ಭೀಕರ ಬಸ್ ದುರಂತ: 12 ಮಂದಿ ಸಜೀವ ದಹನ; ಹಲವರಿಗೆ ಗಂಭೀರ
ಚಿತ್ರದುರ್ಗ: ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ಗೆ ಖಾಸಗಿ ಕಂಟೈನರ್ ಲಾರಿ ಢಿಕ್ಕಿ ಹೊಡೆದು ಅದರಂದ ಬೆಂಕಿ ಎದ್ದು 12 ಮಂದಿ ಪ್ರಯಾಣಿ ಕರು ಸಜೀವ ದಹನಗೊಂಡು, ಹಲವರು ಗಂಭೀರ ಸುಟ್ಟು ಗಾಯ ಗೊಂಡ ಭೀಕರ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜವನಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ಮುಂಜಾನೆ ನಡೆದಿದೆ. ಬಸ್ಸಿನಲ್ಲಿ ಒಟ್ಟು 32 ಮಂದಿ ಪ್ರಯಾಣಿಕರಿದ್ದರು. ಢಿಕ್ಕಿಯ ರಭಸದಿಂದ ಬಸ್ ಮತ್ತು ಕಂಟೈನರ್ ಲಾರಿ ಎರಡೂ ಬೆಂಕಿ ತಗಲಿ ಸಂಪೂರ್ಣ …