ನಾಯ್ಕಾಪು ಬಳಿ ಸ್ಕೂಟರ್ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ನಾಯ್ಕಾಪುನಲ್ಲಿ ಪ್ಲಾಸ್ಟಿಕ್ ಫ್ಯಾಕ್ಟರಿಯ ಗೇಟ್‌ನ ಸಮೀಪ ಸ್ಕೂಟರ್‌ವೊಂದು ಉಪೇಕ್ಷಿತ ಸ್ಥಿತಿಯಲ್ಲಿ  ಪತ್ತೆಯಾಗಿದೆ. ಕಲ್ಲಿಕೋಟೆ ಆರ್‌ಟಿಒ ಕಚೇರಿಯಲ್ಲಿ ನೋಂದಾಯಿಸಲಾದ ಸ್ಕೂಟರ್ ಇದಾಗಿದೆಯೆಂದು ತಿಳಿದು ಬಂದಿದೆ. ಕಳೆದ ಒಂದು ವಾರದಿಂದ ಸ್ಕೂಟರ್ ಇಲ್ಲಿ ನಿಲ್ಲಿಸಲಾಗಿದ್ದು ಇದು ಸಂಶಯಕ್ಕೆಡೆಯಾಗಿದೆ. ಇದೇ ವೇಳೆ ಸ್ಕೂಟರ್ ಇಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿರುವ ಬಗ್ಗೆ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆಯೆಂದೂ ಆದರೆ ಈ ಬಗ್ಗೆ ತನಿಖೆಗೆ ಪೊಲೀಸರು ಮುಂದಾಗಿಲ್ಲವೆಂದು ಫ್ಯಾಕ್ಟರಿ ಅಧಿಕಾರಿಗಳು ತಿಳಿಸುತ್ತಿದ್ದಾರೆ.

ವಿಶ್ವಹಿಂದೂ ಪರಿಷತ್ ಮೀಂಜ ಖಂಡ ಸಮಿತಿಯಿಂದ ಬಲಿವಾಡು ಕೂಟ, ಭಜನಾ ಸಂಭ್ರಮ 23ರಂದು

ಮೀಯಪದವು: ವಿಶ್ವ ಹಿಂದೂ  ಪರಿಷತ್ ಮೀಂಜ ಖಂಡ ಸಮಿತಿ ವತಿಯಿಂದ ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಂಹ ಮಾಸ ಬಲಿವಾಡು ಕೂಟ ಈ ತಿಂಗಳ 23ರಂದು ಬೆಳಿಗ್ಗೆ 9ರಿಂದ ನಡೆಯಲಿದೆ. ಇದೇ ವೇಳೆ ವಿಶೇಷ ಭಜನಾ ಸಂಭ್ರಮ, ಸತ್ಸಂಗ ಹಾಗೂ ಹಿರಿಯ ಭಜನಾ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಭಜನಾ ಸಂಭ್ರಮ ಆರಂಭಗೊಳ್ಳಲಿದೆ. ಕ್ಷೇತ್ರದ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ದೀಪ ಪ್ರಜ್ವಲನೆ ಗೈಯ್ಯುವರು. 11 ಗಂಟೆಗೆ ಸತ್ಸಂಗ ನಡೆಯಲಿದ್ದು, ವಿ.ಹಿಂ.ಪ. ಜಿಲ್ಲಾಧ್ಯಕ್ಷ ಜಯದೇವ …

ಉಳಿಯತ್ತಡ್ಕದ ಆಟೋ ಕಾರ್ಮಿಕ ನಿಧನ

ಮಾಯಿಪ್ಪಾಡಿ: ಮುಸ್ಲಿಂ ಲೀಗ್‌ನ ಹಿರಿಯ ಕಾರ್ಯಕರ್ತ, ಉಳಿಯತ್ತಡ್ಕದಲ್ಲಿ ಆಟೋ ಕಾರ್ಮಿಕನಾಗಿದ್ದ ಮಂಜತ್ತಡ್ಕ ನಿವಾಸಿ ಅಬೂಬಕ್ಕರ್ (56) ನಿಧನ ಹೊಂದಿದರು. ಮಧೂರು ಪಂ.ಮುಸ್ಲಿಂ ಲೀಗ್ ಸಮಿತಿ ಸದಸ್ಯ ಎಸ್‌ಟಿಯು ಉಳಿಯತ್ತಡ್ಕ ಪೇಟೆ ಸಮಿತಿ,  ಬದರ್ ಜುಮಾ ಮಸೀದಿ ಸಮಿತಿ, ಮಂಜತ್ತಡ್ಕ ದರ್ಗಾ ಮಸೀದಿ ಸಮಿತಿಯಲ್ಲೂ ಪದಾಧಿಕಾರಿಯಾಗಿದ್ದರು. ಮೃತರು ಪತ್ನಿ ನಬೀಸ, ಮಕ್ಕಳಾದ ನಿಜಾಮ್, ಪವಾಸ್, ಫಯಾಸ್, ಫಮೀದ, ಫಸೀಲ, ಫಾಸಿಲ, ಅಳಿಯಂದಿರಾದ ಅಶ್ರಫ್ ಮುಗು, ರಂಜಾನ್ ಮಣಿಯಂಪಾರೆ, ಸೊಸೆ ರಹಲಾ, ಸಹೋದರರಾದ ಅಬ್ದುಲ್ ರಹ್ಮಾನ್, ಹಮೀದ್, ಅಲಿ, ಮುಸ್ತಫ …

ಟೂರಿಸಂ ಪ್ರಮೋಷನ್ ಕೌನ್ಸಿಲ್‌ನ ಓಣಂ ಆಚರಣೆ ಸೆ.3ರಿಂದ

ಕಾಸರಗೋಡು: ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್ ನಡೆಸುವ ಓಣಂ ಆಚರಣೆ ಸೆಪ್ಟಂಬರ್ 3ರಿಂದ 7ರ ತನಕ ಚೆರುವತ್ತೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ತನ್ನದೇ ಆದ ಕಲಾರೂಪಗಳ ಪ್ರದರ್ಶನ ಹಾಗೂ ವಿವಿಧ ಸಂಘಟನೆಗಳನ್ನು ಒಳಪಡಿಸಿ ಹಲವು ಕಲಾಕಾರ್ಯ ಕ್ರಮಗಳನ್ನು ಇದರ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಹೂ ರಂಗೋಲಿ ಸ್ಪರ್ಧೆ, ವಿದ್ಯಾರ್ಥಿಗಳಿಗಾಗಿ ಪೈಂಟಿಂಗ್ ಸ್ಪರ್ಧೆಗಳು ನಡೆಯಲಿದೆ. ವಿಕಲಚೇತನರಾದ ಮಕ್ಕಳಿಗೆ ಓಣಂ ಔತಣಕೂಟ ಏರ್ಪಡಿಸಲಾಗುವುದು.

ಪಡ್ರೆ ಶಾಲೆಯಲ್ಲಿ ಸಂದರ್ಶನ

ಪೆರ್ಲ: ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಖಾಲಿಯಿರುವ ಜೂನಿಯರ್ ಮತ್ತು ಸೀನಿಯರ್ ಪೊಲಿಟಿಕಲ್ ಸಯನ್ಸ್ (ಎಚ್ ಎಸ್ ಎಸ್ ಟಿ) ಶಿಕ್ಷಕ ಹುದ್ದೆ ಭರ್ತಿಗೆ ದಿನ ವೇತನದ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿ ನಡೆಸಲಾ ಗುವುದು. ಆ.25ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅಸಲಿ ಪ್ರಮಾಣ ಪತ್ರಗಳೊಂದಿಗೆ ಹೈಯರ್ ಸೆಕೆಂಡರಿ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವಂತೆ ಪ್ರಾಂಶುಪಾಲ ತಿಳಿಸಿದ್ದಾರೆ.

ಕಂಚಿಕಟ್ಟೆ ಮಳಿ ಅರಮನೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕುಂಬಳೆ: ಮಂಜೇಶ್ವರ ಶಾಸಕರ ನಿಧಿಯಿಂದ ವೆಚ್ಚ ಮಾಡಿ ನಿರ್ಮಿಸಿದ ಕಂಚಿಕಟ್ಟೆ ಮಳಿ- ಅರಮನೆ ರಸ್ತೆಯನ್ನು ಕಾಂಕ್ರಿಟೀಕ ರಣಗೊಳಿಸಿದ್ದು, ಇದರ ಉದ್ಘಾಟನೆ ಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಪಂಚಾಯತ್ ಅಧ್ಯಕ್ಷೆ ತಾಹಿರಾ ಯೂಸಫ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಹ್ಮಾನ್, ಸಬೂರ, ಸದಸ್ಯೆ ಪ್ರೇಮಾವತಿ, ಮಂಜುನಾಥ ಆಳ್ವ, ರಾಮಚಂದ್ರ ಗಟ್ಟಿ, ಕುಂಬಳೆ ಲಕ್ಷ್ಮಣ ಪ್ರಭು, ಸುಂದರ ಆರಿಕ್ಕಾಡಿ, ರವಿ ಪೂಜಾರಿ, ಪೃಥ್ವಿರಾಜ್ ಶೆಟ್ಟಿ, ಡಾಲ್ಫಿ ಡಿಸೋಜಾ, ಥೋಮಸ್ ರೋಡ್ರಿಗಸ್, ಚಿರಂಜೀವಿ ಕ್ಲಬ್‌ನ …

ಭಗತ್ ಸಿಂಗ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕೋತ್ಸವ

ಬದಿಯಡ್ಕ: ಬಾಂಜತ್ತಡ್ಕ ಉದಯಗಿರಿ ಭಗತ್ ಸಿಂಗ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದಯಗಿರಿ ಶಾಲಾ ವಠಾರದಲ್ಲಿ ಜರಗಿತು. ಮುಖ್ಯೋಪಾಧ್ಯಾಯ ಶ್ರೀಧರ ಭಟ್ ಬಿ. ಉದ್ಘಾಟಿಸಿದರು. ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ನಾರಾಯಣ ಮೂಲಡ್ಕ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಸದಸ್ಯ ಈಶ್ವರ, ಸಿಪಿಐ ಬದಿಯಡ್ಕ ಮಂಡಲ ಕಾರ್ಯದರ್ಶಿ ಕೆ. ಚಂದ್ರಶೇಖರ ಶೆಟ್ಟಿ, ಬಿಜೆಪಿಯ ಹರಿಪ್ರಸಾದ್ ಯಾದವ್ ಪುತ್ತೂರು, ಸಿಪಿಎಂ ಬದಿಯಡ್ಕ ಲೋಕಲ್ ಕಾರ್ಯದರ್ಶಿ ಶ್ರೀಕಾಂತ್, ಅಧ್ಯಾಪಕ …

ರ‍್ಯಾಗಿಂಗ್ ಸಾಬೀತುಗೊಂಡಲ್ಲ್ಲಿ ಎರಡು ವರ್ಷ ಸಜೆ, 10,000 ರೂ. ಜುಲ್ಮಾನೆ

ಕಾಸರಗೋಡು: ಶಾಲಾಕಾಲೇಜು ಗಳಲ್ಲಿ ನಡೆಯುತ್ತ್ತಿರುವ ರ‍್ಯಾಗಿಂಗ್ ಪ್ರಕರಣಗಳು ಸಾಬೀತುಗೊಂಡಲ್ಲಿ ಅಂತಹ ಪ್ರಕರಣಗಳ ಆರೋಪಿಗಳಾದ ವಿದ್ಯಾರ್ಥಿಗಳಿಗೆ ಎgಡು ವರ್ಷ  ಸಜೆ ಲಭಿಸಲಿದೆ ಮಾತ್ರವಲ್ಲ 10,000 ರೂ. ಜುಲ್ಮಾನೆ ಪಾವತಿಸಬೇಕಾಗಿ ಬರಲಿದೆ. ಇದು ಮಾತ್ರವಲ್ಲ  ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ರ‍್ಯಾಗಿಂಗ್ ಆರೋಪದ  ಕುರಿತಾಗಿ ದೂರುಗಳಿದ್ದಲ್ಲಿ ಅದನ್ನು ಬಚ್ಚಿಡಲು ಯತ್ನಿಸಿದಲ್ಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳು ರ‍್ಯಾಗಿಂಗ್‌ಗೆ ಸಹಾಯ ಮಾಡಿರುವುದಾಗಿ ಪರಿಗಣಿಸಿ ಅವುಗಳನ್ನು ಅಂತಹ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ  ಸೇರ್ಪಡೆಗೊಳಿಸಲಾಗುವುದು. ಶಿಕ್ಷಣ ಸಂಸ್ಥೆಗಳಲ್ಲಿ ರ‍್ಯಾಗಿಂಗ್ ನಡೆದಲ್ಲಿ ಆ ಕುರಿತಾದ ದೂರುಗಳನ್ನು ಆಂಟಿ ರ‍್ಯಾಗಿಂಗ್ …

ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ 11 ಟೋಲ್ ಪ್ಲಾಸಾಗಳ ನಿರ್ಮಾಣ ಕೆಲಸ ಆರಂಭ

ಕಾಸರಗೋಡು: ತಲಪಾಡಿಯಿಂದ ಆರಂಭಗೊಂಡು ತಿರುವನಂತಪುರ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು  11 ಟೋಲ್‌ಪ್ಲಾಸಾಗಳನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ. ಮಾತ್ರವಲ್ಲದೆ ಹೆಚ್ಚಿನೆಡೆಗಳಲ್ಲಿ ಟೋಲ್ ಪ್ಲಾಸಾಗಳ ನಿರ್ಮಾಣ ಕೆಲಸಗಳು ಈಗಾಗಲೇ ಆರಂಭಗೊಂಡಿದೆ. ತಲಪಾಡಿಯಿಂದ ಆರಂಭಗೊಂಡು ತಿರುವನಂತಪುರದ ತನಕ ಒಟ್ಟು 645 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ-66 ಹೊಂದಿದೆ. ಇದರಲ್ಲಿ ಪ್ರತಿ 60 ಕೀ.ಮೀ ಅಂತರದಲ್ಲಿ ತಲಾ ಒಂದರಂತೆ ಟೋಲ್ ಪ್ಲಾಸಾ ನಿರ್ಮಿಸಲಾಗುತ್ತಿದೆ. ತಲಪ್ಪಾಡಿಯಲ್ಲಿ ಈಗಾಗಲೇ ಟೋಲ್ ಪ್ಲಾಸಾ ಕಾರ್ಯವೆಸಗುತ್ತಿದೆ. ಅದನ್ನು ಹೊರತುಪಡಿಸಿದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ …

ಕಾಸರಗೋಡು ನಗರದಲ್ಲಿ 3 ಅಂಗಡಿಗಳಿಂದ ಕಳವು

ಕಾಸರಗೋಡು: ಕಾಸರಗೋಡು ನಗರದಲ್ಲಿ ಅಂಗಡಿಗಳಿಂದ ಸರಣಿ ಕಳ್ಳತನ ನಡೆದಿದೆ. ನಗರದ ಹೃದಯ ಭಾಗವಾದ  ಎಂ.ಜಿ. ರಸ್ತೆಯಲ್ಲಿರುವ ಮೂರು ಅಂಗಡಿಗಳಿಂದ ಕಳವು ಹಾಗೂ ಒಂದರಿಂದ ಕಳವಿಗೆತ್ನ ನಡೆದಿದೆ. ನಿನ್ನೆ ರಾತ್ರಿ ಕಳ್ಳರು ಅಂಗಡಿಗಳಿಗೆ ನುಗ್ಗಿದ್ದಾರೆ. ಫೋರ್ಟ್ ರೋಡ್  ನಿವಾಸಿ ಶಾಲಿನಿ ಎಂಬವರ ಮಾಲಕತ್ವದಲ್ಲಿರುವ ವಿನ್ನರ್ ಫೂಟ್ ವೇರ್, ಯೂಸಫ್‌ರ ಮಾಲಕತ್ವದಲ್ಲಿ ರುವ ಮಿನಿ ಮಾರ್ಟ್ ಗ್ರೋಸರಿ ಶಾಪ್, ಮಾಂಙಾಡ್‌ನ ಎಂ.ಕೆ. ಶಂಸುದ್ದೀನ್‌ರ ಮಾಲಕತ್ವದಲ್ಲಿರುವ ಆಶ್ವಾಸ್ ಕಮ್ಯೂ ನಿಟಿ ಫಾರ್ಮಸಿ ಎಂಬಿಡೆಗಳಿಂದ ಕಳವು ನಡೆದಿದೆ. ಚೆಂಗಳ ಪಾಣಲದ ಅಬ್ದುಲ್ ಖಾದರ್‌ರ …