ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆಹಚ್ಚಿ ತೆರವುಗೊಳಿಸಿದ ನವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯಕರ್ತರು
ಕುಂಬಳೆ: ಮನೆ ಪರಿಸರ, ರಸ್ತೆ ಸಹಿತ ಸಾರ್ವಜನಿಕ ಸ್ಥಳಗಳು ಶುಚಿಯಾಗಿರಬೇಕೆಂಬ ಉದ್ದೇಶದೊಂದಿಗೆ ಕುಂಬಳೆ ಭಾಸ್ಕರ ನಗರದ ನವೋದಯ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಇತ್ತೀಚೆಗಿನಿಂದ ತೀವ್ರ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಅದರ ಭಾಗವಾಗಿ ಒಂದು ವಾರ ಹಿಂದೆ ಕ್ಲಬ್ನ ಕಾರ್ಯಕರ್ತರು ಶಾಂತಿಪಳ್ಳದಿಂದ ಭಾಸ್ಕರನಗರ ವರೆಗೆ ರಸ್ತೆಯ ಎರಡೂ ಭಾಗವನ್ನು ಶುಚಿಗೊಳಿಸಿದ್ದರು. ರಸ್ತೆ ಹಾಗೂ ಪರಿಸರವನ್ನು ಪೂರ್ಣವಾಗಿ ಶುಚೀಕರಿಸಿದ ಕಾರ್ಯಕರ್ತರು ರಸ್ತೆ ಹಾಗೂ ಪರಿಸರವನ್ನು ಶುಚಿಯಾಗಿಡುವಂತೆ ನಾಗರಿಕರಲ್ಲಿ, ವಾಹನ ಚಾಲಕರಲ್ಲಿ ಹಾಗೂ ವ್ಯಾಪಾರಿಗಳೊಂದಿಗೆ ವಿನಂತಿಸಿದ್ದರು. ಆದರೆ ನಿನ್ನೆ ಭಾಸ್ಕರನಗರ ಸಮೀಪ …