ಆನ್‌ಲೈನ್ ಆರ್ಥಿಕ ವಂಚಕರಿಗೆ ಬಾಡಿಗೆಗೆ ಬ್ಯಾಂಕ್ ಖಾತೆ ನೀಡುವಿಕೆ: ಆಪರೇಶನ್ ಸೈ ಹಂಟ್ ಪ್ರಕಾರ ವ್ಯಾಪಕ ದಾಳಿ; ಜಿಲ್ಲೆಯಲ್ಲಿ 36 ಪ್ರಕರಣ ದಾಖಲು , 34 ಮಂದಿ ಸೆರೆ

ಕಾಸರಗೋಡು: ಆನ್‌ಲೈನ್ ಮೂಲಕ ಆರ್ಥಿಕ ವಂಚನೆ ನಡೆಸುತ್ತಿರುವ ವಂಚಕರಿಗಾಗಿ ಬಾಡಿಗೆಗೆ ಬ್ಯಾಂಕ್ ಖಾತೆ ನೀಡುವವರನ್ನು ಪತ್ತೆಹಚ್ಚಲು ಆಪರೇಶನ್ ಸೈ-ಹಂಟ್ ಎಂಬ ಹೆಸರಲ್ಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ಆರಂಭಿಸಿದ್ದು, ಇದರಂತೆ ನಿನ್ನೆ ತನಕ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 36 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ ಅತೀ ಹೆಚ್ಚು ಎಂಬಂತೆ ಕಾಸರಗೋಡು ಪೊಲೀಸ್ ಠಾಣೆಯಲ್ಲಿ 12 ಪ್ರಕರಣಗಳು ದಾಖಲುಗೊಂಡಿವೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ನೀಡಿದ ನಿರ್ದೇಶ ಪ್ರಕಾರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಮತ್ತು ಸೈಬರ್ ಸೆಲ್‌ನ ಸಹಾಯದೊಂದಿಗೆ ಎಎಸ್‌ಪಿ …

ನಿವೃತ್ತ ಪ್ರಧಾನ ಅಧ್ಯಾಪಿಕೆ ನಿಧನ

ಸ್ವರ್ಗ: ನಿವೃತ್ತ ಪ್ರಧಾನ ಅಧ್ಯಾಪಿಕೆ ಸ್ವರ್ಗ ನಿವಾಸಿ ಶೀಲಾವತಿ (62) ನಿಧನ ಹೊಂದಿದರು. ಪಾಣಾಜೆ ಸರಕಾರಿ ಶಾಲೆಯ ಪ್ರಧಾನ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತಿ ಅಚ್ಯುತ ಸ್ವರ್ಗ (ಕಾಂಗ್ರೆಸ್ ಕಾರ್ಯಕರ್ತ, ಮಕ್ಕಳಾದ ಶ್ರೀದೇವಿ, ಜಯಪದ್ಮ, ಉದಯರಾಜ್, ಪ್ರೇಮಲತ, ಅಳಿಯಂದಿರಾದ ನವೀನ್ ಕುಮಾರ್ ಬಾಡೂರು, ದಿಲೀನ್, ದಿವಾಕರ ಬಾಡೂರು, ಸೊಸೆ ಶ್ರೀದೇವಿ ಅಡ್ಯನಡ್ಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ವಿನಯ ಯೂತ್ ಕ್ಲಬ್ ಬಾಡೂರು ಸಂತಾಪ ಸೂಚಿಸಿದೆ.

ಬದಿಯಡ್ಕದಲ್ಲಿ ಬಸ್ ನಿಲ್ದಾಣ, ಬೋಳುಕಟ್ಟೆ ಮೈದಾನ ಆಧುನೀಕರಣ ಸಹಿತ ವಿವಿಧ ಅಭಿವೃದ್ಧಿ ಗುರಿಯಿರಿಸಿದ  ಪಂಚಾಯತ್ ಬಜೆಟ್ ಮಂಡನೆ

ಬದಿಯಡ್ಕ: ಪೇಟೆಯಲ್ಲಿ ಆಧುನಿಕ ಸೌಕರ್ಯವಿರುವ ಬಸ್ ನಿಲ್ದಾಣ, ಬೋಳುಕಟ್ಟೆ ಮೈದಾನವನ್ನು ಆಧುನೀಕರಣಗೊಳಿಸುವುದು, ಕುಡಿಯುವ ನೀರು, ಕೃಷಿ, ರಸ್ತೆ ಸಹಿತ ಸಮಗ್ರ ಅಭಿವೃದ್ಧಿಯನ್ನು ಗುರಿಯಿರಿಸಿ ಬದಿಯಡ್ಕ ಪಂಚಾಯತ್ ಬಜೆಟ್ ಮಂಡಿಸಲಾಗಿದೆ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ವಿಕಸಿತ ಬದಿಯಡ್ಕ ಧ್ಯೇಯವಾಕ್ಯದೊಂದಿಗೆ ಮಂಡಿಸಿದ ಬಜೆಟ್‌ನಲ್ಲಿ 50,10,466,48 ರೂ. ಆದಾಯ ಹಾಗೂ 43,15,171,98 ರೂ. ಖರ್ಚು ಅಂದಾಜಿಸಲಾಗಿದೆ. 69529450 ರೂ. ಉಳಿದಾಯ ನಿರೀಕ್ಷಿಸಲಾಗಿದೆ. ವಿವಿಧ ಹೊಳೆಗಳಿಗೆ ಅಣೆಕಟ್ಟು, ಹಿರಿಯರಿಗೆ ಮನೆ ಬಾಗಿಲಿಗೆ ಚಿಕಿತ್ಸೆ ಮೊದಲಾದವು ಬಜೆಟ್‌ನ ಪ್ರಮುಖ ಅಂಶಗಳಾಗಿವೆ. ಪಂಚಾಯತ್ ಅಧ್ಯಕ್ಷ ಶಂಕರ …

ಮಲಯಾಳ ಭಾಷಾ ಮಸೂದೆಗೆ ರಾಜ್ಯಪಾಲರ ಅಂಕಿತ: ಕಳವಳಗೊಂಡಿರುವ ಕಾಸರಗೋಡು ಕನ್ನಡಿಗರಿಂದ ಪ್ರತಿಭಟನೆ ತೀರ್ಮಾನಿಸಲು 10ರಂದು ಸಭೆ

ಕಾಸರಗೋಡು : ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿAದ ಹತ್ತನೇ ತರಗತಿಯ ತನಕ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಕೇರಳ ಸರಕಾರದ ಮಲಯಾಳ ಭಾಷಾ ಮಸೂದೆಗೆ ಕೇರಳ ರಾಜ್ಯಪಾಲರು ಸಹಿ ಹಾಕಿರುವುದಕ್ಕೆ ಕಾಸರಗೋಡಿನಲ್ಲಿ ಸೇರಿದ ವಿವಿಧ ಕನ್ನಡ ಪರ ಸಂಸ್ಥೆಗಳ ಪ್ರತಿನಿಧಿಗಳ ಸಭೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಮಸೂದೆಯ ವ್ಯಾಪ್ತಿಯಿಂದ ಕಾಸರಗೋಡನ್ನು ಹೊರತುಪಡಿಸಬೇಕೆಂದು ಸಭೆ ಒತ್ತಾಯಿಸಿದೆ. ಕನ್ನಡ ಮಾಧ್ಯಮ ಮಾತ್ರ ಇರುವ ಕಾಸರಗೋಡಿನ 84 ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಮಲಯಾಳಂ ಹೇರಲು ಮಲಯಾಳ ಅಧ್ಯಾಪಕರನ್ನು ನೇಮಕ ಮಾಡಿರುವ …

ಪ್ರಾಕೃತಿಕ ದುರಂತ: ಮನೆಗಳ ನಾಶನಷ್ಟಕ್ಕೆ ಆರ್ಥಿಕ ನೆರವು ನೀಡಲು ಗ್ರೂಪ್ ಇನ್‌ಶೂರೆನ್ಸ್ ಯೋಜನೆ

ಕಾಸರಗೋಡು: ಪ್ರಾಕೃತಿಕ ದುರಂತದಿಂದ  ಮನೆಗಳಿಗೆ ಹಾನಿ ಅಥವಾ ನಾಶನಷ್ಟ ಉಂಟಾದಲ್ಲಿ ಅಂತಹವರಿಗೆ ಆರ್ಥಿಕ ಸುರಕ್ಷತೆ ಖಾತರಿಪಡಿಸಲು ಗ್ರೂಪ್ ಇನ್‌ಶೂರೆನ್ಸ್ ಯೋಜನೆ ಜ್ಯಾರಿಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ರಾಜ್ಯ ಯೋಜನಾ ಆಯೋಗದ ಸದಸ್ಯ ರವಿ ರಾಮನ್ ನೇತೃತ್ವದ ಸಮಿತಿ ಈ ಬಗ್ಗೆ ಅಧಯನ ನಡೆಸಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಮಾಡಲಾದ ಶಿಫಾರಸ್ಸುಗಳನ್ನು ಅಂಗೀಕರಿಸಿ ಅದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಂತೆ ಮಳೆ, ಪ್ರವಾಹ, ಬಿರುಗಾಳಿ ಇತ್ಯಾದಿ ಪ್ರಾಕೃತಿಕ ದುರಂತಗ ಳಿಂದಾಗಿ ಮನೆ ನಷ್ಟಹೊಂದು ವವರಿಗೆಈ ಯೋಜನೆಯಿಂದ …

ಉಪ್ಪಳ ಅಗ್ನಿಶಾಮಕ, ರಕ್ಷಣಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಸೋಂಕಾಲು ಪ್ರತಾಪನಗರದಲ್ಲಿ ನಿರ್ಮಿಸಲಾದ ಉಪ್ಪಳ ಅಗ್ನಿಶಾಮಕ ದಳ ಮತ್ತು ರಕ್ಷಣಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನಿನ್ನೆ ಸಂಜೆ ನಡೆಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಲ್‌ಲೈನ್ ಮೂಲಕ ಕಟ್ಟಡದ ಉದ್ಘಾಟನೆ ನೆರವೇರಿಸಿದರು. ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಮಹಾ ನಿರ್ದೇಶಕ ನಿತಿನ್ ಅಗರ್‌ವಾಲ್ ಐಪಿಎಸ್ ಆನ್‌ಲೈನ್‌ನಲ್ಲಿ ಸ್ವಾಗತಿಸಿದರು. ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿ, ಕಟ್ಟಡದ ಶಿಲಾಫಲಕವನ್ನು ಅನಾವರಣಗೊಳಿಸಿ ಮಾತನಾಡಿ ದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲ ತಂಙಳ್, ಮಂಗಲ್ಪಾಡಿ ಪಂಚಾಯತ್ …

ಮುಖ್ಯಮಂತ್ರಿ ವಿರುದ್ಧ ಫೇಸ್‌ಬುಕ್ ಪೋಸ್ಟ್: ಕೇಸು ದಾಖಲು

ಕಾಸರಗೋಡು: ಫೇಸ್ ಬುಕ್‌ನಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಪೋಸ್ಟ್ ಮಾಡಿದುದಕ್ಕೆ ಸಂಬಂಧಿಸಿ ಓರ್ವನ ವಿರುದ್ಧ ಕಾಸರಗೋಡು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಪ್ಪ ಪಟ್ಲಂ ಕಮ್ಮಾಡಿ ನಿವಾಸಿ ಸಿ.ಎಚ್. ಸುಬೈರ್ ಎಂಬವರು ಈ ಬಗ್ಗೆ  ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿ ಪರಪ್ಪಕಮ್ಮಾಡತ್ ನಿವಾಸಿ ರಜಾಕ್ ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಫೇಸ್ ಬುಕ್ ಮೂಲಕ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ವಿರುದ್ಧ ಅನುಚಿತ   ವಿಷಯಗಳನ್ನು ಪೋಸ್ಟ್  ಮಾಡಿದ್ದಾನೆಂದೂ ಅದಕ್ಕೆ ಸಂಬಂಧಿಸಿ ಆತನ ವಿರುದ್ಧ ಪ್ರಕರಣ …

ರಾಜ್ಯದಲ್ಲಿ ಪ್ರತೀ ವರ್ಷ ಸರಾಸರಿ 3200 ಮಕ್ಕಳು ಹೃದ್ರೋಗಿಗಳು

ಕಾಸರಗೋಡು: ರಾಜ್ಯದ ಮಕ್ಕಳಲ್ಲಿ ಇತ್ತೀಚೆಗಿನಿಂದ ಹೃದ್ರೋಗ ಹೆಚ್ಚಾಗತೊಡಗಿದೆ. ರಾಜ್ಯ ಸರಕಾರದ ಉಚಿತ ಹೃದ್ರೋಗ ಚಿಕಿತ್ಸೆ ಯೋಜನೆಯಾದ  ಹೃದ್ಯ  ಎಂಬ ಯೋಜನೆಯಲ್ಲಿ  ನೋಂದಾಯಿ ಸಲ್ಪಟ್ಟ ಲೆಕ್ಕಾಚಾರದಲ್ಲಿ ರಾಜ್ಯದಲ್ಲಿ ಪ್ರತೀ ವರ್ಷ ಜನಿಸುವ ಸರಾಸರಿ 3200  ಮಕ್ಕಳಲ್ಲಿ  ಹೃದ್ರೋಗ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ 1100 ಮಕ್ಕಳು ಗಂಭೀರ ಹೃದ್ರೋಗ ಕಾಯಿಲೆಯಿಂದ ಬಳಲುತ್ತ್ತಿರುವವ ರಾಗಿದ್ದಾರೆ. ಇಂತಹ ಗಂಭೀರ ಸ್ಥಿತಿಯಲ್ಲಿ ಹೃದ್ಯ  ಯೋಜನೆ ಪ್ರಕಾರ ಅಂತಹ ಮಕ್ಕಳಿಗೆ 24 ತಾಸುಗಳೊ ಳಗಾಗಿ ಚಿಕಿತ್ಸೆ ನೀಡಲಾಗುತ್ತಿದೆ.  ಹೃದ್ಯ  ಯೋಜನೆಯಲ್ಲಿ ಕಳೆದ ಎಂಟು ವರ್ಷದಲ್ಲಿ ನವಜಾತ ಶಿಶುಗಳಿಂದ …

ಅನಧಿಕೃತ ಹಣ ವ್ಯವಹಾರ: ರಾಜ್ಯದಲ್ಲಿ ಆಪರೇಶನ್ ಸೈಬರ್ ಹಂಟ್‌ಗೆ ಚಾಲನೆ

ಕಾಸರಗೋಡು: ಡಿಜಿಟಲ್ ಪ್ಲಾಟ್ ಫಾಂ ಮೂಲಕ ಅನಧಿಕೃತ ವಾಗಿ ಹಣ ಹಸ್ತಾಂತರಿಸುವುದನ್ನು ಪತ್ತೆಹಚ್ಚಲು ರಾಜ್ಯದಲ್ಲಿ  ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಲಾಗಿದೆ. ‘ಸೈಬರ್ ಹಂಟ್’ ಎಂಬ ಹೆಸರಲ್ಲಿ ನಡೆಯುವ ಈ ಕಾರ್ಯಾಚರಣೆಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಏಕ ಕಾಲದಲ್ಲಿ ನಡೆಯುತ್ತಿರುವ ಕಾರ್ಯಾ ಚರಣೆಗೆ ಸೈಬರ್ ಪೊಲೀಸರು ನೇತೃತ್ವ ನೀಡುತ್ತಿದ್ದಾರೆ. ಆದರೆ ಇದುವರೆಗೆ ಎಲ್ಲಿಯೂ ಕೇಸು ದಾಖಲಿಸಿಕೊಂಡ ಬಗ್ಗೆ ಮಾಹಿತಿ ಲಭಿಸಿಲ್ಲ.  ಈ ಹಿಂದೆ ಕರೆನ್ಸಿಯಾಗಿ ಅನಧಿಕೃತ ಹಣ ಹಸ್ತಾಂತರ ನಡೆಯುತ್ತಿತ್ತು. ಇದು ಪತ್ತೆಹಚ್ಚಲ್ಪಡುವ ಹಿನ್ನೆಲೆಯಲ್ಲಿ ಡಿಜಿಟಲ್ ಪ್ಲಾಟ್ …

ತಂದೆಯ ಅಪರಿಮಿತ ಮದ್ಯಪಾನ: ಪ್ಲಸ್‌ವನ್ ವಿದ್ಯಾರ್ಥಿನಿ ಕೈಯ ನರ ಕತ್ತರಿಸಿ ಆಸ್ಪತ್ರೆಯಲ್ಲಿ ದಾಖಲು

ಕಾಸರಗೋಡು: ತಂದೆಯ ಅಪರಿಮಿತ ಮದ್ಯಪಾನದಿಂದ ಮನನೊಂದು ಪ್ಲಸ್‌ವನ್ ವಿದ್ಯಾರ್ಥಿನಿ ಆತ್ಮಹತ್ಯೆಗೆತ್ನಿಸಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಡೆದಿದೆ.  ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ವಾಸಿಸುವ ೧೬ರ ಹರೆಯದ ಬಾಲಕಿ ಕೈಯ ನರ ಕತ್ತರಿಸಿ ಅಸ್ವಸ್ಥಗೊಂಡಿದ್ದು, ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಳೆ. ಬಾಲಕಿ ಅಪಾಯದಿಂದ ಪಾರಾಗಿದ್ದಾಳೆಂದು  ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ದಿನ ರಾತ್ರಿ ಈ ಘಟನೆ ನಡೆದಿದೆ.  ತಂದೆ  ಅಪರಿಮಿತವಾಗಿ ಮದ್ಯ ಸೇವಿಸುತ್ತಿರುವುದರಿಂದ ಕುಟುಂಬದಲ್ಲಿ ಉಂಟಾಗುವ ಸಮಸ್ಯೆಗಳನ್ನು ನೆನೆದು  ಬಾಲಕಿ ತೀವ್ರವಾಗಿ ನೊಂದುಕೊಂಡಿ ದ್ದಳೆನ್ನಲಾಗಿದೆ.  ಮದ್ಯ ಸೇವಿಸದಂತೆ ಹಲವು ಬಾರಿ …