ನಾಗರ ಹಾವು ಕಡಿತ : ಚಿಕಿತ್ಸೆಯಲ್ಲಿದ್ದ ಮಗು ಮೃತ್ಯು

ಕಾಸರಗೋಡು: ನಾಗರ ಹಾವಿನ ಕಡಿತಕ್ಕೊಳಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಗು ಮೃತಪಟ್ಟಿದೆ.  ವೆಳ್ಳೆರಿಕುಂಡು ತಾಲೂಕಿನ ನರ್ಕಿಲಕ್ಕಾಡ್ ಎಳೇರಿತಟ್ಟ್ ತೊಟ್ಟಿ ಉನ್ನತಿಯ ಕುರುವಾಟ್ ವೀಟಿಲ್‌ನ ಶರತ್‌ಚಂದ್ರನ್-ಅಜಿತ ದಂಪತಿಯ ಪುತ್ರಿ ಋತುಚಂದ್ರ (ನಾಲ್ಕೂವರೆ ವರ್ಷ) ಮೃತಪಟ್ಟ ಮಗುವಾಗಿದೆ. ಕಳೆದ ಸೋಮವಾರ ಮಗುವಿಗೆ ಮನೆ ಪರಿಸರದಲ್ಲಿ ಹಾವು ಕಡಿದಿತ್ತು. ಆಟವಾಡುತ್ತಿದ್ದಾಗ ದೂರಕ್ಕೆ ಬಿದ್ದ ಚೆಂಡನ್ನು ಹೆಕ್ಕಲು ಹೋದ ವೇಳೆ ಮಗುವಿಗೆ ನಾಗರಹಾವು ಕಡಿದಿತ್ತು. ಇದರಿಂದ ಅಸ್ವಸ್ಥಗೊಂಡ ಮಗುವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ …

ಕುಂಬಳೆ ಬಸ್ ತಂಗುದಾಣ: 4 ದಿನಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ಬಸ್ ತಡೆಯುವುದಾಗಿ ಮರ್ಚೆಂಟ್ಸ್ ಅಸೋಸಿಯೇಶನ್

ಕುಂಬಳೆ: ತಮ್ಮ ಬೇಡಿಕೆಯನ್ನು ನಾಲ್ಕು ದಿನಗಳೊಳಗೆ ಜ್ಯಾರಿಗೊಳಿಸದಿದ್ದರೆ ಬಸ್‌ಗಳನ್ನು ಕುಂಬಳೆಯಲ್ಲಿ ತಡೆಯುವುದಾಗಿ ಮರ್ಚೆಂಟ್ಸ್ ಅಸೋಸಿಯೇಶನ್ ಪ್ರತಿನಿಧಿಗಳು ಪೊಲೀಸರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಹಾಗಿದ್ದರೆ ಕಾನೂನು ಕ್ರಮ ಎದುರಿಸಲು ಬಸ್ ತಡೆಯುವವರು ಸಿದ್ಧರಾಗಿಕೊಳ್ಳಬೇಕೆಂದು ಪೊಲೀಸರು ಸೂಚಿಸಿದ್ದಾರೆ. ಕಳೆದ ಪಂಚಾಯತ್ ಆಡಳಿತ ಸಮಿತಿ ಬದಲಿಸಿದ ಬಸ್ ತಂಗುದಾಣಗಳನ್ನು ಆಂಶಿಕವಾಗಿ ಹಳೆಯ ಸ್ಥಳದಲ್ಲೇ ಪುನರ್ ಸ್ಥಾಪಿಸಬೇಕೆಂಬ ಈಗಿನ ಪಂಚಾಯತ್ ಆಡಳಿತ ಸಮಿತಿಯ ನಿರ್ದೇಶ ಬಸ್ ನೌಕರರು ಅವಗಣಿಸಿದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿದ್ದು, ಪೊಲೀಸರು ಈ ಸಂಬಂಧ ಸಂಬಂಧಪಟ್ಟವರ ಸಭೆ ಕರೆದಿದ್ದರು. ಪಂಚಾಯತ್ ಆಡಳಿತಾಧಿಕಾರಿಗಳು, …

ವಿಶ್ವ ಕಾರ್ಮಿಕರ ದಿನ: ಜಿಲ್ಲೆಯ ವಿವಿಧೆಡೆ ಮೆರವಣಿಗೆ, ಸಾರ್ವಜನಿಕ ಸಭೆ

ಕಾಸರಗೋಡು: ವಿಶ್ವ ಕಾರ್ಮಿಕರ ದಿನದಂಗವಾಗಿ ಕಾರ್ಮಿಕರು ನಿನ್ನೆ ಮೆರವಣಿಗೆ ನಡೆಸಿದರು. 8 ಗಂಟೆ ಕೆಲಸ ಹಾಗೂ 8 ಗಂಟೆ ವಿಶ್ರಾಂತಿ ೮ ಗಂಟೆ ವಿನೋದ ಖಚಿತಪಡಿಸಲು ನಡೆಸಿದ ಐತಿಹಾಸಿಕ ಮುಷ್ಕರದ ಯಶಸ್ಸನ್ನು ಸ್ಮರಿಸಿಕೊಂಡು ಮೇ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ರಾಷ್ಟ್ರೀಯ – ಪ್ರಾದೇಶಿಕ- ಜಿಲ್ಲಾ ಮಟ್ಟಗಳಲ್ಲಿ ಕಾರ್ಮಿಕ ಸಂಘಟನೆಗಳು ದಿನಾಚರಣೆಯಂಗವಾಗಿ ರ‍್ಯಾಲಿ, ಸಾರ್ವಜನಿಕಸಭೆ ನಡೆಸಿವೆ. ಕಾಸರಗೋಡಿನಲ್ಲಿ ನಡೆದ ಸಂಯುಕ್ತ ಟ್ರೇಡ್ ಯೂನಿಯನ್ ಕಾರ್ಯಕ್ರಮವನ್ನು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮಣಿಮೋಹನ್ ಉದ್ಘಾಟಿಸಿದರು. ಎಐಟಿಯುಸಿ ಮುಖಂಡ ಮಧುಸೂದನನ್ …

ಬೋಳಂಗಳ ಸ್ಮಶಾನ ಪರಿಸರದ ರಸ್ತೆ ಬದಿ ವ್ಯಾಪಕ ಪ್ಲಾಸ್ಟಿಕ್  ತ್ಯಾಜ್ಯ: ಶುಚೀಕರಣಕ್ಕೆ ಒತ್ತಾಯ

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕಳಾಯಿ ರಸ್ತೆಯ ಬೋಳಂಗಳ ಸ್ಮಶಾನದ ಸಮೀಪದ ರಸ್ತೆ ಬದಿಯಲ್ಲಿ ವ್ಯಾಪಕ ಪ್ಲಾಸ್ಟಿಕ್ ತ್ಯಾಜ್ಯ ರಾಶಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದ್ದು, ಶುಚೀಕರಣಕ್ಕೆ ಒತ್ತಾಯಿಸಿದ್ದಾರೆ. ನೂರಾರು ಮಂದಿ ಸಂಚರಿಸುವ ರಸ್ತೆ ಬದಿಯಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ಉಪೇಕ್ಷಿಸಗುv್ತದ್ದು ಇದು ಹರಡಿ ಸಂಚಾರಕ್ಕೆ ಸಮಸ್ಯೆ ಸೃಷ್ಟಿಯಾಗಿರುವುದಾಗಿ ದೂರಲಾಗಿದೆ. ತ್ಯಾಜ್ಯ ಉಪೇಕ್ಷಿಸುವವರ ವಿರುದ್ದ ಕಠಿಣ ಕ್ರಮಕ್ಕೆ ಪಂಚಾಯತ್ ಅಧಿಕಾರಿಗಳು ಮುಂದಾಗಬೇಕೆAದು ನಾಗರಿಕರು ಒತ್ತಾಯಿಸಿದ್ದಾರೆ. ಕೂಡಲೇ ಶುಚೀಕರಣಗೊಳಿಸದಿದ್ದಲ್ಲಿ ಮುಂದಿನ ಮಳೆೆಗಾಲದಲ್ಲಿ ಶೋಚನೀಯÁವಸ್ಥೆಗೆ ತಲುಪಿ ಸಂಚಾರಕ್ಕೆ ಇನ್ನಷ್ಟು ಸಮಸ್ಯೆ ಉಂಟಾಗಲಿದೆ. …

ಕನಿಲ ಕ್ಷೇತ್ರಕ್ಕೆ ಕೊಪ್ಪರಿಗೆ ಸಮರ್ಪಣೆ

ಮಂಜೇಶ್ವರ: ಕನಿಲ ಶ್ರೀ ಭಗವತೀ ಕ್ಷೇತ್ರದ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಮಚ್ಚಂಬಾಡಿ ಪಾವೂರು ವಿಭಾಗದ ವತಿಯಿಂದ ಕ್ಷೇತ್ರಕ್ಕೆ ಅಕ್ಷಯಪಾತ್ರೆ (ಕೊಪ್ಪರಿಗೆ) ಸಮರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಗುರಿಕ್ಕಾರರಾದ ಪುರುಷೋತ್ತಮ, ಪ್ರಸಾದ್, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾವೂರು, ಪಾವೂರು ವಿಭಾಗದ ಅಧ್ಯಕ್ಷ ಮನೋಜ್ ಕೊಪ್ಪಳ, ಜಯರಾಜ್ ಬಜಾಲ್, ಶಿವಕುಮಾರ ಬಳ್ಳೂರು, ಸುರೇಶ್ ಬೋಳ್ಯಾಂಗೋಡಿ, ದಿವಾಕರ ಚೌಕಿ, ಸುಧಾಮಣಿ ಅರಿಬೈಲು, ಮಲ್ಲಿಕಾ ಬೇಕರಿ, ಸರಿತಾ ಕುಂಡಾಪು, ಲಲಿತ ತೌಡುಗೋಳಿ, ಚಿರಶ್ರೀ, ಚಂದ್ರಾವತಿ, ನಾರಾಯಣ, ವಿನೋದ್ ಭಾಗವಹಿಸಿದರು.

ವೈಭವದಿಂದ ಸಮಾಪ್ತಿಗೊಂಡ ಕಾಳ್ಯಂಗಾಡು ಬ್ರಹ್ಮಕಲಶೋತ್ಸವ

ಕೂಡ್ಲು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಾಪ್ತಿಗೊಂಡಿತು. ಗಣಪತಿಹೋಮ, ಕವಾಟೋದ್ಘಾಟನೆ, ಮಹಾಪೂಜೆ ನಡೆಯಿತು. ತಂತ್ರಿ ಶ್ರೀಕೃಷ್ಣ ಗುರೂಜಿ ಕುಕ್ಕಾಜೆ ನೇತೃತ್ವ ವಹಿಸಿದರು. ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಸಲಹಾ ಸಮಿತಿಯ ರಘು ಮೀಪುಗುರಿ, ಭಾಸ್ಕರ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ಕಾರ್ಯದರ್ಶಿಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ನಾಯ್ಕ್ ಕಾಳ್ಯಂಗಾಡು, ಕೋಶಾಧಿಕಾರಿ ಶಾಂತ ಕುಮಾರ್ ಮುಂಡ್ಯತ್ತಡ್ಕ, ಜೊತೆ ಕೋಶಾಧಿಕಾರಿ ಪುನಿತ್ ಕೆಮ್ಮಣ್ಣು, …

ಬನಕ್ಕೆ ಉಚಿತವಾಗಿ ಸ್ಥಳ ನೀಡಿ ಪ್ರಾಮಾಣಿಕತೆ ಮೆರೆದ ಕೊಡ್ಯಮ್ಮೆಯ ಜಲೀಲ್: ಅಭಿನಂದನೆ

ಕುಂಬಳೆ: ಕುಂಬಳೆ ಪಂಚಾಯತ್‌ನ ಕೊಡ್ಯಮ್ಮೆ ಜಮಾಅತ್  ಕಮಿಟಿ ಸದಸ್ಯನೂ, ಯು.ಎಚ್. ಕ್ಲಬ್‌ನ ಅಧ್ಯಕ್ಷನಾದ ಕೊಡ್ಯಮ್ಮೆಯ ಪಳ್ಳತ್ತಿಮಾರ್ ಮೂಸ ಅವರ ಪುತ್ರ ಜಲೀಲ್ ಕೊಡ್ಯಮ್ಮೆ ತನ್ನ ಹೆಸರಲ್ಲಿರುವ ೭ಸೆಂಟ್ಸ್ ಸ್ಥಳವನ್ನು ಹಿತ್ತಿಲಿಗೆ ಸೇರಿಕೊಂಡಿರುವ ಬನಕ್ಕಾಗಿ  ಉಚಿತವಾಗಿ ನೀಡಿದ್ದಾರೆ. ಜಲೀಲ್ ರ ಪ್ರಾಮಾಣಿಕತೆಯನ್ನು ಬನ ಸಮಿತಿ ಹಾಗೂ ನಾಗರಿಕರು ಅಭಿನಂದಿಸಿದ್ದಾರೆ. ಬನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಾಧಿಕಾರಿಗಳಾದ ದಾಸ್ ಹಾಗೂ ಕುಟುಂಬ  ಗೌರವಿಸಿದರೂ ಬನ ಸಮಿತಿ ಸದಸ್ಯರು ಜಲೀಲ್‌ರಿಗೆ ಪಾರಿತೋಷಕ ನೀಡಿದರು. ನಾಡಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಜೀವ ಕಾರುಣ್ಯ ಚಟುವಟಿಕೆಗಳಲ್ಲಿ ಜಲೀಲ್ …

