ಹೃದಯಾಘಾತದಿಂದ ನಿಧನ ಹೊಂದಿದ ಅಣ್ಣನ ಅಂತ್ಯಕ್ರಿಯೆಗೆ ಸಿದ್ಧತೆ ಮಧ್ಯೆ ತಮ್ಮನೂ ಹೃದಯಾಘಾತಕ್ಕೆ ಬಲಿ: ಗಂಟೆಗಳೊಳಗೆ ಸಹೋದರರ ನಿಧನದಿಂದ ಶೋಕಸಾಗರ
ಬದಿಯಡ್ಕ: ಹೃದಯಾಘಾತ ದಿಂದ ಮೃತಪಟ್ಟ ಅಣ್ಣನ ಅಂತ್ಯ ಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ತಮ್ಮನೂ ಹೃದಯಾಘಾತಕ್ಕೆ ಬಲಿಯಾದ ದಾರುಣ ಘಟನೆ ನಡೆದಿದೆ. ಕೇವಲ ಮೂರು ಗಂಟೆಗಳ ಅಂತರದಲ್ಲಿ ಇಬ್ಬರು ಸಹೋದರರು ನಿಧನ ಹೊಂದಿದ ಘಟನೆ ಸಂಬಂಧಿಕರು ಹಾಗೂ ನಾಡಿನಲ್ಲಿ ಶೋಕಸಾಗರವನ್ನೇ ಸೃಷ್ಟಿಸಿದೆ. ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರ ಬಳಿಯ ನಿವಾಸಿಗಳಾದ ರಾಮಕೃಷ್ಣ ಭಟ್ (70) ಹಾಗೂ ಕೇಶವ ಭಟ್ (66) ಎಂಬಿವರು ನಿಧನ ಹೊಂದಿದ ಸಹೋದರರಾಗಿದ್ದಾರೆ. ರಾಮಕೃಷ್ಣ ಭಟ್ರಿಗೆ ಆದಿತ್ಯವಾರ ರಾತ್ರಿ ೭ ಗಂಟೆಗೆ …