ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಯುವಕನ ಸಾವಿಗೆ ಕಾರಣ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು: ಮರಣೋತ್ತರ ಪರೀಕ್ಷಾ ವರದಿ

ಕಾಸರಗೋಡು:  ವಾಹನ ಅಪಘಾತದಲ್ಲಿ ಗಾಯಗೊಂಡಿರುವುದಾಗಿ ತಿಳಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ  ಯುವಕ ಸಾವಿಗೀಡಾಗಲು ಕಾರಣ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿದೆಯೆಂದು  ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಮೂಲತಃ ಕರ್ನಾಟಕದ ಬೆಂಗಳೂರು ನಿವಾಸಿಯೂ, ಪ್ರಸ್ತುತ ಕುಂಬಳೆ ಬಳಿಯ ಕಳತ್ತೂರಿನಲ್ಲಿ ವಾಸಿಸುತ್ತಿದ್ದ ಅಸ್ಲಾಂ ಭಾಷಾ (39) ಮೃತಪಟ್ಟ ವ್ಯಕ್ತಿ. ಇವರು ಅರ್ಬುದ ರೋಗಿಯಾಗಿದ್ದರೆಂದು ಹೇಳಲಾಗುತ್ತಿದೆ. ಮೂರು ದಿನಗಳ ಹಿಂದೆ ಇವರು ಕಾಲಿಗೆ ಗಾಯಗೊಂಡ ಸ್ಥಿತಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿದ್ದರು.  ವಾಹನ ಅಪಘಾತದಲ್ಲಿ ಗಾಯಗೊಂಡಿರುವುದಾಗಿ ಅಸ್ಲಾಂ ಭಾಷಾ  ಆಸ್ಪತ್ರೆ …

ಅಕ್ರಮ ಹಣ ವರ್ಗಾವಣೆ ಪ್ರಕರಣ: 3.28 ಕೋಟಿ ರೂ.ಲಂಚ ಸ್ವೀಕಾರ ಆರೋಪ: ಕಾನೂನಿನ ಪದ್ಮವ್ಯೂಹದಲ್ಲಿ ಸಿಲುಕಿಕೊಂಡ ಪಿಣರಾಯಿ ವಿಜಯನ್

ಕೊಚ್ಚಿ: ಕೊಚ್ಚಿ ಕೇಂದ್ರೀಕರಿಸಿ ಕಾರ್ಯವೆಸಗುತ್ತಿರುವ ಗಣಿ ಕಂಪೆನಿಯಾದ ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಹಾಗೂ  ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ  ವೀಣಾ ವಿಜಯನ್  ಮಾಲಕತ್ವದಲ್ಲಿರುವ  ಎಕ್ಸಾಲೋಜಿಕ್ ಸೊಲ್ಯೂಶನ್ ಸಂಸ್ಥೆಯ ಮಧ್ಯೆ ನಡೆದಿದೆ ಎನ್ನಲಾಗಿರುವ  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ  ವೀಣಾ ವಿಜಯನ್  ಮೂಲಕ ಪಿಣರಾಯಿ ವಿಜಯನ್ 3.28 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದೂ ಅದರ ಹೆಸರಲ್ಲಿ ಪಿಣರಾಯಿ ವಿಜಯನ್‌ರ ವಿರುದ್ಧ ಭ್ರಷ್ಟಾಚಾರ ತಡೆ ಕಾನೂನು ಪ್ರಕಾರ ಕೇಸು ದಾಖಲಿಸಬೇಕೆಂದು ಈ ಪ್ರಕರಣದ …

ಮೀನುಗಾರಿಕೆ ವೇಳೆ ಕಾರ್ಮಿಕ ದೋಣಿಯಲ್ಲಿ ಕುಸಿದುಬಿದ್ದು ಮೃತ್ಯು

ಕಾಸರಗೋಡು:  ಮೀನುಗಾರಿಕೆ ವೇಳೆ  ಕಾರ್ಮಿಕ ದೋಣಿಯಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಅಡ್ಕತ್ತಬೈಲು ಶ್ರೀ ಸತ್ಯನಾರಾಯಣ ಮಠ ಸಮೀಪ  ಕೃಷ್ಣ ನಿಲಯದ ದಿ| ಕೃಷ್ಣ ಎಂಬವರ ಪುತ್ರ ಕೆ. ಬಾಬು (60) ಮೃತ ವ್ಯಕ್ತಿ.  ಎಂಟು ಮಂದಿ ಒಳಗೊಂಡ ತಂಡ ನಿನ್ನೆ ಬೆಳಗ್ಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿತ್ತು. ಈ ವೇಳೆ ಎದೆನೋವು ಅನುಭವಗೊಂಡ ಬಾಬು ದೋಣಿಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ದಡಕ್ಕೆ ತಂದು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಬಾಬು ಅವರು ಕಾಸರಗೋಡು ಕಡಪ್ಪುರ ಶ್ರೀ ಕುರುಂಬಾ …

