ಶಬರಿಮಲೆಯಲ್ಲಿ ಭಕ್ತರ ನಿಬಿಡತೆಗೆ ಹೊಂದಿಕೊಂಡು ಸ್ಪೋಟ್ ಬುಕ್ಕಿಂಗ್

ಪಂದಳಂ: ಶಬರಿಮಲೆಯಲ್ಲಿ ಇನ್ನು ತೀರ್ಥಾಟಕರ ನಿಬಿಡತೆಗೆ ಹೊಂದಿಕೊಂಡು ಸ್ಪೋಟ್ ಬುಕ್ಕಿಂಗ್ ಸೌಕ ರ್ಯಏರ್ಪಡಿಸಲು ಮುಜರಾಯಿ ಮಂಡಳಿ ತೀರ್ಮಾನಿಸಿದೆ. ಜ್ಯಾರಿಯಲ್ಲಿ ಪ್ರತಿದಿನ ತಲಾ 5೦೦೦ದಷ್ಟು ತೀರ್ಥಾಟಕರಿಗೆ ಸ್ಪೋಟ್ ಬುಕ್ಕಿಂಗ್ ಮೂಲಕ ಪ್ರವೇಶ ನೀಡಲಾಗುತ್ತಿದೆ. ಇದರ ಹೊರತಾಗಿ ವರ್ಚುವಲ್ ಕ್ಯೂ ಮೂಲಕವೂ ಪ್ರವೇಶ ನೀಡಲಾ ಗುತ್ತಿದೆ. ಶಬರಿಮಲೆ  ದೇಗುಲದ 18 ಮೆಟ್ಟಿಲು ಮೂಲಕ ಪ್ರತಿ ನಿಮಿಷಕ್ಕೆ ತಲಾ 85 ಮಂದಿಯನ್ನು ಏರಿಸಿ ಸನ್ನಿಧಾನಕ್ಕೆ ತಲುಪಿಸುವ ಕ್ರಮವನ್ನು ಈಗ ಆರಂಭಿಸಲಾಗಿದೆ. ಇದಕ್ಕೆ ಹೊಂದಿ ಕೊಂಡು ಅಗತ್ಯದಷ್ಟು ಪೊಲೀಸರನ್ನು 18 ಮೆಟ್ಟಿಲಲ್ಲಿ ಕರ್ತವ್ಯಕ್ಕಾಗಿ …

ಮಲಿನ ಜಲ ಚರಂಡಿಗೆ ಹರಿಯಬಿಟ್ಟ ಹೋಟೆಲ್ ಮಾಲಕನಿಗೆ ದಂಡ

ಕಾಸರಗೋಡು: ಕೇರಳ ಸ್ಟೇಟ್ ಹೌಸಿಂಗ್ ಬೋರ್ಡ್ ವಿದ್ಯಾನಗರದಲ್ಲಿ ನಿರ್ಮಿಸಿದ ಫ್ಲ್ಯಾಟ್ ಸಮುಚ್ಚಯದಿಂದ ಸಾರ್ವಜನಿಕ ಚರಂಡಿಗೆ ಹೋಟೆಲ್ ತ್ಯಾಜ್ಯ ಸಹಿತ ಮಲಿನ ಜಲವನ್ನು ಹರಿಯಬಿಟ್ಟಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ 2೦,೦೦೦ ರೂ. ದಂಡ ಹೇರಿದೆ. ಹೌಸಿಂಗ್ ಕಾಲನಿಯಲ್ಲಿ ವಾಸಿಸುವವರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಧಾನ ತೋಡಿಗೆ ಸಂಪರ್ಕಿಸುವ ಚರಂಡಿಗೆ ಮಲಿನ ಜಲವನ್ನು ಹರಿಯಬಿಟ್ಟಿರುವುದನ್ನು ಪತ್ತೆಹಚ್ಚಲಾಗಿದೆ. ಹೌಸಿಂಗ್ ಕಾಲನಿಯಲ್ಲಿ 104 ಕುಟುಂಬಗಳು ವಾಸಿಸುತ್ತಿವೆ. ಚರಂಡಿಗೆ ಹೋಟೆಲ್‌ನ ಮಲಿನ ಜಲ ಹರಿಯುವುದನ್ನು ತಡೆಯಬೇಕೆಂದು, ತ್ಯಾಜ್ಯವನ್ನು ಆವರಣದೊಳಗೇ ಸಂಸ್ಕರಿಸಬೇಕೆಂದು …

ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ರೇಬೀಸ್ ಲಸಿಕೆ

ಮಂಜೇಶ್ವರ: ಪಂಚಾಯತ್ ಜನತಾ ಯೋಜನ ಯೋಜನೆಯಂತೆ ಬೀದಿ ನಾಯಿಗಳಿಗೆ ರೇಬೀಸ್ ಲಸಿಕೆ ಅಭಿಯಾನ ಮಂಜೇಶ್ವರ ಪಶು ವೈದ್ಯಕೀಯ ಆಸ್ಪತ್ರೆಯ ನೇತೃತ್ವದಲ್ಲಿ ಆರಂಭಗೊAಡಿದೆ. ನಿನ್ನೆ ಮಂಜೇಶ್ವರ ಪೊಲೀಸ್ ಠಾಣಾ ಪರಿಸರದಲ್ಲಿ ಹಲವಾರು ನಾಯಿಗಳಿಗೆ ಲಸಿಕೆ ನೀಡಲಾಗಿದೆ. ಮಂಜೇಶ್ವರದ ವಿವಿಧ ಭಾಗಗಳಲ್ಲಿ ಕಾಯÁðಚರಣೆ ಮುಂದುವರಿಯಲಿದೆ.

ಅಂತಾರಾಷ್ಟ್ರೀಯ ಕನ್ನಡ ಸಂಸ್ಕೃತಿ ಉತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಪೈವಳಿಕೆ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಮಸ್ಕತ್, ಒಮಾನ್ ಘಟಕ ಹಾಗೂ ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಮಸ್ಕತ್, ಒಮಾನ್ ಘಟಕಗಳ ಆಶ್ರಯದಲ್ಲಿ 2026ರ ಮೇ.8 ರಂದು ಒಮಾನ್‌ನ ಮಸ್ಕತ್ ಸಿ.ಬಿ.ಎಫ್.ಸಿ. ಹಾಲ್ ಹೌಶೆರ್‌ನಲ್ಲಿ ಅಂತಾರಾಷ್ಟ್ರೀಯ ಕನ್ನಡ ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ. ಇದರ ಕರಪತ್ರವನ್ನು ಇತ್ತೀಚೆಗೆ ಪೈವಳಿಕೆ ಕಾಯರ್ ಕಟ್ಟೆ ಸರಕಾರಿ ಹೈಸ್ಕೂಲಿನಲ್ಲಿ ನಡೆದ ಗಡಿನಾಡ ಕನ್ನಡ ರಾಜ್ಯೋತ್ಸವ ಸಮಾರಂಭದ ಉದ್ಘಾಟನಾ ವೇದಿಕೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ …

ಮಂಜೇಶ್ವರದಲ್ಲಿ ಅಂಗಡಿಗಳಿಂದ ಕಳವು

ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲಿ ಮೂರು ಅಂಗಡಿಗಳಿಗೆ ನಿನ್ನೆ ರಾತ್ರಿ ಕಳ್ಳರು ನುಗ್ಗಿ ಕಳವು ನಡೆಸಿದ್ದಾರೆ. ಇಲ್ಲಿನ ಅಶ್ರಫ್ ಎಂಬವರ ಭಾರತ್ ಜನರಲ್ ಸ್ಟೋರ್, ಜಾಬಿರ್‌ರ ಮೊಬೈಲ್ ಅಂಗಡಿ, ಶಫೀಕ್‌ರ ತರಕಾರಿ ಅಂಗಡಿಗಳಿಗೆ ಕಳ್ಳರು ನುಗ್ಗಿದ್ದಾರೆ. ಭಾರತ್ ಜನರಲ್ ಸ್ಟೋರ್‌ನಿಂದ ೩೫ ಸಾವಿರ ರೂಪಾಯಿ ನಗದು ಹಾಗೂ ಸಿಗರೇಟ್ ಮೊದಲಾದ ವುಗಳನ್ನು ಕಳವುಗೈಯ್ಯಲಾಗಿದೆ. ಮತ್ತೆರಡು ಅಂಗಡಿಗಳಿಂದ ಕಳವು ಯತ್ನ ಮಾತ್ರವೇ ನಡೆದಿದೆಯೆಂದು ಹೇಳಲಾಗುತ್ತಿದೆ. ವ್ಯಾಪಾರಿಗಳು ಇಂದು ಬೆಳಿಗ್ಗೆ ತಲುಪಿದಾಗಲೇ ಅಂಗಡಿಗಳ ಶಟರ್ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ.  ಈ …

ಕಾರು, ರಿಕ್ಷಾದಲ್ಲಿ ಅಕ್ರಮ ಮದ್ಯ ಸಾಗಾಟ ಪ್ರಕರಣ: ಪರಾರಿಯಾಗಿದ್ದ ಆರೋಪಿ ಸೆರೆ

ಕಾಸರಗೋಡು: ಕಾರು ಮತ್ತು ಆಟೋ ರಿಕ್ಷಾಗಳಲ್ಲಾಗಿ ಇತ್ತೀಚೆಗೆ ಕರಂದಕ್ಕಾಡಿನಿಂದ ೧೦೮ ಲೀಟರ್ ಕರ್ನಾಟಕ ಮದ್ಯ ಹಾಗೂ ೩೪೫ ಲೀಟರ್ ಗೋವಾ ನಿರ್ಮಿತ ಮದ್ಯ ವಶಪಡಿಸಿಕೊಂಡ  ವೇಳೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ತಲಪ್ಪಾಡಿ ದೇವಿಪುರಂ ರಸ್ತೆ ತಚ್ಚಾಣಿ ಎಂಬಲ್ಲಿಂದ ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಕಮಿಶನರ್ ಜನಾರ್ದನನ್ ಪಿ.ಪಿ ನೇತೃತ್ವದ ಅಬಕಾರಿ ತಂಡ ನಿನ್ನೆ ಬಂಧಿಸಿದೆ. ಮಂಜೇಶ್ವರ ಸಮೀಪದ ಕುಂಜತ್ತೂರು ನಿವಾಸಿ ಅಣ್ಣು ಅಲಿಯಾಸ್ ಅರವಿಂದಾಕ್ಷ ಬಂಧಿತ ಆರೋಪಿ. ಬಂಧಿತನನ್ನು ನಂತರ ಕಾಸರಗೋಡು  ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ನಂತರ …

ಯುಡಿಎಫ್ ವಿರುದ್ಧ ಬಂಡುಕೋರರಾಗಿ ಸ್ಪರ್ಧೆ :15 ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ವಜಾ; ಸಹಾಯಕರಾದ ಐವರು ನೇತಾರರೂ ಹೊರಕ್ಕೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಯುಡಿಎಫ್‌ನ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡುಕೋರರಾಗಿ ಸ್ಪರ್ಧಿಸುವ 15 ಅಭ್ಯರ್ಥಿಗಳನ್ನು ಹಾಗೂ ಅವರ ಸಹಾಯಕವಾದ ಐವರು ನೇತಾರರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೈದಿರುವುದಾಗಿ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ತಿಳಿಸಿದ್ದಾರೆ. ಈಸ್ಟ್ ಎಳೇರಿ ಪಂಚಾಯತ್‌ನ 1ನೇ ವಾರ್ಡ್‌ನ ಜೈಸನ್ ಥೋಮಸ್, 3ನೇ ವಾರ್ಡ್‌ನ ಜೆಸ್ಸಿ ಟೋಂ, 7ನೇ ವಾರ್ಡ್‌ನ ಜೋನ್ ಪೇಂಡಾನಂ, 9ನೇ ವಾರ್ಡ್‌ನ ಮ್ಯಾಥ್ಯೂ ಸೆಬಾಸ್ಟಿಯನ್,೧೪ನೇ ವಾರ್ಡ್‌ನ ತ್ರೇಸಿಯಮ್ಮ ಟೋಮಿ, ಕಳ್ಳಾರು ಪಂಚಾಯತ್ 10ನೇ ವಾರ್ಡ್‌ನ ಪಿ.ಎಂ. ಬೇಬಿ, …

ವ್ಯಕ್ತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಇಲ್ಲಿಗೆ ಸಮೀಪದ ಕೋಟೆಕ್ಕಾರ್ ಎಸ್‌ಸಿ ಕಾಲನಿಯ ಜನಾರ್ದನ (65) ಎಂಬವರು ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ ಮನೆಯಿಂದ ಜನಾರ್ದನ ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಡಿದಾಗ ಮನೆ ಪಕ್ಕದ ಮರದ ರೆಂಬೆಯಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ ಜನಾರ್ದನ  ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.  ಕುಂಬಳೆ ಪೊಲೀಸರು ಈ ಬಗ್ಗೆ ಪ್ರಕರ ಣ ದಾಖಲಿಸಿ ತನಿಖೆ ನಡೆಸಿದರು. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಉಷಾ ಕಿರಣ್, ತುಳಸಿ, ಸ್ವಾತಿ, ಶರತ್‌ಕಿರಣ್, …

ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಇನ್ನೊಂದು ಲೈಂಗಿಕ ಕಿರುಕುಳ ದೂರು 

ತಿರುವನಂತಪುರ:  ತಿರುವನಂತ ಪುರದ ಯುವತಿಯೋರ್ವೆಗೆ ಲೈಂಗಿಕ ಕಿರುಕುಳ ನೀಡಿ ಬಲವಂತವಾಗಿ ಆಕೆಯ ಗರ್ಭಪಾತ ನಡೆಸಿದ ಆರೋಪದಂತೆ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ತಿರುವನಂತಪುರ  ನೇಮಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂ ಡಿರುವ ಬೆನ್ನಲ್ಲೇ ಅವರು ನನಗೂ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಇನ್ನೋರ್ವೆ ಯುವತಿ ದೂರು ನೀಡಿದ್ದಾಳೆ. ಈಗ ದೂರು ನೀಡಿರುವ ಯುವತಿ ಬೆಂಗಳೂರು ನಿವಾಸಿಯಾ ಗಿದ್ದು, ಕಿರುಕುಳ ಕುರಿತಾದ ದೂರನ್ನು ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಹಾಗೂ  ಕಾಂಗ್ರೆಸ್‌ನ ರಾಜ್ಯ ಅಧ್ಯಕ್ಷ ಸಣ್ಣಿ ಜೋಸೆಫ್‌ರಿಗೆ ಇ …

ವಿವಿಧ ಕಡೆಗಳಲ್ಲಿ ವಿವಿಧ ಹೆಸರುಗಳಲ್ಲಿ ವಾಸಿಸುತ್ತಿದ್ದ 25 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ತಲಪಾಡಿ: ತಲಶ್ಶೇರಿಯ ದೌರ್ಜನ್ಯ ಪ್ರಕರಣದ ಆರೋಪಿ 25 ವರ್ಷದ ಬಳಿಕ ಮಂಗಳೂರಿನಲ್ಲಿ ಸೆರೆಯಾಗಿದ್ದಾನೆ. ತಲಶ್ಶೇರಿ ವಸತಿಗೃಹದಲ್ಲಿ ನಡೆದ ದೌರ್ಜನ್ಯ ಪ್ರಕರಣದ ಮೂರನೇ ಆರೋಪಿ ಮಂಗಳೂರು ನಿವಾಸಿ ನಾಸರ್ (52)ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಆರೋಪಿಯಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಕೊಂಡಿದ್ದನು. ಕೇರಳ ಹಾಗೂ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಹಲವು ಹೆಸರುಗಳಲ್ಲಿ ವಾಸಿಸಿದ್ದನು. ಕೇಸಿಗೆ ಹಾಜರಾಗದ ಹಿನ್ನೆಲೆಯಲ್ಲಿ ತಲಶ್ಶೇರಿ ಹೆಚ್ಚುವರಿ ಶೆಶನ್ಸ್ ನ್ಯಾಯಾಲಯ ನಾಸರ್ ವಿರುದ್ಧ  ವಾರಂಟ್ ಹೊರಡಿಸಿತ್ತು. ೨೦೦೦ ಸೆ. ೧೮ರಂದು ಕೇಸಿಗೆ ಆಸ್ಪದವಾದ ಘಟನೆ ನಡೆದಿತ್ತು. …