ಶಾಲಾ ಅಧ್ಯಾಪಕರಿಗೂ ಗೌಪ್ಯ ವರದಿ ಪರಿಗಣನೆಯಲ್ಲಿ

ತಿರುವನಂತಪುರ: ರಾಜ್ಯದ ಸಾರ್ವತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಟ್ಟ ಎಲ್ಲಾ ಶಾಲಾ ಅಧ್ಯಾಪಕರಿಗೂ ಗೌಪ್ಯ ವರದಿ ಏರ್ಪಡಿಸುವ ವಿಷಯ ಸರಕಾರದ ಪರಿಗಣನೆಯಲ್ಲಿದೆಯೆಂದು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ತಿಳಿಸಿದ್ದಾರ. ಶಾಲೆಯಲ್ಲಿ ಪ್ರಾಂಶುಪಾಲರಿಗೆ ಮಾತ್ರವೇ ಅವರ ಸೇವನಾಗುಣಮಟ್ಟ ಹಾಗೂ ಅವರ ವೈಫಲ್ಯಗಳ ಕುರಿತಾದ ಮಾಹಿತಿಗಳನ್ನು ಉನ್ನತಾಧಿಕಾರಿಗಳಿಗೆ ಕಾನ್ಫಡೆನ್ಶಿ ಯಲ್(ಗೌಪ್ಯ) ರಿಪೋರ್ಟ್ ಸಲ್ಲಿಸಲಾಗುತ್ತಿದೆ. ಇಂತಹ ಕ್ರಮವನ್ನು ಇನ್ನು ಶಾಲಾ ಅಧ್ಯಾಪಕರಿ ಗೂ ಅನ್ವಯಗೊಳಿಸುವ ವಿಷಯ ಸರಕಾರದ ಪರಿಶೀಲನೆಯಲ್ಲಿದೆ. ಅಧ್ಯಾಪಕರಿಗಾಗಿರುವ ತರಬೇತಿ ಗಳು, ಮೌಲ್ಯ ನಿರ್ಣಯ ಇತ್ಯಾದಿ ಗಳಲ್ಲಿ ಉದ್ದೇಶಪೂರ್ವಕವಾಗಿ ಭಾಗವಹಿಸದೇ ಇರುವಿಕೆ, …

ಬದಿಯಡ್ಕ ಮಂಡಲ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ಪಿ.ಕುಂಞಿಕಣ್ಣನ್ ಸಂಸ್ಮರಣೆ

ಬದಿಯಡ್ಕ: ಮಾಜಿ ಶಾಸಕ, ಮಾಜಿ ಕೆಪಿಸಿಸಿ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರೂ ಆಗಿದ್ದ ಕೆ.ಪಿ. ಕುಂಞಿಕಣ್ಣನ್ ಅವರ ಪ್ರಥಮ ಸಂಸ್ಮರಣಾ ವಾರ್ಷಿಕ ದಿನ ಕಾರ್ಯಕ್ರಮವನ್ನು ಇಂದು ಬದಿಯಡ್ಕ ಈಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆಸಲಾಯಿತು. ಕಾಂಗ್ರೆಸ್ ಬದಿಯಡ್ಕ ಮಂಡಲ ಕಚೇರಿಯಲ್ಲಿ ನಡೆದ  ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು.  ಕರ್ಷಕ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ತಿರುಪತಿ ಕುಮಾರ್ ಭಟ್ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ನೇತಾರರಾದ ಗಂಗಾಧರ ಗೋಳಿಯಡ್ಕ, …

ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಬೆಳ್ಳಿ ಅಭಿಯಾನ ಉದ್ಘಾಟನೆ 28ರಂದು

ಮಾನ್ಯ:  ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಬೆಳ್ಳಿ ಅಭಿಯಾನದ ಉದ್ಘಾಟನಾ ಸಮಾರಂಭ ಸೆ. 29ರಂದು ಬೆಳಿಗ್ಗೆ 10 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಾನ್ಯಶ್ರೀ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಪ್ರಥಮ ಬೆಳ್ಳಿ ಸಮರ್ಪಣೆ ಮಾಡಿ ಉದ್ಘಾಟಿಸುವರು. ಕೊಲ್ಯ ಶ್ರೀದೇವಿ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರ ಮಧುಸೂದನ ಅಯ್ಯರ್ ಮುಖ್ಯ ಅತಿಥಿಯಾಗಿರುವರು. ಭಜನಾ ಮಂದಿರದ ಪ್ರತಿಷ್ಠಾ ಗುರುಸ್ವಾಮಿ ಶಂಕರ ದೇವಾಂಗ ಸಹಿತ …

ಪೆರ್ಲ ಎಸ್‌ಎನ್‌ಎಎಲ್‌ಪಿ ಶಾಲಾ ಶೌಚಾಲಯ ಉದ್ಘಾಟನೆ

ಪೆರ್ಲ: ಎಣ್ಮಕಜೆ ಪಂ.ನ ವಾರ್ಷಿಕ ಯೋಜನೆಯಂತೆ ಪೆರ್ಲ ಶ್ರೀ ಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಶೌಚಗೃಹದ ಉದ್ಘಾಟನೆಯನ್ನು ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್. ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ನಾಡಿನ ಪ್ರಗತಿಗೆ ಸಹಾಯಕವಾಗಿದ್ದು, ‘ಶಾಲೆ ಸಮಾಜದ ಎಲ್ಲರನ್ನು ಒಂದಾಗಿಸುವ ಪವಿತ್ರ ಆಲಯವಾಗಿದೆ. ಶೈಕ್ಷಣಿಕ ಸಂಸ್ಥೆಗಳು ಸಮಾಜದ ಮುಖ್ಯ ಭೂಮಿಕೆಯಾಗಿದ್ದು, ಅವುಗಳ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯವಾಗಬೇಕು. ಪಂಚಾಯತ್‌ಗೆ ಒಳಪಟ್ಟ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ನಾವು ಕೆಲಸವನ್ನು ಮಾಡಿದ್ದೇವೆ ಎಂಬ …

ರುದ್ರಭೂಮಿ ಸ್ವಚ್ಛತಾ ಕಾರ್ಯದ ಮೂಲಕ ಪ್ರಧಾನಿ ಜನ್ಮದಿನಾಚರಣೆ

ಬದಿಯಡ್ಕ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಪ್ರಯುಕ್ತ ಅಗ್ನಿ ಫ್ರೆಂಡ್ಸ್ ಬದಿಯಡ್ಕ ಇವರ ನೇತೃತ್ವದಲ್ಲಿ ಬದಿಯಡ್ಕ ಮೂಕಂಪಾರೆಯ ಹಿಂದೂ ರುದ್ರ ಭೂಮಿಯನ್ನು ಸ್ವಚ್ಛಗೊಳಿಸಲಾಯಿತು. ಕಾಡು ಪೊದೆಗಳನ್ನು ತೆರವುಗೊಳಿಸಿದ ಕಾರ್ಯಕರ್ತರು ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿದರು. ಅಗ್ನಿ ಫ್ರೆಂಡ್ಸ್ನ ಅಧ್ಯಕ್ಷ ರತೀಶ್, ಅನಿಲ್ ಕುಮಾರ್, ಅವಿನಾಶ್ ರೈ, ಭರತ್, ರಾಜೇಶ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ವಿವಾಹ ಭರವಸೆ ನೀಡಿ ಲೈಂಗಿಕ ದೌರ್ಜನ್ಯ: ಕೇರಳೀಯ ಕ್ರಿಕೆಟ್ ಕೋಚ್ ವಿರುದ್ಧ ಕೇಸು

ಬೆಂಗಳೂರು: ವಿವಾಹ ಭರವಸೆ ನೀಡಿ ಯುವತಿಗೆ ದೌರ್ಜನ್ಯಗೈದ ಕೇರಳೀಯ ಕ್ರಿಕೆಟ್ ಕೋಚ್ ವಿರುದ್ಧ ಕೇಸು ದಾಖಲಿಸಲಾಗಿದೆ. ಬೆಂಗಳೂರು ಗೋಟಿಗೆರೆಯ ಖಾಸಗಿ ಶಾಲೆಯ ಕೋಚ್ ಆದ ಅಭಯ್ ಮ್ಯಾಥ್ಯು(40) ವಿರುದ್ಧ  ಕೋಣನಕುಂಟೆ ಪೊಲೀಸರು ದೌರ್ಜನ್ಯ ಪ್ರಕರಣ ಕೇಸು ದಾಖಲಿಸಿದ್ದಾರೆ.  ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಆರೋಪಿ ತಲೆಮರೆಸಿಕೊಂ ಡಿದ್ದು ಈತನಿಗಾಗಿ  ಹುಡುಕಾಟ ನಡೆಸಿದ್ದಾರೆ. ಬನ್ನೇರುಘಟ್ಟ ರಸ್ತೆ ಬಡಾವಣೆಯ ಸಂತ್ರಸ್ತೆ  ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಸೂಚನೆ ನೀಡಲಾಗಿದ್ದು, ಈಗ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. …

ನಾಪತ್ತೆಯಾದ ವಿದ್ಯಾರ್ಥಿನಿ ತಮಿಳುನಾಡು ಮೂಲಕ ಆಂಧ್ರಕ್ಕೆ ಪರಾರಿಯಾಗಿರುವುದಾಗಿ ಶಂಕೆ: ಬೆನ್ನಟ್ಟಿದ ಪೊಲೀಸರು

ಕಾಸರಗೋಡು: ಚೆಮ್ಮಟ್ಟಂವ ಯಲ್ ನಿವಾಸಿ ಹಾಗೂ ಕಾಞಂಗಾಡ್ ಕಾಲೇಜೊಂದರ ಪ್ರಥಮ ವರ್ಷ ವಿದ್ಯಾರ್ಥಿನಿಯಾದ 19ರ ಹರೆಯದ ಯುವತಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದರು. ಕಾಸರಗೋಡು, ಕೊಲ್ಲಂಗಾನ ನಿವಾಸಿಯಾದ ರಶೀದ್‌ನ ಜೊತೆ ತೆರಳಿರುವುದಾಗಿ ಶಂಕಿಸುತ್ತಿರುವುದಾಗಿ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಪ್ರಸ್ತುತ ವ್ಯಕ್ತಿಯನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ವಯನಾಡ್ ಮೂಲಕ ತಮಿಳುನಾಡಿಗೆ ತೆರಳಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಪ್ರಥಮ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಮಿಳುನಾಡಿಗೆ ತೆರಳಿದ್ದರು. ಆದರೆ ಪೊಲೀಸರ …

ಅಂಗಡಿ ಕೆಲಸದ ಮಧ್ಯೆ ಔಷಧಿ ಖರೀದಿಗೆಂದು ತೆರಳಿದ ಯುವಕ ನಾಪತ್ತೆ

ಮಂಜೇಶ್ವರ: ಉಪ್ಪಳದ ಸೂಪರ್ ಮಾರ್ಟ್‌ನಲ್ಲಿ ಕಾರ್ಮಿಕನಾಗಿದ್ದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಮಂಗಲ್ಪಾಡಿ ಸೋಂಕಾಲು ನಿವಾಸಿ ಕೃಪೇಶ್ (22) ನಿನ್ನೆ ಬೆಳಿಗ್ಗೆಯಿಂದ ನಾಪತ್ತೆಯಾಗಿರುವುದಾಗಿ ತಂದೆ ಶಿವಾನಂದ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಬೆಳಿಗ್ಗೆ 10.30ಕ್ಕೆ ಸೂಪರ್ ಮಾರ್ಟ್‌ನಿಂದ ಔಷಧಿ ಅಂಗಡಿಗೆ ತೆರಳುವುದಾಗಿ ಹೇಳಿ ಹೋದ ಕೃಪೇಶ್ ಮತ್ತೆ ಮರಳಲಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.   ಮೊಬೈಲ್ ಫೋನ್ ಸ್ವಿಚ್‌ಆಫ್ ಆಗಿದೆ. ಮನೆಗೂ ಅಂಗಡಿಗೂ ಹಾಗೂ ಸಂಬಂಧಿಕರ ಮನೆಗೂ ತೆರಳದ ಹಿನ್ನೆಲೆಯಲ್ಲಿ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಕೇಸು …

ಬದುಕಿನ ಪರ್ವ ಮುಗಿಸಿ ಗೃಹಭಂಗದ ಮೂಲಕ ಕಡಿದುಕೊಂಡ ವಂಶವೃಕ್ಷ: ಸಾಹಿತ್ಯ ದಿಗ್ಗಜ ಭೈರಪ್ಪರಿಗೆ ಚಾಮುಂಡಿ ತಪ್ಪಲಲ್ಲಿ ಚಿರನಿದ್ರೆ

ಬೆಂಗಳೂರು: ನಿನ್ನೆ ನಿಧನ ಹೊಂದಿದ ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತ ದಿಗ್ಗಜ ಎಸ್.ಎಲ್. ಭೈರಪ್ಪ (94)ರಿಗೆ ಚಾಮುಂಡಿ ತಪ್ಪಲಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಸರಕಾರಿ ಗೌರವ ಸಲ್ಲಿಕೆಯೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ, ಕರ್ನಾಟಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಹಿತ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನದವರೆಗೆ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಆ ಬಳಿಕ ಮೈಸೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಸಾಹಿತಿ ಭೈರಪ್ಪರವರು ನಿನ್ನೆ ಮಧ್ಯಾಹ್ನ ಬೆಂಗಳೂರಿನ …

ಮಾರಾಟಕ್ಕೆ ತಂದ ಅಫೀಮು ಕೈವಶವಿರಿಸಿದ ಪ್ರಕರಣದ ಆರೋಪಿಗೆ 2 ವರ್ಷ ಕಠಿಣ ಸಜೆ

ಕಾಸರಗೋಡು: 79.3 ಗ್ರಾಂ ಅಫೀಮು ಮಾರಾಟಕ್ಕೆಂದು ಕೈ ವಶವಿರಿಸಿದ್ದ ಪ್ರಕರಣದ ಆರೋಪಿಗೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಲಾಗಿದೆ. ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಕ್ಷನ್ ನ್ಯಾಯಾಲಯ (2) ಇದರ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಮುಟ್ಟತ್ತೋಡಿ ಎರುಂದುಕಡವು ನಿವಾಸಿ ಸೈಯದ್ ಫ್ಯಾಸಿಸ್‌ಗೆ ಶಿಕ್ಷೆ ವಿಧಿಸಿದ್ದಾರೆ. ವಿದ್ಯಾನಗರ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ಆರೋ ಪಿಯನ್ನು ಮಾದಕ ದ್ರವ್ಯಗಳ ಜೊತೆಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕಾಸರ ಗೋಡು ಠಾಣೆ ಇನ್ಸ್ಪೆಕ್ಟರ್ …