ಭಾರೀ ಬಿಸಿ: ಮತ್ಸ್ಯ ಸಂಪತ್ತು ವಂಶನಾಶ; ಬೆದರಿಕೆಯಲ್ಲಿ; ಮೀನುಕಾರ್ಮಿಕರಿಗೆ ಸಂಕಷ್ಟ

ಕುಂಬಳೆ: ಬೇಸಿಗೆ ಬಿಸಿಯಲ್ಲಿ ಸಮುದ್ರತೀರ ವಲಯ ಬರದತ್ತ ಸಾಗುತ್ತಿದೆ. ಮೀನುಕಾರ್ಮಿಕರು ಇಷ್ಟರ ಮಟ್ಟಿಗೆ ಬರಕ್ಕೆ ತುತ್ತಾದ, ಸಂದಿಗ್ದತೆಗೀಡಾದ ಕಾಲ ಇರಲಿಲ್ಲವೆಂದು ಮೀನು ಕಾರ್ಮಿಕರು ತಿಳಿಸುತ್ತಾರೆ. ಕಳೆದ ವರ್ಷದ ಮಳೆಗಾಲ, ಟ್ರೋಲಿಂಗ್ ನಿಷೇಧ ಎಲ್ಲ ಮುಗಿದು ಸಮುದ್ರಕ್ಕೆ ತೆರಳಿದ ಮೀನು ಕಾರ್ಮಿಕರು ನಿರಾಶೆಹೊಂದಿದ್ದರು.  ಮೀನಿನ ಲಭ್ಯತೆಯ ಕೊರತೆ, ಕಡಲಬ್ಬರ, ಅಸಹನೀಯವಾದ ಬಿಸಿಯಿಂದ ಮೀನು ಸಂಪತ್ತು ನಾಶವಾದ ಹಿನ್ನೆಲೆಯಲ್ಲಿ ಈ ವರ್ಷ ಸಮುದ್ರತೀರ ನಿವಾಸಿಗಳು ಉಪವಾಸದಲ್ಲಿದ್ದಾರೆ. ಮೀನುಗಾರಿಕೆ ಯನ್ನು ಕೈಬಿಡುವ ಸನ್ನಿವೇಶ ಪ್ರಸ್ತುತ ಇದೆ ಎಂದು ಪರಂಪರಾಗತ ಮೀನುಕಾರ್ಮಿಕರು ನುಡಿಯುತ್ತಾರೆ.  …

ಬರಡು ನೆಲದಲ್ಲಿ ಕೃಷಿ ಸಾಧನೆ: ಡಾ. ರತ್ನಾಕರ ಮಲ್ಲಮೂಲೆಯವರಿಗೆ ವನಮಿತ್ರ ಪುರಸ್ಕಾರ

ನೀರ್ಚಾಲು : ಇಲ್ಲಿಗೆ ಸಮೀಪದ ಬುರುಡಡ್ಕ ಎಂಬ ಬರಡು ಬಂಜರು ನೆಲವನ್ನು ಹದಗೊಳಿಸಿ, ಕೃಷಿಭೂಮಿಯನ್ನಾಗಿ ಪರಿವರ್ತಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ. ರತ್ನಾಕರ ಮಲ್ಲಮೂಲೆ ಕೇರಳ ಸರಕಾರದ ಅರಣ್ಯ ಇಲಾಖೆ ನೀಡುವ ಪ್ರತಿಷ್ಠಿತ ವನಮಿತ್ರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇವರು ಮೂರ್ನಾಲ್ಕು ವರ್ಷಗಳ ಕಠಿಣ ಪರಿಶ್ರಮದಿಂದ ಬನವಾಸಿ ಎಂಬ ಹೆಸರಿನಲ್ಲಿ ರೂಪಿಸಿದ ಈ ಸ್ಥಳ ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಪರಿಸರ ಜಾಗೃತಿಯ ಸ್ಥಳವಾಗಿ ರೂಪುಗೊಂಡಿದೆ. ಅದೇ ರೀತಿಯಲ್ಲಿ ಇವರ ಪರಿಸರಸ್ನೇಹಿ ಮನೆ ಜನರ …

ಹಿರಿಯ ಕೃಷಿಕ ನಿಧನ

ಮಂಜೇಶ್ವರ: ಪಾವೂರು ರೆಂಜ ಪಡ್ಪು ನಿವಾಸಿ ಹಿರಿಯ ಕೃಷಿಕ ಲಕ್ಷ್ಮಣ ಮೂಲ್ಯ (70) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಲೀಲಾ, ಮಕ್ಕಳಾದ ದಿನೇಶ್, ಶಶಿಕಲಾ, ವಿನೋದ್ (ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ), ಸೊಸೆಯಂದಿರಾದ ವಸಂತಿ, ಕಮಲಾಕ್ಷಿ. ಕೆ (ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ), ಅಳಿಯ ನಾರಾಯಣ, ಸಹೋದರಿ ಯರಾದ ಲೀಲಾ, ಸುಶೀಲ, ಸಹೋದರ ಶ್ರೀಧರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಓರ್ವ ಸಹೋದರ ವಾಮನ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರ …

ವಾಮಂಜೂರು ಶ್ರೀ ಶಾಸ್ತಾವೇಶ್ವರ ಕ್ಷೇತ್ರ ಜೀರ್ಣೋದ್ಧಾರಕ್ಕೆ ಚಾಲನೆ

ಮಂಜೇಶ್ವರ: ವಾಮಂಜೂರು ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದ ಪ್ರಥಮ ಹಂತದ ಕಾಮಗಾರಿಗಳ ಪ್ರಯುಕ್ತ ಗುದ್ದಲಿಪೂಜೆಯನ್ನು ನಿನ್ನೆ ಬೆಳಗ್ಗೆ ಐಲ ಕ್ಷೇತ್ರದ ಆಡಳಿತ ಮೊಕ್ತೇಸರ, ಪುನರ್ ನಿರ್ಮಾಣ ಸಮಿತಿ ಸಲಹೆಗಾರ ಕೋಡಿಬೈಲು ನಾರಾಯಣ ಹೆಗ್ಡೆ ನೆರವೇರಿಸಿದರು.ಗುರುನರಸಿಂಹ ದತ್ತಿ ಮಂಡಳಿಯ ಸದಸ್ಯರು, ಸೇವಾ ಸಮಿತಿ ಸದಸ್ಯರು, ಪುನರ್ ನಿರ್ಮಾಣ ಮಂಡಳಿಯ ಸದಸ್ಯರು ಹಾಗೂ ಊರ ಭಕ್ತರು ಭಾಗವಹಿಸಿದರು.

ಸ್ಕೂಟರ್‌ನಿಂದ ಎಸೆಯಲ್ಪಟ್ಟು ಗಾಯಗೊಂಡಿದ್ದ ಮಹಿಳೆ ಮೃತ್ಯು

ಹೊಸದುರ್ಗ: ಸ್ಕೂಟರ್‌ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಅಂಬಲತ್ತರ ಪರಕ್ಕಳಾಯಿ ವಲಿಯಡ್ಕದ ಪಿ. ಕುಂಞಂಬುರ ಪತ್ನಿ ಶೋಭ (48) ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪತಿಯ ಸಹೋದರ ಅರ್ಜುನ್ ಚಲಾಯಿಸುತ್ತಿದ್ದ ಸ್ಕೂಟರ್‌ನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಧ್ಯೆ ಸೋಮವಾರ ಇರಿಯ ಲಾಲೂರಿನಲ್ಲಿ ಅಪಘಾತ ಸಂಭವಿಸಿತ್ತು. ಮಕ್ಕಕ್ಕೋಡನ್ ಕಣ್ಣನ್- ಮೂಳನೇ ವೀಟಿಲ್ ನಾರಾಯಣಿ ದಂಪತಿ ಪುತ್ರಿಯಾಗಿದ್ದಾರೆ ಶೋಭಾ. ಮೃತರು ಮಕ್ಕಳಾದ ಶರತ್, ಶರಣ್ಯ, ಅಳಿಯ ಅನೂಪ್, ಸಹೋದರ ಬಾಬು, ಸಹೋದರಿಯರಾದ ಶ್ಯಾಮಲ, ಉಷಾ ಹಾಗೂ …

ಬೈಕ್- ಬಸ್ ಢಿಕ್ಕಿ ಹೊಡೆದು ಸಾರಣೆ ಕಾರ್ಮಿಕ ಮೃತ್ಯು

ಹೊಸದುರ್ಗ: ಅಂಬಲತ್ತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಇರಿಯದಲ್ಲಿ ಬಸ್- ಬೈಕ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟರು. ಮೂರನೇಮೈಲು ಪುದಂಗಾನಂ ವಟ್ಟಕ್ಕಯ ನಿವಾಸಿ ನಾರಾಯಣನ್‌ರ ಪುತ್ರ ರಾಘವನ್ (49) ಮೃತಪಟ್ಟವರು. ನಿನ್ನೆ ರಾತ್ರಿ 8.30ರ ವೇಳೆ ಕಾಞಂಗಾಡ್- ಪಾಣತ್ತೂರು ರಾಜ್ಯ ಹೆದ್ದಾರಿಯ  ಇರಿಯ ಬಂಗ್ಲಾವ್ ಸಮೀಪದಲ್ಲಿ ಅಪಘಾತ ಸಂಭವಿಸಿದೆ. ರಾಘವನ್ ಸಂಚರಿಸಿದ್ದ ಬೈಕ್ ಹಾಗೂ ಖಾಸಗಿ ಬಸ್ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.  ಸಾರಣೆ ಕಾರ್ಮಿಕನಾಗಿದ್ದಾರೆ. ಕೆಲಸ …

ವಸತಿಗೃಹದಲ್ಲಿ ಯುವತಿ, ಗೆಳೆಯನನ್ನು ನಗ್ನರನ್ನಾಗಿ ಮಾಡಿ ಫೊಟೋ ತೆಗೆದು ಬೆದರಿಕೆ: ಸೂತ್ರಧಾರ ಕುಂಜತ್ತೂರು ನಿವಾಸಿ ಸೆರೆ

ಹೊಸಂಗಡಿ: ಯುವತಿ ಹಾಗೂ  ಗೆಳೆಯನನ್ನು ವಸತಿಗೃಹದಲ್ಲಿ ನಗ್ನರನ್ನಾಗಿ ಮಾಡಿದ ಬಳಿಕ ಫೊಟೋ ತೆಗೆದು 2 ಲಕ್ಷ ರೂ. ಅಪಹರಿಸಲು ಯತ್ನಿಸಿದ ಪ್ರಕರಣದ ಸೂತ್ರಧಾರ ಸೆರೆಯಾಗಿದ್ದಾನೆ. ಕುಂಜತ್ತೂರಿನ ಪಿ.ಎಂ. ಅಬೂಬಕ್ಕರ್ (40)ನನ್ನು ಮಂಗಳೂರಿನಿಂದ ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಪ್ರಕರಣದ 5ನೇ ಆರೋಪಿಯಾಗಿದ್ದಾನೆ ಈತನೆಂದು ಪೊಲೀಸರು ತಿಳಿಸಿದ್ದಾರೆ. 2026 ಜನವರಿ 14ರಂದು ಮಧ್ಯಾಹ್ನ 12 ಗಂಟೆಗೆ ಹೊಸಂಗಡಿ ಪೇಟೆಯ ವಸತಿಗೃಹವೊಂದರಲ್ಲಿ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಯುವತಿ ಹಾಗೂ ಗೆಳೆಯ ವಸತಿಗೃಹದ 206ನೇ ನಂಬ್ರ ಕೊಠಡಿಯಲ್ಲಿದ್ದರು. ಈ ಸಮಯದಲ್ಲಿ …

ಅಡುಗೆ ಕೋಣೆಯೊಳಗೆ ಅವಿತುಕೊಂಡಿದ್ದ ಕಾಳಿಂಗ ಸರ್ಪ: ಬೆಚ್ಚಿ ಬಿದ್ದ ಮನೆಯವರು

ಬಂದಡ್ಕ: ಮನೆಯ ಅಡುಗೆ ಕೊಠಡಿ ಯೊಳಗೆ ನುಗ್ಗಿ ಒಲೆ ಬಳಿ  ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಮುದುಡಿಕೊಂಡ  ಸ್ಥಿತಿಯಲ್ಲಿ ಪ್ರತ್ಯಕ್ಷಗೊಂಡಿದ್ದು ಮನೆಯವರು ಅದನ್ನು ನೋಡಿ ಬೆಚ್ಚಿಬಿದ್ದ ಘಟನೆ ನಡೆದಿದೆ. ಬಂದಡ್ಕ ಸಮೀಪದ ಮಾಣಿಮೂಲೆ ಪಿ.ಕೆ. ಬಾಲಕೃಷ್ಣನ್ ಎಂಬವರ ಮನೆಯ ಅಡುಗೆ ಕೊಠಡಿಯ ಒಲೆ ಬಳಿ ಇರಿಸಲಾಗಿದ್ದ ಪಾತ್ರೆಗಳ ಎಡೆಯಲ್ಲಿ   ಕಾಳಿಂಗ ಸರ್ಪ ಅವಿತುಕೊಂಡಿತ್ತು.   ಅಡುಗೆ ಕೊಠಡಿಯ ಬಾಗಿಲು ತೆರೆದಿಟ್ಟ  ಸಂದರ್ಭದಲ್ಲಿ  ಕಾಳಿಂಗ ಸರ್ಪ   ಕೊಠಡಿಯೊಳಗೆ ಪ್ರವೇಶಿಸಿದ್ದಿರ ಬಹುದೆಂದು ಅಂದಾಜಿಸಲಾಗಿದೆ. ಮನೆಯವರು ಅಡುಗೆ ತಯಾರಿಸಲು ಒಲೆ ಬಳಿ ಬಂದಾಗ …

ಕಾಸರಗೋಡು ನಿವಾಸಿ ನೇತೃತ್ವದಲ್ಲಿ ಭಾರೀ ಅವಯವ ದಾನ ವಂಚನೆ: ಇಬ್ಬರ ಬಂಧನ

ಕಾಸರಗೋಡು: ಅವಯವ ದಾನಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ನಡೆಸುವ ತಂಡದ ಇಬ್ಬರನ್ನು ಬಂಧಿಸಲಾಗಿದೆ. ವಂಚನೆ ತಂಡಕ್ಕೆ ನೇತೃತ್ವ ನೀಡುವ ಕಾಸರಗೋಡು ನಿವಾಸಿ ಹಾಗೂ  ಆತನ ಪತ್ನಿಗಾಗಿ ಹುಡುಕಾಟ ನಡೆಯುತ್ತಿದೆ. ಕೊಚ್ಚಿ ಕುನ್ನತ್ತುನಾಡು ನಿವಾ ಸಿಯೂ ಸನ್ ಕಮ್ಯುನಿಕೇಶನ್ಸ್ ಮಾಲಕ ಸಣ್ಣಿ ವರ್ಗೀಸ್, ಪತ್ನಿ ಸಿನಿ ವರ್ಗೀಸ್ ಎಂಬಿವರನ್ನು ಕುನ್ನತ್ತುನಾಡು ಪೊಲೀಸರು ಬಂಧಿಸಿದ್ದಾರೆ. ಇವರ ಸಂಸ್ಥೆಗೆ ಪೊಲೀಸರು ದಾಳಿ ನಡೆಸಿದ್ದಾರೆ.  ಸಂಸದರು,ಶಾಸಕರು ಮೊದ ಲಾದವರ ಹಲವು ನಕಲಿ ಶಿಫಾರಸ್ಸು ಪತ್ರಗಳನ್ನು ಅಲ್ಲಿಂದ ಪತ್ತೆಹಚ್ಚಲಾಗಿದೆ. ಕಾಸರಗೋಡು ಜಿಲ್ಲೆಯ ಮೇಲ್ಪರಂಬ …

ಅಪರಿಮಿತ ಶಬ್ದದೊಂದಿಗೆ ಸಂಚರಿಸಿದ ಕಾರು ವಶ: ಇಬ್ಬರ ವಿರುದ್ಧ ಕೇಸು

ಉಪ್ಪಳ: ಕಾರಿಗೆ ಹೆಚ್ಚುವರಿ ಸೈಲೆನ್ಸರ್ ಅಳವಡಿಸಿ ಅಪರಿಮಿತ ಶಬ್ದ ಸಹಿತ  ಬೆಂಕಿ, ಹೊಗೆ ಸೃಷ್ಟಿಸುತ್ತಾ  ಸಂಚರಿಸಿ ಬಳಿಕ ಆ ದೃಶ್ಯವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಚಾರ ಮಾಡಿದ   ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡು ಕಾರನ್ನು ವಶಕ್ಕೆ ತೆಗೆದಿದ್ದಾರೆ. ಕಂಚಿಲ ಚಾರ್ಲ ನಿವಾಸಿ ಅಹಮ್ಮದ್ ಜಿಲಾಲ್ (19), ಬಂಬ್ರಾಣ ನಂಬೇಡಿ ಹೌಸ್‌ನ ಹಸೈನಾರ್ (22) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈತಿಂಗಳ ೫ರಂದು  ಉಪ್ಪಳ ಪೆಟ್ರೋಲ್ ಬಂಕ್ ಹಾಗೂ ಪರಿಸರದ ರಸ್ತೆಯಲ್ಲಿ ಅಪರಿಮಿತ ಶಬ್ದದೊಂದಿಗೆ ನಂಬ್ರಪ್ಲೇಟ್ ಇಲ್ಲದ  …