ಉಮೇಶ್ ಕಾಮತ್ ಕಂಪೆನಿ ಮಾಲಕ ನಿಧನ

ಕಾಸರಗೋಡು: ಕಾಞಂಗಾಡ್‌ನ ಹಿರಿಯ ವ್ಯಾಪಾರಿ ಕೆ. ಉಮೇಶ್ ಕಾಮತ್ ಕಂಪೆನಿಯ ಮಾಲಕ ಮೇಲಾಂಗೋಟ್ ಎಸ್‌ಎಸ್ ಕಲಾ ಮಂದಿರ ಸಮೀಪ ನಿವಾಸಿ ಕೆ. ಉಮೇಶ್ ಕಾಮತ್ (78) ನಿಧನ ಹೊಂದಿದರು. ಕಾಞಂಗಾಡ್‌ನ ಮೊದಲ ಮಿಠಾಯಿ ನಿರ್ಮಾಣ ಕಂಪೆನಿಯಾದ ಬ್ರೂಕ್ ಕನ್ಫೆಕ್ಷನರಿ ಮಾಲಕನಾಗಿದ್ದರು. ಕಾಞಂಗಾಡ್ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ, ಹೊಸದುರ್ಗ ಲಕ್ಷ್ಮೀವೆಂಕಟೇ ಶ್ವರ ಕ್ಷೇತ್ರ ಮೆನೇಜಿಂಗ್ ಟ್ರಸ್ಟಿ, ಜಿಎಸ್‌ಬಿ ಗ್ರಾಮಸಭಾ ಅಧ್ಯಕ್ಷ, ಕಾಞಂಗಾಡ್ ಚಿನ್ಮಯ ಮಿಷನ್ ಅಧ್ಯಕ್ಷ ಸಹಿತ ವಿವಿಧ ರಂಗದಲ್ಲಿ ಕಾರ್ಯಾ ಚರಿಸಿದ್ದರು. ಇಂದು ಬೆಳಿಗ್ಗೆ …

ಕುಬಣೂರು ರಸ್ತೆಯಲ್ಲಿ ಮತ್ತೆ ತ್ಯಾಜ್ಯ ಉಪೇಕ್ಷೆ: ಸಂಚಾರ ಸಮಸ್ಯೆ

ಉಪ್ಪಳ: ರಸ್ತೆ ಬದಿಯಲ್ಲಿ ತ್ಯಾಜ್ಯ ಉಪೇಕ್ಷಿಸುತ್ತಿರುವ ಕೃತ್ಯ ಮತ್ತೆ ವ್ಯಾಪಕಗೊಂಡಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ. ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಊರವರು ಒತ್ತಾಯಿಸಿದ್ದಾರೆ. ಶಾಂತಿಗುರಿ-ಕುಬಣೂರು ರಸ್ತೆಯ ವಿವಿಧೆಡೆಗಳಲ್ಲಿ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ರಾತ್ರಿ ವಾಹನ ಸಂಚಾರದ ವೇಳೆ ಇಲ್ಲಿ ಪ್ಲಾಸ್ಟಿಕ್ ಸಹಿತ ವಿವಿಧ ರೀತಿಯ ತ್ಯಾಜ್ಯವನ್ನು ಎಸೆಯಲಾಗುತ್ತಿರುವುದಾಗಿ ದೂರಲಾಗಿದೆ. ಹಲವು ವರ್ಷಗಳ ಹಿಂದೆ ಈ ಪರಿಸರದ ಸುವರ್ಣಗಿರಿ ಹೊಳೆಗೆ ಮದುವೆ ಸಮಾರಂಭದ ಅವಶಿಷ್ಠಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಸೆಯಲಾಗಿದ್ದು, ಇದನ್ನು …

ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕೋತ್ಸವ ಆರಂಭ

ಪೈವಳಿಕೆ: ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ೧೮ನೇ ವಾರ್ಷಿಕೋತ್ಸವ ಇಂದು ಹಾಗೂ ನಾಳೆ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದ್ದು, ಇಂದು ಬೆಳಿಗ್ಗೆ ಮಂದಿರದ ಪ್ರಧಾನ ಅರ್ಚಕ ವೇ|ಮೂ| ವೆಂಕಟರಮಣ ಮೂಡಿತ್ತಾಯ ದೀಪ ಪ್ರಜ್ವಲನೆ ಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಭಜನೆ ಪ್ರಾರಂಭ ಗೊಂಡಿತು. ದ್ವಾದಶ ನಾಳೀಕೇರ ಗಣಯಾಗ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ೭ಕ್ಕೆ ನೃತ್ಯ ಸಂಭ್ರಮ, ೯ಕ್ಕೆ ಯಕ್ಷಗಾನ ನಾಟ್ಯ ವೈಭವ, ೧೦ಕ್ಕೆ ಕಲಾ …

ಮಾಡಾಯಿಕಾವು ಕ್ಷೇತ್ರದ ಸೇವಾ ರಶೀದಿಯ ನಕಲಿ ಉಪಯೋಗಿಸಿ ವಂಚನೆ: ನೌಕರ ಅಮಾನತು

ಪಯ್ಯನ್ನೂರು: ಪ್ರಸಿದ್ಧ ಕ್ಷೇತ್ರವಾದ ಮಾಡಾಯಿಕಾವುನಲ್ಲಿ ಬಲಿವಾಡು ಸೇವೆಗೆ ನಕಲಿ ರಶೀದಿ ಉಪಯೋಗಿಸಿ  ಹಣ ವಂಚಿಸಿದ ನೌಕರನನ್ನು ಅಮಾನತುಗೊಳಿಸಲಾಗಿದೆ. ಮಲಬಾರ್ ದೇವಸ್ವಂ ಎಂಪ್ಲೋಯಿಸ್ ಯೂನಿಯನ್ (ಸಿಐಟಿಯು) ಮಾಡಾಯಿ ಏರಿಯಾ ಕಾರ್ಯದರ್ಶಿ, ಜಿಲ್ಲಾ ಸಮಿತಿ ಸದಸ್ಯನಾದ ಎ.ವಿ. ಅನೀಶ್ (೪೫) ವಂಚನೆ ನಡೆಸಿರುವ ವ್ಯಕ್ತಿ. ಮಾಡಾಯಿಕಾವ್‌ನ ಕೌಂಟರ್‌ನಲ್ಲಿ ಕರ್ತವ್ಯದಲ್ಲಿದ್ದ ನೌಕರನಾಗಿದ್ದಾನೆ ಈತ. ಸೋಮವಾರ ಕ್ಷೇತ್ರದರ್ಶನಕ್ಕೆ ತಲುಪಿದ ಕರ್ನಾಟಕ ನಿವಾಸಿಗೆ ನೀಡಿದ ಸೇವಾ ರಶೀದಿಯ ನಕಲಿ ಪ್ರತಿಯನ್ನು ಇನ್ನೋರ್ವರಿಗೆ ರಶೀದಿಯಾಗಿ ನೀಡಿ ಹಣವನ್ನು ಜೇಬಿಗಿಳಿಸಿರುವುದಾಗಿ ದೂರಲಾಗಿದೆ. ಕರ್ನಾಟಕ ನಿವಾಸಿಗೆ ನೀಡಿದ ರಶೀದಿಯ …

ಬೇಳ ಕುಮಾರಮಂಗಲ ಕ್ಷೇತ್ರದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ

ಬೇಳ: ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯ ಕ್ರಮ ಜರಗಿತು. ಡಾ. ವಾಣಿಶ್ರೀ ಪ್ರಸ್ತುತ ಪಡಿಸಿದರು. ವಿದ್ವಾಂಸ ನಾರಾಯಣ ಭಟ್ ರಚಿಸಿದ ಪದ್ಯಗಳಿಗೆ ಸಂಸ್ಥೆಯ ನವ್ಯಶ್ರೀ ಕುಲಾಲ್, ಶರಣ್ಯ ಶೆಟ್ಟಿ, ಯಶಿಕ ಸಂದೀಪ್, ದಿಯಾ ಸುಕೇಶ್ ನೃತ್ಯ ಮಾಡಿದರು. ನಾರಾಯಣ ಭಟ್‌ರ ಪುತ್ರ ಡಾ. ವೆಂಕಟ ಗಿರೀಶ್‌ರನ್ನು ಗೌರವಿಸಲಾಯಿತು. ಗೋಪಾಲಕೃಷ್ಣ, ವಿಶ್ವನಾಥ ಪುತ್ತಿಗೆ, …

ರಾಹುಲ್ ಮಾಂಕೂಟತ್ತಿಲ್ ಪಕ್ಷಕ್ಕೆ ಸವಾಲೆಸೆದಿರುವುದು ಸರಿಯಲ್ಲ-ಸಂಸದ  ಉಣ್ಣಿತ್ತಾನ್

ಕಾಸರಗೋಡು: ಶಾಸಕ ರಾಹುಲ್ ಮಾಂಕೂಟತ್ತಿಲ್ ವಿಷಯ ದಲ್ಲಿ ಕಾಸರಗೋಡು  ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕಟುವಾಗಿ ಟೀಕೆ ವ್ಯಕ್ತಪಡಿಸಿದ್ದಾರೆ.  ರಾಹುಲ್ ರನ್ನು ಬೆಂಬಲಿಸುವವರ ವಿರುದ್ಧವೂ ಅವರು ರೋಷ ವ್ಯಕ್ತಪಡಿಸಿದ್ದಾರೆ.  ರಾಹುಲ್ ಮಾಂಕೂಟತ್ತಿಲ್ ಬೆತ್ತ ನೀಡಿ ಹೊಡೆಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಉತ್ತಮ ನಿರೀಕ್ಷೆಯಿರಿಸಿಕೊಂಡಿದ್ದ ಯುವ ನೇತಾರ ಪಕ್ಷಕ್ಕೆ ಸವಾಲೆಸೆ ದಿರುವುದು ಸರಿಯಲ್ಲವೆಂದು ಉಣ್ಣಿತ್ತಾನ್ ತಿಳಿಸಿದ್ದಾರೆ. ಇದೇ ವೇಳೆ ರಾಹುಲ್ ವಿರುದ್ಧ ಈ ಹಿಂದೆ ಶಿಸ್ತು ಕ್ರಮ ಕೈಗೊಂಡಿರುವುದಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ಕೆ. ಮುರಳೀಧರನ್ ತಿಳಿಸಿದಾರೆ. ಶಾಸಕ ಸ್ಥಾನಕ್ಕೆ ರಾಜೀ …

ಯುವತಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭಪಾತ: ಕೇಸು ದಾಖಲಿಸಿಕೊಂಡ ಬೆನ್ನಲ್ಲೇ ತಲೆಮರೆಸಿಕೊಂಡ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್

ತಿರುವನಂತಪುರ: ತಿರುವನಂತಪುರ ನಿವಾಸಿಯಾಗಿರುವ ಯುವತಿಗೆ  ಮದುವೆ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಗರ್ಭಿಣಿಯಾದ ಆಕೆಯನ್ನು ಗರ್ಭಛಿದ್ರಗೊಳಪಡಿಸಿರುವುದಾಗಿ ಆರೋಪಿಸಿ ನೀಡಿದ ದೂರಿನಂತೆ ಯೂತ್ ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷರೂ, ಪಾಲಕ್ಕಾಡ್ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ  ರಾಹುಲ್ ಮಾಂಕೂಟತ್ತಿಲ್ (36) ವಿರುದ್ಧ ತಿರುವನಂತಪುರ ನೆಡುಮಂ ಙಾಡ್ ವಲಿಯಮಲ ಪೊಲೀಸರು ಜಾಮೀನುರಹಿತ ಕೇಸುದಾಖಲಿಸಿ ಕೊಂಡಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 89ರ ಪ್ರಕಾರ ಈ ಪ್ರಕರಣ ದಾಖಲಿಸಲಾಗಿದ್ದು, ಇದು 10 ವರ್ಷ ಸಜೆ ಲಭಿಸುವ ಅಪರಾಧಕೃತ್ಯವಾಗಿದೆ. ಇದರ ಹೊರತಾಗಿ ಗರ್ಭಛಿದ್ರ ಗೊಳಿಸಲು …

ಹಿರಿಯ ವ್ಯಾಪಾರಿ ಶಂಭು ಹೆಬ್ಬಾರ್ ನಿಧನ

ಸೀತಾಂಗೋಳಿ: ಸೀತಾಂ ಗೋಳಿ ಪೇಟೆಯ  ಹಿರಿಯ ವ್ಯಾಪಾರಿ  ಶಂಭು ಹೆಬ್ಬಾರ್ (63) ಸ್ವ-ಗೃಹದಲ್ಲಿ ನಿಧನಹೊಂದಿದರು. ಸೀತಾಂ ಗೋಳಿ ನಿವಾಸಿಯಾದ ಇವರು ಹಲವು ವರ್ಷಗಳ ಕಾಲ ಸೀತಾಂ ಗೋಳಿ ಪೇಟೆಯಲ್ಲಿ ವ್ಯಾಪಾರಿ ಯಾಗಿದ್ದರು. ಬಳಿಕ ಅಸೌಖ್ಯ ಬಾಧಿಸಿದ ಹಿನ್ನೆಲೆ ಯಲ್ಲಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಮೃತರು ಪತ್ನಿ ದೇವಕಿ, ಮಕ್ಕ ಳಾದ ಶರತ್, ಕಾರ್ತಿಕ್, ಪ್ರತೀಕ್ಷ, ಸಹೋದರರಾದ ಸುಬ್ರ ಹ್ಮಣ್ಯ, ರಾಮಕೃಷ್ಣ, ಮಹಾದೇವ, ಸಹೋ ದರಿ ಕಾವೇರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ

ಪತ್ನಿ ಮೃತಪಟ್ಟ 20ನೇ ದಿನ ಪತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಪತ್ನಿ ಮೃತಪಟ್ಟ 20ನೇ ದಿನ ಪತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮಂಜೇಶ್ವರ ಬಡಾಜೆ ಮಜಳಿಕೆ ನಿವಾಸಿ ಮಾಧವ (68) ಎಂಬವರು  ಸಾವಿಗೀಡಾದ ವ್ಯಕ್ತಿ. ನಿನ್ನೆ ರಾತ್ರಿ 7.30ರ ವೇಳೆ ಮನೆಯ ಬೆಡ್‌ರೂಂನ ಕಿಟಿಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದರು.  ಕೂಡಲೇ ಸಹೋದರರು ಮಾಧವ ರನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮಾಧವರ ಪತ್ನಿ ಉಷಾ ನವಂಬರ್ 7ರಂದು ಹೃದಯಾ ಘಾತದಿಂದ ನಿಧನಹೊಂದಿದ್ದರು. ಅನಂತರ ಇವರು ಮನೆಯಲ್ಲಿ …

ಬಿಎಲ್‌ಒಗೆ ಹಲ್ಲೆಗೈಯ್ಯಲೆತ್ನ : ಸಿಪಿಎಂ ಲೋಕಲ್ ಸೆಕ್ರೆಟರಿ ಬಂಧನ

ಮುಳ್ಳೇರಿಯ: ಎಸ್‌ಐಆರ್ ಫಾರ್ಮ್ ನೀಡಿಲ್ಲವೆಂದು ಆರೋಪಿಸಿ ಬೂತ್ ಲೆವೆಲ್ ಆಫೀಸರ್‌ಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೈಯ್ಯಲು ಯತ್ನಿಸಿದ  ಸಿಪಿಎಂ ಲೋಕಲ್ ಸೆಕ್ರೆಟರಿಯನ್ನು ಬಂಧಿಸಲಾಗಿದೆ. ದೇಲಂಪಾಡಿ ಪಂಚಾಯತ್  ಸ್ಥಾಯೀ ಸಮಿತಿ ಅಧ್ಯಕ್ಷನೂ ಪಾಂಡಿ ಲೋಕಲ್ ಸೆಕ್ರೆಟರಿಯಾದ  ಚಾಪೆಕ್ಕಲ್‌ನ ಎ. ಸುರೇಂದ್ರನ್ (53)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಪಯರಡ್ಕ ವಾರ್ಡ್‌ನ  ಬಿಎಲ್‌ಒ ಪಿ. ಅಜಿತ್ ನೀಡಿದ ದೂರಿನಂತೆ    ಸುರೇಂದ್ರನ್‌ನನ್ನು ಬಂಧಿಸಲಾಗಿದೆ. ನಿನ್ನೆ ಬೆಳಿಗ್ಗೆ 10 ಗಂಟೆಗೆ ಚಾಪೆಕ್ಕಲ್ ಕಮ್ಯುನಿಟಿ ಹಾಲ್‌ನಲ್ಲಿ  ಅಜಿತ್‌ಗೆ ಹಲ್ಲೆಗೈಯ್ಯಲೆತ್ನಿಸಿರುವುದಾಗಿ ದೂರಲಾಗಿದೆ. ಎಸ್‌ಐಆರ್ ಫಾರ್ಮ್ ಸಂಗ್ರಹಿಸಲೆಂದು  ಬಿಎಲ್‌ಒ ಅಲ್ಲಿಗೆ …