ಪೈವಳಿಕೆ ಸರ್ವೀಸ್ ಸಹಕಾರಿ ಬ್ಯಾಂಕ್‌ಗೆ ಅಶ್ವತ್ಥ್ ಪೂಜಾರಿ ಲಾಲ್‌ಭಾಗ್ ಅಧ್ಯಕ್ಷರಾಗಿ ಪುನರಾಯ್ಕೆ

ಪೈವಳಿಕೆ: ಪೈವಳಿಕೆ ಸರ್ವೀಸ್ ಸಹಕಾರಿ ಬ್ಯಾಂಕ್ ನಂ. ೩೯೮ನೇ ಅಧ್ಯಕ್ಷರಾಗಿ ಅಶ್ವಥ್ ಪೂಜಾರಿ ಲಾಲ್‌ಭಾಗ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪುಷ್ಪ ಜಯರಾಮ ಬಾಯಿಕಟ್ಟೆ ಆಯ್ಕೆಯಾಗಿದ್ದಾರೆ. ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಅಶ್ವಥ್ ಪೂಜಾರಿ ಲಾಲ್‌ಭಾಗ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಪುಷ್ಪ ಜಯರಾಮ ಬಾಯಿಕಟ್ಟೆ ಅವರಿಗೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಹಕಾರ ಕ್ಷೇತ್ರದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಕುಂಬಳೆ ಠಾಣೆ ಎಸ್‌ಐ ಆಗಿ ಅನೂಬ್, ಸಿಐ ಆಗಿ ಅನೂಪ್ ಕೃಷ್ಣ ನೇಮಕ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆಯಲ್ಲಿ ನೂತನ ಎಸ್‌ಐ ಆಗಿ ಎಸ್.ಅನೂಬ್ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಆರ್.ಪಿ. ಅನೂಪ್‌ಕೃಷ್ಣ ಅಧಿಕಾರ ವಹಿಸಿಕೊಂಡಿ ದ್ದಾರೆ. ಎಸ್‌ಐ ಅನೂಬ್‌ರನ್ನು ವಿದ್ಯಾನಗರ ಪೊಲೀಸ್ ಠಾಣೆಯಿಂದ ಕುಂಬಳೆಗೆ ವರ್ಗಾಯಿಸಲಾಗಿದೆ. ತಿರುವನಂ ತಪುರ ಕಾಟಾಕಡ ನಿವಾಸಿಯಾದ ಇವರು ಈ ಮೊದಲು ಕಲ್ಲಿಕೋಟೆ, ಪಂದಿರಾಕಾವ್, ಫರೂಕ್ ಠಾಣೆಗಳಲ್ಲಿ ಎಸ್‌ಐ ಆಗಿದ್ದರು.   ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ನೇಮಕಗೊಂಡ ಆರ್‌ಪಿ ಅನೂಪ್‌ಕೃಷ್ಣ ತಿರುವನಂತಪುರ ಕೊಡಪ್ಪನಕುನ್ನು ನಿವಾಸಿಯಾಗಿದ್ದಾರೆ. ಈ ಹಿಂದೆ ತಿರುವನಂತಪುರ, ಕೋಟ್ಟಯಂ, ಕೊಲ್ಲಂ, ಪತ್ತನಂತಿಟ್ಟ, ಕುಂಬಳೆ ಕರಾವಳಿ ಠಾಣೆಗಳಲ್ಲಿ …

ನಿಡ್ಡಂಬಾಡಿ ರಾಮ ನಿಧನ

ಕುಂಬಳೆ: ಕಳತ್ತೂರು ಇಚ್ಲಂಪಾಡಿ ಶಾಲಾ ಪರಿಸರ ನಿವಾಸಿ ನಿಡ್ಡಂಬಾಡಿ ರಾಮ (57) ನಿಧನ ಹೊಂದಿದರು. ಮತರು ಪತ್ನಿ ಜಯಂತಿ, ಮಕ್ಕಳಾದ ದೇವಿಕ, ಜಯಲಕ್ಷಮಿ, ಅಳಿಯ ಸುಧೀರ್, ಸಹೋದರಿ ಸುಶೀಲ, ಸಹೋದರ ಸೇಸಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಾರಾಯಣ ಪೂಜಾರಿ ನಿಧನ

 ದೇಲಂಪಾಡಿ:  ಮಯ್ಯಳ ನಿವಾಸಿ ನಾರಾಯಣ ಪೂಜಾರಿ (73) ನಿನ್ನೆ ನಿಧನಹೊಂದಿದರು. ಇವರು ಕೃಷಿಕನಾಗಿದ್ದರು. ಮೃತರು ಪತ್ನಿ ಸುಂದರಿ, ಮಕ್ಕಳಾದ ಭರತ್, ವಿಮಲ, ಅಶೋಕ, ಸಹೋದರ ಕುಶಲಪ್ಪ, ಅಳಿಯ ನಾಗೇಶ ಬಾಯಾರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಯಶೋಧ ನಿಧನ

