ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರ ಪತ್ತೆ; ಯುವತಿ, ಗೃಹಿಣಿ ನಾಪತ್ತೆ

ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆ ಇಬ್ಬರು ಹೆಣ್ಣುಮಕ್ಕಳ ಸಹಿತ ನಾಲ್ಕು ಮಹಿಳೆಯರು ನಾಪತ್ತೆಯಾಗಿರುವುದಾಗಿ ದೂರಲಾಗಿದ್ದು, ಇವರಲ್ಲಿ 16 ವರ್ಷ ಪ್ರಾಯದ ಇಬ್ಬರು ಹೆಣ್ಮಕ್ಕಳನ್ನು ಪತ್ತೆಹಚ್ಚಲಾಗಿದೆ. ಅಡ್ಕತ್ತಬೈಲು, ಉದುಮ, ಪಾಕ್ಯಾರ ನಿವಾಸಿಗಳನ್ನು ಬೇಕಲ, ಕಾಸರ ಗೋಡು ನಗರ ಠಾಣೆ ಪೊಲೀಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಎರಡು ಘಟನೆಗಳಲ್ಲಿ ಪೊಲೀಸರು ಕೇಸು ದಾಖಲಿಸಿದ್ದರು. ಸಣ್ಣ ವಿಷಯಕ್ಕೆ ಸಂಬಂಧಿಸಿ ಈ ಇಬ್ಬರು ಹೆಣ್ಮಕ್ಕಳು ಮನೆ ತೊರೆದು ತೆರಳಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೂಡ್ಲು ಪಾಯಿಚ್ಚಾಲ್‌ನಿಂದ …

ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 172 ಲೀಟರ್ ಮದ್ಯ ವಶ: ಓರ್ವ ಸೆರೆ

ಮುಳ್ಳೇರಿಯ: ಆಟೋರಿಕ್ಷಾದಲ್ಲಿ  ಸಾಗಿಸುತ್ತಿದ್ದ  172.8 ಲೀಟರ್ ಗೋವಾ ನಿರ್ಮಿತ ಮದ್ಯವನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ನಾಯ್ಕಾಪು ನಿವಾಸಿ ಧನಂಜಯನ್ (35) ಎಂಬಾತನನ್ನು ಬಂಧಿಸಿ ಅಬಕಾರಿ ಪ್ರಕರಣ ದಾಖಲಿಸಲಾಗಿದೆ. ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟೀ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜಿತ್‌ರ ನೇತೃತ್ವದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಶೈಲೇಶ್ ಕುಮಾರ್, ಸುಧೀರ್ ಪಾರಮ್ಮಲ್, ಮಂಜುನಾಥನ್, ಕಬೀರ್ ವಿ.ಪಿ, ಎಕ್ಸೈಸ್ ಇಂಟೆಲಿಜೆನ್ಸ್ ಬ್ಯೂರೋ ಪ್ರಿವೆಂಟೀವ್ ಆಫೀಸರ್ ಸಾಜನ್ ಅಪ್ಯಾಲ್, ಚಾಲಕ ಕ್ರಿಸ್ಟಿನ್ …

ಒಣಗಿಸಿ ಸಂಗ್ರಹಿಸಿಟ್ಟಿದ್ದ 4 ಗೋಣಿ ಅಡಿಕೆ ಸ್ಕೂಟರ್‌ನಲ್ಲಿ ಕಳವು ಯತ್ನ ಮಧ್ಯೆ ಸೆರೆ

ಕಾಸರಗೋಡು: ಮನೆ ವರಾಂಡದಲ್ಲಿ ಸಂಗ್ರಹಿಸಿಟ್ಟಿದ್ದ ನಾಲ್ಕು ಗೋಣಿ ಒಣ ಅಡಿಕೆಯನ್ನು ಸ್ಕೂಟಿಯಲ್ಲಿ ಸಾಗಿಸ ಲೆತ್ನಿಸಿದ ಯುವಕನನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿ ದ್ದಾರೆ. ಮಡಿಕೈ, ಬೆಳ್ಳಚ್ಚೇರಿ ನಿವಾಸಿಯಾದ ಮಹೇಶ್ ಸೆರೆಯಾದ ವ್ಯಕ್ತಿ. ಈತನನ್ನು ಅಂಬಲತ್ತರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ 12.45ರ ವೇಳೆ ಘಟನೆ ನಡೆದಿದ್ದು, ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ. ‘ತಾಯ ನ್ನೂರು ಆನಕ್ಕುಳಿಯ ಕೃಷಿಕ ವರ್ಗೀಸ್‌ರ ಮನೆ ವರಾಂಡದಿಂದ ನಾಲ್ಕು ಗೋಣಿ ಅಡಿಕೆ ಕಳವುಹೋಗಿತ್ತು. ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿದ ಬಳಿಕ …

