ಬದಿಯಡ್ಕ ಪಂಚಾಯತ್ ಮಳೆಗಾಲ ಪೂರ್ವ ಸ್ವಚ್ಛತಾ ಸಂದೇಶ ರ‍್ಯಾಲಿ

ಬದಿಯಡ್ಕ: ರೋಗ ಬಂದಮೇಲೆ ಚಿಕಿತ್ಸೆ ಮಾಡುವುದರ ಬದಲು ರೋಗ ಬಾರದಂತೆ ತಡೆಗಟ್ಟಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವುದೇ ಜಾಣತನ. ಮಳೆಗಾಲದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಹುಟ್ಟಿಕೊ ಳ್ಳುತ್ತವೆ. ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಆದ್ಯತೆ ಯನ್ನು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಬದಿಯಡ್ಕ ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ.ತಿಳಿಸಿದರು.ಬದಿಯಡ್ಕ ಪಂ. ನೇತೃತ್ವದಲ್ಲಿ ಮಳೆಗಾಲ ಪೂರ್ವ ಸ್ವಚ್ಛತಾ ಕಾರ್ಯದ ಅಂಗವಾಗಿ ನಡೆದ ಸಂದೇಶ ರ‍್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡಂಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ …

ಕಿರುಕುಳ ಯತ್ನ ಆರೋಪ: ಕೇಂದ್ರೀಯ ವಿವಿಯ ಪರೀಕ್ಷಾ ಕಂಟ್ರೋಲರ್ ವಿರುದ್ಧ ಕೇಸು

ಕಾಸರಗೋಡು: ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಲು ಯತ್ನಿಸಿದ ದೂರಿನಂತೆ ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪರೀಕ್ಷಾ ಕಂಟ್ರೋಲರ್ ಜಯಪ್ರಕಾಶ್‌ರ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2024 ಜೂನ್ 19ರಂದು ಕೇಂದ್ರೀಯ ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರಕ್ಕೆ ಜಯಪ್ರಕಾಶ್ ಬಂದು ಅಲ್ಲಿ   ಕುರ್ಚಿಯಲಿ  ಕುಳಿತಿದ್ದ ವೇಳೆ ತನ್ನ ಕೈಹಿಡಿದು ಕಿರುಕುಳ ನೀಡಲೆತ್ನಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ.

ಹಿರಿಯ ವ್ಯಾಪಾರಿ ನಿಧನ

ಪೈವಳಿಕೆ: ಬಾಯಾರು ಕೊಜಪ್ಪೆ ನಿವಾಸಿ, ಹಿರಿಯ ವ್ಯಾಪಾರಿ ಪಿ.ಅಬೂಬಕ್ಕರ್ (70) ನಿಧನ ಹೊಂದಿದರು. ಒಂದು ವಾರದ ಹಿಂದೆ ಅಸೌಖ್ಯ ಉಂಟಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಶನಿವಾರ ರಾತ್ರಿ ನಿಧನ ಹೊಂದಿದರು. ಚಿಪ್ಪಾರುಪದವುನಲ್ಲಿ ಕಳೆದ 22 ವರ್ಷಗಳಿಂದ ಜಿನಸಿ ವ್ಯಾಪಾರಿಯಾಗಿದ್ದರು. ಅಲ್ಲದೆ ‘ಕಾರವಲ್’ ಏಜಂಟ್ ಆಗಿದ್ದರು. ಮೃತರು ಪತ್ನಿ ನೆಬೀಸ, ಮಕ್ಕಳಾದ ಅಜ್ಮೀಯತ್ ನಿಶಾ, ಮೊಹಮ್ಮದ್ ಅಲ್ತಾಫ್, ಅಬ್ದುಲ್ ಮುತ್ತಲೀಬ್, ಮೊಹಮ್ಮದ್ ತಶ್ರೀಫ್, ಅಲೀಮತ್ ನಸೀಬ, ಅಳಿಯಂದಿರಾದ ರಜಾಕ್, ಕಲೀಲ್, ಸೊಸೆಯಂದಿರಾದ ಅಫೀಫ, ತಾಜುನ್ನೀಸ, …

ಬೀರಂತಬೈಲಿನ ಪುಷ್ಪಾವತಿ ನಿಧನ

ಕಾಸರಗೋಡು: ಬೀರಂತಬೈಲು ನಿವಾಸಿ ದಿ| ಸರ್ವೋತ್ತಮ ಎಂಬವರ ಪತ್ನಿ ಪುಷ್ಪಾವತಿ (82) ನಿಧನ ಹೊಂದಿದರು.  ಮೃತರು ಮಕ್ಕಳಾದ ಶೋಭನ, ಶ್ರೀರಾಮಮೂರ್ತಿ, ಹರೀಶ, ಆಶಾ, ತಾರಕೇಶ, ಸಂತೋಷ, ಅಳಿಯ- ಸೊಸೆಯಂದಿರಾದ ರಾಧಾಕೃಷ್ಣ (ಮಂಗಳೂರು),  ವಿಜಯೇಂದ್ರ (ಹೊಸನಗರ), ಪುಷ್ಪಲತಾ, ವಾಣಿಶ್ರೀ, ಜ್ಞಾನೇಶ್ವರಿ, ಸಹೋದರ-ಸಹೋದರಿಯರಾದ  ಗಣೇಶ್ (ಉಡುಪಿ),ಶ್ಯಾಮಸುಂದರ (ಮಂಗಳೂರು), ನಿರ್ಮಲಾ (ತಲ್ಲಾಣಿ, ಬೇಕಲ), ಜಲಜಾಕ್ಷಿ (ಕೂಡ್ಲು), ಲಲಿತಾ (ಪುತ್ತೂರು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಗಂಗಾಧರ ಈ ಹಿಂದೆ ನಿಧನಹೊಂದಿದ್ದಾರೆ.

ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯಲಿರುವ ೫ನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಅಂತಿಮ ರೂಪುರೇಷೆ ಸಭೆ ಕುಡಾಲುಮೆರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಒಮಾನ್ ಘಟಕ ಅಧ್ಯಕ್ಷ ಅಬೂಬಕ್ಕರ್ ರಾಯಲ್ ಬೊಳ್ಳಾರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಭೆಯಲ್ಲಿ ಜಿ.ಪಂ ಸದಸ್ಯ, ಸ್ವಾಗತ ಸಮಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಅಧ್ಯಕ್ಷತೆ …

ಮುಸ್ಲಿಂ ಲೀಗ್ ಕಾರ್ಯಕರ್ತನ ಬೈಕ್, ಮನೆಗೆ ಕಿಚ್ಚಿಟ್ಟ ಪ್ರಕರಣ: ಓರ್ವ ಸೆರೆ

ಕಾಸರಗೋಡು: ಚೆರ್ಕಳ ಅಳಕ್ಕೆಯ ಮುಸ್ಲಿಂ ಲೀಗ್ ಕಾರ್ಯಕರ್ತ ಬಿ.ಎ. ಸೈಫುದ್ದೀನ್ ಎಂಬವರ ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್‌ಗೆ ಕಿಚ್ಚಿರಿಸಿ ಹಾನಿಗೊಳಿಸಿ ಅದರಿಂದ ಮನೆ ಕಿಟಿಕಿಗೂ ಹಾನಿ ಉಂಟಾದ ಪ್ರಕ ರಣದ ಆರೋಪಿಯನ್ನು ವಿದ್ಯಾ ನಗರ ಪೊಲೀಸರು ಬಂಧಿಸಿದ್ದಾರೆ.  ಚೆರ್ಕಳ ವಿ.ಕೆ.ಪಾರದ ಅಹಮ್ಮದ್ ಅಫ್ರೀದಿ (26) ಬಂಧಿತನಾದ ಆರೋಪಿಯಾಗಿದ್ದಾನ. ಎಪ್ರಿಲ್ 21ರಂದು ಮುಂಜಾನೆ ಸೈಫುದ್ದೀನ್‌ರ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಕಿಚ್ಚಿಟ್ಟು  ನಾಶಗೊಳಿಸಲಾಗಿತ್ತು. ಬೈಕ್‌ನಿಂದ ಬೆಂಕಿ ಹರಡಿ  ಮನೆಯ ಕಿಟಿಕಿಗಳು ಉರಿದು ನಾಶನಷ್ಟ ಉಂಟಾಗಿತ್ತು. ಕಿಚ್ಚಿಟ್ಟ  ಕೃತ್ಯಾದಿಗಳಿಂದ 1,30,000  …

ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವ್ಯಕ್ತಿಯೊ ಬ್ಬರು ಸೇತುವೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡ್ಲು ತೈವಳಪ್ ಹೌಸ್‌ನ ರಾಮಚಂದ್ರ ಗಟ್ಟಿ (75) ಮೃತ ವ್ಯಕ್ತಿ. ಶಿವಮಂಗಲದ ಸೇತುವೆಯಲ್ಲಿ ಇವರು ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಮಧ್ಯಾಹ್ನ ಪತ್ತೆಯಾಗಿದ್ದಾರೆ. ವಿಷಯತಿಳಿದು ಪೊಲೀಸರು ತಲುಪಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ. ರಾಚಂದ್ರ ಗಟ್ಟಿಯವರ ಪತ್ನಿ ಲೀಲ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಜಯಂತ, ರವಿ, ಹರಿಪ್ರಸಾದ್, ಜಯಶ್ರೀ, ಅಳಿಯ ರಾಜೇಶ, ಸೊಸೆ ರೇವತಿ, ಸಹೋದರ ಕೃಷ್ಣ ಗಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು …

10ರ ಬಾಲಕಿಗೆ ಫಿನಾಯಿಲ್ ಕುಡಿಸಿ ತಾನೂ ಕುಡಿದು ಆತ್ಮಹತ್ಯೆಗೆತ್ನ: ಆರೋಪಿ ಪೋಕ್ಸೋ ಪ್ರಕಾರ ಸೆರೆ

ಬದಿಯಡ್ಕ: 10ರ ಹರೆಯದ ಬಾಲಕಿಗೆ ಫಿನಾಯಿಲ್ ಕುಡಿಸಿ ಬಳಿಕ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಹತ್ಯಾಯತ್ನ ಹಾಗೂ ಪೋಕ್ಸೋ ಪ್ರಕಾರ ದಾಖಲಿಸಿಕೊಂಡ ಪ್ರಕರಣದಲ್ಲಿ ೨೮ರ ಹರೆಯದ ಯುವಕನನ್ನು ಬಂಧಿಸಲಾಗಿದೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ವಾಸಿಸುತ್ತಿದ್ದಾನೆ. ಈತ ಬಾಲಕಿಯ ತಂದೆಯ ಸ್ನೇಹಿತನಾಗಿದ್ದಾನೆಂದು ಹೇಳಲಾಗುತ್ತಿದೆ. ಇದರಿಂದ ಬಾಲಕಿಯ ಮನೆಗೆ ಯುವಕ ನಿರಂತರ ಬರುತ್ತಿದ್ದನೆನ್ನಲಾಗಿದೆ. ಈ ವೇಳೆ ಯುವಕನ ಕೆಟ್ಟ ರೀತಿಯಲ್ಲಿ ವರ್ತಿಸಿದ್ದು, ಅದನ್ನು …

17ರ ಹರೆಯದ ಬಾಲಕಿ ಗರ್ಭಿಣಿ : ಯುವಕನ ವಿರುದ್ಧ ಪೋಕ್ಸೋ ಕೇಸು

ಕುಂಬಳೆ: 17ರ ಹರೆಯದ ಬಾಲಕಿ ಗರ್ಭಿಣಿಯಾದ ಘಟನೆಗೆ ಸಂಬಂಧಿಸಿ 24ರ ಹರೆಯದ ಯುವಕನ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ಬಾಲಕಿ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಯುವಕ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. 18 ವರ್ಷ ಪೂರ್ತಿಗೊಂಡ ಬಳಿಕ ಇವರಿಬ್ಬರ ಮದುವೆ ನಡೆಸಲು ಈ ಇಬ್ಬರ ಮನೆಯವರು ಈ ಹಿಂದೆಯೇ ನಿರ್ಧರಿಸಿರುವುದಾಗಿ ಹೇಳಲಾಗುತ್ತಿದೆ. ಈ ಮಧ್ಯೆ ಕೆಲವು ದಿನಗಳ ಹಿಂದೆ ಬಾಲಕಿಗೆ ಶಾರೀರಿಕ ಅಸ್ವಸ್ಥತೆ ಉಂಟಾಗಿತ್ತೆನ್ನಲಾಗಿದೆ. ಇದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದು, ವೈದ್ಯರು ನಡೆಸಿದ …

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ಮೇ 6ರಂದು ಹೋಟೆಲ್ ಬಂದ್‌ಗೆ ಕರೆ

ತಿರುವನಂತಪುರ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಏರಿಕೆಯನ್ನು ಪ್ರತಿಭಟಿಸಿ ಮೇ ೬ರಂದು ರಾಜ್ಯಾದ್ಯಂತ ಎಲ್ಲಾ ಹೋಟೆಲ್‌ಗಳನ್ನು ಮುಚ್ಚುಗಡೆಗೊಳಿಸಿ ಬಂದ್‌ಗೆ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್  ಅಸೋಸಿಯೇಷನ್ (ಕೆಎಚ್‌ಆರ್‌ಎ) ಕರೆ ನೀಡಿದೆ. ಬಂದ್‌ನ ಮುನ್ನ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಪ್ರತಿಭಟನೆ ನಡೆಸಲು ಸಂಘಟನೆ ತೀರ್ಮಾನಿಸಿದೆ. ಬಂದ್‌ನ ದಿನದಂದು ಕೇಂದ್ರ, ತೈಲ ಕಂಪೆನಿಗಳ ಮುಂದೆ ಮತ್ತು ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ವಾಣಿಜ್ಯ ಬಳಕೆಯ 19 ಕೆಜಿ ಅನಿಲ ಸಿಲಿಂಡರ್ …