ಕೇರಳವನ್ನು ಮತೀಯ ರಾಜ್ಯವನ್ನಾಗಿ ಮಾಡಲು ಯತ್ನ-ಸಿಪಿಎಂ

ಮಂಜೇಶ್ವರ: ದೇವರ ರಾಜ್ಯ ವೆಂದು ಹೆಸರು ಪಡೆದ ಕೇರಳವನ್ನು ಯುಡಿಎಫ್ ಮತ್ತು ಬಿಜೆಪಿ ಮತೀಯ ರಾಜ್ಯವನ್ನಾಗಿಸಲು ಶ್ರಮಿಸುತ್ತಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ ರಾಜಗೋಪಾಲನ್ ನುಡಿದರು. ಸಿಪಿಎಂ ನೇತಾರ, ರೈತ ಮುಖಂಡ ಬಿಎಂ ರಾಮಯ್ಯ ಶೆಟ್ಟಿಯವರ 23ನೇ ಸಂಸ್ಮರಣೆ ದಿನಾಚರಣೆಯನ್ನು ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಆಡಳಿತದ ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ಮತೀಯ ಅಲ್ಪಸಂಖ್ಯಾತರ ನಿವಾಸಗಳ ಮೇಲೆ ಬುಲ್ಡೋಸರ್ ಹತ್ತಿಸಿದಾಗ ಅದಕ್ಕೆದುರಾಗಿ ಹೋರಾಟ ನಡೆಸಿದ್ದು ಸಿಪಿಎಂ ಆಗಿದೆ. ಸಿಪಿಎಂನ ಪೋಲೀಟ್ ಬ್ಯೂರೋ ಸದಸ್ಯೆ …

ತೂಮಿನಾಡು ಪರಿಸರದಿಂದ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ

ಮಂಜೇಶ್ವರ: ತೂಮಿನಾಡು ಶ್ರೀ ಮಹಾಕಾಳಿ ದೈವಸ್ಥಾನ ಮತ್ತು ಮಹಾಕಾಳಿ ಭಜನಾ ಮಂದಿರದ ವಠಾರದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು. ನಿನ್ನೆ ಸಂಜೆ 5.20 ರ ವೇಳೆ ಕ್ಷೇತ್ರ ಪರಿಸರದಿಂದ ಹೊರಟ ಪಾದಯಾತ್ರೆ ಇಂದು ಮುಂಜಾನೆ 6 ಗಂಟೆಗೆ ಕಟೀಲು ಕ್ಷೇತ್ರಕ್ಕೆ ತಲುಪಿದೆ. 40 ಮಂದಿ ಮಹಿಳೆಯರು, 20 ಪುರುಷರು ಸೇರಿದ 60 ಮಂದಿಯ ತಂಡ ಪಾದಯಾತ್ರೆ ನಡೆಸಿದೆ. ದೇವದಾಸ್ ಶೆಟ್ಟಿ ತೂಮಿನಾಡು, ಆಶಾ ಕಣ್ವತೀರ್ಥ ನೇತೃತ್ವ ವಹಿಸಿದರು.

ಬಡ ಕುಟುಂಬದ ಶೋಚನೀಯ ಸ್ಥಿತಿಯಲ್ಲಿದ್ದ ಮನೆ ಧರಾಶಾಯಿ: ನೂತನ ಮನೆ ಮಂಜೂರು ಮಾಡುವಂತೆ ಒತ್ತಾಯ

ಪೆರ್ಲ: ಬಡ ಕುಟುಂಬವೊಂದು ವಾಸಿಸುತ್ತಿದ್ದ ಮನೆ ಇತ್ತೀಚೆಗೆ ಕುಸಿದು ಬಿದ್ದಿದ್ದು ಇದರಿಂದ ಕುಟುಂಬಕ್ಕೆ ವಾಸಿಸಲು ಸೌಕರ್ಯವಿಲ್ಲದೆ ಸಂಕಷ್ಟ ಎದುರಿಸುತ್ತಿದೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಕಜಂಪಾಡಿ ಸೆಟ್ಟಿಬೈಲ್ ಎಂಬಲ್ಲಿನ ಐತ್ತೆ ಎಂಬವರ ಹೆಂಚು ಹಾಸಿದ ಮನೆ ಕುಸಿದು ಬಿದ್ದಿದೆ. ಮನೆ ಕುಸಿಯುವ ಶಬ್ದ ಕೇಳಿ ಕುಟುಂಬ ಹೊರಗೆ ಓಡಿದುದರಿಂದ ಭಾರೀ ಅಪಾಯದಿಂದ ಪಾರಾಗಿದ್ದಾರೆ. ಹೆಂಚು ಹಾಸಿದ ಮನೆಯ ಛಾವಣಿ ಶಿಥಿಲಗೊಂಡು ನೀರು ಒಳಗೆ ಸೋರುತ್ತಿತ್ತು. ಇದರಿಂದ ಟರ್ಪಾಲು ಹೊದಿಸಿ ನೀರು ಒಳಗೆ ಬೀಳದಂತೆ ತಡೆಯಲಾಗಿತ್ತು. ಆದರೂ ಮನೆ ಕುಸಿದು …

ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ಕೋಲಾರ-ಕಾಸರಗೋಡು ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕಾಸರಗೋಡು : ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಕೆ. ಎನ್ ವೆಂಕಟ್ರಮಣ ಹೊಳ್ಳ- ರೂಪ ಕಲಾ ದಂಪತಿಯನ್ನು ನುಳ್ಳಿಪ್ಪಾಡಿ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದಲ್ಲಿ ಇತ್ತೀಚೆಗೆ ನಡೆದ ಕಾರ್ಯ ಕ್ರಮದಲ್ಲಿ ಕೋಲಾರ- ಕಾಸರ ಗೋಡು ಗಡಿನಾಡ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ವಾಮನ್ ರಾವ್ ಬೇಕಲ್- ಸಂಧ್ಯಾರಾಣಿ ಟೀಚರ್ ಹಾಗೂ ಸ್ವರ್ಣಭೂಮಿ ಫೌಂಡೇಶನ್ ಕೋಲಾರ ಇದರ ರೂವಾರಿ ಶಿವಕುಮಾರ್ ಪ್ರದಾನ ಮಾಡಿದರು.ಕರ್ನಾಟಕ ಸರಕಾರದ ಗಡಿ …

ಬ್ಯೂಟಿ ಪಾರ್ಲರ್‌ಗಳನ್ನು ಯೂಸರ್ ಫೀಸ್‌ನಿಂದ ಹೊರತುಪಡಿಸಬೇಕು-ಕೆಎಸ್‌ಬಿಎ

ಕಾಸರಗೋಡು: ಬ್ಯೂಟಿ ಪಾರ್ಲ ರ್‌ಗಳನ್ನು ಯೂಸರ್ ಫೀಸ್‌ನಿಂದ ಹೊರತುಪಡಿಸಬೇಕೆಂದು ಕೆಎಸ್‌ಬಿಎ ಲೇಡಿ ಬ್ಯೂಟೀಶ್ಯನ್ ಅಸೋಸಿ ಯೇಶನ್ ಜಿಲ್ಲಾ ಸಮ್ಮೇಳನ ರಾಜ್ಯ ಸರಕಾರವನ್ನು ಒತ್ತಾಯಿಸಿದೆ. ತರಬೇತಿ, ಲೈಸನ್ಸ್ ಇಲ್ಲದೆ ಈ ರಂಗದಲ್ಲಿ ಕಾರ್ಯಾ ಚರಿಸುವವರಿಗೆ ನಿಯಂತ್ರಣ ಹೇರಬೇ ಕೆಂದೂ ಸಮ್ಮೇಳನ ಒತ್ತಾಯಿಸಿದೆ. ಕುಂಬಳೆಯಲ್ಲಿ ನಡೆದ ಸಮ್ಮೇಳನವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ನೆರಿನ್ ಜೋನ್ಸನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷೆ ಸುನಿತ ಕುಲಾಲ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಪೂರ್ಣಿಮ, ಕೆಎಸ್‌ಬಿಎ ರಾಜ್ಯ ಕಾರ್ಯದರ್ಶಿ ಪಿ.ಕೆ.ಮಧು, ರಾಜ್ಯ ಅಧ್ಯಕ್ಷ ಶ್ಯಾಮ ನಾಯರ್,ಯೋಗಿತ ರಾಣಿ, ರೇವತಿ,  …

ಕಡಂಬಾರು ಬೆಜ್ಜದಲ್ಲಿ ಹಣವಿರಿಸಿ ಕೋಳಿ ಅಂಕ: ಮೂವರ ಸೆರೆ; 72,860 ರೂ. ವಶ

ಉಪ್ಪಳ: ಮಂಜೇಶ್ವರ ಕಡಂಬಾರುಬೆಜ್ಜ ಶ್ರೀ ಚೌಕಾರು ಮಂತ್ರವಾದಿ ಗುಳಿಗ ದೈವಸ್ಥಾನ ಸಮೀಪ ಹಿತ್ತಿಲಿನಲ್ಲಿ ಹಣವಿರಿಸಿ ಕೋಳಿ ಅಂಕ ನಡೆಸುತ್ತಿದ್ದ ಮೂರು ಮಂದಿಯನ್ನು ಮಂಜೇಶ್ವರ ಪೊಲೀ ರು ಬಂಧಿಸಿದ್ದಾರೆ. ಬಂಧಿತರ ಕೈಯಿಂದ 72,860 ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಪಡಿಸಲಾಗಿದೆ. ಅಂಗಡಿಮೊಗರಿನ ಚಂದ್ರಹಾಸ ರೈ (46), ಕಡಂಬಾರ್‌ನ ಬಾಲಕೃಷ್ಣ ಶೆಟ್ಟಿ (43), ಮಜೀರ್ಪಳ್ಳ ಸುಂಕದಕಟ್ಟೆಯ  ರೋಹಿತ್ ರೈ (30) ಎಂಬಿವರನ್ನು  ಮಂಜೇಶ್ವರ ಠಾಣೆ ಇನ್ ಸ್ಪೆಕ್ಟರ್ ಪಿ. ಅಜಿತ್ ಕುಮಾರ್‌ರ  ನಿರ್ದೇಶ ಪ್ರಕಾರ ಎಸ್‌ಐ ಕೆ.ಆರ್. ಉಮೇಶ್ ನೇತೃತ್ವದ …

ಮದ್ಯದಮಲಿನಲ್ಲಿ ಪತ್ನಿ, ಸಂಬಂಧಿಕನ ದೇಹಕ್ಕೆ ಆಸಿಡ್ ದಾಳಿ: ಆರೋಪಿ ಸೆರೆ

ಕಾಸರಗೋಡು: ಮದ್ಯದಮಲಿನಲ್ಲಿ ಪತ್ನಿ ಹಾಗೂ ಸಂಬಂಧಿಕನಾದ ಯುವಕನ ದೇಹಕ್ಕೆ  ಆಸಿಡ್ ಎರಚಿ ಗಾಯಗೊಳಿಸಿದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.   ಮುನ್ನಾಡ್ ಚಂಬಕ್ಕಾಡ್ ನಿವಾಸಿ  ಜಾನಕಿ (54), ಸಹೋದರಿಯ ಪುತ್ರ ಸುರೇಶ್ ಎಂಬಿವರ ದೇಹಕ್ಕೆ ಆಸಿಡ್ ಎರಚಲಾಗಿದೆ. ಗಾಯಗೊಂಡ ಇವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ಸಂಜೆ ಮುನ್ನಾಡ್ ಚಂಬಕ್ಕಾಡ್‌ನಲ್ಲಿ ಘಟನೆ ನಡೆದಿದೆ.  ಜಾನಕಿಯ ಪತಿ ರವೀಂದ್ರನ್ ಮದ್ಯಪಾನಿಯಾಗಿದ್ದು, ಮನೆಯಲ್ಲಿ ನಿತ್ಯ ಸಮಸ್ಯೆ ಸೃಷ್ಟಿಸುತ್ತಿರುವುದಾಗಿ ದೂರಲಾಗಿದೆ. ಇದರಿಂದ ಜಾನಕಿ ಹಾಗೂ ಮಕ್ಕಳು ಬೇರೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಳೆದೆರಡು …

ಶಬರಿಮಲೆ ಪ್ರಕರಣದಲ್ಲಿ ಹೊಸ ತಿರುವು: ರ್ಭಗುಡಿಯ ಚಿನ್ನ ಹೊದಿಸಿದ್ದ ಪ್ರಭಾವಳಿ ಸೇರಿ ಇನ್ನಷ್ಟು ಚಿನ್ನ ಕಳವು ;  ಮತ್ತೆ ಮಾಜಿ ಸಚಿವರ ವಿಚಾರಣೆ ಸಾಧ್ಯತೆ

