ಪೆರಿಯಪ್ಪಾಡಿ ಶ್ರೀ ಶಾಸ್ತಾರೇಶ್ವರ ದೇವಸ್ಧಾನದಲ್ಲಿ ಜೀರ್ಣೋದ್ಧಾರ ಸಮಿತಿ ಪದಗ್ರಹಣ

ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಕುಡಾಲುಮೇರ್ಕಳ ಪೆರಿಯಪ್ಪಾಡಿ ಶ್ರೀ ಶಾಸ್ತಾರೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಆ ಪ್ರಯುಕ್ತ ನೂತನ ಜೀರ್ಣೋದ್ಧಾರ ಸಮಿತಿಯ ಪದಾದಿಕಾರಿಗಳ, ಸದಸ್ಯರ ಪದಗ್ರಹಣ ಸಮಾರಂಭ, ವಿಜ್ಞಾಪನಾ ಪತ್ರದ ರೂಪುರೇಷೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ಜರಗಿತು.ಆಡಳಿತ ಮೊಕ್ತೇಸರ ಕೆ.ಎಂ. ನಾರಾಯಣ ಭಟ್ ಪೆರಿಯಪ್ಪಾಡಿ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ಎಂ.ಕೇಶವ ಭಟ್ ಮಣಿಲ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ರಘು ಕಲ್ಕಾರ್ ಮಾಣಿ ಮತ್ತು ಉಪಾಧ್ಯಕ್ಷ ದಾಸಪ್ಪ ಸಾಮಾನಿ ಕುಡಾಲುಗುತ್ತು ವಿವಿಧ ಕಾರ್ಯಯೋಜನೆ ಕುರಿತು …

ವಿಸ್ಮಯ ಪಾರ್ಕ್‌ನಲ್ಲಿ ಇಟಾಲಿಯನ್ ರೈಡ್ ರೋಡಿಕ್ಸ್ ಉದ್ಘಾಟನೆ

ಕಣ್ಣೂರು: ವಿಸ್ಮಯ ಪಾರ್ಕ್‌ನಲ್ಲಿ ಹೊಸ ಇಟಾಲಿಯನ್ ರೈಡ್ ರೋಡಿಕ್ಸ್ ಚಟುವಟಿಕೆ ಆರಂಭಗೊಂಡಿದ್ದು, ಸ್ಪೀಕರ್ ಎ.ಎನ್. ಶಂಸೀರ್ ಇದನ್ನು ಉದ್ಘಾಟಿಸಿದರು. ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್‌ನ ಅಧ್ಯಕ್ಷ ಪಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದರು. ೧೫ ಕೋಟಿ ರೂ.ಗಳಷ್ಟು ವೆಚ್ಚದ ಈ ರೈಡನ್ನು ಇಟಾಲಿಯನ್ ಕಂಪೆನಿಯಾದ ಮೊಸಾರ್ ನಿರ್ಮಿಸಿದೆ. ಇಟೆಲಿಯಿಂದ ತಲುಪಿದ  ತಜ್ಞರು ಇದನ್ನು ಜೋಡಿಸಿದ್ದಾರೆ. ಸಹಕಾರಿ ವಲಯದ ಪ್ರಥಮ ಅಮ್ಯೂಸ್‌ಮೆಂಟ್ ಪಾರ್ಕ್ ಆದ ವಿಸ್ಮಯ ದೇಶದ ಬೃಹತ್ ಪಾರ್ಕ್‌ಗಳೊಂದಿಗೆ ಸ್ಪರ್ಧಿಸುತ್ತಿದೆ. ಮಕ್ಕಳು, ಹಿರಿಯರೆಂಬ ಭೇದ ಭಾವವಿಲ್ಲದೆ ಯಾವುದೇ ಪ್ರಾಯದವರಿಗೂ ಇದನ್ನು …

ಕುಂಬಳೆಯಲ್ಲಿ ಜ್ಯುವೆಲ್ಲರಿ ಮಾಲಕನ ಮನೆ, ಅಂಗಡಿಯಿಂದ ಕಳವು

ಕುಂಬಳೆ: ಅಲ್ಪ ಬಿಡುವಿನ ಬಳಿಕ ಕುಂಬಳೆಯಲ್ಲಿ ಮತ್ತೆ ಕಳ್ಳತನ ನಡೆದಿದೆ.  ಇಲ್ಲಿನ ಸೋನಾ ಬಜಾರ್ ಜ್ಯುವೆಲ್ಲರಿ ಮಾಲಕ ದಿ| ಮಮ್ಮಿಞ್ಞಿ ಹಾಜಿ ಯವರ ಕುಂಬಳೆ ಪೇಟೆಯಲ್ಲಿರುವ ಮನೆಯಲ್ಲಿ ನಿನ್ನೆ ಕಳವು ನಡೆದಿದೆ.  ಮಮ್ಮಿಞ್ಞಿ ಹಾಜಿಯವರ ಪತ್ನಿ  ಸೈನಬಾ, ಮಗ ರಿಸ್ವಾನ್ ಹಾಗೂ ಸೊಸೆ  ಚೆಂಗಳದಲ್ಲಿರುವ ಸಂಬಂಧಿಕರ ಮನೆಯಲ್ಲಿ ನಡೆದ ಮದುವೆ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಕಳವು ನಡೆದಿದೆ.  ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಕುಟುಂಬ ಮನೆಗೆ ಬೀಗ ಜಡಿದು ತೆರಳಿತ್ತು.  ರಾತ್ರಿ 12 …

ಜಿಲ್ಲಾ ಶಾಲಾ ಕಲೋತ್ಸವಕ್ಕೆ ಔಪಚಾರಿಕ ಚಾಲನೆ: ಮೊಗ್ರಾಲ್‌ನಲ್ಲಿನ್ನು ನಾದ-ತಾಳ-ನೃತ್ಯ ವಿಸ್ಮಯ

ಮೊಗ್ರಾಲ್: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಇಂದು ಬೆಳಿಗ್ಗೆ ಔಪಚಾರಿಕವಾಗಿ ಉದ್ಘಾಟನೆಗೊಂಡಿತು. ಇನ್ನು ಮೂರು ದಿನಗಳು ಮೊಗ್ರಾಲ್‌ನ ಇಶಲ್ ಗ್ರಾಮದಲ್ಲಿ ರಾಗ ತಾಳ ನೃತ್ಯ ವಿಸ್ಮಯ ಸಹಿತ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮೆರೆಯಲಿದ್ದಾರೆ. ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರಗಿತು. ಈ ತಿಂಗಳ ೩೧ರಂದು ಸಂಜೆ ಸಮಾರೋಪ ನಡೆಯಲಿದೆ. ವಿವಿಧ ಕಲಾ ಸಾಂಸ್ಕೃತಿಕ ವೈಭವಗಳಿಂದ ಶಾಲಾ ಕಲೋತ್ಸವದ ಡಂಗುರ ಜಾಥಾ ಜರಗಿತು. ಕುಂಬಳೆಯಿಂದ ಆರಂಭಗೊಂಡ ಶೋಭಾಯಾತ್ರೆಗೆ ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. …

ದಾಖಲೆಪತ್ರಗಳಿಲ್ಲದೆ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 2.87 ಲಕ್ಷ ರೂ. ವಶ

ಉಪ್ಪಳ: ಸ್ಕೂಟರ್‌ನಲ್ಲಿ ದಾಖಲೆಪತ್ರ ಗಳಿಲ್ಲದೆ ಸಾಗಿಸುತ್ತಿದ್ದ 2,87,000 ರೂಪಾಯಿಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಕರ್ನಾಟಕದ ಕೊಣಾಜೆ ಅಸೈಗೋಳಿ ನಿವಾಸಿ ಧನುಷ್ ಆರ್ (29) ಎಂಬಾತನ ಕೈಯಿಂದ ಹಣ ವಶಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಸಂಜೆ ಗೇರುಕಟ್ಟೆ  ಭಾಗದಿಂದ ಕೆದುಂಬಾಡಿ ಭಾಗಕ್ಕೆ ತೆರಳುತ್ತಿದ್ದ ಸ್ಕೂಟರ್‌ನಲ್ಲಿ ಗೇರುಕಟ್ಟೆ ಬಳಿಯ ಮುಡಿಮಾರು ಎಂಬಲ್ಲಿ ಎಸ್‌ಐ ಉಮೇಶ್ ನೇತೃತ್ವದ ಪೊಲೀಸರು  ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಧನುಷ್ ಮದ್ಯ ಸೇವಿಸಿರುವುದು ತಿಳಿದುಬಂ ದಿದೆ. ವಿಚಾರಿಸಿದಾಗ ತದ್ವಿರುದ್ಧ …

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಯುವಕನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸೋಂಕಾಲು ಶಾಂತಿಗುರಿಯ ಕರುಣಾಕರ ಎಂಬವರ ಪುತ್ರ ಶಶಿಕುಮಾರ್ (19) ಮೃತ ವ್ಯಕ್ತಿ.  ಇವರು ಲೈಟ್ ಆಂಡ್ ಸೌಂಡ್ಸ್ ಸಂಸ್ಥೆಯ ನೌಕರನಾಗಿದ್ದರು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಇವರು ಕಾಣದ ಹಿನ್ನೆಲೆಯಲ್ಲಿ ನಡೆಸಿದ ಶೋಧ ವೇಳೆ ಮನೆಯ ಹಿಂಭಾಗದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರು ತಂದೆ, ತಾಯಿ ಸುಂದರಿ, ಸಹೋದರರಾದ ಕೌಶಿಕ್, ಸುಶಾಂತ್ ಹಾಗೂ …

ಎದೆನೋವು: ಚಿಕಿತ್ಸೆಯಲ್ಲಿದ್ದ  ವ್ಯಕ್ತಿ ನಿಧನ

ನೀರ್ಚಾಲು: ಎದೆನೋವು ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ  ವ್ಯಕ್ತಿ ಮೃತಪಟ್ಟರು. ಬೇಳ ಕುಮಾರಮಂಗಲ ಲೈಫ್ ಕಾಲನಿಯ ನಿವಾಸಿ ಚಿಮ್ಮಿಣಿಯ ಡ್ಕದ ನಾರಾಯಣ ಮುಖಾರಿ (69) ಮೃತಪಟ್ಟ ವ್ಯಕ್ತಿ.ನಿನ್ನೆ ಮುಂಜಾನೆ ೪ ಗಂಟೆ ವೇಳೆ ಎದೆನೋವು ಕಾಣಿಸಿಕೊಂಡ ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಜಲಜಾ, ಮಕ್ಕಳಾದ ಪ್ರವೀಣ್ ಕುಮಾರ್, ನವೀನ ಕುಮಾರಿ, ದುರ್ಗಾಪರ ಮೇಶ್ವರಿ, ಅನ್ನಪೂರ್ಣೇಶ್ವರಿ (ಬದಿ ಯಡ್ಕ ಪಂ. ಹಸಿರು ಕ್ರಿಯಾ ಸೇನೆ ಸದಸ್ಯೆ), …

ಕೋಳಿ ಅಂಕ: ಮೂವರು ಸೆರೆ; 89,510 ರೂ., ಎರಡು ಕೋಳಿಗಳ ವಶ

ಉಪ್ಪಳ: ಪಾವೂರು ಮುಡಿಮಾರ್‌ನಲ್ಲಿ  ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.  ಕೋಳಿ ಅಂಕ ಸ್ಥಳದಿಂದ 89,510 ರೂ. ವಶಪಡಿಸಲಾಗಿದೆ. ಕೆದುಂಬಾಡಿ ನೆತ್ತಿಲಪದವು ನಿವಾಸಿ  ರೋಹಿತ್ ರಾಜ್ (30),  ಬಂಟ್ವಾಳ ಮುಡಿಪು ವಿನ ನಿತೀಶ್ (29),  ಸವಣೂರು ಪಾತೂರಿನ ದೇವದಾಸ್ (43) ಎಂಬಿವರು ಬಂಧಿತ ವ್ಯಕ್ತಿಗಳಾಗಿ ದ್ದಾರೆ. ನಿನ್ನೆ ಸಂಜೆ 4.30ರ ವೇಳೆ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಮಂಜೇಶ್ವರ ಎಸ್‌ಐಗಳಾದ ವೈಷ್ಣವ್ ರಾಮಚಂದ್ರನ್,ಉಮೇಶ್ ಕೆ.ಆರ್ ನೇತೃತ್ವದಲ್ಲಿ ಪೊಲೀಸರು …

