ನಿವೃತ್ತ ಬ್ಯಾಂಕ್ ಮೆನೇಜರ್ ನಿಧನ

ಬದಿಯಡ್ಕ: ಕೇರಳ ಗ್ರಾಮೀಣ ಬ್ಯಾಂಕ್ ಮೆನೇಜರ್ ಆಗಿದ್ದ  ಬದಿಯಡ್ಕ ಚೇರ್ಕೂಡ್ಲುವಿನ ಶಿವರಾಮ ಮಣಿಯಾಣಿ (67) ನಿಧನ ಹೊಂದಿದರು. ಇವರ ಪತ್ನಿ ನಳಿನಾಕ್ಷಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಡಾ. ಶೈನಾ ರಾಜೇಶ್, ಡಾ. ಅನುರಾಧ, ಇಂಜಿನಿಯರ್ ಸೂರ್ಯನಾರಾಯಣ, ಅಳಿಯಂದಿರಾದ ರಾಜೇಶ್ ಅಗಲ್ಪಾಡಿ (ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ), ಅಶ್ವತ್ಥ್ ಆಲಟ್ಟಿ (ಇಂಜಿನಿಯರ್), ಸಹೋದರರಾದ ಕೇಳು ಮಣಿಯಾಣಿ, ಕುಂಞಂಬು, ಸಹೋದರಿಯರಾದ ಶ್ರೀದೇವಿ, ಗೋಪಿ, ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಬ್ಬರು ಸಹೋದರಿಯರಾದ ಬೆಳ್ತಮ್ಮ, …

ಔಷಧಿ ಅಂಗಡಿ ನೌಕರ ನಿಧನ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ಪರಿಸರ ನಿವಾಸಿ ಜಯರಾಮ (62) ನಿಧನ ಹೊಂದಿದರು. ಅಸೌಖ್ಯ ತಗಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇವರು ಸುಮಾರು 35 ವರ್ಷಗಳಿಂದ ಉಪ್ಪಳ ಡಿಲೈಟ್ ಮೆಡಿಕಲ್‌ನಲ್ಲಿ ಉದ್ಯೋಗಿಯಾಗಿದ್ದರು. ಮೃತರು ಪತ್ನಿ ನಯನ, ಮಕ್ಕಳಾದ ನಿಖಿತ, ನಿಹಾ, ಅಳಿಯ ನಿತಿನ್, ಸಹೋದರ ಶಿವ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ಸುಂದರ, ಭಾಸ್ಕರ ಈ ಹಿಂದೆ ನಿಧನರಾಗಿದ್ದಾರೆ. ಅಂತ್ಯ ಸಂಸ್ಕಾರ ನಿನ್ನೆ ರಾತ್ರಿ ನಡೆಯಿತು.

ಮುಳಿಯಾರು ನಿವಾಸಿ ಯುವಕ ಬೆಹ್ರೈನ್‌ನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಬೋವಿಕ್ಕಾನ: ಮುಳಿಯಾರು ಅಮ್ಮಂಗೋಡು ನಿವಾಸಿಯಾಗಿರುವ ಯುವಕ ಬೆಹ್ರೈನ್‌ನ ವಾಸಸ್ಥಳದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಅಮ್ಮಂಗೋಡಿನ ದಿ| ಎ.ಬಿ.  ಕುಂಞಾಮು-ಬೀಫಾತಿಮ ಬಾವಿಕ್ಕೆರೆ ದಂಪತಿ ಪುತ್ರ ಎ.ಬಿ. ಇಕ್ಭಾಲ್ (44) ಸಾವನ್ನಪ್ಪಿದ ಯುವಕ. ಕಳೆದ 25 ವರ್ಷಗಳಿಂದ ಗಲ್ಫ್‌ನಲ್ಲಿ ದುಡಿಯುತ್ತಿದ್ದ ಇಕ್ಭಾಲ್ ಮೂರೂವರೆ ತಿಂಗಳ ಹಿಂದೆ ಕೆಲಸಕ್ಕೆಂದು ಬೆಹ್ರೈನ್‌ಗೆ ಹೋಗಿ ದ್ದರು. ಅಲ್ಲಿರುವ ವಾಸಸ್ಥಳದಲ್ಲಿ ನಿನ್ನೆ ಸಂಜೆ ಅವರು ಮಂಚದ ಕೆಳಗೆ ಬಿದ್ದ ಸ್ಥಿತಿಯಲ್ಲಿ  ಸ್ನೇಹಿತರು ಪತ್ತೆಹಚ್ಚಿದ್ದರು. ನಂತರ ಆಸ್ಪತ್ರೆಗೆ ಸಾಗಿಸಿದ್ದು ಅಷ್ಟರೊಳಗೆ  ಸಾವನ್ನಪ್ಪಿದರೆಂದು  ಜತೆಗಿದ್ದ ಸ್ನೇಹಿತರು ತಿಳಿಸಿದ್ದಾರೆ. ಮೃತರು …

ಅಮೈ ಶ್ರೀಕೃಷ್ಣ ಭಜನಾಮಂದಿರ ರಜತ ಮಹೋತ್ಸವ: ನಿಧಿಕೂಪನ್ ಬಿಡುಗಡೆ

ಕಾಸರಗೋಡು: ಅಮೈ ಶ್ರೀ ಕೃಷ್ಣ ಭಜನಾ ಮಂದಿರದ 25ನೇ ವಾರ್ಷಿಕೋತ್ಸವವನ್ನು ಆಚರಿಸಲು ತೀರ್ಮಾನಿಸಿದು, ಧನ ಸಂಗ್ರಹಣೆಗೆ ಶ್ರೀ ಕೃಷ್ಣ ನಿಧಿ ಲಕ್ಕಿ ಕೂಪನ್ ಬಿಡುಗಡೆಯನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಸಮಿತಿಯ ಉಪಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ನೀಡಿ ನೆರವೇರಿಸಿದರು. ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಸದಾಶಿವ ಮಲ್ಯ, ಕೋಶಾಧಿಕಾರಿ ವೇಣುಗೋಪಾಲ್, ಎ.ಕೆ ವಿಜಯ ಕೋಕಿಲ, ರಾಮಕೃಷ್ಣ ಹೊಳ್ಳ, ಜಯರಾಮ್ ಶೆಟ್ಟಿ, ಕಿಶೋರ್ ಕುಮಾರ್, ಶ್ರೀಲತಾ ಟೀಚರ್, ಸೌದಾಮಿನಿ, ಸಮಿತಿಯ ಪದಾಧಿಕಾರಿ ಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ …

ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ಶೇಡಿಕಾವು ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ನೃತ್ಯ ವೈಭವ

ಕುಂಬಳೆ: ಶೇಡಿಕಾವು ಶ್ರೀ ಅಯ್ಯಪ್ಪ ದೇವಸ್ಥಾನದ ಅಯ್ಯಪ್ಪ ದೀಪೋತ್ಸವ ಸಂದರ್ಭದಲ್ಲಿ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಜರಗಿತು. ವಿಶ್ವನಾಥ ಪುತ್ತಿಗೆ, ಮುರಳಿ ನೀರ್ಚಾಲ್, ಕೃಪಾಕಿರಣ, ದಿವಾಕರ ಕಾಸರಗೋಡು, ಈಶ್ವರ ಸೂರಂಬೈಲು, ಸುರೇಶ್ ಪೈಕ ಸಮೂಹಗಾನ ನೀಡಿದರು. ಸಮಿತ, ತೇಜಸ್ವಿನಿ, ಹೃತ್ವಿಕ ಸಹಿತ ವಿವಿಧ ಕಲಾವಿದರು ನೃತ್ಯ ಪ್ರದರ್ಶನಗೈದರು. ಹರಿಕಾಂತ್ ಅವರಿಂದ ರಿಂಗ್ ಡ್ಯಾನ್ಸ್, ತನುಷ ಬಲ್ಲಾಳ್‌ರಿಂದ ಯೋಗ ನೃತ್ಯ, ಪ್ರೀತಿಕಾ ಪ್ರಸಾದ್‌ರಿಂದ ರಿಂಗ್ ನೃತ್ಯ …

ಕುಂಬಳೆಯ ಹಿರಿಯ ಲಾರಿ ಚಾಲಕ ನಿಧನ

ಕುಂಬಳೆ: ಕುಂಬಳೆಯ ಹಿರಿಯ ಲಾರಿ ಚಾಲಕ ಅಬ್ದುಲ್ಲ (75) ಎಂಬವರು ನಿಧನಹೊಂದಿದರು.  ಕುಂಬಳೆ ನಿವಾಸಿಯಾದ ಇವರು ಪ್ರಸ್ತುತ ಬಂಬ್ರಾಣದಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ಫಾತಿಮ, ಮಕ್ಕಳಾದ ಕಬೀರ್, ನೌಶಾದ್, ನೌಫಲ್, ರಶೀದ, ಸೈನಾಸ್, ಬಲ್ಕೀಸ್,  ರಾಬಿಯ, ನೌಶೀನ, ಅಳಿಯ-ಸೊಸೆಯಂದಿರಾದ ರಿಯಾನ, ಇಶಾನ, ಇಬ್ರಾಹಿಂ, ಖಮರುದ್ದೀನ್, ಜಲೀಲ್, ಅಬು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಕುಂಬಳೆ ಬದರ್ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.

ಕೆಎಸ್‌ಟಿಎ ಮಂಜೇಶ್ವರ ಯೂನಿಟ್ ಸಮ್ಮೇಳನ, ನೂತನ ಪದಾಧಿಕಾರಿಗಳ ಆಯ್ಕೆ

ಮಂಜೇಶ್ವರ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ಕೆ.ಎಸ್.ಟಿ.ಎ) ಮಂಜೇಶ್ವರ ಯೂನಿಟ್ ಸಮ್ಮೇಳನ ನಿನ್ನೆ ಹೊಸಂಗಡಿ ವ್ಯಾಪಾರಿ ಭವನದಲ್ಲಿ ನಡೆಯಿತು. ಕೆ.ಎಸ್.ಟಿ.ಎ ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ. ಎಸ್. ಉದ್ಘಾಟಿಸಿದರು. ಮಂಜೇಶ್ವರ ವ್ಯಾಪಾರಿ ಏಕೋಪನ ಸಮಿತಿ ಅಧ್ಯಕ್ಷ ಬಶೀರ್, ತಾಲೂಕು ಕಾರ್ಯದರ್ಶಿ ಸತೀಶ್ ಆಚಾರ್ಯ, ವಿಶ್ವನಾಥ್ ಶೆಟ್ಟಿ ಕುತ್ತಾನಾಡಿ ಮಾತಾಡಿದರು. ಜೊತೆ ಕಾರ್ಯದರ್ಶಿ ಪ್ರೇಮಲತಾ ವರದಿ ಮಂಡಿಸಿದರು. ಪುರುಷೋತ್ತಮ ಆಚಾರ್ಯ ಲೆಕ್ಕ ಪತ್ರ ಮಂಡಿಸಿದರು. ಕೃಷ್ಣ ಕೆದುಂಬಾಡಿ, ಕಲಾವತಿ ಹೊಸಂಗಡಿ. ತಾಲೂಕು …

ಕೇರಳ ಯಾತ್ರೆ ಉದ್ಘಾಟನೆ ಸಮ್ಮೇಳನ ಪ್ರಧಾನ ವೇದಿಕೆ ನಿರ್ಮಾಣಕ್ಕೆ ಚಾಲನೆ

ಕಾಸರಗೋಡು: ಜನವರಿ 1ರಿಂದ ಕಾಸರಗೋಡಿನಿಂದ ಆರಂಭಿಸುವ ಕೇರಳ ಯಾತ್ರೆಯ ಉದ್ಘಾಟನಾ ಸಮ್ಮೇಳನ ನಡೆಯುವ ಚೆರ್ಕಳ ನೂರುಲ್ ಎಂ.ಎ. ಉಸ್ತಾದ್‌ನಗರದಲ್ಲಿ ಪ್ರಧಾನ ವೇದಿಕೆಯ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಖಾಫಿರ್ ಹಾಜಿ ಚೇರೂರು ಚಾಲನೆ ನೀಡಿದರು. ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ, ಕಾಟಿಪ್ಪಾರ ಅಬ್ದುಲ್ ಖಾದರ್ ಸಖಾಫಿ, ಬಾಯಾರ್ ಸಿದ್ದಿಕ್ ಸಖಾಫಿ ಸಹಿತ ಹಲವರು ಭಾಗವಹಿಸಿದರು.

ಬಸ್ ತಡೆದು ನಿಲ್ಲಿಸಿ ಚಾಲಕನಿಗೆ ಹಲ್ಲೆ: ಆರು ಮಂದಿ ವಿರುದ್ಧ ಕೇಸು 

ಕಾಸರಗೋಡು:  ರೈಲ್ವೇ ನಿಲ್ದಾಣ ಸಮೀಪ ಖಾಸಗಿ ಬಸ್ ತಡೆದು ನಿಲ್ಲಿಸಿ ಚಾಲಕನಿಗೆ ಹಲ್ಲೆಗೈದ ಘಟನೆಗೆ ಸಂಬಂಧಿಸಿ ಕಂಡರೆ ಪತ್ತೆಹಚ್ಚಬಹು ದಾದ ಆರು ಮಂದಿ ವಿರುದ್ಧ ಕಾಸರ ಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚೆರ್ಕಳ ನಿವಾಸಿಯೂ ಶಾನು ಬಸ್‌ನ ಚಾಲಕನಾದ ಮುಹಮ್ಮದ್ ಶಿಹಾಬ್ (26)ರ ಮೇಲೆ ತಂಡ ಹಲ್ಲೆಗೈದಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದೆ. ರೈಲ್ವೇ ನಿಲ್ದಾಣ ಸಮೀಪಕ್ಕೆ ಬಸ್ ತಲುಪಿದಾಗ  ಆಟೋ ನಿಲ್ದಾಣದ ಸಮೀಪದಲ್ಲಿದ್ದ  ತಂಡವೊಂದು ಬಸ್‌ಗೆ ಹತ್ತಿ ಹಲ್ಲೆಗೈದಿರುವುದಾಗಿ ಶಿಹಾಬ್ …

ಬೆದ್ರಂಪಳ್ಳ ಮಸೀದಿಯಿಂದ ಕಳವು: ತನಿಖೆ ಆರಂಭ

ಪೆರ್ಲ: ಬೆದ್ರಂಪಳ್ಳ ಬದರ್ ಜುಮಾ ಮಸೀದಿಯಿಂದ ಹಣ ಕಳವಿಗೀಡಾದ ಪ್ರಕರಣದಲ್ಲಿ   ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕೊಠಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ 15 ಸಾವಿರ ರೂಪಾಯಿಗಳನ್ನು ದೋಚಿದ್ದಾರೆ. ಗುರುವಾರ ರಾತ್ರಿ  9 ಗಂಟೆಯಿಂದ ಶುಕ್ರವಾರ ಮುಂಜಾನೆ 5 ಗಂಟೆ ಮಧ್ಯೆ ಕಳವು ನಡೆದಿದೆ ಯೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೆದ್ರಂಪಳ್ಳದ ಶಾಹುಲ್ ಹಮೀದ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ.