಕ್ ಸಮೀಪದ ದಿ| ರವೀಂದ್ರ ಶೆಣೈಯವರ ಪುತ್ರ ಅಚ್ಯುತಾನಂದ ಶೆಣೈ (40) ಎಂಬವರು  ತೃಶೂರು ಚಾಲಕ್ಕುಡಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದಾರೆ. ಇವರನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ಅಗ್ನಿಶಾಮಕದಳ ಶೋಧ ಮುಂದುವರಿಸುತ್ತಿದೆ.  ವಿಷಯ ತಿಳಿದು ಸಂಬಂಧಿಕರು ತೃಶೂರಿಗೆ ತೆರಳಿದ್ದಾರೆ.  ನಿನ್ನೆ ಬೆಳಿಗ್ಗೆ 10.45ರ ವೇಳೆ ಘಟನೆ ನಡೆದಿದೆ. ತಿರು ವನಂತಪುರದಿಂದ ತೃಶೂರಿಗೆ ತೆರಳುತ್ತಿದ್ದ ವೇನಾಡ್ ಎಕ್ಸ್‌ಪ್ರೆಸ್‌ನಲ್ಲಿ ಅಚ್ಯುತಾನಂದ ಶೆಣೈ ಪ್ರಯಾಣಿಸುತ್ತಿ ದ್ದರು. ಇವರು …

ಮನೆಯೊಳಗೆ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ: ಮೃತಪಟ್ಟಿರುವುದು ಬೇಕಲ ಫೆಸ್ಟ್ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ವಿದ್ಯಾರ್ಥಿಯ ತಂದೆ, ತಾಯಿ

ಕಾಸರಗೋಡು: ಬೇಕಲ ಬೀಚ್ ಫೆಸ್ಟ್ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾ ರ್ಥಿಯ ತಂದೆ, ತಾಯಿ ಮನೆಯೊಳಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಪೊಯಿನಾಚಿಪರಂಬ್‌ನ ವೇಣುಗೋಪಾಲನ್ ನಾಯರ್ (55), ಪತ್ನಿ ಸ್ಮಿತಾ (45) ಎಂಬಿವರು ಮೃತಪಟ್ಟವರಾಗಿದ್ದಾರೆ. ಇಂದು ಬೆಳಿಗ್ಗೆ ಮನೆಯ ಸೆಂಟ್ರಲ್ ಹಾಲ್‌ನಲ್ಲಿ ಮೃತದೇಹಗಳು ಕಂಡು ಬಂದಿವೆ. ವಿಷಯ ತಿಳಿದು ಮೇಲ್ಪರಂಬ ಪೊಲೀ ಸರು ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ. ವೇಣುಗೋಪಾಲನ್ ನಾಯರ್- ಸ್ಮಿತಾ ದಂಪತಿಯ ಏಕೈಕ ಪುತ್ರನೂ, ಮಂಗಳೂರಿನಲ್ಲಿ ಇಂಜಿನಿಯರಿಂಗ್  ವಿದ್ಯಾರ್ಥಿಯಾಗಿದ್ದ ಎಂ. …

ರಬ್ಬರ್ ಕೃಷಿಕ ತೋಟದ ಶೆಡ್‌ನಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ರಬ್ಬರ್ ಕೃಷಿಕರೊ ಬ್ಬರು ತೋಟದ ಶೆಡ್‌ನಲ್ಲಿ  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಚಂಬಲ್ತಿಮಾರ್ ಅಲಕ್ಕೆಲ್ ನಿವಾಸಿ ಜೋಸ್ ಅಲಕ್ಕೆಲ್ (70) ಎಂಬವರು ಮೃತ ವ್ಯಕ್ತಿ. ಇವರಿಗೆ  ವಿದ್ಯಾಗಿರಿಯಲ್ಲಿ ರಬ್ಬರ್ ತೋಟವಿದೆ. ನಿನ್ನೆ ಮಧ್ಯಾಹ್ನ  ತೋಟಕ್ಕೆ ತೆರಳಿದವರು ಮರಳಿ ಬಾರದ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ತೋಟದ ಶೆಡ್‌ನಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆನ್ನ ಲಾಗಿದೆ.  ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಮೃತದೇ ವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತರು …

ದೇವಸ್ಥಾನಗಳಲ್ಲಿ ಕಳವು ನಡೆಸಿದ ತಂಡದ ಇಬ್ಬರ ಸೆರೆ

ಕಾಸರಗೋಡು:  ದೇವಸ್ಥಾನಗ ಳಲ್ಲಿ ಕಳವುಗೈದ ಪ್ರಕರಣದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತೃಶೂರು ಆಂಬಲ್ಲೂರು ಕಳಲಿ ಹೌಸ್‌ನ ಶಿಬು ರಾಫೆಲ್ (54) ಮತ್ತು ಕಣ್ಣೂರು ಮಟ್ಟನ್ನೂರು ಕೋಳಾರಿ ಪಾಲೋಟ್‌ಪಳ್ಳಿ ಬದರ್ ಮಂಜಿಲ್‌ನ ಅಬ್ದುಲ್ ಜಲೀಲ್ (50) ಎಂಬಿವರು ಬಂಧಿತ ಆರೋಪಿಗಳು. ನೀಲೇಶ್ವರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಎ.ವಿ. ಶ್ರೀಕುಮಾರ್‌ರ  ನೇತೃತ್ವದ ಪೊಲೀಸರ ತಂಡ ಈ ಇಬ್ಬರು ಆರೋಪಿಗಳನ್ನು ತಮಿಳುನಾಡಿನ ಎರ್ವಾಡಿನಿಂದ ಸೆರೆಹಿಡಿದಿದೆ.  ಕಳೆದ ಫೆಬ್ರವರಿ 21ರಂದು ರಾತ್ರಿ ನೀಲೇಶ್ವರಕ್ಕೆ ಸಮೀಪದ ಪೇರೋಲ್ ಕೊಳುಂತಿಲ್ ನಾರಾಂಕುಳಂಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ …

ಇಚ್ಲಂಪಾಡಿ, ಛತ್ರಂಪಳ್ಳ ಭಾಗಗಳಲ್ಲಿ  ಕಾಡುಕೋಣ: ನಾಗರಿಕರಲ್ಲಿ ಆತಂಕ

ಕುಂಬಳೆ: ಇಚ್ಲಂಪಾಡಿ, ಛತ್ರಂಪಳ್ಳ ಭಾಗಗಳಲ್ಲಿ ನಿನ್ನೆ ಸಂಜೆ ಕಾಡುಕೋಣ ಕಂಡುಬಂದ ಬಗ್ಗೆ ವರದಿಯಾಗಿದೆ. ಈ ಭಾಗದ ರಸ್ತೆಯಲ್ಲಿ ನಿನ್ನೆ ಸಂಜೆ ಸಂಚರಿಸುತ್ತಿದ್ದವರಿಗೆ ಕಾಡು ಕೋಣ ಕಾಣಿಸಿದೆ. ಜನರನ್ನು ಕಂಡೊಡನೆ ಕೋಣ ಓಡಿ ಸಮೀಪದ ಹಿತ್ತಿಲಿಗೆ ನುಗ್ಗಿದೆ. ವಿಷಯ ತಿಳಿದು ಅರಣ್ಯಾಧಿ ಕಾರಿಗಳು ತಲುಪಿ ಹುಡುಕಾಡಿದರೂ ಕಾಡುಕೋಣ ವನ್ನು ಪತ್ತೆಹಚ್ಚಲಾಗಿಲ್ಲ. ಈ ಭಾಗದ ಕಾಡಿನಲ್ಲಿ ಎಲ್ಲಾದರೂ ಕೋಣ ತಂಗಿರಬಹುದೆಂದು ಅಂದಾಜಿಸಲಾಗಿದೆ. ಕಳೆದ ಸೋಮವಾರ ರಾತ್ರಿ ನೀರ್ಚಾಲು ಬಳಿಯ ಕನ್ಯಪ್ಪಾಡಿ ಯಲ್ಲೂ ಕಾಡುಕೋಣ ಕಂಡುಬಂ ದಿತ್ತು. ಅಲ್ಲಿ ಬೀದಿ ನಾಯಿಗಳು …

ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸಾಗಿಸಿದ 103.68 ಲೀಟರ್ ಮದ್ಯ ವಶ; ಕುಂಜತ್ತೂರು ನಿವಾಸಿ ಸೆರೆ

ಕಾಸರಗೋಡು: ಮಾರುತಿ ಸ್ವಿಫ್ಟ್‌ಕಾರಿನಲ್ಲಿ ಸಾಗಿಸುತ್ತಿದ್ದ 103.68 ಲೀಟರ್ ಕರ್ನಾಟಕ, ಗೋವಾ ನಿರ್ಮಿತ ಮದ್ಯ ಸಹಿತ ಯುವಕ ಸೆರೆಯಾಗಿದ್ದಾನೆ. ಕುಂಜತ್ತೂರು ಅಣ್ಣಮಜಲ್ ನಿವಾಸಿ ಕೆ.ಎ. ರವಿಕಿರಣ್ (38ನನ್ನು ಕಾಸರಗೋಡು ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಟಿ.ಕೆ. ಅಶ್ವಿನ್ ಹಾಗೂ ತಂಡ ಬಂಧಿಸಿದೆ. ಮುಂಜಾನೆ ಬೇಳ ನೀರ್ಚಾಲ್‌ನಲ್ಲಿ ಮದ್ಯ ವಶಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಸೆರೆಗೀಡಾದ ರವಿಕಿರಣ್ ಖಾಯಂ ಆಗಿ ಮದ್ಯ ಸಾಗಿಸುವ ವ್ಯಕ್ತಿಯಾಗಿದ್ದಾನೆಂದು ಈತನನ್ನು ತಿಂಗಳುಗಳಿಂದ ನಿರೀಕ್ಷಿಸುತ್ತಿದ್ದುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ. ಗೋವಾ ನಿರ್ಮಿತವಾದ 180 ಮಿಲ್ಲಿಯ ಬಾಟ್ಲಿಗಳು, ಕರ್ನಾಟಕ …