ಉಪ್ಪಳ: ಪ್ರತಾಪನಗರ ಪುಳಿಕುತ್ತಿ ನಿವಾಸಿ ದಿ.ಅಚ್ಚುತ್ತರ ಪತ್ನಿ ಯಶೋಧ [85] ಶುಕ್ರವಾರ ನಿಧನ ಹೊಂದಿದರು. ಮೃತರ ಮಕ್ಕಳಾದ ರಮೇಶ ಕಾಸರಗೋಡು, ಪ್ರಭಾಕರ ಮುಂಬೈ, ಸೊಸೆಯಂದಿರಾದ ವೃಂದ, ಲತಾ, ಅಳಿಯ ಭಾಸ್ಕರ ಕಾಸರಗೋಡು, ಸಹೋದರ ಶ್ರೀನಿವಾಸ ಪ್ರತಾಪನಗರ, ಸಹೋದರಿ ಸುಲೋಚನ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪುತ್ರಿ ಕಾರ್ತಾ್ಯಯಿನಿ, ಸಹೋದರರಾದ ದಾಮೋದರ ವೈದ್ಯರ್,ಕುಂಞರಾಮ ವೈದ್ಯರ್, ನಾರಾಯಣ ಈ ಹಿಂದೆ ನಿಧನರಾಗಿದ್ದಾರೆ. ನಿಧನಕ್ಕೆ ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರದ ಆಡಳಿತ ಸಮಿತಿ, ಉತ್ಸವ ಸಮಿತಿ, ಭಜನಾ …

ಸಿಪಿಐಯಿಂದ ದೆಹಲಿ ಚಲೋ::ಪೈವಳಿಕೆಯಲ್ಲಿ ಕಾಲ್ನಡೆ ಪ್ರಚಾರ ಜಾಥಾ

ಪೈವಳಿಕೆ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹಾಗೂ ದೇಶದ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಫೆಡರಲಿಸಂನ ಮೌಲ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಸೆಪ್ಟೆಂಬರ್ ೧ರಂದು ನಡೆಸಲಿರುವ ‘ದೆಹಲಿ ಚಲೋ’ ಕಾರ್ಯಕ್ರಮದ ಅಂಗವಾಗಿ ಕಾಲ್ನಡೆಗೆ ಪ್ರಚಾರ ಜಾಥಾ ನಡೆಯಿತು. ಸಿಪಿಐ ಪೈವಳಿಕೆ ಲೋಕಲ್ ಸಮಿತಿ ನೇತೃತ್ವದಲ್ಲಿ ನಿನ್ನೆ ಬಾಯಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.ಶಾಸಕ ಗೋವಿಂದನ್ ಪಳ್ಳಿಕ್ಕಾಪ್ಪಿಲ್ ಉದ್ಘಾಟಿಸಿದರು. ಸಿಪಿಐ ಮಂಡಲ ಸಮಿತಿ ಸದಸ್ಯ ಚಣಿಯಾ ಕೊಮ್ಮಂಗಳ ಅಧ್ಯಕ್ಷತೆ ವಹಿಸಿದ್ದರು. …

ಅಧಿಕಾರಿಗಳ ಕಣ್ಣಿಗೆ ಬೀಳದ ನಗರದ ಪ್ರಧಾನ ರಸ್ತೆಯ ಬೃಹತ್ ಹೊಂಡ: ಅಪಘಾತ ಭೀತಿಯಲ್ಲಿ ಸವಾರರು

ಕಾಸರಗೋಡು: ನಗರದ ಪ್ರಧಾನ ರಸ್ತೆಗಳಲ್ಲೊಂದಾದ ಕೆಪಿಆರ್ ರಾವ್ ರೋಡ್‌ನಲ್ಲಿ ಬೃಹತ್ ಹೊಂಡ ಪ್ರತ್ಯಕ್ಷಗೊಂಡು ಅಪಾಯವನ್ನು ಕೈಬೀಸಿ ಕರೆಯುತ್ತಿದೆ. ನಗರದ ಪ್ರಧಾನ ಅಂಚೆಕಚೇರಿ ಸಮೀಪದಲ್ಲೇ ಕೆಪಿಆರ್ ರಾವ್ ರಸ್ತೆಯಲ್ಲಿ ಈ ಹೊಂಡ ಸೃಷ್ಟಿಯಾಗಿದ್ದು, ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿವೆ. ದಿನದಿಂದ ದಿನಕ್ಕೆ ಹೊಂಡದ ಗಾತ್ರ ಬೆಳೆಯುತ್ತಿದ್ದು, ಹಲವು ವಾಹನಗಳು ಹೊಂಡದೊಳಗೆ ಬಿದ್ದು ಅಪಘಾತ ಸಂಭವಿಸಿರುವುದಾಗಿಯೂ ಹೇಳಲಾಗುತ್ತಿದೆ. ನಗರದ ಪ್ರಧಾನ ಭಾಗದಲ್ಲಿ ಕಂಡುಬರುವ ಈ ಹೊಂಡವನ್ನು ಮುಚ್ಚಲು ಇದುವರೆಗೂ ಯಾವುದೇ ಕ್ರಮ ಉಂಟಾಗಲಿಲ್ಲವೆಂದು ದೂರಲಾಗಿದೆ. ರಸ್ತೆಯಲ್ಲಿರುವ …

ನಾಪತ್ತೆಯಾಗಿದ್ದ ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ನಾಪತ್ತೆಯಾಗಿದ್ದ ಯುವಕ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಕುಳದಪಾರೆ ನಾಕೂರು ಎಂಬಲ್ಲಿನ ಕೊರಗಪ್ಪ ಎಂಬವರ ಪುತ್ರ ಸುನಿಲ್ (23) ಮೃತಪಟ್ಟ ಯುವಕ.  ಕೂಲಿ ಕಾರ್ಮಿಕನಾಗಿದ್ದ ಸುನಿಲ್  ಬುಧವಾರ ಅಪರಾಹ್ನ ೩ ಗಂಟೆಗೆ ಮನೆಯಿಂದ ಹೊರಗೆ ತೆರಳಿದ್ದನು. ಅನಂತರ ಮನೆಗೆ ಬಂದಿರಲಿಲ್ಲ. ಈಬಗ್ಗೆ  ನಿನ್ನೆ ಮನೆಯವರು ಆದೂರು ಪೊಲೀಸರಿಗೆ ದೂರು ನೀಡಿದ್ದರು. ಅನಂತರ ಮನೆಯವರು ನಡೆಸಿದ ಶೋಧ ವೇಳೆ ಮನೆ ಸಮೀಪದ ರಬ್ಬರ್ ತೋಟದಲ್ಲಿ ಸುನಿಲ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. …

ಅಪ್ರಾಪ್ತೆಯನ್ನು ಕೊಲೆಗೈದು ಅತ್ಯಾಚಾರವೆಸಗಿದ  ಆರೋಪಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಲ್ಲಿಕೋಟೆ: ಅಪ್ರಾಪ್ತೆಯನ್ನು ಕೊಲೆಗೈದ ಬಳಿಕ ಮೃತದೇಹದ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಆರೋಪಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕಲ್ಲಿಕೋಟೆ ಮಾಳಿಕಡವಿನ  ಸ್ವಂತ ಗ್ಯಾರೇಜ್  ಹೊಂದಿರುವ ವೆಂಙಾರಿ ತಡಂಬಾಟ್ಟುತಾಳಂ  ಪಿಸ್ ಗಾರ್ಡನ್‌ನ ವೈಶಾಖ್ (35) ಸಾವನ್ನಪ್ಪಿದ ವ್ಯಕ್ತಿ. ಈತ ತನ್ನ ಮನೆಯಲ್ಲಿ ನಿನ್ನೆ  ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಬಳಿಕ ಆತನನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ.  ವಿವಾಹಿತನಾಗಿರುವ ಆರೋಪಿ ವೈಶಾಖ್ ಅಪ್ರಾಪ್ತೆಯೊಂದಿಗೆ ನಂಟು ಹೊಂದಿದ್ದನು. ಆ ಬಳಿಕ …

ಬೆಜ್ಜಂಗಳದಲ್ಲಿ ಅಬಕಾರಿ ಕಾರ್ಯಾಚರಣೆ: 133.92 ಲೀಟರ್ ಮದ್ಯ, 24 ಲೀ. ಬಿಯರ್ ವಶ; ದುರ್ಗಿಪಳ್ಳ ನಿವಾಸಿ ಸೆರೆ

ಕಾಸರಗೋಡು: ಓಣಂ ಸ್ಪೆಷಲ್ ಡ್ರೈವ್‌ನಂಗವಾಗಿ ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ ಕಾರಿನಲ್ಲಿ ಸಾಗಿಸಲೆತ್ನಿಸಿದ ವಿದೇಶ ಮದ್ಯ ಹಾಗೂ ಬಿಯರ್ ವಶಪಡಿಸಲಾ ಗಿದೆ. ಈ ಪ್ರಕರಣದಲ್ಲಿ ಓರ್ವ ಸೆರೆಯಾಗಿದ್ದಾನೆ. ನಿನ್ನೆ ಅಪರಾಹ್ನ ೨.೩೦ರ ವೇಳೆಗೆ ಮೀಂಜ ಬೆಜ್ಜಂಗಳ ದಲ್ಲಿ ನಡೆದ ವಾಹನ ತಪಾಸಣೆ ಮಧ್ಯೆ ಮದ್ಯ ಸಾಗಾಟ ಪತ್ತೆಹಚ್ಚಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಸರ್ಕಲ್ ಇನ್ಸ್‌ಪೆಕ್ಟರ್ ಜಿ. ಕೃಷ್ಣ ಕುಮಾರ್‌ರ ನೇತೃತ್ವದಲ್ಲಿನ ತಂಡ ಹಾಗೂ ಕುಂಬಳೆ ಅಬಕಾರಿ ತಂಡ ಜಂಟಿಯಾಗಿ ನಡೆಸಿದ ದಾಳಿಯಲ್ಲಿ 133.92 ಲೀಟರ್ ಕರ್ನಾಟಕ ಮದ್ಯ, …