ಮನೀಶ್ ಕೀರ್ತೇಶ್ವರರ ಕುಟುಂಬಕ್ಕೆ ಲಾಟರಿ ಮಜ್ದೂರ್ ಸಂಘದಿಂದ ಸಹಾಯಹಸ್ತ

ಮಂಜೇಶ್ವರ: ಇತ್ತೀಚೆಗೆ ರೈಲು ಅಪಘಾತದಲ್ಲಿ ಮೃತಪಟ್ಟ ಮಂಜೇಶ್ವರ ಕೀರ್ತೇಶ್ವರ ನಿವಾಸಿ ಮನೀಶ್ ಸ್ಮರಣಾರ್ಥ ಕೇರಳ ಲಾಟರಿ ಮಜ್ದೂರ್ ಸಂಘ ತಲಪಾಡಿ ಘಟಕದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ತಲಪಾಡಿಯಲ್ಲಿ ನಡೆಯಿತು. ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಯಶವಂತಿ ಬೆಜ್ಜ, ಕೇರಳ ಲಾಟರಿ ಮಜ್ದೂರ್ ಸಂಘ ಜಿಲ್ಲಾ ಕಾರ್ಯ ದರ್ಶಿ ಬಾಬುಮೋನ್ ಚೆರ್ಕಳ ನುಡಿನಮನ ಸಲ್ಲಿಸಿದರು. ಪ್ರದೀಷ್ ತಲಪಾಡಿ ಅಧ್ಯಕ್ಷತೆ ವಹಿಸಿದ್ದರು. ಅಗಲಿದ ಮನೀಶ್‌ರ ಕುಟುಂಬಕ್ಕೆ ಕಾರ್ಮಿಕರು ಸಂಗ್ರಹಿಸಿದ ಮೊತ್ತ ವನ್ನು ಹಸ್ತಾಂತರಿಸಲಾಯಿತು. ಬಿ.ಎಂ.ಎಸ್ ಕೇರಳ ಲಾಟರಿ …

ಅಬ್ದುಲ್ ಗಫೂರ್ ನಿಧನ

ಮೊಗ್ರಾಲ್: ಅಸೌಖ್ಯ ತಗಲಿ ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೊಪ್ಪಳಂ ಹೌಸ್ ನಿವಾಸಿ ಅಬ್ದುಲ್ ಗಫೂರ್ (55) ನಿಧನ ಹೊಂದಿದರು. ಮೃತರು ಪತ್ನಿ ಮಿಸ್ರಿಯ, ಪುತ್ರಿ ಇವಶೇಸ, ಸಹೋದರ ಮುನೀರ್, ಸಹೋ ದರಿಯ ರಾದ ಆಯಿಶಾ, ಸುಹ್ರ, ಶರೀಫ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ದುರಂತ ಭೀತಿ ಹಿನ್ನೆಲೆ: ಮುಳ್ಳೇರಿಯದಲ್ಲಿ ಸರಕಾರಿ ಮದ್ಯದಂಗಡಿ ಆರಂಭಿಸಲು ಸಚಿವರಿಗೆ ಮನವಿ

ಮುಳ್ಳೇರಿಯ: ಊರಲ್ಲಿ ಮದ್ಯದಂಗಡಿ ಬೇಕೆಂಬ ಬೇಡಿಕೆ ಒಡ್ಡಿದಾಗ ಕೆಲವರು ಇದರಲ್ಲಿ ವಿಶೇಷತೆ ಕಾಣಬಹುದು. ಆದರೆ ಮುಳ್ಳೇರಿಯದ ಒಂದು ವಿಭಾಗ  ಜನರು ಮುಳ್ಳೇರಿಯ ದಲ್ಲಿ ಬಿವರೇಜಸ್ ಕಾರ್ಪೊರೇಶನ್‌ನ ಮದ್ಯದಂಗಡಿ ಬೇಕೆಂದು  ಆಗ್ರಹಿಸಿದ್ದಾರೆ. ಇದಕ್ಕಾಗಿ ಅವರು ಅಬಕಾರಿ ಸಚಿವ ಎಂ. ಲಿಜುರಿಗೆ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಶರಾಬು ನಿಶೇಧಿಸಿದಾಗ ಮುಳ್ಳೇರಿಯದಲ್ಲಿ ಅನಧಿಕೃತ ಮದ್ಯ ಮಾರಾಟ, ಸಮಾಜ ಕಂಟಕರ ಹಾವಳಿ ಹೆಚ್ಚಾಗಿತ್ತು. ಆ ಬಳಿಕ ಮುಳ್ಳೇರಿಯದಲ್ಲಿ ಬಿವರೇಜಸ್ ಕಾರ್ಪರೇಶನ್‌ನ ಮದ್ಯದಂಗಡಿ ಆರಂಭಗೊಂಡ ಬಳಿಕ ಇಲ್ಲಿ ಈ ರೀತಿಯ ದುರಂತ ಕಡಿಮೆ …

ನಿಶ್ಚಿತ ಹೆಜ್ಜೆಗಳಲ್ಲಿ ಸಾಗಿ ವಿಶಿಷ್ಟ ಪ್ರಯೋಗದ ಮೂಲಕ ನಾಗರೀಕತೆ ರಕ್ಷಣೆಯಲ್ಲಿ ಸಂಘ ಕೆಲಸ ಮಾಡಿದೆ- ಮುಕುಂದ ಸಿ.ಆರ್.

ಕಾಸರಗೋಡು: ಕಳೆದ ೧೦೦ ವರ್ಷಗಳಲ್ಲಿ ಸಂಘವು ನಿಶ್ಚಿತ ಹೆಜ್ಜೆ ಗಳಲ್ಲಿ ಸಾಗಿ ವಿಶಿಷ್ಟ ಪ್ರಯೋಗದ ಮೂಲಕ ನಾಗರೀಕತೆಯ ಸಂರಕ್ಷಣೆ ಯಲ್ಲಿ ಸಂಘ ಕೆಲಸ ಮಾಡಿದೆ ಎಂಬು ದಾಗಿ ಆರ್‌ಎಸ್‌ಎಸ್ ಸಹ ಸರ ಕಾರ್ಯವಾಹ್ ಮುಕುಂದ ಸಿ.ಆರ್. ಹೇಳಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯಕ್ರಮದ ಅಂಗವಾಗಿ ನಿನ್ನೆ ಸಂಜೆ ಕಾಸರ ಗೋಡುನಲ್ಲಿ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ಮೂಲ ಸನಾತನ ಮೌಲ್ಯ ಗಳ ಆಳವಾದ ಅಧ್ಯಯನವನ್ನು ಕಂಡು ಕೊಂಡ ಚಿಂತಕರು ನಾಗರೀಕತೆಯನ್ನು ಹೇಗೆ ಸಂರಕ್ಷಿಸಬೇಕೆAಬ ಜಾಗೃತಿ ಮೂಡಿಸುವಲ್ಲಿಯೂ, ವ್ಯಕ್ತಿ …

ಕಯ್ಯಾರರ ಬದುಕು- ಬರಹ ಸಾರ್ವಕಾಲಿಕ ಮೌಲ್ಯವಿರುವಂತದ್ದು- ಬಸವರಾಜ ಎಸ್. ಹೊರಟ್ಟಿ

ಕುಂಬಳೆ: ಕವಿ ನಾಡೋಜ ಕಯ್ಯಾರರು ಕ್ರಾಂತಿ ಮತ್ತು ಕರೆಯ ಅನನ್ಯ ರೂಪಗಳಲ್ಲಿ ಕನ್ನಡ ಭಾಷೆಗೆ ಹೊಸ ವ್ಯಾಖ್ಯಾನ ಬರೆದವರು. ಸ್ವಾತಂತ್ರö್ಯ ಹೋರಾಟ, ಕನ್ನಡ ಏಕೀಕರಣ, ವಿಲಿನೀಕರಣ ಚಳುವಳಿಗಳÀ ಬಹು ವಿಧದ ನೇತೃತ್ವ ವಹಿಸಿದ, ಕರಾವಳಿಯ ಕನ್ನಡ ಪ್ರಜ್ಞೆಯ ಪ್ರತೀಕ. ಕಯ್ಯಾರರ ಬದುಕು-ಕೊಡುಗೆಗಳು ಅತ್ಯಮೂಲ್ಯವಾದುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದಲ್ಲಿ …

ಬೀರಮೂಲೆಯಲ್ಲಿ ಕಾಟಿಗಳ ಹಿಂಡು ರೈತರಿಗೆ ಆತಂಕದ ದಿನಗಳು

ಬೆಳ್ಳೂರು: ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಕುಳದಪಾರೆ ಬೀರಮೂಲೆ ಯಲ್ಲಿ ಕಾಟಿಗಳ ಹಿಂಡು ಸ್ಥಳೀಯ ಕೃಷಿಕರ ನಿದ್ದೆಗೆಡಿಸುತ್ತಿದೆ. ಬೀರಮೂಲೆ ಯ ಕೃಷಿಕ ಸೂರ್ಯನಾರಾಯಣ ಭಟ್‌ರ ತೆಂಗಿನ ತೋಟದಲ್ಲಿ ಕಾಟಿಗಳ ದೊಡ್ಡ ಹಿಂಡು ಕಂಡುಬಂದಿದೆ. ಕುಳದಪಾರೆ, ಈಂದುಮೂಲೆ ಗಡಿ ಪ್ರದೇಶದಲ್ಲಿ ಆಗಾಗ ಕಾಟಿಗಳು ಕಾಣಿಸಿಕೊಳ್ಳುತ್ತಿದ್ದರೂ ಸುಮಾರು ೧೦ರಷ್ಟು ಸಂಖ್ಯೆಯಲ್ಲಿ ಕಂಡುಬಂದಿ ರುವುದು ಇದೇ ಮೊದಲೆಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಇದುವರೆಗೂ ಎಲ್ಲೂ ಕೃಷಿಗೆ ಹಾನಿಗೊಳಿಸಿದ ವರದಿಯಾಗದಿದ್ದರೂ  ಕೃಷಿಕರ ಭೀತಿ ತೊಲಗಲಿಲ್ಲ. ಅರಣ್ಯ ಗಡಿ ಪ್ರದೇಶಗಳಿಂದ ಕೃಷಿ ಭೂಮಿಗೆ ಕಾಡುಪ್ರಾಣಿಗಳು ನುಗ್ಗುವುದನ್ನು …

ಆರಿಕ್ಕಾಡಿ ಟೋಲ್ ಗೇಟ್ ತೆರವುಗೊಂಡರೂ ರಸ್ತೆಯ ಹಂಪ್ ತೆರವಿಗೆ ಕ್ರಮವಿಲ್ಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತ

ಕುಂಬಳೆ: ಆರಿಕ್ಕಾಡಿಯಲ್ಲಿದ್ದ ಟೋಲ್‌ಗೇಟ್ ತೆರವುಗೊಳಿಸಿ ನಾಲ್ಕು ತಿಂಗಳು ಕಳೆದರೂ ಇಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ  ನಿರ್ಮಿಸಿದ ಹಂಪ್ ಹಾಗೆಯೇ ಉಳಿದುಕೊಂಡಿದೆ. ಇದು ಇಲ್ಲಿ ಪದೇ ಪದೇ ವಾಹನ ಅಪಘಾತಗಳಿಗೆ ಕಾರಣವಾಗುತ್ತಿದೆ. ನಿನ್ನೆ ಸಂಜೆ ಸಂಭವಿಸಿದ ಅಪಘಾತದಲ್ಲಿ ೪ ಮಂದಿ ಗಾಯಗೊಂಡಿದ್ದಾರೆ. ತಲಪಾಡಿ ಭಾಗದಿಂದ ಕುಂಬಳೆ ಯತ್ತ ಸಂಚರಿಸುತ್ತಿದ್ದ ಓಮ್ನಿ ವ್ಯಾನ್ ಹಂಪ್‌ನ ಸಮೀಪಕ್ಕೇ ತಲುಪಿದಾಗ ವೇಗ ಕಡಿಮೆ ಮಾಡಿದ್ದು, ಈ ವೇಳೆ ಹಿಂಬದಿಯಲ್ಲಿದ್ದ ಕಾರು ವ್ಯಾನ್‌ನ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಆರಿಕ್ಕಾಡಿಯಲ್ಲಿ ಟೋಲ್ ಗೇಟ್ ಇಲ್ಲವೆಂದು ತಿಳಿದ …

ಬೆಂಗಳೂರಿನಲ್ಲಿ ಸೆರೆಯಾದ ಗಾಂಜಾ ಪ್ರಕರಣದ ಆರೋಪಿ  ಇಂದು ನ್ಯಾಯಾಲಯಕ್ಕೆ

ಕಾಸರಗೋಡು: ಬೆಂಗಳೂರಿನಲ್ಲಿ ಮಂಜೇಶ್ವರ ಪೊಲೀಸರು ಸೆರೆಹಿಡಿದ, ಕಾರಿನಲ್ಲಿ ಸಾಗಿಸಿದ ೧೪೨ ಕಿಲೋ ಗಾಂಜಾ ಹಾಗೂ 27.5 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣದ ಪ್ರಧಾನ ಆರೋಪಿಯನ್ನು ಇಂದು ಮಂಜೇಶ್ವರಕ್ಕೆ ಕರೆತಂದು ನ್ಯಾಯಾ ಲಯದಲ್ಲಿ ಹಾಜರುಪಡಿಸಲಾಗುವುದು. ಕೊಡ್ಲಮೊಗರು ಗುವೆದ ಪಡ್ಪು ನಿವಾಸಿ ಅಬ್ದುಲ್ ನೌಫಲ್ (25)ನನ್ನು ಬೆಂಗಳೂರಿನಲ್ಲಿ ಸೆರೆಹಿಡಿಯಲಾಗಿತ್ತು. ಮಂಜೇಶ್ವರ ಪೊಲೀಸರು ದಾಖಲಿಸಿದ ಪ್ರಕರಣದ ವಾರಂಟ್ ಆರೋಪಿಯಾಗಿ ದ್ದಾನೆ ಈತ. ಪ್ರಸ್ತು ತ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ ಈತನನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಸೆರೆಹಿಡಿಯಲಾಗಿದೆ. 2021 ಮಾರ್ಚ್ 26ರಂದು …

ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಿಸಲಾಗಿರುವ ಯೋಜನೆಗಳು: ಕಾಸರಗೋಡಿನಲ್ಲಿ ಐಟಿ ಪಾರ್ಕ್ ; ಚಂದ್ರಗಿರಿ ಕೋಟೆ ಹೆರಿಟೇಜ್ ಪ್ರವಾಸಿ  ಕೇಂದ್ರವಾಗಿ ಭಡ್ತಿ , ಕಾಸರಗೋಡು ಟೌನ್ ಹಾಲ್ ಪುನರ್ ನಿರ್ಮಾಣ

ಕಾಸರಗೋಡು: ಮುಖ್ಯಮಂತ್ರಿ ವಿ.ಡಿ. ಸತೀಶನ್ ವಿಧಾನಸಭೆಯಲ್ಲಿ ನಿನ್ನೆ ಮಂಡಿಸಿದ ಯುಡಿಎಫ್ ಸರಕಾರದ ಚೊಚ್ಚಲ ಬಜೆಟ್‌ನಲ್ಲಿ ಕಾಸರಗೋಡು ಜಿಲ್ಲೆಗಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಕಾಸರಗೋಡಿನಲ್ಲಿ ಐಟಿ ಪಾರ್ಕ್ ಸ್ಥಾಪಿಸಲಾಗುವುದು, ಚಂದ್ರಗಿರಿ ಕೋಟೆ ಮತ್ತು  ಪರಿಸರ  ಪ್ರದೇಶವನ್ನು ಹೆರಿಟೇಜ್  (ಪರಂಪರಾಗತ) ಪ್ರವಾಸಿ ಕೇಂದ್ರವನ್ನಾಗಿ  ಭಡ್ತಿಗೊಳಿಸಲಾಗುವುದು. ಇದು 20 ಕೋಟಿ ರೂ. ವೆಚ್ಚ ನಿರೀಕ್ಷೆಯ ಯೋಜನೆಯಾಗಿದೆ. ಚೀಮೇನಿಯ ಕಿನ್‌ಫ್ರಾ ಪಾರ್ಕ್‌ಗೆ ಸೇರಿರುವ ಸ್ಥಳದಲ್ಲ್ಲಿ ಲಾಜಿಸ್ಟಿಕ್ ಹೈಟೆಕ್ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲಾಗು ವುದು. ಆ ಯೋಜನೆಗಳಿಗೆ ಬಜೆಟ್‌ನಲ್ಲಿ 10 ಕೋಟಿ ರೂ.ಗಳ ಟೋಕನ್ …

ಬೈಕ್ ಢಿಕ್ಕಿ ಹೊಡೆದು ಗಾಯಗೊಂಡಿದ್ದ ಮುಸ್ಲಿಂ ಲೀಗ್ ಕಾರ್ಯಕರ್ತ ನಿಧನ

ಕಾಸರಗೋಡು: ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮುಸ್ಲಿಂ ಲೀಗ್‌ನ ಸಕ್ರಿಯ ಕಾರ್ಯಕರ್ತ ಮೃತಪಟ್ಟರು. ಮೊಗ್ರಾಲ್ ಪಖ್ವನಗರದ ಕೆ.ವಿ. ಹೌಸ್‌ನ ಕೆ.ವಿ. ಅಬ್ದುಲ್ ಖಾದರ್ (78) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಮೊಗ್ರಾಲ್‌ನಲ್ಲಿ ಅಪಘಾತ ಸಂಭವಿಸಿತ್ತು. ಅಬ್ದುಲ್ ಖಾದರ್ ರಸ್ತೆ ಬದಿ ನಡೆದು ಹೋಗುತ್ತಿದ್ದ ವೇಳೆ ಅಪರಿಮಿತ ವೇಗದಲ್ಲಿ ಬಂದ ಬೈಕ್ ಢಿಕ್ಕಿ ಹೊಡೆದಿತ್ತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ …