ಭಾರತೀಯ ನೌಕಾ ಸೇನೆಗೆ ಆಯ್ಕೆಯಾದ ದೀಕ್ಷಾಳಿಗೆ ಅಭಿನಂದನೆ

ಕುಂಬಳೆ: ಭಾರತೀಯ ನೌಕಾಸೇನೆಗೆ ಆಯ್ಕೆಯಾದ ಕಂಚಿಕಟ್ಟೆ ನಿವಾಸಿ ದೇವದಾಸ್- ಶಾಲಿನಿ ದಂಪತಿ ಪುತ್ರಿ ದೀಕ್ಷಾ ದೇವದಾಸ್‌ರನ್ನು ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಶುಭ ಹಾರೈಸಿದರು. ಮಂಡಲ ಉಪಾಧ್ಯಕ್ಷರಾದ ಪ್ರೇಮಾವತಿ, ವಿಕ್ರಮ್ ಪೈ, ಪಂಚಾಯತ್ ಸಮಿತಿ ಅಧ್ಯಕ್ಷ ಸುಜಿತ್ ರೈ, ಕಾರ್ಯದರ್ಶಿ ವಿವೇಕ್ ಶೆಟ್ಟಿ, ರಮೇಶ್ ಭಟ್, ಕಾಂಚಾರ, ಪ್ರೇಮ ಶೆಟ್ಟಿ, ಶೋಭಾ, ಗೋಪಾಲ, ಸುಮ, ಶಶಿ ಕುಂಬಳೆ ಉಪಸ್ಥಿತರಿದ್ದರು.

ರಸ್ತೆಗೆ ಬಾಗಿಕೊಂಡಿರುವ ಮರಗಳು ಮಂಜೇಶ್ವರ ಒಳರಸ್ತೆಯಲ್ಲಿ ಸಂಚಾರ ಭೀತಿ

ಮಂಜೇಶ್ವರ: : ಹೊಸಂಗಡಿ ರೈಲ್ವೇಗೇಟ್ ಮೂಲಕ ಹಾದುಹೋ ಗುವ ಮಂಜೇಶ್ವರ ಒಳರಸ್ತೆಯಲ್ಲಿ ಬೃಹತ್ ಮರಗಳು ರಸ್ತೆಗೆ ಬಾಗಿಕೊಂ ಡಿದ್ದು ವಾಹನ ಸವಾರಲ್ಲಿ ಆತಂಕ ಉಂಟುಮಾಡುತ್ತಿದೆ. ಮಂಜೇಶ್ವರ ಚರ್ಚ್ ಬಳಿಯಿಂದ ಬ್ಲೋಕ್ ಪಂಚಾಯತ್ ಜಂಕ್ಷನ್ ತನಕದ ಎರಡು ಬದಿಯಲ್ಲಿ ಬೃಹತ್ ಗಾತ್ರದ 20ರಷ್ಟು ಮರಗಳ ರೆಂಬೆಗಳು ಅಲ್ಲಲ್ಲಿ ರಸ್ತೆಗೆ ಬಾಗಿಕೊಂಡಿರುದರಿAದ ವಾಹನ ಸಂಚಾರಕ್ಕೆ ಆತಂಕ ಉಂಟಾ ಗಿದೆ. ಮಳೆ, ಗಾಳಿಗೆ ಮುರಿದು ಬೀ ಳುವ ಸಾಧ್ಯತೆ ಇದೆ ಎಂದು ಸಾರ್ವ ಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ಪರಿಸರದಿಂದ …

ಅಡೂರು ಸೇವಾ ಸಹಕಾರಿ ಬ್ಯಾಂಕ್‌ನ ಕಾನ್ಫರೆನ್ಸ್ ಹಾಲ್ ಉದ್ಘಾಟನೆ

ಅಡೂರು: ಅಡೂರು ಸೇವಾ ಸಹಕಾರಿ ಬ್ಯಾಂಕ್‌ನ ಪ್ರಿಯದರ್ಶಿನಿ ಕಾನ್ಫರೆನ್ಸ್ ಹಾಲ್, ಗೊಬ್ಬರ ಡಿಪ್ಪೋದ ಉದ್ಘಾಟನೆಯನ್ನು ಉದುಮ ಶಾಸಕ ಕೆ. ನೀಲಕಂಠನ್ ನಿರ್ವಹಿಸಿದರು. ಇದೇ ವೇಳೆ ವಿವಿಧ ಪರೀಕ್ಷೆಗಳಲ್ಲಿ ಉನ್ನತ ಜಯ ಗಳಿಸಿದವರನ್ನು ಅಭಿನಂದಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಎ. ಗೋಪಾಲ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಅಧ್ಯಕ್ಷ ಎ. ಮುಸ್ತಫ ಹಾಜಿ, ಉಪಾಧ್ಯಕ್ಷೆ ಶಾರದಾ ಏವಂದೂರು, ಬ್ಲೋಕ್ ಪಂ. ಸದಸ್ಯ ಜಿ. ಗೋಪಾಲನ್, ಪಂಚಾಯತ್ ಸದಸ್ಯರಾದ ಗಂಗಾಧರ ಕಾಂತಡ್ಕ, ಸೈರ ಎ.ಬಿ, ಬಿಂದು ಕೆ.ವಿ, ರತನ್ ಕುಮಾರ್ ನಾಯ್ಕ್, …

ಜಂಬೋ ಸರ್ಕಸ್ ಪ್ರದರ್ಶನ ಕಾಸರಗೋಡಿನಲ್ಲಿ ಆರಂಭ

ಕಾಸರಗೋಡು: ಭಾರತದ ಅತ್ಯಂತ ದೊಡ್ಡ ಸರ್ಕಸ್ ಆದ ಜಂಬೋ ಸರ್ಕಸ್ ಕಾಸರಗೋಡು ಹೊಸ ಬಸ್ ನಿಲ್ದಾಣದ ಮುಂಭಾಗ, ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಸಮೀಪ ಆರಂಭಗೊಂಡಿದೆ. 1೦ ವರ್ಷದ ಬಳಿಕ ಜಂಬೋ ಸರ್ಕಸ್ ಕಾಸರಗೋಡಿಗೆ ತಲುಪುತ್ತಿದೆ. ಆಶ್ಚರ್ಯಕರವಾದ ಅಭ್ಯಾಸ ಪ್ರದರ್ಶನಗಳು, ತಾನ್ಸಾನಿಯ, ಎತ್ಯೋಪ್ಯ ಮೊದಲಾದ ರಾಜ್ಯಗಳಿಂದಿರುವ ತರಬೇತಿ ಪಡೆದ ವಿದೇಶ ಕಲಾವಿದರು, ಮಣಿಪುರ ಸಹಿತ ಭಾರತದ ವಿವಿಧ ರಾಜ್ಯಗಳ ನೂರಾರು ಕಲಾವಿದರು ಪ್ರದರ್ಶನ ನೀಡುತ್ತಿದ್ದಾರೆ. ೨ ಗಂಟೆಯ ಶೋದಲ್ಲಿ ೩೦ಕ್ಕೂ ಹೆಚ್ಚು ವಿಸ್ಮಯ ಪ್ರದರ್ಶನಗಳಿವೆ. ಮೆಕ್ಸಿಕನ್ …

ಹೊಸ ಬಸ್ ನಿಲ್ದಾಣದ ತ್ಯಾಜ್ಯ ಸಮಸ್ಯೆಯಲ್ಲಿ ಅಧಿಕೃತರ ಅನಾಸ್ಥೆ ವಿರುದ್ಧ ಪ್ರತಿಭಟನೆ

ಕಾಸರಗೋಡು: ನಗರದ ಪ್ರಧಾನ ಪ್ರಯಾಣ ಕೇಂದ್ರವಾದ ಹೊಸ ಬಸ್ ನಿಲ್ದಾಣದಲ್ಲಿ ಶೌಚಾಲಯದ ತ್ಯಾಜ್ಯ ವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯ ಬಿಡುತ್ತಿದ್ದು, ಹಲವು ಕಾಲಗಳಿಂದ ಮುಂದುವರಿಯುತ್ತಿರುವ ಸಂಕಷ್ಟಕ್ಕೆ  ಕೊನೆಗಾಣಿಸಬೇಕೆಂದು ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಲಾಗಿದೆ. ಸಾವಿರಾರು ಪ್ರಯಾಣಿಕರು, ವಿವಿಧ ಸಂಸ್ಥೆಗಳ ನೌಕ ರರು ನಿತ್ಯವೂ ಬಂದು ಸೇರುವ ಇಲ್ಲಿ ಶೌಚಾಲಯದ ತ್ಯಾಜ್ಯ ಟ್ಯಾಂಕ್ ಬ್ಲಾಕ್ ಆದ ಹಿನ್ನೆಲೆಯಲ್ಲಿ  ಮಲಿನ ಜಲ ಬಹಿರಂಗಸ್ಥಳಕ್ಕೆ ಹರಿಯುತ್ತಿದ್ದು, ಬಹಳ ದೊಡ್ಡ ಮಟ್ಟಿನ ಆರೋಗ್ಯ ಸಮಸ್ಯೆಗಳಿಗೆ, ದುರ್ವಾಸನೆಗೆ ಕಾರಣವಾಗುತ್ತಿದೆ. ಸತತ ದೂರುಗಳ ಹಿನ್ನೆಲೆಯಲ್ಲಿ ಬಿಎಂಎಸ್ …

ಉಪಯೋಗಕ್ಕಿಲ್ಲದ ತಂಗುದಾಣ: ದೂರದಲ್ಲಿ ನಿಲ್ಲಿಸುವ ಬಸ್‌ಗಳಿಂದ ಪ್ರಯಾಣಿಕರಿಗೆ ಸಮಸ್ಯೆ

ಉಪ್ಪಳ: ಹೆದ್ದಾರಿ ಅಭಿವೃದ್ದಿ ಗೊಂಡು ಸರ್ವೀಸ್ ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಿಸಿದರೂ ಅಲ್ಲಿ ಬಸ್‌ಗಳನ್ನು ನಿಲ್ಲಿಸದೆ ಅಲ್ಪ ಮುಂದೆ ನಿಲ್ಲಿಸುವುದು ಪ್ರಯಾಣಿಕರಿಗೆ ಸಮಸ್ಯೆಯನ್ನುಂಟು ಮಾಡುತ್ತಿರುವು ದಾಗಿ ದೂರಲಾಗಿದೆ. ಬಂದ್ಯೋಡು, ನಯಬಜಾರ್, ಕೈಕಂಬ, ಹೊಸಂಗಡಿ ಸಹಿತ ಹಲವು ಕಡೆಗಳಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ಆದರೆ ಖಾಸಗಿ ಸಹಿತ ಸರಕಾರಿ ಬಸ್‌ಗಳನ್ನು ತಂಗು ದಾಣದಲ್ಲಿ ನಿಲ್ಲಿಸದೆ ಅಲ್ಪ ದೂರ ನಿಲ್ಲಿಸುತ್ತಿರುವುದ ರಿಂದಾಗಿ ಪ್ರಯಾಣಿ ಕರು ಅಲ್ಲಿ ತನಕ ಓಡಿ ಹೋಗುವ ಅವಸ್ಥೆ ಉಂಟಾಗಿರುವುದಾಗಿ ದೂರಲಾಗಿದೆ. ಪ್ರಯಾಣಿಕರು ತಂಗುದಾಣದಲ್ಲಿ ನಿಂತರೂ ಬಸ್‌ಗಳನ್ನು …

ಮೂವರು ಕೇರಳೀಯರೂ ಸೇರಿ 38 ಅಪರಾಧಿಗಳಿಗೆ ನೀಡಿದ ಗಲ್ಲು ಶಿಕ್ಷೆ ಖಾಯಂಗೊಳಿಸಿ ಹೈಕೋರ್ಟ್ ತೀರ್ಪು 

ಅಹಮ್ಮದಾಬಾದ್: 2008ರಂದು ದೇಶವನ್ನೇ ನಡುಗಿಸಿದ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕೇರಳದ ಮೂವರು ಸೇರಿ 38  ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ನೀಡಿದ ಮರಣದಂಡನೆ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್‌ನ ವಿಭಾಗೀಯ ಪೀಠ ಖಾಯಂಗೊಳಿಸಿ ತೀರ್ಪು ನೀಡಿದೆ. ಮಾತ್ರವಲ್ಲ ಈ ಪ್ರಕರಣದಲ್ಲಿ 11 ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ನೀಡಿದ ಜೀವಾವಧಿ ಸಜೆ ಮತ್ತು ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷರೂ.ನಂತೆ ಹಾಗೂ ಗಾಯಗೊಂ ಡವರಿಗೆ ತಲಾ 5 ಲಕ್ಷ ರೂ.ನಂತೆ  ನಷ್ಟ ಪರಿಹಾರ …

ವಯನಾಡ್ ಭೂಕುಸಿತ: ಐದು ಮಂದಿ ಇನ್ನೂ ನಾಪತ್ತೆ : ಕ್ರೈಂ ಬ್ರಾಂಚ್ ಸೇರಿದಂತೆ ಅವಳಿ ತನಿಖೆಗೆ ನಿರ್ದೇಶ

ಕಲ್ಪೆಟ್ಟ: ವಯನಾಡಿನ ಕಳ್ಳಾಡಿ ಪೊಯಿಲ್ ಸುರಂಗ ಮಾರ್ಗದಲ್ಲಿ ನಿನ್ನೆ ಉಂಟಾದ  ಭೂಕುಸಿತದಲ್ಲಿ ಇನ್ನೂ ಐದು ಮಂದಿ ನಾಪತ್ತೆಯಾಗಿದ್ದು ಇವರ ಪತ್ತೆಗಾ ಗಿರುವ ಶೋಧ ಕಾರ್ಯಾಚರಣೆ ಮುಂದುವರಿ ಯುತ್ತಿದೆ. ಭೂಕುಸಿತದಲ್ಲಿ ನಿರ್ಮಾಣ ಕಾರ್ಮಿಕರಾದ ಝಾರ್ಖಂಡ್ ನಿವಾಸಿ ಅಲ್‌ಮೇಲ್ ದೊಡಾದ್ ರಾಯ್, ಬಿಹಾರದ ಬಿಕಾಶ್ ಕುಮಾರ್ ಸಿಂಗ್ ಮತ್ತು ಆಪರೇಟರ್ ಮಧ್ಯಪ್ರದೇಶದ ಚಂದ್ರಪಾನ್ ಪಾಲ್ ಎಂಬವರು ಸಾವನ್ನಪ್ಪಿದ್ದು  9 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸುರಂಗ ಮಾರ್ಗ ನಿರ್ಮಾಣ ಕೆಲಸದಲ್ಲಿ ಒಟ್ಟು 19 ಮಂದಿ ಕಾರ್ಮಿಕರು ನಿರತರಾಗಿದ್ದರು.  ಇದg ಲ್ಲಿ …

ದೈತೋಟದಲ್ಲಿ ಗುಡ್ಡೆ ಕುಸಿತ : ವಾಹನ ಸಂಚಾರಕ್ಕೆ ಭೀತಿ

ಉಪ್ಪಳ: ಇತ್ತೀಚೆಗೆ ಸುರಿದ ಮಳೆಗೆ ರಸ್ತೆ ಬದಿಯ ಗುಡ್ಡೆ ಕುಸಿದಿದ್ದು ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಸಜಂಕಿಲ-ಆವಳ-ಚೇವಾರು ಸಂಪರ್ಕ ರಸ್ತೆಯ ದೈತೋಟ ಎಂಬಲ್ಲಿ ಗುಡ್ಡೆ  ಕುಸಿದುಬಿದ್ದಿದೆ. ಇದರಿಂದ  ಈ ರಸ್ತೆಯಲ್ಲಿ ಸಂಚರಿಸುವ ವಾಹನ ಪ್ರಯಾಣಿಕರಿಗೆ ಆತಂಕ ಉಂಟುಮಾಡಿದೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಮಳೆಗಾಲ ಕೂಡಾ  ಗುಡ್ಡೆ ಕುಸಿದಿತ್ತು. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಗುಡ್ಡೆ ಕುಸಿತ ತಡೆಯಲಿರುವ ಕ್ರಮ ಕೈಗೊಂಡಿಲ್ಲ. ಈ ವರ್ಷವೂ ಮಳೆ ಸುರಿಯುತ್ತಿದ್ದಂತೆ  ಗುಡ್ಡೆ ಕುಸಿದಿದ್ದು, ಇದೇ ಸ್ಥಿತಿ ಮುಂದುವರಿದರೆ …

ಪುನರ್ವಸತಿ ಕೇಂದ್ರದಲ್ಲಿದ್ದ  ಕಾಸರಗೋಡು ನಿವಾಸಿ ಮೃತ್ಯು:  ಸಂಬಂಧಿಕರಿಗಾಗಿ ಹುಡುಕಾಟ

 ಕಾಸರಗೋಡು: ಪಯ್ಯನ್ನೂರು ಬಳಿಯ ಪಿಲಾತ್ತರ ಹೋಪ್ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿದ್ದ ಕಾಸರಗೋಡು ನಿವಾಸಿ ಮೃತಪಟ್ಟಿದ್ದಾರೆ. ಗೋಕುಲ್‌ದಾಸ್ (೬೨) ಎಂಬವರು ಮೃತ ವ್ಯಕ್ತಿ ಯೆಂದು ತಿಳಿಸಲಾಗಿದೆ. ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಯಾರೂ ಇಲ್ಲದುದರಿಂದ ಮೂರು ವರ್ಷಗಳ ಹಿಂದೆ ಕಾಸರಗೋಡು ನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರ ನಿರ್ದೇಶ ಪ್ರಕಾರ ವ್ಯಕ್ತಿಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು.  ಅಸೌಖ್ಯ ಬಾಧಿಸಿ ಹಾಸಿಗೆ ಹಿಡಿದಿದ್ದ ಇವರು ನಿನ್ನೆ ಮಧ್ಯಾಹ್ನ ವೇಳೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಪಯ್ಯನ್ನೂರು …