ಎಡನೀರು ಮಠದಲ್ಲಿ ಮಹಾ ಶ್ರೀಚಕ್ರ ನವಾವರಣ ಪೂಜೆ

ಎಡನೀರು: ಎಡನೀರು ಮಠದಲ್ಲಿ ನಿನ್ನೆ ಅಪರಾಹ್ನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಇವರ ಉಪಸ್ಥಿತಿ ಯಲ್ಲಿ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿಯವರಿಂದ ಮಹಾ ಶ್ರೀಚಕ್ರ ನವಾವರಣ ಪೂಜೆ ಜರಗಿತು. ಈ ವೇಳೆ ವಿದುಷಿ ಎನ್.ಜೆ. ನಂದಿನಿ ಮತ್ತು ಬಳಗದವರಿಂದ ನವಾವರಣ ಕೃತಿ ಆಲಾಪನೆ ಜರಗಿತು. ವಯಲಿನ್‌ನಲ್ಲಿ ವಿದ್ವಾನ್ ವಿಠಲರಾಮಮೂರ್ತಿ ಚೆನ್ನೈ, ಮೃದಂಗದಲ್ಲಿ ಆನೂರು ಅನಂತಕೃಷ್ಣ ಶರ್ಮ ಬೆಂಗಳೂರು, ಮೋರ್ಸಿಂಗ್‌ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ್ ಸಹಕರಿಸಿದರು.

ಸೀತಾಂಗೋಳಿಯಲ್ಲಿ ಯುವಕನ ಕೊಲೆ : ಬಂಧಿತ ಆರೋಪಿಗೆ ರಿಮಾಂಡ್

ಕುಂಬಳೆ: ಬಾಪಾಲಿಪೊನ ಕುಂಟಿಕಾನ ನಿವಾಸಿಯಾದ  ಸಫಾಹಿದ್  ಯಾನೆ ಶಫಾಯತ್ (35) ಎಂಬವರನ್ನು ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾದ ಕುಂಬಳೆ ನಾಯ್ಕಾಪು ಕೋಟೆಕಾರಿನ ಶ್ರೀನಿವಾಸ (39) ಎಂಬಾತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಇದೇ ವೇಳೆ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಯುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.  ಘಟನೆಗೆ ಸಂಬಂಧಿಸಿ  ಸೀತಾಂಗೋಳಿಯ ವಿವಿಧೆಡೆಗಳ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾ ಗುತ್ತಿದೆ. ಈ ಪ್ರಕರಣದಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾ ರೆಯೇ ಎಂದು ತಿಳಿಯಲು ತನಿಖೆ ಮುಂದುವರಿಸಲಾಗಿದೆಯೆಂದು  ಪೊಲೀಸರು ತಿಳಿಸಿದ್ದಾರೆ. …

ಕೋಟೆಕಾರಿನಲ್ಲಿ ಯುವಕನ ಮೃತದೇಹ ಪತ್ತೆ: ತಲೆಯ ರಕ್ತಸ್ರಾವ ಸಾವಿಗೆ ಕಾರಣವೆಂದು ಮರಣೋತ್ತರ ವರದಿ

ಕುಂಬಳೆ: ಕೋಟೆಕಾರಿನಲ್ಲಿ ಕಾಂಗ್ರೆಸ್ ಮಂಡಲ ಅಧ್ಯಕ್ಷ ರವಿ ಪೂಜಾರಿಯವರ ಸಹೋದರ ಮೈದಾನ ಸಮೀಪ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿರುವುದು ತಲೆಯ ರಕ್ತಸ್ರಾವದ ಹಿನ್ನೆಲೆಯಲ್ಲಿ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಸಾವಿನಲ್ಲಿನ ನಿಗೂಢತೆ  ಇಲ್ಲದಾಗಿದೆ ಎಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ಕೋಟೆಕಾರಿನ ಸುನಿಲ್ ಕುಮಾರ್ (40)ರನ್ನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಪೈಂಟಿಂಗ್ ಕಾರ್ಮಿಕನಾದ ಸುನಿಲ್ ಕುಮಾರ್ ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತಲುಪಿರಲಿಲ್ಲ. ಈ ಮಧ್ಯೆ ಮೃತದೇಹದ ಮೂಗಿನಿಂದ ರಕ್ತ ಹರಿಯುತ್ತಿದ್ದ …