ಮುಹಮ್ಮದ್ ಎಂ.ಎಸ್ ನಿಧನ

ಮಂಜೇಶ್ವರ: ವರ್ಕಾಡಿ ಸುಂಕದ ಕಟ್ಟೆ ನಿವಾಸಿ ಮುಹಮ್ಮದ್ ಎಂ.ಎಸ್ (85) ನಿಧನ ಹೊಂದಿದರು. ಮೃತರು ಪತ್ನಿ, ಐಸಮ್ಮ, ಮಕ್ಕಳಾದ ಸಿದ್ದಿಕ್ (ಮಂಜೇಶ್ವರ ತಾಲೂಕು ಕಚೇರಿ ಉದ್ಯೋಗಿ), ಇಬ್ರಾಹಿಂ, ಅಬ್ದುಲ್ ಖಾದರ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಹೃದಯಾಘಾತ: ನಿಧನ

ಬದಿಯಡ್ಕ: ಉಂಡೆಮನೆ ದಿ| ಸತ್ಯಶಂಕರ ಭಟ್‌ರ ಪತ್ನಿ ಯು. ರತ್ನಾವತಿ (59) ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು ಬಿಜೆಪಿ ಅಭ್ಯರ್ಥಿಯಾಗಿ ಪಂಚಾಯತ್‌ಗೆ ಸ್ಪರ್ಧಿಸಿದ್ದರು. ಮೃತರು ಮಕ್ಕಳಾದ ಲಕ್ಷ್ಮೀ, ಶಂಕರ ತೇಜಸ್ವಿ, ನವನೀತಕೃಷ್ಣ, ಅಳಿಯ ಶ್ರೀನಿಧಿ ರಾವ್, ಸೊಸೆಯಂದಿರಾದ ರಕ್ಷಿತ, ಸೀಮಾ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

ನೆಲ್ಕಳದ ಲಲಿತ ನಿಧನ

ಕಾಸರಗೋಡು: ವಿದ್ಯಾನಗರ ಬಳಿಯ ಉದಯಗಿರಿ ನೆಲ್ಕಳ ನಿವಾಸಿ ದಿ| ರಾಮನ್ ಕೆ.ಎನ್. ಎಂಬವರ ಪತ್ನಿ ಲಲಿತ (9೦) ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ವಿಜಯನ್ ಕೆ.ಎನ್, ಬೇಬಿ ಕೆ.ಎನ್, ವೇಣು ಕೆ.ಎನ್, ರಾಜೇಂ ದ್ರನ್ ಕೆ.ಎನ್, ಅಳಿಯ ಸೊಸೆಯಂದಿ ರಾದ ಕುಂಞಿಕಣ್ಣನ್, ಪ್ರಮೀಳ, ಬೇಬಿ, ರೇವತಿ, ರೇಶ್ಮಾ, ಶ್ರೀವಿದ್ಯಾ, ಸಹೋದ ರರಾದ ಜಯಕರನ್, ರವಿ, ಸಹೋದರಿ ಪ್ರೇಮ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.  ಇನ್ನಿಬ್ಬರು ಮಕ್ಕಳಾದ ಮಹೇಶ್, ಜಯಪ್ರಕಾಶ್, ಅಳಿಯ ಬಾಬು, ಸಹೋದರರಾದ …

ಮಲಿನ ಜಲ ತೋಡಿಗೆ ಹರಿಯಬಿಟ್ಟ ಟ್ಯಾಂಕರ್ ಲಾರಿ ಚಾಲಕ ಸೆರೆ

ಕಾಸರಗೋಡು: ತೆಕ್ಕಿಲ್ ರಾಷ್ಟ್ರೀಯ ಹೆದ್ದಾರಿ ಬದಿಯ ತೋಡಿಗೆ ಮಲಿನ ಜಲವನ್ನು ಹರಿಸಲು ತಲುಪಿದ ಟ್ಯಾಂಕರ್ ಲಾರಿ ಚಾಲಕನನ್ನು ಮೇಲ್ಪರಂಬ ಪೊಲೀಸರು ಸೆರೆ ಹಿಡಿದರು. ಮಲಿನ ಜಲ ಸಹಿತ ತಲುಪಿದ ಲಾರಿಯನ್ನು ಕಸ್ಟಡಿಗೆ ತೆಗೆದಿದ್ದಾರೆ. ಉಪ್ಪಳ ಮುಳಿಂಜ ನಿವಾಸಿ  ಅಬ್ದುಲ್ ರಹ್ಮಾನ್ (34)ನನ್ನು ಸೆರೆ ಹಿಡಿಯಲಾಗಿದೆ. ಆದಿತ್ಯ ವಾರ ರಾತ್ರಿ 11 ಗಂಟೆಗೆ ಲಾರಿ ಯಿಂದ ಮಲಿನ ಜಲವನ್ನು ಉಪೇಕ್ಷಿಸುವುದನ್ನು ಕಂಡ ಸ್ಥಳೀ ಯರಲ್ಲಿ ಓರ್ವ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಇನ್ಸ್‌ಪೆಕ್ಟರ್ ಎನ್.ಪಿ. ರಾಘವನ್‌ರ ನೇತೃತ್ವದಲ್ಲಿ ಮೇಲ್ಪ …

ಬಟ್ಯಪದವಿನಲ್ಲಿ ವ್ಯಾಪಾರಿಯನ್ನು ಗುಂಡು ಹಾರಿಸಿ ಕೊಲೆಗೈಯ್ಯಲೆತ್ನ: ಆರೋಪಿಗಳಿಗಾಗಿ ವ್ಯಾಪಕ ಶೋಧ

ಮಂಜೇಶ್ವರ:  ಮೀಂಜ ಬಟ್ಯಪದವಿ ನಲ್ಲಿ  ಗುಂಡು ಹಾರಿಸಿ  ವ್ಯಾಪಾರಿಯನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ  ಆರೋ ಪಿಗಳಿಗಾಗಿ  ಪೊಲೀಸರು ತನಿಖೆ ತೀವ್ರಗೊ ಳಿಸಿದ್ದಾರೆ. ಖಾದರ್ ಮದನಕ್ಕಲ್, ಮೀಯಪದವು ರಹೀಂ, ಅಬೂಬಕ್ಕರ್ ಸಿದ್ದಿಕ್ ಹಾಗೂ ಕಂಡರೆ ಪತ್ತೆಹಚ್ಚಬಹು ದಾದ ಇನ್ನೋರ್ವನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.  ಆರೋಪಿಗಳು ಕರ್ನಾಟಕಕ್ಕೆ ಪರಾರಿ ಯಾದ ಬಗ್ಗೆ ಮಾಹಿತಿ ಲಭಿಸಿ ದ್ದು, ಈ ಹಿನ್ನೆಲೆಯಲ್ಲಿ ತನಿಖೆಯನ್ನು ಅತ್ತ ವಿಸ್ತರಿಸಲಾಗಿದೆಯೆಂದು  ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ  ಬಟ್ಯಪದವಿನಲ್ಲಿ ಗುಂಡು ಹಾರಾಟ  …

