ನೀರ್ಚಾಲು ಮಹಾಜನ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿಯಿಂದ ನೂತನ ವಿಶ್ವದಾಖಲೆ

ನೀರ್ಚಾಲು: ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಶ್ರಾವ್ಯ ಕೆ.ಎಸ್. ನೂತನ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾಳೆ. ಕಣ್ಣಿಗೆ ಬಟ್ಟೆಕಟ್ಟಿಕೊಂಡು 5 ನಿಮಿಷ 8 ಸೆಕೆಂಡ್‌ಗಳಲ್ಲಿ 500 ಮೀಟರ್ ತನಕ ಈಕೆ ಸೈಕಲ್ ಓಡಿಸಿ ಈ ನೂತನ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಕಳೆದ ಮಾರ್ಚ್ 19ರಂದು ಈಕೆ ಈ ಸಾಧನೆ ಮಾಡಿದ್ದಾಳೆ. 2025 ಮಾರ್ಚ್ 9ರಂದು ಈಕೆ ಬೇರೊಂದು ವಿಶ್ವದಾಖಲೆಯನ್ನೂ ನಿರ್ಮಿಸಿದ್ದಳು. 62 ಪದಗಳನ್ನು ಮತ್ತು ಅರ್ಥಪೂರ್ಣವಾದ ವಾಕ್ಯಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ …

ಹಲವಾರು ಕುಟುಂಬಗಳು ಸಂಕಷ್ಟದಲ್ಲಿ: ಬಾವಿ, ಹೊಳೆಗಳಲ್ಲಿ ಕಡಿಮೆಯಾಗುತ್ತಿರುವ ನೀರಿನ ಮಟ್ಟ; ಮಂಗಲ್ಪಾಡಿ ಪಂ. ವ್ಯಾಪ್ತಿಯಲ್ಲಿ 4 ದಿನಕ್ಕೊಮ್ಮೆ ನಳ್ಳಿನೀರು ವಿತರಣೆ

ಉಪ್ಪಳ: ಹವಾಮಾನದಲ್ಲಿ ಬಿಸಿ ಏರುತ್ತಿರುವಂತೆಯೇ ಕುಡಿಯುವ ನೀರಿಗೆ ಕ್ಷಾಮ ತಲೆದೋರಲು ಆರಂಭ ವಾಗಿದೆ. ಪ್ರತೀ ವರ್ಷ ಬೇಸಿಗೆಕಾಲದಲ್ಲಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿ ಯಲ್ಲಿ ಕುಡಿಯುವ ನೀರು ಕ್ಷಾಮ ವ್ಯಾಪಕವಾಗುತ್ತಿದ್ದು ಈ ಬಾರಿ ಈಗಲೇ ನೀರಿನ ಕ್ಷಾಮ ಕಂಡುಬರುತ್ತಿದೆ. ಬಾವಿ ಹಾಗೂ ಹೊಳೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಉಪ್ಪಳ ಹೊಳೆಯ ಕೊಡಂಗೆಯಲ್ಲಿ ನಿರ್ಮಿಸಿರುವ ಕುಡಿಯುವ ನೀರು ಯೋಜನೆಯ ಬಾವಿಯಲ್ಲಿ ನೀರು ಕಡಿಮೆಯಾಗಿರು ವುದು ಪೈಪ್ ಮೂಲಕ ವಿತರಣೆಗೆ ತೊಡಕಾಗಿದೆ. ಇದುವರೆಗೆ ಎರಡು ದಿನಕ್ಕೊಮ್ಮೆ ವಿತರಿಸಲಾಗುತ್ತಿದ್ದ ಕುಡಿಯುವ ನೀರು ಈಗ …

ಬೋವಿಕ್ಕಾನ ಪೇಟೆಯಲ್ಲಿ ಕಟ್ಟಿ ನಿಲ್ಲುವ ನೀರಿಗೆ ಪರಿಹಾರವಾಗಲಿದೆ: 85 ಲಕ್ಷ ರೂ. ವೆಚ್ಚದಲ್ಲಿ ಆರಂಭಿಸಿದ ಕಾಮಗಾರಿ ಮುಂದಿನ ತಿಂಗಳು ಪೂರ್ತಿ ನಿರೀಕ್ಷೆ

ಬೋವಿಕ್ಕಾನ: ಬೋವಿಕ್ಕಾನ ಪೇಟೆಯಲ್ಲಿ ನೀರು ಕಟ್ಟಿ ನಿಂತು ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದಕ್ಕೆ ಪರಿಹಾರವಾಗಿ ನವೀಕರಣ ಕಾಮಗಾರಿಗಳು ಆರಂಭಗೊಂಡಿದ್ದು, ಮಳೆ ಬಿರುಸಾಗುವ ಮೊದಲೇ ಪೂರ್ತಿಗೊಳ್ಳುವ ಸಾಧ್ಯತೆ ಇದೆ. ಮುಳಿಯಾರು ಪಂಚಾಯತ್‌ನ ಪ್ರಧಾನ ಕೇಂದ್ರವಾದ ಬೋವಿಕ್ಕಾನ ಪೇಟೆಯಲ್ಲಿ ಸಣ್ಣ ಮಳೆ ಸುರಿದರೂ ಕಟ್ಟಿ ನಿಲ್ಲುವ ಮಳೆ ನೀರಿನಿಂದ ಪ್ರಯಾಣಿಕರಿಗೆ, ವ್ಯಾಪಾರಿಗಳಿಗೆ ಸಂಕಷ್ಟವಾಗುತ್ತಿತ್ತು. ಚೆರ್ಕಳ- ಜಾಲ್ಸೂರು ಅಂತಾ ರಾಜ್ಯ ಹೆದ್ದಾರಿಯ ಪ್ರಮುಖ ಪೇಟೆಗಳಲ್ಲೊಂದಾದ ಬೋವಿಕ್ಕಾನದಲ್ಲಿ ಮೂಲಭೂತ ಸೌಕರ್ಯಗಳ ಸಹಿತದ ಪರಿಮಿತಿಗಳಿಂದ ಪೇಟೆಯಲ್ಲಿ ತೊಂದರೆ ಸೃಷ್ಟಿಯಾಗಿತ್ತು. ಈಗ ೮೫ ಲಕ್ಷ ರೂ. ವೆಚ್ಚದಲ್ಲಿ ಮೋರಿಸಂಕ …

ಕೇರಳದಲ್ಲೂ ಜನರು ಬದಲಾವಣೆ ಆಗ್ರಹಿಸುತ್ತಿದ್ದಾರೆ- ಸುಬ್ರಹ್ಮಣ್ಯ ಭಟ್ ಕಜಂಪಾಡಿ

ಕಾಸರಗೋಡು: ಕೇರಳದ ಜನರು ರಾಜಕೀಯ ಬದಲಾವಣೆ ಆಗ್ರಹಿಸುತ್ತಿದ್ದಾರೆ ಎಂದು ಈ ಬಾರಿಯ ಚುನಾವಣಾ ಫಲಿತಾಂಶ ಅದರ ಪ್ರತಿಫಲನವಾಗಲಿದೆ ಎಂದು ಆರ್‌ಎಸ್‌ಎಸ್ ಮುಖಂಡ ಸುಬ್ರಹ್ಮಣ್ಯ ಭಟ್ ಕಜಂಪಾಡಿ ನುಡಿದರು. ಕಾಸರಗೋಡು ವಿಧಾನಸಭಾ ಮಂಡಲ ಚುನಾವಣೆಯ ಅಂಗವಾಗಿ ಬಿಜೆಪಿ ಎನ್‌ಡಿಎ ಪದಾಧಿಕಾರಿಗಳಿಗೆ, ಸಂಘದ ವಿವಿಧ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಏರ್ಪಡಿಸಿದ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ಅಭಿವೃದ್ಧಿಗೆ ಕೇರಳ ಕೂಡಾ ಅಭಿವೃದ್ಧಿಗೊಳ್ಳಬೇಕಾಗಿದೆ. ಇದಕ್ಕಾಗಿ ರಾಜಕೀಯ ಆಡಳಿತ ಬದಲಾವಣೆ ಅನಿವಾರ್ಯವಾಗಿದೆ ಎಂದು ಈ ಉದ್ದೇಶದಿಂದ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೆ …

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ವಾರ್ಷಿಕ ಜಾತ್ರೆ ಇಂದಿನಿಂದ

ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಇಂದಿನಿಂದ 18ರವರೆಗೆ ವಾರ್ಷಿಕ ಜಾತ್ರೆ ನಡೆಯಲಿದೆ. ಈ ಸಂದರ್ಭ ದಲ್ಲಿ ಮಧ್ಯಾಹ್ನ 12 ಗಂಟೆಗೆ ತುಲಾಭಾರ ಸೇವೆಗಳು, 12.30ಕ್ಕೆ ಮಹಾಪೂಜೆ, ಸಂಜೆ ೫ಕ್ಕೆ ತಾಯಂ ಬಕ, ದೀಪಾರಾಧನೆ, ರಾತ್ರಿ 9ಕ್ಕೆ ಉತ್ಸವ ಬಲಿ ನಡೆಯಲಿದೆ. ಇಂದು ಬೆಳಿಗ್ಗೆ 6.30ಕ್ಕೆ ವೇದಪಾ ರಾಯಣ, 9ಕ್ಕೆ ಧ್ವಜಾರೋಹಣ, 10ಕ್ಕೆ ಸಹಸ್ರಕುಂಭಾಭಿಷೇಕ ಜರಗಿತು. ನಾಳೆ ಬೆಳಿಗ್ಗೆ 5 ಗಂಟೆಗೆ  ದೀಪೋ ತ್ಸವ, ವಿಷುಕಣಿಯ ವಿಶೇಷ ಬಲಿ, ರಾಜಾಂಗಣ ಪ್ರಸಾದ, 7.30ಕ್ಕೆ ಪಂಚ ವಾದ್ಯ,  16ರಂದು …

ವೃದ್ಧೆಯನ್ನು ಕೊಠಡಿಯೊಳಗೆ ಕೂಡಿಹಾಕಿ ಚಾಕು ತೋರಿಸಿ ಬೆದರಿಸಿ 10 ಸಾವಿರ ರೂ., ಬೆಂಡೋಲೆ ದರೋಡೆ

ಕಾಸರಗೋಡು: ಹಾಡಹಗಲೇ ಮನೆಗೆ ಅತಿಕ್ರಮಿಸಿ ನುಗ್ಗಿದ ದುಷ್ಕರ್ಮಿಯೋರ್ವ  ವೃದ್ಧೆಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಚಾಕು ತೋರಿಸಿ ಬೆದರಿಕೆಯೊಡ್ಡಿ ಹಣ ಹಾಗೂ ಚಿನ್ನಾಭರಣವನ್ನು ದರೋಡೆಗೈದ ಘಟನೆ ನಡೆದಿದೆ. ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟೋಳಿ ತೊಡುವಳಂ ಮಾಟ್ರಾಡನ್ ಹೌಸ್‌ನ ಎಂ. ನಾರಾಯಣಿ (73) ಎಂಬವರಿಗೆ ಬೆದರಿಕೆಯೊಡ್ಡಿ  ಹಣ ಹಾಗೂ ಚಿನ್ನ ದೋಚಲಾಗಿದೆ.  ನಿನ್ನೆ ಮಧ್ಯಾಹ್ನ 2.45ರ ವೇಳೆ  ನಾಡನ್ನು ಬೆಚ್ಚಿಬೀಳಿಸಿದ ಈ  ಘಟನೆ ನಡೆದಿದೆ. ನಾರಾಯಣಿ ಮಗಳ ಮನೆಗೆ ಬಂದಿದ್ದರು. ಈ ವೇಳೆ ಮನೆಗೆ ಅತಿಕ್ರಮಿಸಿ ನುಗ್ಗಿದ ದುಷ್ಕರ್ಮಿ …

ಹೊಳೆಯಿಂದ ಅನಧಿಕೃತ ಹೊಯ್ಗೆ ಸಾಗಾಟ: ಮೂರು ಮಂದಿ ಸೆರೆ

ಕುಂಬಳೆ: ಹೊಳೆಗಳಿಂದ ಅನಧಿಕೃತ ವಾಗಿ ಹೊಯ್ಗೆ ಸಾಗಾಟ ನಡೆಸಿದ ಪ್ರಕರ ಣಕ್ಕೆ ಸಂಬಂಧಿಸಿ ಮೂರು ಮಂದಿ ಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಇಚ್ಲಂಗೋಡು ಇಶಾನ ಮಂಜಿಲ್‌ನ ಮೊಹಮ್ಮದ್ ಫಾರೂಕ್ (52), ಇಚ್ಲಂಗೋಡಿನ ಅಬ್ದುಲ್ ಬಶೀರ್ (48), ಕುಡಾಲ್‌ಮೇರ್ಕಳದ ಮೊಹಮ್ಮದ್ ಅಲಿ (47) ಎಂಬಿವರನ್ನು ಕುಂಬಳೆ ಇನ್‌ಸ್ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಶಿರಿಯ ಹೊಳೆ ಇಚ್ಲಂಗೋಡಿ ನಿಂದ ಇತ್ತೀಚೆಗೆ ಅನಧಿಕೃತವಾಗಿ ಹೊಯ್ಗೆ ಸಾಗಿಸಿದ ಪ್ರಕರಣದಲ್ಲಿ ಲಾರಿ ಚಾಲಕನ ಸಹಿತ …

ಮುಂದಿನ 10 ದಿನ ರಾಜ್ಯದಲ್ಲಿ ಅತೀ ತೀವ್ರ ಉಷ್ಣತೆ

ತಿರುವನಂತಪುರ: ರಾಜ್ಯದಲ್ಲಿ ಮುಂದಿನ ಹತ್ತು ದಿನ ಅತೀ ತೀವ್ರ ಉಷ್ಣತೆ ಅನುಭವಕ್ಕೆ ಬರಲಿದೆ ಯೆಂದು ಹವಾಮಾನ ಇಲಾಖೆ ತಿಳಿಸಿದೆ.  ಈ ದಿನಗಳಲ್ಲಿ ತೀವ್ರ  ಮಳೆ ಸುರಿ ಯುವ ಸಾಧ್ಯತೆ ಇಲ್ಲ.  ಇದರಿಂದ ಉಷ್ಣತೆ ಎಂದಿಗಿಂ ತಲೂ ಹೆಚ್ಚಾಗಿರಲಿದೆ.ಆದರೆ ಉಷ್ಣ ಅಲೆಯ ಸಾಧ್ಯತೆ ಇಲ್ಲವೆಂದು ತಿಳಿಸಲಾಗಿದೆ. ನಿನ್ನೆ ಅತೀ ತೀವ್ರ ಉಷ್ಣತೆ ಪಾಲಕ್ಕಾಡ್ (39.2)ನಲ್ಲಿ ದಾಖಲಾಗಿದೆ. ನಾಳೆವರೆಗೆ ಕಾಸರ ಗೋಡು, ಕಲ್ಲಿಕೋಟೆ, ಪಾಲ ಕ್ಕಾಡ್, ಕೊಲ್ಲಂ ಜಿಲ್ಲೆಗಳಲ್ಲಿ ಉಷ್ಣತೆ ಮಟ್ಟ ೩೮ ಡಿಗ್ರಿ ವರೆಗೆ  ಏರಲಿದೆ. ಉಳಿದಂತೆ ಕಣ್ಣೂರು, …

ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟ :ರಾಜ್ಯಾದ್ಯಂತ ದಾಳಿ: 600ಕ್ಕೂ ಹೆಚ್ಚು ಸಿಲಿಂಡರ್ ಪತ್ತೆ

ಕಾಸರಗೋಡು: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ವಾತಾ ವರಣ ಇನ್ನೂ ಮುಂದುವರಿಯುತ್ತಿರುವ ವೇಳೆಯಲ್ಲೇ ಅದರ ಮರೆಯಲ್ಲಿ ಕೇರಳದಾದ್ಯಂತ ಕಾಳಸಂತೆಯಲ್ಲಿ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್  ಮಾರಾಟ,  ಅವುಗಳ ಅಕ್ರಮ ದಾಸ್ತಾನು ಮಾತ್ರವಲ್ಲದೆ ಗೃಹ ಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗಳ ಅವ್ಯವಹಾರ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳು  ನಡೆಯು ತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಇದರಿಂದ ಇಂತಹ ಅಕ್ರಮ ಚಟು ವಟಿಕೆಗಳನ್ನು ತಡೆಗಟ್ಟಲು ರಾಜ್ಯದಲ್ಲಿ ಎನ್‌ಫೋರ್ಸ್ ಮೆಂಟ್ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಅಲ್ಲದೆ ಸಾರ್ವಜನಿಕ …

ಫೋನ್ ಮೂಲಕ ಪರಿಚಯಗೊಂಡ ಬಾಲಕಿಯಲ್ಲಿ ವಿವಾಹ ವಿನಂತಿ ಉಪಟಳ: ಯುವಕನ ವಿರುದ್ಧ ಪೋಕ್ಸೋ ಕೇಸು

ಅಡೂರು: ದೂರವಾಣಿ ಮೂಲಕ ಪರಿಚಯಗೊಂಡ 17ರ ಹರೆಯದ ಬಾಲಕಿಯಲ್ಲಿ ನಿತ್ಯವೂ  ವಿವಾಹ ವಿನಂತಿ ನಡೆಸಿ ಉಪಟಳ ನೀಡಿರುವುದಾಗಿ ದೂರಿದ ಹಿನ್ನೆಲೆಯಲ್ಲಿ ಅಡೂರು ನಿವಾಸಿ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಆದೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನಿವಾಸಿಯಾದ ಬಾಲಕಿಯ ದೂರಿನಂತೆ 23ರ ಹರೆಯದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಫೋನ್ ಮೂಲಕ ಬಾಲಕಿಯನ್ನು ಯುವಕ ಪರಿಚಯಗೊಂಡಿದ್ದನು ಎಂದು ಹೇಳಲಾಗಿದೆ. ಬಳಿಕ ಪ್ರತಿದಿನ ಬೆಳಿಗ್ಗೆ ಶುಭ ಮುಂಜಾನೆ, ರಾತ್ರಿ ಶುಭರಾತ್ರಿ ಸಂದೇಶಗಳನ್ನು ಕಳುಹಿಸುತ್ತಿದ್ದನೆನ್ನಲಾಗಿದೆ. ಆ ಬಳಿಕ ಸಂದೇಶದ …