ಓಂಬ್ರದರ್ಸ್ ಕುಂಬಳೆಯಿಂದ ಕುಂಟಂಗೇರಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರಕ್ಕೆ ಶೌಚಾಲಯ ಕೊಡುಗೆ

ಕುಂಬಳೆ : ಕುಂಬಳೆಯಲ್ಲಿ ಕಳೆದ ೨೬ ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಓಂ ಬ್ರದರ್ಸ್ ಕುಂಬಳೆ ಸಂಸ್ಥೆಯ ವತಿಯಿಂದ ಶ್ರೀ ಭಜನಾ ಮಂದಿರಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ೨ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಶೌಚಾಲಯವನ್ನು ಉದ್ಘಾಟಿಸಲಾಯಿತು.ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂತ್ರಿವರ್ಯ ಶ್ರೀ ಯೋಗೀಶ್ ಕಡಮಣ್ಣಾಯ, ಓಂ ಬ್ರದರ್ಸ್ನ ಅಧ್ಯಕ್ಷ ರಾಜೇಶ್ ಪೂಜಾರಿ, ಕಾರ್ಯದರ್ಶಿ ಪುರುಷೋತ್ತಮ್, ಧಾರ್ಮಿಕ ಮುಂದಾಳು ಶಂಕರ ಆಳ್ವ ಕೋಟೆಕಾರ್, ಕುಂಬಳೆ ಗ್ರಾಮ …

ಪರಮೇಶ್ವರಿ ನಿಧನ

ಬದಿಯಡ್ಕ: ಪಳ್ಳತ್ತಡ್ಕ ಕೋಳಾರುಮೂಲೆಯ ದಿ| ಕೊಗ್ಗು ನಾಯ್ಕ್‌ರ ಪತ್ನಿ ಪರಮೇಶ್ವರಿ (83) ನಿಧನ ಹೊಂದಿದರು. ಇವರ ಏಕ ಪುತ್ರಿ ಲಲಿತ ಈ ಹಿಂದೆ ನಿಧನ ಹೊಂದಿದ್ದರು. ಮೃತರು ಸಹೋದರ ನಾರಾಯಣ ನಾಯ್ಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಸಹೋದರಿಯರಾದ ಎಂಕಮ್ಮ, ಕಾವೇರಿ, ಗಂಗಮ್ಮ ಈ ಹಿಂದೆ ನಿಧನ ಹೊಂದಿದ್ದಾರೆ.

ಬಾಲಕೃಷ್ಣ ನಾಯ್ಕ್ ನಿಧನ

ಬೆಳ್ಳೂರು: ಕಿನ್ನಿಂಗಾರು ರೆಂಜೆಮೂಲೆ ಪರಿವಾರ ಬಂಟ ಸಮುದಾಯ, ಪುತ್ತಿಗೆ ತರವಾಡು ಮನೆಯ ಹಿರಿಯ ಸದಸ್ಯ ಬಾಲಕೃಷ್ಣ ನಾಕ್ (72) ನಿನ್ನೆ ನಿಧನ ಹೊಂದಿ ದರು. ವಾಣಿನಗರದ ಆನ್‌ಲೈನ್ ಸೇವಾ ಕೇಂದ್ರಕ್ಕೆ ಯಾವುದೋ ಕೆಲಸದ ನಿಮಿತ್ತ ಆಗಮಿಸಿದ್ದ ಇವರು ಅಲ್ಲಿಂದ ಹಿಂತಿರುಗುವಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ವನಿತ, ಮಕ್ಕಳಾದ ಚೇತನ್ ನಾಕ್, ಚೈತನ್ಯ, ಅಳಿಯ ಸುನಿಲ್, ಸೊಸೆ ಅಕ್ಷತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪಿಣರಾಯಿ ವಿಜಯನ್ ಸಾರ್ವಜನಿಕ ಚಟುವಟಿಕೆಯಿಂದ ದೂರ ನಿಂತು ತನಿಖೆ ಎದುರಿಸಬೇಕು- ವಿ.ಕೆ. ಸಜೀವನ್

ಕಾಸರಗೋಡು: ಕಪ್ಪು ಮರಳು ಗಣಿಗಾರಿಕೆಗೆ ಸಂಬಂಧಿಸಿ ಅನಧಿಕೃತ ವ್ಯವಹಾರಗಳ ಮೂಲಕ ೩.೨೮ ಕೋಟಿ ರೂ. ಪುತ್ರಿಯ ಕಂಪೆನಿಯಾದ ಸಂಸ್ಥೆಯ ಮೂಲಕ ತಿಂಗಳ ವೇತನ ಸ್ವೀಕರಿಸಿರುವುದಾಗಿ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಾರ್ವಜನಿಕ ಚಟುವಟಿಕೆಗಳಿಂದ ದೂರವಿದ್ದು ತನಿಖೆ ಎದುರಿಸಬೇಕೆಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ಆಗ್ರಹಿಸಿದರು. ರಾಜ್ಯದ ಕರಾವಳಿಯನ್ನು ಕೊಳ್ಳೆ ಹೊಡೆಯಲು ಒತ್ತಾಸೆಗೈದುದರ ಪ್ರತಿಫಲವಾಗಿ ಪಿಣರಾಯಿ ವಿಜಯನ್ ಈ ಮೊತ್ತವನ್ನು ಪಡೆದುಕೊಂಡಿರುವುದಾಗಿ ಸಜೀವನ್ ಆರೋಪಿಸಿದರು. ಪಿ.ಎಂ.ಎಲ್.ಎ ಆಕ್ಟ್ ಸೆಕ್ಷನ್ 66(2) ಪ್ರಕಾರ ಪಿಣರಾಯಿ …

ನರೇಂದ್ರ ಮೋದಿ ಆಡಳಿತದಲ್ಲಿ 25ವರ್ಷ: ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ

ಕಾಸರಗೋಡು: ನರೇಂದ್ರ ಮೋದಿ ಜನಸೇವೆಯ ಹಾದಿಯಲ್ಲಿ ೨೫ ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗುತ್ತಿರುವ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಬಿಜೆಪಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮತ್ತು ಮಂಡಲ ಉಪ ಸಮಿತಿ ಸದಸ್ಯರಿಗಾಗಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ಕಾರ್ಯಾ ಗಾರವನ್ನು ಆಯೋಜಿಸಲಾಯಿತು. ಬಿಜೆಪಿ ಕಣ್ಣೂರು ವಲಯ ಪ್ರಭಾರಿ ಹಾಗೂ ಬಿಜೆಪಿ ರಾಜ್ಯ ಸೆಲ್ ಸಂಯೋಜಕ ವಿ.ಕೆ. ಸಜೀವನ್ ಉದ್ಘಾಟಿಸಿದರು.ಚುನಾಯಿತ ಆಡಳಿತಗಾರರಾಗಿ ಕಾಲು ಶತಮಾನ ಪೂರೈಸಿರುವ ನರೇಂದ್ರ ಮೋದಿಯವರು ವಿಶ್ವ ನಾಯಕರ ಸಾಲಿನಲ್ಲಿ ಅತ್ಯಂತ ಪ್ರಬಲ …

ವಾಹನ ಅಪಘಾತದಲ್ಲಿ ಗಾಯಗೊಂಡಿರುವುದಾಗಿ ತಿಳಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಮೃತ್ಯು

ಕಾಸರಗೋಡು: ವಾಹನ ಅಪಘಾತದಲ್ಲಿ ಗಾಯಗೊಂಡಿರುವು ದಾಗಿ ತಿಳಿಸಿ ಕಾಸರಗೋಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ.  ಮೂಲತಃ ಕರ್ನಾಟಕದ ಬೆಂಗಳೂರು ನಿವಾಸಿಯೂ, ಪ್ರಸ್ತುತ ಕುಂಬಳೆ ಬಳಿಯ ಕಳತ್ತೂರಿನಲ್ಲಿ ವಾಸಿಸುವ ಅಸ್ಲಾಂ ಭಾಷಾ (39) ಸಾವಿಗೀಡಾದ ಯುವಕನಾಗಿದ್ದಾನೆ. ಎರಡು ದಿನಗಳ ಹಿಂದೆ ಇವರು  ಕಾಲಿಗೆ ಗಾಯಗೊಂಡ ಸ್ಥಿತಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿ ಚಿಕಿತ್ಸೆಗಾಗಿ ದಾಖಲಾಗಿದ್ದರೆನ್ನಲಾಗಿದೆ. ಇದೇ ವೇಳೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಬೇಕಾಗಿಲ್ಲವೆಂದೂ ಅಪಘಾತ ಬಗ್ಗೆ  ಕೇಸು ದಾಖಲಿಸುವುದು ಬೇಡವೆಂದು ಅಸ್ಲಾಂ ಭಾಷಾ ಆಸ್ಪತ್ರೆ …

ಮಗಳ ಸ್ನೇಹಿತೆಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು:  ಮಗಳ ಸ್ನೇಹಿತೆಗೆ  ಅಶ್ಲೀಲ ಸಂದೇಶ ಕಳುಹಿಸಿದ  ವ್ಯಕ್ತಿ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ.  ಸೆಬಾಸ್ಟಿ ಯನ್ ಎಂಬ ವ್ಯಕ್ತಿ ವಿರುದ್ಧ  ಚಿಟ್ಟಾರಿಕಲ್    ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿಯ ಮಗಳು ಹಾಗೂ ದೂರುದಾತೆ ಯಾದ ಬಾಲಕಿ 10ನೇ ತರಗತಿ ವಿದ್ಯಾರ್ಥಿನಿಯರಾಗಿದ್ದಾರೆ. ಆರೋಪಿ ಹಾಗೂ ಪುತ್ರಿ ಒಂದೇ ಮೊಬೈಲ್ ಫೋನ್ ಉಪಯೋಗಿ ಸುತ್ತಿದ್ದಾರೆ.  ಈ ಮೊಬೈಲ್‌ನಿಂದ ದೂರುದಾತೆಯ ಮೊಬೈಲ್ ಫೋನ್ ನಂಬ್ರ ಆರೋಪಿಗೆ ಲಭಿ ಸಿದೆಯೆಂದು ಸಂಶಯಿಸಲಾಗುತ್ತಿದೆ. ಆರೋಪಿಯನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದರೆ ಇನ್ನಷ್ಟು …

ವಿದೇಶದಿಂದ ಸಹಿತ ಹರಿದು ಬಂದ ಕೋಟ್ಯಂತರ ರೂ.: ಜಿಲ್ಲೆಯಾದ್ಯಂತ ಪೊಲೀಸ್ ದಾಳಿ; 26 ಪ್ರಕರಣ ದಾಖಲು

ಕಾಸರಗೋಡು: ಆನ್‌ಲೈನ್ ಟ್ರೇಡಿಂಗ್ ಹಾಗೂ ಇತರ ರೀತಿಯ ಆನ್‌ಲೈನ್ ಸೈಬರ್ ವಂಚಕರಿಗೆ ಬಾಡಿಗೆಗೆ ಬ್ಯಾಂಕ್ ಖಾತೆಗಳನ್ನು ನೀಡುವವರನ್ನು ಪತ್ತೆಹಚ್ಚಲು ಪೊಲೀಸರು ನಿನ್ನೆ ಜಿಲ್ಲೆಯಾದ್ಯಂತ ವ್ಯಾಪಕ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಇದರಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಇದರಂತೆ ಮೇಲ್ಪರಂಬ ಠಾಣೆಯಲ್ಲಿ 6, ಕಾಸರಗೋಡು, ವಿದ್ಯಾನಗರ ಠಾಣೆಗಳಲ್ಲಿ ತಲಾ 5, ಹೊಸದುರ್ಗ 4, ಮಂಜೇಶ್ವರ, ಬೇಡಗ, ಚಂದೇರ, ನೀಲೇಶ್ವರ, ವೆಳ್ಳರಿಕುಂಡ್ ಎಂಬೀ ಪೊಲೀಸ್ ಠಾಣೆಗಳಲ್ಲಿ ತಲಾ 1ರಂತೆ ಪ್ರಕರಣ ದಾಖಲಾಗಿದೆ. ಸೈಬರ್ …

ವಾಮಂಜೂರು ವಾಹನ ಅಪಘಾತ: ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು

ಉಪ್ಪಳ: ಬೈಕ್ ಹಾಗೂ ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಪೈವಳಿಕೆ ಚಿಪ್ಪಾರು ಕಡೆಂಕೋಡಿ ಅಡ್ಕತ್ತಿಮಾರ್‌ನ ಬಾಲಕೃಷ್ಣ ಎಂಬವರ ಪುತ್ರ ಕಿರಣ್ ಕುಮಾರ್ (34) ಮೃತಪಟ್ಟ ದುರ್ದೈವಿ. ಮೊನ್ನೆ ಸಂಜೆ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ಸಮೀಪ ಅಪಘಾತ ಸಂಭವಿಸಿತ್ತು.  ಬೈಕ್‌ನಲ್ಲಿದ್ದ ಕಿgಣ್ ಕುಮಾರ್ ಹಾಗೂ ಕೋಡಿಬೈಲು ಬಳಂಕುಡೆಯ ಹರೀಶ್ (40) ಎಂಬಿವರು ಗಾಯಗೊಂಡಿದ್ದರು. ಇವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸ್ಸೆ ಫಲಕಾರಿಯಾಗದೆ …

ಯುವತಿ ನಾಪತ್ತೆ

ಬದಿಯಡ್ಕ: ಯುವತಿ ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕುಂಬ್ಡಾಜೆ ಮವ್ವಾರು ವಡಂಬಲ ಹೌಸ್‌ನ ಹರ್ಷಿತ ವಿ. (18) ಎಂಬಾಕೆ ಸೆ. ೫ರಂದು ಬೆಳಿಗ್ಗೆ 11 ಗಂಟೆಗೆ ಮುಳ್ಳೇರಿಯಕ್ಕೆ ಹೋಗುವುದಾಗಿ ಮನೆಯವರಲ್ಲಿ ತಿಳಿಸಿ ಹೊರ ಹೋದ ಆಕೆ ನಂತರ  ಹಿಂತಿರು ಗದೆ ನಾಪತ್ತೆಯಾಗಿರುವುದಾಗಿ ಆಕೆಯ ಸಹೋದರಿ ಆಶಾಲತಾ ವಿ. ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿದ್ದಾರೆ.