ಆರು ವರ್ಷದ ಪುತ್ರನನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಲೆ: ಪ್ರಿಯತಮನ ಜೊತೆ ಪರಾರಿಯಾಗಲು ನಡೆಸಿದ ಸಿದ್ಧತೆ ಮಧ್ಯೆ ಯುವತಿ ಪೊಲೀಸರ ವಶಕ್ಕೆ

ಪುಣೆ: ಪ್ರಿಯತಮನ ಜೊತೆ ಜೀವಿಸಲೆಂದು ತಾಯಿ 6 ವರ್ಷದ ಮಗನನ್ನು ಪ್ರಿಯತಮನ ಸಹಾಂi ದೊಂದಿಗೆ ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಲೆಗೈದ ಘಟನೆ ನಡೆದಿದೆ. ಬಕೆಟ್‌ನಿಂದ ಹೊರ ತೆಗೆದು ಮಗು ಮೃತಪಟ್ಟಿದೆಯೇ ಎಂಬುದನ್ನು ಖಚಿತಪಡಿಸಲು ಮೃತದೇಹವನ್ನು ನೆಲಕ್ಕೆ ಬಡಿದಿರುವುದಾಗಿಯೂ ಹೇಳಲಾಗುತ್ತಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡಿ ಎಂಬಲ್ಲಿ ಈ ದಾರುಣ ಘಟನೆ ಸಂಭವಿಸಿದೆ.  ಕೊಲೆಗೈದ ಮರುದಿನ ತಾಯಿ ಬಾಸಿರನ್ ಮೆಹಬೂಬ್ ಶೇಕ್ (27) ಮಗುವಿನ ಮೃತದೇಹವನ್ನು ತನ್ನ ಕುಟುಂಬ ಮನೆಗೆ ಕೊಂಡೊಯ್ದಿದ್ದಳು. ಹೃದಯಾಘಾv ದಿಂದ ಪುತ್ರ ಮೃತಪಟ್ಟಿರುವುದಾಗಿ ತಾಯಿ …

ಮೊನಾಲಿಸ ಅಪ್ರಾಪ್ತೆ: ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸು

ತಿರುವನಂತಪುರ: ಕುಂಭ ಮೇಳಕ್ಕೆ ಸಂಬಂಧಿಸಿ ದೇಶದೆಲ್ಲೆಡೆ ಗಮನ ಸೆಳೆದು ಕೊನೆಗೆ ತಿರುವನಂತಪುರಕ್ಕೆ ತಲುಪಿ ಸಿಪಿಎಂ, ಪೋಪ್ಯುಲರ್ ಫ್ರಂಟ್ ಮುಖಂಡರ ಸಹಾಯದಲ್ಲಿ ವಿವಾಹವಾದ ಮೊನಾಲಿಸಳಿಗೆ ಪ್ರಾಯಪೂರ್ತಿಯಾಗಿಲ್ಲವೆಂದು ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯ ವಿವಾಹ ನಡೆಸಿದವರ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ. 2009 ದಶಂಬರ್ 30ರಂದು ಮೊನಾಲಿಸ ಜನಿಸಿರುವುದಾಗಿ ಪತ್ತೆಹಚ್ಚಲಾಗಿದೆ. ಪೋಕ್ಸೋ, ಭಾರತೀಯ ನ್ಯಾಯಸಂಹಿತೆ, ಪರಿಶಿಷ್ಟ ಜಾತಿಯವರ ವಿರುದ್ಧ ಅಕ್ರಮ ತಡೆಯುವ ಕಾಯ್ದೆ ಎಂಬಿವು ಪ್ರಕಾರ ಕೇಸು ದಾಖಲಿಸಲಾಗಿದೆ. ಫರ್ದಿ ವನವಾಸಿ ಸಮಾಜಕ್ಕೊಳಪಟ್ಟ ಮೊನಾಲಿಸ …

ಚಟ್ಟಂಚಾಲ್- ಚೆರ್ಕಳ ರಾಷ್ಟ್ರೀಯ ಹೆದ್ದಾರಿ ಇಂದಿನಿಂದ 2 ವಾರ ಮುಚ್ಚುಗಡೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುವ ನಿರ್ಮಾಣ ಕಾಮಗಾರಿಗಳಂಗವಾಗಿ ತೆಕ್ಕಿಲ್, ಬೇವಿಂಜ ಭಾಗಗಳಲ್ಲಿ ರಸ್ತೆಯಲ್ಲಿ ಹೊಂಡ ತೆಗೆಯುವುದರ ಹಿನ್ನೆಲೆಯಲ್ಲಿ ಇಂದಿನಿಂದ 2 ವಾರ ಸಂಚಾರ ನಿಷೇಧಿಸಲಾಗಿದೆ. ಕಣ್ಣೂರು ಭಾಗದಿಂದ ಆಗಮಿಸುವ ವಾಹನಗಳು ಕಾಞಂಗಾಡ್ ಸೌತ್‌ನಿಂದ ಕೆಎಸ್‌ಟಿಪಿ ರಸ್ತೆ ಮೂಲಕವೂ, ಪೆರಿಯ ಪೊಯಿನಾಚಿ ಕಡೆಯಿಂದ ಬರುವ ವಾಹನಗಳು ಚಟ್ಟಂಚಾಲ್ ಮಲ್ಸೇತುವೆಯನ್ನು ಪ್ರವೇಶಿಸದೆ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಚಟ್ಟಂಚಾಲ್- ಪರವನಡ್ಕ ದೇಳಿ ರಸ್ತೆ ಮೂಲಕ ಕೆಎಸ್‌ಟಿಪಿ ರಸ್ತೆಗೆ ಪ್ರವೇಶಿಸಿ ಮುಂದುವರಿಯಬೇಕಾಗಿದೆ. ಮಂಗಳೂರು ಭಾಗದಿಂದ ಕಣ್ಣೂರು ಭಾಗಕ್ಕೆ ತೆರಳುವ ವಾಹನಗಳು ಕಾಸರಗೋಡು …

ಉದ್ಯಾವರ ಮಾಡ ಕ್ಷೇತ್ರದ ಉತ್ಸವ ದಿನಾಂಕ ನಿಗದಿ ಮಾಡುವ ‘ಕುದಿಕಳ’ ಸಂಪನ್ನ

ಮಂಜೇಶ್ವರ: ಸುಮಾರು 800 ವರ್ಷಗಳಿಂದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿರುವ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ಕ್ಷೇತ್ರದ ಮಹೋತ್ಸವ ದಿನಾಂಕ ನಿಗದಿ ಸಮಾರಂಭ ಕುದಿಕಳ ಎಂಬ ಹೆಸರಲ್ಲಿ ಸಂಪ್ರದಾಯ ಪ್ರಕಾರ ನಡೆಯಿತು. ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬರಿಂದ ದೈವಪಾತ್ರಿಗಳು ವೀಳ್ಯದೆಲೆ ಮತ್ತು ಅಡಿಕೆ ಖರೀದಿಸುವುದು ಸಮಾರಂಭದ ವಿಶೇಷತೆಯಾಗಿದೆ. ಇದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಉದ್ಯಾವರ ಸಾವಿರ ಜಮಾಯತ್ ಸದಸ್ಯರು ಮತ್ತು ದೇವಸ್ಥಾನದ ಬ್ರಹ್ಮಸಭೆ ಎರಡು ಕಡೆಗಳಲ್ಲಿ ಕುಳಿತು ಸಮಾರಂಭದ ದಿನಾಂಕ ನಿಗದಿಪಡಿಸಿದರು. ಬಳಿಕ ಸಂಪ್ರದಾಯದಂತೆ ತೆಂಗಿನಕಾಯಿ, ವೀಳ್ಯದೆಲೆ ಮಾರಾಟ …

ಕುಟುಂಬಶ್ರೀಯ ಚುನಾವಣೆ ಕಫೆ : 20 ಲಕ್ಷ ರೂ.ಗೂ ಹೆಚ್ಚಿನ ಆದಾಯ

ಕಾಸರಗೋಡು: ವಿಧಾನಸಭಾ ಚುನಾವಣೆಯ ಬ್ಯುಸಿಯ ಮಧ್ಯೆ ಪೋಲಿಂಗ್ ಅಧಿಕಾರಿಗಳಿಗೆ ಹಾಗೂ ಭದ್ರತಾ ಅಧಿಕಾರಿಗಳಿಗೆ ಕುಟುಂಬಶ್ರೀ ವಿತರಿಸಿದ ಆಹಾರ ಮೂಲಕ 20,69,412 ರೂ.ಗಳ ಆದಾಯ ಗಳಿಸಿದೆ. ಸೂಕ್ತವಾದ ಆಯೋಜನೆಯ ಮೂಲಕ ನಡೆಸಿದ ಈ ಕಾರ್ಯ ಜಿಲ್ಲೆಯ ಮಹಿಳಾ ಒಕ್ಕೂಟದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಚುನಾವಣೆ ದಿನಾಂಕ ಘೋಷಿಸಿದ ಬೆನ್ನಲ್ಲೇ ವಿಪುಲವಾದ ಸಿದ್ಧತೆಗಳನ್ನು ಜಿಲ್ಲಾ ಮಿಷನ್ ನೇತೃತ್ವದಲ್ಲಿ ಆರಂಭಿಸಲಾಗಿತ್ತು. ಜಿಲ್ಲೆಯಾದ್ಯಂತವಿರುವ 324 ಕಫೆ ಘಟಕಗಳನ್ನು ಆಹಾರ ವಿತರಣೆಗಾಗಿ ಸಿದ್ಧಗೊಳಿಸಲಾಗಿತ್ತು. ಅಧಿಕಾರಿಗಳಿಗೆ ಅಗತ್ಯವಾದ ಉಪಹಾರ, ಮಧ್ಯಾಹ್ನ ದೂಟ, ಚಹಾ ಎಂಬಿವು ಯಾವುದೇ …

ಕುರುಮುಜ್ಜಿಕಟ್ಟೆ ಭಜನಾಮಂದಿರದಲ್ಲಿ ಭಾಗವತ ಸಪ್ತಾಹಕ್ಕೆ ಚಾಲನೆ: ಅಗಲ್ಪಾಡಿಯಿಂದ ಹಸಿರುವಾಣಿ ಹೊರೆಕಾಣಿಕೆ

ಕುಂಬ್ಡಾಜೆ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ನಿನ್ನೆಯಿಂದ ಆರಂಭಗೊಂಡ ಶ್ರೀಮದ್ಭಾಗವತ ಸಪ್ತಾಹದಂಗವಾಗಿ ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಿಂದ ಹಸಿರು ವಾಣಿ ಹೊರೆಕಾಣಿಕೆ ಸಮರ್ಪಿಸ ಲಾಯಿತು. ಶ್ರೀಮದ್ಭಾಗವತ ಸಪ್ತಾಹ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ದೀಪ ಬೆಳಗಿಸಿದರು. ಸಂಚಾಲಕ ಶ್ರೀಕೃಷ್ಣ ಭಟ್ ಬಳಕ, ಕೋಶಾ ಧಿಕಾರಿ ಕೃಷ್ಣ ಮಣಿಯಾಣಿ ಅಗಲ್ಪಾಡಿ, ಗೋಪಾಲಕೃಷ್ಣ ಭಜನಾಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಜಯನಗರ, ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಅಧ್ಯಕ್ಷ ಕೆ.ವಿ. ರಮೇಶ ಶರ್ಮ, ಭಜನಾ ಸಮಿತಿ ಅಧ್ಯಕ್ಷ ರಾಧಾ …

ಕೂಟಮಹಾಜಗತ್ತು ಮಂಗಲ್ಪಾಡಿ ಅಂಗಸಂಸ್ಥೆ, ಯುವ ವೇದಿಕೆಯ ಯುವಶಕ್ತಿ ಸಂಭ್ರಮ

ಉಪ್ಪಳ :ಕೂಟ ಮಹಾಜಗತ್ತು ಮಂಗಲ್ಪಾಡಿ ಅಂಗಸ೦ಸ್ಥೆ ಇದರ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಯ ಕೂಟ ಯುವಶಕ್ತಿ ಸಂಭ್ರಮ ಕಾರ್ಯಕ್ರಮ ಇತ್ತೀಚಿಗೆ ಐಲ ಶ್ರೀ ದುರ್ಗಾ ಪರಮೇಶ್ವರಿ ಕಲಾ ಭವನದಲ್ಲಿ ನಡೆಯಿತು. ಬೆಳಗ್ಗೆ ವೇದಮೂರ್ತಿ ಅಶೋಕ ನಾವಡರ ಪೌರೋಹಿತ್ಯದಲ್ಲಿ ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಗೊ೦ಡಿತು. ಬಳಿಕ ಪುಟಾಣಿಗಳ ರಾಧಾ ಕೃಷ್ಣ ವೇಷ, ಕಲಶ ಹಿಡಿದ ಮಹಿಳೆಯರು ಹಾಗೂ ಸಮಾಜ ಬಾಂಧವರ ಮೆರವಣಿಗೆಯಲ್ಲಿ ಅತಿಥಿಗಳನ್ನು ಸ್ವಾಗತಿಸಲಾಯಿತು. ಯುವ ವೇದಿಕೆಯ ಸದಸ್ಯರ ಸ್ವಾಗತ ಗೀತೆ ಹಾಗೂ ಮಹಿಳಾ ವೇದಿಕೆಯ ಸದಸ್ಯರಿಂದ ತಿರುವಾದಿರ …

ಬಾಯಿ, ಸೊಂಟದಲ್ಲಿ ಚಿನ್ನ ಬಚ್ಚಿಟ್ಟು ತಂದಾತ ಸೆರೆ

ಕೊಚ್ಚಿ: ಯುವಕನೋರ್ವ ವಿದೇಶದಿಂದ ಬರುತ್ತಿದ್ದಾಗ 160 ಗ್ರಾಂ ಚಿನ್ನವನ್ನು ತನ್ನ ಬಾಯಿ ಹಾಗೂ ಸೊಂಟದಲ್ಲಿ ಬಚ್ಚಿಟ್ಟು ತಂದಿದ್ದಾನೆ. ಕೌಲಾಲಂಪುರ ದಿಂದ ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣಕ್ಕೆ ತಲುಪಿದ ಕೊಡುವಳ್ಳಿ ನಿವಾಸಿ ಮುಹ ಮ್ಮದ್ ಸಾಬಿದ್‌ನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ವಶಪಡಿಸಿದ ಚಿನ್ನಕ್ಕೆ 30 ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ. ಮುಹ ಮ್ಮದ್ ಸಾಬಿದ್ ತಲಾ 25 ಗ್ರಾಂ ತೂಕದ ನಾಲ್ಕು ಚಿನ್ನದ ನಾಣ್ಯಗಳನ್ನು ಬಾಯಿಯೊಳಗೆ, 60 ಗ್ರಾಂ ಚಿನ್ನವನ್ನು ಸೊಂಟಪಟ್ಟಿಯಲ್ಲಿ  ಪೇಸ್ಟ್ ರೂಪದಲ್ಲಾಗಿಸಿ …

ಚುನಾವಣೆ: ಇನ್ನು ಸೋಲು ಗೆಲುವಿನ ಲೆಕ್ಕಾಚಾರ

ತಿರುವನಂತಪುರ: 16ನೇ ಕೇರಳ ವಿಧಾನಸಭೆಗಾಗಿರುವ ಮತದಾನ ನಿನ್ನೆ ಅತ್ಯಂತ ಶಾಂತಯುತವಾಗಿ ನಡೆದಿದೆ. 1987ರ ಬಳಿಕ ಅತೀ ಹೆಚ್ಚು ಮಂದಿ ಮತಚಲಾಯಿಸಿದ ವಿಶೇಷತೆಯೂ ನಿನ್ನೆ ನಡೆದ ಚುನಾವಣೆ ಹೊಂದಿದೆ. 2021ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ  ಶೇ. 76ರಷ್ಟು ಮತದಾನ ನಡೆದರೆ ಈ ಬಾರಿ ಅದು ಶೇ. 79.27ಕ್ಕೇರಿರುವುದು ಅದು ಈಗಿನ ಆಡಳಿತ ಒಕ್ಕೂಟವಾದ ಎಡರಂಗ, ವಿರೋಧ ಪಕ್ಷವಾದ ಯುಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಯಲ್ಲಿ ಸಮಾನವಾಗಿ ಗೆಲುವಿನ ಬಾರೀ ನಿರೀಕ್ಷೆ ಮೂಡಿಸುವಂತೆ ಮಾಡಿದೆ. ಮತಎಣಿಕೆ ಮೇ 4ರಂದು …

ಗೂಡ್ಸ್ ಆಟೋ ಮಗುಚಿ ಬಿದ್ದು ಚಿಕಿತ್ಸೆಯಲ್ಲಿದ್ದ ಯುವಕ ಸಾವು

ಕಾಸರಗೋಡು: ಗೂಡ್ಸ್ ಆಟೋ ರಿಕ್ಷಾ ಮಗುಚಿ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಯಲ್ಲಿದ್ದ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಪರವನಡ್ಕದ ನಿರ್ಮಾಣ ಸಂಸ್ಥೆಯೊಂದರ ಸೂಪರ್‌ವೈಸರ್ ಆಗಿ ದುಡಿಯುತ್ತಿದ್ದ ಪರವನಡ್ಕ ಮಣಿಯಂಗಾನ ನಿವಾಸಿ ಎಂ. ಬದ್ರುದ್ದೀನ್ (36) ಸಾವನ್ನಪ್ಪಿದ ಯುವಕ. ಪೆರುಂಬಳೆಯಲ್ಲಿ ನಿರ್ಮಾಣ ಕೆಲಸದ ಸ್ಥಳಕ್ಕೆ ಸಾಮಗ್ರಿಗಳೊಂದಿಗೆ ಗೂಡ್ಸ್ ಆಟೋದಲ್ಲಿ ಬದ್ರುದ್ದೀನ್ ಕಳೆದ ಮಂಗಳವಾರ ಬೆಳಿಗ್ಗೆ ಹೋಗುತ್ತಿದ್ದ ವೇಳೆ ಪೆರುಂಬಳ ರಸ್ತೆಯ ವಿಷ್ಣು ಪಾರಕುಂಡ್ ಜಂಕ್ಷನ್‌ಗೆ ತಲುಪಿದಾಗ ಗೂಡ್ಸ್ ಆಟೋ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು. ಇದರಿಂದ ಗಂಭೀರ …