ನರೇಂದ್ರ ಮೋದಿ ಆಡಳಿತ ಜನಸಾಮಾನ್ಯರ ಜೀವನ ಗುಣಮಟ್ಟ ಹೆಚ್ಚಿಸಿತು- ಎಂ.ಎಲ್. ಅಶ್ವಿನಿ

ಕುಂಬಳೆ: ಎಲ್ಲಾ ಕುಟುಂಬಗಳಿಗೂ ಮೂಲಭೂತ ಸೌಕರ್ಯಗಳ ಜೊತೆಗೆ ಆರ್ಥಿಕ ಸೌಲಭ್ಯಗಳು ಲಭಿಸುತ್ತಿದೆ ಎಂದು ಖಚಿತಪಡಿಸುವ ಮೂಲಕ ಭಾರತದ ಕೋಟ್ಯಂತರ ಜನ ಸಾಮಾನ್ಯರ ಜೀವನ ಮಟ್ಟವನ್ನು ನರೇಂದ್ರ ಮೋದಿ ಸರಕಾರ ಹೆಚ್ಚಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಮಹಿಳಾ ಮೋರ್ಛಾ ಕುಂಬಳೆ ಪಂಚಾಯತ್ ಮಹಿಳಾ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ಕೇರಳಕ್ಕೆ ಸಹಾಯ ಮಾಡಲು ಕೇಂದ್ರ ಸರಕಾರ ಸಿದ್ಧವಾಗಿದ್ದರೂ ಕೂಡಾ ಅದನ್ನು ಪ್ರಯೋಜನಪಡಿಸುವಲ್ಲಿ, ಕೇಂದ್ರದ ಜನಕ್ಷೇಮ ಯೋಜನೆಗಳನ್ನು ಕೇರಳದಲ್ಲಿ ಜ್ಯಾರಿಗೊಳಿಸುವುದರಲ್ಲಿ ಪಿಣರಾಯಿ ವಿಜಯನ್ ಸರಕಾರಕ್ಕೆ ಸಾಧ್ಯವಾಗಿಲ್ಲವೆಂದು …

ಹೋಟೆಲ್ ಮಾಲಕ ನಿಧನ

ಮಂಜೇಶ್ವರ: ಹಿರಿಯ ಹೋಟೆಲ್ ಉದ್ಯಮಿ, ಹೊಸಂಗಡಿ ಪೆಲಪಾಡಿ ನಿವಾಸಿ ಬಿ.ಎಂ. ಮಾಧವ ಸಂಗಂ (74) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಈ ಹಿಂದೆ ಹೊಸಂಗಡಿ ಪೇಟೆಯಲ್ಲಿ ಸಂಗಂ ಹೋಟೆಲ್ ನಡೆಸುತ್ತಿದ್ದರು. ಸಿಪಿಎಂ ಮಂಜೇಶ್ವರ ಲೋಕಲ್ ಸಮಿತಿ ಸದಸ್ಯನಾಗಿದ್ದರು. ಕನಿಲ ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶ ಸಮಿತಿ, ಮಂಜೇಶ್ವರ ಕೋಟಗಂ ಬಂಗೇರ ತರ ವಾಡಿನ ಗೌರವ ಸಲಹೆಗಾರ, ರಾಮತ್ತ ಮಜಲ್ ರುದ್ರಭೂಮಿ ಅಭಿವೃದ್ಧಿ ಸಮಿತಿ ಮೊದಲಾದವುಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ವೇದಾವತಿ, ಮಕ್ಕಳಾದ ವಿನಯ ಕುಮಾರ್, ಸಂತೋಷ್, ಸಂದೀಪ್, …

ಬಿಎಂಎಸ್ ಕೃಷಿ ಕಾರ್ಮಿಕರ ಸಂಘ ಜಿಲ್ಲಾ ಸಮ್ಮೇಳನ

ಮುಳ್ಳೇರಿಯ: ಕೃಷಿ ಕಾರ್ಮಿಕರ ಸಂಘ ಬಿಎಂಎಸ್ ಕಾಸರಗೋಡು ಜಿಲ್ಲಾ ಸಮ್ಮೇಳನ ಮುಳ್ಳೇರಿಯ ಗಣೇಶಮಂದಿರದಲ್ಲಿ ಜರಗಿತು. ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ಕೃಷ್ಣನ್ ಕೇಳೋತ್ತ್ ಉದ್ಘಾಟಿಸಿದರು. ಆನಂದಿ ಮುಳ್ಳೇರಿಯ ಅಧ್ಯಕ್ಷತೆ ವಹಿಸಿದರು. ಫೆಡರೇಶನ್ ರಾಜ್ಯ ಉಪಾಧ್ಯಕ್ಷ ಭಾಸ್ಕರನ್ ಪೊಯಿನಾಚಿ, ಅನಿಲ್ ಬಿ. ನಾಯರ್, ಮಿನಿ ಶ್ರೀನಿವಾಸನ್, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಸುನಿಲ್ ವಾಳಕ್ಕೋಡ್, ಕೋಶಾಧಿಕಾರಿ ಎನ್. ನಾರಾಯಣನ್ ವಾಳಕ್ಕೋಡ್ ಮಾತನಾಡಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸುನಿಲ್ ವಾಳಕ್ಕೋಡ್ (ಅಧ್ಯಕ್ಷ), ಪುಷ್ಪರಾಜ್ ಕೊರಕ್ಕೋಡು, ಸುಲೋಚನ ಕೋಟಪ್ಪಾರ, ಸುರೇಶ್ …

ಯುವಕ-ಯುವತಿಯ ಅರೆನಗ್ನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಪ್ರಕರಣ: ಇನ್ನೋರ್ವ ಆರೋಪಿ ಕಸ್ಟಡಿಗೆ: ಪೊಲೀಸರ ಮೇಲೆ ತಂಡದಿಂದ ಕಲ್ಲೆಸೆತ, ಬೆದರಿಕೆ: 8 ಮಂದಿ ವಿರುದ್ಧ ಕೇಸು

ಉಪ್ಪಳ: ಹೊಸಂಗಡಿಯ  ವಸತಿಗೃಹದ ಕೊಠಡಿಗೆ ನುಗ್ಗಿ ಯುವಕ ಹಾಗೂ ಯುವತಿಯ ಅರೆನಗ್ನ ಫೋಟೋ, ವೀಡಿಯೋ ಚಿತ್ರೀಕರಿಸಿ  ಹಲ್ಲೆಗೈದು ಬೆದರಿಕೆಯೊಡ್ಡಿದ ಪ್ರಕರಣ ದಲ್ಲಿ ಇನ್ನೋರ್ವ ಆರೋಪಿಯನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.  ಇದೇ ವೇಳೆ ಆರೋಪಿಯನ್ನು ಕಸ್ಟಡಿಗೆ ತೆಗೆಯಲು ಹೋದ ಪೊಲೀಸರ ಮೇಲೆ ತಂಡವೊಂದು ಕಲ್ಲೆ ಸೆದು ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಕಲ್ಲೆಸೆತದಿಂದ ಇಬ್ಬರು ಪೊಲೀಸರು ಗಾಯಗೊಂ ಡಿದ್ದಾರೆ.  ಘಟನೆಗೆ ಸಂಬಂಧಿಸಿ 8 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಚ್ಚಂಪಾಡಿ ನಿವಾಸಿ ಹೈದರಾಲಿ ಎಂಬಾತನನ್ನು ಕಸ್ಟಡಿಗೆ ತೆಗೆದಿರುವುದಾಗಿ ಪೊಲೀ …

ರೈಲು ಪ್ರಯಾಣ ವೇಳೆ ಹೊಳೆಗೆ ಬಿದ್ದು ಮೃತಪಟ್ಟ ಬದಿಯಡ್ಕ ನಿವಾಸಿಯ ಮೃತದೇಹ ಊರಿಗೆ

ಬದಿಯಡ್ಕ: ರೈಲು ಪ್ರಯಾಣ ವೇಳೆ ಹೊಳೆಗೆ ಬಿದ್ದು ಮೃತಪಟ್ಟ ಬದಿಯಡ್ಕ ನಿವಾಸಿಯ ಮೃತದೇಹವನ್ನು ಇಂದು ಮುಂಜಾನೆ ಊರಿಗೆ ತಲುಪಿಸಲಾಯಿತು. ಬದಿಯಡ್ಕ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ದಿ| ರವೀಂದ್ರ ಶೆಣೈಯವರ ಪುತ್ರ ಅಚ್ಯುತಾನಂದ ಶೆಣೈ (40)ಯವರ ಮೃತದೇಹವನ್ನು ಇಂದು ಮುಂಜಾನೆ 3 ಗಂಟೆಗೆ ಮನೆಗೆ ತಲುಪಿಸಲಾಯಿತು. ಬಳಿಕ ಮಾನ್ಯ ಚುಕ್ಕಿನಡ್ಕದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಅಂಗಮಾಲಿ ಕರೆಯಂಪರಂಬ್‌ನ ಇಂಡ್ಯನ್ ಮಲ್ಟಿಪಲ್ ಕೋ-ಓಪರೇಟಿವ್ ಸೊಸೈಟಿಯ ಬ್ರಾಂಚ್‌ನಲ್ಲಿ ಸೆಕ್ಷನ್ ಆಫೀಸರ್ ಆಗಿದ್ದ ಅಚ್ಯುತಾನಂದ ಶೆಣೈ ಮೊನ್ನೆ ಬೆಳಿಗ್ಗೆ …

