ಕಡು ಬಡತನಮುಕ್ತ ಕೇರಳ ಎಂಬ ಘೋಷಣೆ ಎಡರಂಗ ಸರಕಾರದ ವಂಚನೆ- ಮುಕುಂದನ್ ಪಳ್ಳಿಯರ

ಕಾಸರಗೋಡು: ಕಡು ಬಡತನಮುಕ್ತ ಕೇರಳ ಎಂಬ ಘೋಷಣೆ ಕೇವಲ ರಾಜಕೀಯ ಹಕ್ಕುವಾದ ಮಂಡನೆ ಮಾತ್ರವಾಗಿದೆ. ಈ ಮೂಲಕ ಕೇರಳದ ಲಕ್ಷಾಂತರ ಮಂದಿ ಬಡ ಬುಡಕಟ್ಟು ಜನಾಂಗದ ಕುಟುಂಬಗಳನ್ನು ರಾಜ್ಯ ಸರಕಾರ ವಂಚಿಸಿದೆ ಎಂದು ಪರಿಶಿಷ್ಟ ವರ್ಗ ಮೋರ್ಚಾ ರಾಜ್ಯ ಅಧ್ಯಕ್ಷ ಮುಕುಂದನ್ ಪಳ್ಳಿಯರ ತಿಳಿಸಿದ್ದಾರೆ. ಎಸ್‌ಟಿ ಮೋರ್ಚಾ ಜಿಲ್ಲಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ಕಡು ಬಡತನಮುಕ್ತ ರಾಜ್ಯವೆಂಬ ಸುಳ್ಳು ಹಕ್ಕು ವಾದ ಮಂಡಿಸಿರುವುದರಿಂದ ಬುಡಕಟ್ಟು ಜನಾಂಗದವರ ಸಹಿತ ಬಡ ಜನರಿಗೆ ಆರ್ಥಿಕ ಸೌಲಭ್ಯಗಳು ಲಭಿಸದೆ …

ಗಡಿನಾಡ ಕನ್ನಡಿಗರಿಂದ ಹಕ್ಕೊತ್ತಾಯ: ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಧ್ವನಿಯೆತ್ತುವ ಕಾಲ ಸನ್ನಿಹಿತವಾಗಿದೆ- ಮಲಾರ್ ಜಯರಾಮ ರೈ

ಕಾಸರಗೋಡು: ಬಹುಭಾಷಾ ಸಂಸ್ಕೃತಿ ಹೊಂದಿರುವ ಕಾಸರಗೋಡಿನಲ್ಲಿ ಇಲ್ಲಿನ ಬಹುಭಾಷಿಗರನ್ನು ಬೆಸೆಯುವ ಕನ್ನಡ ಭಾಷೆಯನ್ನೇ ದಮನಿಸುವ ಕೆಲಸ ಸರಕಾರದ ಭಾಗದಿಂದ ನಡೆಯುತ್ತಿದೆ. ಆದ್ದರಿಂದ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತುವ ಕಾಲ ಸನ್ನಿಹಿತವಾಗಿದೆ ಎಂದು ಕನ್ನಡ ಹೋರಾಟಗಾರ ಮಲಾರ್ ಜಯರಾಮ ರೈ ನುಡಿದರು. ಕರ್ನಾಟಕ ಸಮಿತಿ ಕಾಸರಗೋಡು ಜಿಲ್ಲಾ ಘಟಕದ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಕನ್ನಡಿಗರ ಹಕ್ಕೊತ್ತಾಯ ದಿನಾಚರಣೆಯಂಗವಾಗಿ ಹಮ್ಮಿಕೊಳ್ಳಲಾದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇರಳ ಮತ್ತು ಕರ್ನಾಟಕ ರಾಜ್ಯಗಳು ತಮ್ಮ ೭೦ನೇ ರಾಜ್ಯೋತ್ಸವದ …

ಬಿಜೆಪಿ ಕೊಲ್ಯ ವಾರ್ಡ್ ಚುನಾವಣಾ ಸಮಿತಿ ಕಚೇರಿ ಉದ್ಘಾಟನೆ

ಮಧೂರು: ಬಿಜೆಪಿ ಮಧೂರು ಪಂಚಾಯತ್ ಕೊಲ್ಯ ವಾರ್ಡ್ ಚುನಾವಣಾ ಸಮಿತಿ ಕಚೇರಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ವಾರ್ಡ್ ಸಮಿತಿ ಅಧ್ಯಕ್ಷ ಬಾಲಕೃಷ್ಣ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಸೆಲ್ ಕೋ-ಆರ್ಡಿನೇಟರ್ ಸುಕುಮಾರ ಕುದ್ರೆಪ್ಪಾಡಿ, ಜಿಲ್ಲಾ ಸಮಿತಿ ಸದಸ್ಯ ರಾಧಾಕೃಷ್ಣ ಸೂರ್ಲು, ಮಧೂರು ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ., ಮಧೂರು ವೆಸ್ಟ್ ಏರಿಯಾ ಸಮಿತಿ ಅಧ್ಯಕ್ಷ ಮಾಧವ ಮಾಸ್ತರ್, ಮಧೂರು ಈಸ್ಟ್ ಏರಿಯಾ ಸಮಿತಿ ಅಧ್ಯಕ್ಷ ರವಿ ಗಟ್ಟಿ, …

ಕೇರಳವನ್ನು ಕಡುಬಡತನಮುಕ್ತ ರಾಜ್ಯವಾಗಿ ವಿದ್ಯುಕ್ತ  ಘೋಷಣೆ

. ರಾಜ್ಯ ನವಯುಗದ ಹೊಸ್ತಿಲಲ್ಲಿ-ಮುಖ್ಯಮಂತ್ರಿ . ವಿಶೇಷ ಅಧಿವೇಶನವನ್ನು . ಬಹಿಷ್ಕರಿಸಿ ವಿಧಾನಸಭೆಯ ಹೊರಗೆ ಧರಣಿ ಮುಷ್ಕರ ನಡೆಸಿದ ವಿಪಕ್ಷ ತಿರುವನಂತಪುರ: ಕೇರಳವನ್ನು ಕಡುಬಡತನಮುಕ್ತ ರಾಜ್ಯವನ್ನಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿದ್ಯುಕ್ತವಾಗಿ ಘೋಷಿಸಿದರು. ಕೇರಳ ರಾಜ್ಯ ರೂಪೀಕರಣ ದಿನ ವಾದ ಇಂದೇ ಈ ಘೋಷಣೆ  ಮೊಳ ಗಿಸಲಾಗಿದೆಯೆಂಬ ವಿಶೇಷತೆಯೂ ಇದಕ್ಕಿದೆ. ಕೇರಳವನ್ನು ಕಡುಬಡತನ ಮುಕ್ತ ರಾಜ್ಯವನ್ನಾಗಿ ಘೋಷಿಸಲು ಹಾಗೂ ರಾಜ್ಯ ಸರಕಾರ ಈತನಕ ಜ್ಯಾರಿಗೊಳಿಸಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಂಕ್ಷಿಪ್ತ …

ಉಪ್ಪಳದಲ್ಲಿ ನಿಗೂಢ ಸ್ಥಿತಿಯಲ್ಲಿ ಯುವಕನ ಮೃತದೇಹ ರೈಲು ಹಳಿ ಬದಿ ಪತ್ತೆ : ಪ್ಯಾಂಟ್‌ನ ಜೇಬಿನಲ್ಲಿ ಸಿರಿಂಜು, ಕೀಲಿಕೈ

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಸಮೀಪ ಯುವಕನೋರ್ವ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುವ ರೈಲ್ವೇ ಹಳಿ ಸಮೀಪದಲ್ಲಿ ಇಂದು ಬೆಳಿಗ್ಗೆ ಮೃತದೇಹ ಕಂಡುಬಂದಿದೆ.  ವ್ಯಕ್ತಿ ಪ್ಯಾಂಟ್ ಹಾಗೂ ಬನಿಯನ್ ಧರಿಸಿದ್ದಾನೆ.  ಈತ ಧರಿಸಿದ್ದನೆಂದು ಸಂಶಯಿಸಲಾಗುವ ಅಂಗಿಯನ್ನು ತೆಗೆದಿರಿಸಿದ ಸ್ಥಿತಿಯಲ್ಲಿದೆ. ಸುಮಾರು ೪೫ರ ಹರೆಯದ  ವ್ಯಕ್ತಿ  ಗಡ್ಡ ಬಿಟ್ಟಿದ್ದಾನೆ. ಪ್ಯಾಂಟ್‌ನ ಜೇಬಿನಿಂದ ವಾಹನದ ಕೀಲಿಕೈ ಹಾಗೂ ಸಿರಿಂಜು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯುವಕ  ಯಾವುದಾದರೂ ವಾಹನದಲ್ಲಿ ತಲುಪಿ ಎಲ್ಲಾದರೂ …