ಸ್ಮೋಕ್ ಹೌಸ್‌ನಲ್ಲಿರಿಸಿದ್ದ ರಬ್ಬರ್ ಶೀಟ್ ಕಳವು: 2 ತಿಂಗಳೊಳಗೆ ಎರಡನೇ ಬಾರಿ ಕಳ್ಳರ ದಾಳಿ

ಮುಳ್ಳೇರಿಯ: ಸ್ಮೋಕ್ ಹೌಸ್‌ದಲ್ಲಿರಿಸಿದ್ದ ರಬ್ಬರ್ ಶೀಟ್ ಗಳನ್ನು ಕಳವು ನಡೆಸಲಾಗಿದೆ. ಕಿನ್ನಿಂ ಗಾರು ಬಳಿಯ ಕೊಚ್ಚಿ ಎಂಬಲ್ಲಿನ ಮೋಹನಕೃಷ್ಣ ಭಟ್ ಎಂಬವರ ರಬ್ಬರ್ ಶೀಟ್ ಕಳವಿಗೀಡಾಗಿದೆ.   ಮನೆಯ ಅಲ್ಪ ದೂರದಲ್ಲೇ ಸ್ಮೋಕ್ ಹೌಸ್ ಇದ್ದು ಇಂದು ಬೆಳಿಗ್ಗೆ ಮೋಹನಕೃಷ್ಣ   ಭಟ್ ಅಲ್ಲಿಗೆ ಹೋದಾಗಲೇ ರಬ್ಬರ್ ಶೀಟ್ ಕಳವು ನಡೆದ ಬಗ್ಗೆ ಅರಿವಿಗೆ ಬಂದಿದೆ. ಸ್ಮೋಕ್ ಹೌಸ್‌ನ ಬಾಗಿಲಿನ ಬೀಗ ಮುರಿದ ಸ್ಥಿತಿಯಲ್ಲಿದೆ. ಅಲ್ಲದೆ ದಾರಿಯಲ್ಲಿ  10ರಷ್ಟು ಶೀಟ್‌ಗಳು ಬಿದ್ದುಕೊಂಡಿರುವುದು ಕಂಡುಬಂದಿದೆ. ಕಳ್ಳರು ರಬ್ಬರ್ ಶೀಟ್ ಕದ್ದೊಯ್ಯುತ್ತಿದ್ದ ವೇಳೆ …

ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಕಿರುಕುಳ ಯತ್ನ: ಆರೋಪಿ ಪತ್ತೆಗೆ  ಶೋಧ ಆರಂಭಿಸಿದ ಬದಿಯಡ್ಕ ಪೊಲೀಸ್

ಬದಿಯಡ್ಕ: ಶಾಲೆಗೆ ತೆರಳುತ್ತಿದ್ದ 13ರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಬಗ್ಗೆ ದೂರಲಾಗಿದೆ.  ಕಳೆದ ದಿನ ಬೆಳಿಗ್ಗೆ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಲಕಿ  ಒಬ್ಬಳೇ ನಡೆದು ಶಾಲೆಗೆ ತೆರಳುತ್ತಿದ್ದ ವೇಳೆ   ದಾರಿಮಧ್ಯೆ ವ್ಯಕ್ತಿಯೋರ್ವ   ಬಾಲಕಿಯ ದೇಹವನ್ನು ಸ್ಪರ್ಶಿಸಿದ್ದಾನೆನ್ನಲಾಗಿದೆ. ಈ ವೇಳೆ ಬಾಲಕಿ  ಬೊಬ್ಬೆ ಹಾಕಿದ್ದು ಅಷ್ಟರಲ್ಲಿ ವ್ಯಕ್ತಿ ಓಡಿ ಪರಾರಿಯಾಗಿದ್ದಾನೆ. ಬಾಲಕಿ ಶಾಲೆಗೆ ತಲುಪಿ ಸಹಪಾಠಿಗಳಲ್ಲಿ  ವಿಷಯ ತಿಳಿಸಿದ್ದು, ಅನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಇದರಂತೆ ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡ ಬದಿಯಡ್ಕ …

ಟ್ಯಾಬ್ ಖರೀದಿಸಿ ಹಣ ನೀಡದೆ ಅಪ್ರತ್ಯಕ್ಷಗೊಂಡ ಹತ್ತರಷ್ಟು ವಂಚನೆ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಟ್ಯಾಬ್ ಖರೀದಿಸಿದ ಬಳಿಕ ಅದರ ಹಣ ನೀಡದೆ ದಿಢೀರ್ ಆಗಿ ಅಪ್ರತ್ಯಕ್ಷಗೊಂಡ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ಇಡಪಳ್ಳಿ ನಿವಾಸಿ ಕಿಶೋರ್ ಶಂಕರ್ (41) ಬಂಧಿತ ಆರೋಪಿ. ನಂತರ ಆತನನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕಳೆದ ಜುಲೈ ೨೦ರಂದು ಆರೋಪಿ ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿಯ ಮೊಬೈಲ್ ಅಂಗಡಿಯೊಂದಕ್ಕೆ ಬಂದು ಅಲ್ಲಿಂದ  ಸ್ಯಾಮ್‌ಸಂಗ್ ಎಸ್-೯ ಮೋಡೆಲ್‌ನ ಟ್ಯಾಬ್ ಖರೀದಿಸಿದ್ದನು. ಡಿಸ್ಕೌಂಟ್ ಕಳೆದ ಬಾಕಿ 32,492 ರೂ.ವನ್ನು ಬ್ಯಾಂಕ್ ಆಪ್‌ನ …

ಪತ್ವಾಡಿಯ ಮನೆಯಿಂದ ಮೂರೂವರೆ ಕಿಲೋ ಎಂಡಿಎಂಎ, 642 ಗ್ರಾಂ ಗಾಂಜಾ ವಶ ಪ್ರಕರಣ: ಗಲ್ಫ್‌ಗೆ ಪರಾರಿಯಾಗಿದ್ದ ಆರೋಪಿ ಬಂಧನ

ಕುಂಬಳೆ:  ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಪತ್ವಾಡಿಯಲ್ಲಿರುವ ಮನೆಯಿಂದ  ಮೂರೂವರೆ ಕಿಲೋ ಎಂಡಿಎಂಎ ಹಾಗೂ 642 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ  ಇನ್ನೋರ್ವ ಆರೋಪಿ ಸೆರೆಗೀಡಾ ಗಿದ್ದಾನೆ. ಉಪ್ಪಳ ಮೊಗರು ನಿವಾಸಿ ಸುಹೈಲ್ ಎಂಬಾತನನ್ನು  ಹೊಸದಿ ಲ್ಲಿಯ ವಿಮಾನ ನಿಲ್ದಾಣದಿಂದ  ಸೆರೆಹಿಡಿಯಲಾಗಿದೆ.   ಮಾದಕವಸ್ತು ವಶ ಪ್ರಕರಣದಲ್ಲಿ ಆರೋಪಿಯಾದ  ಸುಹೈಲ್  ಗಲ್ಫ್‌ಗೆ  ಪರಾರಿಯಾಗಿದ್ದನು. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣ ಗಳಿಗೂ  ಪೊಲೀಸರು ಲುಕೌಟ್ ನೋಟೀಸು ಕಳುಹಿಸಿದ್ದರು. ಗಲ್ಫ್‌ನಲ್ಲಿ ಬೇರೊಂದು ಪ್ರಕರಣದಲ್ಲಿ ಸೆರೆಗೀ ಡಾದ  ಸುಹೈಲ್‌ನನ್ನು …

ಬೈಕ್‌ನಲ್ಲಿ ಎಂಡಿಎಂಎ ಸಾಗಿಸಿದ ಪ್ರಕರಣ ಆರೋಪಿಗೆ 10 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಬೈಕ್‌ನಲ್ಲಿ ಮಾದಕದ್ರವ್ಯವಾದ 51 ಗ್ರಾಂ ಎಂಡಿಎಂಎ ಸಾಗಿಸಿದ ಪ್ರಕರಣದ ಆರೋಪಿ ಕಾಸರಗೋಡು ಹೆಚ್ಚುವರಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮು ರಮೇಶ್‌ಚಂದ್ರ ಬಾನು ಅವರು ೧೦ ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮಂಜೇಶ್ವರ ಕುಬಣೂರು ಕಾನಾ ವೀಟಿಲ್‌ನ ಮೊಹಮ್ಮದ್ ಸಮೀರ್  (43) ಶಿಕ್ಷೆಗೊಳಗಾದ ಆರೋಪಿ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ  ೬ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೨೧ ಅಕ್ಟೋಬರ್ ೪ರಂದು …