ಹೃದಯಾಘಾತದಿಂದ ನಿಧನ

ಬದಿಯಡ್ಕ: ಅಸೌಖ್ಯ ಬಾಧಿಸಿ ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟರು. ಬಾಂಜತ್ತಡ್ಕ ನಿವಾಸಿ  ಸಂಜೀವ ಬಿ (57) ಎಂಬವರು ಮೃತಪಟ್ಟ ವ್ಯಕ್ತಿ. ಎದೆನೋವು  ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಇವರನ್ನು ಪರಿಯಾರಂನ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ ಹೃದಯಾಘಾತವುಂಟಾಗಿ ನಿಧನ ಸಂಭವಿಸಿದೆ. ದಿವಂಗತರಾದ ಐತ್ತ-ಚನಿಯಾರು ದಂಪತಿಯ ಪುತ್ರನಾದ ಮೃತರು ಪತ್ನಿ ಸರೋಜಿನಿ, ಮಕ್ಕಳಾದ ಓಂಪ್ರಕಾಶ್, ಋತಿಕೇಶ್, ಮಂಗಳಾ ದೇವಿ, ಭಾಗ್ಯಶ್ರೀ, ಸಹೋದರಿಯರಾದ ಸುಶೀಲ, ರಾಜೀವಿ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಕಮಲಾಕ್ಷ …

ಬಿಎಂಎಸ್ ರಾಷ್ಟ್ರೀಯ ಆಂದೋಲನದಂಗವಾಗಿ ಮೆರವಣಿಗೆ, ಸಾರ್ವಜನಿಕ ಸಭೆ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ್‌ನ ರಾಷ್ಟ್ರೀಯ ಆಂದೋಲನದಂಗವಾಗಿ ಕಾಸರಗೋಡಿನಲ್ಲಿ ಮೆರವಣಿಗೆ ಹಾಗೂ ಸಾರ್ವಜನಿಕ ಸಮ್ಮೇಳನ ನಡೆಸಲಾಯಿತು. ಕರಂದಕ್ಕಾಡ್‌ನಿಂದ ಆರಂಭಿಸಿದ ಕಾರ್ಮಿಕರ ಮೆರವಣಿಗೆ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಂಡಿತು. ಸಾರ್ವಜನಿಕ ಸಮ್ಮೇಳನವನ್ನು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ೨೯ ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್‌ಗಳಾಗಿ ಲೇಬರ್ ಕೋಡ್ ಕೇಂದ್ರ ಸರಕಾರ ಕಾನೂನು ಮಾಡಿದಾಗ ಅದರ ಇಂಡಸ್ಟ್ರಿಯಲ್ ರಿಲೇಶನ್ಸ್ ಕೋಡ್, ಒಕ್ಯುಪೇಶನ್ ಸೇಫ್ಟಿ ಹೆಲ್ತ್ ವರ್ಕಿಂಗ್ …

ಜಿಲ್ಲಾ ಮಟ್ಟದ ಓಣಂ ಹಬ್ಬಾಚರಣೆ ಕಾರ್ಯಕ್ರಮಗಳ ಯಶಸ್ವಿಗೆ ಸ್ವಾಗತ ಸಮಿತಿ ರೂಪೀಕರಣ

ಕಾಸರಗೋಡು: ಜಿಲ್ಲಾ ಮಟ್ಟದ ಓಣಂ ಹಬ್ಬಾಚರಣೆ ಕಾರ್ಯಕ್ರಮಗಳನ್ನು ಕಾಸರಗೋಡು ನಗರದಲ್ಲಿ ವಿಪುಲವಾಗಿ ಆಚರಿಸಲು ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ರೂಪೀಕರಣ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದರ ಯಶಸ್ವಿಗಾಗಿ ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷರಾಗಿ, ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಸಂಚಾಲಕರಾಗಿರುವ ಸಮಿತಿ ರೂಪೀಕರಿಸಲಾಯಿತು. ಕಾಸರಗೋಡು ಸರಕಾರಿ ಅತಿಥಿ ಮಂದಿರದಲ್ಲಿ ಜರಗಿದ ಸಭೆಯಲ್ಲಿ ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್‌ನೊಂದಿಗೆ ಸೇರಿಕೊಂಡು ಮೆಗಾ ಹೂರಂಗವಲ್ಲಿ ಸ್ಪರ್ಧೆ ನಡೆಸಲಾಗುವುದು. ಮಹಿಳೆಯರಿಗೂ, ಪುರುಷರಿಗೂ ಹಗ್ಗಜಗ್ಗಾಟ ಸ್ಪರ್ಧೆ, ಹುಲಿವೇಷ ಸ್ಪರ್ಧೆ, ತಿರುವಾದಿರ …

ಬದಿಯಡ್ಕ ಕೃಷಿಭವನದಿಂದ ಕೃಷಿಕರ ದಿನಾಚರಣೆ, ಸನ್ಮಾನ

ಬದಿಯಡ್ಕ: ಬದಿಯಡ್ಕ ಪಂ.ಕೃಷಿಭವನದ ನೇತೃತ್ವದಲ್ಲಿ ನಿನ್ನೆ ಬದಿಯಡ್ಕ ಕನ್ಯಾನ ಕನ್ವೆನ್ಶನ್ ಹಾಲ್‌ನಲ್ಲಿ ಕೃಷಿಕರ ದಿನಾಚರಣೆ ನಡೆಯಿತು. ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಉದ್ಘಾಟಿಸಿ, ಮಾತನಾಡುತ್ತಾ ಆಧುನಿಕ ಯುಗದಲ್ಲಿ ಕೃಷಿ ಎದುರಿಸುತ್ತಿರುವ ಸವಾಲುಗಳು ಸಣ್ಣದಲ್ಲ. ಹವಾಮಾನ ವೈಪರೀತ್ಯ, ಕೀಟಬಾಧೆ, ಕಾರ್ಮಿಕರ ಅಭಾವ ಮತ್ತು ಸೂಕ್ತ ಮಾರುಕಟ್ಟೆ ಬೆಲೆಯ ಕೊರತೆ ರೈತರನ್ನು ಕಾಡುತ್ತಿದೆ. ಯುವಕರು ಕೃಷಿಕರತ್ತ ಆಕರ್ಷಿತರಾಗಬೇಕು ಎಂದು ಕರೆಯಿತ್ತರು. ಬದಿಯಡ್ಕ ಪಂ. ಅಧ್ಯಕ್ಷ ಶಂಕರ ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ತೆಂಗು, ಅಡಿಕೆ, ಭತ್ತ, ಕಾಳುಮೆಣಸು, …

ಪ್ಲಸ್‌ಟು ವಿದ್ಯಾರ್ಥಿನಿ, ತಂದೆಯ ಆತ್ಮಹತ್ಯೆ: ಮುಂದುವರಿದ ನಿಗೂಢತೆ

ಕಾಸರಗೋಡು: ತಂದೆ ಹಾಗೂ ಪ್ಲಸ್‌ಟು ವಿದ್ಯಾರ್ಥಿನಿಯಾದ ಪುತ್ರಿ ಬಾಡಿಗೆ ಮನೆಯಲ್ಲಿ ನೇಣುಬಿಗಿದು ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ ಮುಂದುವರಿದಿದೆ. ತಂದೆ ಹಾಗೂ ಮಗಳು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿಲ್ಲ. ಈ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.    ಕರ್ನಾಟಕ ನಿವಾಸಿಯೂ  ಕಾಸರಗೋಡು ಮೀಪುಗುರಿಯಲ್ಲಿ ವಾಸಿಸುತ್ತಿದ್ದ ಗಣೇಶ (55) ಹಾಗೂ ಪರವನಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ  ಪ್ಲಸ್‌ಟು ವಿದ್ಯಾರ್ಥಿನಿಯಾದ ಪುತ್ರಿ ವೈಷ್ಣವಿ (17) ಎಂಬಿವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೊನ್ನೆ ರಾತ್ರಿ ಪತ್ತೆಯಾಗಿದ್ದಾರೆ. ಚೆಮ್ನಾಡ್ ಕೋಳಿಯಡ್ಕ ಶಿವಪುರಂ  ಕ್ಷೇತ್ರ ಸಮೀಪದ  ಎರಡಂತಸ್ತಿನ …

ಅಂಗಡಿ ವರಾಂಡದಲ್ಲಿ ಮಧ್ಯವಯಸ್ಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಪುತ್ತಿಗೆ: ಬಾಡೂರಿನಲ್ಲಿ  ಮಧ್ಯವಯಸ್ಕನೋರ್ವ ಅಂಗಡಿ ವರಾಂಡದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ಅಂಗಡಿಮೊಗರು ದೇಲಂಪಾಡಿಯ ವಿಠಲ ಆಳ್ವ (50) ಮೃತ ವ್ಯಕ್ತಿ ಯಾಗಿದ್ದಾರೆ. ನಿನ್ನೆ ಅಪರಾಹ್ನ  ಬಾಡೂರಿನ  ಉಪೇಕ್ಷಿತ ಕಟ್ಟಡ ಪರಿಸರದಲ್ಲಿ ದುರ್ನಾತ ಬೀರುತ್ತಿದ್ದ ಹಿನ್ನೆಲೆಯಲ್ಲಿ ನಾಗರಿಕರು ನೋಡಿ ದಾಗ ಮೃತದೇಹ ಕಂಡು ಬಂದಿದೆ. ಮೂರು ದಿನಗಳ ಹಿಂದೆ ಮೃತಪಟ್ಟಿ ರಬಹುದೆಂದು ಸಂಶಯಿಸಲಾ ಗುತ್ತಿದೆ. ಈ ಬಗ್ಗೆ ನಾಗರಿಕರು ನೀಡಿದ ಮಾಹಿತಿಯಂತೆ ಬದಿಯಡ್ಕ ಪೊಲೀಸರು ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ದಿವಂಗತರಾದ …

ವಿದ್ಯಾರ್ಥಿ ನಾಪತ್ತೆ

ಕುಂಬಳೆ: ವಿದ್ಯಾರ್ಥಿ ನಾಪತ್ತೆ ಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪುತ್ತಿಗೆ ಮುಹಿಮ್ಮತ್ ನಗರದಲ್ಲಿರುವ ಮುಹಿ ಮ್ಮತ್ ಮುಸ್ಲಿಮಿನ್ ಎಜ್ಯುಕೇಶನ್ ಸೆಂಟರ್‌ನಲ್ಲಿ ಕಲಿಯುತ್ತಿರುವ ಕೂಡ್ಲು ಎರಿಯಾಲ್ ಬ್ಲಾರ್ಕೋಡ್ ಹೌಸ್‌ನ ಮೊಯ್ದೀನ್ ಎಂಬವರ ಪುತ್ರ ಮೊಹಮ್ಮದ್ ಮುಸಾಮಿಲ್ (17)  ಎಂಬಾತ ನಾಪತ್ತೆಯಾದ ವಿದ್ಯಾರ್ಥಿ.  ನಿನ್ನೆ ಮಧ್ಯಾಹ್ನದಿಂದ ಈತ ಶಿಕ್ಷಣ ಸಂಸ್ಥೆಯಿಂದ ನಾಪತ್ತೆಯಾಗಿರು ವುದಾಗಿ  ಶಿಕ್ಷಣ ಸಂಸ್ಥೆ ಅಧ್ಯಾಪಕ ಅಬ್ದುಲ್ ಲತೀಫ್ ಎಂಬವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ಮೂವರು ಆರೋಪಿಗಳ ಬಂಧನ

ಕಾಸರಗೋಡು: ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಗಳಾದ  ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ನಿವಾಸಿಗಳಾದ ರಿಸ್ವಾನ್ (೨೩), ಮುಹಮ್ಮದ್ ಸ್ವಾದ್(19) ಎಂಬಿವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.  14 ಹಾಗೂ 19ರ ಹರೆಯದ ಇಬ್ಬರು ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪದಂತೆ ಇವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯರನ್ನು ಆರೋಪಿಗಳು  ಸಾಮಾಜಿಕ ಜಾಲ ತಾಣಗಳಲ್ಲಿ   ಪರಿಚಯಗೊಂಡಿದ್ದರೆನ್ನ ಲಾಗಿದೆ. ಬಳಿಕ  ಬಾಲಕಿಯರನ್ನು ಉಳ್ಳಾಲದ ಲಾಡ್ಜ್‌ವೊಂದಕ್ಕೆ ಕರೆದೊ ಯ್ದು  ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿದೆ.  ಈ ಬಗ್ಗೆ ಬಾಲಕಿ ಯರು ನೀಡಿದ ದೂರಿನಂತೆ ಹೊಸದುರ್ಗ …

ಸಹೋದರರ ಜೊತೆ ಸ್ನಾನಕ್ಕಿಳಿದ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವು

ಕಾಸರಗೋಡು: ಸಹೋದರರ ಜತೆಗೆ ಕೆರೆಯಲ್ಲಿ ಸ್ನಾನಕ್ಕಿಳಿದ ವಿದ್ಯಾರ್ಥಿ ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಉದಯಗಿರಿ ಕೈಲಾಸನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೂಲತಃ ವಿದ್ಯಾನಗರ ಚಾಲ ಬಿಯೆಡ್ ಸೆಂಟರ್‌ನ ಬಳಿ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಮೊಹಮ್ಮದ್ ಝೈದ್ (16) ಸಾವನ್ನಪ್ಪಿದ ವಿದ್ಯಾರ್ಥಿ. ಈತನ ಕುಟುಂಬ ಈಗ ಉದಯಗಿರಿ ಕೈಲಾಕನಗರದಲ್ಲಿನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದೆ. ಮೊಹಮ್ಮದ್ ಝೈದ್ ಮತ್ತು ಆತನ ಇಬ್ಬರು ಸಹೋದರರು ಇಂದು ಬೆಳಿಗ್ಗೆ ಉದಯಗಿರಿ ಬಳಿ ಕೆರೆಯೊಂದಕ್ಕೆ ಸ್ನಾನಕ್ಕಿಳಿದಾಗ ಮೊಹಮ್ಮದ್ ಝೈದ್ ನೀರಿನಲ್ಲಿ ಮುಳುಗಿ …

ವರ್ಕಾಡಿಯಲ್ಲಿ ವಿಶ್ವಹಿಂದೂ ಪರಿಷತ್‌ನಿಂದ ಪಂಜಿನ ಮೆರವಣಿಗೆ

ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವರ್ಕಾಡಿ ಖಂಡ ಸಮಿತಿ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪಂಜಿನ ಮೆರವಣಿಗೆ ಸುಂಕದಕಟ್ಟೆ ಅಯ್ಯಪ್ಪ ಭಜನಾ ಮಂದಿರದಿAದ ಹೊರಟು ಮಜೀರ್ಪಳ್ಳ ಪೇಟೆ ತನಕ ನಡೆಯಿತು.ಕಾರ್ಯಕ್ರಮದಲ್ಲಿ ಕಣ್ಣೂರು ವಿಭಾಗ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಕಾಸರಗೋಡು ಜಿಲ್ಲಾ ಉಪಾಧ್ಯಕ್ಷೆ ಮೀರಾ ಆಳ್ವ, ಕಾಸರಗೋಡು ಜಿಲ್ಲಾ ದುರ್ಗಾವಾಹಿನಿ ಸಂಯೋಜಕಿ ಸೌಮ್ಯ ಪ್ರಕಾಶ್, ವಿಶ್ವ ಹಿಂದೂ ಪರಿಷತ್ ವರ್ಕಾಡಿ ಖಂಡ ಸಮಿತಿಯ ಅಧ್ಯಕ್ಷ ಅಶೋಕ್ ತಾಮಾರ್, ಕಾರ್ಯದರ್ಶಿ ಅಧೀಶ್, ಬಜರಂಗದಳ ಸಂಯೋಜಕ …