ಆಡಿಟೋರಿಯಂ ಮೆನೇಜರ್ ಬಾವಿಗೆ ಬಿದ್ದು ಮೃತ್ಯು

ಬೋವಿಕ್ಕಾನ: ಕಂಗಿನ ತೋಟಕ್ಕೆ ನೀರು ಹಾಯಿಸಲು ಹೋದ ವ್ಯಕ್ತಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಬೋವಿಕ್ಕಾನ ಸಮೀಪದ ಮುಂಡಕೈ ಕೆ.ಕೆ. ವಳಪ್ಪಿನ ಕೆ. ಚಂದ್ರನ್ (45) ಸಾವನ್ನಪ್ಪಿದ ದುರ್ದೈವಿ. ಇವರು ಇರಿಯಣ್ಣಿಯ ಕೈಲಾಸ್ ಆಡಿಟೋರಿ ಯಂನ ಮೆನೇಜರ್ ಆಗಿದ್ದರು. ಮೊನ್ನೆ ಸಂಜೆ ಅಲ್ಲಿನ ಕೆಲಸ ಮುಗಿಸಿ ಮನೆಗೆ ತೆರಳಿದ ಚಂದ್ರನ್ ತಮ್ಮ ಅಡಿಕೆ ತೋಟಕ್ಕೆ ನೀರು  ಹಾಯಿಸಲೆಂದು ಹೋಗುವ ವೇಳೆ ಆವರಣವಿಲ್ಲದ ಬಾವಿಗೆ  ಕಾಲು ಜಾರಿ ಬಿದ್ದಿದ್ದರೆನ್ನಲಾ ಗಿದೆ. ಬಾವಿಗೆ ಬಿದ್ದ ಶಬ್ದ ಕೇಳಿದ ಸಮೀಪ …

ಪೊಲೀಸರು ವಿಚಾರಣೆ ನಡೆಸಿದ ಯುವತಿ ವಿಷ ಸೇವಿಸಿ ಸಾವನ್ನಪ್ಪಿದ ಪ್ರಕರಣ: ಸಹೋದರನ ಹೇಳಿಕೆ ದಾಖಲಿಸಿದ ಪೊಲೀಸ್

ಕಾಸರಗೋಡು: ನೆರೆಮನೆಯ ಚಿನ್ನ ಕಳವಿಗೀಡಾದ ಬಗ್ಗೆ ಲಭಿಸಿದ ದೂರಿಗೆ ಸಂಬಂಧಿಸಿ ಪೊಲೀಸರು ವಿಚಾರಣೆಗೊಳಪಡಿಸಿದ ಯುವತಿ  ವಿಷಪ್ರಾಶನಗೈದು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಆಕೆಯ ಸಹೋದರನ ಹೇಳಿಕೆಯನ್ನು ವಿದ್ಯಾನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೆ ಆಕೆಯ ಹೆತ್ತವರು ಹಾಗೂ ಇತರರ ಹೇಳಿಕೆಯನ್ನು ದಾಖಲಿಸ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಆಲಂಪಾಡಿ ನಾಲತ್ತಡ್ಕದ ನಬೀಸತ್ ಜಸೀಲ (24) ಫೆ. 15ರಂದು ವಿಷ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಆಕೆಯ ಸಾವಿನ ಬಗ್ಗೆ  ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ  ಆಕೆಯ ಮನೆಯವರು ವಿದ್ಯಾನಗರ …

ಚಿನ್ನ ವ್ಯಾಪಾರಿಯನ್ನು ಕಾರಿನಲ್ಲಿ ಅಪಹರಿಸಿ 41 ಲಕ್ಷ ರೂ. ದರೋಡೆ: ಕಾಸರಗೋಡಿನ ಮೂವರ ಸೆರೆ

ಕಾಸರಗೋಡು: ಚಿನ್ನದ ವ್ಯಾಪಾರಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ೪೧ ಲಕ್ಷ ರೂ. ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡಿನ ಮೂವರನ್ನು ಕೊಯಂಬತ್ತೂರು ಕೆ.ಜಿ. ಚಾವಡಿ ಪೊಲೀಸರು ಬಂಧಿಸಿದ್ದಾರೆ. ಚೆರ್ವತ್ತೂರು ಮುಂಡಕಂಡ ವೀಥಿಕಿಳಕ್ಕೇ ವೀಟಿಲ್‌ನ ನಿತಿನ್ (33), ನೀಲೇಶ್ವರ ಚಾತಮತ್ತ್ ಮೀತಲೆ ವೀಟಿಲ್‌ನ ಶ್ರೀಕುಮಾರ್ (31) ಮತ್ತು  ನೀಲೇಶ್ವರ ಪಳ್ಳಿಕ್ಕರೆ ಕನಕವೀಟಿಲ್‌ನ ಸುಧೀಶ್ (39) ಎಂಬಿವರು ಬಂಧಿತರಾದ ಆರೋಪಿಗಳಾಗಿದ್ದಾರೆ.  ದರೋಡೆಗೈದ ಹಣದ ಪೈಕಿ 2೦,೦೦೦ ರೂ.,  ಅಪಹರಣಕ್ಕಾಗಿ ಉಪಯೋಗಿಸಲಾದ ಕಾರು ಮತ್ತು ಮೊಬೈಲ್ ಫೋನ್ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಚಿನ್ನ …

ಮುಳ್ಳೇರಿಯ: ಚಿರತೆ ಬಾವಿಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಚಿರತೆಯೊಂದು ಬಾವಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಳ್ಳೇರಿಯ ಸಮೀಪದ ಪೆರಿಯಡ್ಕದ ಆನಂದನ್ ಎಂಬವರ ಮನೆ ಬಳಿಯ ಬಾವಿಯಲ್ಲಿ ನಿನ್ನೆ ಮಧ್ಯಾಹ್ನ ಸುಮಾರು 2 ಗಂಟೆ ವೇಳೆ ಚಿರತೆ ಬಾವಿಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆ ಬಗ್ಗೆ ಮಾಹಿತಿ ಲಭಿಸಿದ ಅರಣ್ಯಪಾಲ ಕರು ಹಾಗೂ ಆರ್‌ಆರ್‌ಟಿ ತಂಡ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದ ಸಹಾಯದೊಂದಿಗೆ ಚಿರತೆಯನ್ನು ನಿನ್ನೆ ರಾತ್ರಿವೇಳೆ ಬಾವಿಯಿಂದ ಮೇಲಕ್ಕೆತ್ತಿದು. ನಂತರ ಅದನ್ನು ಅರಣ್ಯ ಇಲಾಖೆ ಕಚೇರಿಗೆ ಸಾಗಿಸಲಾಯಿತು. ಕಾರಡ್ಕ ಅರಣ್ಯವಲಯದಲ್ಲಿ ಹಲವು ದಿನಗಳ ಹಿಂದೆಯೇ ಚಿರತೆ …

ತೃಶೂರಿನಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾದ ಮೂರು ಮಂದಿ ಕುಂಬಳೆಯಲ್ಲಿ ಸೆರೆ : ಮನೆಯ ಟೆರೇಸ್ ಮೇಲೆ ಅವಿತುಕೊಂಡಿದ್ದ ಆರೋಪಿಗಳು ; ಕುಂಬಳೆ, ತೃಶೂರು ಪೊಲೀಸರ ಸಂಯುಕ್ತ ಕಾರ್ಯಾಚರಣೆ

ಕುಂಬಳೆ: ತೃಶೂರಿನಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾದ ಮೂವರು ರೌಡಿಗಳನ್ನು ಕುಂಬಳೆಯ ಮನೆಯೊಂದರ ಟೆರೆಸ್‌ನ ಮೇಲಿನಿಂದ  ಕುಂಬಳೆ ಹಾಗೂ ತೃಶೂರು ಪೊಲೀಸರು ನಡೆಸಿದ ಸಂಯುಕ್ತ ಕಾರ್ಯಾಚರಣೆಯಲ್ಲಿ ಅತೀ ಸಾಹಸಿಕ ರೀತಿಯಲ್ಲಿ ಸೆರೆಹಿಡಿಯಲಾಗಿದೆ.  ತೃಶೂರು ಕರಿಕ್ಕುಳಿ  ಅಶೇರಿ ಕಯಟ್ಟಂ ಪಣಿಗ ಎಂಬಲ್ಲಿನ ಡುಡು ಯಾನೆ ಇಜಾಸ್ (27),  ಕರುವನ್ನೂರು ನೆಡುಂಬೂರಕ್ಕಲ್ ನಿವಾಸಿ ನಿಯಾಸ್ (31), ಪೊರತ್ತಿಶ್ಶೇರಿ ಪುರಾಯಾಟ್ಟು ಪರಂಬಿಲ್ ನಿವಾಸಿ ಗೋಕುಲ್‌ಕೃಷ್ಣ (27) ಎಂಬಿವರನ್ನು ಸೆರೆಹಿಡಿಯಲಾಗಿದೆ. ಕೊಟೇಶನ್, ಕಾಪಾ, ಮಾದಕವಸ್ತು, ಹತ್ಯೆಯತ್ನ ಸಹಿತ ಹಲವು ಪ್ರಕರಣಗಳಲ್ಲಿ ಈ ಆರೋಪಿಗಳು …

ತೋಟದಲ್ಲಿ ಕೆಲಸ ನಿರತನಾಗಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

ಸೀತಾಂಗೋಳಿ: ಮುಗು ನೀರಮಟ್ಟು ಎಂಬಲ್ಲಿನ ಪಿ. ಅಬ್ದುಲ್ ಖಾದರ್ (55) ಕೆಲಸ ನಿರತನಾಗಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟರು. ಶೇಣಿ ಬಳಿಯ ಏಳ್ಕಾನದಲ್ಲಿ ಇವರು ತೋಟದಲ್ಲಿ ಮೊನ್ನೆ ಕೆಲಸ ನಿರತನಾಗಿದ್ದ ವೇಳೆ ಕುಸಿದು ಬಿದ್ದಿದ್ದರು. ಕೂಡಲೇ ಜತೆಗಿದ್ದವರು ಉಕ್ಕಿನಡ್ಕದಲ್ಲಿರುವ ಕಾಸರಗೋಡು ಜಿಲ್ಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ  ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಖೈರುನ್ನಿಸ, ಪುತ್ರ ಶಿಬಿ, ಸಹೋದರ- ಸಹೋದರಿಯರಾದ ಮುಹಮ್ಮದ್, ಹಮೀದ್, ಅಲಿಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಲೂಡೊ ಕಾಯಿನ್ ನುಂಗಿ ೮ರ ಬಾಲಕಿ ಮೃತ್ಯು

ಮಧೂರು: ಲೂಡೊ ಆಟದ ಮಧ್ಯೆ ಅದರ ಕಾಯಿನ್ ನುಂಗಿದ ಉಳಿಯತ್ತಡ್ಕ ನಿವಾಸಿಯಾದ ೮ ವರ್ಷದ ಬಾಲಕಿ ಉಸಿರುಗಟ್ಟಿ ಮೃತಪಟ್ಟಳು. ಉಳಿಯತ್ತಡ್ಕ ರಾಜೇಶ್ ಗಟ್ಟಿ- ರಾಜೇಶ್ವರಿ ದಂಪತಿ ಪುತ್ರಿಯಾದ ತನುಷ್ಕ (8) ಮೃತಪಟ್ಟ ಬಾಲಕಿ. ಕೊಲ್ಯದಲ್ಲಿ ಅಧ್ಯಾಪಿಕೆಯಾಗಿರುವ ತಾಯಿಯ ಜೊತೆ ಪುತ್ರಿ ಸಹಿತದ ಕುಟುಂಬ ವಾಸವಾಗಿದೆ. ಶನಿವಾರ ಮಧ್ಯೆ ಸಹೋದರನ ಜೊತೆ ಮನೆಯಲ್ಲಿ ಆಟವಾಡುತ್ತಿದ್ದ ಮಧ್ಯೆ ಅಜಾಗ್ರತೆಯಿಂದ ಲೂಡೊ  ಕಾಯಿನ್ ಬಾಲಕಿ ನುಂಗಿದ್ದಾಳೆ. ಉಳ್ಳಾಲದಲ್ಲಿನ ಶಾಲೆಯೊಂದರಲ್ಲಿ ಅಧ್ಯಾಪಿಕೆಯಾಗಿದ್ದಾರೆ ಬಾಲಕಿಯ ತಾಯಿ. ಇಲ್ಲಿಗೆ ಸಮೀಪದ ಬಾಡಿಕೆ ಮನೆಯಲ್ಲಿ ಇವರು ವಾಸಿಸುತ್ತಿದ್ದಾರೆ. …

ಪುತ್ತಿಗೆ ಪಂಚಾಯತ್ ಹಿಂದೂ ವಿರಾಟ್ ಸಂಗಮ: ಮನೆಮನೆ ಸಂಪರ್ಕ ಅಭಿಯಾನ

ಸೀತಾಂಗೋಳಿ: ಸೂರಂಬೈಲು ಸಾಯಿರಾಂ ನಗರದಲ್ಲಿ ಮಾರ್ಚ್ ೮ರಂದು ನಡೆಯಲಿರುವ ಪುತ್ತಿಗೆ ಪಂಚಾಯತ್ ಮಟ್ಟದ ವಿರಾಟ್ ಹಿಂದೂ ಸಂಗಮದ ಅಂಗವಾಗಿ ನಿನ್ನೆ ಮಹಾ ಸಂಪರ್ಕ ಅಭಿಯಾನ ನಡೆಯಿತು. ಶಡ್ರಂಪಾಡಿ, ಮುಗು ದೇವಸ್ಥಾನಗಳಿಂದ ಆರಂಭಗೊಂಡ ಅಭಿಯಾನ ಮುಗು, ಅನೋಡಿಪಳ್ಳ, ವಿಕಾಸ್‌ನಗರ, ಕಣ್ಣೂರು, ಸೂರಂಬೈಲು ಪ್ರದೇಶದ ಮನೆಗಳನ್ನು ಸಂಪರ್ಕಿಸಲಾ ಯಿತು. ಆಮಂತ್ರಣ ಪತ್ರ ಮತ್ತು ಓಂಕಾರ ಧ್ವಜಗಳನ್ನು ವಿತರಿಸಲಾಯಿತು. ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಕಲ್ಪೋಕ್ತ ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ ವೇಳೆ ಆಮಂತ್ರಣ ಪತ್ರ ಮತ್ತು ಧ್ವಜವನ್ನು …

ಮಿಂಚಿಪದವು ಕ್ಷೇತ್ರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ ಎಡನೀರು ಶ್ರೀಗಳಿಂದ ಉದ್ಘಾಟನೆ

ಮುಳ್ಳೇರಿಯ: ಮಿಂಚಿಪದವು ಶ್ರೀ ಕಾವೇರಿಯಮ್ಮ ಮಹಾಲಿಂಗೇಶ್ವರ ದೇಗುಲದ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ನಿನ್ನೆ ಸಂಜೆ ನಡೆದ ಧಾರ್ಮಿಕ ಸಭೆಯನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದಾಮೋದರ ಎಂ. ಅಧ್ಯಕ್ಷತೆ ವಹಿಸಿದರು. ಹಿಂದೂ ಐಕ್ಯವೇದಿ ರಾಜ್ಯ ಕಾರ್ಯಾಧ್ಯಕ್ಷ ವಲ್ಸನ್ ತಿಲ್ಲಂಗೇರಿ, ಧಾರ್ಮಿಕ ಚಿಂತಕ ಲಕ್ಷ್ಮೀಶ ಗಬ್ಲಡ್ಕ ಉಪನ್ಯಾಸ ನೀಡಿದರು. ತಲಶ್ಶೇರಿ ಚೀಫ್ ಜ್ಯುಡೀಶ್ಯಲ್ ಮೆಜಿಸ್ಟ್ರೇಟ್ ಕರುಣಾಕರ ಕೆ.ಕೆ.ಪುರ, ಮಾಜಿ ಶಾಸಕ ಬಾಲಕೃಷ್ಣ ಭಟ್ ಕೋಳಿಕ್ಕಜೆ, ಬ್ರಹ್ಮಕಲಶೋತ್ಸವ ಸಮಿತಿ …

ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ಇ. ಅಬ್ದುಲ್ಲ ಕುಂಞಿಗೆ ಗೌರವ ಡಾಕ್ಟರೇಟ್

ಕಾಸರಗೋಡು: ದೆಹಲಿ ಕೇಂದ್ರವಾಗಿ ಕಾರ್ಯಾಚರಿಸುವ ವರ್ಲ್ಡ್ ಕಲ್ಚರಲ್ ಆಂಡ್ ಎಜ್ಯುಕೇಶನಲ್ ಆರ್ಗನೈಸೇಶನ್‌ನ ಗೌರವ ಡಾಕ್ಟರೇಟ್ ಇ. ಅಬ್ದುಲ್ ಕುಂಞಿಯವರಿಗೆ ಲಭಿಸಿದೆ. ಶಿಕ್ಷಣ, ಸಾಮಾಜಿಕ ವಲಯದಲ್ಲಿ ಕೈಗೊಂಡ ಚಟುವಟಿಕೆಗಳನ್ನು ಪರಿಗಣಿಸಿ ಈ ಗೌರವ ಲಭಿಸಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಗುಲ್ಶನ್ ಗ್ರೋವರ್ ಪದವಿ ಪ್ರದಾನ ಮಾಡಿದರು. ಶಿಕ್ಷಣ, ಸಾಮಾಜಿಕ ವಲಯದಲ್ಲಿ ಇ. ಅಬ್ದುಲ್ಲ ಕುಂಞಿ ಸಕ್ರಿಯರಾಗಿದ್ದಾರೆ. ಕಾಸರಗೋಡು ಫ್ಯಾಮಿಲಿ ವೆಲ್ಫೇರ್ ಸೊಸೈಟಿ ಅಧ್ಯಕ್ಷನಾಗಿರುವ ಇವರು ರಸ್ತೆ ಅಪಘಾತಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ಹಲವಾರು ಕಾರ್ಯಗಳನ್ನು …