ನಗರದಲ್ಲಿ ಸಂಚರಿಸುತ್ತಿದ್ದ ಕಾರಿಗೆ ಬೆಂಕಿ: ಚಾಲಕ ಪಾರು

ಕಾಸರಗೋಡು: ಸಂಚರಿಸುತ್ತಿದ್ದ  ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಚಾಲಕ ಅದೃಷ್ಟವಶಾತ್ ಸಂಭಾವ್ಯ ಅನಾಹುತದಿಂದ ಪಾರಾದ ಘಟನೆ ನಗರದ ಪ್ರೆಸ್ ಕ್ಲಬ್ ಜಂಕ್ಷನ್ ಬಳಿ ಇಂದು ಮುಂಜಾನೆ 4 ಗಂಟೆಗೆ ನಡೆದಿದೆ. ಚೆರ್ಕಳ ನಿವಾಸಿ ಅಬ್ದುಲ್ಲ ಎಂಬವರು ಕಾರಿನಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ಹೋಗುತ್ತಿದ್ದ ವೇಳ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಬ್ದುಲ್ಲ ತಕ್ಷಣ ಕಾರು ನಿಲ್ಲಿಸಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ. ಸುಕುಮಾರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ  ಸ್ಥಳಕ್ಕೆ ದೌಡಾಯಿಸಿ  ಬೆಂಕಿ …

ಅಭ್ಯರ್ಥಿಯ ಮನೆ ಮುಂದೆ ಬಾಂಬ್ ಸ್ಫೋಟ : ನಿಗೂಢತೆ ಬಯಲಿಗೆಳೆಯಲು ಸಿಪಿಐ ಆಗ್ರಹ

ಕಾಸರಗೋಡು: ಜಿಲ್ಲಾ ಪಂಚಾಯತ್‌ನ ಬದಿಯಡ್ಕ ಡಿವಿಶನ್ ಎಡರಂಗದ ಅಭ್ಯರ್ಥಿ ಸಿಪಿಐಯ ಪ್ರಕಾಶ್ ಕುಂಬ್ಡಾಜೆ ಯವರ ಮನೆ ಮುಂಭಾಗ ನಾಡಬಾಂಬ್ ಪತ್ತೆಹಚ್ಚಿದ ಘಟನೆಯಲ್ಲಿ ನಿಗೂಢತೆಯನ್ನು ಬಯಲಿಗೆಳೆಯಬೇಕೆಂದು ಸಿಪಿಐ ಜಿಲ್ಲಾ ಕೌನ್ಸಿಲ್ ಆಗ್ರಹಿಸಿದೆ. ಮತದಾನ ದಿನವಾದ ನಿನ್ನೆ ಬೆಳಿಗ್ಗೆ ಪ್ರಕಾಶ್ ರೈಯವರ ಮನೆಯ ಸಮೀಪದ ತೋಟದಲ್ಲಿ ಭಾರೀ ಶಬ್ದದೊಂದಿಗೆ ಸ್ಫೋಟ ನಡೆದಿತ್ತು. ಶಬ್ದ ಕೇಳಿ ಜನರು ಸ್ಥಳಕ್ಕೆ ತಲುಪಿ ದಾಗ ಪ್ರಕಾಶ್‌ರ ಸಾಕುನಾಯಿ ಸತ್ತುಬಿದ್ದಿತ್ತು. ಸಮೀಪದಲ್ಲೇ ಇತರ ಮೂರು ಬಾಂಬ್‌ಗಳನ್ನು ಪತ್ತೆ ಹಚ್ಚಲಾಗಿತ್ತು. ಶಂಕೆಗೆ ಹೇತು ವಾದ ಈ ರೀತಿಯ …

