ಹೊಳೆಗೆ ತ್ಯಾಜ್ಯ ಉಪೇಕ್ಷೆ: ಕುಬಣೂರು ಸುವರ್ಣಗಿರಿ ಹೊಳೆ ಪರಿಸರ ದುರ್ವಾಸನೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕುಬಣೂರು ಸುವರ್ಣಗಿರಿ ಹೊಳೆಯಲ್ಲಿ ವ್ಯಾಪಕ ತ್ಯಾಜ್ಯವನ್ನು ಎಸೆದು ಪರಿಸರ ದುರ್ವಾಸನೆಯಿಂದ ಸಮಸ್ಯೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಗೋಣಿ ಚೀಲ, ಪ್ಲಾಸ್ಟಿಕ್ ಚೀಲದಲ್ಲಿ ಆಹಾರ ತ್ಯಾಜ್ಯ ಸಹಿತ ವಿವಿಧ ತ್ಯಾಜ್ಯಗಳನ್ನು ತಂದು ಉಪೇಕ್ಷಿಸಲಾಗುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ನೀರು ಮಲಿನಗೊಳ್ಳುತ್ತಿದೆ. ಶಾಂತಿಗುರಿಯಿAದ ಕುಬಣೂರು ವಿದ್ಯಾನಗರಕ್ಕೆ ಸಾಗುವ ಸೇತುವೆ ಇದಾಗಿದ್ದು, ಹೊಳೆ ಪರಿಸರದಲ್ಲಿ ದೇವಸ್ಥಾನ, ಮಸೀದಿ ಸಹಿತ ಹಲವಾರು ಮನೆಗಳು ಹಾಗೂ ನೂರಾರು ಮಂದಿ ಈ ರಸ್ತೆ ಮೂಲಕ ಸಂಚರಿಸÀÄತ್ತಿದ್ದಾರೆ. ರಾತ್ರಿ ಹೊತ್ತಲ್ಲಿ ತ್ಯಾಜ್ಯಗಳನ್ನು ವಾಹನದ …

ಅಟಲ್‌ಜಿ ಸೇವಾಸಂಘ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸುಶಾಸನ ದಿನಾಚರಣೆ

ಬದಿಯಡ್ಕ: ಮಾಜಿ ಪ್ರಧಾನಿ  ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಹಿನ್ನೆಲೆಯಲ್ಲಿ ಸುಶಾಸನ ದಿನವಾಗಿ ಅಟಲ್‌ಜಿ ಸೇವಾಸಂಘ ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಇದರ ಆಶ್ರಯದಲ್ಲಿ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಆಚರಿಸಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹರೀಶ್ ನಾರಂಪಾಡಿ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿ, ಹಸಿವುಮುಕ್ತ, ದಾರಿದ್ರ್ಯಮುಕ್ತ, ಭಯಮುಕ್ತ ವಾತಾವರಣದ ಕನಸು ಕಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಬಿತ್ತಿದ ರಾಷ್ಟ್ರಭಕ್ತಿಯ ಬೀಜ ಇಂದು ವಿಶ್ವದಲ್ಲೇ ಗುರುತಿಸುವ ಪಕ್ಷವಾಗಿ ಬಿಜೆಪಿ ಬೆಳೆದಿದೆ ಎಂದರು. ಆಶ್ರಮದ ಅಧ್ಯಕ್ಷ ಶ್ರೀಕೃಷ್ಣ …

ರೀಲ್ ಚಿತ್ರೀಕರಣಕ್ಕಾಗಿ ರೈಲನ್ನು ನಿಲ್ಲಿಸಿದ ಪ್ಲಸ್ ಟು ವಿದ್ಯಾರ್ಥಿಗಳ ಸೆರೆ

ಕಣ್ಣೂರು: ಅಪಾಯಕರವಾದ ರೀತಿಯಲ್ಲಿ ಟ್ರೈನ್‌ನ್ನು ತಡೆದು ನಿಲ್ಲಿಸಿ ಸಂಚಾರಕ್ಕೆ ತಡೆಯೊಡ್ಡಿದ ಇಬ್ಬರು ಪ್ಲಸ್ ಟು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ತಲಶ್ಶೇರಿ- ಮಾಹಿ ಮಧ್ಯೆ ಇರುವ ಹಳಿಯಲ್ಲಿ ವಿದ್ಯಾರ್ಥಿಗಳು ತಮಾಷೆ ಗಾಗಿ ರೀಲ್ ಚಿತ್ರೀಕರಿಸುತ್ತಿರುವಾಗ ಅಪರಿಮಿತ ವೇಗದಿಂದ ಸಂಚರಿಸುತ್ತಿದ್ದ ರೈಲಿಗೆ ಕೆಂಪು ದೀಪ ತೋರಿಸಿದ್ದು, ಈ ಹಿನ್ನೆಲೆಯಲ್ಲಿ ಲೋಕೋ ಪೈಲೆಟ್ ರೈಲನ್ನು ಸಡನ್ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ರೈಲು ನಿಂತ ಕೂಡಲೇ ಕ್ಯಾಮರಾ ಸಹಿತ ರೀಲ್ ಚಿತ್ರೀಕರಿಸಲು ಆರಂಭಿಸಿದ ವಿದ್ಯಾರ್ಥಿಗಳನ್ನು ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದರು. ಈ ಮಧ್ಯೆ ಓರ್ವ …

ಪೆರ್ಲ: ಅಭಿನಂದನೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ಸಂಸ್ಮರಣೆ

ಪೆರ್ಲ: ಬಿಜೆಪಿಯ ಧೀಮಂತ ನಾಯಕ, ಮಾಜಿ ಪ್ರಧಾನಿ ದಿ| ಅಟಲ್ ಬಿಹಾರಿ ವಾಜಪೇಯಿ ಅವರ ಸಂ ಸ್ಮರಣೆಯೊಂದಿಗೆ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಎಣ್ಮಕಜೆ ಪಂ.ನ 9ನೇ ವಾರ್ಡ್ ವಾಣಿನಗರದಿಂದ ವಿಜೇತರಾದ ನಳಿನಾಕ್ಷಿ ರವೀಶ್ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿ ಗಾಗಿ ದುಡಿದ ಕಾರ್ಯಕರ್ತರಿಗೆ ಬಿಜೆಪಿ ವಾಣಿನಗರ ವಾರ್ಡ್ ಸಮಿತಿ ವತಿಯಿಂದ ಅಭಿನಂದನಾ ಸಭೆ ಹಿರಿಯ ಕಾರ್ಯಕರ್ತ ಜಗದೀಶ್ ಕುತ್ತಾಜೆ ಅವರ ನಿವಾಸದಲ್ಲಿ ಜರುಗಿತು.ವಾಣಿನಗರ ವಾರ್ಡ್ ಸಮಿತಿ ಅಧ್ಯಕ್ಷ ಮಹೇಶ್ ಕುಂಡಾಪು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿಧಾನ ಪರಿಷತ್ …

ಮೃತ ವ್ಯಕ್ತಿಯ ಚರ್ಮದಾನ: ರಾಜ್ಯದಲ್ಲಿ ಮೊದಲ ಬಾರಿಗೆ ಯಶಸ್ವೀ ಶಸ್ತ್ರಚಿಕಿತ್ಸೆ

ತಿರುವನಂತಪುರ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೃತ ವ್ಯಕ್ತಿಯೊಬ್ಬರ ಚರ್ಮವನ್ನು ದಾನ ಮಾಡಿದ ಘಟನೆ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. ರಸ್ತೆ ಅಪಘಾತದಿಂದಾಗಿ ಮೆದುಳಿನ ಆಘಾತ ಸಂಭವಿಸಿ ಮೃತಪಟ್ಟ ಕೊಲ್ಲಂ ಚಿರಯ್ಕರ ಇಡವಟ್ಟ ನಿವಾಸಿಯಾದ 46ರ ಹರೆಯದ ವ್ಯಕ್ತಿಯೊಬ್ಬರ ಚರ್ಮವನ್ನು ಕುಟುಂಬ ದಾನ ಮಾಡಲು ಮುಂದಾ ಗಿದೆ. ಹೀಗೆ ದಾನವಾಗಿ ಲಭಿಸುವ ಚರ್ಮವನ್ನು ಮಾರಕವಾಗಿ ಸುಟ್ಟು ಗಾಯಗೊಳ್ಳುವವರ ಸಹಿತ ಚರ್ಮ ಅಗತ್ಯವುಳ್ಳವರಿಗೆ ಅಳವಡಿಸುವ ಮೂಲಕ ಅವರ ಜೀವ ರಕ್ಷಿಸಲು ಸಾಧ್ಯವಿದೆ. ಚರ್ಮ ಸಂಗ್ರಹಿಸಿ ಭದ್ರವಾಗಿರಿಸುವ ಸ್ಕಿನ್ …

ಕಾಞಂಗಾಡ್ ವಿಧಾನಸಭಾ ಮಂಡಲ ಈ ಬಾರಿ ಸಿಪಿಎಂ ವಶಪಡಿಸಲಿದೆಯೇ? ಚರ್ಚೆ ಸಕ್ರಿಯ

ಹೊಸದುರ್ಗ: ಜಿಲ್ಲೆಯ ೫ ವಿಧಾನಸಭಾ ಮಂಡಲಗಳಲ್ಲಿ ಎಡಪಕ್ಷ ಹಾಗೂ ಸಿಪಿಎಂ 100 ಶೇಕಡಾ ಜಯ ಸಾಧ್ಯತೆ ಇರಿಸಿ ಕೊಂಡಿರುವ ಮಂಡಲವಾಗಿದೆ ಕಾಞಂಗಾಡ್. ಹಳೆಯ ಹೊಸ ದುರ್ಗ ಮಂಡಲ ಹೆಸರು ಬದಲಿಸಿ ಕಾಞಂಗಾಡ್ ಎಂದು ಕರೆಸಿ ಕೊಂಡಿದೆ. ಆ ಬಳಿಕ ಎಡಪಕ್ಷದ ಅಭ್ಯರ್ಥಿ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಸಿಪಿಐ ಪಕ್ಷದ ಉನ್ನತ ಮುಖಂಡ, ರಾಜ್ಯ ಕಂದಾಯ ಸಚಿವರೂ ಆಗಿದ್ದ ಇ. ಚಂದ್ರಶೇಖರನ್ ಇಲ್ಲಿಂದ ಮೂರು ಬಾರಿ ಆಯ್ಕೆಯಾಗಿದ್ದಾರೆ. ಅದಕ್ಕಿಂತಲೂ ಮುಂಚಿತ ಹೊಸ ದುರ್ಗ ಮಂಡಲವಾಗಿದ್ದಾಗಲೂ ಸಿಪಿಐಯ …

ಎಕೆಪಿಎ ಕಾಸರಗೋಡು ಈಸ್ಟ್ ಘಟಕದಿಂದ ಕ್ರಿಸ್ಮಸ್ ಆಚರಣೆ

ಬದಿಯಡ್ಕ: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋ ಸಿಯೇಶನ್ ಕಾಸರಗೋಡು ಈಸ್ಟ್ ಘಟಕದ ಕ್ರಿಸ್ಮಸ್ ದಿನಾಚರಣೆ ಬದಿಯಡ್ಕ ಬೀಜಂತಡ್ಕದ ಸ್ನೇಹಾಲಯದಲ್ಲಿ ಜರಗಿತು. ಕೇಕ್ ತುಂಡರಿಸಿ, ಸ್ನೇಹಾಲಯದ ನಿವಾಸಿಗಳಿಗೆ ಆಹಾರ ವಿತರಿಸಿ ಸಂಭ್ರಮಿಸಲಾಯಿತು. ಯೂನಿಟ್ ಅಧ್ಯಕ್ಷ ರಾಜಶೇಖರ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ರಾಜೇಂದ್ರನ್ ವಿ.ಎನ್, ವಲಯ ಕೋಶಾಧಿಕಾರಿ ಅಜಿತ್ ಕುಮಾರ್, ಕೋಶಾಧಿಕಾರಿ ಶ್ರೀಕಾಂತ್, ಪಿಆರ್‌ಒ ಮನೀಶ್, ಜೊತೆ ಕಾರ್ಯದರ್ಶಿ ಸುರೇಶ್ ಚಂದ್ರ, ಸ್ನೇಹಾಲಯದ ಮದರ್ ಬೀನ, ಸಿಸ್ಟರ್ ಬಿಂದು, ರೋಸ್‌ಮೇರಿ, ಸಿಸ್ಟರ್ ಮೇರಿಮಾತ ಭಾಗವಹಿಸಿದರು. ಕಾರ್ಯದರ್ಶಿ ಅಖಿಲ್ …

ಶಬರಿಮಲೆ ಮಾತ್ರವಲ್ಲ ತಿರುವನಂತಪುರ ಶ್ರೀ ಪದ್ಮನಾಭ ಕ್ಷೇತ್ರ ವಿಗ್ರಹಗಳನ್ನೂ ಸಾಗಿಸುವ ಯತ್ನ ನಡೆದಿತ್ತು- ಸ್ಪೋಟಕ ಹೇಳಿಕೆ

ತಿರುವನಂತಪುರ: ಶಬರಿಮಲೆ ದೇಗುಲದ ನಾಲ್ಕು ಪಂಚಲೋಹ ವಿಗ್ರಹಗಳನ್ನು ಸಾಗಿಸಲು ಯತ್ನಿಸಿದ ಅಂತಾರಾಷ್ಟ್ರೀಯ ವಿಗ್ರಹ ಸಾಗಾಟ ಮಾಫಿಯಾ ತಂಡ ಅತೀವ ಶ್ರೀಮಂತ ದೇಗುಲವೆಂದೇ ಖ್ಯಾತಿ ಹೊಂದಿರುವ ತಿರುವನಂತಪುರದ ಶ್ರೀ ಪದ್ಮನಾಭ ಕ್ಷೇತ್ರದ ಪಂಚಲೋಹ ವಿಗ್ರಹಗಳನ್ನೂ ಸಾಗಿಸುವ ಯತ್ನ ನಡೆಸಿತ್ತೆಂದೂ ಇದಕ್ಕಾಗಿ ಆ ತಂಡದವರು ಹಣದೊಂದಿಗೆ ಈಗಲೂ ತಿರುವನಂತಪುರದಲ್ಲಿ ಸುತ್ತಾಡುತ್ತಿದ್ದಾರೆಂದು ದುಬೈಯ ಉದ್ಯಮಿ ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ  ಹೇಳಿಕೆ ನೀಡಿದ್ದಾರೆ. ಶಬರಿಮಲೆ ಕ್ಷೇತ್ರದ ಚಿನ್ನ ಮಾತ್ರವಲ್ಲ ಅಲ್ಲಿನ ನಾಲ್ಕು ಪಂಚಲೋಹ …

ಆಟೋ ರಿಕ್ಷಾ ಚಾಲಕ ಹೃದಯಾಘಾತದಿಂದ ನಿಧನ

ಉಪ್ಪಳ: ಆಟೋ ರಿಕ್ಷಾ ಚಾಲಕ ರೊಬ್ಬರು ಹೃದಯಾಘಾತದಿಂದ ನಿಧನ ಹೊಂದಿದರು. ಮೀಯ ಪದವು ಕುಳಬಯಲು ಪಾಲಡಿ ನಿವಾಸಿ ಅಬ್ದುಲ್ ಜಬ್ಬಾರ್ (45) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಹೊಸಂಗಡಿಯಲ್ಲಿ ಆಟೋ ಚಾಲಕ ರಾಗಿದ್ದರು. ಇಂದು ಮುಂಜಾನೆ 1 ಗಂಟೆ ವೇಳೆಗೆ ಇವರಿಗೆ ಮನೆಯಲ್ಲಿ ಹೃದಯಾಘಾತ ಉಂಟಾಗಿತ್ತು. ಕೂಡಲೇ ಕುಂಬಳೆ ಆಸ್ಪತ್ರೆಗೆ ತಲುಪಿಸಿದ್ದು. ಅಷ್ಟರಲ್ಲಿ ನಿಧನ ಸಂಭವಿಸಿತ್ತು. ಮೃತರು ಪತ್ನಿ ಫಾತಿಮತ್ ಸುಹರಾ, ಮಕ್ಕಳಾದ ಇಮ್ರಾನ್ ಸಾಲಿ, ಫಾತಿಮಾ, ರಝ ಹಾಗೂ ನಾಲ್ವರು ಸಹೋದರರು, ಏಳು ಮಂದಿ ಸಹೋದರಿಯರ …

ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದು ಯುವಕ ಮೃತ್ಯು: ಸ್ನೇಹಿತನಿಗೆ ಗಂಭೀರ ಗಾಯ

ಕಾಸರಗೋಡು: ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ದಾರುಣ ಘಟನೆ ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೋತ್ ಎಂಬಲ್ಲಿ ಸಂಭವಿಸಿದೆ. ಜೊತೆಗಿದ್ದ ಸ್ನೇಹಿತ ಗಂಭೀರ ಗಾಯಗೊಂಡಿದ್ದಾನೆ. ಮಾಲೋತ್‌ನ ಬಿನು ಕುಮಾರ್ – ಲತಾ ದಂಪತಿಯ ಪುತ್ರ ಮಿಥುನ್‌ರಾಜ್ (20) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಗಂಭೀರ ಗಾಯಗೊಂಡ ಸಚ್ಚು ಎಂಬಾತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ 1 ಗಂಟೆ ವೇಳೆ ಅಪಘಾತವುಂಟಾಗಿದೆ. ಕ್ರಿಸ್ಮಸ್ ಕರೋಲ್ ತಂಡದೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿದ್ದ ಇವರು ಬಳಿಕ ಮಾಲೋತ್‌ಗೆ ತೆರಳುತ್ತಿದ್ದರು.  ಇವರು …