ಸೂರ್ಲು ಶ್ರೀ ಗಣೇಶಮಂದಿರ  ನವೀಕರಣ ಸಮಿತಿ ರೂಪೀಕರಣ

ಕಾಸರಗೋಡು: ಸೂರ್ಲುಗಣೇಶ ಭಜನಾ ಮಂದಿರ ನವೀಕರಿಸಲು ನಿನ್ನೆ ಮಂದಿರದಲ್ಲಿ ಸೇರಿದ ಸಭೆಯಲ್ಲಿ ತೀರ್ಮಾನಿಸಲಾಯಿತು. ನವೀಕರಣ ಸಮಿತಿ ರೂಪೀಕರಣ ಸಭೆಯನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು  ಆಸ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂದಿರದ ಅಧ್ಯಕ್ಷ ಸೀತಾರಾಮ ಕೆ. ಅಧ್ಯಕ್ಷತೆ ವಹಿಸಿದರು. ರಾಮಣ್ಣ ಟೈಲರ್, ಉಮೇಶ ಶೆಟ್ಟಿ, ವಸಂತಕುಮಾರ್ ಉಪಸ್ಥಿತರಿದ್ದರು. ಶಂಕರ ಬೆಳ್ಳಿಗೆ ಪ್ರಾಸ್ತಾವಿಕ ಭಾಷಣ ಮಾಡಿದರು. ಕೆ. ಸುರೇಶ್ ಸೂರ್ಲು, ಕೃಷ್ಣಪ್ರಸಾದ್ ಕೋಟೆಕಣಿ, ನಿರಂಜನ ಮಂಗಳೂರು, ರಾಮಕೃಷ್ಣ ಕೆ.ಎಸ್. ಶುಭ ಹಾರೈಸಿದರು. ರಘುರಾಮ ಕೆ. ಸ್ವಾಗತಿಸಿ, ಎಂ. ಅಶೋಕ ರೈ ಸೂರ್ಲು …

ಮಂಜೇಶ್ವರದಲ್ಲಿ ಯಶಸ್ವಿಯಾದ ಹಲಸು ಮೇಳ ಸಮಾಪ್ತಿ

ಮಂಜೇಶ್ವರ: ಪ್ರಥಮ ಬಾರಿಗೆ ಮಂಜೇಶ್ವರದಲ್ಲಿ ನಡೆದ ಹಲಸು ಮೇಳ ಯಶಸ್ವಿಯಾಗಿ ದಾಖಲೆ ಸೃಷ್ಟಿಸಿದೆ ಎಂದು ಮಂಜೇಶ್ವರ ಮರ್ಸಿ ಚರ್ಚ್‌ನ ಧರ್ಮಗುರು ಎಡ್ವಿನ್ ಫ್ರಾನ್ಸಿಸ್ ಪಿಂಟೊ ನುಡಿದರು. ಕಲಾಸ್ಪರ್ಷಂ ಸಭಾಂಗಣದಲ್ಲಿ ನಡೆದ ಹಲಸು ಮೇಳದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತ ನಾಡಿದರು. ಪರಿಸರದ ಹಲವಾರು ಸಂಘ ಸಂಸ್ಥೆಗಳ ಪ್ರಚಾರ ಹಾಗೂ ಆಯೋಜಕರ ಕಾರ್ಯ ಹಲಸುಮೇಳ ಈ ರೀತಿ ಯಶಸ್ವಿಯಾಗಲು ಕಾರ್ಯವೆಂದು ಅವರು ನುಡಿದರು. ಹೊಸಂಗಡಿ ಇನ್ಫೆಂಟ್ ಜೀಸಸ್ ಸೈರೊ ಮಲಬಾರ್ ಚರ್ಚ್‌ನ ಧರ್ಮಗುರು ಲೂಯಿಸ್ ಮರಿಯಾದಾಸ್ ಮಾತನಾಡಿದರು. …

ಉತ್ತಮ ಪ್ರಜೆಗಳನ್ನು ಸೃಷ್ಟಿಸುವಲ್ಲಿ ಬಾಲಗೋಕುಲ ಪ್ರಯತ್ನ ಮಹತ್ತರವಾದುದು-ಕೇಂದ್ರಸಚಿವ ಶ್ರೀಪಾದ್ ಯಶೋ ನಾಯಕ್

