ಸಾರ್ವಕಾಲಿಕ ಗರಿಷ್ಠ ದಾಖಲೆ: ಪವನ್‌ಗೆ 1 ಲಕ್ಷ ರೂ. ಗಡಿ ದಾಟಿ ನಾಗಾಲೋಟ ಮುಂದುವರಿಸಿದ ಚಿನ್ನದ ಬೆಲೆ

ತಿರುವನಂತಪುರ:  ಚಿನ್ನದ ಬೆಲೆಯ ನಾಗಾಲೋಟ ಇನ್ನೂ ಮುಂದುವರಿದಿದೆ. ನಿನ್ನೆ ಪವನ್‌ಗೆ 99,840 ರೂ. ಆಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಬೆಳಿಗ್ಗೆ 1,760 ರೂ.ಗಳ ಏರಿಕೆ ಉಂಟಾಗಿ   ಈಗ 1,01,600 ರೂ.ಗೇರಿ ಸಾರ್ವಕಾಲಿಕ ಗರಿಷ್ಠ ದಾಖಲೆ ನಿರ್ಮಿಸಿದೆ. ಈ ವರ್ಷ ಜನವರಿಯಲ್ಲಿ 1 ಪವನ್ ಚಿನ್ನದ ಬೆಲೆ ೫೭ ಸಾವಿರ ರೂ. ಆಗಿತ್ತು. ವರ್ಷದ ಕೊನೆಯ ತಿಂಗಳಾದ ಇಂದು ಅದು 1,01,600 ರೂ.ಗೇರಿದೆ. ಇದು ಚಿನ್ನದ ಬೆಲೆಯ ನಾಗಾಲೋಟ ಇನ್ನೂ ಮುಂದುವರಿ ಯಲಿದೆಯೆಂಬುವುದರ  ಒಂದು ಸೂಚನೆಯಾಗಿದೆ. ಜಾಗತಿಕ ಬಿಕ್ಕಟ್ಟಿನ …

ನಿಲ್ಲಿಸಿದ್ದ ಆಂಬುಲೆನ್ಸ್ ಕಳವುಗೈದ ಯುವಕ ಸೆರೆ

ಮಂಗಳೂರು: ನಿಲ್ಲಿಸಿದ್ದ ಆಂಬುಲೆನ್ಸ್‌ನ್ನು ಕಳವುಗೈದು ಕೊಂಡೊಯ್ದ ಯುವಕನೋರ್ವ ಸೆರೆಗೀಡಾಗಿದ್ದಾನೆ. ಕಾರ್ಕಳ ನಿವಾಸಿಯಾದ ಶೋಡನ್ (22) ಎಂಬಾತ ಸೆರೆಗೀಡಾದ ವ್ಯಕ್ತಿ. ಕಡಬದ    ಶಿರಾಡಿ ನಿವಾಸಿ ಸುರೇಶ್ (46) ನೀಡಿದ ದೂರಿನಂತೆ ಶೋಡನ್‌ನನ್ನು ಬಂಧಿಸಲಾಗಿದೆ. ಈ ತಿಂಗಳ ೧೯ರಂದು  ಆಂಬುಲೆನ್ಸ್ ಕಳವಿಗೀ ಡಾಗಿದೆ.  ಅಪಘಾತವೊಂದಕ್ಕೆ ಸಂಬಂಧಿಸಿ ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ಗುಂಡ್ಯ ಚೆಕ್ ಪೋಸ್ಟ್ ಸಮೀಪ ಆಂಬುಲೆನ್ಸ್ ನಿಲ್ಲಿಸಲಾಗಿತ್ತು.  ಬೇರೊಬ್ಬ ಚಾಲಕ ಶೀಘ್ರ ಅಲ್ಲಿಗೆ ತಲುಪುವನೆಂದು ತಿಳಿಸಿದ ಹಿನ್ನೆಲೆಯಲ್ಲಿ ಸುರೇಶ್ ಕೀಲಿಕೈಯನ್ನು ಆಂಬುಲೆನ್ಸ್‌ನೊಳಗೆ ಇರಿಸಿ ಮನೆಗೆ ಹೋಗಿದ್ದರು.    20ರಂದು …

ನಟಿಗೆ ದೌರ್ಜನ್ಯ ಪ್ರಕರಣದಲ್ಲಿ ದಿಲೀಪ್‌ರನ್ನು ಆರೋಪಮುಕ್ತಗೊಳಿಸಿದ ತೀರ್ಪಿನ ವಿರುದ್ಧ  ಅಪೀಲು ಸಲ್ಲಿಸಲು ಸರಕಾರ ಅನುಮತಿ

ಕೊಚ್ಚಿ: ನಟಿಗೆ ದೌರ್ಜನ್ಯಗೈದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲ ಯದ  ತೀರ್ಪಿನ ವಿರುದ್ಧ ಹೈಕೋ ರ್ಟ್‌ನಲ್ಲಿ ಅಪೀಲು ಸಲ್ಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.  ಡಿಜಿಪಿ ಹಾಗೂ ಸ್ಪೆಷಲ್ ಪ್ರಾಸಿಕ್ಯೂಟರ್‌ರ ಶಿಫಾರಸ್ಸನ್ನು ಅಂಗೀಕರಿಸಿ ಸರಕಾರ ಇದಕ್ಕೆ ಅಂಗೀಕಾರ ನೀಡಿದೆ. ೮ನೇ ಆರೋಪಿ ನಟ ದಿಲೀಪ್ ಸಹಿತ  4 ಮಂದಿಯನ್ನು ಆರೋಪಮುಕ್ತಗೊಳಿಸಿದ  ಎರ್ನಾಕುಳಂ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸರಕಾರ ಅಪೀಲು ಸಲ್ಲಿಸಲಿದೆ.  ಸಂತ್ರಸ್ತೆ ಮುಖ್ಯಮಂತ್ರಿಯೊಂದಿಗೆ ನಡೆಸಿದ ಸಮಾಲೋಚನೆಯ ಬೆನ್ನಲ್ಲೇ ಅಪೀಲು  ಸಲ್ಲಿಸಲಿರುವ ಕ್ರಮಗಳನ್ನು ತ್ವರಿತಗೊಳಿ ಸಲು ಸರಕಾರ ತೀರ್ಮಾನಿಸಿದೆ.  …

ಎಂಡಿಎಂಎ ಮಾರಾಟಕ್ಕೆ ತಲುಪಿದ ಉಪ್ಪಳ ನಿವಾಸಿ ಉಳ್ಳಾಲದಲ್ಲಿ ಸೆರೆ

ಮಂಜೇಶ್ವರ: ಎಂಡಿಎಂಎ ಮಾರಾ ಟಕ್ಕೆ ತಲುಪಿದ ಉಪ್ಪಳ ನಿವಾಸಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮಾದಕ ವಸ್ತು ಪಡೆಯಲು ತಲುಪಿದ ವ್ಯಕ್ತಿಗಳು ಈ ವೇಳೆ ಪರಾರಿಯಾಗಿದ್ದಾರೆ. 22ರ ಹರೆಯದ ಶೇಖ್ ಮುಹಮ್ಮದ್ ಕೈಫ್ ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ತಲಪಾಡಿ ಕೆ.ಸಿ ರೋಡ್‌ನ ಫಲಾಹ್ ಶಾಲೆ ಬಸ್ ನಿಲಾಣ ಸಮೀಪದಿಂದ ಯುವಕನನ್ನು ಸೆರೆ ಹಿಡಿಯಲಾಗಿದೆ. ಪೊಲೀಸರನ್ನು ಕಂಡು ಶಮೀರ್ ಕಾಂಬ್ಳೆ, ಜಾವಿದ್ ಎಂಬಿವರು ಬೈಕ್‌ನಲ್ಲಿ ಪರಾರಿಯಾಗಿ ದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಶೇಖ್ ಮುಹಮ್ಮದ್ …

ಮಸೀದಿಗೆ ಹೋದ ಉಸ್ತಾದ್ ನಾಪತ್ತೆ: ಸ್ಕೂಟರ್ ರೈಲು ನಿಲ್ದಾಣ ಪರಿಸರದಲ್ಲಿ ಪತ್ತೆ

ಕುಂಬಳೆ: ಉಸ್ತಾದ್ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆಗೆ ಸಮೀಪದ ಬಂಬ್ರಾಣ ತುಂಬಿಯೋಡು ಹೌಸ್‌ನ ಅಬ್ದುಲ್ ರಶೀದ್ ಎಂಬವರ ಪುತ್ರ ಉಸ್ತಾದ್ ಮುಹಮ್ಮದ್ ಶಫೀಕ್ (32) ನಾಪತ್ತೆಯಾಗಿರುವುದಾಗಿ ಅವರ ಪತ್ನಿ ನಜ್ಮುನ್ನೀಸಾ ದೂರು ನೀಡಿದ್ದು, ಅದರಂತೆ ಕುಂಬಳೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಡಿಸೆಂಬರ್ 21ರಂದು ರಾತ್ರಿ 8 ಗಂಟೆಗೆ ಬಂಬ್ರಾಣದ ಮಸೀದಿಗೆಂದು ಹೋದ ಪತಿ ಬಳಿಕ ಮನೆಗೆ ಹಿಂತಿರುಗಿರಲಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಜ್ಮುನ್ನೀಸಾ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನಾಪತ್ತೆ …

ಪೈಂಟಿಂಗ್ ವೇಳೆ ಬಿದ್ದು ಗಾಯಗೊಂಡ ಕಾರ್ಮಿಕ ಸಾವು

ಕಾಸರಗೋಡು: ಪೈಂಟಿಂಗ್ ಕೆಲಸದ ವೇಳೆ ಕುರ್ಚಿಯಿಂದ ಬಿದ್ದು ಗಾಯಗೊಂಡ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಕಲ್ಲಿಕೋಟೆ ಕೊಟ್ಟೋಳಿ ನೆಲ್ಲಿಕೋಟ್ ವೆಳಿಪೋಕ್ ಪುದಿಯೋಟ್ಟತ್ತಿಲ್ ಹೌಸ್‌ನ  ಸುರೇಶ್‌ಬಾಬು (63) ಸಾವನ್ನಪ್ಪಿದ ವ್ಯಕ್ತಿ. ಡಿಸೆಂಬರ್ ೬ರಂದು ಬೆಳಿಗ್ಗೆ ಮೇಲ್ಪರಂಬದ ಸಂಸ್ಥೆಯೊಂದರಲ್ಲಿ ಸುರೇಶ್‌ಬಾಬು ಕುರ್ಚಿಯ ಮೇಲೆ ಹತ್ತಿ ಕಾರಿನ ಮೇಲಿನ  ಭಾಗಕ್ಕೆ ಸ್ಪ್ರೇ ಪೈಂಟಿಂಗ್ ನಡೆಸುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ತಲೆ ಮತ್ತು ಕೈಗಳಿಗೆ ಗಾಯ ಉಂಟಾಗಿತ್ತು. ತಕ್ಷಣ ಇತರ ಕಾರ್ಮಿಕರು    ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ  …

ಸುವರ್ಣಗಿರಿ ಹೊಳೆಯ ಸೇತುವೆಯ ಆವರಣ ಕುಸಿತ: ಮುಟ್ಟಂ-ಬೇರಿಕೆ ರಸ್ತೆಯಲ್ಲಿ ಅಪಾಯಭೀತಿ

ಕುಂಬಳೆ: ಮಂಗಲ್ಪಾಡಿ ಪಂಚಾಯತ್‌ನ ಸುವರ್ಣಗಿರಿ ಹೊಳೆಗೆ ನಿರ್ಮಿಸಿದ ಸೇತುವೆಯ ಆವರಣದ ಒಂದು ಭಾಗ ಕುಸಿದು ಬಿದ್ದಿದ್ದು, ಇದರಿಂದ ಪ್ರಯಾಣಿಕರು ಆತಂಕಪಡುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಇದಾಗಿದ್ದು, ಇದುವೇ ಆವರಣ ಕುಸಿಯಲು ಕಾರಣವೆಂದು ನಾಗರಿಕರು ತಿಳಿಸುತ್ತಿದ್ದಾರೆ. ಇದರಿಂದ ಮುಟ್ಟಂ-ಬೇರಿಕೆ ರಸ್ತೆಯಲ್ಲಿ ಸಂಚಾರಕ್ಕೆ ಅಪಾಯಭೀತಿಯೊ ಡ್ಡುತ್ತಿದೆ. ಬೇರಿಕೆ ಬೀಚ್‌ಗೆ ತೆರಳುವ ಪ್ರಧಾನ ರಸ್ತೆ ಇದಾಗಿದೆ. ಈ ಭಾಗ ದಿಂದ ೫೦೦ರಷ್ಟು ಕುಟುಂಬಗಳು ರಾಷ್ಟ್ರೀಯ ಹೆದ್ದಾರಿಗೆ ತಲುಪಬೇಕಾ ದರೆ ಇದೇ ರಸ್ತೆಯಲ್ಲಿ ತೆರಳಬೇಕಾಗು ತ್ತದೆ. ದಿನಂಪ್ರತಿ ಶಾಲಾ ಬಸ್‌ಗಳ …

ರಸ್ತೆ ಬದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಮೃತ್ಯು: ಮಾಹಿತಿಯಿದ್ದವರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕರೆ

ಮಂಜೇಶ್ವರ: ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅಪರಿಚಿತ ವ್ಯಕ್ತಿ  ಮೃತಪಟ್ಟಿದ್ದಾರೆ.  ಈ ತಿಂಗಳ 2ರಂದು ಸಂಜೆ 7.30ಕ್ಕೆ ಕುಂಜತ್ತೂರು ರಸ್ತೆ ಬದಿ ಸುಮಾರು  60ರ ಹರೆಯದ ಪುರುಷ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಅವರನ್ನು ಊರವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ  ದಾಖಲಿಸಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೆ 20ರಂದು ರಾತ್ರಿ ವ್ಯಕ್ತಿ ಮೃತಪಟ್ಟಿದ್ದಾರೆ.  ಮಂಜೇಶ್ವರ ಪೊಲೀಸರು ಆಸ್ಪತ್ರೆಗೆ ತೆರಳಿ ಮೃತದೇಹದ ಮಹಜರು ನಡೆಸಿದ್ದಾರೆ. ಇದೀಗ ಮೃತದೇ ಹವನ್ನು ಶವಾಗಾರದಲ್ಲಿರಿಸಲಾಗಿದೆ.  ಚಿಕಿತ್ಸೆ ಮಧ್ಯೆ  ವ್ಯಕ್ತಿಗೆ ಒಮ್ಮೆ …

ಸಾಲದ ಕೂಪದಿಂದ ಪಾರಾಗಲು 1500 ರೂ.ಗಳ ಕೂಪನ್‌ಗೆ ಬಹುಮಾನವಾಗಿ ಮನೆ, ಸ್ಥಳ ಘೋಷಣೆ: ವ್ಯಕ್ತಿ ಸೆರೆ

ಕಣ್ಣೂರು: ಸಾಲದ ಹೊರೆಯನ್ನು ತಪ್ಪಿಸಲು ಬಹುಮಾನ ಕೂಪನ್‌ಗಳನ್ನು ಮುದ್ರಿಸಿ ಮಾರಾಟ ನಡೆಸಿದ ಮಾಜಿ ಅನಿವಾಸಿ ಸೆರೆಯಾಗಿದ್ದಾರೆ. ಅಡೈಕಾತೋಡ್ ಕಾಟುಪಾಲ ಸಮೀಪದ ನಿವಾಸಿ ಬೆನ್ನಿ ಥೋಮಸ್ (67)ರನ್ನು ಲಾಟರಿ ಇಲಾಖೆಯ ದೂರಿನಂತೆ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಇವರಿಗೆ ರಿಮಾಂಡ್ ವಿಧಿಸಿದೆ. ೧೫೦೦ ರೂ. ಕೂಪನ್ ತೆಗೆದರೆ ಬಹುಮಾನವಾಗಿ ಮನೆ, ಸ್ಥಳ, ಕಾರು, ಬೈಕ್‌ಗಳೆಲ್ಲವನ್ನೂ ಭರವಸೆ ನೀಡಿ ಇವರು ಕೂಪನ್ ವಿತರಿಸಿದ್ದರು. ಮನೆಯ ಜಪ್ತಿಯನ್ನು ಹೊರತುಪಡಿಸಲು ಹಾಗೂ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗೆ ಹಣ ಕಂಡುಕೊಳ್ಳಲು 3300 ಚದರ ಅಡಿ ವಿಸ್ತೀರ್ಣದ …

ಚಿನ್ನಾಭರಣ ಶೋಭಾಯಾತ್ರೆಯಲ್ಲಿ ಭಸ್ಮಪಾತ್ರೆ ನೀಲೇಶ್ವರದಿಂದ ಸಮರ್ಪಣೆ

ಹೊಸದುರ್ಗ: ಶಬರಿಮಲೆಗೆ ಪಂದಳಂನಿಂದ ಹೊರಡುವ ಚಿನ್ನಾಭರಣ ಶೋಭಾಯಾತ್ರೆಯಲ್ಲಿ ಪಂದಳಂ ಅರಮನೆಯ ಕುಟುಂಬ ಸದಸ್ಯರು ಭಕ್ತರಿಗೆ ನೇರವಾಗಿ ಭಸ್ಮ ನೀಡುವ ಕ್ರಮವಿದೆ. ಇದಕ್ಕಿರುವ ಭಸ್ಮವನ್ನು ಹಾಕಿಡುವ ಪಾತ್ರೆಯನ್ನು ನೀಲೇಶ್ವರ ಕಕ್ಕಾಡ್ ನಿವಾಸಿಗಳಾದ ಪಿ.ಕೆ. ಸಭಾಷ್, ಸಹೋದರ ಎ.ಸಿ. ಸಂತೋಷ್ ಕುಮಾರ್ ಪಂದಳಂಗೆ ತೆರಳಿ ಈ ತಿಂಗಳ 28ರಂದು ಅರಮನೆಗೆ ಸಮರ್ಪಿಸುವರು. ಪ್ರತೀ ವರ್ಷ ಜನವರಿ 12ರಂದು ಪಂದಳಂ ಅರಮನೆಯಿಂದ ಹೊರಡುವ ಚಿನ್ನಾಭರಣ ಶೋಭಾಯಾತ್ರೆಯಲ್ಲಿ ಇವರು ಹಲವು ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಪಯ್ಯನ್ನೂರು ಕಂಡೋತ್ ಕೆ. ಶಶಿ ಕುಮಾರ್ ಮುಂಡವಳಪ್ಪಿಲ್ ಈ …