ಕಾರು ಢಿಕ್ಕಿ ಹೊಡೆದು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿಗೆ ಗಾಯ: ಅದನ್ನು ಕಂಡ ಆಟೋಚಾಲಕ ಆಸಿಡ್ ಸೇವಿಸಿ ಆತ್ಮಹತ್ಯೆ

ಕಾಸರಗೋಡು: ಆಟೋರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಆಟೋದಲ್ಲಿದ್ದ ವಿದ್ಯಾರ್ಥಿಗಳು ಗಾಯಗೊಂಡಿರುವು ದನ್ನು ಕಂಡ ಪ್ರಸ್ತುತ ಆಟೋ ಚಾಲಕ ಆಸಿಡ್ ಸೇವಿಸಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಬೇತೂರುಪಾರ ಸಮೀಪದ ಪಳ್ಳಿಂಜಿ ನಿವಾಸಿ ದಿ| ಶೇಖರನ್ ನಾಯರ್- ಕಮಲಾಕ್ಷಿ ದಂಪತಿ ಪುತ್ರ ಕೆ. ಅನೀಶ್ (40) ಸಾವನ್ನಪ್ಪಿದ ಆಟೋ ಚಾಲಕನಾಗಿದ್ದಾರೆ. ಬೇತೂರುಪಾರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮೂವರು ವಿದ್ಯಾರ್ಥಿಗಳನ್ನು ಹೇರಿ ಕೊಂಡು ಅನೀಶ್ ತನ್ನ ಆಟೋರಿಕ್ಷಾ ದಲ್ಲಿ ನಿನ್ನೆ ಬೇತೂರು ಪಾರದಿಂದ ಪಳ್ಳಂಜಿಗೆ ಹೋಗುತ್ತಿದ್ದ ದಾರಿ ಮಧ್ಯೆ ಆ …

ಶಾಲೆಯಲ್ಲಿ ಕ್ರೀಡಾ ಸ್ಪರ್ಧೆ ವೇಳೆ ವಿದ್ಯಾರ್ಥಿ ಕುಸಿದುಬಿದ್ದು ಮೃತ್ಯು

ಕುಂಬಳೆ: ಶಾಲೆಯಲ್ಲಿ ಕ್ರೀಡಾ ಸ್ಪರ್ಧೆ ನಡೆಯುತ್ತಿದ್ದಂತೆ ವಿದ್ಯಾರ್ಥಿ ಯೋರ್ವ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.  ಕುಕ್ಕಾರ್‌ನಲ್ಲಿರುವ ಮಂಗಲ್ಪಾಡಿ ಜಿಬಿಎಲ್‌ಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಹಸನ್ ರಝಾ (10) ಮೃತಪಟ್ಟ ಬಾಲಕನಾಗಿದ್ದಾನೆ. ನಿನ್ನೆ ಅಪರಾಹ್ನ ೩ ಗಂಟೆ ವೇಳೆ ಶಾಲೆಯಲ್ಲಿ ಕ್ರೀಡಾ ಸ್ಪರ್ಧೆ ನಡೆಯುತ್ತಿದ್ದಂತೆ ಈತ ಕುಸಿದು ಬಿದ್ದಿದ್ದನು. ಕೂಡಲೇ ಮಂಗಲ್ಪಾಡಿಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈತ ಮೂಲತಃ ಉತ್ತರಪ್ರದೇಶದ ಮುರ್ಶಿದಾಬಾದ್ ನಿವಾಸಿಯೂ ಕುಕ್ಕಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಇನ್ಸಾಫ್ ಅಲಿ-ಜಾಸ್ಮಿನ್ ದಂಪತಿ …

ಭೂತಾನ್‌ನಿಂದ ವಾಹನ ಕಳ್ಳಸಾಗಾಟ :ಕೇಂದ್ರ ತನಿಖಾ ತಂಡಗಳಿಂದ ತನಿಖೆ

ತಿರುವನಂತಪುರ: ತೆರಿಗೆ ವಂಚನೆ ನಡೆಸಿ ಭೂತಾನ್‌ನಿಂದ ಭಾರತಕ್ಕೆ ವಾಹನ ಕಳ್ಳ ಸಾಗಾಟ ನಡೆಸಿದ ಪ್ರಕರಣದ ತನಿಖೆಯನ್ನು ಕಸ್ಟಮ್ಸ್ ಮಾತ್ರವಲ್ಲ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ) ಮತ್ತು ಜಿಎಸ್‌ಟಿ ಇಲಾಖೆಯೂ ಇನ್ನೊಂದೆಡೆ ಸಮಗ್ರ ತನಿಖೆ ಆರಂಭಿಸಿದೆ. ಭೂತಾನ್ ಸೇನಾಪಡೆಯಿಂದ ಪಡೆದ ಆಡಂಭರ ವಾಹನಗಳಿಗೆ ಭಾರತೀಯ ಸೇನಾಪ ಡೆಯ ನಕಲಿ ದಾಖಲುಪತ್ರಗಳನ್ನು ಸೃಷ್ಟಿಸಿ ಅವುಗಳನ್ನು ಮಾರಾಟಮಾಡುವ ಜಾಲವೊಂದು ಹಿಮಾಚಲಪ್ರದೇಶವನ್ನು ಕೇಂದ್ರೀಕರಿಸಿ ಕಾರ್ಯವೆಸಗುತ್ತಿದೆ ಎಂಬ ಗುಪ್ತ ಮಾಹಿತಿ ಕೇಂದ್ರ ಗುಪ್ತಚರ ವಿಭಾಗಕ್ಕೂ ಲಭಿಸಿದೆ. ಇಂತಹ ವಾಹನಗಳನ್ನು ವಿವಿಧ ರಾಜ್ಯಗಳಿಗೆ ಸಾಗಿಸಿ ಅಲ್ಲಿ ಅವುಗಳನ್ನು …

ರಬ್ಬರ್ ತೋಟದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆ

ಕೊಲ್ಲಂ: ಅಪರಿಚಿತ ಮಹಿಳೆಯ ಮೃತದೇಹ  ರಬ್ಬರ್ ತೋಟದಲ್ಲಿ ಜೀರ್ಣಸಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಲ್ಲಂ ಸಮೀಪ ನಡೆದಿದೆ.  ಪುನಲೂರು ಮುಕ್ಕಡವು ಮಲೆನಾಡು ಹೆದ್ದಾರಿ ಸಮೀಪದ ರಬ್ಬರ್ ತೋಟದಲ್ಲಿ ಮೃತದೇಹ ಪತ್ತೆಯಾಗಿದೆ. ಪೂರ್ಣ ಜೀರ್ಣಾವಸ್ಥೆಯಲ್ಲಿರುವ ಮೃತದೇಹದ ಕೈ ಕಾಲುಗಳನ್ನು ಸರಪಳಿಯಿಂದ ಬಂಧಿಸಲಾಗಿದೆ.  ಸರಪಳಿಯ ಒಂದು ತುದಿಯನ್ನು ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿದೆ.  ಸ್ಥಳೀಯ ನಿವಾಸಿಯೊಬ್ಬರು ರಬ್ಬರ್ ತೋಟಕ್ಕೆ ತೆರಳಿದಾಗ ಮೃತದೇಹ ಕಂಡುಬಂದಿದೆ. ಇದೀಗ ಟ್ಯಾಪಿಂಗ್ ಇಲ್ಲದ ಕಾರಣ ರಬ್ಬರ್ ತೋಟ ಕಾಡು ತುಂಬಿಕೊಂಡಿದ್ದು ಅದರ ಮಧ್ಯೆ ಮೃತದೇಹ ಪತ್ತೆಯಾಗಿದೆ. ವಿಷಯ …

ಕಾಲೇಜು ವಿದ್ಯಾರ್ಥಿನಿ ನಾಪತ್ತೆ: ಕೊಲ್ಲಂಗಾನ ನಿವಾಸಿಯೊಂದಿಗೆ ಹೋಗಿರುವುದಾಗಿ ಸಂಶಯ

ಕಾಸರಗೋಡು:  ಕಾಲೇಜಿಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟ ವಿದ್ಯಾರ್ಥಿನಿ ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಕಾಞಂಗಾಡ್‌ನ ಕಾಲೇಜೊಂದರ ಪ್ರಥಮ ವರ್ಷ ಸಿವಿಲ್ ಇಂಜಿನಿ ಯರಿಂಗ್ ವಿದ್ಯಾರ್ಥಿನಿಯಾದ ಚೆಮ್ಮಟ್ಟಂವಯಲ್ ನಿವಾಸಿ ಫಾತಿಮತ್ ಶಹಲ (19) ಎಂಬಾಕೆ ನಾಪತ್ತೆಯಾಗಿದ್ದಾಳೆನ್ನಲಾಗಿದೆ.  ಕಳೆದ ಸೋಮವಾರ ಬೆಳಿಗ್ಗೆ 9 ಗಂಟೆ ವೇಳೆ ಈಕೆ ಎಂದಿನಂತೆ ಕಾಲೇಜಿಗೆಂದು ತಿಳಿಸಿ ಮನೆಯಿಂದ ತೆರಳಿದ್ದಳು. ಮರಳಿ ಬಾರದ ಹಿನ್ನೆಲೆಯಲ್ಲಿ ಶೋಧ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.  ಫಾತಿಮತ್ ಶಹಲ ಕಾಸರಗೋಡು ಕೊಲ್ಲಂಗಾನ ನಿವಾಸಿಯಾದ ರಶೀದ್ ಎಂಬಾತನ ಜೊತೆ ಹೋಗಿರುವುದಾಗಿ ಸಂಶಯಿಸಲಾಗುತ್ತದೆಯೆಂದು ತಾಯಿ …

