ಕನ್ನಡ- ತಮಿಳು ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ

ಬೆಂಗಳೂರು: ಕನ್ನಡ- ತಮಿಳು ಕಿರುತೆರೆ ನಟಿ ಸಿ.ಎಂ. ನಂದಿನಿ (26) ಯವರನ್ನು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಬಾಡಿಗೆಗೆ ವಾಸಿಸುವ ಕೆಂಗೇರಿಯ ಮನೆಯಲ್ಲಿ ನಟಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೊಠಡಿಯಿಂದ ಆತ್ಮಹತ್ಯಾ ಪತ್ರವನ್ನು ಪತ್ತೆಹಚ್ಚಲಾಗಿದೆ. ವೈಯಕ್ತಿಕ ಸಮಸ್ಯೆಗಳು ತನ್ನನ್ನು ಬೇಟೆಯಾಡುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ನಂದಿನಿಯನ್ನು ಫೋನ್ ಮೂಲಕ ಕರೆದಾಗ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ವಾಸ ಸ್ಥಳದ ಸಮೀಪ ನಿವಾಸಿಗಳಿಗೆ ತಿಳಿಸಿದ್ದು, ಅವರು ನೋಡಿದಾಗ ಕಿಟಿಕಿಗೆ ಶಾಲು ಉಪ ಯೋಗಿಸಿ ನೇಣು ಬಿಗಿದ …

ಬೇಕಲ ಫೆಸ್ಟ್‌ನಲ್ಲಿ ನೂಕುನುಗ್ಗಲು ಸಂಘಾಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು-ಎಂ.ಎಲ್. ಅಶ್ವಿನಿ

ಕಾಸರಗೋಡು: ಬೇಕಲ ಫೆಸ್ಟ್‌ನಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಹಲವರು ಗಾಯಗೊಂಡಿರುವುದು ಹಾಗೂ ಪೊಯಿನಾಚಿ ನಿವಾಸಿಯಾದ ಯುವಕ ರೈಲು ಢಿಕ್ಕಿ ಹೊಡೆದು ಸಾವಿಗೀಡಾದ ಘಟನೆಗೆ ಸಂಬಂಧಿಸಿ ಫೆಸ್ಟ್‌ನ ಸಂಘಾಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾ ಯಿಸಿದ್ದಾರೆ. ರಜಾ ಕಾಲವಾದು ದರಿಂದ ಬೇಕಲ ಫೆಸ್ಟ್‌ಗೆ ಭಾರೀ ಜನರು ಸೇರುವ ಬಗ್ಗೆ ತಿಳಿದಿದ್ದರೂ ನೂಕು ನುಗ್ಗಲು ಉಂಟಾಗುವುದನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳದಿರು ವುದು ಜಿಲ್ಲಾಡಳಿತದ ಕರ್ತವ್ಯ ಲೋಪವಾಗಿದೆ. ನವಂಬರ್ 23ರಂದು ಕಾಸರಗೋಡು ನಗರದಲ್ಲಿ ಇದೇ …

ಕಾಸರಗೋಡು ಲೀಗ್‌ನ ಅಭ್ಯರ್ಥಿ ಬಗ್ಗೆ ಚರ್ಚೆ ಸಕ್ರಿಯ: ಎನ್.ಎ. ನೆಲ್ಲಿಕುನ್ನುರಿಗೆ ಸಾಧ್ಯತೆ?

ಕಾಸರಗೋಡು: ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಸೋಲೆಂಬುದನ್ನು ಕಾಣದ ಐಕ್ಯರಂಗದ ಹಾಗೂ ಮುಸ್ಲಿಂ ಲೀಗ್‌ನ ವಿಧಾನಸಭಾ ಮಂಡಲಗಳಲ್ಲಿ ಒಂದಾಗಿದೆ ಕಾಸರಗೋಡು. ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಈ ಮಂಡಲದಲ್ಲಿ ಐಕ್ಯರಂಗ ಗಳಿಸಿದ ಮುನ್ನಡೆ, ಮಂಡಲದಲ್ಲಿ ಇಂದಿನವರೆಗೆ ಸೋಲು ಕಂಡುಬರದಿರುವುದು ಲೀಗ್‌ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ. ಟಿ.ಎ. ಇಬ್ರಾಹಿಂ, ಸಿ.ಟಿ. ಅಹಮದಾಲಿ ಜಯಗಳಿಸಿದ ಕಾಸರಗೋಡು ಮಂಡಲದಲ್ಲಿ ೧೫ ವರ್ಷದಿಂದ ಶಾಸಕ ಎನ್.ಎ. ನೆಲ್ಲಿಕುನ್ನು ಮುಂದುವರಿ ಯುತ್ತಿದ್ದಾರೆ. ಐಎನ್‌ಎಲ್‌ನ ಮುಖಂಡನಾಗಿದ್ದ ನೆಲ್ಲಿಕುನ್ನು ಕಾಸರಗೋಡು ಮಂಡಲದಿಂದ ಸ್ಪರ್ಧಿಸಿದ್ದರು. ಆ ಬಳಿಕ ಐಎನ್‌ಎಲ್ ನಿಂದ ಮಾತೃಸಂಘಟನೆಯಾದ ಮುಸ್ಲಿಂ …

ವಿವಾಹ ವಿನಂತಿ ತಿರಸ್ಕರಿಸಿದ ದ್ವೇಷದಿಂದ ಯುವತಿಯ ಕೊಲೆಗೈದ ಆರೋಪಿ ಚಿಕಿತ್ಸಾ ಕೇಂದ್ರದಿಂದ ಪರಾರಿ

ಕಲ್ಲಿಕೋಟೆ: ಪೆರಿಂದಲ್‌ಮಣ್ಣ ದೃಶ್ಯ ಕೊಲೆ ಪ್ರಕರಣದ ಆರೋಪಿ ವಿನೀಶ್ ಕುದಿರವಟ್ಟಂ ಮಾನಸಿಕ ಆರೋಗ್ಯ ಕೇಂದ್ರದಿಂದ ಪರಾರಿಯಾಗಿದ್ದಾನೆ. ಇಲ್ಲಿನ ೩ನೇ ವಾರ್ಡ್‌ನಲ್ಲಿ ವಿನೀಶ್ ಚಿಕಿತ್ಸೆಯಲ್ಲಿದ್ದನು. ಶೌಚಾಲಯದ ಗೋಡೆ ಕೊರೆದು ಈತ ಪರಾರಿಯಾಗಿದ್ದಾನೆ. ಬಳಿಕ ಆವರಣಗೋಡೆಯನ್ನು ಹಾರಿದ್ದಾನೆ. ಈತನ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿವಾಹ ವಿನಂತಿಯನ್ನು ತಿರಸ್ಕರಿಸಿದ ಪೆರಿಂದಲ್‌ಮಣ್ಣದ ದೃಶ್ಯ ಎಂಬ ಯುವತಿಯನ್ನು ಕೊಲೆಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಕಣ್ಣೂರು ಸೆಂಟ್ರಲ್ ಜೈಲ್‌ನಲ್ಲಿದ್ದ ಈತನನ್ನು ಮಾನಸಿಕ ಅಸ್ವಸ್ಥತೆ ಪ್ರಕಟಪಡಿಸಿದ ಹಿನ್ನೆಲೆಯಲ್ಲಿ ಕುದಿರವಟ್ಟಂ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ …

ಜಿಲ್ಲಾ ಶಾಲಾ ಕಲೋತ್ಸವ: ಫುಟ್ಬಾಲ್ ನಾಡಿನಲ್ಲಿ ಸಾಂಸ್ಕೃತಿಕ ಹಬ್ಬದ ಮೆರುಗು

ಕಾಸರಗೋಡು: ಇಶಾಲ್ ಗ್ರಾಮ ಅಥವಾ ಫುಟ್ಬಾಲ್ ನಾಡು ಎಂದೇ ತಿಳಿಯಲ್ಪಡುವ ಮೊಗ್ರಾಲ್ ಎಂಬ ಪ್ರದೇಶದಲ್ಲಿ ನಡೆಯುತ್ತಿರುವ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ನಾಡಿನಲ್ಲಿ ಹಬ್ಬದ ಕಳೆ ಮೂಡಿಸಿದೆ. ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ ನಿನ್ನೆಯಿಂದ ಆರಂಭಗೊಂಡು ನಾಳೆವರೆಗೆ ನಡೆಯಲಿರುವ ಈ ಕಲೋತ್ಸವದಲ್ಲಿ 4000ದಷ್ಟು ಪ್ರತಿಭೆಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವರು. ಇಶಾಲ್ ಎಂದರೆ ಸಂಗೀತಕ್ಕೆ ಸಂಬಂಧಪಟ್ಟದ್ದು ಎಂಬ ಅರ್ಥವಿದೆ. ಆದ್ದರಿಂದಲೇ ಕಲೋತ್ಸವ ವೇದಿಕೆ ಗಳಿಗೆ ಇಶಾಲ್, ಗಝಲ್, ಸಾರಂಗಿ, ಸಿತಾರ್, ಶೆಹನಾ, ಭೆರವ್, ಖಾಯಲ್, ಖವಾಲಿ, ದ್ರುಪತ್, ಮಲ್ಹರ್, ದರ್ಬಾರಿ, ಸಾಂತ್ವನಂ …

