ವಾಹನ ಅಪಘಾತದಲ್ಲಿ ಯುವಕ ಮೃತ್ಯು: ತಂದೆಗೆ ಗಂಭೀರ ಗಾಯ
ಕುಂಬಳೆ: ಪೆರ್ಮುದೆ -ಬಂದ್ಯೋಡು ರಸ್ತೆಯ ಪೆರ್ಮುದೆ ಪೆರಿಯಡ್ಕದಲ್ಲಿ ನಿನ್ನೆ ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಚಿಪ್ಪಾರು ಬಾಯಾರು ನೇತ್ರಗುಳಿ ನಿವಾಸಿ ಎನ್. ಕಿಶನ್ (25) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಿಶನ್ ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ವೇಳೆ ಕಿಶನ್ರ ಜತೆಗೆ ಇದ್ದ ತಂದೆ ಮಾಧವ ದೇವಾಡಿಗ (55) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಿಶನ್ ವೆಲ್ಡಿಂಗ್ ಕಾರ್ಮಿಕನಾಗಿ …