ಶಬರಿಮಲೆ ಯುವತಿ ಪ್ರವೇಶ: ಸುಪ್ರೀಂಕೋರ್ಟ್ ಸಂವಿಧಾನ ಪೀಠದ ತೀರ್ಪು ಅಕ್ಟೋಬರ್‌ನಲ್ಲಿ

ನವದೆಹಲಿ: ಶಬರಿಮಲೆ ದೇಗುಲಕ್ಕೆ ಯುವತಿಯರ ಪ್ರವೇಶ ಸೇರಿದಂತೆ ಧಾರ್ಮಿಕ ನಂಬುಗೆಗೆ ಅನ್ವಯಿಸಿರುವ ಇತರ ಏಳು ವಿಷಯಗಳ ಕುರಿತಾದ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್‌ನ ನವ ಸದಸ್ಯರ ಸಂವಿಧಾನ ಪೀಠ ಅಕ್ಟೋಬರ್‌ನಲ್ಲಿ ನೀಡಲಿದೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಈ ಬಗ್ಗೆ   ಪೂರ್ವ ಮಾಹಿತಿ ನೀಡಿದ್ದಾರೆ. ಬಿಹಾರಿನ ಬೋದ್‌ಗಯ ಕ್ಷೇತ್ರದ ಆಡಳಿತ ಸಮಿತಿಗೆ ಸಂಬಂಧಪಟ್ಟ ಪ್ರಕರಣದ ಅರ್ಜಿಯನ್ನು ಪರಿಶೀಲಿಸು ತ್ತಿದ್ದ ವೇಳೆ  ಈ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ ಬೋದ್‌ಗಯ ಕ್ಷೇತ್ರದ ಆಡಳಿತ ಸಮಿತಿಯ ಪ್ರಕರಣದ ವಿಚಾರಣೆಯನ್ನು ಶಬರಿಮಲೆ …

ಕನ್ನಡ ಎಲ್‌ಪಿ ಅಧ್ಯಾಪಕ ರ‍್ಯಾಂಕ್ ಲಿಸ್ಟ್‌ನಿಂದ ನೇಮಕಕ್ಕೆ ಯೂತ್ ಲೀಗ್ ಮನವಿ

ಮಂಜೇಶ್ವರ: ಎಲ್‌ಪಿ ವಿಭಾಗ ಕನ್ನಡ ಅಧ್ಯಾಪಕ ರ‍್ಯಾಂಕ್ ಲಿಸ್ಟ್‌ನಿಂದ ನೇಮಕಾತಿಗೆ ಉಂಟಾಗುತ್ತಿರುವ ವಿಳಂಬವನ್ನು ಹೊರತುಪಡಿಸಬೇಕೆಂದು ಮೀಂಜ ಪಂಚಾಯತ್ ಯೂತ್ ಲೀಗ್ ಸಚಿವ ಶಂಸುದ್ದೀನ್‌ರಿಗೆ ಮನವಿ ನೀಡಿದೆ. ಕನ್ನಡ ಎಲ್‌ಪಿ ಅಧ್ಯಾಪಕ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕೆಂದು, ಅದಕ್ಕಾಗಿ ನಿರ್ದೇಶ ನೀಡಬೇಕೆಂದು ಯೂತ್ ಲೀಗ್ ಪಂಚಾಯತ್ ಸಮಿತಿ ಅಧ್ಯಕ್ಷ ರಿಯಾಸ್ ಚಿಗುರುಪಾದೆ, ಪ್ರಧಾನ ಕಾರ್ಯದರ್ಶಿ ಜಾಸಿಮ್ ಕಡಂಬೇರಿ, ಅಶ್ರಫ್ ಮಜೀರ್ಪಳ್ಳ ಸಚಿವರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಬೆಂಗಳೂರು ಕೃಷ್ಣರಾಜಪುರದಲ್ಲಿ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ ನೂತನ ಶೋರೂಂ ಉದ್ಘಾಟನೆ

 . ಕಾಸರಗೋಡು: ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ 25ನೇ ಶೋರೂಂ ಹಾಗೂ ಬೆಂಗಳೂರು ನಗರದ 8ನೇ ಶೋರೂಂ ಕೃಷ್ಣರಾಜಪುರದಲ್ಲಿ ನಟಿ ನಿಕ್ಕಿ ಗಲ್‌ರಾಣಿ ಉದ್ಘಾಟಿಸಿದರು. ಈ ಶೋರೂಂನಲ್ಲಿ ಚಿನ್ನ, ಡೈಮಂಡ್, ಪ್ಲಾಟಿನಂ, ಪೋಲ್ಕಿ, ಅನ್‌ಕಟ್ ಡೈಮಂಡ್, ಪ್ರೀಶ್ಯಸ್, ಬೆಳ್ಳಿ ಆಭರಣ ಗಳು ಎಂಬಿವುಗಳ ವಿಪುಲ ಸಂಗ್ರಹ ಸಿದ್ಧಪಡಿಸಲಾಗಿದೆ ಎಂದು ಮೆನೇಜಿಂಗ್ ಡೈರೆಕ್ಟರ್ ಅಬ್ದುಲ್ ರೌಫ್ ತಿಳಿಸಿದ್ದಾರೆ. ಗ್ರಾಹಕರ ವಿಶ್ವಾಸ ಕಂಪೆನಿಯ ಅತ್ಯಂತ ದೊಡ್ಡ ಶಕ್ತಿಯಾಗಿದ್ದು, ಪ್ರತೀ ಆಭರ ಣಕ್ಕೂ ಅಂತಾರಾಷ್ಟ್ರೀಯ ಗುಣಮಟ್ಟ ವಿರುವ ಸರ್ಟಿಫಿಕೇಶನ್ ಖಚಿತಪಡಿಸ ಲಾಗುತ್ತಿದೆ …

ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರ ನವರಾತ್ರಿ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರದಲ್ಲಿ ಶ್ರೀ ನಿತ್ಯಾನಂದ ಸ್ವಾಮಿಯ 66ನೇ ಸಮಾಧಿ ವಾರ್ಷಿಕ, ಗುರುಪೂಜೆ ಇತ್ತೀಚೆಗೆ ನಡೆದಿದ್ದು, ಈ ವೇಳೆ ಈ ವರ್ಷದ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಜರಗಿತು. ಕ್ಷೇತ್ರದ ಅಧ್ಯಕ್ಷ ಸಿ.ವಿ. ಪೊದು ವಾಳ್ ಅಧ್ಯಕ್ಷತೆ ವಹಿಸಿದ್ದು, ಮಾಜಿ ಅಧ್ಯಕ್ಷ ಯು.ಎಸ್. ಬಾಲನ್ ಉದ್ಘಾಟಿಸಿದರು. ಡಾ. ಭರತನ್, ಕೆ.ಎನ್. ವೇಣುಗೋಪಾಲ್, ಯಶೋಧ ಚಂದ್ರನ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆ. ಸುಜಿತ್ ಕುಮಾರ್ ಸ್ವಾಗತಿಸಿ, ಕೋಶಾಧಿಕಾರಿ ಕೆ. ಮನೋಜ್ ಕುಮಾರ್ ವಂದಿಸಿದರು. …

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸಾಧಕಾಭಿವಂದನಂ ಅಭಿಯಾನಕ್ಕೆ ಚಾಲನೆ

ಬದಿಯಡ್ಕ: ಸೇವಾ ಕ್ಷೇತ್ರದ ಸಾಧನೆ ಹಾಗೂ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ೫೦ ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಕಿನ್ನಿಂಗಾರು ವಸಂತ್ ಶೆಣೈ- ಸುಧಾ ವಿ. ಶೆಣೈ ದಂಪತಿಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ನಿನ್ನೆ ಅವರ ಮನೆಯಲ್ಲಿ ಗೌರವಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ಯುವವರನ್ನು ಅಭಿನಂದಿಸುವ ಅಕಾಡೆಮಿಯ ಸರಣಿ ಕಾರ್ಯಕ್ರಮಕ್ಕೆ ಈ ವೇಳೆ ಚಾಲನೆ ನೀಡಲಾಯಿತು. ನಿವೃತ್ತ ತಹಶೀಲ್ದಾರ್ ನಾರಾಯಣ ಗೋಸಾಡ ಉದ್ಘಾಟಿಸಿದರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕುಂಜಾರು ಮೊಹಮ್ಮದ್ ಹಾಜಿ …

ವಿ.ಡಿ. ಸತೀಶನ್‌ರ ಆಡಳಿತ ಬ್ರಿಟೀಷರನ್ನು  ನೆನಪಿಸುವ ರೀತಿಯಲ್ಲಿದೆ-ಪಿ.ಕೆ. ಕೃಷ್ಣದಾಸ್

ಕುಂಬಳೆ: ವಂದೇ ಮಾತರಂನಂತಹ ರಾಷ್ಟ್ರೀಯ ಭಾವೈಕ್ಯತಾ ಗೀತೆಯನ್ನು, ಅದನ್ನು ಆಲಾಪಿಸುವುದಕ್ಕೆ ನಿಷೇಧ ಏರ್ಪಡಿಸಿದ ರಾಜ್ಯದ ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಆಡಳಿತ ಭಾರತದ ವಿಭಜನೆ ಕಾಲದಲ್ಲಿನ ಬ್ರಿಟೀಷ್ ಆಡಳಿತವನ್ನು ನೆನಪಿಸುವಂತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ನುಡಿದರು. ರಾಷ್ಟ್ರ ಸ್ವಾಭಿಮಾನ್ ಸಮಿತಿಯ ಆಶ್ರಯದಲ್ಲಿ ಕುಂಬಳೆ ಪೇಟೆಯಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ತಿರಂಗ ಯಾತ್ರ ಉದ್ಘಾಟಿಸಿ ಅವರು ಮಾತನಾಡಿದರು. ಜವಹಾರ್‌ಲಾಲ್ ನೆಹರು, ಪಿ.ಸಿ. ಜೋಶಿ, ಮುಹಮ್ಮದಲಿ ಜಿನ್ನಾ ಭಾರತದ ವಿಭಜನೆಗೆ ನೇತೃತ್ವ ನೀಡಿದವರಾಗಿದ್ದಾರೆ. ೮೦ …

ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ, ನಾಟಿವೈದ್ಯ ನಿಧನ

ಪೆರ್ಲ: ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸದಸ್ಯ, ನಾಟಿ ವೈದ್ಯ ಗೋಪಾಲಕೃಷ್ಣ ಭಟ್ ನೀಲಗಿರಿ (88) ನಿಧನ ಹೊಂದಿದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಸರಸ್ವತಿ, ಮಕ್ಕಳಾದ ವಿಜಯಲಕ್ಷ್ಮಿ ಬದಿಯಡ್ಕ, ಡಾ. ಶ್ಯಾಮಸುಂದರ ಬೇಳ, ರಾಜಶೇಖರ ಭಟ್, ಸೊಸೆಯಂದಿರಾದ ಸಾವಿತ್ರಿ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವಂದೇ ಮಾತರಂ ಗೀತೆಯನ್ನು ವಿರೋಧಿಸುವುದು ಮುಂದಿನ ವಿಭಜನೆಗೆ ಬೀಜ ಬಿತ್ತುವಂತದ್ದು-ಪಿ.ಕೆ. ಕೃಷ್ಣದಾಸ್

ಕಾಸರಗೋಡು: ವಂದೇ ಮಾತರಂ ರಾಷ್ಟ್ರೀಯ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲವೆಂದು ಹೇಳುವ ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ನೇತೃತ್ವದ ಸರಕಾರದ ನಿಲುವು ದೇಶದ ಐಕ್ಯತೆಗೆ ಬೆದರಿಕೆಯಾಗಿದೆ. ಮಾತ್ರವಲ್ಲದೆ ಇದು ಮುಂದಿನ ವಿಭಜನೆಗೆ  ಬೀಜ ಬಿತ್ತುವಂತದ್ದಾಗಿದೆಯೆಂದು   ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ    ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್  ತಿಳಿಸಿದ್ದಾರೆ. ಬಿಜೆಪಿ  ಜಿಲ್ಲಾ ಕಚೇರಿಯಲ್ಲಿ  ಇಂದು ಬೆಳಿಗ್ಗೆ ಅವರು ಪತ್ರಕರ್ತರೊಂದಿಗೆ  ಮಾತನಾಡುತ್ತಿದ್ದರು. ಭಾರತವನ್ನು ಇಬ್ಬಾಗವಾಗಿ ಹಾಗೂ ಹದಿನೇಳಾಗಿ ವಿಭಜಿಸಬೇಕೆಂದು ಆಗ್ರಹಿಸಿದ್ದ ಮುಸ್ಲಿಂ ಲೀಗ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ವಂದೇ ಮಾತರಂನ್ನು ವಿರೋಧಿಸುವ ನಿಲುವು ತಳೆದಿರುವು …

ನಾಪತ್ತೆಯಾದ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾದ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಕೂಡ್ಲು ಆರ್.ಡಿ.ನಗರ ಬಳಿ ನಡೆದಿದೆ. ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಳಿಯ ನಿವಾಸಿ ದಿ| ಮಾಧವ- ಲಕ್ಷ್ಮಿ ದಂಪತಿ ಪುತ್ರ ವಿನಾಯಕ ಕೆ. (25) ಸಾವನ್ನಪ್ಪಿದ ಯುವಕ. ಕೂಲಿ ಕಾರ್ಮಿಕನಾಗಿರುವ ವಿನಾಯಕ ಕೂಡ್ಲು ಗೋಪಾಲಕೃಷ್ಣ ದೇವಸ್ಥಾನ ಪರಿಸರದ ಖಾಸಗಿ ತೋಟದಲ್ಲಿ ರವಿವಾರ ಕೆಲಸಕ್ಕೆಂದು ಹೋಗಿದ್ದರು. ಅನಂತರ ಅವರು ಮನೆಗೆ ಹಿಂತಿರುಗಿರಲಿಲ್ಲ. ಆ ಬಗ್ಗೆ ಮನೆಯವರು ಕಾಸರಗೋಡು ಪೊಲೀಸರಿಗೂ ಮಾಹಿತಿ ನೀಡಿದ್ದರು. ಈ ಮಧ್ಯೆ ವಿನಾಯಕ ಕೆಲಸ ಮಾಡುತ್ತಿದ್ದ …

ವ್ಯಕ್ತಿ ಮನೆಯ ಸಿಟೌಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ:  ವ್ಯಕ್ತಿಯೊಬ್ಬರು ಮನೆಯ ಸಿಟೌಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಡಮನೆ ಬಳಿಯ ಮಾಡತ್ತಡ್ಕ ನಿವಾಸಿ ದಿ| ಗೋವಿಂದ ನಾಯ್ಕ-ಪರಮೇಶ್ವರಿ ದಂಪತಿಯ ಪುತ್ರ ನಾರಾಯಣ ನಾಯ್ಕ (54) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ಸಂಜೆ ಮನೆಯ ಸಿಟೌಟ್‌ನಲ್ಲಿ ಇವರ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಘಟನೆ  ವೇಳೆ ಮನೆಯಲ್ಲಿ ಇವರು ಮಾತ್ರವೇ ಇದ್ದರೆನ್ನಲಾಗುತ್ತಿದೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ತಿರುಮಲೇಶ್ವರಿ, ಮಕ್ಕಳಾದ ಮಿಥುನ್‌ರಾಜ್, ಹರ್ಷಿತಾ,ಸಹೋದರಿ ಗೌರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಲಕ್ಷ್ಮಿ …