ವಿದ್ಯುತ್ ಸಮಸ್ಯೆಗೆ ಪರಿಹಾರವಿಲ್ಲ : ರಾಜ್ಯ ಈ ತಿಂಗಳು ಪೂರ್ಣವಾಗಿ ಕತ್ತಲಲ್ಲಿ

ತಿರುವನಂತಪುರ: ರಾಜ್ಯ ಎದು ರಿಸುತ್ತಿರುವ ತೀವ್ರ ವಿದ್ಯುತ್ ಸಮಸ್ಯೆಗೆ ಸದ್ಯ ಪರಿಹಾರ ಉಂಟಾಗದು. ಇದರಿಂ ದಾಗಿ ರಾಜ್ಯದಲ್ಲಿ ಕಠಿಣ ವಿದ್ಯುತ್ ನಿಯಂತ್ರಣ ಏರ್ಪಡಿಸಲಾಗಿದೆ. ಸದ್ಯ ಹೊರಗಿನಿಂದ ಅಗತ್ಯದಷ್ಟು ವಿದ್ಯುತ್ ಖರೀದಿಸಲು ಯಾವುದೇ ಸಾಧ್ಯತೆಗಳು ಇಲ್ಲವಾಗಿದ್ದು, ಇದರಿಂದಾಗಿ ಈ ತಿಂಗಳು ಪೂರ್ಣವಾಗಿ ರಾಜ್ಯ ಕತ್ತಲಲ್ಲೇ ಕಳೆಯಬೇಕಾಗಿ ಬರಲಿದೆ. ಇಂತಹ ನಿಯಂತ್ರಣ ಈ ತಿಂಗಳ 30ರ ತನಕ ಮುಂದುವರಿಯಲಿದೆ ಎಂದು ಸ್ವತಃ ವಿದ್ಯುತ್ ಖಾತೆ ಸಚಿವ ಸನ್ನಿ ಜೋಸೆಫ್ ಹೇಳಿದ್ದಾರೆ. ಈ ಕುರಿತಾದ ಅಧಿಕೃತ ಘೋಷಣೆಯನ್ನು ರಾಜ್ಯ ವಿದ್ಯುನ್ಮಂಡಳಿ ಇಂದು …

ಓಡಂಗಲ್ಲು ಸೇತುವೆ ನಿರ್ಮಾಣ ನಾಲ್ಕು ವರ್ಷಗಳಲ್ಲಿ ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ- ಶಾಸಕ ಕಲ್ಲಟ್ರ ಮಾಹಿನ್

ಬದಿಯಡ್ಕ: ಗ್ರಾಮೀಣ ಪ್ರದೇಶದ ಜನರ ಬಹುಕಾಲದ ಕನಸಾದ ಓಡಂಗಲ್ಲು ಸೇತುವೆ ನಿರ್ಮಾಣಕ್ಕೆ ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಭರವಸೆ ನೀಡಿದರು. ಅವರು ಅಜ್ಜಿಮೂಲೆಯ ಜೈ ಗುರುದೇವ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ ೩೬ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ಜನತೆಯ ಮತೀಯ ಸಾಮರಸ್ಯ , ಒಗ್ಗಟ್ಟು ಹಾಗೂ ಜನಪರ ಹೋರಾಟ ನಾಡಿನ ಅಭಿವೃದ್ಧಿಗೆ ನಾಂದಿಯಾಗಿದ್ದು ಶ್ರೀಕೃಷ್ಣ ಅಷ್ಟಮಿ ಆಚರಣೆಯ ಮೂಲಕ …

ನಿಷೇಧಿತ ಪ್ಲಾಸ್ಟಿಕ್ ಪ್ಲೇಟ್, ಗ್ಲಾಸ್ ವಶಪಡಿಸಿ  ದಂಡ ಹೇರಿದ ಎನ್‌ಫೋರ್ಸ್‌ಮೆಂಟ್ ತಂಡ

ಕಾಸರಗೋಡು: ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್  ಚೆಂಗಳ ಪಂಚಾಯತ್ ವ್ಯಾಪ್ತಿಯಲ್ಲಿ  ನಡೆಸಿದ ತಪಾಸಣೆಯಲ್ಲಿ ಕ್ವಿಂಟಾಲ್ ಲೆಕ್ಕದಲ್ಲಿ ನಿಷೇಧಿತ ಪ್ಲಾಸ್ಟಿಕ್ ಪ್ಲೇಟ್, ಗ್ಲಾಸ್‌ಗಳನ್ನು ವಶಪಡಿಸಿದೆ. ಚೆರ್ಕಳ ರಖಂ ವ್ಯಾಪಾರ ಸಂಸ್ಥೆಯ ಗೋದಾಮಿನಿಂದ ಇವುಗಳನ್ನು ವಶಪಡಿಸಲಾಗಿದ್ದು, ಮಾಲಕನಿಗೆ 25,೦೦೦ ರೂ. ದಂಡ ಹೇರಲಾಗಿದೆ.  ನಿಷೇಧಿತ ಉತ್ಪನ್ನಗಳ ಉಪ ಯೋಗ, ಸಂಗ್ರಹ, ಮಾರಾಟ ತಡೆಯುವುದರ ಅಂಗವಾಗಿ ತಪಾಸಣೆಗಳನ್ನು ಇನ್ನಷ್ಟು ಬಿಗು ಗೊಳಿಸಲಾಗುವುದೆಂದು ಅಧಿ ಕಾರಿಗಳು ತಿಳಿಸಿದ್ದಾರೆ. ಅನ್ಯರಾಜ್ಯ ಕಾರ್ಮಿಕರು ವಾಸಿಸುವ ಚಟ್ಟಂ ಚಾಲ್‌ನ ಕ್ವಾರ್ಟರ್ಸ್‌ನಿಂದಿರುವ ಮಲಿನ ಜಲ ಹರಿಯಬಿಟ್ಟ ಹಿನ್ನೆಲೆಯಲ್ಲಿ ಹಾಗೂ ಅಜೈವಿಕ …

ಕಣಿಪುರ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಗ್ರಹ ರಚನೆ ಪೂರ್ಣ: ಸಮಿತಿಗೆ ಹಸ್ತಾಂತರ

ಕುಂಬಳೆ: ಸೆಪ್ಟೆಂಬರ್ 14ರಿಂದ ಪ್ರಾರಂಭಗೊAಡು 3 ದಿನಗಳ ಕಾಲ ನಡೆಯಲಿರುವ ೪೭ನೇ ವರ್ಷದ ಕುಂಬಳೆ ಕಣಿಪುರ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಗ್ರಹದ ರಚನೆ ಜುಲೈ 21ರಂದು ಶಿಲ್ಪಿಗಳಾದ ನವೀನ್ ಆಚಾರ್ಯ ಮಂಗಳೂರು ಮತ್ತು ಸುಬ್ರಾಯ ಪ್ರಭು ಮಂಗಳೂರು ಇವರು ಆರಂಬಿsಸಿದ್ದು, ನಿರ್ಮಾಣ ಪೂರ್ತಿಗೊಳಿಸಿ ಕೆ. ನಾರಾಯಣ ಪ್ರಭುಗಳ ನಿವಾಸದಲ್ಲಿ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಸಮಿತಿಯವರಿಗೆ ಬಿಟ್ಟುಕೊಟ್ಟರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶೆಣೈ, ಸದಸ್ಯರಾದ ಕೆ. ನಾರಾಯಣ ಪ್ರಭು, ದಯಾನಂದ ರಾವ್, ಉಪಾಧ್ಯಕ್ಷ ಕೆ.ಸುಧಾಕರ್ ಕಾಮತ್ …

ರೈಲ್ವೇ ಅಭಿವೃದ್ಧಿ: ಕುಂಬಳೆ ರೈಲು ನಿಲ್ದಾಣ ಮತ್ತೆ ಮುನ್ನಲೆಗೆ

ಕಾಸರಗೋಡು: ಪಾಲಕ್ಕಾಡ್ ಡಿವಿಶನ್‌ನಿಂದ ಮಂಗಳೂರು ವಲಯವನ್ನು ಬೇರ್ಪಡಿಸಲಿರುವ ತೀರ್ಮಾನ, ತಿರುವನಂತಪುರ ಡಿವಿಶನ್ ವಿಭಜಿಸಲಿರುವ ಯತ್ನ ಸಕ್ರಿಯವಾಗಿರುವ ಸನ್ನಿವೇಷದಲ್ಲಿ ಕೇರಳದ ರೈಲ್ವೇ ಅಭಿವೃದ್ಧಿಗೆ ಪ್ರತ್ಯೇಕ ವಲಯ ಬೇಕೆಂಬ ಬೇಡಿಕೆಯು ತೀವ್ರಗೊಳ್ಳುತ್ತಿದೆ. ದಕ್ಷಿಣ ಭಾರತದಲ್ಲಿ ಪ್ರಯಾಣಿಕರ ಸಂಖ್ಯೆ, ಆದಾಯ ಪರಿಗಣಿಸುವಾಗ ಕೇರಳ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಿದೆ. ಇದಕ್ಕನುಸಾರ ವಾಗಿರುವ ನವೀಕರಣ ಚಟುವಟಿಕೆಗಳು ಕೇರಳದಲ್ಲಿ ಉಂಟಾಗುತ್ತಿಲ್ಲವೆಂಬ ಆಕ್ಷೇಪವಿದೆ. ಚೆನ್ನೈ ಕೇಂದ್ರವಾದ ದಕ್ಷಿಣ ರೈಲ್ವೇ ವಲಯದ ಅಧೀನದಲ್ಲಿ ಕೇರಳದ ಹೆಚ್ಚಿನ ಭಾಗ ರೈಲ್ವೇ ಶೃಂಖಲೆ ಸೇರಿದೆ. ಗಾತ್ರದ ವಿಷಯದಲ್ಲಿ ದೇಶದ ೧೯ ರೈಲ್ವೇ …

ಜನರಲ್ ಆಸ್ಪತ್ರೆ ಹೆಸರು ಮಾತ್ರವಾಗಿ ಬದಲಾಗಿದೆ- ಎಂ.ಎಲ್. ಅಶ್ವಿನಿ

ಕಾಸರಗೋಡು: ಆಧುನಿಕ ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಕಾಸರಗೋಡು ಜನರಲ್ ಆಸ್ಪತ್ರೆ ಕೇವಲ ನಾಮಕಾವಸ್ಥೆ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ಆಸ್ಪತ್ರೆಗೆ ‘ಮೆಡಿಕಲ್ ಕಾಲೇಜು ಆಸ್ಪತ್ರೆ’ ಎಂಬ ಬೋರ್ಡ್ ಅಳವಡಿಸಿದ್ದನ್ನು ಬಿಟ್ಟರೆ ಬೇರೆ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.ಜನರಲ್ ಆಸ್ಪತ್ರೆಯ ಶೋಚನೀಯ ಸ್ಥಿತಿಯನ್ನು ಸರಿಪಡಿಸುವುದು, ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸುವುದು, ಹೊಸ ಸ್ಪೆಷಾಲಿಟಿ ವಿಭಾಗಗಳನ್ನು ಪ್ರಾರಂಭಿಸುವುದು, ಸ್ಪೆಷಾಲಿಟಿ ವೈದ್ಯರು ಹಾಗೂ ಪಾರಾಮೆಡಿಕಲ್ ಸಿಬ್ಬಂದಿಯನ್ನು ನೇಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊAಡು ಬಿಜೆಪಿ …

ಮುಲ್ಲಚ್ಚೇರಿ ಮಾಧವನ್ ನಾಯರ್ ನಿಧನ

ಬೋವಿಕ್ಕಾನ: ಇರಿಯಣ್ಣಿ ತೀಯಡ್ಕಂ ಪುರತ್ತರಕ್ಕಲ್ ವೀಟಿಲ್ ನಿವಾಸಿ ಮುಲ್ಲಚ್ಚೇರಿ ಮಾಧವನ್ ನಾಯರ್ (78) ನಿಧನ ಹೊಂದಿದರು. ವಿದ್ಯಾನಗರ ಕೆಸಿಎಂಸಿ ಸೊಸೈಟಿಯ ನೌಕರನಾಗಿ ನಿವೃತ್ತರಾಗಿದ್ದರು. ಮೃತರು ಪತ್ನಿ ಕುಸುಮಂ, ಮಕ್ಕಳಾದ ಉಣ್ಣಿಕೃಷ್ಣನ್, ಬಿಜು (ವ್ಯಾಪಾರಿ ಬೋವಿಕ್ಕಾನ), ಶರತ್‌ಬಾಬು (ಬೆಳ್ಳೂರು ಶಾಲೆ ಅಧ್ಯಾಪಕ), ಸೊಸೆಯಂದಿರಾದ ಶ್ರುತಿ, ರೇಷ್ಮ, ದೀಪ್ತಿ, ಸಹೋದರ ಎಂ. ನಾರಾಯಣನ್ ನಾಯರ್, ಸಹೋದರಿ ಎಂ. ಕಾರ್ತ್ಯಾಯಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹಿರಿಯ ಕೃಷಿಕ ನಿಧನ

ಪೈವಳಿಕೆ: ವಾದ್ಯಪಡ್ಪು ನಿವಾಸಿ ಮಾಂಕು ಮೂಲ್ಯರ ಪುತ್ರ, ಹಿರಿಯ ಕೃಷಿಕ, ಸಿಪಿಎಂ ಕಾರ್ಯಕರ್ತ ಸಂಕಪ್ಪ ಮೂಲ್ಯ (72) ನಿಧನ ಹೊಂದಿದರು. ಮೃತರು ಪತ್ನಿ ರಾಧ, ಮಕ್ಕಳಾದ ಪ್ರಸಾದ್, ಅನೂಪ್, ಇಂದು, ವಿಜಯ, ಪ್ರಮೀಳ, ಅಳಿಯ-ಸೊಸೆಯಂದಿರು, ಸಹೋದರ ಕೊರಗು ಮೂಲ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಿಪಿಎಂ ಮುಖಂಡರಾದ ಕೆ.ಆರ್. ಜಯಾನಂದ, ಅಬ್ದುಲ್ ರಜಾಕ್ ಚಿಪ್ಪಾರು, ಚಂದ್ರ ನಾಯ್ಕ್ ಮಾನಿಪ್ಪಾಡಿ, ಕರುಣಾಕರ ಶೆಟ್ಟಿ, ಪ್ರಶಾಂತ್ ಕನಿಲ, ಸದಾನಂದ ಕೋರಿಕ್ಕಾರ್, ಅಬ್ದುಲ್ಲ ಕೆ, ಹಾರಿಸ್ ಪೈವಳಿಕೆ, ಹುಸೈನ್ …

ಹೊಯ್ಗೆ ಸಂಗ್ರಹ ವೇಳೆ  ಪೊಲೀಸರನ್ನು ಕಂಡು ಹೊಳೆಗೆ ಹಾರಿದ ಯುವಕನಿಗಾಗಿ ಮುಂದುವರಿದ ಶೋಧ

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ಪೊಲೀಸರನ್ನು ಕಂಡು ಹೊಳೆಗೆ ಹಾರಿದ ಯುವಕನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದೆ. ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹಿಂ (೨೬) ನಾಪತ್ತೆಯಾಗಿ  ಇಂದಿಗೆ ಮೂರು ದಿನಗಳಾದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸೋಮವಾರ ರಾತ್ರಿ ೮ ಗಂಟೆ ವೇಳೆ ಶಿರಿಯ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಕರಾವಳಿ ಪೊಲೀಸರು ಅಲ್ಲಿಗೆ ತೆರಳಿದ್ದರು. ಈ ವೇಳೆ ಇಬ್ರಾಹಿಂ ಹೊಳೆಗೆ ಹಾರಿದ್ದು, ಮತ್ತಿಬ್ಬರು ದೋಣಿಯನ್ನು ಉಪೇಕ್ಷಿಸಿ ಪರಾರಿಯಾಗಿದ್ದಾರೆ. ಇಬ್ರಾಹಿಂ …

ಯುವತಿ, ಪುತ್ರಿ ನಾಪತ್ತೆ

ಕಾಸರಗೋಡು: ಸಹೋ ದರಿಯ ಮನೆಗೆ ಹೋಗಿದ್ದ ಯುವತಿ ಹಾಗೂ ಪುತ್ರಿ ನಾಪತ್ತೆ ಯಾಗಿರುವುದಾಗಿ ದೂರಲಾಗಿದೆ. ಉದುಮ ಪಡಿಂಞ್ಞಾರ್‌ನ ಆಯಿಷತ್ ಮುಸ್ತಾನ ಎಂಬವರು ನೀಡಿದ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಫಾತಿ ಮತ್ ಬುಶ್ರಾ (26), ಈಕೆಯ ಆರರ ಹರೆಯದ ಪುತ್ರಿ ನಾಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ನಿನ್ನೆ ಮುಂಜಾನೆ 1 ಗಂಟೆಯಿಂದ ಬೆಳಿಗ್ಗೆ 6 ಗಂಟೆ ಮಧ್ಯೆ ಇವರು ನಾಪತ್ತೆಯಾಗಿ ರುವುದಾಗಿ   ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.