ವರ್ಕಾಡಿ ಸುಳ್ಯಮೆಯಲ್ಲಿ ಕೋಳಿ ಅಂಕ ಕೇಂದ್ರಕ್ಕೆ ಪೊಲೀಸ್ ದಾಳಿ: ಮೂವರ ಸೆರೆ

ಉಪ್ಪಳ: ವರ್ಕಾಡಿ ಕೊಡ್ಲ ಮೊಗರು ಸುಳ್ಯಮೆಯಲ್ಲಿ  ಕೋಳಿ ಅಂಕ ಕೇಂದ್ರಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ಮೂರು ಮಂದಿಯನ್ನು ಬಂಧಿಸಿದ್ದಾರೆ.  ಮಂಗ ಳೂರು ಕುಂಪಲದ ಮಲ್ಲಿಕಾರ್ಜುನ (65), ತೊಕ್ಕೋಟುವಿನ  ಬಾಡಿಗೆ ಮನೆಯಲ್ಲಿ ವಾಸಿಸುವ ಎಸ್. ಗಣೇಶ (49), ವರ್ಕಾಡಿ ಬಾಕ್ರಬೈಲಿನ ಜನಾರ್ದನ (67) ಎಂಬಿವರನ್ನು ಮಂಜೇಶ್ವರ ಎಸ್‌ಐ ಕೆ.ಆರ್. ಉಮೇಶ್ ನೇತೃತ್ವದ ತಂಡ ಬಂಧಿಸಿದೆ. ಕೋಳಿ ಅಂಕ ಸ್ಥಳದಿಂದ 3220  ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಪಡಿಸಲಾಗಿದೆ. ಬಂಧಿತರನ್ನು ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆಯೆಂದು    ಪೊಲೀಸರು ತಿಳಿಸಿದ್ದಾರೆ.  ಗುಪ್ತ …

ಹೊಯ್ಗೆ ಸಾಗಾಟ: ವಾಹನಗಳ ಮಾಲಕರ ವಿರುದ್ಧವೂ ಕೇಸು ದಾಖಲಿಸಲು ಕ್ರಮ

ಕುಂಬಳೆ: ಹೊಳೆಗಳಿಂದ ಅನಧಿಕೃತವಾಗಿ ಹೊಯ್ಗೆ ತೆಗೆದು ಸಾಗಾಟ ನಡೆಸುವ ವಾಹನಗಳ ಆರ್.ಸಿ. ಮಾಲಕರ ವಿರುದ್ಧ ಕಳವು ಆರೋಪ ಹೊರಿಸಿ ಅವರನ್ನು ಬಂಧಿಸಲು ಕುಂಬಳೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಿನ್ನೆ ಮುಂಜಾನೆ ಕುಂಬಳೆ, ಮೊಗ್ರಾಲ್ ಅಂಡರ್‌ಪಾಸ್‌ಗಳ ಮೂಲಕ ಹೊಯ್ಗೆ ಸಾಗಿಸುತ್ತಿದ್ದ ಎರಡು ಟಿಪ್ಪರ್‌ಲಾರಿಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಈ ವೇಳೆ ಆ ಲಾರಿಗಳ ಚಾಲಕರು ಓಡಿ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಲಾರಿಗಳ ಆರ್‌ಸಿ ಮಾಲಕರ ವಿರುದ್ಧ ಕೇಸು ದಾಖ ಲಿಸಲು ಹಾಗೂ ಅವರನ್ನು ಬಂಧಿಸಲು ಎಸ್‌ಐ ಕೆ. ಶ್ರೀಜೇಶ್ …

ವಿಧಾನಸಭಾ ಚುನಾವಣೆಯಲ್ಲಿ ಲೀಗ್‌ಗೆ ಹೆಚ್ಚುವರಿ ಸೀಟಿಗೆ ಅರ್ಹತೆ ಇದೆಯೆಂದು ಪಾಣಕ್ಕಾಡ್ ಸಾದಿಖ್ ಅಲಿ ತಂಙಳ್

ಕಲ್ಲಿಕೋಟೆ: ವಿಧಾನಸಭಾ ಚುನಾ ವಣೆಯಲ್ಲಿ ಲೀಗ್‌ಗೆ ಹೆಚ್ಚುವರಿ ಸೀಟ್‌ಗೆ ಅರ್ಹತೆಯಿದೆ ಎಂದು ಪಾಣಕ್ಕಾಡ್ ಸಾದಿಖ್ ಅಲಿ ತಂಙಳ್ ತಿಳಿಸಿದ್ದಾರೆ. ಒಕ್ಕೂಟದ ಸಭೆಯಲ್ಲಿ ಈ ವಿಷಯ ವನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿ ದ್ದಾರೆ. ಕಲ್ಲಿಕೋಟೆಯಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಕುಂಞಾಲಿಕುಟ್ಟಿ ಲೀಗನ್ನು ಚುನಾವಣೆಯಲ್ಲಿ ಮುನ್ನಡೆಸು ವರು. ಈ ಬಾರಿ ಮಹಿಳಾ ಅಭ್ಯರ್ಥಿ ಇರಬಹುದೆಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ಬಗ್ಗೆ ಲೀಗ್ ನಿರ್ದೇಶ ಮುಂದಿಡು ವುದಿಲ್ಲ. ಆ ವಿಷಯ ಕಾಂಗ್ರೆಸ್ ತೀರ್ಮಾನಿಸಲಿ. ಕೆಲವು …

ಒಗ್ಗಟ್ಟಿನ ಕಾರ್ಯಚಟುವಟಿಕೆಗಳು ಅನಿವಾರ್ಯ- ಕೇರಳ ಯಾತ್ರೆಯಲ್ಲಿ ಕಾಂತಾಪುರಂ

ಕಾಸರಗೋಡು: ಕೇರಳ ಮುಸ್ಲಿಂ ನವೋದಯವನ್ನು ನಿರ್ಧರಿಸಿದ್ದು, ಸಮಸ್ತ ಕೇರಳ ಜಂಇಯತ್ತುಲ್ ಉಲಮ ಎಂದು ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನುಡಿದರು. ಕೇರಳ ಮುಸ್ಲಿಂ ಜಮಾಯತ್ ನೇತೃತ್ವದಲ್ಲಿ ಆರಂಭವಾದ ಕೇರಳ ಯಾತ್ರೆಗೆ ಚೆರ್ಕಳದಲ್ಲಿ ನೀಡಲಾದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಮುಸ್ಲಿಮರಿಗೆ ದಿಕ್ಸೂಚಿ ನೀಡಿದ ಮತ್ತು ಅವರನ್ನು ಸಂಘಟಿತ ಸಮುದಾಯವಾಗಿ ಮುನ್ನಡೆಸಿದ ಸಮಸ್ತದ ಕರ್ಮಫಲಗಳನ್ನು ಇತರ ಸಮುದಾಯಗಳು ವಿವಿಧ ರೀತಿಯಲ್ಲಿ ಅನುಭವಿಸಲು ಸಾಧ್ಯವಾಯಿತು. ಈ ಸಾಧನೆಗಳು ಮತ್ತು ಪ್ರಗತಿಯನ್ನು ಉಳಿಸಿಕೊಳ್ಳಲು ಒಗ್ಗಟ್ಟಿನ ಕಾರ್ಯಚಟುವಟಿಕೆಗಳು ಅನಿವಾರ್ಯವಾಗಿವೆ. ಅರೇಬಿಯಾದಿಂದ ಬಂದ ಮಾಲಿಕ್ …

ಮಂಜೇಶ್ವರ ತಾಲೂಕಿನಲ್ಲಿ ಅಕ್ರಮ ಜಲ್ಲಿ, ಮಣ್ಣು ವ್ಯವಹಾರ: ಮಾಫಿಯಾ ವಿರುದ್ಧ ಅಧಿಕಾರಿಗಳು ನಿಷ್ಕ್ರಿಯ- ಕೇಶವ ನಾಯ್ಕ್ ಆರೋಪ

ಕುಂಬಳೆ: ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮ ಜಲ್ಲಿಕಲ್ಲು ಗಣಿಗಾರಿಕೆ ಮತ್ತು ಮಣ್ಣು ಅಗೆಯುವಿಕೆ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ಧರಾಗುತ್ತಿಲ್ಲ ಎಂದು ಮಾನವ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯಕ್ ನಾಯ್ಕಾಪು ಕುಂ ಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಆರೋಪಿಸಿದರು.ಕಳೆದ ಕೆಲವು ವರ್ಷಗಳಿಂದ, ಜಿಲ್ಲೆಯ ನೈಸರ್ಗಿಕ ಸಂಪನ್ಮೂಲ ಗಳನ್ನು ಅಂತರ್ ರಾಜ್ಯ ಮಾಫಿ ಯಾ ಗಳು ಕಳ್ಳಸಾಗಣೆ ಮಾಡುತ್ತಿವೆ. ಅಧಿ ಕಾರಿಗಳೇ ಮಾಫಿಯಾ ತಂಡಗಳೊA ದಿಗೆ ಬೆಂಬಲಿಸುವ ಕೆಲಸ ಮಾಡುತ್ತಿದೆ ಎಂದವರು ಆರೋಪಿಸಿದರು.ಮೀಂಜ ಪಂ. ಕೋಳ್ಯೂರು ಪೊಳ್ಳಕಜೆಯ …

ಉಪ್ಪಳದಲ್ಲಿ ಪಂಚಾಯತ್ ಸದಸ್ಯರಿಗೆ ಅಭಿನಂದನೆ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯಲ್ಲಿರುವ ಎಂ.ಕೆ. ಬ್ರದರ್ಸ್ ಸಂಸ್ಥೆ ವತಿಯಿಂದ ಮಂಗಲ್ಪಾಡಿ ಪಂಚಾಯತ್‌ನ ನೂತನ ಸದಸ್ಯ ರನ್ನು ಹಾಗೂ ಶಾಸಕರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಿತು. ಎಂ.ಕೆ ಬ್ರದರ್ಸ್ನ ಅಧ್ಯಕ್ಷ ಹಮೀದ್ ನೀಲ್‌ಕಮಲ್ ಅಧ್ಯಕ್ಷತೆ ವಹಿಸಿದರು. ಶಾಸಕ ಎ.ಕೆ.ಎಂ ಅಶ್ರಫ್, ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್, ಉಪಾಧ್ಯಕ್ಷೆ ಸಮೀನ ಟೀಚರ್, ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನ ಇಕ್ಬಾಲ್, ಬ್ಲೋಕ್ ಪಂಚಾಯತ್ ಸದಸ್ಯೆ ಜಮೀಲ ಸಿದ್ದಿಕ್, 4ನೇ ವಾರ್ಡ್ ಸದಸ್ಯೆ ನಾಜಿಯ ಅಜೀಜ್, ಟಿ.ಎ ಶರೀಫ್‌ರನ್ನು ಅಭಿನಂದಿಸ …

ಕಾಞಂಗಾಡ್ ಜಿಲ್ಲಾ ಜೈಲಿನಿಂದ ಪರಾರಿಯಾಗಲೆತ್ನ : ಬದಿಯಡ್ಕದ ಕಳವು ಪ್ರಕರಣದ ಆರೋಪಿ ಕೈಯಾರೆ ಸೆರೆ

ಕಾಸರಗೋಡು: ಕಾಞಂ ಗಾಡ್ ಜಿಲ್ಲಾ ಜೈಲಿನಲ್ಲಿದ್ದ  ರಿಮಾಂಡ್ ಆರೋಪಿಯೋರ್ವ ಜೈಲಿನಿಂದ ಪರಾರಿಯಾಗಲು ಯತ್ನಿಸಿದ್ದಾನೆ.  ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಕಳವು ಪ್ರಕರಣದ ಆರೋಪಿ ಯಾದ ನೆಲ್ಲಿಕಟ್ಟೆ ಆಮೂಸ್ ನಗರದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುವ ಟಿ.ಎಂ. ಅಬ್ದುಲ್ ಸುಹೈಲ್ ಎಂಬಾತ ಜೈಲಿನಿಂದ ಪರಾರಿಯಾಗಲು ಯತ್ನಿಸಿರುವುದಾಗಿ ದೂರಲಾಗಿದೆ. ಜೈಲು ಸುಪರಿನ್‌ಟೆಂಡೆಂಟ್   ಎನ್. ಗಿರೀಶ್ ಕುಮಾರ್‌ರ ದೂರಿ ನಂತೆ  ರಿಮಾಂಡ್ ಆರೋಪಿ ಸುಹೈಲ್ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ.  ಬೆಳಿಗ್ಗಿನ ವೇಳೆ ಸೆಲ್‌ನಿಂದ ಹೊರಗಿಳಿದ ಆರೋಪಿ  ಮರಳಿ ಜೈಲಿಗೆ ಪ್ರವೇಶಿಸುತ್ತಿದ್ದಂತೆ ಅಡುಗೆ …

ನಿಲ್ಲಿಸಿದ್ದ ಖಾಸಗಿ ಬಸ್‌ಗೆ ಢಿಕ್ಕಿ ಹೊಡೆದ ಸಾರಿಗೆ ಬಸ್

ಕುಂಬಳೆ: ನಿಲ್ಲಿಸಿದ್ದ ಖಾಸಗಿ ಬಸ್‌ನ ಮುಂಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದಿದ್ದು, ಇದು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಯಿತು. ಇಂದು ಬೆಳಿಗ್ಗೆ 9.45ರ ವೇಳೆ ಕುಂಬಳೆ ಪೇಟೆಯಲ್ಲಿ ಈ ಘಟನೆ ನಡೆದಿದೆ. ಮಂಗಳೂರು- ಕಣ್ಣೂರು ಮಧ್ಯೆ ಸಂಚರಿಸುವ ಮೆಹಬೂಬ್ ಬಸ್ ಕುಂಬಳೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದಂತೆ ಹಿಂಬದಿಯಿಂದ ಬಂದ ಕರ್ನಾಟಕರಾಜ್ಯ ಸಾರಿಗೆ ಬಸ್ ಮುಂದೆ ಸಂಚರಿಸುತ್ತಿದ್ದಂತೆ ಖಾಸಗಿ ಬಸ್‌ನ ಬದಿಗೆ ಒರೆಸಿದೆಯೆಂದು ದೂರಲಾಗಿದೆ. ಇದರಿಂದ ಅಲ್ಪಹೊತ್ತು ಸಾರಿಗೆ ಅಡಚಣೆ ಉಂಟಾಗಿದ್ದು, ಬಳಿಕ ಈ ಎರಡು ಬಸ್‌ಗಳನ್ನು …

ಮಧ್ಯರಾತ್ರಿ ಹೊಳೆಯಿಂದ ಹೊಯ್ಗೆ ಕಳವುಗೈದು ಸಾಗಾಟ : 2 ಟಿಪ್ಪರ್ ಲಾರಿಗಳ ವಶ

ಕುಂಬಳೆ: ಹೊಳೆಗಳಿಂದ ಹೊಯ್ಗೆ ಕಳವುಗೈದು ಸಾಗಿಸುವ ದಂಧೆ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಂತೆ ಮತ್ತೊಂದೆಡೆ ಹೊಯ್ಗೆ ಸಾಗಾಟ ದಂಧೆ ತೀವ್ರಗೊಂಡಿದೆ. ನಿನ್ನೆ ಮಧ್ಯ ರಾತ್ರಿಯೂ ಹೊಯ್ಗೆ ಸಾಗಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್‌ಐ ಶ್ರೀಜೇಶ್ ನೇತೃತ್ವದಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಹೊಯ್ಗೆ ತುಂಬಿದ ಎರಡು ಟಿಪ್ಪರ್ ಲಾರಿಗಳನ್ನು ವಶ ಡಿಸಲಾಗಿದೆ. ಒಂದು ಲಾರಿಯನ್ನು ಕುಂಬಳೆ ಅಂಡರ್‌ಪಾಸ್‌ನಿಂದ ಹಾಗೂ ಇನ್ನೊಂದು ಲಾರಿಯನ್ನು ಮೊಗ್ರಾಲ್ ಅಂಡರ್‌ಪಾಸ್‌ನಿಂದ ವಶಪಡಿಸಲಾಗಿದೆ. ಎಸ್‌ಐಯನ್ನು ಕಂಡೊಡನೆ ಲಾರಿಗಳನ್ನು ಉಪೇಕ್ಷಿಸಿ ಚಾಲಕರು ಪರಾರಿಯಾಗಿದ್ದಾರೆ. …

ಶಬರಿಮಲೆ ಚಿನ್ನ ಕಳವು : ಸಿಬಿಐ ತನಿಖೆ ಅನಿವಾರ್ಯ-ಐಬಿ; ಅಗತ್ಯವಿಲ್ಲವೆಂದ ಮುಖ್ಯಮಂತ್ರಿ

ತಿರುವನಂತಪುರ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಕೇಂದ್ರ ಗುಪ್ತಚರ ವಿಭಾಗವಾದ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಹೇಳಿದೆ. ಶಬರಿಮಲೆ ಚಿನ್ನ ಕಳವು ಅಂತಾ ರಾಜ್ಯ ನಂಟು ಹೊಂದಿರುವ ಪ್ರಕರಣ ವಾಗಿದೆ. ಆದ್ದರಿಂದ ಇದರ ವಾಸ್ತವತೆ ಯನ್ನು  ಸಂಪೂರ್ಣವಾಗಿ ಬಯಲಿಗೆ ಯಲು ಪ್ರಸ್ತುತ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕಾಗಿರುವುದು ಅನಿವಾರ್ಯವಾಗಿದೆಂದು ಐ.ಬಿಯ ಕೇರಳ ಘಟಕವು ಕೇಂದ್ರದ ಡೈರೆಕ್ಟರ್ ಜನರಲ್ ಆಫ್ ಇಂಟೆಲಿಜೆನ್ಸ್‌ಗೆ ಸಲ್ಲಿಸಿದ ವರದಿಯಲ್ಲಿ ಶಿಫಾರಸ್ಸು ಮಾಡಿದೆ.  ಶಬರಿಮಲೆ ದೇಗುಲದಲ್ಲಿ  ನಡೆದ ಚಿನ್ನ …