ಆನ್‌ಲೈನ್ ವಂಚನೆ ಪತ್ತೆಗೆ ಆಪರೇಷನ್ ಸೈ: ಉಪ್ಪಳ, ನೀಲೇಶ್ವರ ನಿವಾಸಿಗಳ ಬ್ಯಾಂಕ್  ಖಾತೆಗಳಲ್ಲಿ ಲಕ್ಷಾಂತರ ರೂ. ಪತ್ತೆ

ಕಾಸರಗೋಡು: ಆನ್‌ಲೈನ್ ಟ್ರೇಡಿಂಗ್  ಹೆಸರಲ್ಲಿ ಆನ್‌ಲೈನ್ ಸೈಬರ್ ವಂಚಕರಿಗೆ ಬಾಡಿಗೆಗೆ ಬ್ಯಾಂಕ್ ಖಾತೆ ನೀಡಿದವರ ಬಗ್ಗೆ ಪೊಲೀಸರು ನಡೆಸಿದ ತನಿಖೆಯಲ್ಲಿ  ಉಪ್ಪಳ ಮತ್ತು ನೀಲೇಶ್ವರದ ಇಬ್ಬರ  ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಲಕ್ಷಾಂತರ ರೂಪಾಯಿ ಬಂದು ಸೇರಿರುವುದನ್ನು  ಪತ್ತೆಹಚ್ಚಲಾ ಗಿದೆ.  ಇದರಂತೆ ಉಪ್ಪಳ ಕೈಕಂಬ ಬಳಿಯ ನಿವಾಸಿಯೋರ್ವನ ಎಸ್‌ಬಿಐ ಬ್ಯಾಂಕ್ ಖಾತೆಗೆ 9.10 ಲಕ್ಷ ರೂ.  ತಲುಪಿರುವುದಾಗಿ ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವ್ಯಕ್ತಿಯ ಬ್ಯಾಂಕ್ ಖಾತೆಗೆ 2026 …

ಮುಳಿಯಾರಿನಲ್ಲಿ ಮತ್ತೆ ಚಿರತೆ ಭೀತಿ

ಬೋವಿಕ್ಕಾನ: ತಿಂಗಳುಗಳ ಅಂತರದಲ್ಲಿ ಮತ್ತೆ ಮುಳಿಯಾರಿನಲ್ಲಿ ಚಿರತೆ ಭೀತಿಯುಂಟಾಗಿದೆ. ಸ್ಕೂಟರ್ ನಲ್ಲಿ ತೆರಳುತ್ತಿದ್ದವರ ಮುಂದೆ ಚಿರತೆ ಹಾರಿರುವುದಾಗಿ ಹೇಳಲಾಗುತ್ತಿದೆ. ನಿನ್ನೆ ರಾತ್ರಿ 7.30ರ ಸುಮಾರಿಗೆ  ತೀಯಡ್ಕ- ಕುಟ್ಯಾನಂ ರಸ್ತೆಯಲ್ಲಿ ಚಿರತೆ ಕಂಡುಬಂದಿ ರುವುದಾಗಿ ಹೇಳಲಾಗುತ್ತಿದೆ. ಆಸ್ಪತ್ರೆಯಿಂದ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ನಾಯಿಯನ್ನು ಕಚ್ಚಿಕೊಂಡಿದ್ದ ಚಿರತೆ ಸ್ಕೂಟರ್‌ನ ಮುಂದೆ ಹಾರಿದೆಯೆಂದು ಸವಾರ ಶಿವಪ್ರಿಯ ತಿಳಿಸಿದ್ದಾರೆ. ತಕ್ಷಣ ಸ್ಕೂಟರ್ ನಿಲ್ಲಿ ಸಿದ ಹಿನ್ನೆಲೆಯಲ್ಲಿ ಅವರು ಅಪಾಯ ದಿಂದ ಪಾರಾಗಿರುವುದಾಗಿ ತಿಳಿಸಿ ದ್ದಾರೆ.  ಇದಾದ ಬಳಿಕ ಕುಂಞಿಪ್ಪಾರ ಎಂಬಲ್ಲಿಯೂ ಸಾಕುನಾಯಿಯನ್ನು …

