ಬಜಕೂಡ್ಲು ಕ್ಲಬ್ ವತಿಯಿಂದ ಜನಪ್ರತಿನಿಧಿಗಳಿಗೆ ಗೌರವ

ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಂಜೇಶ್ವರ ಬ್ಲೋಕ್, ಎಣ್ಮಕಜೆ ಪಂಚಾಯತ್‌ಗೆ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ನಡೆಯಿತು. ಕ್ಲಬ್‌ನ ಅಧ್ಯಕ್ಷ ಚಂದ್ರ ಅಮೆಕ್ಕಳ ಅಧ್ಯಕ್ಷತೆ ವಹಿಸಿದರು. ಸಮಾಜಸೇವಕ ಸದಾಶಿವ ಭಟ್ ಹರಿನಿಲಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬ್ಲೋಕ್ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾದ ವಿದ್ಯಾ ಕುಮಾರಿ, ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ ಕೃಷ್ಣಪ್ಪ ಬಜಕೂಡ್ಲುರನ್ನು ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಗೌರವಿಸಿದರು. ಕ್ಲಬ್‌ನ ಗೌರವಾಧ್ಯಕ್ಷ ಪದ್ಮನಾಭ ಸುವರ್ಣ, ಹಿರಿಯ ಸದಸ್ಯ ಮಹಾಬಲ ರೈ, ಚಂದ್ರಶೇಖರ …

ಬೇಕಲದಲ್ಲಿ ಸಂಗೀತ ಕಾರ್ಯಕ್ರಮ ವೇಳೆ ಇಂಜಿನಿಯರಿಂಗ್ ವಿದ್ಯಾರ್ಥಿ ರೈಲು ಢಿಕ್ಕಿ ಹೊಡೆದು ಮೃತ್ಯು

ಕಾಸರಗೋಡು: ಬೇಕಲ ಬೀಚ್ ಫೆಸ್ಟ್‌ನಲ್ಲಿ ನಿನ್ನೆ ರಾತ್ರಿ ನಡೆದ ವೇಡನ್‌ರ ಸಂಗೀತ ಕಾರ್ಯಕ್ರಮ ವೀಕ್ಷಿಸಲು ತಲು ಪಿದ ಇಂಜಿನಿಯರಿಂಗ್ ವಿದ್ಯಾ ರ್ಥಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೊಯಿನಾಚಿ ಪರಂಬ್ ಶಿವಮಂ ಹೌಸ್‌ನ ವೇಣುಗೋಪಾಲನ್ ನಾಯರ್ ರ ಪುತ್ರ ಎಂ. ಶಿವನಂದನ್ (19) ಮೃತಪಟ್ಟ ದುರ್ದೈವಿ.  ಇವರು ಮಂಗಳೂರಿನಲ್ಲಿ ಇಂಜಿನಿ ಯರಿಂಗ್ ವಿದ್ಯಾರ್ಥಿಯಾಗಿದ್ದರು. ನಿನ್ನೆ ರಾತ್ರಿ ೯ ಗಂಟೆ ವೇಳೆ ಘಟನೆ ನಡೆದಿದೆ. ನೆರೆಮನೆ ನಿವಾಸಿಯೂ, ಸ್ನೇಹಿತನೂ ಆದ ಪರಂಬ್ ಕುಂಡಡ್ಕ ಹೌಸ್‌ನ …

ಬೈಕ್ ತಡೆದು ನಿಲ್ಲಿಸಿ ಸವಾರನಿಗೆ ಇರಿತ : ಇಬ್ಬರು ಆರೋಪಿಗಳ ಬಂಧನ

ಉಪ್ಪಳ: ಬೈಕ್ ತಡೆದು ನಿಲ್ಲಿಸಿ ವ್ಯಕ್ತಿಗೆ ಇರಿದ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ಕರ್ನಾಟಕದ ತೌಡುಗೋಳಿ ನಿವಾಸಿ ಅಬ್ದುಲ್ ಖಾದರ್ ತನ್ಸೀಫ್ (26) ಹಾಗೂ ಕಡಂಬಾರ್‌ನ ಅಬ್ದುಲ್ ರಜಾಕ್ (40) ಎಂಬಿವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ  ಸ್ಪೆಷಲ್ ಸ್ಕ್ವಾಡ್ ಕರ್ನಾಟಕದ ತೌಡುಗೋಳಿಯಿಂದ ಸೆರೆಹಿಡಿದಿದೆ. ಆರೋಪಿಗಳು ಕಾರಿನಲ್ಲಿ ಸಂಚರಿಸು ತ್ತಿದ್ದ ವೇಳೆ ಸೆರೆಹಿಡಿಯಲಾಗಿದೆ. ಕಾರನ್ನು ಪೊಲೀಸರು ಪರಿಶೀಲಿಸಿ ದಾಗ ಅದರೊಳಗೆ ಮಾರಕಾಯು ಧಗಳು ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಉಪ್ಪಳ ಕೋಡಿಬೈಲ್ ನಿವಾಸಿ ಜಕರಿಯ (61) ಎಂಬವರಿಗೆ …

ತರವಾಡು ಮನೆಯಿಂದ ಮಸೀದಿಗೆ ತೆರಳುತ್ತಿದ್ದ ಪಂಡಿತ ವಾಹನ ಢಿಕ್ಕಿ ಹೊಡೆದು ಮೃತ್ಯು

ಕುಂಬಳೆ: ಕರ್ನಾಟಕದ ಉಪ್ಪಿನಂಗಡಿ ಆತೂರಿನಲ್ಲಿರುವ ತರವಾಡು ಮನೆಗೆ ಕಾರ್ಯಕ್ರಮ ಕ್ಕೆಂದು ಹೋದ  ಪಂಡಿತ  ಮಸೀದಿಯಲ್ಲಿ ನಮಾಜಿಗಾಗಿ ತೆರಳುತ್ತಿದ್ದ ವೇಳೆ ವಾಹನ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಕಟ್ಟತ್ತಡ್ಕ ಮುಹಿಮ್ಮಾತ್ ನಗರದಲ್ಲಿ ವಾಸಿಸುವ ಅಬ್ದುಲ್ ಖಾದರ್ ಸಖಾಫಿ (54) ಮೃತ ವ್ಯಕ್ತಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಇವರು ಆತೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮಸೀದಿಯಲ್ಲಿ ನಮಾಜಿಗಾಗಿ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಇವರಿಗೆ ಪಿಕಪ್ ವ್ಯಾನ್ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ …

ಮನೆ ಬಿಟ್ಟು ಹೋದ ಬಾಲಕಿಗೆ ಲೈಂಗಿಕ ದೌರ್ಜನ್ಯ : ನೆಕ್ರಾಜೆ ನಿವಾಸಿಗಳಾದ ಇಬ್ಬರು ಕಲ್ಲಿಕೋಟೆಯಲ್ಲಿ ಬಂಧನ

ಬದಿಯಡ್ಕ: ಮನೆಯವರೊಂದಿಗೆ ಸಿಟ್ಟುಗೊಂಡು ಹೊರಹೋದ 16ರ ಹರೆಯದ ಬಾಲಕಿಗೆ ಮಾದಕವಸ್ತು ನೀಡಿ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ನೆಕ್ರಾಜೆ ನಿವಾಸಿಗಳಾದ ಇಬ್ಬರನ್ನು ಕಲ್ಲಿಕೋಟೆ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ಚರ್ಲಡ್ಕದ ಮೊಹಮ್ಮದ್ ಶಮೀಮ್, ನೆಕ್ರಾಜೆಯ ಮೊಹಮ್ಮದ್ ರೈಸ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ತಾಮರಶ್ಶೇರಿಯ ಮೊಹಮ್ಮದ್ ಸಾಲಿಹ್, ಶಬೀರ್ ಅಲಿ ಎಂಬಿವರನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿತ್ತು. ಇತ್ತೀಚೆಗೆ 16ರ ಹರೆಯದ ಬಾಲಕಿ ಮನೆಯವರೊಂದಿಗೆ ಸಿಟ್ಟುಗೊಂಡು ಕಲ್ಲಿಕೋಟೆ ಬೀಚ್‌ಗೆ ತಲುಪಿದ್ದಳು. ಈ ವೇಳೆ ಬಾಲಕಿಯನ್ನು ಪುಸಲಾಯಿಸಿದ ಆರೋಪಿಗಳು ಸ್ನೇಹಿತನೋರ್ವನ ವಾಸ …

ಕನ್ನಡ- ತಮಿಳು ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ

ಬೆಂಗಳೂರು: ಕನ್ನಡ- ತಮಿಳು ಕಿರುತೆರೆ ನಟಿ ಸಿ.ಎಂ. ನಂದಿನಿ (26) ಯವರನ್ನು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಬಾಡಿಗೆಗೆ ವಾಸಿಸುವ ಕೆಂಗೇರಿಯ ಮನೆಯಲ್ಲಿ ನಟಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೊಠಡಿಯಿಂದ ಆತ್ಮಹತ್ಯಾ ಪತ್ರವನ್ನು ಪತ್ತೆಹಚ್ಚಲಾಗಿದೆ. ವೈಯಕ್ತಿಕ ಸಮಸ್ಯೆಗಳು ತನ್ನನ್ನು ಬೇಟೆಯಾಡುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ನಂದಿನಿಯನ್ನು ಫೋನ್ ಮೂಲಕ ಕರೆದಾಗ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ವಾಸ ಸ್ಥಳದ ಸಮೀಪ ನಿವಾಸಿಗಳಿಗೆ ತಿಳಿಸಿದ್ದು, ಅವರು ನೋಡಿದಾಗ ಕಿಟಿಕಿಗೆ ಶಾಲು ಉಪ ಯೋಗಿಸಿ ನೇಣು ಬಿಗಿದ …

ಬೇಕಲ ಫೆಸ್ಟ್‌ನಲ್ಲಿ ನೂಕುನುಗ್ಗಲು ಸಂಘಾಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು-ಎಂ.ಎಲ್. ಅಶ್ವಿನಿ

ಕಾಸರಗೋಡು: ಬೇಕಲ ಫೆಸ್ಟ್‌ನಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಹಲವರು ಗಾಯಗೊಂಡಿರುವುದು ಹಾಗೂ ಪೊಯಿನಾಚಿ ನಿವಾಸಿಯಾದ ಯುವಕ ರೈಲು ಢಿಕ್ಕಿ ಹೊಡೆದು ಸಾವಿಗೀಡಾದ ಘಟನೆಗೆ ಸಂಬಂಧಿಸಿ ಫೆಸ್ಟ್‌ನ ಸಂಘಾಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾ ಯಿಸಿದ್ದಾರೆ. ರಜಾ ಕಾಲವಾದು ದರಿಂದ ಬೇಕಲ ಫೆಸ್ಟ್‌ಗೆ ಭಾರೀ ಜನರು ಸೇರುವ ಬಗ್ಗೆ ತಿಳಿದಿದ್ದರೂ ನೂಕು ನುಗ್ಗಲು ಉಂಟಾಗುವುದನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳದಿರು ವುದು ಜಿಲ್ಲಾಡಳಿತದ ಕರ್ತವ್ಯ ಲೋಪವಾಗಿದೆ. ನವಂಬರ್ 23ರಂದು ಕಾಸರಗೋಡು ನಗರದಲ್ಲಿ ಇದೇ …

ಕಾಸರಗೋಡು ಲೀಗ್‌ನ ಅಭ್ಯರ್ಥಿ ಬಗ್ಗೆ ಚರ್ಚೆ ಸಕ್ರಿಯ: ಎನ್.ಎ. ನೆಲ್ಲಿಕುನ್ನುರಿಗೆ ಸಾಧ್ಯತೆ?

ಕಾಸರಗೋಡು: ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಸೋಲೆಂಬುದನ್ನು ಕಾಣದ ಐಕ್ಯರಂಗದ ಹಾಗೂ ಮುಸ್ಲಿಂ ಲೀಗ್‌ನ ವಿಧಾನಸಭಾ ಮಂಡಲಗಳಲ್ಲಿ ಒಂದಾಗಿದೆ ಕಾಸರಗೋಡು. ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಈ ಮಂಡಲದಲ್ಲಿ ಐಕ್ಯರಂಗ ಗಳಿಸಿದ ಮುನ್ನಡೆ, ಮಂಡಲದಲ್ಲಿ ಇಂದಿನವರೆಗೆ ಸೋಲು ಕಂಡುಬರದಿರುವುದು ಲೀಗ್‌ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ. ಟಿ.ಎ. ಇಬ್ರಾಹಿಂ, ಸಿ.ಟಿ. ಅಹಮದಾಲಿ ಜಯಗಳಿಸಿದ ಕಾಸರಗೋಡು ಮಂಡಲದಲ್ಲಿ ೧೫ ವರ್ಷದಿಂದ ಶಾಸಕ ಎನ್.ಎ. ನೆಲ್ಲಿಕುನ್ನು ಮುಂದುವರಿ ಯುತ್ತಿದ್ದಾರೆ. ಐಎನ್‌ಎಲ್‌ನ ಮುಖಂಡನಾಗಿದ್ದ ನೆಲ್ಲಿಕುನ್ನು ಕಾಸರಗೋಡು ಮಂಡಲದಿಂದ ಸ್ಪರ್ಧಿಸಿದ್ದರು. ಆ ಬಳಿಕ ಐಎನ್‌ಎಲ್ ನಿಂದ ಮಾತೃಸಂಘಟನೆಯಾದ ಮುಸ್ಲಿಂ …

ವಿವಾಹ ವಿನಂತಿ ತಿರಸ್ಕರಿಸಿದ ದ್ವೇಷದಿಂದ ಯುವತಿಯ ಕೊಲೆಗೈದ ಆರೋಪಿ ಚಿಕಿತ್ಸಾ ಕೇಂದ್ರದಿಂದ ಪರಾರಿ

ಕಲ್ಲಿಕೋಟೆ: ಪೆರಿಂದಲ್‌ಮಣ್ಣ ದೃಶ್ಯ ಕೊಲೆ ಪ್ರಕರಣದ ಆರೋಪಿ ವಿನೀಶ್ ಕುದಿರವಟ್ಟಂ ಮಾನಸಿಕ ಆರೋಗ್ಯ ಕೇಂದ್ರದಿಂದ ಪರಾರಿಯಾಗಿದ್ದಾನೆ. ಇಲ್ಲಿನ ೩ನೇ ವಾರ್ಡ್‌ನಲ್ಲಿ ವಿನೀಶ್ ಚಿಕಿತ್ಸೆಯಲ್ಲಿದ್ದನು. ಶೌಚಾಲಯದ ಗೋಡೆ ಕೊರೆದು ಈತ ಪರಾರಿಯಾಗಿದ್ದಾನೆ. ಬಳಿಕ ಆವರಣಗೋಡೆಯನ್ನು ಹಾರಿದ್ದಾನೆ. ಈತನ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿವಾಹ ವಿನಂತಿಯನ್ನು ತಿರಸ್ಕರಿಸಿದ ಪೆರಿಂದಲ್‌ಮಣ್ಣದ ದೃಶ್ಯ ಎಂಬ ಯುವತಿಯನ್ನು ಕೊಲೆಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಕಣ್ಣೂರು ಸೆಂಟ್ರಲ್ ಜೈಲ್‌ನಲ್ಲಿದ್ದ ಈತನನ್ನು ಮಾನಸಿಕ ಅಸ್ವಸ್ಥತೆ ಪ್ರಕಟಪಡಿಸಿದ ಹಿನ್ನೆಲೆಯಲ್ಲಿ ಕುದಿರವಟ್ಟಂ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ …

ಜಿಲ್ಲಾ ಶಾಲಾ ಕಲೋತ್ಸವ: ಫುಟ್ಬಾಲ್ ನಾಡಿನಲ್ಲಿ ಸಾಂಸ್ಕೃತಿಕ ಹಬ್ಬದ ಮೆರುಗು

ಕಾಸರಗೋಡು: ಇಶಾಲ್ ಗ್ರಾಮ ಅಥವಾ ಫುಟ್ಬಾಲ್ ನಾಡು ಎಂದೇ ತಿಳಿಯಲ್ಪಡುವ ಮೊಗ್ರಾಲ್ ಎಂಬ ಪ್ರದೇಶದಲ್ಲಿ ನಡೆಯುತ್ತಿರುವ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ನಾಡಿನಲ್ಲಿ ಹಬ್ಬದ ಕಳೆ ಮೂಡಿಸಿದೆ. ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ ನಿನ್ನೆಯಿಂದ ಆರಂಭಗೊಂಡು ನಾಳೆವರೆಗೆ ನಡೆಯಲಿರುವ ಈ ಕಲೋತ್ಸವದಲ್ಲಿ 4000ದಷ್ಟು ಪ್ರತಿಭೆಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವರು. ಇಶಾಲ್ ಎಂದರೆ ಸಂಗೀತಕ್ಕೆ ಸಂಬಂಧಪಟ್ಟದ್ದು ಎಂಬ ಅರ್ಥವಿದೆ. ಆದ್ದರಿಂದಲೇ ಕಲೋತ್ಸವ ವೇದಿಕೆ ಗಳಿಗೆ ಇಶಾಲ್, ಗಝಲ್, ಸಾರಂಗಿ, ಸಿತಾರ್, ಶೆಹನಾ, ಭೆರವ್, ಖಾಯಲ್, ಖವಾಲಿ, ದ್ರುಪತ್, ಮಲ್ಹರ್, ದರ್ಬಾರಿ, ಸಾಂತ್ವನಂ …