ಹೊಸಂಗಡಿ ಬಳಿ ಯುವಕನ ಕೊಲೆ ಪ್ರಕರಣ: ಬಂಧಿತ ಆರೋಪಿಗೆ ರಿಮಾಂಡ್; ಘಟನೆಯ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸ್

ಉಪ್ಪಳ: ಹೊಸಂಗಡಿ ಬಳಿಯ ಅಂಗಡಿಪದವಿನಲ್ಲಿ ಯುವಕನನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿಗೆ ಕಾಸರಗೋಡು ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕರ್ನಾಟಕದ ದಾವಣಗೆರೆ ಹಾರಪ್ಪನ ಹಳ್ಳಿಯ ರಾಮ್ ನಾಯ್ಕ್ ಯಾನೆ ರಮೇಶ್ (31) ಎಂಬಾತನನ್ನು ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ವಿ. ವಿಷ್ಣು ಪ್ರಸಾದ್ ನೇತೃತ್ವದಲ್ಲಿ  ಪೊಲೀಸ್ ತಂಡ ಬಂಧಿಸಿದೆ. ಕರ್ನಾಟಕದ ಹೊಸಪೇಟೆ  ಲಿಂಗನಾಯಕನ ಹಳ್ಳಿ ನಿವಾಸಿ ದಿ|  ಪಿರಾ  ನಾಯ್ಕರ ಪುತ್ರ ರಮೇಶ್ (38) ಎಂಬವರನ್ನು  ಕೊಲೆಗೈದ ಪ್ರಕರಣದಲ್ಲಿ ರಾಮ್ ನಾಯ್ಕನನ್ನು ಬಂಧಿಸಲಾಗಿದೆ. ಕೊಲೆ ಕೃತ್ಯದ ಬಳಿಕ ಹೊಸಂಗಡಿ …

ಬ್ಲಡ್ ಕ್ಯಾನ್ಸರ್ ವಿದ್ಯಾರ್ಥಿನಿ ಮೃತ್ಯು

ಉಪ್ಪಳ: ಪುಳಿಕುತ್ತಿ ಸಮೀಪದ ಅಗರ್ತಿಮೂಲೆ ನಿವಾಸಿ ಪೌಲೋಸ್ ಕೆ.ಪಿ-ಶಾಂತಿ ಡಿಸೋಜಾರ ಪುತ್ರಿ, ವಿದ್ಯಾರ್ಥಿನಿ ನಿಶ್ಮಿತಾ ಕೆ.ಪಿ (18) ನಿಧನ ಹೊಂದಿದರು. ಕಳೆದ ಎಂಟು ತಿಂಗಳಿAದ ಬ್ಲಡ್ ಕ್ಯಾನ್ಸರ್‌ಗೆ ತುತ್ತಾಗಿ ಹಲವಾರು ಕಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಕೆಗಾಗಿ ಊರವರು ಹಾಗೂ ಇತರರು ಸೇರಿ ಕೊಂಡು ಸುಮಾರು 140 ಬಾಟ್ಲಿ ರಕ್ತವನ್ನು ನೀಣರುವುದಾಗಿ ಮನೆಯವರು ತಿಳಿಸಿದ್ದಾರೆ. ಆದರೆ ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಈಕೆ ಮಂಗಳೂರಿನ ಬಲ್ಮಠ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಕಯ್ಯಾರು ಚರ್ಚ್ನಲ್ಲಿ ಶನಿವಾರ ಮಧ್ಯಾಹ್ನ ಅಂತ್ಯಸAಸ್ಕಾರ …

ಯುವ ಪಂಡಿತ ಶಾಂತಿಪಳ್ಳದ ಶಾಹುಲ್ ಹಮೀದ್ ಹಿಮಮಿ ನಿಧನ

ಕುಂಬಳೆ: ಶಾಂತಿಪಳ್ಳ ನಿವಾಸಿ ಶಾಹುಲ್ ಹಮೀದ್ ಹಿಮಮಿ (29) ನಿಧನಹೊಂದಿದರು. ಎಸ್‌ಎಸ್‌ಎಫ್ ಕುಂಬಳೆ ಡಿವಿಶನ್ ಕಾರ್ಯದರ್ಶಿ ಯಾಗಿದ್ದರು. ಅಲ್ಲದೆ ಮುಹಿಮ್ಮಾತ್ ಕುಲ್ಲಿಯ್ಯ 2019 ಬ್ಯಾಚ್‌ನ ಹಿಮಮಿ ಪಂಡಿತನೂ, ಶಾಂತಿಪಳ್ಳದಲ್ಲಿ  ಮುಹಿಮ್ಮಾತ್‌ನ ಅಧೀನದಲ್ಲಿರುವ ಸೆಕೆಂಡರಿ ಮದ್ರಸದ ಮುಅಲ್ಲಿಮ್ ಆಗಿದ್ದರು.  ಮೃತರು ತಂದೆ ಅಬ್ಬಾಸ್, ತಾಯಿ ಖದೀಜ, ಸಹೋದರ-ಸಹೋ ದರಿಯರಾದ ಆಮಿನ, ಖೈರುನ್ನೀಸ, ಅಸ್ಮೀನ, ಶಹನಾ, ಶಂನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರ ಶಾಂತಿಪಳ್ಳ ತಖ್‌ವ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.

ಸಿಪಿಐ ಸ್ಥಳೀಯನೇತಾರ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಸಿಪಿಐ ಕುತ್ತಿಕ್ಕೋಲು ಲೋಕಲ್ ಕಮಿಟಿ ಸದಸ್ಯ ಞೆರು ಚೆರಿಯಕಯ ಎಂಬಲ್ಲಿನ ಅಶೋಕನ್ (49) ಇಂದು ಬೆಳಿಗ್ಗೆ ಹೋಟೆಲ್‌ನ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೋಟೆಲ್‌ಗೆ ಚಹಾ ಕುಡಿಯಲು ತಲುಪಿದ ವ್ಯಕ್ತಿ ತಿಳಿಸಿದ ಮಾಹಿತಿಯಂತೆ ನಾಗರಿಕರು ಕೂಡಲೇ ತಲುಪಿ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಶೋಕನ್ ಹಲವು ವರ್ಷಗಳಿಂದ ಕುತ್ತಿಕೋಲ್‌ನಲ್ಲಿ ಹೋಟೆಲ್ ನಡೆಸುತ್ತಿದ್ದರು.

ಕನಿಷ್ಠ ಪ್ರಯಾಣದರ 15 ರೂ.ಗೇರಿಸುವಂತೆ ಒತ್ತಾಯಿಸಿ ಖಾಸಗಿ ಬಸ್‌ಗಳ  ಚಳವಳಿ: ಘೋಷಣೆ ನಾಳೆ

ಕಾಸರಗೋಡು: ಕನಿಷ್ಠ ಪ್ರಯಾಣ ದರವನ್ನು 15 ರೂಪಾಯಿಗೇರಿಸ ಬೇಕೆಂಬ ಬೇಡಿಕೆಯನ್ನು ಮುಂದಿರಿಸಿ ಕೊಂಡು ರಾಜ್ಯದ ಖಾಸಗಿ ಬಸ್‌ಗಳು ಅನಿರ್ಧಿಷ್ಟಾವಧಿ ಚಳವಳಿ ನಡೆಸಲು ಮಾಲಕರು ನಿರ್ಧರಿಸಿದ್ದಾರೆ. ಚಳವಳಿ ಬಗ್ಗೆ ನಾಳೆ ಘೋಷಿಸಲಾಗುವುದು.  ಕೆಎಸ್‌ಆರ್‌ಟಿಸಿಯ  ಪ್ರಿಯದರ್ಶಿನಿ ಉಚಿತ ಪ್ರಯಾಣ ಯೋಜನೆ ಯಿಂದಾಗಿ ಖಾಸಗಿ ಸ್ ವಲಯಕ್ಕೆ ಉಂಟಾಗುವ ನಷ್ಟಕ್ಕೆ ಸಂಬಂಧಿಸಿ ಅಧ್ಯಯನ ನಡೆಸಲು ನೇಮಿಸಿದ ತಜ್ಞ ಸಮಿತಿ ಸಲ್ಲಿಸಿದ ವರದಿಯ ಶಿಫಾರಸ್ಸುಗಳು ಸಂಪೂರ್ಣವಲ್ಲವೆಂದು ಖಾಸಗಿ ಬಸ್ ಮಾಲಕರು ತಿಳಿಸಿದ್ದಾರೆ. ಕನಿಷ್ಠ ಪ್ರಯಾಣದರವನ್ನು 15ರೂ.ಗೇರಿಸಬೇಕೆಂಬುವುದಾಗಿದೆ ಬಸ್ ಮಾಲಕರ ಪ್ರಧಾನ ಬೇಡಿಕೆ. ಪ್ರಿಯದರ್ಶಿನಿ …

ಮನೆಯ ಸನ್‌ಶೇಡ್ ಕುಸಿತ: ಹುಲ್ಲು ಹೆರೆಯುತ್ತಿದ್ದ ಯುವಕನಿಗೆ ಗಂಭೀರ ಗಾಯ

ಕುಂಬಳೆ: ನಿರ್ಮಾಣ ಹಂತದ ಮನೆಯ ಸನ್‌ಶೇಡ್ ಕುಸಿದು ಬಿದ್ದು ಯುವಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮೇಲಿನ ಕಳತ್ತೂ ರಿನ ಹಾರಿಸ್ (28) ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ಸಂಜೆ ಘಟನೆ ನಡೆದಿದೆ. ಶ್ರೀನಗರ ರಸ್ತೆಯ ಶ್ರೀ ಧೂಮಾವತಿ ಭದ್ರಕಾಳಿ ಕ್ಷೇತ್ರ ಸಮೀಪ ಮಂಗಲ್ಪಾಡಿ ಪಂಚಾಯ ತ್‌ನ ಸಹಾಯದೊಂದಿಗೆ  ಲೈಫ್ ಮಿಶನ್ ಯೋಜನೆ ಪ್ರಕಾರ  ನಿರ್ಮಿಸುವ ಮನೆಯ ಸನ್‌ಶೇಡ್ ಕುಸಿದುಬಿದ್ದಿದೆ. ಹಾರಿಸ್  ಮನೆ ಸಮೀಪ  ಹುಲ್ಲು ಹೆರೆಯುತ್ತಿದ್ದರು. ಈ ಹೊತ್ತಿನಲ್ಲಿ ಮನೆಯ ಸನ್ ಶೇಡ್ …

ಮುಸ್ಲಿಂ ಯೂತ್‌ಲೀಗ್‌ನಿಂದ ವಿಷನ್ ಕಾಸರಗೋಡು ಆಶಯ ದಾಖಲೆ ಹಸ್ತಾಂತರ

ಕಾಸರಗೋಡು: ಕಾಸರಗೋಡಿನ ಸಮಗ್ರ ಅಭಿವೃದ್ಧಿ ಗುರಿಯಿರಿಸಿ ನಗರದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವ ವಿವಿಧ ಅಭಿವೃದ್ಧಿ ವಿಷಯಗಳನ್ನು ಅಳವಡಿಸಿ ಕಾಸರಗೋಡು ನಗರಸಭಾ ಮುಸ್ಲಿಂ ಯೂತ್‌ಲೀಗ್ ಸಮಿತಿ ಸಿದ್ಧಪಡಿಸಿದ ವಿಷನ್ ಕಾಸರಗೋಡು ಎಂಬ ಆಶಯ ದಾಖಲೆಯನ್ನು ಶಾಸಕ ಕಲ್ಲಟ್ರ ಮಾಹಿನ್ ರಿಗೆ ಹಸ್ತಾಂತರಿಸಲಾಗಿದೆ.  ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ, ರಸ್ತೆಗಳು, ಪ್ರವಾಸೋ ಧ್ಯಮ, ಪಾರ್ಕ್‌ಗಳು, ವ್ಯಾಪಾರ ವಾಣಿಜ್ಯ ಅಭಿವೃದ್ಧಿ, ಶಿಕ್ಷಣ ಮೊದಲಾದ ವಿವಿಧ ವಲಯಗಳನ್ನು ಪರಿಗಣಿಸುವ ನಿರ್ದೇ ಶಗಳನ್ನು ಇದರಲ್ಲಿ ಒಳಪಡಿಸಲಾಗಿದೆ.

ಪುತ್ತಿಗೆ: ಮರಾಟಿ ಸಂರಕ್ಷಣಾ ಸಮಿತಿಯಿಂದ ಓಣಂ ಪ್ರಯುಕ್ತ ವಿವಿಧ ಸ್ಪರ್ಧೆ

ಪುತ್ತಿಗೆ: ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ಪುತ್ತಿಗೆ ಪಂಚಾಯತ್ ದೇರಡ್ಕ ಮಹಮ್ಮಾಯಿ ಮರಾಟಿ ಸಮಿತಿ ಆಶ್ರಯದಲ್ಲಿ ಓಣಂ ಹಬ್ಬದ ಅಂಗವಾಗಿ ಸಮಾಜ ಬಾಂಧವರಿಗೆ  ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು.  ಕೃಷ್ಣ ನಾಯ್ಕ ಬೀಡಾರ ಧ್ವಜಾರೋಹಣ ನಡೆಸಿದರು. ಬಳಿಕ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧೆ ನಡೆಯಿತು. ಸಮಾರೋಪ ಸಮಾರಂಭವನ್ನು ಕೇರಳ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ ಮಾನ್ಯ ಉದ್ಘಾಟಿಸಿದರು. ವಾಸು ನಾಯ್ಕ್ ಅಧ್ಯಕ್ಷತೆ ವಹಿಸಿದರು ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷ ರಾಧಾಕೃಷ್ಣ ಪೈಕ, ಈಶ್ವರ ನಾಯ್ಕ …

ಎನ್‌ಟಿಯು ಮಂಜೇಶ್ವರ ಉಪಜಿಲ್ಲೆ ವತಿಯಿಂದ ಶಿಕ್ಷಕರ ದಿನಾಚರಣೆ

ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್ ಎನ್‌ಟಿಯು ಮಂಜೇಶ್ವರ ಉಪಜಿಲ್ಲಾ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಇಚ್ಲಂಗೋಡು ಎಎಲ್ಪಿಎಸ್ವ ಜನರಲ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಐ.ಕೆ. ವಾಸುದೇವ ಮಯ್ಯರನ್ನು ಅವರ ಸ್ವ-ಗೃಹದಲ್ಲಿ ಗೌರವಿಸಲಾ ಯಿತು. ಎನ್‌ಟಿಯು ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ, ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್, ದಿವಾಕರ ಆಳ್ವ, ಕೊರಗಪ್ಪ ಶೆಟ್ಟಿ, ಅಧ್ಯಾ ಪಕ ಕೃಷ್ಣಪ್ರಸಾದ್ ಶುಭ ಹಾರೈಸಿದರು. ಉಪಜಿಲ್ಲಾ ಸಮಿತಿ ಸದಸ್ಯ ಜಯರಾಮ ಸಿ ಎಚ್ ಸನ್ಮಾನಿತರ ಪರಿಚಯ ಮಾಡಿದರು. ಕಾರ್ಯದರ್ಶಿ …

ನಗರದ ರಸ್ತೆಗಳ ಶೋಚನೀಯಾವಸ್ಥೆ: ಬಿಜೆಪಿಯಿಂದ ಇಂದು ದೊಂದಿ ಮೆರವಣಿಗೆ

ಕಾಸರಗೋಡು: ನಗರದ ರಸ್ತೆಗಳ ಶೋಚನೀಯಾವಸ್ಥೆ ಪರಿಹಾರಕ್ಕೆ ಕ್ರಮ ಕೈಗೊಳ್ಳದ ಅಧಿಕಾರಿಗಳ ನಿಲುವನ್ನು ಪ್ರತಿಭಟಿಸಿ ಬಿಜೆಪಿ ನಗರಸಭಾ ಸಮಿತಿ ನೇತೃತ್ವದಲ್ಲಿ ಇಂದು ಸಂಜೆ ನಗರದಲ್ಲಿ ದೊಂದಿ ಮೆರವಣಿಗೆ ನಡೆಯಲಿದೆ. ಮಳೆ ಸುರಿಯುವ ವೇಳೆ ನಗರದ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೂ ಅಡಚಣೆ ಎದುರಾಗುತ್ತಿದ್ದು, ಇದು ಅಪಘಾತಗಳಿಗೆ ಕಾರಣವಾಗುತ್ತಿದೆ. ಪೈಪ್ ಲೈನ್ ಅಳವಡಿಸಿದ ಬ ಳಿಕ ಹೊಂಡ ಮುಚ್ಚುವಲ್ಲಿ ಭಾರೀ ಲೋಪವುಂಟುಮಾಡಲಾಗುತ್ತಿದೆ. ರಸ್ತೆಯ ಹೊಂಡ ಮುಚ್ಚುವಲ್ಲಿ ಅಧಿಕಾರಿಗಳು ತೋರಿಸುವ ನಿರ್ಲಕ್ಷ್ಯ ನೀತಿ ಕೊನೆಗೊಳಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯದ …