ಹೃದಯಾಘಾತದಿಂದ ನಿಧನ ಹೊಂದಿದ ಅಣ್ಣನ ಅಂತ್ಯಕ್ರಿಯೆಗೆ ಸಿದ್ಧತೆ ಮಧ್ಯೆ ತಮ್ಮನೂ ಹೃದಯಾಘಾತಕ್ಕೆ ಬಲಿ: ಗಂಟೆಗಳೊಳಗೆ ಸಹೋದರರ ನಿಧನದಿಂದ ಶೋಕಸಾಗರ

ಬದಿಯಡ್ಕ: ಹೃದಯಾಘಾತ ದಿಂದ ಮೃತಪಟ್ಟ ಅಣ್ಣನ ಅಂತ್ಯ ಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ತಮ್ಮನೂ ಹೃದಯಾಘಾತಕ್ಕೆ ಬಲಿಯಾದ ದಾರುಣ ಘಟನೆ ನಡೆದಿದೆ. ಕೇವಲ ಮೂರು ಗಂಟೆಗಳ ಅಂತರದಲ್ಲಿ ಇಬ್ಬರು ಸಹೋದರರು ನಿಧನ ಹೊಂದಿದ ಘಟನೆ ಸಂಬಂಧಿಕರು ಹಾಗೂ ನಾಡಿನಲ್ಲಿ ಶೋಕಸಾಗರವನ್ನೇ ಸೃಷ್ಟಿಸಿದೆ. ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರ ಬಳಿಯ ನಿವಾಸಿಗಳಾದ ರಾಮಕೃಷ್ಣ  ಭಟ್  (70) ಹಾಗೂ ಕೇಶವ ಭಟ್ (66) ಎಂಬಿವರು ನಿಧನ ಹೊಂದಿದ ಸಹೋದರರಾಗಿದ್ದಾರೆ. ರಾಮಕೃಷ್ಣ ಭಟ್‌ರಿಗೆ ಆದಿತ್ಯವಾರ ರಾತ್ರಿ ೭ ಗಂಟೆಗೆ …

ಅನಧಿಕೃತ ಹೊಯ್ಗೆ ಸಂಗ್ರಹ : ದಾಳಿಗೆ ತಲುಪಿದ ಪೊಲೀಸರನ್ನು ಕಂಡು ಹೊಳೆಗೆ ಹಾರಿದ ಯುವಕ ನಾಪತ್ತೆ; ತೀವ್ರ ಶೋಧ

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ  ಸಂಗ್ರಹ ವಿರುದ್ಧ ಕಾರ್ಯಾಚರಣೆಗಿಳಿದ ಕರಾವಳಿ ಪೊಲೀಸರನ್ನು ಕಂಡು ಹೊಳೆಗೆ ಹಾರಿದ ಯುವಕ ನಾಪತ್ತೆಯಾಗಿದ್ದು, ಆತನಿಗಾಗಿ ಇಂದು ಕೂಡಾ ಶೋಧ ನಡೆಸಲಾಗುತ್ತಿದೆ.  ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹಿಂ (26) ನಾಪತ್ತೆಯಾಗಿ ರುವುದಾಗಿ ಹೇಳಲಾಗುತ್ತಿದೆ. ನಿನ್ನೆ ರಾತ್ರಿ ೮ ಗಂಟೆ ವೇಳೆ ಶಿರಿಯ ಹೊಳೆಯಿಂದ ಹೊಯ್ಗೆ ಸಂಗ್ರಹಿಸ ಲಾಗುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಕರಾವಳಿ ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದರು. ಈ ವೇಳೆ ಹೊಯ್ಗೆ ಸಂಗ್ರಹಿಸುತ್ತಿದ್ದ ಇಬ್ಬರು  ದೋಣಿಯನ್ನು ಉಪೇಕ್ಷಿಸಿ ಹೊಳೆಗೆ ಹಾರಿ ತಪ್ಪಿಸಿಕೊಂಡಿದ್ದಾರೆ. ಇದೇ …

ಅನಂತಪುರದಲ್ಲಿ ದುರ್ಗಂಧ ಅಸಹನೀಯ: ಸ್ಥಳೀಯರಿಗೆ ಕುಡಿಯುವ ನೀರಿಗೂ ವಿಘ್ನ; ಸಂಸ್ಥೆ ಮುಚ್ಚಲು ಮತ್ತೆ ಜಿಲ್ಲಾಧಿಕಾರಿಯಿಂದ ನಿರ್ದೇಶ

ಕುಂಬಳೆ: ಪರಿಸರ ಹಾಗೂ  ಜನರಿಗೆ ತೀವ್ರ ಬೆದರಿಕೆ ಒಡ್ಡುತ್ತಿರುವ  ಅನಂತಪುರದ ವಿವಾದ ಕೈಗಾರಿಕೆಯನ್ನು ಮತ್ತೆ  ಮುಚ್ಚಲು ಜಿಲ್ಲಾಧಿಕಾರಿ ಮತ್ತೊಮ್ಮೆ ನಿರ್ದೇಶ ನೀಡಿದ್ದಾರೆ. ಜನರ ಆರೋಗ್ಯ ಸಮಸ್ಯೆಗಳಲ್ಲಿ, ಕುಡಿಯುವ ನೀರನ್ನು ಅಪಾಯಕರವಾದ ರೀತಿಯಲ್ಲಿ ಹಾನಿಗೊಳಿಸುವ ವಿಧದಲ್ಲಿರುವ ಕೈಗಾರಿಕೆಯ ಚಟುವಟಿಕೆ ತನಿಖೆಯಲ್ಲಿ ಖಚಿತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ತೀವ್ರ ಕ್ರಮಕ್ಕೆ ಮುಂದಾಗಿದೆ. ಕುಂಬಳೆ ಅನಂತಪುರ ಆಯಿಲ್ ಫ್ಯಾಕ್ಟ್ರಿಯಿಂದಿರುವ ದುರ್ಗಂಧದಿಂದ ಸಹಿಸಲು ಸಾಧ್ಯವಾಗದ ಸ್ಥಳೀಯರು, ಪರಿಸರ ನಿವಾಸಿಗಳು ಈ ಮೊದಲು ದೂರು ನೀಡಿದ್ದರು. ಮಕ್ಕಳಿಗೆ ಕೆಮ್ಮು, ಉಸಿರಾಟ ತೊಂದರೆ ಕಂಡುಬಂದಿರುವುದಾಗಿ ಮಕ್ಕಳನ್ನು …

ಕುಂಟಂಗೇರಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಸ್ಥಾಪಕಾಧ್ಯಕ್ಷರಿಗೆ ಗೌರವಾರ್ಪಣೆ

ಕುಂಬಳೆ: ಕುಂಟಂಗೇರಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷರು ಹಾಗೂ ಸುಮಾರು ೫೪ ವರ್ಷಗಳಿಂದ ಮಂದಿರದಲ್ಲಿ ಪೂಜೆ ನಿರ್ವಹಿಸುತ್ತಿದ್ದ ಕೃಷ್ಣ ಚೆಟ್ಟಿಯಾರ್‌ರನ್ನು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ   ಸನ್ಮಾನಿಸಿ ಗೌರವಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ  ಮಂದಿರದ ತಂತ್ರಿವರ್ಯರಾದ ಶ್ರೀ ಯೋಗೀಶ ಕಡಮಣ್ಣಾಯರು ಕೃಷ್ಣ ಚೆಟ್ಟಿಯಾರ್‌ರನ್ನು ಶಾಲು ಹೊದಿಸಿ  ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು. ಧಾರ್ಮಿಕ ಮುಂದಾಳು ಕೆ. ಶಂಕರ ಆಳ್ವ ಕೋಟೆಕ್ಕಾರು, ಮಂದಿರದ ಅಧ್ಯಕ್ಷ ವರುಣ್ ಕುಮಾರ್, ಮಹಿಳಾ ಸಮಿತಿ …

ಸಅದಿಯ ಗ್ರಾಂಡ್ ಮಸೀದಿ ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್‌ರಿಂದ ಉದ್ಘಾಟನೆ

ಕಾಸರಗೋಡು: ಜಾಮೀಯ ಸಅದಿಯ ಕ್ಯಾಂಪಸ್‌ನಲ್ಲಿ ನೂತನವಾಗಿ ನಿರ್ಮಿಸಿದ ಜಾಮಿಉ ಹಬೀಬ್ ಉಸ್ಮಾನ್ ಗ್ರಾಂಡ್ ಮಸೀದಿಯನ್ನು ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಿದರು. ಅಧ್ಯಕ್ಷ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್  ವಕ್ಫ್ ಕಾರ್ಯ ನೆರವೇರಿಸಿದರು. ಹಾಮೀದ್ ಇಂಬಿಚ್ಚಿಕೋಯ ಅಲ್‌ಬುಖಾರಿ ಪ್ರಾರ್ಥನೆ ನಡೆಸಿದರು. ಸಹಅದಿಯ ಕೋಶಾಧಿಕಾರಿ ಕಲ್ಲಟ್ರ ಮಾಹಿನ್ ಹಾಜಿ, ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್ ಮಾತನಾಡಿದರು. ಕರ್ನಾಟಕ ಸಚಿವ ಯು.ಟಿ. ಖಾದರ್, ಶಾಸಕ ಎ.ಕೆ.ಎಂ. ಅಶ್ರಫ್, ಮೊಹಮ್ಮದ್ ಅಲಿ ಹಬೀಬ್ ಉಸ್ಮಾನ್, ಹಬೀಬ್ ಅಹಮ್ಮದ್ ಉಸ್ಮಾನ್ ಮುಖ್ಯ ಅತಿಥಿಗಳಾಗಿದ್ದರು. …

ಕ್ಷೌರದಂಗಡಿ  ಮಾಲಕ ನಿಧನ

ಉಳಿಯತ್ತಡ್ಕ: ಇಲ್ಲಿನ ಆಜಾದ್ ನಗರದಲ್ಲಿನ ಕ್ಷೌರದಂಗಡಿಯ ಮಾಲಕ ಟಿ. ಪರಮಶಿವನ್ (66) ನಿಧನ ಹೊಂದಿದರು. ಮೃತರು ಪತ್ನಿ ಟಿ. ಸುಮತಿ, ಮಕ್ಕಳಾದ ಇಂದ್ರಾಣಿ, ಗಣೇಶ್, ಶಾಮಿನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸುಂದರಿ ರೈ ನಿಧನ

ಮಂಡೆಕಾಪು: ಕುಡಾಲು ಕನಕಪಾಡಿ ನಿವಾಸಿ ದಿ| ವಿಶ್ವನಾಥ ರೈ ಅವರ ಪತ್ನಿ ಸುಂದರಿ ರೈ (78) ಸ್ವ-ಗೃಹದಲ್ಲಿ ನಿಧನ ಹೊಂದಿ ದರು. ಮೃತರು ಮಕ್ಕಳಾದ ಪದ್ಮಾವತಿ, ಜಲಜಾಕ್ಷಿ, ಪದ್ಮನಾಭ, ಅಳಿಯಂದಿರು, ಸೊಸೆ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಉಬ್ರಂಗಳದ  ದಾಮೋದರ ನಿಧನ

  ಕುಂಬ್ಡಾಜೆ: ಉಬ್ರಂಗಳ ನಿವಾಸಿ ದಾಮೋದರ (64) ಎಂಬವರು ನಿಧನಹೊಂದಿದರು. ಮೃತರು ಪತ್ನಿ ವಸಂತಿ, ಮಕ್ಕಳಾದ ದಯಾನಂದ, ವಿಜಯ ಕುಮಾರ್, ರಮ್ಯ, ಅಳಿಯ-ಸೊಸೆಯಂದಿರಾದ ಜಯನ್, ಅಂಜು, ಹರ್ಷ, ಸಹೋದರ-ಸಹೋದರಿಯರಾದ  ಬಟ್ಯ (ಬಿಎಸ್‌ಎನ್‌ಎಲ್ ಮಂಗಳೂರು), ಶ್ರೀಧರ, ಪುಷ್ಪಾವತಿ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಿ.ವಿ. ಅಬ್ದುಲ್ ರಹ್ಮಾನ್ ಹಾಜಿ ನಿಧನ

ಕಾಸರಗೋಡು: ಶ್ವಾಸಕೋಶ ತಜ್ಞ ಹಾಗೂ ಸಾಹಿತಿಯಾಗಿರುವ ಡಾ. ಎ.ಎ. ಅಬ್ದುಲ್ ಸತ್ತಾರ್‌ರ ತಂದೆ ಎರಿಯಾಲ್ ನಿವಾಸಿ ಬಿ.ವಿ. ಅಬ್ದುಲ್ ರಹ್ಮಾನ್ ಹಾಜಿ (9೦) ನಿಧನ ಹೊಂದಿದರು. ಹಡಗು ನೌಕರನಾಗಿದ್ದರು. ಇವರ ಪತ್ನಿ ಸೈನಾಬಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಇತರ ಮಕ್ಕಳಾದ ಮುಹಮ್ಮದ್ ಶರೀಫ್ ಎ.ಎ, ಸಫಿಯ, ಸೌದ, ಸುಮಯ್ಯಾಬಿ, ಸುರಯ್ಯಾಬಿ, ರಮ್ಲಾಬಿ, ನಜೀಮ, ಅಳಿಯಂದಿರಾದ ಅಬ್ದುಲ್ಲ ಕೆ.ಬಿ, ಅಹಮ್ಮದ್ ಚೇರಂಗೈ, ಬಶೀರ್, ಸತ್ತಾರ್, ರಜಾಕ್, ಸುಬೈರ್, ಸೊಸೆಯಂದಿರಾದ ಶಮೀಮ, ರಸೀನ ಹಾಗೂ ಅಪಾರ ಬಂಧು-ಮಿತ್ರರನ್ನು …

ಕಾಶ್ಯಮ್ಮ ನಿಧನ

ಮಧೂರು: ಮುಟ್ಟತ್ತೋಡಿ ನಿವಾಸಿ ನಾರಾಯಣ ಅಡಿಗರ ಪತ್ನಿ ಕಾಶ್ಯಮ್ಮ (8೦) ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ರಾಮಕೃಷ್ಣ ಅಡಿಗ (ಆರಂತೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ), ಶಂಕರ ಅಡಿಗ, ಜಯಶೀಲ, ಶ್ರೀವಿದ್ಯಾ, ಅಳಿಯಂದಿರಾದ ಸುಬ್ರಹ್ಮಣ್ಯ ಹೊಳ್ಳ ಮುಳಿಯಾರು, ವಾಸುದೇವ ವರ್ಕಾಡಿ, ಸಹೋದರರಾದ ವೆಂಕಟ್ರಮಣ ರಂಗ ಭಟ್, ಸುಬ್ರಹ್ಮಣ್ಯ ರಂಗ ಭಟ್, ಸಹೋದರಿಯರಾದ ಲಲಿತ, ಸುಮತಿ, ರಾಜಲಕ್ಷ್ಮಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.