ಪೆರುವಾಡ್ ಕಡಪ್ಪುರದಲ್ಲಿ ನಿಲ್ಲಿಸಿದ್ದ ದೋಣಿ, ಬಲೆ ಉರಿದು ನಾಶ

ಕುಂಬಳೆ: ಪೆರುವಾಡ್ ಕಡಪ್ಪುರದಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಫೈಬರ್ ದೋಣಿ ಹಾಗೂ ಮೀನುಗಾ ರಿಕೆಗೆ ಬಳಸುವ ಬಲೆ ಉರಿದು ನಾಶಗೊಂಡಿದೆ. ಬೆಂಕಿ ಪರಿಸರ ಪ್ರದೇಶದಲ್ಲಿ  ಹರಡಿದ್ದು, ಉಪ್ಪಳ ದಿಂದ ತಲುಪಿದ ಅಗ್ನಿಶಾಮಕದಳ, ನಾಗರಿಕರ ಸಹಾಯದೊಂದಿಗೆ ಬೆಂಕಿ ನಂದಿಸಿದೆ. ನಿನ್ನೆ ಮಧ್ಯಾಹ್ನ 12.30ರ ವೇಳೆ ಘಟನೆ ಸಂಭವಿಸಿದೆ. ಚುನಾವಣೆ ಯಾದುದರಿಂದ ನಿನ್ನೆ  ಮೀನು ಕಾರ್ಮಿ ಕರು ಸಮುದ್ರಕ್ಕೆ ತೆರಳದೆ ದೋಣಿಯನ್ನು ಕಡಲ ಕಿನಾರೆಯಲ್ಲಿ ನಿಲ್ಲಿಸಿದರು. ಕಡಲ ಕಿನಾರೆ ಬಳಿಯ ಹಿತ್ತಿಲಲ್ಲಿ ಕಸಕಡ್ಡಿ ರಾಶಿ ಹಾಕಿ ಬೆಂಕಿ …

ಕಿಂಞಣ್ಣ ರೈಯವರ ಪುತ್ರ ಕೃಷ್ಣ ಪ್ರದೀಪ್ ರೈ ನಿಧನ

ಬದಿಯಡ್ಕ: ಪ್ರಸಿದ್ಧ ಕವಿ ನಾಡೋಜ ದಿ| ಕಯ್ಯಾರ ಕಿಂಞಣ್ಣ ರೈಯವರ ಪುತ್ರ ಬದಿಯಡ್ಕ ಕಲ್ಲಕಳಿಯ ನಿವಾಸಿ  ಕೃಷ್ಣ ಪ್ರದೀಪ್ ರೈ (62) ನಿಧನ ಹೊಂದಿದರು. ನಿನ್ನೆ ಬೆಳಿಗ್ಗೆ 10.30ರ ವೇಳೆ ಮನೆಯಲ್ಲಿ ಅಸ್ವಸ್ಥರಾಗಿ ನಿಧನ ಸಂಭವಿಸಿದೆ. ಮೃತರು ಪತ್ನಿ ಆರತಿ, ಪುತ್ರಿ ಪ್ರಕೃತಿ, ಸಹೋದರರಾದ ದುರ್ಗಾಪ್ರಸಾದ್ ರೈ, ಜಯಶಂಕರ ರೈ, ಶ್ರೀರಂಗ ನಾಥ್ ರೈ, ಪ್ರಸನ್ನ ರೈ, ರವಿರಾಜ್ ರೈ, ಸಹೋದರಿಯರಾದ ದೇವಕಿ ದೇವಿ, ಕಾವೇರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕರ್ನಾಟಕ ಗಡಿ ಅಭಿವೃದ್ಧಿ …

ಹಸಿರು ಕ್ರಿಯಾಸೇನೆ ಸದಸ್ಯೆಯಿಂದ ಮಾದರಿ ಪ್ರವೇಶದ್ವಾರ

ಮುಳ್ಳೇರಿಯ: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆಯಲ್ಲಿ ಬೆಳ್ಳೂರು ಹೈಯರ್ ಸೆಕೆಂಡರಿ ಶಾಲೆಯ ಬೂತ್‌ಗೆ ತಲುಪಿದ ಮತ ದಾರರನ್ನು ಹಸಿರು ಕ್ರಿಯಾಸೇನೆಯ ಕಾರ್ಯಕರ್ತೆಯರು ಸಿದ್ಧಪಡಿಸಿದ ಮನೋಹರವಾದ ಪ್ರವೇಶದ್ವಾರ ಸ್ವಾಗತಿಸಿದೆ. ಈ ಪ್ರವೇಶದ್ವಾರ ಸಿದ್ಧಪಡಿಸುವುದಕ್ಕೆ ಬೆಳ್ಳೂರು ಪಂಚಾಯತ್‌ನ 11ನೇ ವಾರ್ಡ್ ನಾಟೆಕಲ್ಲು ನಿವಾಸಿ 48 ವರ್ಷದ ಚಂದ್ರಾವತಿ ಮುಂಚೂಣಿಯಲ್ಲಿದ್ದರು. ಹಸಿರು ಕಾಯ್ದೆಯನ್ನು ಪಾಲಿಸಿ ಕೊಂಡು ಮಾದರಿ ಚುನಾವಣೆ ನಡೆಸಿದ ಬೂತ್ ಆಗಿದೆ ಇದು. ಇಲ್ಲಿ ವಿಭಿನ್ನ ರೀತಿಯಲ್ಲಿ ಪ್ರವೇಶದ್ವಾರವನ್ನು ಅಲಂಕರಿಸಬೇಕು ಎಂಬ ತೀರ್ಮಾನದ ಹಿನ್ನೆಲೆಯಲ್ಲಿ ಚಂದ್ರಾವತಿ ಈ ಪ್ರವೇಶದ್ವಾರದ ಹೊಣೆಗಾರಿಕೆಯನ್ನು ವಹಿಸಿಕೊಂಡಿ …

ಧನಲಕ್ಷ್ಮಿ ಲಾಟರಿಯ 30 ಲಕ್ಷ ರೂ. ನ್ಯೂ ಲಕ್ಕಿ ಸೆಂಟರ್‌ನಲ್ಲಿ ಮಾರಾಟ ಮಾಡಿದ ಟಿಕೆಟ್‌ಗೆ

ಕಾಸರಗೋಡು: ಕೇರಳ ರಾಜ್ಯ ಲಾಟರಿಯ 10-12-2025ರಂದು ಡ್ರಾ ನಡೆಸಿದ ಧನಲಕ್ಷ್ಮಿ ಲಾಟರಿಯ ದ್ವಿತೀಯ ಬಹುಮಾನವಾದ 30 ಲಕ್ಷ ರೂ. ಕಾಸರಗೋಡು ನ್ಯೂ ಲಕ್ಕಿ ಸೆಂಟರ್‌ನಿಂದ ಮಾರಾಟ ಮಾಡಿದ DZ 678245 ನಂಬ್ರದ  ಟಿಕೆಟ್‌ಗೆ ಲಭಿಸಿದೆ. ಇಲ್ಲಿಂದ ಮಾರಾಟ ಮಾಡಿದ ಟಿಕೆಟ್‌ಗಳಿಗೆ ಈ ಮೊದಲೂ ಕೂಡಾ ಹಲವು ಬಹುಮಾನಗಳು ಲಭಿಸಿತ್ತು. ಕ್ರಿಸ್ಮಸ್ ನ್ಯೂ ಇಯರ್ ಟಿಕೆಟ್‌ಗಳು ಇಲ್ಲಿಂದ ಲಭ್ಯವಿದ್ದು, ಪ್ರಥಮ ಬಹುಮಾನ 20 ಕೋಟಿ ರೂ. ಆಗಿದೆ. ದ್ವಿತೀಯ ಬಹುಮಾನವಾಗಿ 1 ಕೋಟಿ ರೂ., ತೃತೀಯ ಬಹುಮಾನವಾಗಿ 10 …

ಜಿಲ್ಲೆಯಲ್ಲಿ 4 ಪಂಚಾಯತ್‌ಗಳಲ್ಲಿ ಬಹುಮತವಿಲ್ಲದ ಸ್ಥಿತಿ ನಿರ್ಮಾಣವಾಗಲಿದೆ ಎಂದು ರಾಜಕೀಯ ತಜ್ಞರ ನಿರೀಕ್ಷೆ

ಕಾಸರಗೋಡು: ಅತ್ಯಂತ ತೀವ್ರ ಪೈಪೋಟಿ ಕಂಡು ಬಂದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯ 4 ಪಂಚಾಯತ್‌ಗಳಲ್ಲಿ ಸಮಾನ ವಾರ್ಡ್‌ಗಳಲ್ಲಿ ಗೆಲ್ಲಲು ಸಾಧ್ಯವಿದೆ ಎಂದು ಸೂಚನೆ ಲಭಿಸಿದೆ. ಜಿಲ್ಲೆಯ ಚುನಾವಣಾ ರಂಗವನ್ನು ಸೂಕ್ಷ್ಮವಾಗಿ ಅವಲೋಕಿಸುವ ಸ್ವತಂತ್ರ ರಾಜಕೀಯ ನಿರೀಕ್ಷಕರು ಈ ವಿಷಯ ತಿಳಿಸಿದ್ದಾರೆ. ರಾಜ್ಯದ ಗಡಿ ಪಂಚಾಯತ್‌ಗಳಾದ ಪೈವಳಿಕೆ, ವರ್ಕಾಡಿ, ಮೀಂಜ, ಮಂಜೇಶ್ವರ ಎಂಬೀ ಗ್ರಾಮ ಪಂಚಾಯತ್‌ಗಳಲ್ಲಿ  ಯಾರಿಗೂ ಬಹುಮತವಿಲ್ಲದ ಸ್ಥಿತಿ ಉಂಟಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು …

ಕೌತುಕ ತಂದ ತ್ರಿವಳಿ ಸಹೋದರಿಯರ ಮತದಾನ

ಮುಳಿಯಾರು: ಪಂಚಾಯತ್‌ನ  ಇರಿಯಣ್ಣಿ ಜಿವಿಎಚ್‌ಎಸ್‌ಎಸ್ ಬೂತ್‌ಗೆ ತಲುಪಿದ ಮೂವರು ಯುವತಿಯರನ್ನು ಕಂಡು ಮತದಾರರು ಹಾಗೂ ಅಧಿಕಾರಿಗಳಿಗೆ ಕೌತುಕ ಮೂಡಿತು. ತ್ರಿವಳಿ ಸಹೋದರಿಯರಾದ ಇವರು ಜೊತೆಯಾಗಿ ಬಂದು ಮತದಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದರು. ಇರಿಯಣ್ಣಿ ಬೇಪು ನಿವಾಸಿ ಗಂಗಾಧರನ್- ರೋಹಿಣಿ ದಂಪತಿಯ ಪುತ್ರಿಯರಾಗಿದ್ದಾರೆ. ರಂಜಿಶ, ರಂಜಿಮ, ರಂಜಿತ ಎಂಬ ಹೆಸರಿನ ಈ ಮೂವರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರೂ, ಮತದಾನ ಮಾಡಲು ಏಕ ಸಮಯದಲ್ಲಿ ಬೂತ್‌ಗೆ ತಲುಪಿರುವುದು ನೋಡುಗರಿಗೆ ಆಶ್ಚರ್ಯ ಸೃಷ್ಟಿಸಿತು.

ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರ ವಾರ್ಷಿಕೋತ್ಸವ

ಬದಿಯಡ್ಕ: ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರದ 51ನೇ ವಾರ್ಷಿಕೋತ್ಸವ ನಿನ್ನೆ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಿತು. ಬೆಳಿಗ್ಗೆ 6.30ಕ್ಕೆ ಧ್ವಜಾರೋಹಣ, ಗಣಪತಿ ಹವನ, ಜರಗಿತು. ಮಂದಿರದ ಅಧ್ಯಕ್ಷ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ನೇತೃತ್ವ ವಹಿಸಿದರು. ವಿವಿಧ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಅಪರಾಹ್ನ 2ರಿಂದ ಭಜನೆ, ದೀಪ ಪ್ರತಿಷ್ಠೆ, ರಾತ್ರಿ ಮಹಾಪೂಜೆ ಜರಗಿತು.

ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಯಶಸ್ವಿಗೆ ಮೊಗ್ರಾಲ್ ಶಾಲೆಯ ಪೂರ್ವ ವಿದ್ಯಾರ್ಥಿಗಳು ರಂಗಕ್ಕೆ

ಕಾಸರಗೋಡು: ಮೊಗ್ರಾಲ್‌ಗೆ ಇದೇ ಪ್ರಥಮವಾಗಿ ತಲುಪಿದ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ವನ್ನು ಇತಿಹಾಸ ಪೂರ್ಣಗೊಳಿಸಲು ಪೂರ್ವ ವಿದ್ಯಾರ್ಥಿಗಳು ರಂಗಕ್ಕಿಳಿದಿ ದ್ದಾರೆ. ಹಲವಾರು ಕವಿಗಳಿಗೆ, ಕಲಾ ಪ್ರತಿಭೆಗಳಿಗೆ ಮೊಗ್ರಾಲ್ ಜನ್ಮ ನೀಡಿದ್ದು, ಇಶಲ್ ಗ್ರಾಮ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ತಿಂಗಳ 29, 30, 31ರಂದು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ ನಡೆಯಲಿದೆ. ಇದರ ಯಶಸ್ವಿಗಾಗಿ 1989-90 ರ ಎಸ್‌ಎಸ್‌ಎಲ್‌ಸಿ ಬ್ಯಾಚ್ ಮೊದಲ ಹಂತದ ಸಹಾಯವಾಗಿ 55,555 ರೂ.ಗಳ ಚೆಕ್‌ನ್ನು ಪ್ರಧಾನ …