ಡಾಮರೀಕರಣ ಬಳಿಕ ಗುತ್ತಿಗೆದಾರ ಮರಳಿದ ಬೆನ್ನಲ್ಲೇ ರಸ್ತೆಯ ಡಾಮರು ನಾಶದತ್ತ

ಕುಂಬಳೆ: ರಸ್ತೆಗೆ ಡಾಮರೀಕರಣ ನಡೆಸಿ ಗುತ್ತಿಗೆದಾರ ಮರಳಿದ ಬೆನ್ನಲ್ಲೇ ಡಾಮರು  ಎದ್ದು ರಸ್ತೆ ಮತ್ತೆ ಪೂರ್ವಸ್ಥಿತಿಗೆ ತಲುಪತೊಡಗಿದೆ.  ಕುಂಬಳೆ-ಮಾಟೆಂಗುಳಿಯ 400 ಮೀಟರ್ ರಸ್ತೆಗೆ ಇತ್ತೀಚೆಗೆ ಡಾಮರೀಕರಣ ನಡೆಸಲಾಗಿದೆ. ಕಾಮಗಾರಿಯ ಬಳಿಕ ಗುತ್ತಿಗೆದಾರ ಮರಳಿದ ಬೆನ್ನಲ್ಲೇ ಡಾಮರು ಎದ್ದು ಮತ್ತೆ ರಸ್ತೆ ಹಾನಿಯಾಗುವ ಸ್ಥಿತಿಗೆ ತಲುಪತೊಡಗಿದೆ. ಡಾಮರು ಹಾಗೂ ಬೇಬಿ ಜಲ್ಲಿ ಉಪಯೋಗಿಸಿ ರಸ್ತೆಗೆ ನಡೆಸಿದ ಡಾಮರೀಕರಣದಲ್ಲಿ ಲೋಪವುಂಟಾಗಿರುವುದಾಗಿಯೂ ಇದುವೇ ರಸ್ತೆ ಮತ್ತೆ ಕಳಪೆಯಾಗಲು ಕಾರಣವಾಗಿದೆಯೆಂದು ನಾಗರಿಕರು ಹೇಳುತ್ತಿದ್ದಾರೆ. ಐದು ಲಕ್ಷ ರೂ.ವ್ಯಯಿಸಿ ನಡೆಸಿದ ಡಾಮರೀಕರ ಣದಿಂದ ನಾಡಿಗೆ …

ರಾಜ್ಯದಲ್ಲಿ ವಿದ್ಯುತ್ ನಿಯಂತ್ರಣ ಹೇರಿಕೆ ಇಲ್ಲ- ಸಚಿವ

ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ಪವರ್ ಕಟ್ ಆಗಲೀ ಲೋಡ್ ಶೆಡ್ಡಿಂಗ್ ಆಗಲೀ ಏರ್ಪಡಿಸಲಾಗುವುದಿಲ್ಲವೆಂದು ತಿರುವನಂತಪುರದಲ್ಲಿ ಇಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ಹೇಳಿದ್ದಾರೆ. ರಾಜ್ಯ ತೀವ್ರ ವಿದ್ಯುತ್ ಬಿಕ್ಕಟ್ಟು ಎದುರಿಸುತ್ತಿದೆಯಾದರೂ ಅದರ ಹೆಸರಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ವಿದ್ಯುತ್ ನಿಯಂತ್ರಣ ಹೇರಲಾಗುವುದಿಲ್ಲ. ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಯಾವುದೇ ರೀತಿಯ ಕ್ರಮ ಈ ವಿಷಯದಲ್ಲಿ ಸರಕಾರದ ವತಿಯಿಂದ ಉಂಟಾಗದು ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದ ಪರಿಣಾಮ ದೇಶದಾದ್ಯಂತವಾಗಿ ಭಾರೀ …