ಮಂಗಲ್ಪಾಡಿ ಪಂಚಾಯತ್‌ನಲ್ಲಿ ಮುಸ್ಲಿಂ ಲೀಗ್, ವರ್ಕಾಡಿಯಲ್ಲಿ ಯುಡಿಎಫ್ ಆಡಳಿತ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ಈ ಭಾರಿ ಮುಸ್ಲಿಂಲೀಗ್ ಅಧಿಕಾರಕ್ಕೇರಿದೆ. ಒಟ್ಟು 24 ವಾರ್ಡ್ಗಳನ್ನು ಹೊಂದಿದ್ದು, 19 ಮುಸ್ಲಿಂಲೀಗ್, 3 ಬಿಜೆಪಿ, 2 ಎಲ್.ಡಿ.ಎಫ್ ಸದಸ್ಯರನ್ನು ಹೊಂ ದಿದೆ. ನೂತನ ಅಧ್ಯಕ್ಷರಾಗಿ 2ನೇ ವಾರ್ಡ್ ಸದಸ್ಯ, ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್, ಉಪಾಧ್ಯಾಕ್ಷ ರಾಗಿ 24ನೇ ವಾರ್ಡ್ನಲ್ಲಿ ಅವಿರೋ ಧವಾಗಿ ಆಯ್ಕೆಗೊಂಡ ಮಾಜಿ ಬ್ಲೋಕ್ ಪಂಚಾಯತ್ ಅಧ್ಯಕೆÀ್ಷ ಸಮೀನ ಟೀಚರ್ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರು ಹಾಗೂ ಉಪಾಧ್ಯಾಕ್ಷರಿಗೆ ನಡೆದ ಚುನಾವಣೆಯಲ್ಲಿ …

ಪುಲ್ಲೂರು ಪೆರಿಯ ಪಂಚಾಯತ್‌ನಲ್ಲಿ ಸಿಪಿಎಂ, ಕಾಂಗ್ರೆಸ್‌ನಿಂದ ಆಡಳಿತ

ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಂiiತ್‌ನ ನೂತನ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆ ವೇಳೆ  ಎಲ್‌ಡಿಎಫ್ ಸದಸ್ಯನ  ಮತ ಅಸಿಂಧುಗೊಂಡಿದೆ. ಇದರಿಂದ ಕಲ್ಯೋಟ್ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಎಂ.ಕೆ.ಬಾಬುರಾಜ್ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿ ದ್ದಾರೆ. ಅಧ್ಯಕ್ಷ ಸ್ಥಾನ ನಿನ್ನೆ ಬೆಳಿಗ್ಗೆ ನಡೆದ ಚೀಟಿ ಎತ್ತುವಿಕೆಯಲ್ಲಿ ಸಿಪಿಎಂಗೆ ಲಭಿಸಿತ್ತು. 19 ಮಂದಿ ಸದಸ್ಯರುಳ್ಳ ಪಂಚಾಯತ್ ಆಡಳಿತ ಸಮಿತಿಯಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್‌ಗೆ ತಲಾ 9 ಮಂದಿ ಸದಸ್ಯರು, ಬಿಜೆಪಿಗೆ ಓರ್ವ ಸದಸ್ಯರಿದ್ದಾರೆ. ನಿನ್ನೆ ಬೆಳಿಗ್ಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ …

ಕಾಂಗ್ರೆಸ್‌ನೊಳಗಿನ ಆಂತರಿಕ ಕಚ್ಚಾಟ ರಾಜ್‌ಮೋಹನ್ ಉಣ್ಣಿತ್ತಾನ್‌ರ ಹೇಳಿಕೆಯಿಂದ ಪ್ರಕಟ- ಎಂ.ಎಲ್. ಅಶ್ವಿನಿ

ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಯತ್ ಅಧ್ಯಕ್ಷ ಚುನಾವಣೆಯ ಮೊದಲ ಅವಕಾಶದಲ್ಲಿ ೪ ಐಕ್ಯರಂಗದ ಜನಪ್ರತಿನಿಧಿಗಳು ದೂರವುಳಿದಿರುವುದು ಕಾಂಗ್ರೆಸ್‌ನ ಆಂತರಿಕ ಭಿನ್ನಮತೀಯ ಧೋರಣೆಯ ಮುಖವೆಂದು ಇದನ್ನು ಬಿಜೆಪಿಯ ತಲೆಗೆ ಕಟ್ಟಿಕೊಡಲು ಸಂಸದ ರಾಜ್‌ಮೋಹನ್ ಯತ್ನಿಸುತ್ತಿರುವು ದಾಗಿಯೂ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಜಿಲ್ಲೆಯಲ್ಲಿ ಲೀಗ್ ಕಾಂಗ್ರೆಸ್‌ನ್ನು ನುಂ ಗಿದ್ದು, ರಾಜ್‌ಮೋಹನ್ ಉಣ್ಣಿತ್ತಾನ್‌ರ ನಿಲುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ದೊಡ್ಡ ಮಟ್ಟಿನ ಅಸ್ವಸ್ಥತೆ ಇದೆ. ಇದನ್ನು ಮರೆಮಾಚಲು ರಾಜ್ ಮೋಹನ್ ಉಣ್ಣಿತ್ತಾನ್ ಸ್ವಂತ ಪಕ್ಷದ ಜನಪ್ರತಿನಿಧಿಗಳು, ಬಿಜೆಪಿಯೊಂದಿಗೆ ಆಂತರಿಕ …

ಬದಿಯಡ್ಕ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷೆ ಅಧಿಕಾರ ಸ್ವೀಕಾರ

ಬದಿಯಡ್ಕ: ಪಂಚಾಯತ್‌ಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ನಿನ್ನೆ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. 2ನೇ ವಾರ್ಡ್‌ನಿಂದ ಆಯ್ಕೆಯಾದ ಶಂಕರ ಡಿ. ಅಧ್ಯಕ್ಷರಾಗಿಯೂ, 13ನೇ ವಾರ್ಡ್‌ನಿಂದ ಆಯ್ಕೆಯಾದ ಅಶ್ವಿನಿ ಕೆ.ಎಂ. ಉಪಾಧ್ಯಕ್ಷೆಯಾಗಿಯೂ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವೇಳೆ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕೇರಳ ಯಾತ್ರೆ ಉದ್ಘಾಟನೆ ನಗರದಲ್ಲಿ ಧ್ವಜಾರೋಹಣ

ಕಾಸರಗೋಡು: ಕೇರಳ ಮುಸ್ಲಿಂ ಜಮಾಯತ್ ಆಶ್ರಯದಲ್ಲಿ ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್  ಮುನ್ನಡೆಸುವ ಕೇರಳ ಯಾತ್ರೆಯ ಉದ್ಘಾಟನೆ ಸಮ್ಮೇಳನ ನಡೆಯುವ ಚೆರ್ಕಳ ನೂರುಲ್ ಉಲಮಾ ನಗರದಲ್ಲಿ ಸಮಸ್ತ ದಿಂದ ಧ್ವಜಾರೋಹಣ ನಡೆಸಲಾಯಿತು.  ಸ್ವಾಗತ ಸಮಿತಿ ಅಧ್ಯಕ್ಷ ಹಕೀಂ ಹಾಜಿ ಕಳನಾಡು  ಧ್ವಜಾರೋಹಣಗೈದರು. ತಳಂಗರೆ ಮಾಲಿಕ್ ದೀನಾರ್ ನಲ್ಲಿ ನಡೆದ ಮಖಾಂ ಸಿಯಾರತ್ ಬಳಿಕ ಗಾರ್ಡ್ ಫ್ಲಾಗ್ ಮಾರ್ಚ್ ನಡೆಸಿ ಧ್ವಜವನ್ನು ನಗರಕ್ಕೆ ತಲುಪಿಸಲಾಗಿತ್ತು. ಹಲವು ಗಣ್ಯರು ಭಾಗವಹಿಸಿದರು. ಕೇರಳ ಯಾತ್ರೆಯ ಉದ್ಘಾಟನೆ ಜನವರಿ ೧ರಂದು ಸಂಜೆ ೪.೩೦ಕ್ಕೆ …