24 ತಾಸುಗಳ ರಾಷ್ಟ್ರೀಯ ಮುಷ್ಕರ ಇಂದು ಮಧ್ಯರಾತ್ರಿಯಿಂದ

ಕಾಸರಗೋಡು: ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರಾಷ್ಟ್ರೀಯ ಕಾರ್ಮಿಕ ಫೆಡರೇಶನ್ ಜಂಟಿಯಾಗಿ ಆಹ್ವಾನ ನೀಡಿರುವ 24 ತಾಸುಗಳ ರಾಷ್ಟ್ರೀಯ ಮುಷ್ಕರ ಇಂದು ರಾತ್ರಿ ೧೨ ಗಂಟೆಯಿಂದ ಆರಂಭಗೊಳ್ಳಲಿದೆ. ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದೂ ಅಂತಹ ನೀತಿಯನ್ನು ಪ್ರತಿಭಟಿಸಿ ಈ ರಾಷ್ಟ್ರೀಯ ಮುಷ್ಕರಕ್ಕೆ ಆಹ್ವಾನ ನೀಡಲಾಗಿರುವ ಕೃಷಿ, ಉದ್ದಿಮೆ    ಹಾಗೂ ವ್ಯಾಪಾರ ವಲಯಗಳ ಕಾರ್ಮಿಕರೂ ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆಂದು ಸಂಯುಕ್ತ ಮುಷ್ಕರ ಸಮಿತಿ ತಿಳಿಸಿದೆ. ಉದ್ಯೋಗಖಾತರಿ ಯೋಜನೆಯನ್ನು ಮರುಸ್ಥಾಪಿಸಬೇಕು. ವಿದ್ಯುತ್, ಬೀಜ ತಿದ್ದುಪಡಿ ಮಸೂದೆಗಳನ್ನು …

ಬಟ್ಟೆಬರೆಗಳ ಮಾಯಾಲೋಕದಲ್ಲಿ ಮೈಮರೆತು ಮಕ್ಕಳನ್ನೇ ಮರೆತು ಹೋದ ಹೆತ್ತವರು

ಕಾಸರಗೋಡು: ಬಟ್ಟೆಬರೆಗಳ ವಿಸ್ಮಯಲೋಕದಲ್ಲಿ ಮೈಮರೆತಾಗ ಗ್ರಾಹಕರಲ್ಲಿ ಕೆಲವರು ತಮ್ಮ ಮಕ್ಕಳನ್ನೇ ಅಂಗಡಿಗಳಲ್ಲಿ ಮರೆತುಹೋಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಇದೇ ರೀತಿಯ ಘಟನೆಯೊಂದು ಕಾಸರಗೋಡು ನಗರದಲ್ಲೂ ನಡೆದಿದೆ. ಮನೆ ಮಂದಿಯನ್ನು, ಹೆತ್ತವರನ್ನು ಕಾಣದೆ ಮೂರು ಮಕ್ಕಳು ಬಟ್ಟೆಬರೆ ಅಂಗಡಿಯಲ್ಲಿ ಕೂಗುತ್ತಿದ್ದಾಗ ನೌಕರರು ಅವರನ್ನು ಸಮಾಧಾನಪಡಿಸಿದ್ದರು. ಕಾಸರಗೋಡಿನ ಬಟ್ಟೆಬರೆ ಅಂಗಡಿಯೊಂದಕ್ಕೆ ತಲುಪಿದ ಮಹಿಳೆಯರು ತಮ್ಮ ಮಕ್ಕಳನ್ನು ಅಲ್ಲೇ ಮರೆತು ಹಿಂತಿರುಗಿದ್ದಾರೆ. ಜನರ ಮಧ್ಯದಲ್ಲಿ ಹೆತ್ತವರನ್ನು ಅರಸುತ್ತಾ, ಗೂಕುತ್ತಾ ಸಾಗುತ್ತಿದ್ದ ಮಕ್ಕಳನ್ನು ಬಟ್ಟೆಬರೆ ಅಂಗಡಿಯ ನೌಕರರು ಸಮಾಧಾನಪಡಿಸಿ ಅವರ ಊರು ಹಾಗೂ ತಂದೆ …