ಕಾಸರಗೋಡು: ಉತ್ತಮ ಪ್ರಜೆ ಗಳನ್ನು ಸೃಷ್ಟಿಸುವಲ್ಲಿ ಬಾಲ ಗೋಕುಲ ನಡೆಸುತ್ತಿರುವ ಸೇವೆ ಮಹತ್ತರವಾದುದು ಎಂಬುದಾಗಿ ಕೇಂದ್ರ ಸಹ ಸಚಿವ ಶ್ರೀಪಾದ್ ಯಶೋ ನಾಯಕ್ ತಿಳಿಸಿ ದ್ದಾರೆ. ಬಾಲಗೋಕುಲ ಉತ್ತರ ಕೇರಳಂ  ರಾಜ್ಯ ವಾರ್ಷಿಕ ಸಮ್ಮೇಳನದಂಗ ವಾಗಿ ನಿನ್ನೆ ನಡೆದ ಸಭಾ ಕಾರ್ಯಕ್ರಮವನ್ನು   ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭಾರತದ ಸಾಂಸ್ಕೃತಿಕ  ಶಕ್ತಿಯನ್ನು ಬಲಪಡಿಸುವ ಚಟುವಟಿಕೆ ಬಾಲಗೋ ಕುಲ ಮೂಲಕ ನಡೆಯು ತ್ತಿದೆ. ತಂತ್ರ ಜ್ಞಾನ ಬಹುಬೇಗನೆ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮಕ್ಕಳು  ಜಾಗತಿ ಕವಾಗಿ ಹೆಚ್ಚಿನ ತಿಳುವಳಿಕೆ …

ಮಣ್ಣು ಕೊಳ್ಳೆ ಹೊಡೆಯುವ ಪೈವಳಿಕೆ ಪಂ. ಸದಸ್ಯನ ವಿರುದ್ಧ ಕ್ರಮಕ್ಕೆ ಮಂಡಲ ಕಾಂಗ್ರೆಸ್ ಆಗ್ರಹ

ಪೈವಳಿಕೆ: ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯುವ ಪಂಚಾಯತ್ ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೈವಳಿಕೆ ಕಾಂಗ್ರೆಸ್ ಸಭೆ ಆಗ್ರಹಿಸಿದೆ. ಪಂಚಾಯತ್ ವ್ಯಾಪ್ತಿಯ ಪಾದೆಕಲ್ಲು, ಕರ್ನಾಟಕ ಕರೋಪಾಡಿ ಪಂಚಾಯತ್ ವ್ಯಾಪ್ತಿಯ ಮುಗುಳಿ ಪೊನ್ನೆಂಗಳದಲ್ಲಿ ಹಲವಾರು ವರ್ಷಗಳಿಂದ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಅಧಿಕಾರಿ ಗಳು ಕಣ್ಣುಮುಚ್ಚಿ ಕುಳಿತಿದ್ದಾರೆಂದು ಕಾಂಗ್ರೆಸ್ ದೂರಿದೆ. ಇತ್ತೀಚೆಗೆ ಕರ್ನಾಟಕ ಪೊಲೀಸರು ಈ ಸ್ಥಳಕ್ಕೆ ದಾಳಿ ನಡೆಸಿ ಯಂತ್ರೋಪಕರಣ ವಶಪಡಿಸಿ ಕೇಸು ದಾಖಲಿಸಿದ್ದು, ಪೈವಳಿಕೆ ಪಂಚಾಯತ್ ಸಿಪಿಎಂ ಸದಸ್ಯ ಝಕರಿಯ ವಿರುದ್ಧ ಇದುವರೆಗೂ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡು …

ಚುನಾವಣೆ ಮಾತ್ರ ಗುರಿಯಿರಿಸಿ ಕಾರ್ಯಾಚರಿಸುವ ಪಕ್ಷವಲ್ಲ ಬಿಜೆಪಿ- ಎಂ.ಟಿ. ರಮೇಶ್

ಕಾಸರಗೋಡು: ಚುನಾವಣೆಯ ಜಯ ಮಾತ್ರ ಉದ್ದೇಶಿಸಿ ಕಾರ್ಯಾಚರಿಸುವ ಪಕ್ಷವಲ್ಲ ಬಿಜೆಪಿ ಎಂದು ಮೂರು ದಶಕಗಳ ಕಾಲ ಅಧಿಕಾರದಿಂದ ಹೊರಗಿದ್ದರೂ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಉಂಟಾಗದಿರುವುದಕ್ಕೆ ಕಾರಣ ಮುಖಂಡರು, ಕಾರ್ಯಕರ್ತರು ವ್ಯಕ್ತಿ ಆಸಕ್ತಿಗಳ ಹೊರತಾಗಿ ಪಕ್ಷ, ದೇಶಕ್ಕೆ ಪ್ರಾಮುಖ್ಯತೆ ನೀಡಿರುವುದಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ನುಡಿದರು. ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಕಾಸರಗೋಡು ಸಂಘಟನಾ ಮಂಡಲ ಪ್ರಶಿಕ್ಷಣ ಮಹಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿಶ್ವದ ಹಲವು ದೇಶಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕ್ಷಾಮ ಎದುರಿಸುವಾಗಲೂ …

ಸಮುದ್ರ ಕಿನಾರೆಯಲ್ಲಿ ರುಂಡವಿಲ್ಲದ ಗಂಡಸಿನ ಮೃತದೇಹ ಪತ್ತೆ: ನಿಗೂಢತೆ, ಸಮಗ್ರ ತನಿಖೆ ಆರಂಭ

ಕಾಸರಗೋಡು: ಕಾಸರಗೋಡು ಲೈಟ್ ಹೌಸ್ ಬಳಿಯ ಸಮುದ್ರ ಕಿನಾರೆಯಲ್ಲಿ ರುಂಡವಿಲ್ಲದ ಅಪರಿಚಿತ ಗಂಡಸಿನ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ.  ಮೃತದೇಹ ನಗ್ನವಾಗಿ ಕವುಚಿ ಬಿದ್ದ ಸ್ಥಿತಿಯಲ್ಲಿತ್ತು. ಇಂದು ಬೆಳಿಗ್ಗೆ ಮೀನುಗಾರಿಕೆಗೆ  ತೆರಳಿದ ಬೆಸ್ತರಿಗೆ  ಮೃತದೇಹ ಕಂಡುಬಂದಿದೆ.  ಅವರು ನೀಡಿದ ಮಾಹಿತಿಯಂತೆ  ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಆರಂಭಿಸಿದ್ದಾರೆ. ಸುಮಾರು ಒಂದೂವರೆ ತಿಂಗಳ ಹಿಂದೆ ಈ ವ್ಯಕ್ತಿ  ಮೃತಪಟ್ಟಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ  ವ್ಯಕ್ತಿಸಮುದ್ರಕ್ಕೆ ಬಿದ್ದರೆ  ಮೃತದೇಹ ಸಮುದ್ರದಲ್ಲಿ ಒಂದೂವರೆ ತಿಂಗಳೊಳಗೆ ಪೂರ್ಣವಾಗಿ ಜೀರ್ಣಿಸುವುದಿಲ್ಲ. ಮಾತ್ರವಲ್ಲದೆ ರುಂಡ …

ಸೋಲಾರ್ ಡ್ರಯರ್‌ನಲ್ಲಿರಿಸಿದ್ದ 235 ಕಿಲೋ ಅಡಿಕೆ ಕಳವು: ಮೂವರು ಆರೋಪಿಗಳ ಬಂಧನ

ಬದಿಯಡ್ಕ: ಸೋಲಾರ್ ಡ್ರಯರ್‌ನಲ್ಲಿ ಇರಿಸಿದ್ದ 235 ಕಿಲೋ ಅಡಿಕೆ ಕಳವುಗೈದ ಪ್ರಕರಣದಲ್ಲಿ ಮೂರು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಿನ್ನಿಂಗಾರು ಕೈಪಂಗಳ  ನಿವಾಸಿ  ಕೆ. ಗಣೇಶ್ (29), ಗುತ್ಯಡ್ಕ ನಿವಾಸಿ ಶಿಶಿರ್ ಕುಮಾರ್ (19), ಸತೀಶ್ ಕುಮಾರ್ (31) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ಪೊಲೀಸರು ನ್ಯಾಯಾಲ ಯದಲ್ಲಿ ಹಾಜರುಪಡಿ ಸಿದ್ದು, ಈ ವೇಳೆ ಆರೋಪಿಗಳಿಗೆ ರಿಮಾಂಡ್ ವಿಧಿಸಲಾಗಿದೆ. ಏತಡ್ಕ ನಿವಾಸಿ ಇಬ್ರಾಹಿಂ ಎಂಬವರ ಮನೆ ಸಮೀಪದ ಸೋಲಾರ್ ಡ್ರಯರ್‌ನಲ್ಲಿ ಇರಿಸಿದ್ದ ಅಡಿಕೆಯನ್ನು ಜುಲೈ 2 ಹಾಗೂ …

ಅಸೌಖ್ಯ: ಗಲ್ಫ್ ಉದ್ಯಮಿ ನಿಧನ

ಉಪ್ಪಳ: ಮಣ್ಣಂಗುಳಿ ನಿವಾಸಿ ದಿ| ಪಿ.ಬಿ ಅಬೂಬಕ್ಕರ್ ಪಾರಕಟ್ಟರ ವರ ಪುತ್ರ ದುಬೈಯಲ್ಲಿ ಉದ್ಯಮಿ ಯಾಗಿರುವ ಮೊಯಿನುದ್ದೀನ್ ಶೆಹದಿಲ್ (43) ನಿನ್ನೆ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಹಲವು ವರ್ಷಗಳಿಂದ ದುಬೈಯಲ್ಲಿ ಉದ್ಯಮಿಯಾಗಿದ್ದು, ಹೃದಯದ ಅಸೌಖ್ಯ ನಿಮಿತ್ತ 4 ದಿನಗಳ ಹಿಂದೆ ಊರಿಗೆ ಆಗಮಿಸಿದ್ದರು. ಕಳೆದ ಮೂರು ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುಬೈ ಮಣ್ಣಂಗುಳಿ ಕಲ್ಚರಲ್ ಸೆಂಟರ್ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ತಾಯಿ ಕೈರುನ್ನೀಸ, ಪತ್ನಿ ಸಕೀನ, ಮಕ್ಕಳಾದ ಸಿಮ್ರಾನ್, …

ಯುವಕನನ್ನು ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ಕೊಲೆಗೈಯ್ಯಲೆತ್ನ: ಯುವತಿ ಸಹಿತ ನಾಲ್ಕು ಮಂದಿ ಪೊಲೀಸ್ ಕಸ್ಟಡಿಯಲ್ಲಿ ಎಎಸ್‌ಪಿ ನೇತೃತ್ವದಲ್ಲಿ ಸಮಗ್ರ ತನಿಖೆ ಆರಂಭ

ಕುಂಬಳೆ: ಮೊಗ್ರಾಲ್‌ನಲ್ಲಿ ಯುವಕನನ್ನು ತಡೆದು ನಿಲ್ಲಿಸಿದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ಕೊಲೆ ಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಯುವತಿ ಸಹಿತ ನಾಲ್ಕು ಮಂದಿ ಯನ್ನು ಕುಂಬಳೆ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ತಮಿಳುನಾಡಿನ ನಾಗಪಟ್ಟಣಂ ನಿವಾಸಿಗಳಾದ ಶರವಣ, ಲಿಂಗ, ಮಾರಿ ಹಾಗೂ ವೆಳ್ಳುಪುರಂ  ನಿವಾಸಿಯಾದ ಇನ್ನೋರ್ವ  ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಕರ್ನಾಟಕದ ಹುಬ್ಬಳ್ಳಿ ನಿವಾಸಿಯೂ, ಮೊಗ್ರಾಲ್ ಕೊಪ್ಪಳದಲ್ಲಿ ವಾಸಿಸುವ ಸಾರಣೆ  ಮೇಸ್ತ್ರಿಯಾದ  ಅಬ್ದುಲ್ ಗಫೂರ್ (45)ರ ದೂರಿನ  ಮೇರೆಗೆ ಇವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಕಸ್ಟಡಿಗೆ …

ಮಧೂರು ಕ್ಷೇತ್ರದ ಪಾರಂಪರ್ಯ ಅರ್ಚಕ ವೇಣುಗೋಪಾಲ ಕಲ್ಲೂರಾಯ ನಿಧನ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಪಾರಂಪರ್ಯ ಅರ್ಚಕ ವೇಣುಗೋಪಾಲ ಕಲ್ಲೂರಾಯ (78) ನಿಧನ ಹೊಂದಿದರು. ಸ್ವಗೃಹವಾದ ಮಧೂರು ಮೇಲಿನಮನೆಯಲ್ಲಿ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಶಿವಳ್ಳಿ ಬ್ರಾಹ್ಮಣಸಭಾ ಕಾಸರಗೋಡು ವಲಯ ಸಮಿತಿ ಮಾಜಿ ಅಧ್ಯಕ್ಷ, ಕೇಂದ್ರ ಸಮಿತಿ ಮಾಜಿ ಉಪಾಧ್ಯಕ್ಷರೂ ಆಗಿದ್ದರು. ನಿವೃತ್ತ ಶಿಕ್ಷಕನೂ ಆಗಿದ್ದ ಇವರು ಯಕ್ಷಗಾನ ಕಲಾವಿದರೂ, ಸಂಗೀತ ವಿದ್ವಾನ್, ಪುರೋಹಿತ ಹಾಗೂ ಧಾರ್ಮಿಕ, ಸಾಮಾಜಿಕ ಮುಂದಾಳುವೂ ಆಗಿದ್ದರು. ಮೃತರ ಅಂತ್ಯಸಂಸ್ಕಾರ ಇಂದು ಬೆಳಿಗ್ಗೆ ನಡೆಯಿತು. ಮೃತರು ಪತ್ನಿ ಕಮಲಾಕ್ಷಿ ಯಾನೆ …