ಉಸಿರಾಟ ತೊಂದರೆ: ಮೂರು ವರ್ಷದ ಬಾಲಕ ಮೃತ್ಯು

ಕಾಸರಗೋಡು: ಉಸಿರಾಟ ತೊಂದರೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೂರು ವರ್ಷದ   ಬಾಲಕ ಸಾವನ್ನಪ್ಪಿದ ಘಟನೆ  ನಡೆದಿದೆ. ಮೊಗ್ರಾಲ್ ಪುತ್ತೂರು ಮಜಲ್‌ನ ಜಗದಾಂಬ ನಿಲಯದ ಗಲ್ಫ್ ಉದ್ಯೋಗಿ ಪ್ರಶಾಂತ್ ಕುಮಾರ್-ಮಾಳವಿಕ ದಂಪತಿ ಪುತ್ರ  ಅಶ್ವಿಕ್ ಪಿ. ಸಾವನ್ನಪ್ಪಿದ ಬಾಲಕ. ಉಸಿರಾಟ ತೊಂದರೆಗೊಳಗಾದ ಬಾಲಕನನ್ನು ಈ ತಿಂಗಳ 17ರಂದು ವಿದ್ಯಾನಗರದ ಆಸ್ಪತ್ರೆಯೊಂದರಲ್ಲಿ ಮೊದಲು ಚಿಕಿತ್ಸೆ ನೀಡಲಾಗಿತ್ತು. ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಿ ಚಿಕಿತ್ಸೆ ನೀಡಿ ಬಳಿಕ ಅಲ್ಲಿಂದ ಬಿಡುಗಡೆ ಗೊಳಿಸಲಾಗಿತ್ತು.  ಮೊನ್ನೆ ರಾತ್ರಿ ಬಾಲಕನಿಗೆ ಮತ್ತೆ ಉಸಿರಾಟ ತೊಂದರೆ ಅನುಭವಗೊಂಡಾಗ …

ಬೈಕ್ ತಡೆದು ನಿಲ್ಲಿಸಿ ಸವಾರನಿಗೆ ಇರಿತ: ಇಬ್ಬರ ವಿರುದ್ಧ ಕೇಸು

ಉಪ್ಪಳ: ಕಾರಿನಲ್ಲಿ ತಲುಪಿದ ತಂಡ ಬೈಕ್ ತಡೆದು ನಿಲ್ಲಿಸಿ ಸವಾರನಿಗೆ ಇರಿದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಉಪ್ಪಳ ಕೋಡಿಬೈಲು ನಿವಾಸಿ ಜಕರಿಯ (61) ಎಂಬವರು ಇರಿತದಿಂದ ಗಾಯಗೊಂಡಿದ್ದಾರೆ.  ಈ ಸಂಬಂಧ ಬಟ್ಯಪದವು ನಿವಾಸಿ ರಜಾಕ್ ಸಹಿತ ಇಬ್ಬರ ವಿರುದ್ಧ ಜಾಮೀನುರಹಿತ ಕೇಸು ದಾಖಲಿಸಿಕೊಂಡಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ೪ ಗಂಟೆಗೆ ಘಟನೆ ನಡೆದಿದೆ.  ಜಕರಿಯ ಬೈಕ್‌ನಲ್ಲಿ  ವರ್ಕಾಡಿ ಭಾಗದಿಂದ ಉಪ್ಪಳ ಕಡೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ತಲುಪಿದ ರಜಾಕ್ ಸಹಿತ ಇಬ್ಬರು ತಡೆದು ನಿಲ್ಲಿಸಿ ಹಣ …