ವಂದೇಭಾರತ್ ಸ್ಲೀಪರ್ ರೈಲು ಈ ತಿಂಗಳ ಕೊನೆಯಲ್ಲಿ ಸಂಚಾರ ಆರಂಭ

ಚೆನ್ನೈ: ಪ್ರಯಾಣಿಕರು ಬಹಳ ಕಾಲದಿಂದ ಕಾಯುತ್ತಿದ್ದ ವಂದೇ ಭಾರತ್ ಸ್ಲೀಪರ್ ಗಾಡಿಯ ಉದ್ಘಾಟನೆ ಈ ತಿಂಗಳ ಕೊನೆಯಲ್ಲಿ ಉಂಟಾಗಬಹುದೆಂದು ರೈಲ್ವೇ ಮೂಲಗಳು ತಿಳಿಸಿವೆ. ಮೊದಲ ಸಂಚಾರ ದೆಹಲಿ ಹಾಗೂ ಪಾಟ್ನಾ ಮಧ್ಯೆ  ಇರಲಿದೆ. ಎರಡು ನಗರಗಳನ್ನು ಜೋಡಿಸುವ ರಾತ್ರಿ ಕಾಲ ಸಂಚಾರ ನಡೆಯಲಿದೆ. ತೇಜಸ್, ರಾಜಧಾನಿ ರೈಲುಗಾಡಿಗಳಿಗೆ ಸಮಾನವಾದ ಆಧುನಿಕ ಸೌಕರ್ಯಗಳೊಂದಿಗೆ ವಂದೇ ಭಾರತ್ ಸ್ಲೀಪರ್ ಸಂಚಾರ ನಡೆಸಲಿದೆ. ಇದಕ್ಕಿರುವ ಕೋಚ್‌ಗಳು ಬೆಂಗಳೂರಿನ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ (ಬೆಮಲ್) ನಿರ್ಮಿಸಿದೆ. 16 ಕೋಚ್‌ಗಳಿರುವ ಎರಡು ರೈಲುಗಾಡಿಗಳನ್ನು …

ಮಂಗಲ್ಪಾಡಿ, ಮಡಿಕೈ ಪಂ.ನ ತಲಾ 1 ವಾರ್ಡ್‌ಗಳಲ್ಲಿ ಮತದಾನವಿಲ್ಲ: ಅವಿರೋಧ ಆಯ್ಕೆ, ಅಭ್ಯರ್ಥಿ ಸಾವು ಹಿನ್ನೆಲೆಯಲ್ಲಿ ಕೆಲವು ಕಡೆ ಮತದಾನ ರದ್ದು

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯ ದ್ವಿತೀಯ ಹಂತದ ಮತದಾನ ಇಂದು ನಡೆಯುತ್ತಿರುವಂತೆ ಕೆಲವು ಕಡೆಗಳಲ್ಲಿ ಮತದಾನವನ್ನು ರದ್ದುಗೊಳಿಸಲಾಗಿದೆ. ಕಣ್ಣೂರು ಜಿಲ್ಲೆಯ ಆಂತೂರು ನಗರಸಭೆಯ ಐದು ವಾರ್ಡ್‌ಗಳಲ್ಲಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹಾಗೂ ಮಲಪ್ಪುರಂ ಜಿಲ್ಲೆಯ ಮುತ್ತೇಡಂ ಪಂಚಾಯತ್‌ನ ಪಾಯಿಂಬಾಡ 7ನೇ ವಾರ್ಡ್‌ನಲ್ಲಿ ಅಭ್ಯರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಮತದಾನ ಇಂದು ನಡೆಯುತ್ತಿಲ್ಲ. ಕಾಸರಗೋಡು ಜಿಲ್ಲೆಯ ಎರಡು ಗ್ರಾಮ ಪಂಚಾಯತ್‌ಗಳ ಒಂದೊಂದು ವಾರ್ಡ್‌ನಲ್ಲಿ ಇಂದು ಮತದಾನ ನಡೆಯುತ್ತಿಲ್ಲ. ಕಣ್ಣೂರು ಜಿಲ್ಲೆಯಲ್ಲಿ ಒಟ್ಟು 9 ಕಡೆಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮತದಾನವನ್ನು …

11.5 ಕೋಟಿ ರೂ.ಗಳ ಚಿನ್ನ  ಸಹಿತ ಐದು ಮಂದಿ ಸೆರೆ

ಚೆನ್ನೈ:  ವಿಮಾನ ನೌಕರ  ಒಳಗೊಂಡ ಚಿನ್ನ ಸಾಗಾಟ ತಂಡವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೆರೆಹಿಡಿದಿದ್ದಾರೆ.  11.5 ಕೋಟಿ ರೂ. ಮೌಲ್ಯದ 9.46 ಕಿಲೋ ಚಿನ್ನವನ್ನು ಇವರಿಂದ ವಶಪಡಿಸ ಲಾಗಿದೆ.  ದುಬಾಯಿಯಿಂದ ಬಂದ ವಿಮಾನದ ನೌಕರ ಎದೆ, ಹೊಟ್ಟೆಯ ಲ್ಲಿ ಚಿನ್ನವನ್ನು ಬಚ್ಚಿಟ್ಟು  ಬೆಲ್ಟ್‌ನಲ್ಲಿ ಬಿಗಿದಿಟ್ಟಿದ್ದನು. ಚಿನ್ನವನ್ನು ಪಡೆಯಲು ಬಂದ ಮೂವರು  ಹಾಗೂ ಚಿನ್ನ ಕಳ್ಳಸಾಗಾಟಕ್ಕೆ ಸಹಾಯ ವೊದಗಿಸಲು ತಲುಪಿದ ಓರ್ವನನ್ನು ಈ ಸಂಬಂಧ ಸೆರೆಹಿಡಿಯಲಾಗಿದೆ.

ವಿವಾಹ ವಿಚ್ಛೇಧನ ಬಗ್ಗೆ ಸಂದೇಶ ಹಾಕಿದ ಕಿರುತೆರೆ ನಟಿ ಹರಿತಾ ಜಿ. ನಾಯರ್

ತಿರುವನಂತಪುರ: ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಹರಿತಾ ಜಿ. ನಾಯರ್ ಪತಿ ವಿನಾಯಕನೊಂದಿಗಿನ ಸಂಬಂಧವನ್ನು ವಿಚ್ಛೇಧಿಸಿರುವುದಾಗಿ ಸಂದೇಶ ನೀಡಿದ್ದಾರೆ. ತನ್ನ ಸೋಷ್ಯಲ್ ಮೀಡಿಯಾ ಪೇಜ್‌ನಲ್ಲಿ ಈ ಮಾಹಿತಿಯನ್ನು ಈಕೆ ಬಹಿರಂಗಪಡಿಸಿದ್ದಾರೆ. ಚಿಕ್ಕಂದಿನಲ್ಲೇ ಇವರಿಬ್ಬರು ಗೆಳೆಯರಾಗಿದ್ದು, 15 ವರ್ಷದ ಗೆಳೆತನದ ಬಳಿಕ ೨೦೨೩ರಲ್ಲಿ ವಿವಾಹವಾಗಿದ್ದರು. ನರ್ಸಿಂಗ್ ಕಲಿಯುತ್ತಿದ್ದ ಹರಿತಾ ಜಿ. ನಾಯರ್ ಅನಿರೀಕ್ಷಿತವಾಗಿ ರಿಯಾಲಿಟಿ ಶೋಗೆ ತಲುಪಿದ್ದು, ಅಲ್ಲಿಂದ ಅಭಿನಯರಂಗಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ ಹಲವಾರು ಹಿಟ್ ಧಾರಾವಾಹಿಗಳಲ್ಲಿ ವೇಷ ಹಾಕಿದ್ದ ಈಕೆ ಈಗ ‘ಚೆಂಬರತ್ತಿ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. …

ಬಂದ್ಯೋಡು ನಿವಾಸಿ ದುಬಾಯಿಯಲ್ಲಿ ನಿಗೂಢ ರೀತಿಯಲ್ಲಿ ಸಾವು : ಇಬ್ಬರು ಪೊಲೀಸ್ ಕಸ್ಟಡಿಯಲ್ಲಿ

ಕುಂಬಳೆ: ಬಂದ್ಯೋಡು ಪಂಜತ್ತೊಟ್ಟಿ ನಿವಾಸಿ ದುಬಾಯಿ ಯಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ ಈ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ. ಪಂಜತ್ತೊಟ್ಟಿಯ ಹಸೈನಾರ್-ಸಫಿಯಾ ದಂಪತಿಯ ಏಕ ಪುತ್ರ ಮುಹಮ್ಮದ್ ಶಫೀಕ್ (25) ಮೃತಪಟ್ಟ ವ್ಯಕ್ತಿ. ದುಬಾಯಿ ಪೋರ್ಟ್ ರಾಶಿದ್ ಸಮುದ್ರದಲ್ಲಿ  ಇವರ ಮೃತದೇಹ ಪತ್ತೆಯಾಗಿರುವು ದಾಗಿ ಸಂಬಂಧಿಕರಿಗೆ ಮಾಹಿತಿ ಲಭಿಸಿದೆ. ಬರ್ದುಬೈ ಎಂಬಲ್ಲಿ ವಾಸಿಸಿ ಖಾಸಗಿ ಸಂಸ್ಥೆಯೊಂದರಲ್ಲಿ  ಮುಹ ಮ್ಮದ್ ಶಫೀಕ್ ಕೆಲಸ ನಿರ್ವಹಿಸಿ ದ್ದರು. ಎಂಟು ತಿಂಗಳ ಹಿಂದೆ ಊರಿಗೆ …

ಕಾಸರಗೋಡು ಸೇರಿ ಏಳು ಜಿಲ್ಲೆಗಳಲ್ಲಿ ನಾಳೆ ಮತಗಟ್ಟೆಗೆ

ಕಾಸರಗೋಡು: ರಾಜ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ದ್ವಿತೀಯ ಹಂತದ ಚುನಾವಣೆ ನಾಳೆ ನಡೆಯಲಿದೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡು, ಮಲಪ್ಪುರಂ, ಪಾಲಕ್ಕಾಡ್ ಮತ್ತು ತೃಶೂರು ಜಿಲ್ಲೆಗಳ ಒಟ್ಟು 604 ಸ್ಥಳೀಯಾಡಳಿತ ಸಂಸ್ಥೆಗಳ 12,391 ವಾರ್ಡ್ಗಳಿಗೆ ನಾಳೆ ಮತದಾನ ನಡೆಯಲಿದೆ. ನಾಳೆ ಬೆಳಿಗ್ಗೆ 7 ಗಂಟೆಗೆ ಆರಂಭಗೊಳ್ಳುವ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆ ತನಕ ಮುಂದುವರಿ ಯಲಿದೆ. ಈ ಏಳು ಜಿಲ್ಲೆಗಳ ಅಬ್ಬರದ ಪ್ರಚಾರಕ್ಕೆ ನಿನ್ನೆ ಸಂಜೆ ತೆರೆಬಿದ್ದಿದೆ. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.ಕಾಸರಗೋಡು ಜಿಲ್ಲೆಯಲ್ಲಿ …

ವಿದ್ಯಾರ್ಥಿ ನಾಪತ್ತೆ

ಕಾಸರಗೋಡು: ಪ್ಲಸ್‌ವನ್ ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆಗೆ ಸಮೀಪದ ಆರಿಕ್ಕಾಡಿ ಕುನ್ನಿಲ್ ಹೌಸ್‌ನ ನಿವಾಸಿ ಹಾಗೂ ಪಟ್ಲದಲ್ಲಿರುವ ತಹ್ವಾರಿಯಾ ಅಕಾಡೆಮಿಯಲ್ಲಿ ವಾಸಿಸುತ್ತಿರುವ ಪ್ಲಸ್‌ವನ್ ವಿದ್ಯಾರ್ಥಿ ಮೊಹಮ್ಮದ್ ಅರಾಫತ್ (17) ಈ ತಿಂಗಳ ೮ರಂದು ಪ್ರಸ್ತುತ ಅಕಾಡೆಮಿಯಿಂದ ನಾಪತ್ತೆಯಾಗಿ ರುವುದಾಗಿ ಮನೆಯ ವರು ದೂರು ನೀಡಿದ್ದು, ಅದರಂತೆ ವಿದ್ಯಾನಗರ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಐಟಿಐ ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ:  ಕಾಸರಗೋಡಿನ ಐಟಿಐ ವಿದ್ಯಾರ್ಥಿ ಯೋರ್ವ ಬಾಡಿಗೆ ಮನೆಯ ಬೆಡ್‌ರೂಂನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಬಂ ದ್ಯೋಡು ಅಡ್ಕ ಬೈದಲ ನಿವಾಸಿಯೂ ಪ್ರಸ್ತುತ  ಮಂಗಲ್ಪಾಡಿ ಚೆರುಗೋಳಿಯ ಬಾಡಿಗೆ ಮನೆಯಲ್ಲಿ ವಾಸಿಸುವ ಗಲ್ಫ್ ಉದ್ಯೋ ಗಿ   ಮೊಹಮ್ಮದ್ ಬಾಷಾ ಎಂಬವರ ಪುತ್ರ ಶಿಹಾಬ್ (19)  ಸಾವಿಗೀಡಾದ ವಿದ್ಯಾರ್ಥಿ.  ಈತ ಕಾಸರಗೋಡಿನಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದಾನೆ. ನಿನ್ನೆ ರಾತ್ರಿ ಊಟ ಮಾಡಿ ನಿದ್ರಿಸಿದ್ದನು. ಇಂದು ಮುಂಜಾನೆ ತಾಯಿ ಎಬ್ಬಿಸಲು ಹೋದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಲಾಗಿತ್ತು. ಕರೆದರೂ  ಪ್ರತಿಕ್ರಿಯೆ ಬಾರದ …

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ವಿದ್ಯಾನಗರ ನೆಲ್ಕಳ ಕಾಲನಿಯಲ್ಲಿ ಯುವಕನೋ ರ್ವ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ದಿವಂಗತರಾದ ಚಂದ್ರ-ಸುಶೀಲ ದಂಪತಿ ಪುತ್ರ ಅಜಯನ್ (28) ಮೃತಪಟ್ಟ ವ್ಯಕ್ತಿ. ಲೈಟ್ ಆಂಡ್ ಸೌಂಡ್ ಕಾರ್ಮಿಕನಾದ ಅಜಯನ್ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಮನೆಯ ಬಾಗಿಲು ತೆರೆಯದಿರುವುದು ಗಮನಕ್ಕೆ ಬಂದ ಸಂಬಂಧಿಕರು ಅಲ್ಲಿಗೆ ತೆರಳಿ ನೋಡಿದಾಗ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಅಜಯನ್ ಪತ್ತೆಯಾಗಿ ದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ …

ನಾಪತ್ತೆಯಾದ ಯುವತಿ ಗೆಳೆಯನಿಂದ ಕೊಲೆ: ಜೀರ್ಣಿಸಿದ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು

ಕೊಚ್ಚಿ: ಮಲೆಯಾಟೂರ್‌ನಿಂದ ನಾಪತ್ತೆಯಾದ 19ರ ಹರೆಯದ ಯುವತಿಯ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮುಂಡಂಙಮಟ್ಟಂ ವೀಟಿಲ್ ಚಿತ್ರಪ್ರಿಯ (19)ರ ಮೃತದೇಹ ಜನವಾಸವಿಲ್ಲದ ಹಿತ್ತಿಲಲ್ಲಿ ಪತ್ತೆಹಚ್ಚಲಾಗಿದೆ. ಯುವತಿಯ ತಾಯಿ ಕೆಲಸ ಮಾಡುವ ಕ್ಯಾಟರಿಂಗ್ ಘಟಕದ ಕಾರ್ಮಿಕರ ಹುಡುಕಾಟದ ಮಧ್ಯೆ ಮೃತದೇಹ ಪತ್ತೆಯಾಗಿದೆ. ಚಿತ್ರಪ್ರಿಯಳ ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಮಣಪ್ಪಾಟ್‌ಚಿರ ಸಮೀಪ ನಿನ್ನೆ ಮಧ್ಯಾಹ್ನ ಮೃತದೇಹವನ್ನು ಸ್ಥಳೀಯರು ಪತ್ತೆಹಚ್ಚಿರುವುದು. ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ಈಕೆಯ ಗೆಳೆಯ ಅಲನ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದು ಪ್ರಶ್ನಿಸಿದಾಗ …