ಉಸ್ಬಕಿಸ್ಥಾನದಲ್ಲಿ ಕೇರಳೀಯ ವಿದ್ಯಾರ್ಥಿನಿಯ ಕೊಲೆಗೆ ಕಾರಣ ಮತಾಂತರಕ್ಕೆ ನಿರಾಕರಣೆ -ಆರೋಪ: ತನಿಖೆ ಕ್ರೈಂ ಬ್ರಾಂಚ್ಗೆ ಹಸ್ತಾಂತರ
ಕೊಚ್ಚಿ: ಉಸ್ಬಕಿಸ್ಥಾನದಲ್ಲಿ ಆಲಪ್ಪುಳ ನಿವಾಸಿಯಾದ ಮೆಡಿಕಲ್ ವಿದ್ಯಾರ್ಥಿನಿಯನ್ನು ಸಹಪಾಠಿಯಾದ ಮಲಪ್ಪುರಂ ನಿವಾಸಿ ತಲೆಗೆ ಹೊಡೆದು ಕೊಲೆಗೈಯ್ಯಲು ಕಾರಣ ಆಕೆ ಮತಾಂತರಗೊಳ್ಳಲು ನಿರಾಕರಿಸಿರುವುದೇ ಆಗಿದೆಯೆಂಬ ಆರೋಪ ಕೇಳಿಬಂದಿದೆ. ಆಲಪ್ಪುಳದ ಹರಿಪ್ಪಾಡ್ ಪಿಲಾಕುಳ ಪುದುಕ್ಕಾಡ್ನ ಸುಪ್ರಭಾ ಭವನದ ಬಸಂತ್ ಹಾಗೂ ಮಿನಿ ದಂಪತಿಯ ಪುತ್ರಿ ಸಾವರಿಯ (22) ಪೈಶಾಚಿಕ ರೀತಿಯಲ್ಲಿ ಕೊಲೆಗೈಯ್ಯಲ್ಪಟ್ಟ ದುರ್ದೈವಿಯಾಗಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಾವರಿಯಳ ಸಹಪಾಠಿಯೂ ಮಲಪ್ಪುರಂ ಪೆರಿಂದಲ್ಮಣ್ಣ ನಿವಾಸಿಯಾದ ಸದರುಲ್ ಅನಂ (23) ಎಂಬಾತ ನನ್ನು ಉಸ್ಬಕಿಸ್ಥಾನದಲ್ಲಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ …