ಕಾಸರಗೋಡು ದಸರಾ ಸಂಭ್ರಮ ಇಂದು

ಕಾಸರಗೋಡು: ಪೇಟೆ ಶ್ರೀ ವೆಂಕಟ್ರಮಣ ದೇವಾಲಯದ ವ್ಯಾಸಮಂಟಪದಲ್ಲಿ ಇಂದು ಸಂಜೆ 6.30 ರಿಂದ ಕಾಸರಗೋಡು ದಸರಾ ಕಾರ್ಯಕ್ರಮ ನಡೆಯಲಿದೆ. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ, ಪೇಟೆ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಜರಗಲಿದ್ದು, ಸಂಜೆ 6.30ಕ್ಕೆ ವೆಂಕಟ್ರಮಣ ಬಾಲಗೋಕುಲದ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದೆ. ಕೆ.ಎನ್. ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ದೀಪ ಪ್ರಜ್ವಲನೆಗೈಯ್ಯುವರು. ಮಂಜುನಾಥ ಮಾನ್ಯ ಉಪಸ್ಥಿತರಿರುವರು. ಗುರುಪ್ರಸಾದ್ ಕೋಟೆಕಣಿ ಪ್ರಸ್ತಾಪಿಸುವರು. ಇದೇ …

ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ. ರಾಜ ಮುಂದುವರಿಕೆ

ಚಂಡೀಘಡ್: ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ. ರಾಜ ಮುಂದು ವರಿಯುವರು. ಪ್ರಾಯಮಿತಿ ವಿಷಯದಲ್ಲಿ ಇವರಿಗೆ ರಿಯಾಯಿತಿ ನೀಡಲು ರಾಷ್ಟ್ರೀಯ ಎಕ್ಸಿಕ್ಯೂಟಿವ್ ತೀರ್ಮಾ ನಿಸಿತ್ತು. ಈ ಬಗ್ಗೆ ರಾಷ್ಟ್ರೀಯ ಕೌನ್ಸಿಲ್ ಇಂದು ಚರ್ಚೆ ನಡೆಸಿ ಅಂತಿಮ ತೀರ್ಮಾ ನ ಕೈಗೊಳ್ಳಲಿದೆ. ನೂತನ ಸೆಕ್ರೆಟರಿಯೇಟ್ ಸದಸ್ಯರನ್ನು ಕೂಡಾ ಇಂದು ತೀರ್ಮಾ ನಿಸಲಾಗುವುದು. ಕೇರಳ ಸಹಿತ ರಾಜ್ಯಗಳಲ್ಲಿ 75 ವರ್ಷ ಪೂರ್ತಿಗೊಂಡವರನ್ನು ಹೊರತುಪಡಿಸಲಾಗುವುದು ಎಂಬ ನಿಯಮ ಜ್ಯಾರಿಗೊಳಿಸಲಾಗಿತ್ತು. ಆದರೆ ಡಿ. ರಾಜರನ್ನು ಈ ವಿಷಯದಿಂದ ಹೊರತುಪಡಿಸುವ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಲಾಗುವುದು. …

ನಮ್ಮದು ಸಮಾನ ಅಂತರ ನಿಲುವು ಆದರೂ ಶಬರಿಮಲೆ ವಿಷಯದಲ್ಲಿ ನಾವು ಸರಕಾರದ ಜೊತೆ-ಎನ್‌ಎಸ್‌ಎಸ್: ಯುಡಿಎಫ್, ಬಿಜೆಪಿಗೆ ಶಾಕ್

ಚೆಂಗನಾಶ್ಶೇರಿ: ನಮ್ಮದು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾನ ಅಂತರ ಕಾಯ್ದುಕೊಳ್ಳುವ ನಿಲುವು ಆಗಿದ್ದರೂ, ಶಬರಿಮಲೆ ವಿಷಯದಲ್ಲಿ ನಾವು ರಾಜ್ಯ ಸರಕಾರದ ಜತೆಗಿದ್ದೇವೆಂದು ಎನ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ನಾಯರ್ ಹೇಳಿದ್ದಾರೆ. ಸಮಾನ ಅಂತರ ನಿಲುವಿನಲ್ಲಿ ನಾವು ಇನ್ನೂ ಅಚಲವಾಗಿಯೇ ಉಳಿದುಕೊಂಡಿದ್ದೇವೆ. ಶಬರಿಮಲೆಯ ಆಚಾರ ಮತ್ತು ನಂಬುಗೆಯನ್ನು ಸಂರಕ್ಷಿಸಲಾಗುವುದೆಂದು ರಾಜ್ಯ ಸರಕಾರ ನಮಗೆ ಭರವಸೆ ನೀಡಿದೆ. ಆ ಭರವಸೆಯನ್ನು ಸರಕಾರ ಕಾಯ್ದುಕೊಳ್ಳ ಲಿದೆಯೆಂಬ ನಂಬುಗೆನಯನ್ನು ನಾವು ಹೊಂದಿದ್ದೇವೆ. ಶಬರಿಮಲೆ ವಿಷಯದಲ್ಲಿ ಕಾಂಗ್ರೆಸ್  ಕಳ್ಳಾಟವಾಡುತ್ತಿದೆ. ಅದು ಜನರಿಗೆ ಮನದಟ್ಟಾಗಿದೆ. …

ರೈಲಿನಿಂದ ಉಡಾಯಿಸಬಹುದಾದ ಅಗ್ನಿ ಫ್ರೈಮ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ: ರೈಲುಗಳಿಂದ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯಗಳನ್ನು ಭಾರತದ ರಕ್ಷಣಾ ವಲಯ ಸಾಧಿಸಿದೆ. ಇದರಂತೆ ಎರಡುಸಾವಿರ ಕಿಲೋ ಮೀಟರ್  ವ್ಯಾಪ್ತಿ ಹೊಂದಿರುವ ಅಗ್ನಿ ಫ್ರೈಮ್ ಕ್ಷಿಪಣಿಯ ಪರೀಕ್ಷೆಯನ್ನು ಇಂದು ಯಶಸ್ವಿಯಾಗಿ ನೆರವೇರಿಸಲಾಯಿತು. ಈಸಾಧನೆಗೆ ಡಿಆರ್‌ಡಿಒ ಮತ್ತು ಸಶಸ್ತ್ರ ಪಡೆಗಳನ್ನು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅಭಿನಂದಿಸಿ ದ್ದಾರೆ. ಅಗ್ನಿ ಫ್ರೈಮ್ ಕ್ಷಿಪಣಿಯನ್ನು ರೈಲಿನಿಂದ ಯಶಸ್ವಿ ಯಾಗಿ  ಪರೀಕ್ಷಿ ಸಿದ್ದು ಇದೇ ಮೊದಲ ಬಾರಿಯಾಗಿದೆ. ಅದು ಯಶಸ್ವಿಗೊಂಡಿದೆ. ಇದು ಭಾರತದ ರಕ್ಷಣಾ ವಲಯಕ್ಕೆ ಮತ್ತಷ್ಟು ಬಲ ನೀಡಿದೆ.

ಅಡ್ಕ ಗೋಪಾಲಕೃಷ್ಣ ಭಟ್‌ರನ್ನು ಭೇಟಿಯಾದ ಎಡನೀರುಶ್ರೀ

ಕೋಟೂರು: ನಿವೃತ್ತ ಮುಖ್ಯ ಶಿಕ್ಷಕ, ಹಿರಿಯ ಯಕ್ಷಗಾನ ಕಲಾವಿದ, ಮಲೆಯಾಳ ಯಕ್ಷಗಾನದ ಪಿತಾ ಮಹರಾದ ಕೋಟೂರು ಬಳಿಯ ಅಡ್ಕ ಗೋಪಾಲಕೃಷ್ಣ ಭಟ್ (92) ಅವರನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಭೇಟಿಯಾಗಿ ಸ್ವಾಸ್ತ್ಯ ವಿಚಾರಿಸಿ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಗೋಪಾಲಕೃಷ್ಣ ಭಟ್ ಅವರು ಸ್ವಾಮೀಜಿಯವರಲ್ಲಿ ತಮ್ಮ ಕಲಾಜೀವನದ ಅನುಭವಗಳನ್ನು ವಿವರಿಸಿ ಸ್ವಾಮೀಜಿ ಯವರ ಆಗಮನಕ್ಕೆ ಸಂತೋಷ ವ್ಯಕ್ತಪಡಿಸಿದರು.

ಎಕೆಪಿಎ ಉಪ್ಪಳ ಯೂನಿಟ್ ನೂತನ ಪದಾಧಿಕಾರಿಗಳ ಆಯ್ಕೆ

ಉಪ್ಪಳ: ಆಲ್ ಕೇರಳ ಪೊಟೋ ಗ್ರಾಪರ್ಸ್ ಅಸೋಸಿಯೇಶನ್ ಉಪ್ಪಳ ಯೂನಿಟ್‌ನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಾಜೇಶ್, ಉಪಾಧ್ಯಕ್ಷರಾಗಿ ಶಿವಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ಶೃಂಗಾರ್, ಕೋಶಾಧಿಕಾರಿಯಾಗಿ ಪ್ರವೀಣ್ ರೈ, ಪಿ.ಆರ್.ಒ ರವೀಂದ್ರ ಆಚಾರ್ಯ ಹಾಗೂ ಕುಂಬಳೆ ವಲಯ ಸಮಿತಿ ಸದಸ್ಯರಾಗಿ ಸುರೇಶ್ ಅಚಾರ್ಯ, ಸಂದೇಶ್ ಐಲ, ಅಬ್ದುಲ್ ಕರೀಮ್, ಸುನಿಲ್ ಆಯ್ಕೆಯಾದರು.

ಕನ್ನಡ ಸಂಘ ಕೊಚ್ಚಿನ್ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಕನ್ನಡ ಸಂಘ ಕೊಚ್ಚಿನ್ ಇದರ ವಾರ್ಷಿಕ ಮಹಾಸಭೆ ಕೊಚ್ಚಿಯಲ್ಲಿ ಜರಗಿತು. ಸಂಘದ ಕಾರ್ಯದರ್ಶಿ ವಜ್ರಾಂಗ ವರದಿ ವಾಚಿಸಿದರು. ಕೋಶಾಧಿಕಾರಿ ವಿಷ್ಣು ತಂತ್ರಿ ಲೆಕ್ಕಪತ್ರ ಮಂಡಿಸಿದರು. ಶ್ರೀಕಾಂತ ಅನವಟ್ಟಿ ಉತ್ಸವದ ಖರ್ಚುವೆಚ್ಚಗಳ ವರದಿ ವಾಚಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀನಿವಾಸ ರಾವ್, ಉಪಾಧ್ಯಕ್ಷೆಯಾಗಿ ಚಾರುಲತಾ ಕೌಡಿ, ಕಾರ್ಯದರ್ಶಿ ಯಾಗಿ ವಜ್ರಾಂಗ (ಹರೀಶ), ಜೊತೆಕಾರ್ಯದರ್ಶಿಯಾಗಿ ಡಾ. ಪರಿಣಿತ ರವಿ, ಕೋಶಾಧಿಕಾರಿಯಾಗಿ ವಿಷ್ಣುಕುಮಾರ್ ತಂತ್ರಿ ಆಯ್ಕೆಯಾದರು.ವೇದಿನಿ ಪ್ರಾರ್ಥನೆ ಹಾಡಿದರು. ಡಾ. ಪರಿಣಿತ ರವಿ ಸ್ವಾಗತಿಸಿ, ವಂದಿಸಿದರು. ಶ್ರೀಕಾಂತ …

ತಲೆಮರೆಸಿಕೊಂಡಿದ್ದ ಕಾಪಾ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ನರಹತ್ಯಾ ಯತ್ನ ಪ್ರಕರಣ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಯುವಕನನ್ನು ಕಾಪಾ ಪ್ರಕರಣದಲ್ಲಿ ಬಂಧಿಸಲಾಗಿದೆ. ಅಜಾನೂರು ತೆಕ್ಕುಂಪುರತ್ತ್‌ನ ಟಿ.ಎಂ.ಸಮೀರ್ ಯಾನೆ ಲಾವಾ ಸಮೀರ್ (42) ಎಂಬಾತನನ್ನು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದ ಸ್ಕ್ವಾಡ್ ಹಾಗೂ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ಸೇರಿ ಸೆರೆಹಿಡಿದಿ ದ್ದಾರೆ. ಹಲವು  ಪ್ರಕರಣಗಳಲ್ಲಿ ಆರೋಪಿಯಾಗುವುದರೊಂದಿಗೆ ಸಮೀರ್ ವಿರುದ್ಧ ಕಾಪಾ ಹೇರಲಾ ಗಿತ್ತು. ಈ ವಿಷಯ ತಿಳಿದು ಸಮೀರ್ ತಲೆಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಬೆಂಗ ಳೂರು, ಮುಂಬೈ ಎಂಬಿಡೆಗಳಲ್ಲೂ ಒಮ್ಮೆ  ನೇಪಾಳದಲ್ಲೂ …

ಕಾರು ಢಿಕ್ಕಿ ಹೊಡೆದು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿಗೆ ಗಾಯ: ಅದನ್ನು ಕಂಡ ಆಟೋಚಾಲಕ ಆಸಿಡ್ ಸೇವಿಸಿ ಆತ್ಮಹತ್ಯೆ

ಕಾಸರಗೋಡು: ಆಟೋರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಆಟೋದಲ್ಲಿದ್ದ ವಿದ್ಯಾರ್ಥಿಗಳು ಗಾಯಗೊಂಡಿರುವು ದನ್ನು ಕಂಡ ಪ್ರಸ್ತುತ ಆಟೋ ಚಾಲಕ ಆಸಿಡ್ ಸೇವಿಸಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಬೇತೂರುಪಾರ ಸಮೀಪದ ಪಳ್ಳಿಂಜಿ ನಿವಾಸಿ ದಿ| ಶೇಖರನ್ ನಾಯರ್- ಕಮಲಾಕ್ಷಿ ದಂಪತಿ ಪುತ್ರ ಕೆ. ಅನೀಶ್ (40) ಸಾವನ್ನಪ್ಪಿದ ಆಟೋ ಚಾಲಕನಾಗಿದ್ದಾರೆ. ಬೇತೂರುಪಾರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮೂವರು ವಿದ್ಯಾರ್ಥಿಗಳನ್ನು ಹೇರಿ ಕೊಂಡು ಅನೀಶ್ ತನ್ನ ಆಟೋರಿಕ್ಷಾ ದಲ್ಲಿ ನಿನ್ನೆ ಬೇತೂರು ಪಾರದಿಂದ ಪಳ್ಳಂಜಿಗೆ ಹೋಗುತ್ತಿದ್ದ ದಾರಿ ಮಧ್ಯೆ ಆ …

ಶಾಲೆಯಲ್ಲಿ ಕ್ರೀಡಾ ಸ್ಪರ್ಧೆ ವೇಳೆ ವಿದ್ಯಾರ್ಥಿ ಕುಸಿದುಬಿದ್ದು ಮೃತ್ಯು

ಕುಂಬಳೆ: ಶಾಲೆಯಲ್ಲಿ ಕ್ರೀಡಾ ಸ್ಪರ್ಧೆ ನಡೆಯುತ್ತಿದ್ದಂತೆ ವಿದ್ಯಾರ್ಥಿ ಯೋರ್ವ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.  ಕುಕ್ಕಾರ್‌ನಲ್ಲಿರುವ ಮಂಗಲ್ಪಾಡಿ ಜಿಬಿಎಲ್‌ಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಹಸನ್ ರಝಾ (10) ಮೃತಪಟ್ಟ ಬಾಲಕನಾಗಿದ್ದಾನೆ. ನಿನ್ನೆ ಅಪರಾಹ್ನ ೩ ಗಂಟೆ ವೇಳೆ ಶಾಲೆಯಲ್ಲಿ ಕ್ರೀಡಾ ಸ್ಪರ್ಧೆ ನಡೆಯುತ್ತಿದ್ದಂತೆ ಈತ ಕುಸಿದು ಬಿದ್ದಿದ್ದನು. ಕೂಡಲೇ ಮಂಗಲ್ಪಾಡಿಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈತ ಮೂಲತಃ ಉತ್ತರಪ್ರದೇಶದ ಮುರ್ಶಿದಾಬಾದ್ ನಿವಾಸಿಯೂ ಕುಕ್ಕಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಇನ್ಸಾಫ್ ಅಲಿ-ಜಾಸ್ಮಿನ್ ದಂಪತಿ …