ಅಭ್ಯರ್ಥಿಯ ಮನೆಗೆ ಹಾನಿ: ಮುಸ್ಲಿಂ ಲೀಗ್ ಕಾರ್ಯಕರ್ತರ ವಿರುದ್ಧ ಕೇಸು

ಕುಂಬಳೆ: ಮಂಗಲ್ಪಾಡಿ ಪಂಚಾಯತ್ 2ನೇ ವಾರ್ಡ್‌ನಲ್ಲಿ ಎಡರಂಗ ಸ್ವತಂತ್ರ ಅಭ್ಯರ್ಥಿಯಾಗಿದ್ದ ಅಶ್ರಫ್ ಪಚ್ಲಂಪಾರೆ ಅವರ ಮನೆಗೆ  ಹಾನಿ ಎಸಗಿದ ಘಟನೆಗೆ ಸಂಬಂಧಿಸಿ ಮುಸ್ಲಿಂ ಲೀಗ್ ಕಾರ್ಯಕರ್ತರಾದ ಐದು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಶ್ರಫ್‌ರ ಪುತ್ರಿ ಫಾತಿಮತ್ ಸೈಲ (23) ನೀಡಿದ ದೂರಿನಂತೆ ಮಶ್ಕೂರ್, ಮಶೂಕ್, ಕೆ.ಎಸ್. ಮೂಸ, ಕೆ.ಎಸ್. ಸತ್ತಾರ್, ಮೋನಿ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಮೊನ್ನೆ ಸಂಜೆ ತಂಡವೊಂದು ಮನೆಗೆ ಅತಿಕ್ರಮಿಸಿ ನುಗ್ಗಿ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆಯೊಡ್ಡಿದ್ದು ಬಳಿಕ …

ಕುಂಬಳೆ ಪಂ.ನಲ್ಲಿ ಯುಡಿಎಫ್‌ಗೆ ಲಭಿಸಿದ ಗೆಲುವು 5 ವರ್ಷ ಕಾಲ ನಡೆದ ಅಭಿವೃದ್ಧಿ ಯೋಜನೆಗಳಿಗೆ ಜನರು ನೀಡಿದ ಅಂಗೀಕಾರ- ತಾಹಿರಾ ಯೂಸಫ್

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ ಯುಡಿಎಫ್‌ಗೆ ಲಭಿಸಿದ ಅಭೂತಪೂರ್ವ ಗೆಲುವು ಕಳೆದ ಐದು ವರ್ಷಗಳ ಕಾಲ ಪ್ರಸ್ತುತ ಪಂಚಾಯತ್‌ನಲ್ಲಿ ನಡೆದ ಆಡಳಿತಕ್ಕೆ ಜನರು ನೀಡಿದ ಅಂಗೀ ಕಾರವಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್ ತಿಳಿಸಿದ್ದಾರೆ. ಕಳೆದ ಐದು ವರ್ಷ ಕಾಲದಲ್ಲಿ ಹಲವು ಯೋಜನೆಗಳನ್ನು ಪಂಚಾಯತ್‌ನ ಆಡಳಿತ ಮಂಡಳಿ ಜ್ಯಾರಿಗೊಳಿಸಿದೆ. ಇದೇ ವೇಳೆ ವಿರೋಧ ಪಕ್ಷಗಳು ಹೊರಿಸಿದ ಭ್ರಷ್ಟಾಚಾರ ಆರೋಪ ವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಅವರು ‘ಕಾರವಲ್’ಗೆ ತಿಳಿಸಿದ್ದಾರೆ. ಪಂಚಾಯತ್ ವ್ಯಾಪ್ತಿಯ ಹೊಯ್ಗೆ ಕಡವಿನ …

ಪೇರಾಲ್ ಕಣ್ಣೂರಿನಲ್ಲಿ ವಾಚನಾಲಯಕ್ಕೆ ಪಟಾಕಿ ಎಸೆತ; ತಂಡದಿಂದ ವ್ಯಕ್ತಿಗೆ ಹಲ್ಲೆ

ಕುಂಬಳೆ: ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾರ್ ವಾಚನಾಲಯದ ಮೇಲೆ ಪಟಾಕಿ ಎಸೆದು ಹಾನಿಗೈದ ಪ್ರಕರಣದಲ್ಲಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಶನಿವಾರ ಸಂಜೆ ಯುಡಿಎಫ್ ಕಾರ್ಯಕರ್ತರ ತಂಡ ಈ ಕೃತ್ಯವೆಸಗಿರುವುದಾಗಿ ಸಿಪಿಎಂ ಆರೋಪಿಸಿದೆ. ವಾಚನಾಲಯಕ್ಕೆ ಪಟಾಕಿ ಎಸೆದು ಬಳಿಕ ಫ್ಲೆಕ್ಸ್ ಬೋರ್ಡ್‌ಗಳನ್ನು ನಾಶಗೊಳಿಸಲಾಗಿದೆ. ಅಲ್ಲದೆ ವಾಚನಾಲಯದ ಮುಂದೆ ನಿಂತಿದ್ದ ಹಸೈನಾರ್ ಕೋರಿತ್ತಳ (52) ಎಂಬವರಿಗೂ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಹಸೈನಾರ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಬಗ್ಗೆ ಸಿಪಿಎಂ ನೀಡಿದ ದೂರಿನಂತೆ ಕುಂಬಳೆ …

ಜಿಲ್ಲಾ ಪಂ.ನ ಪುತ್ತಿಗೆ ಡಿವಿಶನ್‌ನಲ್ಲಿ ಸೋಮಶೇಖರರ ಗೆಲುವು:ಯುಡಿಎಫ್ ಪಾಳಯದಲ್ಲಿ ನವೋತ್ಸಾಹ

ಪೆರ್ಲ: ಜಿಲ್ಲಾ ಪಂಚಾಯತ್‌ನ  ಪುತ್ತಿಗೆ ಡಿವಿಶನ್‌ನಲ್ಲಿ ಯುಡಿಎಫ್‌ನಸೋಮಶೇಖರ ಜೆ.ಎಸ್. ಅವರು ಗೆಲುವು ಸಾಧಿಸಿರುವುದು ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ನಲ್ಲಿ ಹೊಸ ಹುರುಪು ಮೂಡಿಸಿದೆ. ಕಳೆದ ಚುನಾವಣೆಯಲ್ಲಿ ೬೦೦೦ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ೩ನೇ ಸ್ಥಾನದಲ್ಲಿದ್ದ ಯುಡಿಎಫ್ ಅಭ್ಯರ್ಥಿ ಇದೀಗ ಮೊದಲ ಸ್ಥಾನಕ್ಕೆ ತಲುಪಿರುವುದು ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಗೆಲುವು ಯುಡಿಎಫ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಎಣ್ಮಕಜೆ ಪಂಚಾಯತ್ ಅಧ್ಯಕ್ಷರಾಗಿ 10 ವರ್ಷದ ಅನುಭವ, ಶಿಕ್ಷಣ,  ಸಹಕಾರಿ ಕ್ಷೇತ್ರದಲ್ಲಿ ಸೇವೆ ಹಾಗೂ …

ಕೇರಳದ ಎರಡು ತುದಿಗಳಲ್ಲೂ ಬಿಜೆಪಿಯ ಸಾಧನೆ-ವಿ.ಕೆ. ಸಜೀವನ್

ಮಧೂರು:  ರಾಜ್ಯದ ಉತ್ತರ ಭಾಗದಲ್ಲಿ ಬಿಜೆಪಿ ಆಡಳಿತ ಸತತವಾಗಿ  ೪೬ನೇ ವರ್ಷಕ್ಕೆ  ಕಾಲಿಡುತ್ತಿರುವಾಗ ರಾಜ್ಯದ  ತೆಂಕಣ ಜಿಲ್ಲೆ ರಾಜಧಾನಿ ಯಾದ ತಿರುವನಂತಪುರ ಕಾರ್ಪೋ ರೇಶನ್‌ನ್ನು ಸ್ವಾಧೀನಪಡಿಸಿದ ಬಿಜೆಪಿಯ ಶಕ್ತಿ ಹೆಚ್ಚುತ್ತಿದೆಯೆಂದು ಪಕ್ಷದ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ನುಡಿದರು. ಸತತವಾಗಿ  ೪೬ನೇ ವರ್ಷಕ್ಕೆ ಆಡಳಿತ ನಡೆಸಲು ಅವಕಾಶ ಲಭಿಸಿದ ಮಧೂರು ಪಂಚಾಯತ್ ಬಿಜೆಪಿ ಸಮಿತಿಗಳ ಜಂಟಿ ಆಶ್ರಯದಲ್ಲಿ ಹರ್ಷಾಚರಣೆ ಹಾಗೂ ಸಾರ್ವಜನಿಕ ಸಭೆಯನ್ನು  ಮಧೂರಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.  ಕೋಮು ಭೀತಿವಾದಿ ಸಂಘಟನೆಗಳ ಜೊತೆ ಸೇರಿಸಿಕೊಂಡು …

ಸ್ಥಳೀಯಾಡಳಿತ ಚುನಾವಣೆ: ಜಿಲ್ಲೆಯಲ್ಲಿ ಯುಡಿಎಫ್‌ಗೆ ಅತೀ ಹೆಚ್ಚು ಮತ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಯುಡಿಎಫ್ಗೆ ಅತೀ ಹೆಚ್ಚು ಮತಗಳು ಲಭಿಸಿವೆ. ಅಂದರೆ ಎಡರಂಗಕ್ಕಿ೦ತ 57,595 ಹೆಚ್ಚು ಮತಗಳು ಯುಡಿಎಫ್ಗೆ ಲಭಿಸಿದೆ.ಯುಡಿಎಫ್ಗೆ ಒಟ್ಟು 3,57,478 ಮತಗಳು (ಶೇ. 42.92) ಲಭಿಸಿದರೆ, ಎಡರಂಗಕ್ಕೆ 2,99,883 (ಶೇ.36) ಮತಗಳು ಲಭಿಸಿದೆ. ಇನ್ನು ಬಿಜೆಪಿ ನೇ ತೃತ್ವದ ಎನ್ಡಿಎಗೆ 1,66,868 (ಶೇ. 20.03) ಮತಗಳು ಲಭಿಸಿದೆ. ಇತರ ರಿಗೆ ಶೇ. 1.05 ಮತಗಳು ಲಭಿಸಿವೆ.ಜಿಲ್ಲೆಯಲ್ಲಿ ಒಟ್ಟು 11,12,190 ಮತದಾರರಿದ್ದು, ಅದರಲ್ಲಿ ಈ ಚುನಾವಣೆಯಲ್ಲಿ 8,32,923 (ಶೇ 74.89) ಮಂದಿ …

ಕಾಸರಗೋಡು ನಗರಸಭೆ ಆಡಳಿತ ಉಳಿಸಿಕೊಂಡ ಮುಸ್ಲಿಂ ಲೀಗ್

ಕಾಸರಗೋಡು: ಮುಸ್ಲಿಂ ಲೀಗ್‌ನ ಭದ್ರ ಕೋಟೆಯೆಂದು ಹೇಳಲಾಗುತ್ತಿರುವ ಕಾಸರಗೋಡು ನಗರಸಭೆಯ ಆಡಳಿತವನ್ನು ಮುಸ್ಲಿಂ ಲೀಗ್ ತನ್ನ ಕೈಯಲ್ಲೇ ಉಳಿಸಿಕೊಂಡಿದೆ. ಒಟ್ಟು 30 ಸೀಟುಗಳ ಪೈಕಿ 24 ವಾರ್ಡ್‌ಗಳಲ್ಲಿ ಯುಡಿಎಫ್ ಗೆಲುವು ಸಾಧಿಸಿದೆ. ಇದರಲ್ಲಿ 23 ವಾರ್ಡ್‌ಗಳು ಕೂಡಾ ಲೀಗ್‌ನದ್ದಾಗಿದೆ. ಎನ್‌ಡಿಎಗೆ 14 ಸೀಟು ಲಭಿಸಿದೆ. ಬಿಜೆಪಿಗೆ 2 ಸೀಟು ನಷ್ಟಗೊಂಡಿದೆ. ಇದೇ ವೇಳೆ ಎಲ್‌ಡಿಎಫ್ 1 ಸೀಟಿನಿಂದ 2 ಸೀಟು ಆಗಿ ಬಲ ಹೆಚ್ಚಿಸಿಕೊಂಡಿದೆ. ಎಲ್‌ಡಿಎಫ್‌ನ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ನಗರಸಭೆ ರೂಪೀಕರಿಸಿದ ಬಳಿಕ ಎರಡು …

ಕುಂಬಳೆಯಲ್ಲಿ ಲೀಗ್ ಮತ್ತೆ ಅಧಿಕಾರದತ್ತ

ಕುಂಬಳೆ: ಕುಂಬಳೆ ಪಂಚಾ ಯತ್‌ನಲ್ಲಿ ಫಲಿತಾಂಶ ಘೋಷಿಸಿದ 9 ವಾರ್ಡ್‌ಗಳ  ಪೈಕಿ ಆರರಲ್ಲಿ ಮುಸ್ಲಿಂ ಲೀಗ್ ಜಯಗಳಿಸಿದೆ. ತಲಾ ಒಂದೊಂದರಲ್ಲಿ  ಬಿಜೆಪಿ, ಸಿಪಿಎಂ, ಕಾಂಗ್ರೆಸ್ ಗೆಲುವು ಸಾಧಿಸಿದೆ. ೫ನೇ ವಾರ್ಡ್ ಆದ ಉಜಾರಿನಲ್ಲಿ ಬಿಜೆಪಿ ಅಭ್ಯರ್ಥಿ ಮಮತಾ ಶಾಂತರಾಮ ಆಳ್ವ ಜಯ ಗಳಿಸಿದ್ದಾರೆ. ೧ನೇ ವಾರ್ಡ್ ಕುಂಬೋಲ್‌ನಲ್ಲಿ ಮುಸ್ಲಿಂ ಲೀಗ್‌ನ ಕೌಸರ್ ನೂರ್‌ಜಮಾಲ್ ಪ್ರತಿಸ್ಪರ್ಧಿಯಾದ ಎಸ್‌ಡಿಪಿಐಯ ರುಖಿಯಾ ಅನ್ವರ್‌ರನ್ನು ಸೋಲಿಸಿದ್ದಾರೆ. ಉಳುವಾರ್‌ನಲ್ಲಿ 90ಕ್ಕೂ ಅಧಿಕ ಮತಗಳಿಗೆ ಮುಸ್ಲಿಂ ಲೀಗ್‌ನ ನಾಫಿಯಾ ಜಯಗಳಿಸಿದರು. ಬಂಬ್ರಾಣದಲ್ಲಿ ಮುಸ್ಲಿಂ ಲೀಗ್‌ನ ಪಂಚಾಯತ್ …

ಕಾರಡ್ಕ ಪಂಚಾಯತ್ ಮತ್ತೆ ಬಿಜೆಪಿ ಆಡಳಿತಕ್ಕೆ: ಹಾಲಿ ಪಂ. ಅಧ್ಯಕ್ಷ ಸೋಲು

ಮುಳ್ಳೇರಿಯ: ಕಾರಡ್ಕ ಪಂಚಾಯತ್ ಆಡಳಿತವನ್ನು ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಈಗಾಗಲೇ 1ರಿಂದ 8ರ ವರೆಗಿರುವ ವಾರ್ಡ್ಗಳಲ್ಲಿ ಜಯಗಳಿಸಿದ್ದು, 12ನೇ ವಾರ್ಡ್ಗಳಲ್ಲಿ ಜಯ ಸಾಧ್ಯತೆ ಲೆಕ್ಕಹಾಕಲಾಗಿತ್ತು. ಆದರೆ 1ಮತದ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ, ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ ಸೋಲನುಭವಿಸಿದರು. ಇಲ್ಲಿ ಐಕ್ಯರಂಗದ ಶರೀಫ್ ಎಂ. ಜಯ ಗಳಿಸಿದರು. 1ನೇ ವಾರ್ಡ್ನಲ್ಲಿ ಪ್ರಶಾಂತ್ ಕಲ್ಲಂಕೂಡ್ಲು, 2ನೇ ವಾರ್ಡ್ನಲ್ಲಿ ಬಾಲಕೃಷ್ಣ ಅಂಬೆಮೂಲೆ, 3ನೇ ವಾರ್ಡ್ನಲ್ಲಿ ಸವಿತ ಕುಮಾರಿ ಪಿ, 4ನೇ ವಾರ್ಡ್ನಲ್ಲಿ ವಸಂತಿ ಎ, 5ನೇ ವಾರ್ಡ್ನಲ್ಲಿ ಗಾಯತ್ರಿ, …

ದೇಲಂಪಾಡಿ ಪಂ.ನಲ್ಲಿ ಸಿಪಿಎಂ ಅಭ್ಯರ್ಥಿಗಳನ್ನು ಪರಾಭವಗೊಳಿಸಿದ ಬಂಡುಕೋರ ಅಭ್ಯರ್ಥಿಗಳು

ಅಡೂರು: ಸಿಪಿಎಂ ಆಡಳಿತದಲ್ಲಿರುವ ದೇಲಂಪಾಡಿ ಪಂಚಾಯತ್‌ನಲ್ಲಿ ಇಬ್ಬರು ಸಿಪಿಎಂ ಅಭ್ಯರ್ಥಿಗಳನ್ನು ಪಕ್ಷದ ಬಂಡುಕೋರ ಅಭ್ಯರ್ಥಿಗಳು ಪರಾಭವಗೊಳಿಸಿದ್ದಾರೆ. ಫಲಿತಾಂಶ ಪ್ರಕಟಗೊಂಡ ಏಳು ವಾರ್ಡ್‌ಗಳ ಪೈಕಿ 1ನೇ ವಾರ್ಡ್ ಆದ ಊಜಂಪಾಡಿಯಲ್ಲಿ  ಸಿಪಿಎಂ ಬಂಡುಕೋರ ಅಭ್ಯರ್ಥಿ ಐತ್ತಪ್ಪ ನಾಯ್ಕ್ 275 ಮತಗಳ ಅಂತರದಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. 2ನೇ ವಾರ್ಡ್  ದೇಲಂಪಾಡಿಯಲ್ಲಿ ಸಿಪಿಎಂ ಬಂಡುಕೋರನಾಗಿ ಸ್ಪರ್ಧಿಸಿದ ಮುಸ್ತಫ ಹಾಜಿ 177 ಮತಗಳ ಅಂತರದಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ೩ನೇ ವಾರ್ಡ್  ಬೆಳ್ಳಿಪ್ಪಾಡಿಯಲ್ಲಿ ಬಿಜೆಪಿಯ ಧನಂಜಯ 201 ಮತಗಳ ಹಾಗೂ 4ನೇ …