ಮನೆ ಬೆಂಕಿಗಾಹುತಿ: ಲಕ್ಷಾಂತರ ರೂ.ಗಳ ನಾಶನಷ್ಟ

ಕಾಸರಗೋಡು: ಇಂದು ಮುಂಜಾನೆ ಸಂಭವಿಸಿದ ಬೆಂಕಿ ಆಕಸ್ಮಿಕದಿಂದ ಮನೆಯೊಂದು ಉರಿದು ನಾಶಗೊಂಡ ಘಟನೆ ನಡೆದಿದೆ. ಪಾಲಕುನ್ನು- ಆರಾಟುಕಡವು ರಸ್ತೆಯ ಕಣಿಯಂಬಾಡಿ ಎಂಬಲ್ಲಿನ ಕೆ. ಕುಂಞಿರಾಮನ್ ಎಂಬವರ ಜನವಾಸವಿಲ್ಲದ ಮನೆ ಬೆಂಕಿಗಾಹುತಿಯಾಗಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಘಟನೆ ಸಂಭವಿಸಿದೆ. ಕುಂಞಿರಾಮನ್ ಹಾಗೂ ಕುಟುಂಬ ಸಮೀಪದಲ್ಲೇ ಇರುವ ಬೇ ರೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ನಿನ್ನೆ ರಾತ್ರಿ ಕುಂಞಿರಾಮನ್ ಹಾಗೂ ಕುಟುಂಬ ತೃಕ್ಕನ್ನಾಡ್ ಕ್ಷೇತ್ರಕ್ಕೆ ತೆರಳಿದ್ದರು. ಇಂದು ಮುಂಜಾನೆ 1 ಗಂಟೆ ವೇಳೆ ಮರಳಿ ಬಂದಿದ್ದಾರೆ. ಆ ವೇಳೆ …

ಮಾಜಿ ಅನಿವಾಸಿಯ ಹಿತ್ತಿಲು ಹಾಗೂ ತಾರಸಿಯಲ್ಲಿ ತರಕಾರಿ ತೋಟ : ಹೊಸತನದ ಕೃಷಿಯಲ್ಲಿ ನೂರು ಶೇ. ಫಸಲು ಪಡೆದ ಎಂಜಿಎ ರಹ್ಮಾನ್

ಮೊಗ್ರಾಲ್: ಸುಮ್ಮನೆ ಮನೆಯಲ್ಲಿ ಕುಳಿತಿರುವಾಗ ಉದಾಸೀನತೆ ಉಂಟಾದ ಅನಿವಾಸಿ ಮನೆ ಹಾಗೂ ಮನೆಯ ತಾರಸಿಯಲ್ಲಿ ಕೃಷಿ ಕೈಗೊಂಡದ್ದು ಫಲ ನೀಡಿತು. ಇವರ ಶ್ರಮಕ್ಕೆ 100 ಶೇಕಡಾ ಫಲಿತಾಂಶ ಲಭಿಸಿದೆ. ಮೊಗ್ರಾಲ್‌ನ ಅನಿವಾಸಿ, ಸಾಮಾಜಿಕ ಕಾರ್ಯಕರ್ತನಾದ ಎಂ.ಜಿ.ಎ. ರಹ್ಮಾನ್‌ರ ಈ ಕಾರ್ಯವನ್ನು ಕಂಡು ಸ್ಥಳೀಯರು ಮೂಗಿಗೆ ಬೆರಳಿಟ್ಟರು. ಕಳೆದ ಮೂರು ದಶಕಗಳಿಂದ ದುಬಾಯಿಯ  ಪ್ರವಾಸಿ ಬದುಕು ಕೊನೆಗೊಳಿಸಿದ ಎಂಜಿಎ ರಹ್ಮಾನ್ ಊರಿಗೆ ಹಿಂತಿರುಗಿದಾಗ ಮನೆಯಲ್ಲಿ ವಿಶ್ರಾಂತಿ ವೇಳೆ ಏನಾದರೂ ಕೆಲಸ ಬೇಕಲ್ಲ ಎಂಬ ಆಲೋಚನೆಯಲ್ಲಿ ತರಕಾರಿ ತೋಟ ಮಾಡಿದರೆ …