ಟಿ.ವಿ. ಬಾಲಕೃಷ್ಣನ್ ನಿಧನ

ಮಧೂರು: ಇಲ್ಲಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನೌಕರ ಟಿ.ವಿ. ಬಾಲಕೃಷ್ಣನ್ (62) ನಿಧನ ಹೊಂದಿದರು. ದಿ| ನಾರಾಯಣ ಮಾರಾರ್- ಕಲ್ಯಾಣಿ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ರಮಾದೇವಿ, ಮಕ್ಕಳಾದ ಧನಂಜಯನ್ (ಮಧೂರು ಸೇವಾ ಸಹಕಾರಿ ಬ್ಯಾಂಕ್), ಮಹೇಶ್, ಸಹೋದರಿಯರಾದ ಸರೋಜಿನಿ, ಶಾಂತ, ಭಾರ್ಗವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಯಿತು: ಕಾಸರಗೋಡಿನಲ್ಲಿ ಸಂಚಾರ ತಡೆಗೆ ಪರಿಹಾರವಿಲ್ಲ

ಕಾಸರಗೋಡು: ಅಣಂಗೂರಿ ನಿಂದ ಆರಂಭಗೊಂಡು ಹೊಸ ಬಸ್ ನಿಲ್ದಾಣ- ಚಂದ್ರಗಿರಿ ಟ್ರಾಫಿಕ್ ಜಂಕ್ಷನ್‌ವರೆಗೆ ವಾಹನ ಸಂಚಾರ ತಡೆ ತೀವ್ರಗೊಳ್ಳುತ್ತಿದೆ. ಇದು ಪ್ರಯಾಣಿಕರಿಗೆ ಸಂಕಷ್ಟ ತರುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಹೆಚ್ಚಾಗಿ ವಾಹನ ದಟ್ಟಣೆ ಕಂಡುಬರುತ್ತಿದ್ದು, ಸಂಚಾರ ತಡೆ ಉಂಟಾಗುತ್ತಿದೆ. ಉತ್ಸವ, ಆಚರಣೆ, ವ್ಯಾಪಾರ ಸೀಸನ್ ಸಮಯಗಳಲ್ಲಿ ಸಂಚಾರತಡೆ ತಾರಕಕ್ಕೇರುತ್ತಿದೆ. ಈ ಮಧ್ಯೆ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ ಯಾವುದಾದರೂ ಸಂಘಟನೆಗಳು, ರಾಜಕೀಯ ಪಕ್ಷ ಜಾಥಾ ನಡೆಸಿದರೆ ಆ ದಾರಿಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ಇದು …

ಯುವಕನ ಅಪಹರಣ ಪ್ರಕರಣ: ಆರೋಪಿಯನ್ನು ಸೆರೆಹಿಡಿಯಲು ಉಪ್ಪಳಕ್ಕೆ ತಲುಪಿದ ಪೊಲೀಸರ ಮೇಲೆ ಹಲ್ಲೆ; ಆರೋಪಿ ಸೆರೆ

ಕುಂಬಳೆ: ಕಾಞಂಗಾಡ್ ಮಾಣಿ ಕ್ಕೋತ್ ಕೊಳವಯಲ್ ನಿವಾಸಿ ಯನ್ನು ಅಪಹರಣಗೈದ ಪ್ರಕರಣದಲ್ಲಿ ಆರೋಪಿಯಾದ ಯುವಕನನ್ನು ಸೆರೆಹಿಡಿಯಲು ತಲುಪಿದ ಪೊಲೀಸರ ಮೇಲೆ ಹಲ್ಲೆಗೈದ ಘಟನೆ ನಡೆದಿದೆ. ಇದರಿಂದ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಗಾಯ ಗಂಭೀರವಾಗಿದೆ.  ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತಲುಪಿ ಆರೋಪಿಯಾದ ಉಪ್ಪಳ ಮಣಿಮುಂಡದ ಸುಹೈಲ್ (30)ಎಂಬಾತನನ್ನು ಬಂಧಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಆರೋ ಪಿಯೂ, ಗೂಂಡಾ ನೇತಾರನೂ, ಮಂಗಳೂರಿನಲ್ಲಿ ನಡೆದ ದಾಳಿಯಲ್ಲಿ ಕೊಲೆಗೈಯ್ಯಲ್ಪಟ್ಟ ಖಾಲಿಯಾ ರಫೀಕ್‌ನ ಮಗನಾಗಿದ್ದಾನೆ ಸುಹೈಲ್ ಎಂದು ಪೊಲೀಸರು …

ಆಸ್ಪತ್ರೆ ಶೌಚಾಲಯದಲ್ಲಿ ವಿದ್ಯಾರ್ಥಿನಿ ಹೆರಿಗೆ : ಮಗುವನ್ನು ವೆಂಟಿಲೇಶನ್ ಮೂಲಕ ಎಸೆದು ಕೊಲೆಗೆತ್ನ

ಆಲಪ್ಪುಳ: ಹೊಟ್ಟೆನೋವು ಚಿಕಿತ್ಸೆಗಾಗಿ ಆಸ್ಪತ್ರೆಗೆ ತಲುಪಿದ ವಿದ್ಯಾರ್ಥಿನಿ ಅಲ್ಲಿನ ಶೌಚಾಲ ಯದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಹರಿಪ್ಪಾಡ್ ಸರಕಾರಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 1 ಗಂಟೆಗೆ ಈ ಘಟನೆ ನಡೆದಿದೆ. ಹೆರಿಗೆಯಾದ ಕೂಡಲೇ ಮಗುವನ್ನು ವೆಂಟಿಲೇಶನ್ ಮೂಲಕ ಹೊರಗೆ ಎಸೆದಿದ್ದಾಳೆ. ಮಗು  ಬೀದಿ ನಾಯಿಗಳು ಬೀಡು ಬಿಟ್ಟಿರುವ ಸ್ಥಳದಲ್ಲಿ ಬಿದ್ದಿದೆ.  ಮಗುವಿನ ಅಳು ಕೇಳಿ ಭದ್ರತಾ ನೌಕರರು ಹಾಗೂ ಆಸ್ಪತ್ರೆ ನೌಕರರು ಸ್ಥಳಕ್ಕೆ ತಲುಪಿದ್ದು, ಮಗುವನ್ನು ಮೇಲೆತ್ತಿ ಅಪಾಯದಿಂದ ಪಾರುಮಾಡಿದ್ದಾರೆ. ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರುಗಳಾದ ನಿಶಾ,ಆಲ್ಫಿ, ನರ್ಸಿಂಗ್ …

ಶಬರಿಮಲೆಗೆ ಯುವತಿ ಪ್ರವೇಶದ ವಿರುದ್ಧ ಹೋರಾಟ: ಗಂಭೀರವಲ್ಲದ ಪ್ರಕರಣಗಳನ್ನು ಹಿಂತೆಗೆಯಲು ಸರಕಾರ ತೀರ್ಮಾನ

ತಿರುವನಂತಪುರ: ಶಬರಿಮಲೆ ದೇಗುಲಕ್ಕೆ ಪರಂಪರಾಗತ ಆಚಾರಗಳನ್ನು ಉಲ್ಲಂಘಿಸಿ ಯುವತಿಯರಿಗೆ  ಈ ಹಿಂದಿನ ಎಡರಂಗ ಸರಕಾರ ನೀಡಿದ ಪ್ರವೇಶಾನುಮತಿಯನ್ನು ಪ್ರತಿಭಟಿಸಿ ನಡೆದ ಹೋರಾಟಗಳಿಗೆ ಸಂಬಂಧಿಸಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣಗಳ ಪೈಕಿ ಗಂಭೀರವಲ್ಲದ ಎಲ್ಲಾ ಪ್ರಕರಣಗಳನ್ನು ತೆಗೆದುಕೊ ಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಗಂಭೀರ ರೂಪದ ದಾಳಿ  ಹಾಗೂ ಇತರ ಗಂಭೀರ ಸ್ವರೂಪದ ಪ್ರಕರಣಗಳನ್ನು ಹೊರತುಪಡಿಸಿ ಇತರ ಎಲ್ಲಾ ಪ್ರಕರಣಗಳನ್ನು ಹಿಂತೆಗೆದು ಕೊಳ್ಳಲು ಸರಕಾರ ತೀರ್ಮಾನಿಸಿದೆ. ಶಬರಿಮಲೆ ಕ್ಷೇತ್ರದಲ್ಲಿನ ಪರಂಪರಾಗತ ಆಚಾರ ಮತ್ತು ಅನುಷ್ಠಾನಗಳಿಗೆ ತದ್ವಿರುದ್ಧವಾಗಿ ಯುವತಿಯರಿಗೆ ಪ್ರವೇಶ ನೀಡಬಾರದೆಂಬ …

ಕಾಸರಗೋಡಿನ ಬಸ್ ಟೈಂ ಕೀಪರ್ ನಿದ್ದೆಯಲ್ಲೇ ಹೃದಯಾಘಾತದಿಂದ ನಿಧನ

ಕುಂಬಳೆ: ಇಲ್ಲಿನ ಕಂಚಿಕಟ್ಟೆ  ಬಳಿಯ ನಿವಾಸಿಯೂ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಬಸ್‌ಗಳ ಟೈಂ ಕೀಪರ್ ಆಗಿದ್ದ ಚಂದ್ರಶೇಖರ ಭಂಡಾರಿ (63) ನಿದ್ದೆಯಲ್ಲೇ ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ರಾತ್ರಿ ಊಟಮಾಡಿದ ಬಳಿಕ ಮನೆಯವರೊಂದಿಗೆ ಮಾತನಾಡಿ 1 ಗಂಟೆ ವೇಳೆ ನಿದ್ರಿಸಿದ್ದರು. ಇಂದು ಮುಂಜಾನೆ 4 ಗಂಟೆಗೆ ನೋಡಿದಾಗ ಇವರು ನಿಶ್ಚಲರಾಗಿರುವುದು ಕಂಡು ಬಂದಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ. ಕೂಡಲೇ ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಯಿತು. ಅಲ್ಲಿ ವೈದ್ಯರು ನಡೆಸಿದ ತಪಾಸಣೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. …

ಮಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆಂದು ಹೋದ ಯುವಕ ಎರಡು ವರ್ಷಗಳಿಂದ ನಾಪತ್ತೆ

ಉಪ್ಪಳ: ಮಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆಂದು ತಿಳಿಸಿ ಹೋದ ಯುವಕ ಎರಡು ವರ್ಷಗಳಿಂದ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉಪ್ಪಳ ಬಳಿಯ ಕೋಡಿಬೈಲು ಕೊಡಂಗೆ ನಿವಾಸಿ ಕೋಚಣ್ಣ ಶೆಟ್ಟಿಯವರ ಪುತ್ರ ಸಚಿನ್ ಕುಮಾರ್ (34) ನಾಪತ್ತೆಯಾದ ಯುವಕನಾಗಿದ್ದಾನೆ. ಈ ಬಗ್ಗೆ ಇವರ ಸಹೋದರಿ ಮುಂಬೈಯಲ್ಲಿರುವ ಸಾರಿಕಾ ರೂಪರಾಜ್ ಶೆಟ್ಟಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಚಿನ್ ಕುಮಾರ್ ತಂದೆಯ ಜೊತೆ ಬಂದ್ಯೋಡು ಕರವೂರ್‌ನಲ್ಲಿರುವ ತಂದೆಯ ಸಹೋದರಿ ಮನೆಯಲ್ಲಿ  ವಾಸಿಸುತ್ತಿದ್ದರು. ಈ …

ಯುವಕನನ್ನು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆಗೈದು ಕೊಲೆಯತ್ನ: ಯುವತಿ ಸಹಿತ 3 ಮಂದಿ ಸೆರೆ

ತಿರುವನಂತಪುರ: ಯುವಕನನ್ನು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಯುವತಿ ಸಹಿತ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಲೆಯಾಂಕೀಳ್ ಅರವಿಪ್ಪಾರ ತೆಕ್ಕೇವಿಳ ನಿವಾಸಿ ಸುಜಿತ್  (32), ಆದಿರ ನಿಲಯದ ಅಭಿಲಾಷ್ (39), ಅಭಿಲಾಷ್ ಜೊತೆ ವಾಸ ಮಾಡುತ್ತಿದ್ದ ಕಾಯಂಕುಳಂ ವಳ್ಳಿಕುನ್ನು ನಿವಾಸಿ ಸರಿತ (37) ಎಂಬಿವರು ಸೆರೆಯಾದವರು. ತಿರುವನಂತಪುರ ವೆಂಬಾಯಂ ಪುತ್ತನ್‌ವಿಳ ನಿವಾಸಿ ಶರತ್ (37)ನನ್ನು ಇವರು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆಗೈದು ಕೊಲ್ಲಲು ಯತ್ನಿಸಿದ್ದರು. 2021ರಲ್ಲಿ ಕರಮನದ ವೈಶಾಖ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ ಸುಜಿತ್ ಹಾಗೂ ಅಭಿಲಾಷ್. ಅಭಿಲಾಷ್‌ನ …

ವಿಶ್ವಹಿಂದೂ ಪರಿಷತ್ ಆಶ್ರಯದಲ್ಲಿ ಉಚಿತ ಶ್ರವಣ ತಪಾಸಣೆ

ಉಪ್ಪಳ: ವಿಶ್ವ ಹಿಂದೂ ಪರಿಷತ್ ಕೋಡಿಬೈಲ್ ಉಪಖಂಡ ಸಮಿತಿ ಹಾಗೂ ಓಂ ಶಕ್ತಿ ಫ್ರೆಂಡ್ಸ್ ಕ್ಲಬ್ ಕೋಡಿಬೈಲ್ ಆಶ್ರಯದಲ್ಲಿ, ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಜರಗಿತು. ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಮಾತೃ ಶಕ್ತಿ ಪ್ರಮುಖ್ ಮೀರಾ ಆಳ್ವ ಉದ್ಘಾಟಿಸಿದರು, ಕೋಡಿಬೈಲ್ ಗ್ರಾಮ ಸಮಿತಿಯ ಅಧ್ಯಕ್ಷರು ನಾರಾಯಣ ತೊಟ್ಟಿ, ಹಾಗೂ ಮಂಜೇಶ್ವರ ಪ್ರಖಂಡ ಅಧ್ಯಕ್ಷೆ ಕುಸುಮ ಸದಾನಂದ, ಮಂಗಲ್ಪಾಡಿ ಖಂಡ ಸಮಿತಿಯ ಅಧ್ಯಕ್ಷ ಹರಿನಾಥ …

ಜಿಲ್ಲಾ ಕುಲಾಲ ಸಂಘ ಮಂಗಲ್ಪಾಡಿ ಶಾಖೆ ವಾರ್ಷಿಕೋತ್ಸವ; ಕೃಷಿರತ್ನ ಬಿರುದು ಪ್ರದಾನ

ಮಂಗಲ್ಪಾಡಿ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಗಲ್ಪಾಡಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಕುಬಣೂರು ಶ್ರೀ ರಾಮ ಎ.ಯು.ಪಿ. ಶಾಲಾ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು. ಮಂಗಲ್ಪಾಡಿ ಶಾಖೆಯ ಅಧ್ಯಕ್ಷ ಸತೀಶ್ ಎಂ.ಹೇರೂರು ಅಧ್ಯಕ್ಷ ತೆ ವಹಿಸಿದರು. ಶಂಕರ ಕುಂಜತ್ತೂರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಶ್ರೀನಿವಾಸ ಮೂಲ್ಯ ಮಯ್ಯರ ಮೂಲೆ ಮತ್ತು ಮುಂಡಪ್ಪ ಮೂಲ್ಯ ಮಯ್ಯರ ಮೂಲೆ ಇವರಿಗೆ ಕೃಷಿರತ್ನ ಬಿರುದು ನೀಡಿ ಸನ್ಮಾನಿಸ ಲಾಯಿತು. ಸುಮತಿ ಟೀಚರ್ ಪರಿಚ ಯಿಸಿದರು. ನಂತರ ಎಸ್‌ಎಸ್‌ಎಲ್‌ಸಿ ಯಲ್ಲಿ …