ಏರುತ್ತಿದೆ ಕೋಳಿ ಮಾಂಸದ ಬೆಲೆ : ನಕಲಿ ಕ್ಷಾಮ ಸೃಷ್ಟಿಯೆಂದು ಆರೋಪ

ಕಾಸರಗೋಡು: ಸಾಮಾನ್ಯವಾಗಿ ಶಬರಿಮಲೆ ತೀರ್ಥಾಟನೆ ಸಮಯದಲ್ಲಿ ಬೆಲೆ ಕಡಿಮೆಯಾಗಲಿರುವ ಕೋಳಿ ಮಾಂಸಕ್ಕೆ ನಕಲಿ ಕ್ಷಾಮ ಸೃಷ್ಟಿಸುತ್ತಿರುವುದಾಗಿ ಗ್ರಾಹಕರು ಆರೋಪಿಸುತ್ತಾರೆ. ಈಗ ಕೋಳಿ ಮಾಂಸದ ಬೆಲೆ 150 ರೂ. ದಾಟಿದೆ.  ಕಳೆದ ವಾರ ಕೋಳಿ ಮಾಂಸಕ್ಕೆ 115ರಿಂದ 130 ರೂ. ವರೆಗಿದ್ದ ಬೆಲೆ ದಿಢೀರ್ ಆಗಿ 150ಕ್ಕೇರಿದೆ. ತಮಿಳುನಾಡಿನಿಂದ ಅಗತ್ಯಕ್ಕೆ ಕೋಳಿ ತಲುಪುತ್ತಿಲ್ಲವೆಂದು ರಖಂ ವ್ಯಾಪಾರಿ ಗಳು ತಿಳಿಸುತ್ತಾರೆ. ಆದರೆ ಚಿಲ್ಲರೆ ಮಾರಾಟ ವ್ಯಾಪಾರಿಗಳು ಇದನ್ನು ಅಂಗೀಕರಿಸುತ್ತಿಲ್ಲ.  ರಖಂ ವ್ಯಾಪಾರಿಗಳು ಮನಪೂರ್ವಕ ಉಂಟುಮಾಡು ತ್ತಿರುವ  ಬೆಲೆಯೇರಿಕೆ ಇದಾಗಿದೆಯೆಂದು ಗ್ರಾಹಕರು …

ಸೇವಾ ಭಾರತಿ ಆಂಬುಲೆನ್ಸ್ ಲೋಕಾರ್ಪಣೆ

ಕಾಸರಗೋಡು: ರಾಷ್ಟ್ರೀಯ ಸೇವಾ ಭಾರತಿ ನಗರ ಘಟಕದ ನೂತನ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ  ಜರಗಿತು. ಕಾಸರಗೋಡು ಜನಾರ್ದನ (ಡ್ರೀಂ ಫ್ಲವರ್ ಐವಿಎಫ್ ಸೆಂಟರ್) ಆಸ್ಪತ್ರೆಯ ಡಾ| ಜಯಲಕ್ಷ್ಮಿ ಸೂರಜ್‌ರ ತಂದೆ ಡಾ| ವಿ.ಎಂ. ವಿಜಯನ್ ಅವರ ಸ್ಮರಣಾರ್ಥ ಆಂಬುಲೆನ್ಸ್ ಹಸ್ತಾಂತರಿಸಲಾಗಿದೆ.  ತಾಯಿ ಮಣಿ ಬೆನ್ ವಿಜಯನ್ ಸೇವಾ ಭಾರತಿಯ ಜಿಲ್ಲಾಧ್ಯಕ್ಷ  ದಿನೇಶ್ ಎಂ.ಟಿ ಅವರಿಗೆ ಆಂಬುಲೆನ್ಸ್ ಹಸ್ತಾಂತರಿಸಿದರು. ಈ ವೇಳೆ ಡಾ| ಜಯಲಕ್ಷ್ಮಿ ಸೂರಜ್, ಡಾ| ಸೂರಜ್ ಉಪಸ್ಥಿತರಿದ್ದರು. ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕುದ್ರೆಪ್ಪಾಡಿ, ಜಿಲ್ಲಾ …

ಉದ್ಯಾವರ ಸಾವಿರ ಜಮಾಯತ್ ಉರೂಸ್‌ಗೆ ಇಂದು ಧ್ವಜಾರೋಹಣ

ಮಂಜೇಶ್ವರ:  ಉತ್ತರ ಕೇರಳದ  ಪ್ರಸಿದ್ಧ ಉದ್ಯಾವರ ಸಾವಿರ ಜಮಾಯತ್‌ನಲ್ಲಿ ಉದಯಾಸ್ತಮಾನ ಉರೂಸ್ ಇಂದಿನಿಂದ ಆರಂಭಗೊ ಳ್ಳುವುದಾಗಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.  ದರ್ಗಾ ಸಮಿತಿ ಅಧ್ಯಕ್ಷ ಪೂಕುಂಞಿ ತಂಙಳ್ ಉದ್ಯಾವರ ಧ್ವಜಾರೋಹಣಗೈಯ್ಯುವರು.  ಈ ತಿಂಗಳ 25ರಂದು ರಾತ್ರಿ 8.30ಕ್ಕೆ ಕಾಂತಾಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸುವರು. ಉರೂಸ್ ಸಮಿತಿ ಗೌರವಾಧ್ಯಕ್ಷ ಎಂ.ಎ. ಅತಾವುಲ್ಲ ತಂಙಳ್ ಅಧ್ಯಕ್ಷತೆ ವಹಿಸುವರು. ಆ ದಿನ ನಡೆಯುವ ಮಜ್ಲಿಸ್‌ಗೆ ಇಬ್ರಾಹಿಂ ಖಲೀಲುಲ್ ಮುಖಾರಿ ಕಡಲುಂಡಿ ತಂಙಳ್ ನೇತೃತ್ವ ನೀಡುವರು. ಫಾರೂಕ್ ನಇಮಿ ಮದ್‌ಹು ರಸೂಲ್ ಪ್ರವಚನ …

ಕೊಡ್ಯಮ್ಮೆ ಜಮಾಯತ್ ಮಸೀದಿಯಲ್ಲಿ ಉರೂಸ್ 21ರಿಂದ

ಕುಂಬಳೆ: ಕೊಡ್ಯಮ್ಮೆ ಜಮಾಯತ್ ಮಸೀದಿಯಲ್ಲಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್‌ರ ಹೆಸರಲ್ಲಿ ನಡೆಯುತ್ತಿರುವ ವಾರ್ಷಿಕ ಉರೂಸ್ ಹಾಗೂ ಧಾರ್ಮಿಕಪ್ರವಚನ ಈ ತಿಂಗಳ 21ರಿಂದ 28ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯ ಲಿದೆಯೆಂದು ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ. ಇಂದು ಮಧ್ಯಾಹ್ನ 1.30ಕ್ಕೆ ಮಖಾಂ ಸಿಯಾರತ್‌ಗೆ ಮಹಮೂದ್ ಸಅದಿ ನೇತೃತ್ವ ನೀಡುವರು. ಬಳಿಕ ಜಮಾಯತ್ ಅಧ್ಯಕ್ಷ ಎಂ.ಎಂ.ಕೆ. ಮೊಯ್ದು ಹಾಜಿ ಧ್ವಜಾರೋಹಣಗೈಯ್ಯುವರು. 21ರಂದು ರಾತ್ರಿ 8 ಗಂಟೆಗೆ ಪಾಣಕ್ಕಾಡ್ ಹಮೀದಲಿ ಶಿಹಾಬ್ ತಂಙಳ್ ಉದ್ಘಾಟಿಸುವರು. ಎಂ.ಎಂ.ಕೆ. ಮೊಯ್ದು ಹಾಜಿ ಅಧ್ಯಕ್ಷತೆ ವಹಿಸುವರು. …

ಪತ್ನಿಯನ್ನು ದಡದಲ್ಲಿ ನಿಲ್ಲಿಸಿ ಕ್ಷೇತ್ರದ ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಮುಳುಗಿ ಸಾವು

ಪಯ್ಯನ್ನೂರು: ಪತ್ನಿಯನ್ನು ಕೆರೆಯ ಸಮೀಪ ನಿಲ್ಲಿಸಿ ಸ್ನಾನಕ್ಕಿಳಿದ  ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕಯ್ಯೂರು ಉದಯಗಿರಿಯ  ಇ.ಕೆ. ಅನಿಲ್ ಕುಮಾರ್ (36) ಮೃತಪಟ್ಟ ದುರ್ದೈವಿ. ನಿನ್ನೆ ಸಂಜೆ ಪಯ್ಯನ್ನೂರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಕೆರೆಯಲ್ಲಿ ಘಟನೆ ನಡೆದಿದೆ. ಪತ್ನಿ ಶೀಬಾಳೊಂದಿಗೆ ಅನಿಲ್ ಕುಮಾರ್ ಕ್ಷೇತ್ರಕ್ಕೆ ತಲುಪಿದ್ದರು. ದರ್ಶನದ ಬಳಿಕ ಸ್ನಾನಕ್ಕೆಂದು ಅನಿಲ್ ಕುಮಾರ್ ಕ್ಷೇತ್ರದ ಕೆರೆಗಿಳಿದಿದ್ದರು.  ಪತ್ನಿಯನ್ನು ಕೆರೆ ಸಮೀಪ ನಿಲ್ಲಿಸಿ ಅನಿಲ್ ಕುಮಾರ್ ಕೆರೆಗಿಳಿದಿದ್ದು,   ಅಲ್ಪ ಹೊತ್ತಿನ ಬಳಿಕ ನಾಪತ್ತೆಯಾಗಿದ್ದರು. …

ಕುಂಬ್ಡಾಜೆ ಘಟಕದ ವತಿಯಿಂದ ಪಿಂಚಣಿದಾರರ ದಿನಾಚರಣೆ

ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಕುಂಬ್ಡಾಜೆ ಘಟಕ ವತಿಯಿಂದ ಪಿಂಚಣಿದಾರರ ದಿನಾಚರಣೆ ನಡೆಸಲಾಯಿತು.  ನಿವೃತ್ತ ಡೆಪ್ಯುಟಿ ತಹಶೀಲ್ದಾರ್ ಶ್ರೀಕೃಷ್ಣ ಭಟ್‌ರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಪ್ರಾಂತ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಈಶ್ವರ ರಾವ್, ಜಿಲ್ಲಾ ಸಮಿತಿ ಸದಸ್ಯ ಶ್ರೀಧರ ಭಟ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಸೀತಾರಾಮ ರಾವ್, ಬ್ಲೋಕ್ ಸಮಿತಿ ಸದಸ್ಯ ವೆಂಕಟ್ರಮಣ ಕೆದಿಲ್ಲಾಯ, ಪಂಚಾಯತ್ ಸಮಿತಿ ಕಾರ್ಯದರ್ಶಿ ವಿಷ್ಣು ಭಟ್ ಕುಂಬ್ಡಾಜೆ, ಜಿಲ್ಲಾ ಸಮಿತಿ ಸದಸ್ಯ ಸೀತಾರಾಮ ಭಟ್ ಉಪಸ್ಥಿತರಿದ್ದರು. ಬ್ಲೋಕ್ ಸಮಿತಿ ಅಧ್ಯಕ್ಷ ಸೂರ್ಯನಾರಾ …

ಶಿರಿಯದಲ್ಲಿ ಎಲ್‌ಡಿಎಫ್-ಯುಡಿಎಫ್ ಘರ್ಷಣೆ: ಯುಡಿಎಫ್ ಕಾರ್ಯಕರ್ತನ ಕಾರಿಗೆ ಮತ್ತೊಂದು ಕಾರು ಢಿಕ್ಕಿ ; ನಾಲ್ಕು ಮಂದಿಗೆ ಗಾಯ, ಓರ್ವ ಸೆರೆ

ಕುಂಬಳೆ : ಪಂಚಾಯತ್  ಚುನಾವಣೆಗೆ ಸಂಬಂಧಿಸಿ ಉಂಟಾದ ತರ್ಕದ ಹೆಸರಲ್ಲಿ ಶಿರಿಯದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಮಧ್ಯೆ ಘರ್ಷಣೆ ನಡೆದಿದೆ. ನಿನ್ನೆ ರಾತ್ರಿ ನಡೆದ ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ.ಇದೇ ವೇಳೆ ಎಲ್‌ಡಿಎಫ್ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಎರಡೂ ಭಾಗದ ಎರಡು ಕಾರುಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ ೮ ಗಂಟೆ ವೇಳೆ ಘರ್ಷಣೆ ಆರಂಭಗೊಂಡಿದೆಯೆಂದು ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಶಿರಿಯ ಮಸೀದಿ ಸಮೀಪ  ಕಾರು ನಿಲ್ಲಿಸಿ ಇಳಿದ ಎಲ್‌ಡಿಎಫ್ …

ನಗರದಿಂದ ಹಾಡಹಗಲೇ ಯುವಕನನ್ನು ಅಪಹರಿಸಿದ ತಂಡ ಕರ್ನಾಟಕದಲ್ಲಿ ಸೆರೆ

ಕಾಸರಗೋಡು: ಕಾಸರಗೋಡು ನಗರದಿಂದ ಹಾಡಹಗಲೇ ಮೇಲ್ಪ ರಂಬ ನಿವಾಸಿಯಾದ ಯುವಕನನ್ನು ಕಾರಿನಲ್ಲಿ ಅಪಹರಿಸಿದ  ತಂಡವನ್ನು ಕರ್ನಾಟಕದಲ್ಲಿ ಸೆರೆಹಿಡಿಯಲಾಗಿದೆ.   ಸಕಲೇಶಪುರದಿಂದ  ನಿನ್ನೆ ಸಂಜೆ ತಂಡ ಸೆರೆಗೀಡಾಗಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ಮಾಹಿತಿ ಆಧಾರದಲ್ಲಿ ಕರ್ನಾಟಕ ಹಾಗೂ ಆಂಧ್ರ ಪೊಲೀಸರು ಸೇರಿ  ನಡೆಸಿದ ಕಾರ್ಯಾಚರಣೆಯಲ್ಲಿ ತಂಡ ಸೆರೆಗೀಡಾಗಿದೆ. ಮೇಲ್ಪರಂಬ ನಿವಾಸಿಯಾದ ಹನೀಫ ಎಂಬಾತನನ್ನು 5 ಮಂದಿ ಆಂಧ್ರ ನಿವಾಸಿಗಳು ನಿನ್ನೆ ಮಧ್ಯಾಹ್ನ ಕಾಸರಗೋಡು ನಗರದಿಂದ ಅಪಹರಿಸಿದೆ. ಅಶ್ವಿನಿನಗರದ ಹೋಟೆಲೊಂದರ ಮುಂಭಾಗದಲ್ಲಿ ನಿಂತಿದ್ದ ಯುವಕನನ್ನು ತಂಡ ಬಲವಂತವಾಗಿ ಹಿಡಿದು  …

ಬಾಲಕಿ ಸ್ನಾನಮಾಡುತ್ತಿದ್ದಾಗ ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದ ಯುವಕನ ಬಂಧನ

ಮುಳ್ಳೇರಿಯ: ಸಾಮಗ್ರಿಗಳನ್ನು ಮಾರಾಟ ಮಾಡಲೆಂದು ತಲುಪಿ  ಬಾಲಕಿ ಸ್ನಾನ ಮಾಡುತ್ತಿದ್ದಾಗ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಯತ್ನಿಸಿದ ಯುವಕ ಸೆರೆಯಾಗಿದ್ದಾನೆ. ಮಲಪ್ಪುರಂ ನಿವಾಸಿಯಾದ ಪ್ರಜಿಲ್ (21)ನನ್ನು ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.ಆದೂರು ಪೊಲೀಸರು ಆರೋಪಿಯನ್ನು ಸೆರೆ ದಾಖಲಿಸಿದ ಬಳಿಕ ಜಾಮೀನಿನಲ್ಲಿ  ಬಿಡುಗಡೆಗೊಳಿಸಿದ್ದಾರೆ. ಕಾರಡ್ಕ ಸಮೀಪದ ಪ್ರದೇಶವೊಂದರಲ್ಲಿ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಪ್ರಜಿಲ್ ಬಾಲಕಿಯ ಮನೆಗೆ ಡೈರೆಕ್ಟ್ ಮಾರ್ಕೆಟಿಂಗ್‌ಗಾಗಿ ತಲುಪಿದಾಗ ಆ ಮನೆಯಲ್ಲಿ  ಇತರರಾರೂ ಇರಲಿಲ್ಲ. ಮನೆಯ ಹೊರಗಿರುವ ಸ್ನಾನದ ಕೊಠಡಿಯಲ್ಲಿ ನೀರು ಬೀಳುತ್ತಿರುವ ಶಬ್ದ ಕೇಳಿ ಯುವಕ …

ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಮುಖ್ಯ ಅರ್ಚಕ ಸತ್ಯನಾರಾಯಣ ಅಡಿಗ ನಿಧನ

ಕಾಸರಗೋಡು:  ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಮುಖ್ಯ ಅರ್ಚಕರಾಗಿದ್ದ ಕೂಡ್ಲು ಗಂಗೆ ಕ್ರಾಸ್‌ರೋಡ್ ಶ್ರೀ ದುರ್ಗಾ ನಿವಾಸ್‌ನ ಸತ್ಯನಾರಾಯಣ ಅಡಿಗ (73) ನಿಧನಹೊಂದಿದರು. ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ೨೫ ವರ್ಷಗಳ ಕಾಲ  ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ 10 ವರ್ಷಗಳ ಕಾಲ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನೌಕರನೂ ಆಗಿದ್ದರು. ಶಿವಳ್ಳಿ ಬ್ರಾಹ್ಮಣ ಸಭಾದ ಸಕ್ರಿಯ ಕಾರ್ಯಕರ್ತನೂ ಆಗಿದ್ದರು. ನಿನ್ನೆ ಸಂಜೆ ಮನೆಯಲ್ಲಿ ನಿಧನ ಸಂಭವಿಸಿದೆ. ಮೃತರು ಪತ್ನಿ ಶಾಂತ, ಮಕ್ಕಳಾದ …