ಬಿಜೆಪಿ ಪೈವಳಿಕೆ ಪಂಚಾಯತ್ ಮಾಜಿ ಸದಸ್ಯ ನಿಧನ

ಬಾಯಾರು: ಪೆರ್ವೋಡಿ ಬಾಣಪ್ಪಾಡಿ ನಿವಾಸಿ ದಿ| ಸಂಕಪ್ಪ ನಾಯಕ್‌ರವರ ಪುತ್ರ ಬಿಜೆಪಿ ಹಿರಿಯ ನೇತಾರ, ಪಂಚಾಯತ್ ಮಾಜಿ ಸದಸ್ಯ ಕಿಶೋರ್ ಕುಮಾರ್ ನಾಯಕ್ [62] ನಿಧನ ಹೊಂದಿ ದರು. ಕಳೆದ ಒಂದು ವರ್ಷದಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ನಿನ್ನೆ ಸಂಜೆ ಮನೆಯಲ್ಲಿ ಅಸೌಖ್ಯ ಉಲ್ಬಣಗೊಂಡು ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಷ್ಟರಲ್ಲಿ ನಿಧನ ಸಂಭವಿಸಿದೆ. ಕೃಷಿಕರಾಗಿದ್ದು, ಪೈವಳಿಕೆ ಪಂಚಾಯತ್ ಮಾಜಿ ಸದಸ್ಯರೂ ಅಲ್ಲದೆ ಬಾಯಾರು ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ನಿರ್ದೇಶಕರಾಗಿದ್ದರು. ಮೃತರು ತಾಯಿ ಚಂದ್ರಾವತಿ.ಎಸ್ …

ಶಬರಿಮಲೆ ತೀರ್ಥಾಟನೆ ನಾಳೆಯಿಂದ ಆರಂಭ

ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನದ ತೀರ್ಥಾಟನೆ ನಾಳೆ ಆರಂಭಗೊಳ್ಳಲಿದೆ. ಅದಕ್ಕಿರುವ ಅಗತ್ಯದ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿದೆ. ನಾಳೆ ಸಂಜೆ 5 ಗಂಟೆಗೆ ತಂತ್ರಿ ವರ್ಯ ಕಂಠರರ್ ಮಹೇಶ್ ಮೋಹನ ರ್‌ರ ಸಾನಿಧ್ಯದಲ್ಲಿ ಮುಖ್ಯ ಅರ್ಚಕ ಅರುಣ್ ಕುಮಾರ್ ನಂಬೂದಿರಿ ಶಬರಿಮಲೆ ದೇಗುಲದ ಗರ್ಭಗುಡಿಯ  ಬಾಗಿಲು ತೆರೆದು ದೀಪ ಬೆಳಗಿಸುವುದರೊಂದಿಗೆ ಈ ಬಾರಿಯ ಮಂಡಲ ಕಾಲದ ತೀರ್ಥಾಟನೆಗೆ ಚಾಲನೆ ದೊರಕಲಿದೆ. ನಂತರ  ಕ್ಷೇತ್ರದ ಹೊಸ ಮುಖ್ಯ ಅರ್ಚಕರನ್ನು  ಹದಿನೆಂಟು ಮೆಟ್ಟಿಲೇರಿಸಿ ಸನ್ನಿಧಾನಕ್ಕೆ ಕರೆದೊಯ್ಯಲಾಗುವುದು. ಮಾಳಿಗಪುರಂ ದೇಗುಲದ ಅರ್ಚಕ …

ಉಗ್ರರಿಂದ ವಶಪಡಿಸಿದ ಸ್ಫೋಟಕ ಪೊಲೀಸ್ ಠಾಣೆಯಲ್ಲೇ ಸ್ಫೋಟ: ಪೊಲೀಸರು ಸೇರಿ 8 ಮಂದಿ ಸಾವು, 29 ಮಂದಿಗೆ ಗಾಯ

ಶ್ರೀನಗರ: ದೆಹಲಿಯಲ್ಲಿ ಕಾರು ಬಾಂಬ್ ಸ್ಪೋಟ ನಡೆದು  13 ಮಂ ದಿಯ ಪ್ರಾಣ ಬಲಿತೆಗೆದು ಹಲವರು ಗಾಯಗೊಂಡ ಕರಾಳತೆಯ ಭೀತಿ ಇನ್ನೂ ಮಾಸದಿರುವ ವೇಳೆಯಲ್ಲೇ ಶ್ರೀನಗರದಲ್ಲಿ ಪೊಲೀಸ್ ಠಾಣೆಯಲ್ಲಿ  ನಿನ್ನೆ ತಡರಾತ್ರಿ ಇನ್ನೊಂದು ಅತೀ ಭೀಕರ ಸ್ಫೋಟ ನಡೆದಿದೆ. ಇದರಲ್ಲಿ 9 ಮಂದಿ ಸಾವನ್ನಪ್ಪಿ ೨೯ ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಇದ ರಿಂದಾಗಿ ಸಾವುನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಸ್ಫೋಟಕವಸ್ತುಗಳನ್ನು ಪರಿಶೀಲಿಸುತ್ತಿದ್ದ ಪೊಲೀ ಸರು ಮತ್ತು ವಿಧಿವಿಜ್ಞಾನ ತಂಡದ …

ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ: 10 ಮಂದಿ ಸೆರೆ; 14,970 ರೂ. ವಶ

ನೀರ್ಚಾಲು: ಇಲ್ಲಿಗೆ ಸಮೀಪದ ಪುದುಕೋಳಿಯಲ್ಲಿನ ಜುಗಾರಿ ದಂಧೆಯ ಕೇಂದ್ರಕ್ಕೆ ಬದಿಯಡ್ಕ ಪೊಲೀಸರು ನಿನ್ನೆ ದಾಳಿ ನಡೆಸಿದ್ದಾರೆ. ಇಲ್ಲಿಂದ 10 ಮಂದಿಯನ್ನು ಸೆರೆ ಹಿಡಿದಿದ್ದಾರೆ. ಮೊಗ್ರಾಲ್, ಮಧೂರು ಹೌಸ್ನ ಅಬ್ದುಲ್ ರಹ್ಮಾನ್ (60), ಮಞಂಪಾರೆಯ ಮುಹಮ್ಮದ್ ಹನೀಫ (52), ಚಂದ್ರAಪಾರೆಯ ಹನೀಫ್ ಜೋಸೆಫ್ (38), ಕಾಕುಂಜೆಯ ಕೆ. ನವೀನ್ (40), ಕೊಲ್ಲಂಗಾನದ ಬಾಪಿಸ್ಟ್ ಮೊಂತೇರೊ (52), ಮಾನ್ಯ ದೇವರಕೆರೆಯ ವಿಜಯನ್ (50), ಚುಕ್ಕಿನಡ್ಕದ ಮೊಹಮ್ಮದ್ ಸುಲೈಮಾನ್ (58) ಮೊದಲಾದ ಹತ್ತು ಮಂದಿಯನ್ನು ಸೆರೆ ಹಿಡಿಯಲಾಗಿದ್ದು, ಸ್ಥಳದಿಂದ 14,970 ರೂ. …

 ವಿವಿಧ ಪ್ರಕರಣ: ಕುಂಬಳೆಯಲ್ಲಿ  17 ಆರೋಪಿಗಳ ಸೆರೆ

ಕುಂಬಳೆ: ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಅರೋಪಿಗಳ  ಪತ್ತೆಗಾಗಿ ಕುಂಬಳೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇದರಂತೆ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 15 ಮಂದಿ ವಾರಂಟ್ ಆರೋಪಿಗಳು ಹಾಗೂ ಇಬ್ಬರು ತಲೆಮರೆಸಿಕೊಂಡ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ ಪ್ರಾಯಪೂರ್ತಿಯಾಗದ ಮಕ್ಕಳು ಚಲಾಯಿಸಿದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಲಾಗಿದೆ.

ತಲಪ್ಪಾಡಿ ಬಳಿ ಸರ್ವೀಸ್ ರಸ್ತೆಯಲ್ಲಿ ತ್ಯಾಜ್ಯರಾಶಿ: ಸಂಚಾರ ಸಮಸ್ಯೆ

ಮಂಜೇಶ್ವರ:  ಪಂಚಾಯತ್ ವ್ಯಾಪ್ತಿಯ ತೂಮಿನಾಡು-ತಲಪ್ಪಾಡಿ ಮಧ್ಯೆಯ ಸರ್ವೀಸ್ ರಸ್ತೆ ಬಳಿ  ಅಪಾರ ಪ್ರಮಾಣದ ತ್ಯಾಜ್ಯ ತುಂಬಿಕೊಂಡಿದ್ದು ದುರ್ವಾಸನೆ ಹಾಗೂ ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ.  ಕಾಸರಗೋಡು ಭಾಗದಿಂದ ಮಂಗಳೂರಿಗೆ ತೆರಳುವ ಸರ್ವೀಸ್ ರಸ್ತೆಯಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿದೆ. ಪ್ಲಾಸ್ಟಿಕ್, ಆಹಾರ ತ್ಯಾಜ್ಯಗಳು, ಪ್ಯಾಂಪರ್ಸ್ ಸಹಿತ ವಿವಿಧ ತ್ಯಾಜ್ಯಗಳು ಕಂಡುಬರುತ್ತಿದ್ದು, ಫುಟ್ಪಾತ್ ಸಂಪೂರ್ಣ ಹರಡಿಕೊಂ ಡಿದೆ. ತ್ಯಾಜ್ಯ ತೆರವುಗೊಳಿಸಿ ಶುಚೀಕ ರಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಡ-ಬಲ ರಂಗಗಳು ಒಂದಾಗುವ ಕಾಲ ಸಮೀಪದಲ್ಲಿದೆ- ಎಂ.ಎಲ್. ಅಶ್ವಿನಿ

ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿಯ ಚುನಾವಣಾ ಕಾರ್ಯಾಲಯವನ್ನು ಬಿಜೆಪಿ ಜಿಲ್ಲಾ ಧ್ಯಕ್ಷೆ ಅಶ್ವಿನಿ ಎಂ.ಎಲ್. ಉದ್ಘಾಟಿಸಿ ದರು. ಎಡ-ಬಲ ಒಕ್ಕೂಟಗಳು ಒಂದಾಗುವ ಕಾಲ ಸಮೀಪದಲ್ಲಿದೆ ಎಂದು ಅಶ್ವಿನಿ ನುಡಿದರು. ಬಿಹಾರ ಸಹಿತ ಹೆಚ್ಚಿನ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಎಡ ಒಕ್ಕೂಟಗಳು ಇತರ ಪಕ್ಷಗಳೊಂದಿಗೆ ಸೇರಿ ಒಂದಾಗಿ ಸ್ಪರ್ಧಿಸಿದರೂ ಎನ್‌ಡಿಎಯನ್ನು ಸೋ ಲಿಸಲು ಸಾಧ್ಯವಾಗದಿರಲು ಕಾರಣ ನರೇಂದ್ರ ಮೋದಿ ಸರಕಾರ ಜ್ಯಾರಿಗೊಳಿ ಸಿದ ಜನಕ್ಷೇಮ ಯೋಜನೆಗಳು ಮತ್ತು ಅಭಿವೃದ್ಧಿ ಎಂದು ಅವರು ನುಡಿದರು. ಆಡಳಿತ ನಡೆಸುವ …

ಟೋಲ್ ಶುಲ್ಕ ರದ್ದುಪಡಿಸದಿದ್ದರೆ ಖಾಸಗಿ ಬಸ್ ಸಂಚಾರ ಮೊಟಕುಗೊಳಿಸಬೇಕಾಗಿ ಬರಲಿದೆ – ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್

ಕಾಸರಗೋಡು: ಕುಂಬಳೆಯ ಸಮೀಪದ ಆರಿಕ್ಕಾಡಿ ಟೋಲ್‌ಗೇಟ್‌ನಲ್ಲಿ ಬಸ್‌ಗಳಿಗೆ ಹೋಗಿಬರಲು 440 ರೂ. ದರದಲ್ಲಿ ಯೂಸರ್ ಫೀ ನೀಡಬೇಕೆಂಬ ಸೂಚನೆ ಲಭಿಸಿದ್ದು, ನಾಲ್ಕು ಟ್ರಿಪ್‌ಗಳಾಗಿ ಸಂಚರಿಸುವ ಒಂದು ಬಸ್‌ಗೆ ದಿನಕ್ಕೆ 1760ರೂ. ನೀಡಬೇಕಾಗಿ ಬರಲಿದೆ ಎಂದು ಕಾಸರಗೋಡು ಜಿಲ್ಲಾ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ತಿಳಿಸಿದೆ. ಸಾಮಾನ್ಯ ಬಸ್‌ಗಳಿಗೆ ದಿನವೊಂದಕ್ಕೆ 1000- 1500 ರೂ. ಮಾತ್ರವೇ ಉಳಿತಾಯವಾಗುತ್ತಿದ್ದು, ಅದರಲ್ಲಿ 1700 ಟೋಲ್ ನೀಡಬೇಕಾಗಿ ಬಂದರೆ ಮತ್ತೆ ಸರ್ವೀಸ್ ನಡೆಸಬೇಕಾದ ಅಗತ್ಯವಿಲ್ಲವೆಂದು ಈ ಹಿನ್ನೆಲೆಯಲ್ಲಿ ಸಂಚಾರ ನಿಲುಗಡೆಗೊಳಿಸಬೇಕಾದ ಸ್ಥಿತಿ ಉಂಟಾಗಲಿದೆ …

ಮೂಸೋಡಿ ರಸ್ತೆಯಲ್ಲಿ ವಿದ್ಯುತ್ ತಂತಿ ಮೇಲೆ ಬೀಳುವ ಸ್ಥಿತಿಯಲ್ಲಿ ಮರದ ರೆಂಬೆಗಳು: ಸ್ಥಳೀಯರಲ್ಲಿ ಭೀತಿ

ಉಪ್ಪಳ: ರಸ್ತೆ ಬದಿಯಲ್ಲಿರುವ ಮರದ ರೆಂಬೆಗಳು ಯಾವುದೇ ಕ್ಷಣ ವಿದ್ಯುತ್ ತಂತಿ ಮೇಲೆ ಮುರಿದು ಬೀಳುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಮೂಲಕ ಹಾದುಹೋಗುವ ಮೂಸೋಡಿ ರಸ್ತೆಯಲ್ಲಿ ಅಪಾಯಕಾರಿ ಮರಗಳಿಂದ ಆತಂಕ ಸೃಷ್ಟಿಯಾಗಿದೆ. ಈ ಪರಿಸರದಲ್ಲಿ ಬೃಹತ್ ಮರಗಳು, ತೆಂಗಿನ ಮರಗಳು ವಿದ್ಯುತ್ ತಂತಿ ಮೇಲೆ ಭಾಗಿಕೊಂಡಿವೆ. ಪ್ರಮುಖ ವಿದ್ಯುತ್ ತಂತಿಗಳು ಮನೆಗಳಿಗೆ, ವ್ಯಾಪಾರ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಮರಗಳ ರೆಂಬೆಗಳು ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಿ ಮುರಿದು ಬಿದ್ದರೆ …

ಕೇರಳ ಇಲೆಕ್ಟ್ರಿಕಲ್ ವಯರ್‌ಮ್ಯಾನ್ ಆಂಡ್ ಸೂಪರ್‌ವೈಸರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ

ಕುಂಬಳೆ: ಕೇರಳ ಇಲೆಕ್ಟ್ರಿಕಲ್ ವಯರ್‌ಮ್ಯಾನ್ ಆಂಡ್ ಸೂಪರ್‌ವೈಸರ್ಸ್ ಅಸೋಸಿಯೇಶನ್ ರಾಜ್ಯ ಸಮ್ಮೇಳನದಂಗವಾಗಿ ನಡೆಯುವ ಕಾಸರಗೋಡು ಜಿಲ್ಲಾ ಸಮ್ಮೇಳನ ಈ ತಿಂಗಳ ೧೭ರಂದು ಕುಂಬಳೆ ಶ್ರೀ ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರಂಗವಾಗಿ ಮೆರವಣಿಗೆ, ಪ್ರತಿನಿಧಿ ಸಮ್ಮೇಳನ, ವಯರಿಂಗ್, ಪ್ಲಂಬಿಂಗ್ ಉತ್ಪನ್ನ ಪ್ರದರ್ಶನ, ಸಾಂತ್ವನ ಸಹಾಯ ವಿತರಣೆ ನಡೆಯಲಿದೆ. ಪ್ರತಿನಿಧಿ ಸಮ್ಮೇಳನವನ್ನು ರಾಜ್ಯ ಅಧ್ಯಕ್ಷ ಪಿ.ವಿ. ರಾಜೇಶ್ ಉದ್ಘಾಟಿಸುವರು.   ಜಿಲ್ಲಾಧ್ಯಕ್ಷ ರಾಜು ಕಪ್ಪಣಕ್ಕಾಲ್ ಅಧ್ಯಕ್ಷತೆ ವಹಿಸುವರು. ರಾಜ್ಯ, ಜಿಲ್ಲಾ ಮುಖಂಡರು ಭಾಗವಹಿಸುವರು. ರಾಜ್ಯ ಅಸಿಸ್ಟೆಂಟ್ …