ಸ್ವರ್ಗ ಸೇತುವೆ ಬಳಿ ರಸ್ತೆ ಬದಿಯ ಹೊಂಡಕ್ಕಿಳಿದ ಲಾರಿ: ಎಕ್ಸಿಲ್ ತುಂಡಾಗಿ ಸಂಚಾರ ಮೊಟಕು

ಪೆರ್ಲ: ಪೆರ್ಲ- ಸ್ವರ್ಗ ರಸ್ತೆಯಲ್ಲಿ ನಿನ್ನೆ ಮಧ್ಯಾಹ್ನ ಲಾರಿಯೊಂದರ ಎಕ್ಸಿಲ್ ತುಂಡಾಗಿ ಅರ್ಧ ಗಂಟೆ ಕಾಲ ಬಸ್ ಸಹಿತ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಸ್ವರ್ಗ ಸೇತುವೆ ಬಳಿ ಸಂಭವಿಸಿದೆ. ಪಾಣಾಜೆ ಭಾಗದಿಂದ ಗೆರಟೆ ಹೇರಿಕೊಂಡು ಬರುತ್ತಿದ್ದ ಲಾರಿಗೆ ಸ್ವರ್ಗ ಸೇತುವೆಯ ಮುಂದಿನ ತಿರುವಿನಲ್ಲಿ ಪೆರ್ಲ ಕಡೆಯಿಂದ ಬಂದ ವಾಹನವೊಂದು ಎದುರಾಗಿದೆ. ಈ ವಾಹನಕ್ಕೆ ಸಂಚರಿಸಲು ಸ್ಥಳ ಬಿಟ್ಟುಕೊಡುವ ಅವಸರದಲ್ಲಿ ಲಾರಿ ಚಾಲಕ ವಾಹನವನ್ನು ರಸ್ತೆಯಿಂದ ಕೆಳಗಿಳಿಸಿರುವುದಾಗಿ ಶಂಕಿಸಲಾಗಿದೆ. ಈ ವೇಳೆ ಲಾರಿಯ ಎಕ್ಸಿಲ್ ತುಂಡಾಗಿ …

ವರ್ಕಾಡಿಯಲ್ಲಿ ಕೋಳಿ  ಅಂಕ: 5ಮಂದಿ ಸೆರೆ

ಉಪ್ಪಳ:  ವರ್ಕಾಡಿಯಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿ ೧೪ ಸಾವಿರ ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ 12.30ರ ವೇಳೆ ವರ್ಕಾಡಿ ಬಾಲಿಗುರಿ ಬೋಳ ಸೈಂಟ್ ಲೋರೆನ್ಸ್ ಚರ್ಚ್ ಸಮೀಪದ ಖಾಲಿ ಹಿತ್ತಿಲಲ್ಲಿ ಜನರು ಗುಂಪುಗೂಡಿರುವುದನ್ನು ಕಂಡು ಪೊಲೀಸರು ಅಲ್ಲಿಗೆ ತಲುಪಿದ್ದರು. ಈ ವೇಳೆ ಅಲ್ಲಿಂದ ಹಲವರು ಓಡಿ ಪರಾರಿಯಾಗಿದ್ದಾರೆ. ಸ್ಥಳದಿಂದ ತಲಪ್ಪಾಡಿ ದೇವಿಪುರದ ಮಹೇಶ್ ಶೆಟ್ಟಿ (4೦), ಮಂಜೇಶ್ವರ ಕಡಂಬಾರ್‌ನ ಮನೋಜ್ (45), ಬಂಟ್ವಾಳದ ವಿನ್ಸೆಂಟ್ …

ಸಂಚಾರ ರದ್ದುಪಡಿಸಲು 15 ಖಾಸಗಿ ಬಸ್‌ಗಳು ಸಿದ್ಧ

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿರುವು ದರಿಂದಾಗಿ ಭಾರೀ ಆದಾಯ ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಬಸ್‌ಗಳ ಸಂಚಾರ ರದ್ದುಪಡಿಸಲು ಜಿಲ್ಲೆಯ 15 ಖಾಸಗಿ ಬಸ್‌ಗಳು ಮೋಟಾರು ವಾಹನ ಇಲಾಖೆಗೆ ಜಿ.ಫಾಂ ಸಲ್ಲಿಸಿದೆ. ಕೋವಿಡ್ ಮಹಾಮಾರಿಯ ಮೊದಲು ಜಿಲ್ಲೆಯಲ್ಲಿ 5೦೦ರಷ್ಟು ಖಾಸಗಿ ಬಸ್‌ಗಳು ಸಂಚಾರ ನಡೆಸುತ್ತಿದ್ದವು. ಕೋವಿಡ್ ಬಳಿಕ ಆ ಸಂಖ್ಯೆ ೩೫೦ಕ್ಕಿಳಿದಿದೆ. ಕೆಎಸ್‌ಆರ್‌ಟಿಸಿಯಲ್ಲಿ ಮಹಿಳೆಯರಿಗೆ  ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿದ ಬಳಿಕ ಜಿಲ್ಲೆಯಲ್ಲಿ ೫೦ರಷ್ಟು ಖಾಸಗಿ ಬಸ್‌ಗಳು ತಮ್ಮ ಬಸ್ ಸರ್ವೀಸ್‌ಗಳ …

ಪ್ರಿಯವಾದ ಪ್ರಿಯದರ್ಶಿನಿ ಉಚಿತ ಪ್ರಯಾಣ: ವಿವಿಧ ಕಡೆ ಪ್ರಯಾಣಿಕರಿಗೆ ಸಂಚಾರ ಸಮಸ್ಯೆ

ಕಾಸರಗೋಡು: ಕೆಎಸ್‌ಆರ್ ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿದ ನಂತರದ ೧೫ ದಿನ ಗಳಲ್ಲಾಗಿ ಜಿಲ್ಲೆಯಲ್ಲಿ 9.18 ಲಕ್ಷದಷ್ಟು ಮಹಿಳೆಯರು ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಅಂದರೆ ಇದರ ಟಿಕೆಟ್‌ಗಳ ಬೆಲೆ 2.44 ಕೋಟಿ ರೂ. ಆಗಿದೆ. ಇದು ಕೆಎಸ್‌ಆರ್‌ಟಿಸಿಗೆ ನಷ್ಟ ಉಂಟಾಗಿದೆ. ಕೆಎಸ್‌ಆರ್‌ಟಿಸಿಯ ಕಾಸರ ಗೋಡು ಮತ್ತು ಕಾಞಂಗಾಡ್ ಡಿಪ್ಪೋಗಳಲ್ಲಿ ಒಟ್ಟು 126 ಆರ್ಡಿ ನರಿ ಬಸ್‌ಗಳು ಸಂಚಾರ ನಡೆಸುತ್ತಿದ್ದು ಈ ಎಲ್ಲಾ ಬಸ್‌ಗಳಲ್ಲಿ ಮಹಿಳೆಯರು ಮಾತ್ರವಲ್ಲ ಮಂಗಳಮುಖಿಯರಿಗೂ ಉಚಿತವಾಗಿ ಪ್ರಯಾಣಿಸಬ ಹುದಾಗಿದೆ. …

ಕಾಸರಗೋಡು ಶ್ರೀಕೃಷ್ಣ ಜನ್ಮಾಷ್ಟಮಿ: ಮಹೋತ್ಸವ ಸಮಿತಿ ರಚನೆ

ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೆ. 4ರಂದು ಜರಗಲಿರುವ 46ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಸಮಿತಿ ರೂಪೀಕರಣ ಸಭೆ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಕಾಸರಗೋಡು ಗೋಕುಲ ಜಿಲ್ಲಾ ರಕ್ಷಾಧಿಕಾರಿ ಜಯರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.ನೂತನ ಉತ್ಸವ ಸಮಿತಿಯ ಅಧ್ಯಕ್ಷರಾಗಿ ವೇಣುಗೋಪಾಲ್ ಕೆ.ಎನ್, ಉಪಾಧ್ಯಕ್ಷರಾಗಿ ಮೋದಕ್ ರಾಜ್, ಶ್ರೀವಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರ ಕುಂಟಾರು, ಜತೆಕಾರ್ಯದರ್ಶಿಗಳಾಗಿ ವಸಂತ್ ಕೆರೆಮನೆ, ಪ್ರಶಾಂತಿ ನೆಲ್ಲಿಕುಂಜೆ, ಕೋಶಾಧಿಕಾರಿಯಾಗಿ ಮೋಹನ್ ರಾಜ್ ಕಾಳ್ಯಂಗಾಡ್, ಸ್ಥಾಯೀ ಸಮಿತಿ ಪದಾಧಿಕಾರಿಗಳಾದ ರವಿ ಕೇಸರಿ, ರಾಮಕೃಷ್ಣ …

ಟೈಲರ್ಸ್ ಅಸೋಸಿಯೇಶನ್ ಉಪ್ಪಳ ಯೂನಿಟ್ ಸಭೆ

ಉಪ್ಪಳ: ಕೇರಳ ಸ್ಟೇಟ್ ಟೈರ‍್ಸ್ ಅಸೋಶಿಯೇಶನ್ (ಕೆ.ಎಸ್ ಟಿ.ಎ) ಉಪ್ಪಳ ಯೂನಿಟ್ ಸಭೆ ಇತ್ತೀಚೆಗೆ ಉಪ್ಪಳದಲ್ಲಿ ಜರಗಿತು. ಯೂನಿಟ್ ಅಧ್ಯಕ್ಷ ದಯಾನಂದರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ರಾಜ್ಯ ಸಮಿತಿ ಮಾಜಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕರಿಪ್ವಾರ್‌ರಿಗೆ ನುಡಿನಮನ ಸಲ್ಲಿಸಲಾಯಿತು. ಸದಸ್ಯತನವನ್ನು ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಆಚಾರ್ಯ ವಿತರಿಸಿದರು. ತಾಲೂಕು ಉಪಾದ್ಯಾಕ್ಷ ಕೇಶವ ಮಯ್ಯ, ಸದಸ್ಯರಾದ ಕುಸುಮಾವತಿ, ಚಂದ್ರಶೇಖರ, ಹಾಗೂ ಯೂನಿಟ್ ಸದಸ್ಯರು ಭಾಗವಹಿಸಿದರು. ತಾಲೂಕು ಮಾಜಿ ಸದಸ್ಯ ಪುರುಷೆÆÃತ್ತಮ ವಂದಿಸಿದರು. ಕಾರ್ಯದರ್ಶಿ ಸುರೇಖ …

ಕಾಸರಗೋಡು ತ್ಸುನಾಮಿ ಕಾಲನಿಯ ಸೇಫ್ಟಿ  ಟ್ಯಾಂಕ್‌ನಿಂದ ತ್ಯಾಜ್ಯ ಹೊರಕ್ಕೆ: ಕಾಲನಿ ನಿವಾಸಿಗಳಿಂದ ನಗರಸಭಾ ಕಚೇರಿ ಮುಂದೆ ಧರಣಿ

ಕಾಸರಗೋಡು: 101 ಫ್ಲಾಟ್‌ಗಳಿರುವ ಕಾಸರಗೋಡು ತ್ಸುನಾಮಿ ಕಾಲನಿಯ ಸೇಫ್ಟಿ  ಟ್ಯಾಂಕ್  ತುಂಬಿ ತುಳುಕುತ್ತಿದೆ. ಕಾಲನಿಯಲ್ಲಿರುವ  ಇಷ್ಟು ಕುಟುಂಬಗಳ  ತ್ಯಾಜ್ಯ ತುಂಬಲು  ಪ್ರಸ್ತುತವುಳ್ಳ ಸೇಫ್ಟಿ  ಟ್ಯಾಂಕ್  ಸಾಕಾಗದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಆದ್ದರಿಂದ  ಬೇರೆ ಸೇಫ್ಟಿ ಟ್ಯಾಂಕ್ ಸ್ಥಾಪಿಸಬೇಕು, ಅಲ್ಲದೆ ಸಾಂಕ್ರಾಮಿಕ ರೋಗಗಳಿಂದ ಜನರನ್ನು ಸಂರಕ್ಷಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಕಾಲನಿಯ ನಿವಾಸಿಗಳು ನಗರಸಭಾ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ. ೩೪ನೇ ವಾರ್ಡ್ ಕೌನ್ಸಿಲರ್ ಸುನಿಲ್ ಶೆಟ್ಟಿ ಧರಣಿ ಯನ್ನು ಉದ್ಘಾಟಿಸಿದರು. ಬಳಿಕ  ನಗರಸಭಾ ಚೆಯರ್ ಪರ್ಸನ್ ಶಾಹಿನಾ …

ಕುಂಬ್ಡಾಜೆ ಆಯುರ್ವೇದ ಆಸ್ಪತ್ರೆ ಬಳಿ ರಸ್ತೆಗೆ ಬಿದ್ದ ಮರ ತೆರವು

ಮಾರ್ಪನಡ್ಕ: ಕುಂಬ್ಡಾಜೆ ೫ನೇ ವಾರ್ಡ್ ವ್ಯಾಪ್ತಿಯ ಬೆಳಿಂಜ ಆಯುರ್ವೇದ ಡಿಸ್ಪೆನ್ಸರಿ ಸಮೀಪವಿರುವ ದೊಡ್ಡ ಆಲದಮರವೊಂದು ರಸ್ತೆಗೆ ಮಗುಚಿ ಬಿದ್ದಿದೆ. ಇದರಿಂದ ಸಂಚಾರ ಮೊಟಕುಗೊಂಡಿತ್ತು. ಅಗ್ನಿಶಾಮಕದಳ ತಲುಪಿ ಮರದ ರೆಂಬೆಗಳನ್ನು ಕತ್ತರಿಸಿ ತೆಗೆದು ಸಂಚಾರ ಪುನರ್‌ಸ್ಥಾಪಿಸಿದರು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್  ವಿ. ಸುಗುರ ನೇತೃತ್ವದಲ್ಲಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದೆ. ಜೆಸಿಬಿಯ ಸಹಾಯದಿಂದ ರಸ್ತೆಗೆ ಬಿದ್ದಿದ್ದ ಮರದ ತುಂಡುಗಳನ್ನು ತೆರವುಗೊಳಿಸಲಾಗಿದೆ. ಅಗ್ನಿಶಾಮಕ ದಳದ ಎಸ್. ಅರುಣ್ ಕುಮಾರ್, ಅತುಲ್ ರವಿ, ಅಶ್ವಿನಿ ಎಸ್.ಎಂ, ಅರುಣ ಪಿ. …

ಟ್ರಾಫಿಕ್ ಪರಿಷ್ಕಾರ ಸಮಾಲೋಚನೆ ನಡೆಸಿ ಕೈಗೊಂಡ ತೀರ್ಮಾನ ವ್ಯಾಪಾರಿಗಳ ಆರೋಪ ಹುರುಳಿಲ್ಲದ್ದು- ಕುಂಬಳೆ ಪಂ. ಆಡಳಿತ ಸಮಿತಿ

ಕುಂಬಳೆ:  ಕುಂಬಳೆ ಪೇಟೆಯ ಸಮಗ್ರ ಅಭಿವೃದ್ಧಿ ಮುಂದಿಟ್ಟು ಎಲ್ಲರೊಂದಿಗೆ ಚರ್ಚಿಸಿದ ಬಳಿಕ ಪಂಚಾಯತ್ ಆಡಳಿತ ಸಮಿತಿ ಕುಂಬಳೆಯಲ್ಲಿ ಟ್ರಾಫಿಕ್ ಪರಿಷ್ಕಾರ ಜ್ಯಾರಿಗೊಳಿಸಿರುವುದಾಗಿಯೂ ಈ ಬಗ್ಗೆ ಆಧಾರರಹಿತ ಆರೋಪವನ್ನು ಅಲ್ಲಗಳೆದು ಆಡಳಿತ ಸಮಿತಿ ಸದಸ್ಯರು ಸುದ್ಧಿಗೋಷ್ಠಿ ನಡೆಸಿದರು. ರಾಜಕೀಯ ಪಕ್ಷ, ವ್ಯಾಪಾರಿ ಮೋಟಾರು ಕಾರ್ಮಿಕರ ಪ್ರತಿನಿಧಿಗಳು ಭಾಗವಹಿಸಿದ ಸಭೆಯ ತೀರ್ಮಾನ ಪ್ರಕಾರ ಈಗ ಪರಿಷ್ಕಾರ ಜ್ಯಾರಿಗೊಳಿಸಲಾಗಿದೆ. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಖಂಡರಾದ ರಾಜೇಶ್ ಮನಯತ್, ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ, ಕೋಶಾಧಿಕಾರಿ ಅನ್ವರ್ ಸಿಟಿ ಸಹಿತದವರು ಭಾಗವಹಿಸಿದ ಸಭೆಯಲ್ಲಿ  …

ಕೆ. ರಮಾನಂದ ಬಂಗೇರ ನಿಧನ

ಕಾಸರಗೋಡು: ಬೀರಂತಬೈಲು ಸುಗುಣ ನಿಲಯದ ಕೆ. ರಮಾನಂದ ಬಂಗೇರ (91) ನಿಧನ ಹೊಂದಿದರು. ಇವರು ಇಂಡಿಯನ್ ಆಯಿಲ್ ಕಾರ್ಪರೇಶನ್ ಕಂಪೆನಿಯಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿದ್ದರು. ಇವರ ಪತ್ನಿ ಸುಗುಣ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಕೀರ್ತಿ, ಲತಾ, ನರೇಶ್, ಅಳಿಯಂದಿರಾದ ಮಹೇಶ್, ಕುಮಾರ್, ಸೊಸೆ ಸವಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.