ವಲಸೆ ಕಾರ್ಮಿಕನ ಕೊಲೆ : ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ; ಕೊಲೆಗೆ ಕಾರಣ ಹಣದ ವಿವಾದ

ಕಾಸರಗೋಡು: ಮಾರ್ಚ್ 10ರಂದು ನಗರದ ನುಳ್ಳಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹು ಅಂತಸ್ತಿನ ಕಟ್ಟಡದ ಲಿಫ್ಟ್‌ಗಾಗಿ ನಿರ್ಮಿಸಲಾಗುತ್ತಿದ್ದ ಹೊಂಡದ ನೀರಿನಲ್ಲಿ ಕೊಲೆಗೈಯ್ಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕರ್ನಾಟಕ ವಲಸೆ ಕಾರ್ಮಿಕ ಗದಗ ಜಿಲ್ಲೆಯ ಬಲೇಶ್ವರ ಬಾಲ ಹೊಸೂರು ನಿವಾಸಿ ಚಂದ್ರ ಶೇಖರ ಸುರೇಶ್ ಪಟ್ಟಾಡ್ (38)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಮೂಲತಃ ಕರ್ನಾಟಕ ಗದಗ ಜಿಲ್ಲೆಯ ಅಟ್ಟಿಗೇರಿ ಲಕ್ಷೇಶ್ವರ ನಿವಾಸಿ ಹಾಗೂ ಈಗ ಕರ್ನಾಟಕ ದಾರವಾಡ ಜಿಲ್ಲೆಯ ಕುಂದಗೋಲ್‌ನಲ್ಲಿ ವಾಸಿಸುತ್ತಿರುವ ಹನುಮಂತಪ್ಪ ಎಂಬವರ ಮಗ …

ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಡಯಾಪರ್ ವಿತರಣೆ

ಮಂಜೇಶ್ವರ: ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳ ಆರೈಕೆಗೆ ಅಗತ್ಯವಿರುವ ಡಯಾಪರ್ ವಿತರಣೆ ಮಂಜೇಶ್ವರ ಬಿಆರ್‌ಸಿಯಲ್ಲಿ ನಡೆಯಿತು. ಕಾಳಜಿ ಮತ್ತು ಕರುಣೆ ಒಂದಾಗುವಾಗ ಸಮಾಜ ಹೆಚ್ಚು ಮಾನವೀಯತೆ ಮೆರೆಯುತ್ತದೆ. ಅದಕ್ಕೆ ಸಾಕ್ಷಿಯಾಗಿ ಮಂಜೇಶ್ವರ ಬಿಆರ್‌ಸಿ ವ್ಯಾಪ್ತಿಯಲ್ಲಿರುವ ಹಾಸಿಗೆಯಲ್ಲೇ ಇರುವ ೨೫ ಮಕ್ಕಳಿಗೆ ಡಯಾಪರ್ ವಿತರಣೆ ಮಾಡಲಾಯಿತು. ಈ ಮಕ್ಕಳಿಗೆ ನೆರವು ನೀಡಲು ಮಂಜೇಶ್ವರ ಉಪಜಿಲ್ಲಾ ಹೆಡ್ಮಾಸ್ಟರ್ಸ್ ಪೋರಂ ಮತ್ತು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ಸಂಯುಕ್ತ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ …

ವರ್ಕಾಡಿಯಲ್ಲಿ  ಜೆಎಲ್‌ಜಿ ಕಾವೇರಿ ಕಲ್ಲಂಗಡಿ ಕೊಯ್ಲು  ಉದ್ಘಾಟನೆ

ವರ್ಕಾಡಿ: ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ  ಕುಟುಂಬಶ್ರೀ ಜೆಎಲ್‌ಜಿ ಅಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಮಹಿಳಾ ಗುಂಪಾದ ಕಾವೇರಿ  ಜಾಯಿಂಟ್ ಲೈಬಿಲಿಟಿ ಗ್ರೂಪ್ ವತಿಯಿಂದ ಬೆಳೆದ ಕಲ್ಲಂಗಡಿ ಬೆಳೆ ಕೊಯ್ಲು ನಡೆಯಿತು. ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜೀಸುವ ಉದ್ದೇಶ ಇದರ ಹಿಂದಿದೆ. ಸಿಡಿಎಸ್ ಅಧ್ಯಕ್ಷೆ  ವಿಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಕುಟುಂಬಶ್ರೀ ಜಿಲ್ಲಾ  ಮಿಶನ್ ಕೋ-ಆರ್ಡಿನೇಟರ್ ರತೀಶ್ ಕೊಯ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಅಸಿಸ್ಟೆಂಟ್ ಸೆಕ್ರೆಟರಿ ಐತಪ್ಪ ನಾಯ್ಕ್, ಅಕೌಂಟೆಂಟ್ ಉದಯಕುಮಾರ್, ಸಚಿನ್ ಮತ್ತು   …

ಸಿಪಿಐ ಹಿರಿಯ ನಾಯಕ ಎಂ. ರಾಮಪ್ಪ ಮಾಸ್ತರ್ ಸಂಸ್ಮರಣೆ

ಮಂಜೇಶ್ವರ:  ಮಂಜೇಶ್ವರದ ಮಾಜಿ ಶಾಸಕ ಎಂ. ರಾಮಪ್ಪ ಮಾಸ್ತರ್ ಅವರ ೩೫ನೇ  ಸಂಸ್ಮರಣೆ ಸಮ್ಮೇಳನ ಮಂಜೇಶ್ವರದ ಥೋಮಸ್ ಸಭಾಂಗಣದಲ್ಲಿ ಜರಗಿತು. ಸಿಪಿಐ ಹಿರಿಯ ನಾಯಕ ಎಸ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿ ಮಾತನಾಡಿದರು.  ಎಸ್. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಸಮಿತಿ ಸದಸ್ಯ ಜಯರಾಂ ಬಲ್ಲಂಗುಡೇಲ್, ರಾಮಕೃಷ್ಣ ಕಡಂಬಾರ್, ಜಿಲ್ಲಾ ಮೋಟಾರ್ ಯೂನಿಯನ್ ಅಧ್ಯಕ್ಷ ಮುಸ್ತಫ ಕಡಂಬಾರ್,ಲೋಕಲ್ ಕಾರ್ಯದರ್ಶಿಶ್ರೀಧರ್ ಆರ್.ಕೆ, ಹರೀಶ್ ಕೆ.ಆರ್ ಹಾಗೂ ಗಂಗಾಧರ …

ಕುಂಬಳೆಯಲ್ಲಿ ಬಸ್ ತಂಗುದಾಣ ವಿವಾದ: ಸಂಚಾರ ಮೊಟಕುಗೊಳಿಸಿ ಪ್ರತಿಭಟನೆ

ಕುಂಬಳೆ: ಪಂಚಾಯತ್ ಆಡಳಿತ ಸಮಿತಿ ಅವರವರ ಆಸಕ್ತಿಗನುಸಾರವಾಗಿ ತೆಗೆಯುವ ತೀರ್ಮಾನಗಳು ಕುಂಬಳೆಯಲ್ಲಿ ಖಾಸಗಿ ಬಸ್ ಸಂಚಾರ ವ್ಯವಸ್ಥೆಯನ್ನು ನಿಶ್ಚಲಗೊಳಿಸಿದೆಯೆಂದು ದೂರಲಾಗಿದೆ. ಕಳೆದ ಪಂಚಾಯತ್ ಆಡಳಿತ ಸಮಿತಿ ಪೇಟೆಯಲ್ಲಿನ ವಾಹನ ದಟ್ಟಣೆಯನ್ನು  ಕಡಿಮೆ ಮಾಡಲು ಕುಂಬಳಯಿಂದ ವಿವಿಧ ಭಾಗಗಳಿಗೆ ಸಂಚಾರ ನಡೆಸುವ ಬಸ್ ಗಳಿಗೆ ಪೇಟೆಯ ವಿವಿಧ ಭಾಗಗಳಲ್ಲಿ ಶೆಲ್ಟರ್ ನಿರ್ಮಿಸಲಾಗಿತ್ತು. ಅಂದು ಅದರ ವಿರುದ್ಧ ವಿವಿಧ ಮೂಲಗಳಿಂದ ಪ್ರತಿಭಟನೆ ವ್ಯಕ್ತವಾಗಿತ್ತು. ಆದರೂ ಆಡಳಿತ ಸಮಿತಿ ಕೈಗೊಂಡ ತೀರ್ಮಾನ ದಲ್ಲಿ ಗಟ್ಟಿಯಾಗಿ ನಿಂತಿತು. ಪಂಚಾಯತ್ ಚುನಾವಣೆ ಕಳೆದ ಕೂಡಲೇ …

ನುಳ್ಳಿಪ್ಪಾಡಿಯಲ್ಲಿ ವಲಸೆ ಕಾರ್ಮಿಕನ ಕೊಲೆ ಪ್ರಕರಣ: ಓರ್ವ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ನಗರದ ನುಳ್ಳಿ ಪ್ಪಾಡಿಯ ಬಹು ಅಂತಸ್ತು ಕಟ್ಟಡದಲ್ಲಿ ಲಿಫ್ಟ್ ನಿರ್ಮಿಸಲೆಂದು ತೋಡಲಾಗಿದ್ದ ನೀರು ತುಂಬಿದ ಹೊಂಡದಲ್ಲಿ ಕರ್ನಾ ಟಕದ ವಲಸೆ ಕಾರ್ಮಿಕ ಕೊಲೆಗೈಯ್ಯ ಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಓರ್ವನನ್ನು ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆತನನ್ನು ಪೊಲೀಸ್ ತೀವ್ರ ವಿಚಾರಣೆಗೊಳಪಡಿ ಸುತ್ತಿದ್ದಾರೆ. ಪೊಲೀಸರ ಕಸ್ಟಡಿಗೊಳಗಾದ ವ್ಯಕ್ತಿ ಕರ್ನಾಟಕ ನಿವಾಸಿಯಾಗಿರುವು ದಾಗಿ ಹೇಳಲಾಗುತ್ತಿದ್ದರೂ, ಆತನ ಕುರಿತಾದ ಯಾವುದೇ ಮಾಹಿತಿಗಳನ್ನು ಪೊಲೀಸರು ಈ ತನಕ ಬಹಿರಂಗಪಡಿಸಿಲ್ಲ. ಕರ್ನಾಟಕದ ಗದಗ ಜಿಲ್ಲೆಯ ಬಲೇಶ್ವರ ಬಾಲ ಹೊಸೂರು ನಿವಾಸಿ …

ಕುಂಬಳೆಯಲ್ಲಿ ಆಟೋ ಚಾಲಕನಿಗೆ ಸೂರ್ಯಾಘಾತ

ಕುಂಬಳೆ: ಬಿಸಿಲಿನ ಬೇಗೆ ಮುಂದುವರಿಯುತ್ತಿರುವ ಮಧ್ಯೆ ಕುಂಬಳೆಯಲ್ಲಿ ಆಟೋ ಚಾಲಕ  ಸೂರ್ಯಾಘಾತದಿಂದ ಗಾಯ ಗೊಂಡ ಘಟನೆ ನಡೆದಿದೆ. ಕುಂಬಳೆ ಸ್ಟ್ಯಾಂಡ್‌ನ ಆಟೋ ಚಾಲಕ ನೌಶಾದ್ (27) ಗಾಯಗೊಂಡಿ ದ್ದಾರೆ. ಇವರನ್ನು ಕುಂಬಳೆ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಇವರಿಗೆ ಸೂರ್ಯಾಘಾತ ಉಂಟಾಗಿದ್ದು, ಚರ್ಮದಲ್ಲಿ ಸುಟ್ಟ ಗಾಯಗಳು  ಕಾಣಿಸಿಕೊಂಡಿದೆ.

ರಾಜ್ಯ ಕತ್ತಲಿನತ್ತ: ಪರಾಕಾಷ್ಠೆಗೇರಿದ ವಿದ್ಯುತ್ ಉಪಯೋಗ: ರಾತ್ರಿ 10ರಿಂದ 12ರ ತನಕ ಕಠಿಣ ನಿಯಂತ್ರಣ

ತಿರುವನಂತಪುರ: ಸುಡು ಬೇಸಿಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಉಪಯೋಗ ದಿನೇ ದಿನೇ ಪರಾಕಾಷ್ಟೆಗೇರತೊಡಗಿದ್ದು, ಅದಕ್ಕೆ ಹೊಂದಿಕೊಂಡು ಹೊರಗಿನಿಂದ ಅಗತ್ಯದಷ್ಟು ವಿದ್ಯುತ್ ಖರೀದಿಸಲು ವಿದ್ಯುನ್ಮಂಡಳಿ ಇನ್ನೂ ತಯಾರಾಗದೇ ಇರುವುದು ಕೇರಳವನ್ನು ಕತ್ತಲತ್ತ ಸಾಗುವಂತೆ ಮಾಡತೊಡಗಿದೆ. ವಿದ್ಯುತ್ ಉಪಯೋಗ ದಿನೇ ದಿನೇ ಹೆಚ್ಚಾಗುತ್ತಿರುವ ಪರಿಣಾಮ ರಾಜ್ಯದಲ್ಲಿ ತೀವ್ರ ವಿದ್ಯುತ್ ಕ್ಷಾಮ ತಲೆದೋರಿದ್ದು, ಇದರಿಂದಾಗಿ ಅನ್ಯದಾರಿಯಿಲ್ಲದೆ ರಾತ್ರಿ ೧೦ ಗಂಟೆಯಿಂದ ೧೨ರ ತನಕ ವಿದ್ಯುನ್ಮಂಡಳಿ ಕಠಿಣ ನಿಯಂತ್ರಣ ಹೇರಿದೆ. ಇದರಂತೆ ಈ ಅವಧಿಯಲ್ಲಿ ೧೫ರಿಂದ 30 ನಿಮಿಷಗಳ ತನಕ ವಿದ್ಯುತ್ ಲೋಡ್ ಶೆಡ್ಡಿಂಗ್ …

ಗಲ್ಫ್‌ನಲ್ಲಿ ಕುಸಿದುಬಿದ್ದು ಮೃತ್ಯು

ಬದಿಯಡ್ಕ:  ವ್ಯಕ್ತಿಯೊಬ್ಬರು  ಗಲ್ಫ್‌ನಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ.    ಬದಿಯಡ್ಕ ಬಳಿಯ ಕನಕಪ್ಪಾಡಿ ನಿವಾಸಿಯೂ ಪ್ರಸ್ತುತ ತೊಕ್ಕೋಟಿನಲ್ಲಿ ವಾಸಿಸುತ್ತಿದ್ದ ಹೆನ್ರಿ ಡಿ’ಸೋಜಾ (58) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಇವರು ಕಾಸರಗೋಡು-ಬದಿಯಡ್ಕ ರೂಟ್‌ನಲ್ಲಿ ಸಂಚರಿ ಸುವ ಖಾಸಗಿ ಬಸ್ ಚಾಲಕನಾಗಿ ದ್ದರು. ಅನಂತರ ಉದ್ಯೋಗ ನಿಮಿತ್ತ ಗಲ್ಫ್‌ಗೆ ತೆರಳಿದ್ದರು. ನಿನ್ನೆ ಬೆಳಿಗ್ಗೆ ಇವರು  ಗಲ್ಫ್‌ನಲ್ಲಿ ಕುಸಿದು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತದೇಹವನ್ನು ಊರಿಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.  ಮೃತರು ಪತ್ನಿ ಸವಿತಾ, ಮಕ್ಕಳಾದ ಸೋನಲ್, ಸನುನ್, ಸಹೋದರ ವಿನ್ಸೆಂಟ್ …

ನಿಲ್ಲಿಸಿದ್ದ ಲಾರಿಯ ಬ್ಯಾಟರಿ ಕಳವು

ಕುಂಬಳೆ: ನಾಯ್ಕಾಪಿನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಯಿಂದ ಬ್ಯಾಟರಿಗಳನ್ನು ಕಳವುಗೈದ ಬಗ್ಗೆ ದೂರಲಾಗಿದೆ.  ಲಾರಿ ಚಾಲಕ ವಡಗರದ  ಶಾಲು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ಎರಡು ದಿನಗಳ ಹಿಂದೆ ಪೆರ್ಲ, ಸೀತಾಂಗೋಳಿ ಭಾಗಕ್ಕೆ ಲಾರಿಯಲ್ಲಿ ಸಾಮಗ್ರಿಗಳನ್ನು ತಂದು ವಿತರಿಸಲಾಗಿತ್ತು. ಬಳಿಕ ಕುಂಬಳೆಯಿಂದ ನಿನ್ನೆ ಸಂಜೆ ವಡಗರಕ್ಕೆ ಸರಕು ಸಾಗಿಸಲಿದ್ದ ಕಾರಣ ಲಾರಿಯನ್ನು ಮೊನ್ನೆ ನಾಯ್ಕಾಪಿನಲ್ಲಿ ನಿಲ್ಲಿಸಿ ಚಾಲಕ ಶಾಲು ಊರಿಗೆ ತೆರಳಿದ್ದರೆನ್ನಲಾಗಿದೆ. ನಿನ್ನೆ ಬೆಳಿಗ್ಗೆ ಅವರು ಮರಳಿ ಬಂದು ನೋಡಿದಾಗ ಲಾರಿಯ …