ಮುದ್ರಣಾಲಯ ಮಾಲಕ ನಿಧನ

ಕಾಸರಗೋಡು:  ಮೀಪುಗುರಿ ಪಾರೆಕಟ್ಟೆ ಶ್ರೀಶೈಲಂ ನಿವಾಸಿ ಗಂಗಾಧರ  ಎ (73) ನಿಧನ ಹೊಂದಿದರು. ಇವರು ನುಳ್ಳಿಪ್ಪಾಡಿ ಶ್ರೀದೇವಿ ಪ್ರಿಂಟರ್ಸ್‌ನ ಮಾಲಕ ರಾಗಿದ್ದರು. ಮೃತರು ಪತ್ನಿ ಜಾನಕಿ, ಮಕ್ಕಳಾದ ಸನತ್, ಸಜಿತ್, ಸೊಸೆಯಂದಿರಾದ ಶೀತಲ್, ಚಾರ್ಮಿಳ, ಸಹೋದರ ನಾಗೇಶ್, ಸಹೋದರಿಯರಾದ ಮೋಹಿನಿ, ನಿರ್ಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನಿಬ್ಬರು ಸಹೋದರರಾದ ಕೃಷ್ಣ, ಸುರೇಶ ಎಂಬಿವರು ಈ ಹಿಂದೆ ನಿಧನಹೊಂದಿದ್ದಾರೆ.

ರಾಜ್ಯ ಶಾಲಾ ಗೇಮ್ಸ್: ಚಟ್ಟಂಚಾಲ್ ಶಾಲೆ ವಿದ್ಯಾರ್ಥಿಗೆ ಚಿನ್ನದ ಪದಕ

ಕಣ್ಣೂರು: ಕಣ್ಣೂರಿನಲ್ಲಿ ನಿನ್ನೆ ಸಮಾಪ್ತಿಗೊಂಡ 67ನೇ ರಾಜ್ಯ ಶಾಲಾ ಗೇಮ್ಸ್‌ನಲ್ಲಿ ಪೊಯಿನಾಚಿ ಪರಂಬ್‌ನ ದಕ್ಷದೇವಾನಂದನಿಗೆ ಚಿನ್ನದ ಪದಕ ಲಭಿಸಿದೆ. ಈತ ಚಟ್ಟಂಚಾಲ್ ಶಾಲೆಯ 11ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಅಂಡರ್ 78 ಕಿಲೋ ವಿಭಾಗದಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆಯುವ ರಾಷ್ಟ್ರೀಯ ಶಾಲಾ ಗೇಮ್ಸ್‌ನಲ್ಲಿ ಕೇರಳದ ಪರವಾಗಿ ದಕ್ಷದೇವಾನಂದ್ ಸ್ಪರ್ಧಿಸಲಿದ್ದಾನೆ. 19 ವರ್ಷಕ್ಕಿಂತ ಕೆಳಪ್ರಾಯದ ಹುಡುಗರ ಅಂಡರ್ 78 ಕಿಲೋ ವಿಭಾಗದಲ್ಲಿ ಈತನಿಗೆ ಚಿನ್ನದ ಪದಕ ಲಭಿಸಿದೆ. ಕಳೆದ ವರ್ಷವೂ ಈತ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿ ಸಿದ್ದನು.  ಶಿಕ್ಷಣದಲ್ಲೂ ಮುಂದಿರುವ ಈತ  …

ಮಂಗಲ್ಪಾಡಿ ಪಂಚಾಯತ್ ಮುಂಬದಿ ಕಚೇರಿಯಲ್ಲೇ ವಾಹನ ನಿಲುಗಡೆ-ಆರೋಪ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ಕಚೇರಿ ಅವ್ಯವಸ್ಥೆಯಿಂದ ಕೂಡಿ ರುವುದಾಗಿಯೂ   ಮುಂಬದಿ ಕಚೇರಿ ಯಲ್ಲೇ ವಾಹನ ನಿಲುಗಡೆಗೊಳಿಸುತ್ತಿರು ವುದಾಗಿ  ಜನತಾ ದಳ ನೇತಾರ ಸಿದ್ದಿಕ್ ಕೈಕಂಬ ಆರೋಪಿಸಿದ್ದಾರೆ. ಮುಂಬದಿ ಕಚೇರಿ  ಜ್ಯಾರಿಗೆ ಬಂದಾಗ ಸರಕಾರ ಹೊರಡಿಸಿದ ಎಲ್ಲಾ ನಿರ್ದೇಶ, ವ್ಯವಸ್ಥೆಗಳನ್ನು ಇಲ್ಲಿ ಪಾಲಿಸಿಲ್ಲವೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏರ್ ಕಂಡೀಶನರ್, ಟೋಕನ್ ಮಿಶನ್ ಮೊದಲಾದವುಗಳು ಸ್ತಬ್ಧ ಗೊಂಡಿವೆ. ಅಗತ್ಯ ಕಾರ್ಯಗಳಿಗಾಗಿ ತಲುಪುವ ವಯಸ್ಕರು, ಮಹಿಳೆಯರು, ವಿಕಲ ಚೇತನರು ಮೊದಲಾದವರಿಗೆ ಇಲ್ಲಿ ಸರಿಯಾದ ಆಸನ ವ್ಯವಸ್ಥೆಗಳಿಲ್ಲ. ಆಸನಗಳನ್ನು ಇರಿಸಿರುವ  …

ಸ್ಥಳೀಯಾಡಳಿತ ಸಂಸ್ಥೆಗಳಿಗೆ ನವೆಂಬರ್ ಯಾ ಡಿಸೆಂಬರ್‌ನೊಳಗೆ ಚುನಾವಣೆ: ಮೀಸಲಾತಿ ವಾರ್ಡ್‌ಗಳ ಆಯ್ಕೆ ಅ.13ರಿಂದ

ತಿರುವನಂತಪುರ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳೊಳಗಾಗಿ ಚುನಾವಣೆ ನಡೆಸಲಾಗು ವುದೆಂದು ರಾಜ್ಯ ಚುನಾವಣಾ ಆಯುಕ್ತ ಎ. ಶಾಜಹಾನ್ ತಿಳಿಸಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಗಳ ಈಗಿನ ಆಡಳಿತದ ಅವದಿ ಡಿಸೆಂಬರ್ 20 ರಂದು ಕೊನೆಗೊಳ್ಳಲಿದೆ. ಅದರಿಂದಾಗಿ ಅದರ ಮೊದಲು ಚುನಾವಣೆ ನಡೆದು ಹೊಸ ಆಡಳಿತ ಸಮಿತಿಗಳು ಅಧಿಕಾರಕ್ಕೇರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಮೀಸಲಾತಿ ವಾರ್ಡ್‌ಗಳನ್ನು ಡ್ರಾ ಮೂಲಕ ಅಕ್ಟೋಬರ್ 13ರಿಂದ 21ರೊಳಗಾಗಿ ಆರಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ ಪ್ರಕ್ರಿಯೆಗಳು ಈಗಾಗಲೇ …

ಸಮುದ್ರದಲ್ಲಿ ಮೀನುಕಾರ್ಮಿಕರು ಬೀಸಿದ ಬಲೆಯಲ್ಲಿ ಸಿಲುಕಿದ ನಾಗ ವಿಗ್ರಹಗಳು

ಕಣ್ಣೂರು: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ   ಕಾರ್ಮಿಕರಿಗೆ ನಾಗನ ಎರಡು ವಿಗ್ರಹಗಳು ಪತ್ತೆಯಾದ ಘಟನೆ  ನಡೆದಿದೆ. ತಾನೂರು ಬಳಿಯ ಉನ್ಯಾಲ್ ಅಳಿಕಲ್ ಸಮುದ್ರದಲ್ಲಿ  ವಿಗ್ರಹಗಳು ಪತ್ತೆಯಾಗಿವೆ. ಹಿತ್ತಾಳೆಯಲ್ಲಿ ನಿರ್ಮಿಸಿದ ಈ ವಿಗ್ರಹಗಳು 5 ಕಿಲೋಕ್ಕಿಂತ ಹೆಚ್ಚು ಬಾರವಿದೆ.  ಪುದಿಯಕಡಪ್ಪುರ ಚಕ್ಕಾಚಂಡೆ ಪುರೈಕಲ್ ರಸಾಲ್ ಎಂಬವರು ಸಮುದ್ರದಲ್ಲಿ ಬೀಸಿದ ಬಲೆಯಲ್ಲಿ ಈ ವಿಗ್ರಹಗಳು ಸಿಲುಕಿಕೊಂಡಿವೆ. ಇದನ್ನು ಅವರು ತಾನೂರು ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ. ಯಾವುದಾದರೂ ಕ್ಷೇತ್ರದಿಂದ ಕಳವಿಗೀಡಾದ ವಿಗ್ರಹಗಳು ಇವಾಗಿರಬಹುದೆಂದೂ ಬಳಿಕ ಕಳ್ಳರು ಇದನ್ನು ಸಮುದ್ರಕ್ಕೆಸೆ ದಿರಬಹುದೆಂದು ಸಂಶಯಿಸ ಲಾಗುತ್ತಿದೆ. …