ತಿರುವನಂತಪುರ: ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ದೇಗುಲದಲ್ಲ್ಲಿ ದ್ವಾರಪಾಲಕ ಮೂರ್ತಿಗಳ ಚಿನ್ನ ಮಾತ್ರವಲ್ಲ ಚಿನ್ನ ಹೊದಿಸಲ್ಪಟ್ಟ ಪ್ರಭಾವಳಿ ಸೇರಿದಂತೆ ಇತರ ಹಲವು ಸಾಮಗ್ರಿಗಳನ್ನು ಕದ್ದು ಸಾಗಿಸಲಾಗಿದೆ ಎಂಬ ಮಾಹಿತಿ ವಿಶೇಷ ತನಿಖಾ ತಂಡಕ್ಕೆ ಲಭಿಸಿದೆ. ಈ ದೇಗುಲದ ಗರ್ಭಗುಡಿ ಯೊಳಗಿನ ಶಿವ ರೂಪ ಹಾಗೂ ಇತರ ಕೆತ್ತನೆಯ ರೂಪಗಳು ಒಳಗೊಂಡ ಚಿನ್ನ ಲೇಪಿತ ಪ್ರಭಾವಳಿಯನ್ನು  ಇರಿಸಲಾಗಿದೆ.  ಇದರ ಹೊರತಾಗಿ ದಶಾವತಾರ ರೂಪಗಳು ಒಳಗೊಂಡ ಎರಡು ತಾಮ್ರದ ಕವಚಗಳು, ರಾಶಿ ಚಿನ್ಹೆಗಳು ಒಳಗೊಂಡ ಇತರ ಎರಡು ಕವಚಗಳು ಹಾಗೂ  ಗರ್ಭಗುಡಿಯ …

ಕೋಟಿಚೆನ್ನಯ ಗರಡಿ ಕ್ಷೇತ್ರದ ಅರ್ಚಕ ನಿಧನ

ಕಾಸರಗೋಡು: ಅಡ್ಕತ್ತಬೈಲು ಕೋಟಿ ಚೆನ್ನಯ ಗರಡಿ ಕ್ಷೇತ್ರದ ಅರ್ಚಕ ರಮೇಶ್ (65 ನಿಧನಹೊಂದಿದರು. ಇಂದು ಬೆಳಿಗ್ಗೆ ಅಸೌಖ್ಯ ಕಾಣಿಸಿಕೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಇವರಿಗೆ  ಹೃದಯ ಸಂಬಂಧ ಅಸೌಖ್ಯ ವಿತ್ತೆನ್ನಲಾಗಿದೆ.   ಮೃತರು ಪತ್ನಿ ಸುಮತಿ, ಪುತ್ರ ನವೀನ, ಸಹೋದರರಾದ ಭಾಸ್ಕರ, ಪದ್ಮನಾಭ, ಸಹೋದರಿ ಪುಷ್ಪಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಸಂಜೆ ತರವಾಡು ಹಿತ್ತಿಲಿನಲ್ಲಿ ನಡೆಯಲಿದೆ.

ಶಾರ್ಟ್ ಸರ್ಕ್ಯೂಟ್ : ಮನೆಗೆ ಬೆಂಕಿ; ಭಾರೀ ನಷ್ಟ

ಕಾಸರಗೋಡು: ಉಳಿಯತ್ತಡ್ಕಕ್ಕೆ ಸಮೀಪದ ಭಗವತೀ ನಗರದ ಚಿತ್ರ ಕುಮಾರಿ ವೈದ್ಯರ್ ವಳಪ್ಪು ಎಂಬವರ  ಹೆಂಚು ಹಾಸಿದ ಮನೆಗೆ ನಿನ್ನೆ ರಾತ್ರಿ ಬೆಂಕಿ ತಗಲಿ ಭಾರೀ  ನಾಶನಷ್ಟ ಸಂಭವಿಸಿದೆ. ಮೊಬೈಲ್ ಫೋನ್ ಚಾರ್ಚಿಂಗ್ ನಡೆಸುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಆ ಬಗ್ಗೆ ಮನೆಯವರು ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾಗಮಿಸಿ ಸತತವಾಗಿ ನಡೆಸಿದ ಕಾರ್ಯಾ ಚರಣೆಯಲ್ಲಿ ಬೆಂಕಿ ನಂದಿಸಿದರು. ಬೆಂಕಿ ತಗಲಿದ  ಕೊಠಡಿ ಯೊಳಗಿದ್ದ …