ಅಕ್ರಮ ಹೊಯ್ಗೆ ಸಾಗಾಟದ ಬಗ್ಗೆ ಮಾಹಿತಿ ನೀಡಿದ ಶಂಕೆಯಿಂದ : ಯುವಕನಿಗೆ ಹಲ್ಲೆ: ಮೂವರ ವಿರುದ್ಧ ನರಹತ್ಯಾಯತ್ನ ಪ್ರಕರಣ ದಾಖಲು

ಕುಂಬಳೆ: ಅಕ್ರಮವಾಗಿ ಹೊಯ್ಗೆ ಸಾಗಾಟದ ಬಗ್ಗೆ ಪೊಲೀಸರಿಗೆ ಗುಪ್ತ ಮಾಹಿತಿ ನೀಡಿದ ಶಂಕೆಯ ಹೆಸರಲ್ಲಿ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿದ ದೂರಿನಂತೆ ಮೂವರ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಗ್ರಾಲ್  ಮುಸ್ಲಿಂ ಲೀಗ್ ಕಚೇರಿ ಬಳಿಯ ಬೈತುಲ್ ಸುರೂಲ್ ನಿವಾಸಿ ಅಬ್ದುಲ್ಲ ಅರ್ಶಾದ್ (35) ಎಂಬವರು ನೀಡಿದ ದೂರಿನಂತೆ ಮೊಗ್ರಾಲ್ ನಿವಾಸಿಗಳಾದ ಗಫೂರ್, ತನ್ಸೀಫ್ ಮತ್ತು ಸನದ್ ಎಂಬವರ ವಿರುದ್ಧ  ಈ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಹೊಯ್ಗೆ ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿ …

ಮಂಗಲ್ಪಾಡಿ ಪಂ. ಮಟ್ಟದ ಬೃಹತ್ ಹಿಂದೂ ಸಮಾಜೋತ್ಸವ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ಮಟ್ಟದ ಬೃಹತ್ ಹಿಂದೂ ಸಮಾಜೋತ್ಸವ ನಿನ್ನೆ ಸಂಜೆ ಪ್ರತಾಪನಗರದ ಶಿವಶಕ್ತಿ ಮೈದಾನದಲ್ಲಿ ಸಾವಿವಾರು ಮಂದಿಯ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು. ಮಂಗಲ್ಪಾಡಿ ಮನೆತನದ ಹಿರಿಯರಾದ ಸುಫಲಚಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸಮಿತಿಯ ರಕ್ಷಾಧಿಕಾರಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಸಂಯೋಜಕ್ ಮನೋಹರ ಮಠದ್ ದಿಕ್ಸೂಚಿ ಭಾಷಣ ಮಾಡಿದರು. ಸಮಿತಿ ಅಧ್ಯಕ್ಷ ಸಿ.ಎಸ್.ಕೃಷ್ಣಪ್ಪ ಐಲ್ ಉಪಸ್ಥಿತರಿದ್ದರು. ಆರ್.ಎಸ್.ಎಸ್ ಮಂಡಲ ಕಾರ್ಯವಾಹ ಶ್ರೀಧರ ಶೆಟ್ಟಿ …

ತಲೆಹೊರೆ ಕಾರ್ಮಿಕರ ಕನಿಷ್ಠ ಪಿಂಚಣಿ 5000 ರೂ.ಗೇರಿಸಬೇಕು-ಬಿಎಂಎಸ್

ಕಾಸರಗೋಡು: ತಲೆಹೊರೆ ಕಾರ್ಮಿಕರಿಗೆ ಕನಿಷ್ಠ ಪಿಂಚಣಿ 5000 ರೂಪಾಯಿಗೇರಿಸಬೇಕೆಂದು ಹೆಡ್ ಲೋಡ್ ಆಂಡ್ ಜನರಲ್ ಮಜ್ದೂರ್ ಸಂಘ್ (ಬಿಎಂಎಸ್) ಜಿಲ್ಲಾ ಸಮ್ಮೇಳನ ಒತ್ತಾಯಿಸಿದೆ. ಉಳಿಯತ್ತಡ್ಕದ ಶಕ್ತಿ ಸಭಾ ಭವನದಲ್ಲಿ ನಡೆದ ಸಮ್ಮೇಳನವನ್ನು ಫೆಡರೇಶನ್ ರಾಜ್ಯ ಅಧ್ಯಕ್ಷ ಕೆ. ಜಯಕುಮಾರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ವಿ. ಬಾಬು ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ಪಿ. ಮುರಳೀಧರನ್, ಉಪೇಂದ್ರನ್ ಕೋಟೆಕಣಿ ಮಾತನಾಡಿದರು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಭಾಸ್ಕರನ್ ಚೆಂಬಿಲೋಟ್, ಸದಾಶಿವನ್ ಮುಳ್ಳೇರಿಯ, ತಂಗಚ್ಚನ್ ಪಾಣತ್ತೂರು, ಅನೀಶ್ ಪರಕ್ಕಳಾಯಿ, ಪ್ರಧಾನ ಕಾರ್ಯದರ್ಶಿಯಾಗಿ …

ಮುಳ್ಳೇರಿಯ: ಹಿಂದೂ ಏಕತಾ ಸಮ್ಮೇಳನ ನಗರಕ್ಕೆ ಧ್ವಜಸ್ತಂಭ ಘೋಷಯಾತ್ರೆ

ಮುಳ್ಳೇರಿಯ: ಕಾರಡ್ಕ ಪಂಚಾಯತ್ ಹಿಂದೂ ಏಕತಾ ಸಮ್ಮೇಳನದ ಪ್ರಚಾರಾರ್ಥ ಸಮ್ಮೇಳನ ನಗರದಲ್ಲಿ ಸ್ಥಾಪಿಸಲಿರುವ ಧ್ವಜಸ್ತಂಭವನ್ನು  ಸಾಗಿಸುವ ಘೋಷಯಾತ್ರೆ ಹಲವಾರು ದ್ವಿಚಕ್ರ ವಾಹನಗಳ ಹಾಗೂ ಇತರ ವಾಹನಗಳ ಬೆಂಗಾವಲಿನೊಂದಿಗೆ ನಡೆಯಿತು. ಕುಂಟಾರಿನಿಂದ ಆರಂಭ ಗೊಂಡ ಘೋಷಯಾತ್ರೆ ಪಂಚಾಯ ತ್‌ನ ವಿವಿಧ ಭಾಗಗಳಿಂದ ಸಂಚರಿಸಿ ಮುಳ್ಳೇರಿಯದ ಸಮ್ಮೇಳನ ನಗರಕ್ಕೆ ತಲುಪಿತು. ಘೋಷಯಾತ್ರೆಯನ್ನು ಕುಂಟಾರಿನಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಸ್ವಾಗತ ಸಮಿತಿ ಅಧ್ಯಕ್ಷ ಎಂ.ಕೆ. ರಾಘವನ್‌ರಿಗೆ ಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಜನನಿ, ಉಪಾಧ್ಯಕ್ಷ ದಾಮೋದರ …

ಪುತ್ತಿಗೆ ವಿರಾಟ್ ಹಿಂದೂ ಸಂಗಮ: ಬೈಕ್ ರ‍್ಯಾಲಿ, ಧ್ವಜ ದಿನಾಚರಣೆ

ಸೀತಾಂಗೋಳಿ: ಪುತ್ತಿಗೆ ಪಂಚಾಯತ್ ಮಟ್ಟದಲ್ಲಿ ಮಾ. 8 ರಂದು ಸೂರಂಬೈಲಿನ ಶ್ರೀ ಸಾಯಿರಾಮ್ ಭಟ್ ನಗರದಲ್ಲಿ ಜರಗಲಿರುವ ವಿರಾಟ್ ಹಿಂದೂ ಸಂಗಮದAಗವಾಗಿ ನಿನೆ ಧ್ವಜ ದಿನಾಚರಣೆ ಮತ್ತು ಬೈಕ್ ರ‍್ಯಾ ಲಿ ನಡೆಯಿತು.ಧರ್ಮತ್ತಡ್ಕದಿಂದ ಆರಂಭಗೊAಡ ಬೈಕ್ ರಾಲಿಯನ್ನು ವನವಾಸಿ ಕಲ್ಯಾಣ ಯೋಜನೆಯ ಕಾರ್ಯಕರ್ತ ಸುಕುಮಾರನ್ ಅನಂತಪುರ ಓಂಕಾರ ಧ್ವಜವನ್ನು ಕಾರ್ಯಕ್ರಮದ ರಕ್ಷಾಧಿಕಾರಿ, ಪುತ್ತಿಗೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ ಅವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಲಾಯಿತು. ಪ್ರಸಾದ್ ಮಾಸ್ತರ್ ಮುಗು, ಬಾಲಕೃಷ್ಣ ರೈ …

ಮಲೆಯಾಳಂ ಭಾಷಾ ಮಸೂದೆ ತಿದ್ದುಪಡಿಗೆ ಆಗ್ರಹಿಸಿ ಪ್ರತಿಭಟನೆ

ಕುಂಬಳೆ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಹಕ್ಕು ಸಂರಕ್ಷಣೆಗಾಗಿ ರಾಜಕೀಯ, ಮತ ಭೇದಗಳಿಲ್ಲದೆ ಒಗ್ಗಟ್ಟಿನಿಂದ ಪ್ರತಿಭಟಿಸಬೇಕಾಗಿರುವುದು ಆsದ್ಯ ಕರ್ತವ್ಯವಾಗಿದೆ. ಮಲೆಯಾಳ ಭಾಷಾ ಮಸೂದೆಯ ಹೆಸರಲ್ಲಿ ಅಲ್ಪಸಂಖ್ಯಾತ ಕನ್ನಡಿಗರ ಸಾಂವಿಧಾನಿಕ ಹಕ್ಕಿಗಾಗುವ ಚ್ಯುತಿಯ ಬಗ್ಗೆ ಸರ್ಕಾರದೊಂದಿಗೆ ಇನ್ನಷ್ಟು ಚರ್ಚೆ ನಡೆಸುವ ಮೂಲಕ ಪರಿಹಾರ ಕಾಣುವ ನಿಟ್ಟಿನಲ್ಲಿ ಎಲ್ಲರ ಬೆಂಬಲ ಅಗತ್ಯ ಎಂದು ಜಿ.ಪಂ.ಸದಸ್ಯ ಸೋಮಶೇಖರ ಜೆ.ಎಸ್. ತಿಳಿಸಿದರು.ಮಲೆಯಾಳ ಭಾಷಾ ಮಸೂದೆಯ ತಿದ್ದುಪಡಿಗೆ ಒತ್ತಾಯಿಸಿ ಕುಂಬಳೆ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಲಾದ ಪ್ರತಿಭಟನಾ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.ಈಗಾಗಲೇ …

ಮಹಿಳೆಯರ ಮುಂದೆ ಅನುಚಿತ ವರ್ತನೆ: ಓರ್ವ ಸೆರೆ

ಬದಿಯಡ್ಕ: ರಸ್ತೆಯಲ್ಲಿ ನಡೆದು ಹೋಗುವ ಮಹಿಳೆಯರ ಸಹಿತ ವಿದ್ಯಾರ್ಥಿನಿಯರ ಮುಂದೆ  ಅನುಚಿತವಾಗಿ ವರ್ತಿಸಿದ ಆರೋಪ ದಂತೆ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಗೋಳಿಯಡ್ಕ ಬಳಿಯ ಶಾಂತಿಪಳ್ಳದ ಅಜ್ಮಲ್ ಇರ್ಷಾದ್ (26) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನನ್ನು ನಿನ್ನೆ ಸಂಜೆ 5.15 ಕ್ಕೆ ಬೇಳ ವಿಷ್ಣುಮೂರ್ತಿನಗರದಿಂದ ವಶಕ್ಕೆ ತೆಗೆಯಲಾಗಿದೆ. ಈತ ರಸ್ತೆಯಲ್ಲಿ ನಡೆದುಹೋಗುವ ಮಹಿಳೆಯರ ಸಹಿತ ವಿದ್ಯಾರ್ಥಿನಿಯರ ಮುಂದೆ ಅನುಚಿತವಾಗಿ ವರ್ತಿಸುತ್ತಿರುವುದಾಗಿ ಗಮನಕ್ಕೆ ಬಂದ ಹಿನ್ನೆಲೆ ಯಲ್ಲಿ ಈತನ ವಿರುದ್ಧ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದರು. 

ನಾಲ್ಕು ಕಿಲೋ ಗಾಂಜಾ ವಶ; ಓರ್ವ ಸೆರೆ

ಕಾಸರಗೋಡು: ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಾತರಿಪಡಿಸುವ ಸಲುವಾಗಿ ಪೊಲೀಸರು ಜಿಲ್ಲೆಯಾ ದ್ಯಂತ ಆರಂಭಿಸಿದ ಕಾರ್ಯಾಚ ರಣೆಯಲ್ಲಿ ಚೌಕಿಯ ಕ್ವಾರ್ಟರ್ಸ್‌ವೊಂದರಿಂದ ನಾಲ್ಕು ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಸಿದ್ದಾರೆ. ಮೂಲತಃ ಉತ್ತರಪ್ರದೇಶ ಬಲಿಯಾಪಿಪ್‌ರೋಲಿ ನಿವಾಸಿ ಹಾಗೂ ಈಗ ಕೂಡ್ಲು ಚೌಕಿ ಕಾವುಗೋಳಿ ರೈಲ್ವೇ ಲೈನ್ ಬಳಿಯ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ  ಸುನಿಲ್ ಪ್ರಸಾದ್ (41) ಎಂಬಾತನನ್ನು ಇದಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ನಿರ್ದೇಶ ಪ್ರಕಾರ ಕಾಸರಗೋಡು …

ನಂಬ್ರಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಕ್ರಮ: ಕುಂಬಳೆಯಲ್ಲಿ ಬೈಕ್ ವಶ

ಕುಂಬಳೆ: ನಂಬ್ರಪ್ಲೇಟ್ ಇಲ್ಲದ ಬೈಕ್‌ಗಳಲ್ಲಿ ರಾತ್ರಿ ವೇಳೆ ಯುವಕರು ಸುತ್ತಾಡುವುದು ಹೆಚ್ಚಿದ ಹಿನ್ನೆಲೆಯಲ್ಲಿ ಅದರ ವಿರುದ್ಧ ಕುಂಬಳೆ ಪೊಲೀಸರು  ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇದರಂತೆ ನಿನ್ನೆ ರಾತ್ರಿ 12 ಗಂಟೆಗೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಂಬ್ರ ಪ್ಲೇಟ್ ಇಲ್ಲದ ಬೈಕೊಂದನ್ನು ಕುಂಬಳೆ ಶಾಲೆ ರಸ್ತೆಯಿಂದ ವಶಪಡಿಸಲಾಗಿದೆ. ಅದರ ಸವಾರನಿಂದ ಮಾಹಿತಿ ಸಂಗ್ರಹಿಸಿ ಆತನನ್ನು ಬಿಡುಗಡೆಗೊಳಿಸಲಾಗಿದೆ.  ವಿವಿಧ ರೀತಿಯ ಮಾದಕವಸ್ತು ಸಹಿತ ಅನಧಿಕೃತ ಚಟುವಟಿಕೆಗಳಿಗೆ ಹೆಚ್ಚಾಗಿ ನಂಬ್ರಪ್ಲೇಟ್ ಇಲ್ಲದ ವಾಹನಗಳನ್ನು  ಬಳಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ …

ಪತ್ರ ಬರೆದಿಟ್ಟು ಬೈಕ್‌ನಲ್ಲಿ ತೆರಳಿದ ಯುವಕ ನಾಪತ್ತೆ

ಕಾಸರಗೋಡು:  ಬೈಕ್ ಸಹಿತ ತೆರಳಿದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ವಟ್ಟಂತ್ತಟ್ಟ ಎರಿಂಞಿಪುಳ ಹೌಸ್‌ನ ಜಿತೇಶ್ (32) ನಾಪತ್ತೆಯಾದ ಯುವಕ. ಈ ಬಗ್ಗೆ ತಂದೆ ಸಿ. ಬಾಲನ್ ನೀಡಿದ ದೂರಿನಂತೆ ಬೇಡಗಂ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ 1 ಗಂಟೆ ಬಳಿಕ ಜಿತೇಶ್ ಮನೆಯಿಂದ ಬೈಕ್‌ನಲ್ಲಿ ತೆರಳಿದ್ದನು. ಸಂಜೆಯಾದರೂ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.  ಜಿತೇಶ್ ತೆರಳುವಾಗ ಮೊಬೈಲ್ ಫೋನ್ ಕೊಂಡೊಯ್ದಿಲ್ಲ. ಇದರಿಂದ ಸಂಶಯಗೊಂಡು ಕೊಠಡಿಯಲ್ಲಿ ಪರಿಶೀಲಿಸಿದಾಗ  ಪತ್ರವೊಂದು ಪತ್ತೆಯಾಗಿದೆ.  “ಇಲ್ಲಿಯ ಜೀವನ ಸಾಕಾಗಿದೆ. ಮನಸ್ಸಿಗೆ …