ನಿರ್ಮಾಣ ನಡೆಯುತ್ತಿದ್ದ ಕಟ್ಟಡದಿಂದ  ಬಿದ್ದು ಕಾರ್ಮಿಕ ಮೃತ್ಯು

ಯುಸೀತಾಂಗೋಳಿ: ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ.ಬೇಳ ವಳಾಂಬ ಹೌಸ್‌ನ ಫ್ರಾನ್ಸಿಸ್ ಪ್ರವೀಣ್ ಡಿ’ಸೋಜಾ (47) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಸಂಜೆ 6ಗಂಟೆಗೆ ಮುಜುಂಗಾವಿನಲ್ಲಿ  ಈ ದುರ್ಘಟನೆ ಸಂಭವಿಸಿದೆ. ಇಲ್ಲಿ ಮನೆಯೊಂದರ ನಿರ್ಮಾಣ ಕೆಲಸ ನಡೆಯುತ್ತಿದ್ದು, ಫ್ರಾನ್ಸಿಸ್ ಪ್ರವೀಣ್ ಡಿ’ಸೋಜಾ ಮೇಸ್ತ್ರಿಯ ಸಹಾಯಕನಾಗಿ  ಕೆಲಸ ನಿರ್ವಹಿಸುತ್ತಿದ್ದರು. ಕೆಲಸ ವೇಳೆ ಆಯತಪ್ಪಿಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಫ್ರಾನ್ಸಿಸ್ ಪ್ರವೀಣ್ ಡಿ’ಸೋಜಾರನ್ನು ಇತರ ಕಾರ್ಮಿಕರು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ  ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು …

ಪುತ್ರ ಚಲಾಯಿಸಿದ ಸ್ಕೂಟರ್‌ನಿಂದ ರಸ್ತೆಗೆ ಬಿದ್ದು ತಾಯಿ ಮೃತ್ಯು

ಕುಂಬಳೆ: ಪುತ್ರ ಚಲಾಯಿಸುತ್ತಿದ್ದ ಸ್ಕೂಟರ್‌ನಿಂದ ರಸ್ತೆಗೆಸೆಯಲ್ಪಟ್ಟು ತಾಯಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕುಂಬಳೆ ಸುನಾಮಿ ಕಾಲನಿಯ ಮೊಯ್ದೀನ್ ಕುಂಞಿಯವರ ಪತ್ನಿ ಹಾತಿಕ (48) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸ್ಕೂಟರ್ ಚಲಾಯಿಸುತ್ತಿದ್ದ ಪುತ್ರ ಮುಬಾರಕ್ (19) ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ೭.೩೦ರ ವೇಳೆ ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ದೇವಿನಗರ ಸರ್ವೀಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಇದರಿಂದ ಗಂಭೀರ ಗಾಯಗೊಂಡ  ಹಾತಿಕರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ …

ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದರೆ 500ರೂ. ದಂಡ

ಕಾಸರಗೋಡು: ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸು ವವರಿಗೆ ಹೇರಲಾಗುವ ಕನಿಷ್ಠ ದಂಡವನ್ನು 250 ರೂ.ನಿಂದ 5೦೦ ರೂಪಾಯಿಗೆ ಹೆಚ್ಚಿಸಲಾಗಿದೆ. ರೈಲು ಪ್ರಯಾಣ ವೇಳೆ ಟಿಕೆಟ್ ಇಲ್ಲದಿದ್ದಲ್ಲಿ ಲಾಸ್ಟ್ ಟಿಕೆಟ್ ಚೆಕ್ಕಿಂಗ್ ಪಾಯಿಂಟ್‌ನ ನಂತರದ ಮೊತ್ತ ಹಾಗೂ ಅದರೊಂದಿಗೆ 5೦೦ ರೂ. ದಂಡ ಪಾವತಿಸಬೇಕಾಗಿ ಬರಲಿದೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳವರೆಗೆ ಸಜೆ ಅಥವಾ ದಂಡ ಸಹಿತ ಸಜೆ ಅನುಭವಿಸಬೇಕಾಗಿ ಬರಲಿದೆ. ಜುಲೈ 1 ರಿಂದ ಈ ಕಾನೂನು ಜ್ಯಾರಿಗೆ ಬರಲಿದೆ. ಜನ್ ವಿಶ್ವಾಸ್ ಆಕ್ಟ್ ಪ್ರಕಾರ ಈ …

ಸರಕಾರಿ ನೌಕರರಿಗೆ ನಿರಾಸೆ ಮೂಡಿಸಿದ ಐಕ್ಯರಂಗ ಸರಕಾರದ ಬಜೆಟ್ -ಎನ್‌ಜಿಒ ಸಂಘ್

ಕಾಸರಗೋಡು: ರಾಜ್ಯ ಸರಕಾರ ಸರಕಾರಿ ನೌಕರರಿಗೆ ವಿಸ್ಮಯ ಉಂಟುಮಾಡಲಿದೆ ಎಂದು ಆಸೆ ಹೊಂದಿದ್ದವರಿಗೆ ರಾಜ್ಯ ಬಜೆಟ್ ನಿರಾಶೆ ಉಂಟುಮಾಡಿದೆ ಎಂದು ಎನ್‌ಜಿಒ ಸಂಘ್ ಆರೋಪಿಸಿದೆ. ಹಣಕಾಸು ಸಚಿವ ಹಾಗೂ ಮುಖ್ಯಮಂತ್ರಿಯಾಗಿ ರುವ ವಿ.ಡಿ. ಸತೀಶನ್‌ರ ಬಜೆಟ್ ಘೋಷಣೆ ಕೇಳಿ ಸರಕಾರಿ ನೌಕರರು ನಿರಾಸೆ ಹೊಂದಿದ್ದಾರೆ. ಎಡರಂಗ ಸರಕಾರ ತಡೆಹಿಡಿದಿದ್ದ ನೌಕರರ ಸೌಲಭ್ಯಗಳು ಹಾಗೂ ಹಕ್ಕುಗಳನ್ನು ಘೋಷಿಸಬಹುದೆಂದು ನೌಕರರು ಆಶಾಭಾವನೆ ಹೊಂದಿದ್ದರು. ಆದರೆ ಅದು ಸಫಲವಾಗಲಿಲ್ಲ. ಎಡ ಕಾಲಿನಲ್ಲಿದ್ದ ರೋಗ ಬಲ ಕಾಲಿಗೆ ಬಂತು ಎಂಬ ಸ್ಥಿತಿಯಲ್ಲಿ ಈಗ …

ಬಜೆಟ್‌ನಲ್ಲಿ ಖಾಸಗಿ ಬಸ್ ಉದ್ಯಮಕ್ಕೆ ನಿರಾಶೆ ಮಾತ್ರ- ಬಸ್ ಆಪರೇಟರ್ಸ್ ಫೆಡರೇಶನ್

ಕಾಸರಗೋಡು: ರಾಜ್ಯದ ಐಕ್ಯರಂಗ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ಬಸ್ ಮಾಲಕರಿಗೆ ಯಾವುದೇ ಪ್ರಯೋಜನ ವಿಲ್ಲವೆಂದು  ಕಾಸರಗೋಡು ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಸಮಿತಿ ದೂರಿದೆ. ಜನಮುನ್ನಡೆ ಯಾತ್ರೆಯಲ್ಲಿ ಖಾಸಗಿ ಬಸ್‌ಗಳಿಗೆ ಸಹಾಯಕವಾದ ರೀತಿಯಲ್ಲಿ ಯೋಜನೆ ಹಾಕಲಾಗುವುದೆಂದು ಹಣಕಾಸು ಸಚಿವರಾಗಿರುವ ವಿ.ಡಿ. ಸತೀಶನ್ ಹೇಳಿಕೆ ನೀಡಿದ್ದರು. ಆದರೆ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಕೆಎಸ್ ಆರ್‌ಟಿಸಿ ಸಂಚರಿಸದ ಒಳಪ್ರದೇಶಗಳ ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ಹೆದ್ದಾರಿವರೆಗೆ ತಲುಪಿ ಅಲ್ಲಿಂದ ಕೆಎಸ್‌ಆರ್‌ಟಿಸಿಯಲ್ಲಿ ಸಂಚರಿಸಲು ಆರಂಭಿಸಿದ್ದಾರೆ. ಇದರಿಂದ …

ಮುಳ್ಳೇರಿಯ ಗಾಡಿಗುಡ್ಡೆ ರಸ್ತೆಯಲ್ಲಿ ಚರಂಡಿ ಸಮಸ್ಯೆ: ಕಟ್ಟಿ ನಿಲ್ಲುವ ನೀರಿಗೆ ಪರಿಹಾರ ಕಾಣಲು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮನವಿ

ಮುಳ್ಳೇರಿಯ: ಪೇಟೆಯಿಂದ ಗಾಡಿಗುಡ್ಡೆ ಭಾಗಕ್ಕೆ ತೆರಳುವ ರಸ್ತೆಯ ಬದಿ ಚರಂಡಿ ಸಮರ್ಪಕವಾಗಿಲ್ಲದ ಕಾರಣ ಇಲ್ಲಿ ಸಮಸ್ಯೆ ತೀವ್ರಗೊಂಡಿದೆ. ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಇಲ್ಲಿನ ವ್ಯಾಪಾರಿಗಳು ಹಾಗೂ ಪಾದಚಾರಿಗಳಿಗೆ ಭಾರೀ ಸಮಸ್ಯೆ ಉಂಟುಮಾಡುತ್ತಿದೆ. ರಸ್ತೆಬದಿಯಲ್ಲಿರುವ ಚರಂಡಿಯಲ್ಲಿ ಕಸಕಡ್ಡಿಗಳು ತುಂಬಿಹೋಗಿ ಮುಚ್ಚಲ್ಪಟ್ಟಿದ್ದು, ಮಳೆನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲ.  ಹಲವು ವರ್ಷದಿಂದ ಈ ಚರಂಡಿಯನ್ನು ದುರಸ್ತಿ ನಡೆಸದ ಕಾರಣ ಈ ಭಾಗದಲ್ಲಿನ ಪ್ರಯಾಣವೇ ಸಮಸ್ಯೆಯಲ್ಲಿದೆ. ಈ ಬಗ್ಗೆ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಳ್ಳೇರಿಯ ಘಟಕ ಪಿಡಬ್ಲ್ಯುಡಿ …

ಯುಡಿಎಫ್ ಸರಕಾರದ ಚೊಚ್ಚಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ: ಕಾಸರಗೋಡಿನ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್

ತಿರುವನಂತಪುರ: ಹತ್ತು ವರ್ಷಗಳ ಬಳಿಕ ಪ್ರಚಂಡ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಿದ ಯುಡಿಎಫ್ ಸರಕಾರದ ಚೊಚ್ಚಲ ಬಜೆಟ್‌ನ್ನು ಹಣಕಾಸು ಖಾತೆಯ ಹೊಣೆಗಾರಿಕೆಯನ್ನು ಹೊಂದಿರುವ ಮುಖ್ಯಮಂತ್ರಿ ವಿ.ಡಿ. ಸತೀಶನ್ ಇಂದು ವಿಧಾನಸಭೆಯಲ್ಲಿ ಮಂಡಿಸಿದರು.  ರಾಜ್ಯದಲ್ಲಿ  ಅತೀವ ಹಿಂದುಳಿದಿರುವ ಕಾಸರಗೋಡು, ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಜ್ಯಾರಿಗೊಳಿಸಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಅರ್ಹರಾದ ಎಲ್ಲಾ ಸವಲತ್ತುಗಳನ್ನ್ನು ಜ್ಯಾರಿಗೊಳಿಸಲಾಗುವುದು ಮಾತ್ರವಲ್ಲದೆ ಎಂಡೋಸಲ್ಫಾನ್ ಸಂತ್ರಸ್ತರನ್ನು ಸರಕಾರವೇ   ವಹಿಸಿಕೊಳ್ಳಲಿದೆ. ಕಾಸರಗೋಡಿನ ವೈದ್ಯಕೀಯ ಕಾಲೇಜು ನಿರ್ಮಾಣ ಕೆಲಸಗಳನ್ನು ಶೀಘ್ರ …

ಎಲ್ಲೆಲ್ಲೂ ಅಭಿವೃದ್ಧಿಯೇ ಮೂಲಮಂತ್ರ: ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ರಸ್ತೆ ಇಲ್ಲದ ಬಡ ಕುಟುಂಬ ಅಧಿಕಾರಿಗಳ ಕಣ್ಣಿಂದ ಮರೆ

ಮುಳ್ಳೇರಿಯ: ಅಭಿವೃದ್ಧಿಯೇ ಮೂಲಮಂತ್ರವಾಗಿ ವಿವಿಧ ರಾಜಕೀಯ ಪಕ್ಷಗಳು ಘೋಷಿಸಿಕೊಳ್ಳುತ್ತಿರುವಾಗ ಅಭಿವೃದ್ಧಿ ಬಿಟ್ಟು ಮೂಲಭೂತ ಸೌಕರ್ಯವೇ ಇಲ್ಲದೆ ಕೆಲವರು ಸಂಕಷ್ಟಪಡುವಾಗ ಅಧಿಕಾರಿವರ್ಗ ಮೌನವಾಗಿರುವುದು ಜನಸಾಮಾನ್ಯರಲ್ಲಿ ರೋಷಕ್ಕೆ ಕಾರಣವಾಗುತ್ತಿದೆ. ಕಾರಡ್ಕ ಪಂಚಾಯತ್‌ನ 7ನೇ ವಾರ್ಡ್ ವ್ಯಾಪ್ತಿಯ ಮಾಯಿಲಂಕೋಟೆ ಬಳಿಯ ಕೆಲವು ಕುಟುಂಬಗಳು ಈಗಲೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಕುಂಟಾರು ಶಾಲೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದ ಮಾಯಿಲಂಕೋಟೆಗೆ ಈಗಲೂ ರಸ್ತೆ ಸೌಕರ್ಯವಿಲ್ಲದ ಕಾರಣ ಇಲ್ಲಿಂದ ಅಸೌಖ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಜನರು ಹೊತ್ತೊಯ್ಯಬೇಕಾಗುತ್ತಿದೆ. ಇಲ್ಲಿನ ಸುಮಾರು 60 …

ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಯುವಕನಿಗೆ ಗಂಭೀರ

ಕುಂಬಳೆ: ಇಲ್ಲಿನ ದೇವಿನಗರ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕನೋರ್ವ ಗಂಭೀರ ಗಾಯಗೊಂಡಿದ್ದಾರೆ. ಮೊಗ್ರಾಲ್ ನಾಂಗಿ ಕಡಪ್ಪುರದ ರಾಸಿಕ್ (19) ಗಾಯಗೊಂಡಿದ್ದು, ಇವರನ್ನು ಚೆಂಗಳ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ 5.30ರ ವೇಳೆ ಅಪಘಾತ ವುಂಟಾಗಿದೆ. ರಾಸಿಕ್ ಕುಂಬಳೆಯಿಂದ ಕೊಪ್ಪರ ಬಜಾರ್ ಭಾಗಕ್ಕೆ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದರು. ಇವರು ದೇವಿನಗರಕ್ಕೆ ತಲುಪಿದಾಗ ಕಾಸರಗೋಡು ಭಾಗದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಸರ್ವೀಸ್ ರಸ್ತೆಗೆ ತಲುಪಿದ ಕಾರು ಢಿಕ್ಕಿ ಹೊಡೆದು ಅಪಘಾತ ವುಂಟಾಗಿದೆ ಎಂದು …

ನಿಲ್ಲಿಸಿದ್ದ ಲಾರಿಗಳಿಂದ ಕಳವಿಗೀಡಾದ ಬ್ಯಾಟರಿಗಳ ಪೈಕಿ ಒಂದು ಗುಜರಿ ಅಂಗಡಿಯಲ್ಲಿ ಪತ್ತೆ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆಗಳಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಕಳವಿಗೀಡಾದ ಬ್ಯಾಟರಿಗಳ ಪೈಕಿ ಒಂದನ್ನು ಆರೋಪಿಯ ಸಹಾಯದಿಂದ ಕುಂಬಳೆ ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ನಗರದ ಪ್ರೆಸ್ ಕ್ಲಬ್‌ಬಳಿಯ ಗುಜರಿ ಅಂಗಡಿಯಿಂದ ಒಂದು ಬ್ಯಾಟರಿ ಪತ್ತೆಯಾಗಿದೆ. ಲಾರಿಗಳಿಂದ ಬ್ಯಾಟರಿ ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿದ್ದ ಆಲಂಪಾಡಿ ತೈವಳಪ್ಪು ನಿವಾಸಿ ಶಮೀರ್ ಯಾನೆ ತೈವಳಪ್ಪು ಶಮೀರ್ (50) ಎಂಬಾ ತನನ್ನು ಪೊಲೀಸರು  ಮಾಹಿತಿ ಸಂಗ್ರಹಕ್ಕಾಗಿ ಕಸ್ಟಡಿಗೆ ತೆಗೆದುಕೊಂಡಿದ್ದರು. ಬಳಿಕ  ಈತನನ್ನು  ತನಿಖೆಗೊಳಪಡಿಸಿದಾಗ ಒಂದು ಬ್ಯಾಟರಿಯನ್ನು ಕಾಸರಗೋಡಿನ …