ಚಂದ್ರಾವತಿ ನಿಧನ

ಬದಿಯಡ್ಕ: ನೆಕ್ರಾಜೆ ಪೊಯ್ಯೆಕಂಡದ ದಿ| ಕಣ್ಣಪ್ಪ ಆಚಾರ್ಯರ ಪತ್ನಿ ಚಂದ್ರಾವತಿ (85) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ಪುರುಷೋತ್ತಮ, ಸುಬ್ರಹ್ಮಣ್ಯ, ಸುರೇಶ, ಗಣೇಶ, ದಿನೇಶ, ವೇಣುಗೋಪಾಲ, ಗಾಯತ್ರಿ ಅಳಿಯ-ಸೊಸೆ ಯಂದಿರಾದ             ಭವಾನಿಶಂಕರ, ಪುಷ್ಪಲತಾ, ರೇಣುಕ, ಭುವನೇಶ್ವರಿ, ಕವಿತ, ಸುಮ, ಆಶಾಲತ,ಸಹೋದರಿ ಭೂದೇವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋವೆ ಸಹೋದರಿ ಸರಸ್ವತಿ ಈ ಹಿಂದೆ ನಿಧನರಾಗಿದ್ದಾರೆ.

ಜಗನ್ನಾಥ. ಎನ್. ನಿಧನ

ಕಾಸರಗೋಡು: ಮೂಲತ: ನೆಲ್ಲಿಕುಂಜೆ ನಿವಾಸಿಯಾಗಿದ್ದ, ಪ್ರಸ್ತುತ ಮಧೂರಿನ ಚೇನೆಕ್ಕೋಡ್‌ನಲ್ಲಿ ವಾಸವಾಗಿದ್ದ  ಜಗನ್ನಾಥ. ಎನ್. (85) ನಿಧನ ಹೊಂದಿದರು. ಮಂಗಳೂರಿನ ಕುಳಾಯಿ ಐಸ್ ಫ್ಯಾಕ್ಟರಿಯಲ್ಲಿ ದೀರ್ಘ ಕಾಲ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದರು.  ನೆಲ್ಲಿಕುಂಜೆ  ಶ್ರೀ ಕೋಮರಾಡಿ  ದೈವಸ್ಥಾನ ಸಮಿತಿಯ ಸದಸ್ಯರಾಗಿದ್ದರು.  ಮೃತರು ಪತ್ನಿ ಸುಮತಿ, ಮಕ್ಕಳಾದ ವಾಣಿ ಕಟೀಲ್, ವೀಣಾ, ಸಹೋದರಿ ಪ್ರೇಮಾ ನೆಲ್ಲಿಕುಂಜೆ ಹಾಗೂ ಹಲವಾರು ಬಂಧು -ಮಿತ್ರರನ್ನು ಅಗಲಿದ್ದಾರೆ.

ಅಸೌಖ್ಯ: ಮಹಿಳೆ ನಿಧನ

ಪೈವಳಿಕೆ: ಚಿಪ್ಪಾರು ತಜಿಪ ನಿವಾಸಿ ಅಣ್ಣು ಮೂಲ್ಯರ ಪತ್ನಿ ಮೋಹಿನಿ (53) ನಿಧನ ಹೊಂದಿದರು. ಅಸೌಖ್ಯ ತಗಲಿ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತಿ, ಮಕ್ಕಳಾದ ಆದರ್ಶ್, ಅಖಿಲೇಶ್, ಸಹೋದರ ಸಹೋದರಿ ಯರಾದ ಹರೀಶ, ಇಂದಿರಾ, ಗೀತಾ, ಶೋಭಾ, ಚಂಚಲಾಕ್ಷಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಅಂತ್ಯಸAಸ್ಕಾರ ನಿನ್ನೆ ಮನೆ ಪರಿಸರದಲ್ಲಿ ನಡೆಯಿತು. ಮನೆಗೆ ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರ್, ಪೈವಳಿಕೆ ಪಂಚಾಯತ್ ಸದಸ್ಯೆ ಯಶೋದ, ಬಿಜೆಪಿ …

45 ಪವನ್ ಚಿನ್ನಾಭರಣ ಕಳವು:  ಆರೋಪಿ ಅಣ್ಣಾಚಿ ರಾಜನ್‌ನನ್ನು ಸ್ಥಳಕ್ಕೆ ಕರೆತಂದು ಹೇಳಿಕೆ ದಾಖಲು

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕರೆ, ಪೂಚಕ್ಕಾಡ್ ಅನಿವಾಸಿಯ ಮನೆಯಿಂದ 45 ಪವನ್ ಚಿನ್ನಾಭರಣ ಹಾಗೂ 5೦,೦೦೦ ರೂ. ಕಳವುಗೈದ ಪ್ರಕರಣದ ಆರೋಪಿಯನ್ನು ಸ್ಥಳಕ್ಕೆ ತಲುಪಿಸಿ ಪರಿಶೀಲನೆ ನಡೆಸಲಾಯಿತು. ತಮಿಳುನಾಡು ಮೇಟುಪಾಳಯಂ ನಿವಾಸಿ ರಾಜನ್ ಯಾನೆ ಅಣ್ಣಾಚಿರಾಜನ್‌ನನ್ನು ಪೂಚಕ್ಕಾಡ್ ಅರಯಾಲ್ತರದ ಅನಿವಾಸಿ ಅಬ್ದುಲ್ ಮಜೀದ್‌ರ ಮನೆಗೆ ಕರೆತಂದು ಹೇಳಿಕೆ ದಾಖಲಿಸಲಾಗಿದೆ. ಮೇ ೯ರಂದು ರಾತ್ರಿ ಅಬ್ದುಲ್ ಮಜೀದ್‌ರ ಮನೆಯಿಂದ ಕಳವು ನಡೆದಿತ್ತು. ಮನೆ ಮಂದಿ ಸಂಬಂಧಿಕರ ಮನೆಗೆ ತೆರಳಿದಾಗ ಕಳವು ನಡೆಸಲಾಗಿತ್ತು. ನೆರೆಮನೆಯಿಂದ ಪಿಕ್ಕಾಸು ತೆಗೆದುಕೊಂಡು …

ವರದಕ್ಷಿಣೆ ಕಿರುಕುಳ ಆರೋಪ: ರಾಸಾಯನಿಕ ಸೇವಿಸಿ ಯುವತಿ ಸಾವು: ಪತಿ ಸೆರೆ

ಕಾಸರಗೋಡು:  ಪತಿ ಮನೆಯಲ್ಲಿ ಯುವತಿ ರಾಸಾಯನಿಕ ದ್ರವ್ಯ ಸೇವಿಸಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪತಿಯನ್ನು ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಪಿ. ವಿನೀಶ್ ಕುಮಾರ್ ನತೃತ್ವದ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ಚರ್ಲಡ್ಕದ ಅಬ್ಬಾಸ್-ಸಫಿಯ ದಂಪತಿ ಪುತ್ರಿ ಹಾಗೂ  ಚೆಂಗಳ ಪಾಣಲಂನ ಮೊಹಮ್ಮದ್ ಆದಿಲ್‌ನ ಪತ್ನಿ ಎಂ.ಕೆ. ಫಾತಿಮ್ಮತ್ ಸುಬೈದ (24) ರಾಸಾಯನಿಕ ದ್ರವ್ಯ ಸೇವಿಸಿ ಆತ್ಮಹತ್ಯೆಗೈದ ಯುವತಿ. ಈ ಬಗ್ಗೆ ಆಕೆಯ ಸಹೋದರ ಎಂ.ಕೆ. ಅಬ್ದುಲ್  ವಾಸಿಲ್ ನೀಡಿದ ದೂರಿನಂತೆ ಸುಬೈದಾರ ಪತಿ ಮೊಹಮ್ಮದ್ ಆದಿಲ್ (27) ವಿರುದ್ಧ …

10 ದಿನಗಳಲ್ಲಿ ನಾಲ್ಕನೇ ಬಾರಿ ಇಂಧನ ಬೆಲೆ ಏರಿಕೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅನಿಶ್ಚಿತತೆಯಿಂದಾಗಿ ದೇಶದಲ್ಲಿ ಇಂಧನ ದರಗಳು ಮತ್ತೊಮ್ಮೆ ಗಗನಕ್ಕೇರಿದೆ. ಇದರಂತೆ ದೇಶಾದ್ಯಂತ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೇವಲ ಹತ್ತು ದಿನಗಳಲ್ಲಿ ನಾಲ್ಕನೇ ಬಾರಿ ಏರಿಸಲಾಗಿದೆ. ಈ ಪರಿಷ್ಕೃತ ದರದಂತೆ ಪೆಟ್ರೋಲ್ಗೆ ಪ್ರತಿ ಲೀಟರ್ಗೆ ತಲಾ 2.61 ರೂ.ನಂತೆ ಹೆಚ್ಚಿಸಲಾಗಿದ್ದು ಇದರಿಂದಾಗಿ ರಾಜಧಾನಿ ದೆಹಲಿಯಲ್ಲಿ ಈ ಹಿಂದೆ ಇದ್ದ 99.51 ರೂ. ನಿಂದ 102.12ಕ್ಕೇರಿದೆ. …

ಅಪರಿಮಿತ ರಕ್ತದೊತ್ತಡ: ಚಿಕಿತ್ಸೆಯಲ್ಲಿದ್ದ ಬಿಎಸ್‌ಎನ್‌ಎಲ್ ಉದ್ಯೋಗಿ ನಿಧನ

ಬದಿಯಡ್ಕ: ತೀವ್ರ ರಕ್ತದೊತ್ತಡದಿಂದ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ಬದಿಯಡ್ಕ ಚಂಬಲ್ತಿಮಾರ್ ಬಳಿಯ ವಳಮಲೆ ಸುಳ್ಯೋಡು ನಿವಾಸಿ ದಿ| ಸದಾಶಿವ ಎಂಬವರ ಪುತ್ರ ಕೀರ್ತೀಶ್ (37) ಮೃತಪಟ್ಟ ಯುವಕನಾಗಿದ್ದಾರೆ. ಇವರು ಮಂಗಳೂರು ಮುಲ್ಕಿಯಲ್ಲಿ ಬಿಎಸ್‌ಎನ್‌ಎಲ್ ಉದ್ಯೋಗಿಯಾಗಿದ್ದರು. ಶನಿವಾರ ಅಲ್ಲಿನ ವಾಸಸ್ಥಳದಲ್ಲಿ ಇವರು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಜತೆಗಿದ್ದವರು ಸುರತ್ಕಲ್‌ನ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಅಪರಿಮಿತ ರಕ್ತದೊತ್ತಡದಿಂದ ಅಸ್ವಸ್ಥತೆ ಉಂಟಾಗಿರುವುದಾಗಿ ತಪಾಸಣೆಯಲ್ಲಿ ತಿಳಿದು ಬಂದಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೀರ್ತೀಶ್ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತದೇಹವನ್ನು …

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯ ಮೊಬೈಲ್ ಫೋನ್  ಕಳವು: ಆರೋಪಿ ಪೊಲೀಸ್ ಕಸ್ಟಡಿಗೆ

ಕಾಸರಗೋಡು:   ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಮಹಿಳೆಯ ಮೊಬೈಲ್ ಫೋನ್ ಕಳವುಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಕಸ್ಟಡಿಗೆ   ತೆಗೆದುಕೊಂಡಿದ್ದಾರೆ. ಈಗ ಚೆರ್ಕಳದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ಮೂಲತಃ ಮುಟ್ಟತ್ತೋಡಿ ತೈವಳಪ್ಪು ನಿವಾಸಿ ಅಜ್ಮಲ್ ಫಿರೋಸಾ (23)  ಪೊಲೀಸ್ ಕಸ್ಟಡಿಗೊಳಗಾದ ಆರೋಪಿ. ಮೇ ೫ರಂದು ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಮಹಿಳಾ ವಾರ್ಡ್‌ನಲ್ಲಿ  ದಾಖಲಾಗಿದ್ದ ಬೋವಿಕ್ಕಾನ ನಿವಾಸಿ ರಮ್ಯ ಎಂಬವರ 70,000 ರೂ. ಮೌಲ್ಯದ  ಮೊಬೈಲ್ ಫೋನ್ ಕಳವುಗೈದ ಬಗ್ಗೆ ಅವರು ನಿಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂ …

ರೈತಸಂಘ ಮಂಜೇಶ್ವರ ಏರಿಯಾ ಸಮಿತಿಯಿಂದ ಬಾಯಾರು ಪದವುನಲ್ಲಿ ಪ್ರತಿಭಟನಾ ಸಭೆ

ಪೈವಳಿಕೆ: ರಸಗೊಬ್ಬರದ ಬೆಲೆಯೇರಿಸಿದ ಕೇಂದ್ರ ಸರಕಾರದ ರೈತದ್ರೋಹಿ ತೀರ್ಮಾನಕ್ಕೆದುರಾಗಿ ಬಾಯಾರು ಪದವುನಲ್ಲಿ ರೈತಸಂಘದ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನಾ ಸಭೆಯನ್ನು ರೈತಸಂಘದ ರಾಜ್ಯಸಮಿತಿ ಸದಸ್ಯರಾದ ಕೆ. ಆರ್ ಜಯಾನಂದ ಉದ್ಘಾಟಿಸಿದರು. ಚಂದ್ರಹಾಸ ಶೆಟ್ಟಿ ಮಾಸ್ಟರ್ ಅಧ್ಯಕ್ಷತೆ ವಹಿಸಿದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಸ್ವಾಗತಿಸಿದರು. ರೈತಸಂಘ ಜಿಲ್ಲಾ ಸಮಿತಿ ಸದಸ್ಯೆ ಗೀತಾ ಸಾಮಾನಿ, ಪುರುಷೋತ್ತಮ ಬಿ, ಶ್ಯಾಮ್ ಭಟ್ ಮಾಸ್ಟರ್, ವಿನಯ್ ಕುಮಾರ್ ಬಾಯಾರ್, ಚಂದ್ರ ನಾಯಕ್, ಹುಸೈನ್ ಮಾಸ್ತರ್, ಕರುಣಾಕರ ಶೆಟ್ಟಿ ಭಾಗವಹಿಸಿದರು.

ಜಲಜೀವನ್ ಮಿಷನ್: ಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕೆಡಬ್ಲ್ಯುಎ ಎಂಪ್ಲೋಯೀಸ್ ಸಂಘ್ ಆಗ್ರಹ

ಕಾಸರಗೋಡು: ಕೋಟ್ಯಂತರ ರೂ. ವೆಚ್ಚ ಮಾಡಿಯೂ ಜಲಜೀವನ್ ಮಿಷನ್ ಯೋಜನೆಯಲ್ಲಿ ಲೋಪ ಸಂಭವಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕೆಡಬ್ಲ್ಯುಎ ಎಂಪ್ಲೋ ಯೀಸ್ ಸಂಘ್ ಕಾಸರಗೋಡು ಜಿಲ್ಲಾ ಸಮಿತಿ ಆಗ್ರಹಿಸಿದೆ. ಉಚಿತ ಸಂಪರ್ಕವೆಂದು ತಿಳಿಸಿ ಅಗತ್ಯವಿಲ ದವರಿಗೆ ಕೂಡಾ ಒತ್ತಾಯಪೂರ್ವಕ ಸಂಪರ್ಕ ನೀಡಿದ ಹಿನ್ನೆಲೆಯಲ್ಲಿ ಸಂಪರ್ಕಗಳ ಸಂಖ್ಯೆ ಹೆಚ್ಚಾಯಿದಾದರೂ ನೀರು ಲಭ್ಯವಾಗುವ ಟ್ಯಾಪ್‌ಗಳ ಸಂಖ್ಯೆ ಸಾಮಾನ್ಯ ಕಡಿಮೆ ಇದೆ. ನೀರು ಲಭಿಸದೆ ಬಿಲ್ಲು ಪಾವತಿಸಬೇಕಾಗಿ ಬಂದಿರುವುದ ರಿಂದ ಫಲಾನುಭವಿಗಳು ಸಂಪರ್ಕ ವಿಚ್ಛೇಧಿಸಲು ಮುಂದಾಗುತ್ತಿದ್ದಾರೆ. ಕಾರಡ್ಕ, ದೇಲಂಪಾಡಿ, …