ಮಗನನ್ನು ಕಾಣಲು ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟ ತಂದೆ ಪ್ರಯಾಣ ಮಧ್ಯೆ ಸಾವು

ಕಾಸರಗೋಡು: ಮಗನನ್ನು ಕಾಣಲೆಂದು ಬೆಂಗಳೂರಿಗೆ ಹೊರಟ ತಂದೆ ಪ್ರಯಾಣ ಮಧ್ಯೆ ಬಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗಿ  ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ನಗರದ ಅಣಂಗೂರು ಸರಕಾರಿ ಆಯುರ್ವೇದ ಆಸ್ಪತ್ರೆ ಬಳಿಯ ಸುನಿತಾ ನಿವಾಸದ ಕೆ.ಕೆ. ಅಶೋಕನ್ (73) ಸಾವನ್ನಪ್ಪಿದ ವ್ಯಕ್ತಿ. ಇವರು ಖಾಸಗಿ ಬಸ್ಸಿನಲ್ಲಿ ಗುರುವಾರ ರಾತ್ರಿ ಕಾಸರಗೋಡಿ ನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದು ಹಾಸನ ತಲುಪಿದಾಗ ಅವರಿಗೆ ಹೃದಯಾಘಾತವುಂಟಾಗಿದೆ. ತಕ್ಷಣ ಅವರನ್ನು ಹಾಸನದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು  ಕಾಸರಗೋ ಡಿಗೆ …

ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಹಲ್ಲೆ: ಓರ್ವ ಆರೋಪಿ ಬಂಧನ: ಇನ್ನೋರ್ವನಿಗಾಗಿ ಶೋಧ

ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಹಲ್ಲೆಗೈದು ಅವಾಚ್ಯವಾಗಿ ನಿಂದಿಸಿದ ಪ್ರಕರಣ ದಲ್ಲಿ ಆರೋಪಿಯಾದ ಓರ್ವನನ್ನು ಬಂಧಿಸಲಾಗಿದೆ.   ಉಪ್ಪಳ ಹಿದಾಯತ್ ಬಜಾರ್‌ನ ಮೊಹಮ್ಮದ್ ಸಿರಾಜುದ್ದೀನ್ (26) ಎಂಬಾತ ಬಂಧಿತ ಆರೋಪಿಯೆಂದು ಪೊಲೀ ಸರು ತಿಳಿಸಿದ್ದಾರೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಅಕ್ಟೋಬರ್ 27ರಂದು ಅಪರಾಹ್ನ ೩.೩೦ಕ್ಕೆ  ಮಂಗಳೂರಿನಿಂದ ಕಾಸರ ಗೋಡಿಗೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್‌ಗೆ ಕುಂಬಳೆಯಿಂದ ಹತ್ತಿದ ಮೊಹಮ್ಮದ್ ಸಿರಾಜುದ್ದೀನ್ ಹಾಗೂ ಇನ್ನೋರ್ವ ಮಹಿಳೆ ಯರಿಗೆ ಬಸ್ ನಿಲ್ಲಿಸುತ್ತಿಲ್ಲವೆಂದು  ಆರೋಪಿಸಿ ಚಾಲಕ ಮಲಪ್ಪುರಂ ನಿವಾಸಿ ರಾಜೇಶ್ …

ಜೈಲಿನಲ್ಲಿರುವ ಆರೋಪಿಯಿಂದ ಪತ್ನಿಗೆ ಕೊಲೆ ಬೆದರಿಕೆ: ಆರೋಪಿ ವಿರುದ್ಧ ಮತ್ತೊಂದು ಕೇಸು

ಕಣ್ಣೂರು: ಕಣ್ಣೂರು ಸೆಂಟ್ರಲ್ ಜೈಲಿನಲ್ಲಿರುವ ಕಾಪಾ ಪ್ರಕರಣದ ಆರೋಪಿ ತನ್ನ ಪತ್ನಿಗೆ ಫೋನ್ ಕರೆ ಮಾಡಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ಆರೋಪವುಂಟಾಗಿದೆ. ಬೆದರಿಕೆ ಕರೆಯನ್ನು ರೆಕಾರ್ಡ್ ಮಾಡಿ ಪತ್ನಿ ಜೈಲು ಸೂಪರಿಂಟೆಂಡೆಂಟ್‌ಗೆ ಕಳುಹಿಸಿಕೊಟ್ಟಿದ್ದು, ಇದರ ಮುಂದುವರಿಕೆಯಾಗಿ ನಡೆದ ತನಿಖೆಯಲ್ಲಿ ಆರೋಪಿಯ ಕೈಯಲ್ಲಿ ಮೊಬೈಲ್ ಫೋನ್ ಪತ್ತೆಹಚ್ಚಲಾಗಿದೆ. ಜೈಲು ಸೂಪರಿಂಟೆಂಡೆಂಟ್ ಕೆ. ವೇಣು ನೀಡಿದ ದೂರಿನಂತೆ ೧೫ನೇ ನಂಬ್ರ ಸೆಲ್‌ನ ಕಾಪಾ ಪ್ರಕರಣದ ಆರೋಪಿ ಯಾದ ತೃಶೂರು ಪುದುಕ್ಕಾಡ್ ನಾಯರಂಗಾಡಿ ತಾಳೇಕಾಟಿಲ್ ಹೌಸ್‌ನ ಗೋಪ ಕುಮಾರ್ ವಿರುದ್ಧ ಇನ್ನೊಂದು ಕೇಸು …

ಶಬರಿಮಲೆ ಚಿನ್ನವನ್ನು ಕಳವುಗೈಯ್ಯಲು ಅವಕಾಶ ಮಾಡಿಕೊಟ್ಟ ಮಾಜಿ ಎಕ್ಸಿಕ್ಯೂಟಿವ್ ಅಧಿಕಾರಿ ಬಂಧನ

ಪಂದಳಂ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣಕ್ಕೆ  ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಇನ್ನೋರ್ವನನ್ನು ಬಂಧಿಸಿದೆ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ಈಗ ಮೂರಕ್ಕೇರಿದೆ. ಶಬರಿಮಲೆ ಕ್ಷೇತ್ರದ ಈ ಹಿಂದಿನ ಎಕ್ಸಿಕ್ಯೂಟಿವ್ ಆಫೀಸರ್ ಡಿ. ಸುಧೀಶ್ ಕುಮಾರ್ ಬಂಧಿತ ಆರೋಪಿ.  ತನಿಖಾ ತಂಡ ಈತನನ್ನು ನಿನ್ನೆ ಕಸ್ಟಡಿಗೆ ತೆಗೆದು ತಿರುವನಂತಪುರ   ಕ್ರೈಂ ಬ್ರಾಂಚ್ ಕಚೇರಿಗೆ ಸಾಗಿಸಿ   ಆತನನ್ನು ಸತತ ಮೂರು ತಾಸುಗಳ ತನಕ  ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡ ನಂತರ ಆತನನ್ನು …

ಕೆ. ಸುರೇಂದ್ರನ್ ನಡೆಸಿದ ಪಾದಯಾತ್ರೆಗಾಗಿ ಪಡೆದ ವಾಹನ ಮರಳಿ ನೀಡದ ಬಗ್ಗೆ ದೂರು ಶಿವಸೇನೆ ನೇತಾರರ ವಿರುದ್ಧ ಕೇಸು

ಕಾಸರಗೋಡು: ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ  ಕೆ. ಸುರೇಂದ್ರನ್ ಕಾಸರಗೋಡಿನಿಂದ ತಿರುವನಂತಪುರಕ್ಕೆ ನಡೆಸಿದ ಪಾದಯಾತ್ರೆಯ ಅಗತ್ಯಕ್ಕಾಗಿ ಪಡೆದ ವಾಹನವನ್ನು ಮರಳಿ ನೀಡಿಲ್ಲವೆಂಬ ಆರೋಪವುಂ ಟಾಗಿದೆ. ಕಾಞಂಗಾಡ್ ಕುಶಾಲ್ ನಗರದ ಕೆ.ಕೆ. ಸಂತೋಷ್ ಕುಮಾರ್‌ರ ಪತ್ನಿ ಗೀತು ರೈ (42) ನೀಡಿದ ದೂರಿನಂತೆ ಶಿವಸೇನೆ ಎರ್ನಾಕುಳಂ ಜಿಲ್ಲಾಧ್ಯಕ್ಷ ಸುಧೀರ್ ಗೋಪಿ, ಶಿವಸೇನೆ ರಾಜ್ಯಾಧ್ಯಕ್ಷ ಪೇರೂರ್‌ಕಡ ಹರಿಕುಮಾರ್ ಎಂಬಿವರ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ದೂರು ದಾತೆಯ ಪತಿಯ ಮಾಲ ಕತ್ವದಲ್ಲಿರುವ ಟಾಟಾ ಏಸ್ ವಾಹನವನ್ನು ಕೆ. ಸುರೇಂದ್ರನ್ ನಡೆಸಿದ ಪಾದಯಾತ್ರೆಗಾಗಿ …