ಲಾರಿ ಚಾಲಕ ವಿಷ ಸೇವಿಸಿ ಮೃತ್ಯು
ಕುಂಬಳೆ: ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪದಂತೆ ಪೊಲೀಸರು ನೋಟೀಸು ನೀಡಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಲಾರಿ ಚಾಲಕ ವಿಷ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಪುತ್ತಿಗೆ ಕಟ್ಟತ್ತಡ್ಕ ಎಕ್ಸ್ಚೇಂಜ್ ರಸ್ತೆಯ ವಸಂತ ನಾಯ್ಕ್ರ ಪುತ್ರ ಪ್ರವೀಣ್ ಕುಮಾರ್ (35 ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ಮುಂಜಾನೆ ಮನೆಯಲ್ಲಿ ಇವರು ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. ಮಂಗಳೂರಿನ ಕೋಳಿ ಫಾರ್ಮ್ ವೊಂದರ ಲಾರಿಯ ಚಾಲಕನಾಗಿ ಇವರು ಕೆಲಸ …