ಮೋದಿ ಸರಕಾರದ ಆಡಳಿತದಲ್ಲಿ ತಾರತಮ್ಯವಿಲ್ಲ- ಎಂ.ಎಲ್. ಅಶ್ವಿನಿ

ಕಾಸರಗೋಡು: ಕೇರಳದಲ್ಲಿ ಎಡ-ಬಲ ಒಕ್ಕೂಟಗಳು ಮತ ಬ್ಯಾಂಕ್ ಉದ್ದೇಶ ಇರಿಸಿ ಯೋಜನೆಗಳನ್ನು ಜ್ಯಾರಿ ಗೊಳಿಸುವಾಗ ಯಾವುದೇ ತಾರತಮ್ಯ ವಿಲ್ಲದ ಆಡಳಿತವನ್ನು ನರೇಂದ್ರ ಮೋದಿ ಸರಕಾರ ನಡೆಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಜಿಲ್ಲಾ ಪಂಚಾಯತ್ ಸಿವಿಲ್ ಸ್ಟೇಷನ್ ವಾರ್ಡ್‌ಗಳ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಿವಿಲ್ ಸ್ಟೇಷನ್ ವಾರ್ಡ್‌ನಲ್ಲಿ ಮುಸ್ಲಿಂ ಲೀಗ್‌ನ ಪ್ರತಿನಿಧಿ ಹಲವು ಕಾಲಗಳಿಂದ ಗೆದ್ದುಬರುತ್ತಿದ್ದು ಕಾಸರಗೋಡು ಜಿಲ್ಲೆ ರೂಪೀಕರಣಗೊಂಡ ಸಮಯದಲ್ಲಿ ಇಲ್ಲಿನ ಜನರು ಒಡ್ಡಿದ ಬೇಡಿಕೆಗಳು ಈಗಲೂ ಕೂಡಾ ಪರಿಹರಿಸಲ್ಪಡದೆ …

ಎಡರಂಗದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದ ಎಡರಂಗದ ಜಿಲ್ಲಾ ಮಟ್ಟದ ಚುನಾವಣಾ ಪ್ರಣಾಳಿಕೆಯನ್ನು ನಿನ್ನೆ ಪ್ರೆಸ್‌ಕ್ಲಬ್‌ನಲ್ಲಿ ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್ ಬಿಡುಗಡೆಗೊಳಿಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶಾಸಕ ಎಂ. ರಾಜಗೋಪಾಲನ್, ಶಾಸಕ ಸಿ.ಎಚ್. ಕುಂಞಂಬು, ಎಡರಂಗ ಜಿಲ್ಲಾ  ಸಂಚಾಲಕ ಕೆ.ಪಿ. ಸತೀಶ್ಚಂದ್ರನ್, ಎಡರಂಗ ನೇತಾರರಾದ ಸಿ.ಪಿ. ಬಾಬು,  ಬೇಬಿ ಬಾಲಕೃಷ್ಣನ್,ಶಾನವಾಸ್ ಪಾದೂರು, ವಿ.ವಿ. ಕೃಷ್ಣನ್, ಪಿ.ಟಿ.ನಂದಕುಮಾರ್, ಅಸೀಸ್ ಕಡಪ್ಪುರಂ, ಕುರ‍್ಯಾಕೋಸ್ ಪರಂಬಿಲ್, ಕರೀಂ ಚಂದೇರಾ, ಪಿ.ಪಿ. ರಾಜು ಮತ್ತು ಪಿ.ವಿ. ಗೋವಿಂದನ್ …

ರಾಹುಲ್‌ಗೆ ಅಲ್ಪ ನಿರಾಳ: ಬಂಧನಕ್ಕೆ  ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ

ಕೊಚ್ಚಿ: ಯುವತಿಗೆ ಲೈಂಗಿಕ ಕಿರುಕುಳ ನೀಡಿ ಬಲವಂತವಾಗಿ ಗರ್ಭಪಾತ ನಡೆಸಿದ ಪ್ರಕರಣ ದಲ್ಲಿ ಆರೋಪಿಯಾದ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ. ಬಾಬು ಅವರ ಏಕ ಸದಸ್ಯ ಪೀಠ ಇಂದು ಬೆಳಿಗ್ಗೆ ಪರಿಶೀಲಿಸಿ  ಬಂಧಿಸದಂತೆ   ತಾತ್ಕಾಲಿಕ ತಡೆಯಾಜ್ಞೆ ಹೊರಡಿಸಿದೆ.  ಇದರಿಂದ ರಾಹುಲ್‌ಗೆ  ಅಲ್ಪ ನೆಮ್ಮದಿ ಮೂಡುವಂತಾಗಿದೆ.   ನಿರೀಕ್ಷಣಾ ಜಾಮೀನು ಕೋರಿ ರಾಹುಲ್ ಸಲ್ಲಿಸಿದ್ದ ಅರ್ಜಿಯ ಮೇಲಿನ ಮುಂದಿನ ಪರಿಶೀಲನೆಯನ್ನು ಹೈಕೋರ್ಟ್ ಡಿ. 15ಕ್ಕೆ ಮುಂದೂಡಿದೆ.     ನಿರೀಕ್ಷಣಾ ಜಾಮೀನು …

ಉಪ್ಪಳದಲ್ಲಿ ಮಹಿಳಾ ಬಿಎಲ್‌ಒರನ್ನು ತಡೆದು ನಿಲ್ಲಿಸಿ ಬೆದರಿಕೆ: ಎಸ್‌ಐಆರ್ ಮಾಹಿತಿಗಳನ್ನು ವಾಟ್ಸಪ್‌ನಲ್ಲಿ ಹಂಚಿದ ಬಿಜೆಪಿ ಕಾರ್ಯಕರ್ತ ಸೆರೆ

ಉಪ್ಪಳ: ಮಹಿಳಾ ಬಿಎಲ್‌ಒರನ್ನು ತಡೆದು ನಿಲ್ಲಿಸಿ ಎಸ್‌ಐಆರ್ ಮಾಹಿತಿ ಗಳನ್ನು ಫೋನಿಗೆ ವರ್ಗಾಯಿಸಿ ವಾಟ್ಸಪ್ ಗ್ರೂಪ್‌ನಲ್ಲಿ ಪ್ರಚಾರಪಡಿಸಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ ಬಿಜೆಪಿ ಕಾರ್ಯ ಕರ್ತ ಉಪ್ಪಳ ಮಣಿಮುಂಡ ನಿವಾಸಿ ಇ.ಎಸ್. ಅಮಿತ್ (38)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಅಪರಾಹ್ನ 2.30 ಕ್ಕೆ ಉಪ್ಪಳ ಬಸ್ ನಿಲ್ದಾಣ ಸಮೀಪದಲ್ಲಿ ಘಟನೆ ನಡೆದಿದೆ. ಬಿಎಲ್‌ಒ ಆದ ಬೇಕೂರು ಕನ್ನಟಿಪಾರೆ ಮಾತೃನಿಲಯ ನಿವಾಸಿ ಎ. ಸುಭಾಷಿಣಿ (41) ದೂರು ನೀಡಿದ್ದಾರೆ. ಎಸ್‌ಐಆರ್ ಡಾಟಾ ಸಂಗ್ರಹ ನಡೆಸಿ ಹಿಂತಿರುಗು ತ್ತಿದ್ದಾಗ ಘಟನೆ …

ನೀಲೇಶ್ವರದಲ್ಲಿ ಕ್ಷೇತ್ರದಿಂದ ತಿರುವಾಭರಣ, ಹಣ ಕಳವು

ಹೊಸದುರ್ಗ: ನೀಲೇಶ್ವರ ದಲ್ಲಿ  ಕ್ಷೇತ್ರವೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಸಹಿತ ವಿವಿಧ ಸಾಮಗ್ರಿಗಳನ್ನು ದೋಚಿದ್ದಾರೆ. ನೀಲೇಶ್ವರ ಅಯ್ಯಂಗುನ್ನತ್ತ್ ಶ್ರೀ ಭಗವತೀ ಕ್ಷೇತ್ರದಿಂದ  ಕಳವು ನಡೆದಿದೆ. ಗರ್ಭಗುಡಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದೇವಿ ಯ ವಿಗ್ರಹದಿಂದ ತಿರುವಾಭರಣ ಹಾಗೂ ಕಾಣಿಕೆ ಹಣವನ್ನು ದೋಚಿ ದ್ದಾರೆಂದು ದೂರಲಾಗಿದೆ. ಇಂದು ಬೆಳಿಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ. ನೀಲೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.

ಮಣಿಯಂಪಾರೆಯ ಯುವಕ ಒಮಾನ್‌ನಲ್ಲಿ ಸರೋವರಕ್ಕೆ ಬಿದ್ದು ಮೃತ್ಯು

ಪೆರ್ಲ: ಮಣಿಯಂಪಾರೆ ನಿವಾಸಿ ಯುವಕನೋರ್ವ ಒಮಾನ್‌ನಲ್ಲಿ ಸರೋವರಕ್ಕೆ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಣಿಯಂ ಪಾರೆಯ  ಶಾಹುಲ್ ಹಮೀದ್ ಎಂಬವರ ಪುತ್ರ ಆಶಿಕ್ (21) ಮೃತಪಟ್ಟ  ದುರ್ದೈವಿ.  ಒಮಾನ್‌ನ ವಾದಿಶಾಬಿ ಎಂಬಲ್ಲಿರುವ ಸರೋ ವರದಲ್ಲಿ ನಿನ್ನೆ ಮಧ್ಯಾಹ್ನ  ಸ್ನೇಹಿತ ರೊಂದಿಗೆ ಆಶಿಕ್ ಸ್ನಾನಕ್ಕಿಳಿದಿ ದ್ದರೆನ್ನಲಾಗಿದೆ.   ಮೇಲಿನಿಂದ ಸರೋವರಕ್ಕೆ ಹಾರಿದಾಗ ತಲೆ ಕಲ್ಲಿಗೆ ಬಡಿದು ಇವರು ಗಂಭೀರ ಗಾಯ ಗೊಂಡು ತಕ್ಷಣ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ.  ಮೃತದೇಹವನ್ನು ಊರಿಗೆ ತರಲು ಕೆಎಂಸಿಸಿ ನೇತೃತ್ವದಲ್ಲಿ ಕ್ರಮ ಆರಂಭಿಸಲಾಗಿದೆ.  ಏಳು ತಿಂಗಳ …

ಬಸ್ ಪ್ರಯಾಣ ವೇಳೆ ಯುವತಿಯ ಬ್ಯಾಗ್‌ನಿಂದ 50 ಸಾವಿರ ರೂ. ಕಳವು

ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಬ್ಯಾಗ್‌ನಿಂದ 50 ಸಾವಿರ ರೂ.ಗಿಂತಲೂ ಹೆಚ್ಚು ಮೊತ್ತ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಬಂದ್ಯೋಡು ಅಡ್ಕ ಒಳಾಕ್ ರೋಡ್‌ನ ಬಶೀರ್ ಎಂಬವರ ಪತ್ನಿ ನೌಶೀದರ ಬ್ಯಾಗ್‌ನಿಂದ ಹಣ ಕಳವಿಗೀಡಾಗಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ನೌಶೀದ ನಿನ್ನೆ ಸಂಜೆ 4.15ಕ್ಕೆ  ಬಂದ್ಯೋಡಿನಿಂದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ  ಕುಂಬಳೆಗೆ  ತೆರಳಿದ್ದರು.   ಕುಂಬಳೆಯಿಂದ ಮನೆಗೆ ಮರಳಿದ ಬಳಿಕ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ …

ಎಸ್‌ಐಆರ್ ಡಿ. 18ರ ತನಕ ವಿಸ್ತರಣೆ: ಕೇರಳದಲ್ಲಿ 20 ಲಕ್ಷದಷ್ಟು ಮತದಾರರು ನಾಪತ್ತೆ

ಕಾಸರಗೋಡು: ಕೇರಳದಲ್ಲಿ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕ್ರಮ ಮುಂದುವರಿಯುತತಿರುವಂತೆಯೇ ರಾಜ್ಯದ ಮತದಾರ ಯಾದಿಯಲ್ಲಿ ಹೆಸರು ಒಳಗೊಂಡಿರುವವರ ಪೈಕಿ 20,29,703 ಮಂದಿಯನ್ನು ಪತ್ತೆಹಚ್ಚಲು ಈತನಕ ಸಾಧ್ಯವಾಗಲಿಲ್ಲ ವೆಂದು ಕೇರಳದ ಮುಖ್ಯ ಚುನಾವಣಾ ಆಯೋಗ ತಿಳಿಸಿದೆ. ಎಸ್‌ಐಆರ್‌ಗಾಗಿ ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ವಿತರಣೆ ಈಗ ಮುಂದುವರಿಯುತ್ತಿರುವಂ ತೆಯೇ ಅದರಲ್ಲಿ 20,29,703 ರಷ್ಟು ಮತದಾರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅದರಿಂದಾಗಿ ಅವರಿಗೆ ಎನ್ಯುಮರೇಶನ್ ಫಾರ್ಮ್ ವಿತರಿಸಲು ಸಾಧ್ಯವಾಗಿಲ್ಲವೆಂದು ಚುನಾವಣಾ ಆಯೋಗ ತಿಳಿಸಿದೆ.  ಇವರಲ್ಲಿ ನಿಧನ ಹೊಂದಿದವರು. ಊರಲ್ಲಿಲ್ಲದವರು, ವಾಸಸ್ಥಳ …

ಕಳವುಗೈದ ಕಾರನ್ನು ನಂಬ್ರ ಪ್ಲೇಟ್ ಬದಲಿಸಿ ಮಾರಾಟ: 1.40 ಲಕ್ಷ ರೂ. ಓರ್ವ ಆರೋಪಿಯ ಮನೆಯಿಂದ ಪತ್ತೆ

ಕಾಸರಗೋಡು: ಉಳಿಯತ್ತಡ್ಕ ಸಮೀಪದ ಇಜ್ಜತ್‌ನಗರ ಸೆಕೆಂಡ್ ಸ್ಕ್ರೀಟ್ ಮುಸ್ತಫ ಮಂಜಿಲ್‌ನ ಮೊಹಮ್ಮದ್ ಮುಸ್ತಫ ಎಂಬವರ ಮನೆಯಂಗಳದಿಂದ ಡಿಸೆಂಬರ್ 1ರಂದು ರಾತ್ರಿ ಕಳವುಗೈದ 12.8 ಲಕ್ಷ ರೂ. ಮೌಲ್ಯದ ಕಾರನ್ನು  ಈ ಪ್ರಕರಣದ ಮೂರನೇ ಆರೋಪಿ ಪಾಲಕ್ಕಾಡ್ ಜಿಲ್ಲೆಯ ಮಣ್ಣಾರ್ ಕಾಡ್ ಪುಂಜಂಕೋಡ್ ಪುದುಕುಳಂ ವೀಟಿಲ್‌ನ ಪಿ.ಕೆ. ಅಸರುದ್ದೀನ್ (36) 1.7 ಲಕ್ಷ ರೂ.ಗೆ ಇತರ ಇಬ್ಬರು ಆರೋಪಿಗಳಿಗೆ ಮಾರಾಟ ಮಾಡಿದ್ದನೆಂದು ವಿದ್ಯಾನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅಸರುದ್ದೀನ್‌ನ ಹೊರತಾಗಿ ದೇಳಿ ಅರಮಂಗಾನ …

ಕಣಜದ ಹುಳುಗಳ ದಾಳಿಯಿಂದ  ಕ್ಷೇತ್ರ ಸ್ಥಾನಿಕ ಮೃತ್ಯು

ಕಾಸರಗೋಡು: ಕಣಜದ ಹುಳು ಗಳ ದಾಳಿಯಿಂದ ಗಂಭೀರ ಅಸ್ವಸ್ಥಗೊಂಡು  ವ್ಯಕ್ತಿಯೊಬ್ಬರು ಮೃತ ಪಟ್ಟ ಘಟನೆ ನಡೆದಿದೆ.  ನೆಲ್ಲಿಕ್ಕಾತು ರುತ್ತಿ ಕಳಗಂ ನಿಲಮಂಗಲತ್ತ್ ಭಗವತೀ ಕ್ಷೇತ್ರದ ಸ್ಥಾನಿಕ  ಕುಟ್ಟಿವಯಲ್‌ನ ಕಂಡೋತ್ತ್‌ಪುರತ್ತ್ ಕೆ.ಪಿ. ಕುಮಾರನ್ (55) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಕ್ಷೇತ್ರದ ಪಾಟು ಉತ್ಸವದಂಗವಾಗಿ ಮನೆಗಳಿಗೆ ಸಂದರ್ಶನ ನಡೆಸಿ ಕುಟ್ಟಿವಯಲ್‌ನ ತರವಾಡಿನಲ್ಲಿ  ವಿಶ್ರಾಂತಿ  ಪಡೆಯು ತ್ತಿದ್ದರು. ಈ ವೇಳೆ ಕಣಜದ ಹುಳಗಳು ಅವರ ಮೇಲೆ ದಾಳಿ ನಡೆಸಿವೆ. ಈ ವೇಳೆ ಅವರ ಜೊತೆಗಿದ್ದವರು ಓಡಿ ಪಾರಾಗಿದ್ದಾರೆ.  ಕುಮಾರನ್ ಓಡಿ …