ಚಿನ್ನುಪಾಪು ಸಾವು ನೇಣುಬಿಗಿದು ಸಂಭವಿಸಿರುವುದಾಗಿ ವರದಿ

ಕಾಸರಗೋಡು: ಸೋಶ್ಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಚಿನ್ನು ಪಾಪು ಯಾನೆ ರೇಷ್ಮ (25)ರ ಸಾವು  ನೇಣು ಬಿಗಿದು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ನಿನ್ನೆ ಮಧ್ಯಾಹ್ನ ವೇಳೆ ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುತ್ತಿಗೆಯಲ್ಲಿ ಬೆಡ್ ಶೀಟ್ ಬಿಗಿದ ಹಿನ್ನೆಲೆಯಲ್ಲಿ ಉಸಿರುಗಟ್ಟಿ ಸಾವು ಸಂಭವಿಸಿದೆ ಯೆಂ ದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾ ಗಿದೆ. ಸಮಗ್ರ ಪರಿಶೀಲನೆ ಯಂಗವಾಗಿ ‘ವಿಸಿರ’ವನ್ನು ಕಳುಹಿಸಿಕೊಡಲಾಗಿದೆ. ಅದರ ವರದಿ ಲಭಿಸಿದ ಬಳಿಕವೇ ಸಾವಿಗೆ ಕಾರಣವೇನೆಂದು …

ಕುಂಬಳೆಯಲ್ಲಿ  ಮಿನಿ ಎಂಸಿಎಫ್‌ನಿಂದ ತ್ಯಾಜ್ಯ ತೆರವು ಪರಿಸರದಲ್ಲಿ ಬಿದ್ದ ತ್ಯಾಜ್ಯದಿಂದ ಮುಂದುವರಿದ ಸಮಸ್ಯೆ

ಕುಂಬಳೆ: ಕುಂಬಳೆಯಲ್ಲಿ ಸರಕಾರಿ ಆಸ್ಪತ್ರೆ ಹಾಗೂ ಶಾಲೆಗೆ ತೆರಳುವ ರಸ್ತೆ ಬದಿಯಿರುವ ಮಿನಿ ಎಂಸಿಎಫ್‌ನಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿದ್ದು, ಇದೇ ವೇಳೆ ಅದರ ಸಮೀಪದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿ ಸದೆ ಅಲ್ಲೇ ಬಿಟ್ಟಿರುವುದು ಸ್ಥಳೀಯರಿಗೆ ಮತ್ತೆ ಸಮಸ್ಯೆ ಎದುರಾಗಿದೆ. ಎಂಸಿಎಫ್‌ನ ಸುತ್ತುಮುತ್ತ ಎಸೆಯಲಾದ ಪ್ಲಾಸ್ಟಿಕ್ ತ್ಯಾಜ್ಯಗಳೊಂದಿಗೆ ಆಹಾರ ವಸ್ತುಗಳನ್ನು ಉಪೇಕ್ಷಿಸಲಾಗಿದ್ದು ಅದರಿಂದ ದುರ್ನಾತ ಬೀರುತ್ತಿದೆ. ಅಲ್ಲದೆ ಆಹಾರ ವಸ್ತುಗಳನ್ನು ತಿನ್ನಲು ಬೀದಿ ನಾಯಿಗಳು ಅಲ್ಲಿಗೆ ತಲುಪುತ್ತಿದ್ದು, ಅವುಗಳಿಂದ ಜನರಿಗೆ ದಾಳಿಯ ಭಯವೂ ಹುಟ್ಟಿಕೊಂಡಿದೆ.  ಈ ಸಮಸ್ಯೆ …

ಸರಕಾರಿ ಕಚೇರಿಗಳಲ್ಲಿ ಕಂಪ್ಯೂಟರೀಕರಣ ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ ಆರು ತಿಂಗಳಿಂದ ಕಂಪ್ಯೂಟರ್‌ಗಳು ಸ್ತಬ್ದ

ಕುಂಬಳೆ: ಸರಕಾರಿ ಕಚೇರಿಗಳಲ್ಲಿ  ನಡೆಸಿರುವ ಕಂಪ್ಯೂಟರೀಕರಣ ಕೆಲವೆಡೆ  ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.  ಇದರಿಂದ  ಹಲವು ಅಗತ್ಯಗಳಿಗೆ ಕಚೇರಿಗಳಿಗೆ ತಲುಪುವವರು  ಸಂದಿಗ್ಧತೆ ಎದುರಿಸುತ್ತಿ ದ್ದಾರೆ.  ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ  ಇಂತಹ ಸಮಸ್ಯೆ ಎದುರಾಗಿರುವುದಾಗಿ ದೂರಲಾಗಿದೆ.  ಇಲ್ಲಿನ ಕಂಪ್ಯೂಟರ್‌ಗಳು, ಪ್ರಿಂಟರ್ ಕಾರ್ಯಾಚರಿಸದೆ ಆರು ತಿಂಗಳಿಂದ ಸ್ಥಬ್ದಗೊಂಡಿದೆ. ಇಲ್ಲಿ ನಾಲ್ಕು ಕಂಪ್ಯೂಟರ್ ಗಳಿದ್ದು ಅವುಗಳು ಪದೇ ಪದೇ ಸ್ಥಬ್ದಗೊಳ್ಳುತ್ತಿರುವುದು   ಸಮಸ್ಯೆಯಾಗಿ ಪರಿಣಮಿಸಿದೆ. ಕಂಪ್ಯೂಟರ್ ಸ್ತಬ್ದಗೊಂಡಾಗ ನೌಕರರು ಅದನ್ನು ಪದೇ ಪದೇ  ಬಡಿದು ಸರಿಪಡಿಸುತ್ತಿರುವುದು ನಿತ್ಯ ಘಟನೆಯಾಗಿದೆ.  ಕಂಪ್ಯೂಟರ್ ಕಾರ್ಯಾಚರಿಸದಿರುವುದು ಕಚೇರಿಯ ನೌಕರರಿಗೆ …