ಪ್ರಯಾಣದರ ಹೆಚ್ಚಿಸುವಂತೆ ಒತ್ತಾಯಿಸಿ ಬಸ್ ಮಾಲಕರಿಂದ ಚಳವಳಿಗೆ ನಿರ್ಧಾರ

ಕಲ್ಲಿಕೋಟೆ: ಕನಿಷ್ಠ ಪ್ರಯಾಣ ದರವನ್ನು 15 ರೂಪಾಯಿಗೇರಿಸುವಂತೆ ಒತ್ತಾಯಿಸಿ ರಾಜ್ಯದಲ್ಲಿ ಚಳವಳಿ ನಡೆಸಲು ಆಲ್‌ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಆರ್ಗನೈಸೇಶನ್ ತೀರ್ಮಾನಿಸಿದೆ. ಚಳವಳಿಯ ದಿನಾಂಕ ಮುಂದೆ ಘೋಷಿಸಲಾಗುವುದು. ಅದರ ಮುಂಚಿತ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಲಾಗುವುದೆಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಇರುವ ಕನಿಷ್ಠ ಪ್ರಯಾಣ ದರವನ್ನು 10 ರೂಪಾಯಿಯಿಂದ 15 ರೂಪಾಯಿಗೆ ಹೆಚ್ಚಿಸಬೇಕು, ವಿದ್ಯಾರ್ಥಿಗಳ ಕನಿಷ್ಠ ಪ್ರಯಾಣ ದರವನ್ನು ಹೆಚ್ಚಿಸಬೇಕು, ನಿರಂತರ ಇಂಧನ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳಿಗೆ ಡೀಸಲ್ …

ಯುವತಿ, ಮಗುವಿನ ಕೊಲೆ: ಆರೋಪಿ ಸೆರೆ

ಪಾಲಕ್ಕಾಡ್: ಅಟ್ಟಪ್ಪಾಡಿಯಲ್ಲಿ ಯುವತಿ ಹಾಗೂ ಮಗುವನ್ನು ಕೊಲೆಗೈದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಲ ನಿವಾಸಿಯಾದ ಪ್ರಾವತ್‌ದಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭವಾನಿ ಹೊಳೆಯಲ್ಲಿ ಮೃತದೇಹಗಳನ್ನು ಗೋಣಿಚೀಲಗಳಲ್ಲಿ ತುಂಬಿಸಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇದೇ ವೇಳೆ ಕೊಲೆಗೀಡಾದ ಯುವತಿ ತನ್ನ ಪತ್ನಿ ಅಲ್ಲವೆಂದೂ, ಎರಡು ತಿಂಗಳಿಂದ ಆಕೆಯೊಂದಿಗೆ ತಾನು ಪರಿಚಯಗೊಂಡಿ ರುವುದಾಗಿ ಆರೋಪಿ ತಿಳಿಸಿದ್ದಾನೆನ್ನಲಾ ಗಿದೆ. ಇದೇ ವೇಳೆ ಕೊಲೆ ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಆರೋಪಿಯನ್ನು ಸಮಗ್ರ ತನಿಖೆಗೊಳಪಡಿಸಿ ಈ …

4 ತಿಂಗಳ ಹಿಂದೆ ಅಭಿವೃದ್ಧಿಪಡಿಸಿದ ಲಾಲ್‌ಭಾಗ್- ಅಮ್ಮೇರಿ ರಸ್ತೆಗೆ ತೇಪೆ: ಸ್ಥಳೀಯರಿಂದ ತರಾಟೆ

ಪೈವಳಿಕೆ: ಲಾಲ್‌ಭಾಗ್-ಕುರುಡಪದವು ರಸ್ತೆಯ ಅಮ್ಮೇರಿ ತನಕ ಕಳೆದ ನಾಲ್ಕು ತಿಂಗಳ ಹಿಂದೆ ಅಭಿವೃದ್ದಿಗೊಳಿಸಿದ ರಸ್ತೆ ಒಂದೇ ಮಳೆಗೆ ಅಲ್ಲಲ್ಲಿ ಡಾಮರು ಎದ್ದÄ ಶೋಚನೀಯÁವಸ್ಥೆಗೆ ತಲುಪಿರುವುದು ಊರವರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯ ಕಾಮಗಾರಿ ಆರಂಭದ ವೇಳೆಯೇ ಕಳಪೆ ಮಟ್ಟದಲ್ಲಿ ಡಾಮರೀ ಕರಣ ನಡೆಸಿರುವುದಾಗಿ ಆರೋಪಿಸಿ ಊರವರು ಪ್ರತಿಭಟನೆ ನಡೆಸಿದ್ದರು. ರಸ್ತೆಗೆ ಮರು ಡಾಮರೀಕರಣಗೊಳಿ ಸಲು ಬೇಡಿಕೆ ಇಟ್ಟಿದ್ದರು. ಈಗ ಶೋಚನೀಯÁವಸ್ಥೆಗೆ ತಲುಪಿದ ರಸ್ತೆಗೆ ಅಲ್ಲಲ್ಲಿ ತೇಪೆ ಹಾಕುವ ಕೆಲಸ ಆರಂಭಿಸಿದ್ದಾರೆ. ಆದರೆ ತೇಪೆ ಹಾಕದೆ ಮರು ಡಾಮರೀಕರಣಗೊಳಿಸಬೇಕೆಂದು ಆಗ್ರಹಿಸಿ …

ಕಾಸರಗೋಡು ನಗರದ ಮೀನು ಮಾರುಕಟ್ಟೆ ಆಧುನಿಕ ರೀತಿಯಲ್ಲಿ ನಿರ್ಮಿಸಲು ಫಿಶರೀಸ್ ಇಲಾಖೆ ಸಚಿವರಿಗೆ ನಗರಸಭೆಯಿಂದ ಮನವಿ

ಕಾಸರಗೋಡು: ನಗರದ ಪ್ರಧಾನ ಮೀನು ಮಾರಾಟ ಕೇಂದ್ರವಾದ ನಗರಸಭೆಯ ಮಾಲಕತ್ವದಲ್ಲಿರುವ ಮೀನು ಮಾರುಕಟ್ಟೆ ಆಧುನಿಕ ಸೌಕರ್ಯಗಳೊಂದಿಗೆ ವಿಶಾಲವಾದ ಮೀನು ಮಾರುಕಟ್ಟೆ ಸಮುಚ್ಚಯವಾಗಿ ಪುನರ್ ನಿರ್ಮಿಸಬೇಕೆಂದು ಆಗ್ರಹಿಸಿ ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಶಾಸಕ ಕಲ್ಲಟ್ರ ಮಾಹಿನ್‌ರ ಉಪಸ್ಥಿತಿಯಲ್ಲಿ ಫಿಶರೀಸ್ ಇಲಾಖೆ ಸಚಿವ ವಿ.ಇ. ಅಬ್ದುಲ್ ಗಫೂರ್‌ಗೆ ಮನವಿ ನೀಡಲಾಯಿತು. ಪ್ರಸ್ತುತ ಇರುವ ಮೀನು ಮಾರುಕಟ್ಟೆಯಲ್ಲಿ ಹಲವಾರು ಮೂಲಭೂತ ಸೌಕರ್ಯ ಗಳ ಕೊರತೆಯಿಂದ ಸಂದಿಗ್ಧತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ನೇತೃತ್ವದಲ್ಲಿ ಈ ಮನವಿ ನೀಡಲಾಗಿದೆ. ರಾಜ್ಯ ಫಿಶರೀಸ್ ಬೋರ್ಡ್ …

ಮೀಯಪದವಿನಲ್ಲಿ ನಾಳೆ ಎಸ್.ವಿ ಭಟ್ ಸಂಸ್ಮರಣೆ, ಕವಿಗೋಷ್ಠಿ 

ಮೀಯಪದವು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷ, ನಿವೃತ್ತ ಶಿಕ್ಷಣ ಅಧಿಕಾರಿ ಎಸ್.ವಿ. ಭಟ್‌ರ ಸಂಸ್ಮರಣ ಕಾರ್ಯಕ್ರಮ ಮತ್ತು ಕವಿಗೋಷ್ಠಿ ನಾಳೆ ಸಂಜೆ 3.46ಕ್ಕೆ ಮೀಯಪದವು ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯ ಸಭಾಂಗಣ ‘ಕೇಶವಾಮೃತಂ’ನಲ್ಲಿ ನಡೆಯಲಿದೆ. ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ಟಿ. ಸಂಸ್ಮರಣಾ ಭಾಷಣ ಮಾಡುವರು. ಕ.ಸಾ.ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕನ್ನಡ ಲೇಖಕ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ.ಎನ್. …