ಹೋಟೆಲ್ ನೌಕರ ನಿಧನ

ಉಪ್ಪಳ: ಪುತ್ತೂರು ಬೆಳ್ಳಾರೆ ನಿವಾಸಿ ಉಪ್ಪಳದಲ್ಲಿ ಹೋಟೆಲ್ ನೌಕರನಾಗಿದ್ದ ಜಯೇಂದ್ರ ಕಾಮತ್ (65) ನಿಧನ ಹೊಂದಿದರು. ಇವರು ಉಪ್ಪಳದ ತ್ರಿಭುವನ್ ಹೋಟೆಲ್‌ನಲ್ಲಿ ಕಳೆದ 20 ವರ್ಷಗಳಿಂದ ಅಡುಗೆ ತಯಾರಿ ಕೆಲಸ ಮಾಡುತ್ತಿದ್ದರು. ಹಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ಸೋಮವಾರ ಮಧ್ಯಾಹ್ನ ಉಲ್ಬಣಗೊಂಡು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಆದರೆ ರಾತ್ರಿ ನಿಧನರಾದರು. ಮೃತರು ಅವಿವಾಹಿತರಾಗಿದ್ದಾರೆ. ನಿನ್ನೆ ಸಂಜೆ ಮಂಗಲ್ಪಾಡಿ ಸೇವಾ ಭಾರತಿ ಕಾರ್ಯಕರ್ತರು ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸAಸ್ಕಾರ ನಡೆಸಿದರು. ಈ ವೇಳೆ ಮೃತರ …

ಕಂದಾಯ ಜಿಲ್ಲಾ ಶಾಲಾ ಕಲೋತ್ಸವ: ಉಪಜಿಲ್ಲೆ ಹಾಗೂ ಶಾಲಾ ಮಟ್ಟದಲ್ಲಿ ಗಳಿಸಿದ ಅಂಕಗಳು

ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವಿವಿಧ ಸ್ಪರ್ಧೆಗಳು ಮುಂದುವರಿಯುತ್ತಿದ್ದು ಇಂದು ಸಮಾಪ್ತಿಯಾಗಲಿದೆ. ನಿನ್ನೆ ರಾತ್ರಿವರೆಗೆ ನಡೆದ ಸ್ಪರ್ಧೆಗಳಲ್ಲಿ ಕಾಸರಗೋಡು ಉಪಜಿಲ್ಲೆ ೭೫೮ ಅಂಕ ಪಡೆದು ಪ್ರಥಮ ಸ್ಥಾನದಲ್ಲಿದೆ. ಹೊಸದುರ್ಗ ಉಪಜಿಲ್ಲೆ ೭೨೭, ಚೆರುವತ್ತೂರು 682 ಅಂಕ ಪಡೆದು ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡಿದೆ. ಕುಂಬಳೆ ಉಪಜಿಲ್ಲೆ, ಬೇಕಲ, ಚಿತ್ತಾರಿಕಲ್, ಮಂಜೇಶ್ವರ ಉಪಜಿಲ್ಲೆಗಳು ನಂತರದ ಸ್ಥಾನದಲ್ಲಿವೆ. ಶಾಲಾ ಮಟ್ಟದಲ್ಲಿ ಅರೆಬಿಕ್‌ನಲ್ಲಿ ಯುಪಿ ವಿಭಾಗ- ಅಲ್‌ಬುಕಾರಿಯ ಇ.ಎಂ. ಸ್ಕೂಲ್ ಕುನ್ನುಂಗೈ 30 ಅಂಕ ಪಡೆದಿದೆ. ಎಚ್‌ಎಸ್ ವಿಭಾಗದಲ್ಲಿ ಕಾಞಂಗಾಡ್ …

ಮಂಜೇಶ್ವರ ಪಂಚಾಯತ್ ಯುಡಿಎಫ್ ಆಡಳಿತ ಸಮಸ್ಯೆ ಪರಿಶೀಲಿಸಿ ಪರಿಹಾರಕ್ಕೆ ಆದ್ಯತೆ- ನೂತನ ಅಧ್ಯಕ್ಷ

ಮಂಜೇಶ್ವರ: ಪಂಚಾಯತ್‌ನಲ್ಲಿ ಯುಡಿಎಫ್ ಆಡಳಿತಕ್ಕೇರಿದೆ. ಅಧ್ಯಕ್ಷರಾಗಿ 12ನೇ ವಾರ್ಡ್ನ ಲೀಗ್ ಸದಸ್ಯ ಬಶೀರ್ ಕನಿಲ, ಉಪಾಧ್ಯಾಕ್ಷರಾಗಿ 8ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಫಾತಿಮ್ಮತ್ ಜೌರ ಆಯ್ಕೆಯಾಗಿದ್ದಾರೆ. ಪಂಚಾಯತ್ ಒಟ್ಟು 24 ವಾರ್ಡ್ ಹೊಂದಿದೆ. 14 ಯುಡಿಎಫ್, 6 ಬಿಜೆಪಿ, 1 ಪಿಡಿಪಿ, 2 ಎಸ್.ಡಿ.ಪಿ.ಐ, 1 ಸ್ವತಂತ್ರ ಸದಸ್ಯರನ್ನು ಹೊಂದಿದೆ. ಬಿಜೆಪಿಯಿಂದ ಅಧ್ಯಕ್ಷರ ಸ್ಥಾನಕ್ಕೆ ಪ್ರಕಾಶ್ ಹಾಗೂ ಉಪಾಧ್ಯಾಕ್ಷರ ಸ್ಥಾನಕ್ಕೆ ಬೇಬಿಲತಾ ಸ್ಪರ್ಧಿಸಿದ್ದು, ಪಿಡಿಪಿ, ಎಸ್.ಡಿ.ಪಿ.ಐ ಸದಸ್ಯರು ತಟಸ್ಥಗೊಂಡಿದ್ದರು. ಪಂಚಾಯತ್ ವ್ಯಾಪ್ತಿಯಲ್ಲಿ, ಶುಚೀಕರಣ, ಕುಡಿಯುವ ನೀರಿನ ಸಮಸ್ಯೆಗೆ …

ಬದಿಯಡ್ಕ ಪಂಚಾಯತ್‌ನಲ್ಲಿ ಖಾಲಿ ಹುದ್ದೆ: ಭರ್ತಿಗೊಳಿಸಲು ಅಧ್ಯಕ್ಷರಿಂದ ಮನವಿ

ಬದಿಯಡ್ಕ: ಪಂಚಾಯತ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕೆಂದು ಪಂಚಾಯತ್ ಅಧ್ಯಕ್ಷ ಶಂಕರ ಡಿ. ಆಗ್ರಹಿಸಿದ್ದಾರೆ. ಜಿಲ್ಲಾ ಅಸಿಸ್ಟೆಂಟ್ ಡೈರೆಕ್ಟರ್, ತಿರುವನಂತಪುರ ಪ್ರಿನ್ಸಿಪಲ್ ಡೈರೆಕ್ಟರ್ ಎಂಬಿವರಿಗೆ ನೀಡಿದ ಮನವಿಯಲ್ಲಿ ಇವರು ಈ ಆಗ್ರಹ ಮುಂದಿಟ್ಟಿದ್ದಾರೆ. ಅಕೌಂಟೆಂಟ್, ಸೀನಿಯರ್ ಕ್ಲರ್ಕ್, ಯುಡಿ ಕ್ಲರ್ಕ್, ಅಸಿಸ್ಟೆಂಟ್ ಇಂಜಿನಿ ಯರ್, ಓವರ್‌ಸಿಯರ್ (2) ಎಂಬಿವು ಖಾಲಿ ಇದ್ದು, ಇದರಿಂದಾಗಿ ಪಂಚಾ ಯತ್‌ಗೆ ತಲುಪುವ ಜನರಿಗೆ ಸಮಸ್ಯೆ ಯಾಗುತ್ತಿದೆ ಎಂದು ಅಧ್ಯಕ್ಷ ತಿಳಿಸಿದ್ದಾರೆ. ಮನವಿ ನೀಡುವ ವೇಳೆ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಸದಸ್ಯ …

ಮಾನ್ಯ ಶ್ರೀ ಅಯ್ಯಪ್ಪ ಮಂದಿರದಿಂದ ಕಳವು ಪ್ರಕರಣ : ತನಿಖಾಧಿಕಾರಿಗಳಿಗೆ ನಮೋ ಬ್ರಿಗೇಡ್ ತಂಡದಿಂದ ಅಭಿನಂದನೆ

ಮಾನ್ಯ: ಮಾನ್ಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ನಮೋ ಬ್ರಿಗೇಡ್ ಮಾನ್ಯ ವತಿಯಿಂದ ವಿಶೇಷ ಭಜನಾ ಸೇವೆ ಜರಗಿತು. ಈ ಸಂದರ್ಭದಲ್ಲಿ ಕಳೆದ ವರ್ಷ ಶ್ರೀಮಂದಿರದಿಂದ ಬೆಳ್ಳಿಯ ಛಾಯಾಚಿತ್ರ ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳ ಕಳವು ಪ್ರಕರಣವನ್ನು ಬೇಧಿಸಿ ಬೆಳ್ಳಿಯನ್ನು ಮರಳಿ ಪಡೆದುಕೊಳ್ಳುವಲ್ಲಿ ಯಶಸ್ಸು ಸಾಧಿಸಿದ ತನಿಖಾಕಾಧಿರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಬದಿಯಡ್ಕ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಅದಿsಕಾರಿ ಪ್ರಸಾದ್ ಬಿ.ಕೆ. ಹಾಗೂ ಮೊಹಮ್ಮದ್ ಆರಿಫ್‌ರನ್ನು ಮಂದಿರದ ಕುಂಞಪ್ಪ ಗುರುಸ್ವಾಮಿ, ರಾಮ ಗುರುಸ್ವಾಮಿ ಗೌರವಿಸಿದರು.ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ …

ಬಜಕೂಡ್ಲು ಕ್ಲಬ್ ವತಿಯಿಂದ ಜನಪ್ರತಿನಿಧಿಗಳಿಗೆ ಗೌರವ

ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಂಜೇಶ್ವರ ಬ್ಲೋಕ್, ಎಣ್ಮಕಜೆ ಪಂಚಾಯತ್‌ಗೆ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ನಡೆಯಿತು. ಕ್ಲಬ್‌ನ ಅಧ್ಯಕ್ಷ ಚಂದ್ರ ಅಮೆಕ್ಕಳ ಅಧ್ಯಕ್ಷತೆ ವಹಿಸಿದರು. ಸಮಾಜಸೇವಕ ಸದಾಶಿವ ಭಟ್ ಹರಿನಿಲಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬ್ಲೋಕ್ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾದ ವಿದ್ಯಾ ಕುಮಾರಿ, ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ ಕೃಷ್ಣಪ್ಪ ಬಜಕೂಡ್ಲುರನ್ನು ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಗೌರವಿಸಿದರು. ಕ್ಲಬ್‌ನ ಗೌರವಾಧ್ಯಕ್ಷ ಪದ್ಮನಾಭ ಸುವರ್ಣ, ಹಿರಿಯ ಸದಸ್ಯ ಮಹಾಬಲ ರೈ, ಚಂದ್ರಶೇಖರ …

ಬೇಕಲದಲ್ಲಿ ಸಂಗೀತ ಕಾರ್ಯಕ್ರಮ ವೇಳೆ ಇಂಜಿನಿಯರಿಂಗ್ ವಿದ್ಯಾರ್ಥಿ ರೈಲು ಢಿಕ್ಕಿ ಹೊಡೆದು ಮೃತ್ಯು

ಕಾಸರಗೋಡು: ಬೇಕಲ ಬೀಚ್ ಫೆಸ್ಟ್‌ನಲ್ಲಿ ನಿನ್ನೆ ರಾತ್ರಿ ನಡೆದ ವೇಡನ್‌ರ ಸಂಗೀತ ಕಾರ್ಯಕ್ರಮ ವೀಕ್ಷಿಸಲು ತಲು ಪಿದ ಇಂಜಿನಿಯರಿಂಗ್ ವಿದ್ಯಾ ರ್ಥಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೊಯಿನಾಚಿ ಪರಂಬ್ ಶಿವಮಂ ಹೌಸ್‌ನ ವೇಣುಗೋಪಾಲನ್ ನಾಯರ್ ರ ಪುತ್ರ ಎಂ. ಶಿವನಂದನ್ (19) ಮೃತಪಟ್ಟ ದುರ್ದೈವಿ.  ಇವರು ಮಂಗಳೂರಿನಲ್ಲಿ ಇಂಜಿನಿ ಯರಿಂಗ್ ವಿದ್ಯಾರ್ಥಿಯಾಗಿದ್ದರು. ನಿನ್ನೆ ರಾತ್ರಿ ೯ ಗಂಟೆ ವೇಳೆ ಘಟನೆ ನಡೆದಿದೆ. ನೆರೆಮನೆ ನಿವಾಸಿಯೂ, ಸ್ನೇಹಿತನೂ ಆದ ಪರಂಬ್ ಕುಂಡಡ್ಕ ಹೌಸ್‌ನ …

ಬೈಕ್ ತಡೆದು ನಿಲ್ಲಿಸಿ ಸವಾರನಿಗೆ ಇರಿತ : ಇಬ್ಬರು ಆರೋಪಿಗಳ ಬಂಧನ

ಉಪ್ಪಳ: ಬೈಕ್ ತಡೆದು ನಿಲ್ಲಿಸಿ ವ್ಯಕ್ತಿಗೆ ಇರಿದ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ಕರ್ನಾಟಕದ ತೌಡುಗೋಳಿ ನಿವಾಸಿ ಅಬ್ದುಲ್ ಖಾದರ್ ತನ್ಸೀಫ್ (26) ಹಾಗೂ ಕಡಂಬಾರ್‌ನ ಅಬ್ದುಲ್ ರಜಾಕ್ (40) ಎಂಬಿವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ  ಸ್ಪೆಷಲ್ ಸ್ಕ್ವಾಡ್ ಕರ್ನಾಟಕದ ತೌಡುಗೋಳಿಯಿಂದ ಸೆರೆಹಿಡಿದಿದೆ. ಆರೋಪಿಗಳು ಕಾರಿನಲ್ಲಿ ಸಂಚರಿಸು ತ್ತಿದ್ದ ವೇಳೆ ಸೆರೆಹಿಡಿಯಲಾಗಿದೆ. ಕಾರನ್ನು ಪೊಲೀಸರು ಪರಿಶೀಲಿಸಿ ದಾಗ ಅದರೊಳಗೆ ಮಾರಕಾಯು ಧಗಳು ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಉಪ್ಪಳ ಕೋಡಿಬೈಲ್ ನಿವಾಸಿ ಜಕರಿಯ (61) ಎಂಬವರಿಗೆ …

ತರವಾಡು ಮನೆಯಿಂದ ಮಸೀದಿಗೆ ತೆರಳುತ್ತಿದ್ದ ಪಂಡಿತ ವಾಹನ ಢಿಕ್ಕಿ ಹೊಡೆದು ಮೃತ್ಯು

ಕುಂಬಳೆ: ಕರ್ನಾಟಕದ ಉಪ್ಪಿನಂಗಡಿ ಆತೂರಿನಲ್ಲಿರುವ ತರವಾಡು ಮನೆಗೆ ಕಾರ್ಯಕ್ರಮ ಕ್ಕೆಂದು ಹೋದ  ಪಂಡಿತ  ಮಸೀದಿಯಲ್ಲಿ ನಮಾಜಿಗಾಗಿ ತೆರಳುತ್ತಿದ್ದ ವೇಳೆ ವಾಹನ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಕಟ್ಟತ್ತಡ್ಕ ಮುಹಿಮ್ಮಾತ್ ನಗರದಲ್ಲಿ ವಾಸಿಸುವ ಅಬ್ದುಲ್ ಖಾದರ್ ಸಖಾಫಿ (54) ಮೃತ ವ್ಯಕ್ತಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಇವರು ಆತೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮಸೀದಿಯಲ್ಲಿ ನಮಾಜಿಗಾಗಿ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಇವರಿಗೆ ಪಿಕಪ್ ವ್ಯಾನ್ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ …

ಮನೆ ಬಿಟ್ಟು ಹೋದ ಬಾಲಕಿಗೆ ಲೈಂಗಿಕ ದೌರ್ಜನ್ಯ : ನೆಕ್ರಾಜೆ ನಿವಾಸಿಗಳಾದ ಇಬ್ಬರು ಕಲ್ಲಿಕೋಟೆಯಲ್ಲಿ ಬಂಧನ

ಬದಿಯಡ್ಕ: ಮನೆಯವರೊಂದಿಗೆ ಸಿಟ್ಟುಗೊಂಡು ಹೊರಹೋದ 16ರ ಹರೆಯದ ಬಾಲಕಿಗೆ ಮಾದಕವಸ್ತು ನೀಡಿ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ನೆಕ್ರಾಜೆ ನಿವಾಸಿಗಳಾದ ಇಬ್ಬರನ್ನು ಕಲ್ಲಿಕೋಟೆ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ಚರ್ಲಡ್ಕದ ಮೊಹಮ್ಮದ್ ಶಮೀಮ್, ನೆಕ್ರಾಜೆಯ ಮೊಹಮ್ಮದ್ ರೈಸ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ತಾಮರಶ್ಶೇರಿಯ ಮೊಹಮ್ಮದ್ ಸಾಲಿಹ್, ಶಬೀರ್ ಅಲಿ ಎಂಬಿವರನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿತ್ತು. ಇತ್ತೀಚೆಗೆ 16ರ ಹರೆಯದ ಬಾಲಕಿ ಮನೆಯವರೊಂದಿಗೆ ಸಿಟ್ಟುಗೊಂಡು ಕಲ್ಲಿಕೋಟೆ ಬೀಚ್‌ಗೆ ತಲುಪಿದ್ದಳು. ಈ ವೇಳೆ ಬಾಲಕಿಯನ್ನು ಪುಸಲಾಯಿಸಿದ ಆರೋಪಿಗಳು ಸ್ನೇಹಿತನೋರ್ವನ ವಾಸ …