ಔಷಧಿ ಅಂಗಡಿ ಮಾಲಕರಾಗಿದ್ದ ಅಬ್ದುಲ್ ಅಜೀಜ್ ನಿಧನ

ಬಾಯಾರು: ಇಲ್ಲಿನ ವಿಲ್ಲೇಜ್ ಕಚೇರಿ ಬಳಿ ವಾಸವಾಗಿರುವ ಆವಳ ಸಾಗು ನಿವಾಸಿ ದಿ| ಅಬ್ಬಾಸ್ ಹಾಜಿ- ದಿ| ಝುಲೈಕ ದಂಪತಿ ಪುತ್ರ ಈ ಹಿಂದೆ ಔಷಧಿ ಅಂಗಡಿ ಮಾಲಕರಾಗಿದ್ದ ಅಬ್ದುಲ್ ಅಜೀಜ್ ಸಾಗು (58) ನಿಧನ ಹೊಂದಿ ದರು. ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಮುಮ್ರಾಜ್, ಮಕ್ಕಳಾದ ಜುಲೈಕತ್ ನೂರ, ಮುನಾವರ, ತನ್ವೀರ, ಮರಿಯಮ್ಮ, ಮೊಹ ಮ್ಮದ್ ಅಯಾನ್, ಸಹೋದರರಾದ ಮುಹಮ್ಮದ್, ಅಬ್ದುಲ್ ರಜಾಕ್, …

4 ವರ್ಷದ ಹಿಂದೆ ಕೃಷಿಕರಿಗೆ ವಿದ್ಯುತ್ ಸಂಪರ್ಕ ನೀಡಿರುವುದಕ್ಕೆ ದಾಖಲೆಗಳಿಲ್ಲವೆಂದು ತಿಳಿಸಿ ಈಗ 7೦,೦೦೦ ರೂ. ಪಾವತಿಗೆ ನೋಟೀಸು

ಕುಂಬಳೆ: ನಾಲ್ಕು ವರ್ಷದ ಹಿಂದೆ ಕೃಷಿಯ ಅಗತ್ಯಕ್ಕಾಗಿ ಕೆಎಸ್‌ಇಬಿ ನೀಡಿದ ವಿದ್ಯುತ್ ಸಂಪರ್ಕಕ್ಕೆ ಸಾಕಷ್ಟು ದಾಖಲೆಗಳನ್ನು ನೀಡಲಾಗಿಲ್ಲವೆಂದು ಈಗ ಸೀತಾಂಗೋಳಿ ಕೆಎಸ್‌ಇಬಿ ಸೆಕ್ಷನ್ ನೌಕರರು ಪತ್ತೆಹಚ್ಚಿದ್ದಾರೆ..! ಆದರೆ ಅದಕ್ಕೆ ಯಾವುದೇ ಬೇಸರ ಮಾಡಬೇಕಾ ಗಿಲ್ಲವೆಂದು ಕೆಎಸ್‌ಇಬಿ ತಿಳಿಸಿದ್ದು, ಪುತ್ತಿಗೆ ಕೃಷಿಭವನ ವ್ಯಾಪ್ತಿಯಲ್ಲಿ ಈ ರೀತಿಯಲ್ಲಿ ಸಂಪರ್ಕ ನೀಡಿದ 2೦೦ರಷ್ಟು ಕೃಷಿಕರು 7೦,೦೦೦ ರೂ. ಮೊತ್ತವನ್ನು ಪಾವತಿಸಿ ದರೆ ಸಾಕು ಎಂದು ಉಪದೇಶಿಸಿದೆ. ಪುತ್ತಿಗೆ ಕೃಷಿಭವನ ವ್ಯಾಪ್ತಿಯ 2೦೦ರಷ್ಟು ಕೃಷಿಕರಿಗೆ ಇದಕ್ಕಿರುವ ಬಿಲ್ಲನ್ನು ಕಳುಹಿಸಿಕೊಡ ಲಾಗಿದೆ. ನಿಶ್ಚಿತ ದಿನಾಂಕದೊಳಗೆ …