ಅಗಲಿದ ಗಾನಕೋಗಿಲೆ ಆಶಾ ಭೋಸ್ಲೆಗೆ ಇಂದು ಸಂಜೆ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ಪ್ರಧಾನಿ ಸೇರಿ ಹಲವರು ಗಣ್ಯರಿಂದ ಕಂಬನಿ

ಮುಂಬೈ: ಭಾರತೀಯ ಚಲನಚಿತ್ರರಂಗದ ಅಪ್ರತಿಮ ಗಾಯಕಿ, ಸಾವಿರಾರು ಸುಮಧುರ ಗೀತೆಗಳ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ಪದ್ಮಭೂಷಣ ಆಶಾ ಭೋಸ್ಲೆ (92) ಅಂತ್ಯಕ್ರಿಯೆ ಇಂದು ಸಂಜೆ  ೪ ಗಂಟೆಗೆ ಮುಂಬೈಯ ಐತಿಹಾಸಿಕ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳ ಸಹಿತ ನೆರವೇರಲಿದೆ.  ಈ ಮಹಾನ್ ಚೇತನದ ಅಗಲಿಕೆಗೆ ಪ್ರಧಾನಮಂತ್ರಿ ನರೇಂದ್ರಮೋದಿ ಸೇರಿದಂತೆ ಹಲವು ಗಣ್ಯಾತೀತರು ಕಂಬನಿ ಮಿಡಿದಿದ್ದಾರೆ. ಆಶಾ ಭೋಸ್ಲೆಯವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶ ಕ್ಕಾಗಿ ಇಂದು ಬೆಳಿಗ್ಗೆಯಿಂದ ಮುಂಬೈನ …

ಬಾವಿ ಕೆಲಸದ ಮಧ್ಯೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ನಿಧನ

ಕಾಸರಗೋಡು: ಬಾವಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಧ್ಯೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡ ಕಾರ್ಮಿಕ ಮೃತಪಟ್ಟರು. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಆನಪೆಟ್ಟಿ, ಕಾವಿಲ್ ಮನೆಯ ಚಂದ್ರನ್ ನಾಯರ್‌ರ ಪುತ್ರ ರಾಜನ್ (64) ಮೃತಪಟ್ಟವರು. ನಿನ್ನೆ ವಾಯುನ್ನೋರಡಿ ಮೇನಿಕೋಟ್‌ನಲ್ಲಿ ದುರಂತ ಸಂಭವಿಸಿದೆ. ಕೆಲಸದ ಮಧ್ಯೆ ಬಿದ್ದು ಕಾಲು ತುಂಡಾದ ಸ್ಥಿತಿಯಲ್ಲಿ ಇವರನ್ನು ನೋರ್ತ್ ಕೋಟಚ್ಚೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ  ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವ ಸಿದ್ಧತೆ ಮಧ್ಯೆ ಸಾವು ಸಂಭವಿಸಿದೆ. ಹೃದಯಾಘಾತ ಮರಣಕ್ಕೆ …

ಬೇಕೂರಿನಲ್ಲಿ ಭಾರೀ ಪ್ರಮಾಣದಲ್ಲಿ ಕುಡಿಯುವ ನೀರು ಪೋಲು: ಅಧಿಕಾರಿಗಳ ನಿರ್ಲಕ್ಷ್ಯ ಸೋರಿಕೆಗೆ ಕಾರಣವೆಂದು ದೂರು

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ವಿತರಣೆಗೊಳ್ಳುತ್ತಿರುವ ಪ್ರದಾನ ಪೈಪ್‌ನಿಂದ ದಿನನಿತ್ಯ ಸಾವಿರಾರು ಲೀಟರ್ ಕುಡಿಯುವ ನೀರು ಪೋಲಾಗುತ್ತಿದ್ದು, ದುರಸ್ತಿಗೊಳಿಸದಿ ರುವುದು ಸಾರ್ವಜನಿಕರನ್ನು ಆಕ್ರೋಶಕ್ಕೀಡುಮಾಡಿದೆ. ಕೈಕಂಬ-ಬಾಯಾರು ರಸ್ತೆಯ ಬೇಕೂರು ಹಳೇ ಅಂಚೆ ಕಚೇರಿ ಸಮೀಪದಲ್ಲಿ ಪೈಪ್ ಬಿರುಕು ಬಿಟ್ಟು ಭಾರೀ ಪ್ರಮಾಣದ ನೀರು ಪೋಲಾಗುತ್ತಿದೆ. ಕೊಡಂಗೆ ಹೊಳೆಯಲ್ಲಿರುವ ಬಾವಿಯಿಂದ ಬೇಕೂರು ಹಿರಣ್ಯಪದವಿನ ಟ್ಯಾಂಕ್‌ಗೆ ಸರಬರಾಜುಗೊಳ್ಳುತ್ತಿರುವ ಪ್ರಧಾನ ಪೈಪ್‌ನಿಂದ ನೀರು ಸೋರಿಕೆಯಾಗುತ್ತಿದೆ. ಇಲ್ಲಿ ವಾಲ್‌ಗೇಟ್‌ನ್ನು ನಿರ್ಮಿಸಲಾಗಿದೆ. ಇದರಲ್ಲಿ ಸೋರಿಕೆಯಾದ ನೀರು ಪರಿಸರದ ಚರಂಡಿ ಸೇರುತ್ತಿದೆ. ಹಲವು ವರ್ಷಗಳಿಂದ …

24 ಮಹಿಳೆಯರು ಸೇರಿದ ತಂಡದಿಂದ 29.39 ಕಿಲೋ ಚಿನ್ನ ವಶ

ಮುಂಬಯಿ: 24 ಮಹಿಳೆಯರು ಸೇರಿದ ತಂಡ ಸಾಗಿಸುತ್ತಿದ್ದ 29.39 ಕಿಲೋ ಚಿನ್ನಾಭರಣವನ್ನು ರೆವೆನ್ಯೂ ಇಂಟೆಲಿಜೆನ್ಸ್ ಡೈರೆಕ್ಟರೇಟ್ ಮುಂಬಯಿ ವಿಮಾನ ನಿಲ್ದಾಣ ದಿಂದ ವಶಪಡಿಸಿದೆ. ಸೆರೆ ಹಿಡಿದ ಚಿನ್ನಕ್ಕೆ 37.74 ಕೋಟಿ ರೂ. ಮೌಲ್ಯ ಅಂದಾಜಿಸಲಾಗಿದೆ. ಡಿಆರ್‌ಐ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವರ್ಷ ಮುಂಬಯಿ ವಿಮಾನ ನಿಲ್ದಾಣ ದಲ್ಲಿ ನಡೆಸಿದ ಅತ್ಯಂತ ದೊಡ್ಡ ಚಿನ್ನ ಬೇಟೆಯಾಗಿದೆ ಇದು. ಕೆನಿಯಾದ ನೈರೋ ಬಿಯಿಂದ ಮಹಿಳೆಯರ ತಂಡವೊಂದು ಚಿನ್ನಾಭರಣದೊಂದಿಗೆ ಮುಂ ಬಯಿ ಛತ್ರಪತಿ ಶಿವಜಿ ಮಹಾ ರಾಜ್ …

ಪುತ್ರಿಗೆ ದೌರ್ಜನ್ಯಗೈದ ತಂದೆ ವಿರುದ್ಧ ಪೋಕ್ಸೋ: ಕಸ್ಟಡಿಗೆ

ಮಂಜೇಶ್ವರ: ಪುತ್ರಿಗೆ ದೌರ್ಜನ್ಯಗೈದಿರುವುದಾಗಿ ನೀಡಿದ ದೂರಿನಂತೆ ತಂದೆಯನ್ನು ಮಂಜೇ ಶ್ವರ ಪೊಲೀಸರು ಕಸ್ಟಡಿಗೆ ತೆಗೆದರು. 53ರ ಹರೆಯದ ವ್ಯಕ್ತಿಯನ್ನು ಕಸ್ಟಡಿಗೆ ತೆಗೆಯಲಾಗಿದೆ. ಪ್ಲಸ್ ಟುನಲ್ಲಿ ಕಲಿಯುವ ಸಮಯದಲ್ಲಿಯೇ ತನ್ನನ್ನು ದೌರ್ಜನ್ಯಗೈದಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ. ಈಗ ಈಕೆಗೆ 20 ವರ್ಷವಾಗಿದೆ. ಹೆದರಿಕೆಯಿಂ ದಾಗಿ ಈ ಬಗ್ಗೆ ಈಕೆ ಯಾರಲ್ಲೂ ತಿಳಿಸಿರಲಿಲ್ಲವೆಂದು ಹೇಳಲಾಗುತ್ತಿದೆ. ಇತ್ತೀಚೆಗಿನಿಂದ ಇನ್ನಷ್ಟು ಹೆಚ್ಚು ಉಪಟಳ ಮಾಡಲು ಆರಂಭಿಸಿ ರುವುದರೊಂದಿಗೆ ಈ ಬಗ್ಗೆ ತಾಯಿಗೆ ತಿಳಿಸಿದ್ದಾಳೆ. ಆ ಬಳಿಕ ತಾಯಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು.

ಪಯ್ಯನ್ನೂರಿನಲ್ಲಿ ಮುಂದುವರಿಯುತ್ತಿರುವ ಆಕ್ರಮಣ : ಕಾರಿಗೆ, ಕೃಷಿ ಸ್ಥಳದಲ್ಲಿ ಕಿಚ್ಚಿರಿಸಿ ನಾಶ

ಹೊಸದುರ್ಗ: ವಿಧಾನಸಭಾ ಚುನಾವಣೆ ಪೂರ್ತಿಯಾದ ಬೆನ್ನಲ್ಲೇ ಪಯ್ಯನ್ನೂರು ವಿಧಾನಸಭಾ ಮಂಡಲದ ವಿವಿಧ ಭಾಗಗಳಲ್ಲಿ ಆಕ್ರಮಣಗಳು ಮುಂದುವರಿಯುತ್ತಿದೆ. ಯುಡಿಎಫ್ ಸ್ವತಂತ್ರನಾಗಿ ಸ್ಪರ್ಧಿಸಿದ ವಿ. ಕುಂಞಿ ಕೃಷ್ಣನ್‌ರ ಬೆಂಬಲಿಗನೆಂದು ಹೇಳಲಾ ಗುವ ಎರಮಂ ಪೇರೂಲ್‌ನ ಎಂ.ಕೆ. ನಾರಾಯಣನ್‌ರ ಕಾರಿಗೆ ಬೆಂಕಿ ಹಚ್ಚ ಲಾಗಿದೆ. ಇಂದು ಮುಂಜಾನೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಮನೆಯವರು ಎಚ್ಚರಗೊಂಡ ಹಿನ್ನೆಲೆಯಲ್ಲಿ ಅಕ್ರಮಿ ಗಳು ಪರಾರಿಯಾಗಿದ್ದಾರೆ. ಪಂಚಾ ಯತ್ ನೌಕರನಾದ ನಾರಾಯಣನ್ ಎನ್‌ಜಿಒ ಯೂನಿಯನ್ ಕಾರ್ಯ ಕರ್ತರಾಗಿದ್ದಾರೆ. ಕುಂಞಿಕೃಷ್ಣನ್ ಎತ್ತಿಹಿಡಿದ ಹುತಾತ್ಮ ಫಂಡ್‌ಗೆ ಸಂಬಂಧಿಸಿದ ಆರೋಪವನ್ನು …

ಟೈಲರ್ ನಿಧನ

ಕುಂಬಳೆ: ಭಾಸ್ಕರನಗರ ಸಮೀಪದ ಕಾರಿಪ್ಪಾಡಿ ನಿವಾಸಿ ಚಂದ್ರಶೇಖರ (57) ನಿಧನ ಹೊಂದಿದರು. ಉಪ್ಪಳ ಹಾಗೂ ಕುಂಬಳೆಯಲ್ಲಿ ಟೈಲರ್ ಆಗಿ ದುಡಿದಿದ್ದರು. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಪುಷ್ಪಲತ, ಮಕ್ಕಳಾದ ಜೀವನ್, ಸಂಧ್ಯಾ, ಸಹೋದರರಾದ ವಿಶ್ವನಾಥ, ಸಹೋದರಿ ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆರು ವರ್ಷದ ಪುತ್ರನನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಲೆ: ಪ್ರಿಯತಮನ ಜೊತೆ ಪರಾರಿಯಾಗಲು ನಡೆಸಿದ ಸಿದ್ಧತೆ ಮಧ್ಯೆ ಯುವತಿ ಪೊಲೀಸರ ವಶಕ್ಕೆ

ಪುಣೆ: ಪ್ರಿಯತಮನ ಜೊತೆ ಜೀವಿಸಲೆಂದು ತಾಯಿ 6 ವರ್ಷದ ಮಗನನ್ನು ಪ್ರಿಯತಮನ ಸಹಾಂi ದೊಂದಿಗೆ ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಲೆಗೈದ ಘಟನೆ ನಡೆದಿದೆ. ಬಕೆಟ್‌ನಿಂದ ಹೊರ ತೆಗೆದು ಮಗು ಮೃತಪಟ್ಟಿದೆಯೇ ಎಂಬುದನ್ನು ಖಚಿತಪಡಿಸಲು ಮೃತದೇಹವನ್ನು ನೆಲಕ್ಕೆ ಬಡಿದಿರುವುದಾಗಿಯೂ ಹೇಳಲಾಗುತ್ತಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡಿ ಎಂಬಲ್ಲಿ ಈ ದಾರುಣ ಘಟನೆ ಸಂಭವಿಸಿದೆ.  ಕೊಲೆಗೈದ ಮರುದಿನ ತಾಯಿ ಬಾಸಿರನ್ ಮೆಹಬೂಬ್ ಶೇಕ್ (27) ಮಗುವಿನ ಮೃತದೇಹವನ್ನು ತನ್ನ ಕುಟುಂಬ ಮನೆಗೆ ಕೊಂಡೊಯ್ದಿದ್ದಳು. ಹೃದಯಾಘಾv ದಿಂದ ಪುತ್ರ ಮೃತಪಟ್ಟಿರುವುದಾಗಿ ತಾಯಿ …

ಮೊನಾಲಿಸ ಅಪ್ರಾಪ್ತೆ: ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸು

ತಿರುವನಂತಪುರ: ಕುಂಭ ಮೇಳಕ್ಕೆ ಸಂಬಂಧಿಸಿ ದೇಶದೆಲ್ಲೆಡೆ ಗಮನ ಸೆಳೆದು ಕೊನೆಗೆ ತಿರುವನಂತಪುರಕ್ಕೆ ತಲುಪಿ ಸಿಪಿಎಂ, ಪೋಪ್ಯುಲರ್ ಫ್ರಂಟ್ ಮುಖಂಡರ ಸಹಾಯದಲ್ಲಿ ವಿವಾಹವಾದ ಮೊನಾಲಿಸಳಿಗೆ ಪ್ರಾಯಪೂರ್ತಿಯಾಗಿಲ್ಲವೆಂದು ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯ ವಿವಾಹ ನಡೆಸಿದವರ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ. 2009 ದಶಂಬರ್ 30ರಂದು ಮೊನಾಲಿಸ ಜನಿಸಿರುವುದಾಗಿ ಪತ್ತೆಹಚ್ಚಲಾಗಿದೆ. ಪೋಕ್ಸೋ, ಭಾರತೀಯ ನ್ಯಾಯಸಂಹಿತೆ, ಪರಿಶಿಷ್ಟ ಜಾತಿಯವರ ವಿರುದ್ಧ ಅಕ್ರಮ ತಡೆಯುವ ಕಾಯ್ದೆ ಎಂಬಿವು ಪ್ರಕಾರ ಕೇಸು ದಾಖಲಿಸಲಾಗಿದೆ. ಫರ್ದಿ ವನವಾಸಿ ಸಮಾಜಕ್ಕೊಳಪಟ್ಟ ಮೊನಾಲಿಸ …

ಚಟ್ಟಂಚಾಲ್- ಚೆರ್ಕಳ ರಾಷ್ಟ್ರೀಯ ಹೆದ್ದಾರಿ ಇಂದಿನಿಂದ 2 ವಾರ ಮುಚ್ಚುಗಡೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುವ ನಿರ್ಮಾಣ ಕಾಮಗಾರಿಗಳಂಗವಾಗಿ ತೆಕ್ಕಿಲ್, ಬೇವಿಂಜ ಭಾಗಗಳಲ್ಲಿ ರಸ್ತೆಯಲ್ಲಿ ಹೊಂಡ ತೆಗೆಯುವುದರ ಹಿನ್ನೆಲೆಯಲ್ಲಿ ಇಂದಿನಿಂದ 2 ವಾರ ಸಂಚಾರ ನಿಷೇಧಿಸಲಾಗಿದೆ. ಕಣ್ಣೂರು ಭಾಗದಿಂದ ಆಗಮಿಸುವ ವಾಹನಗಳು ಕಾಞಂಗಾಡ್ ಸೌತ್‌ನಿಂದ ಕೆಎಸ್‌ಟಿಪಿ ರಸ್ತೆ ಮೂಲಕವೂ, ಪೆರಿಯ ಪೊಯಿನಾಚಿ ಕಡೆಯಿಂದ ಬರುವ ವಾಹನಗಳು ಚಟ್ಟಂಚಾಲ್ ಮಲ್ಸೇತುವೆಯನ್ನು ಪ್ರವೇಶಿಸದೆ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಚಟ್ಟಂಚಾಲ್- ಪರವನಡ್ಕ ದೇಳಿ ರಸ್ತೆ ಮೂಲಕ ಕೆಎಸ್‌ಟಿಪಿ ರಸ್ತೆಗೆ ಪ್ರವೇಶಿಸಿ ಮುಂದುವರಿಯಬೇಕಾಗಿದೆ. ಮಂಗಳೂರು ಭಾಗದಿಂದ ಕಣ್ಣೂರು ಭಾಗಕ್ಕೆ ತೆರಳುವ ವಾಹನಗಳು ಕಾಸರಗೋಡು …