ಮೊಬೈಲ್‌ಗೇಮ್ ಚಟ: ತಂದೆಯ ವಿರೋಧ ಹಿನ್ನೆಲೆಯಲ್ಲಿ ಕಾಶಿಗೆ ತೆರಳುವುದಾಗಿ ಪತ್ರ ಬರೆದಿಟ್ಟು ಮನೆ ತೊರೆದ ಬಾಲಕ

ಕಣ್ಣೂರು: ಮೊಬೈಲ್‌ಗೇಮ್  ಆಡುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಮನನೊಂದು 17ರ ಹರೆಯದ ಬಾಲಕ ಮನೆ ಬಿಟ್ಟು ತೆರಳಿದ್ದಾನೆ. ಪ್ಲಸ್ ಟು ವಿದ್ಯಾರ್ಥಿ ಶಿವಸೂರ್ಯ ನಾಪತ್ತೆಯಾದ ವಿದ್ಯಾರ್ಥಿ. ಚೊಕ್ಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತನಿಖೆ ಆರಂಭಿಸಲಾಗಿದೆ. ಆಗಸ್ಟ್ ೮ರಿಂದ ಬಾಲಕ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಮೊಬೈಲ್‌ಗೇಮ್ ಆಡುವುದು ನಿತ್ಯ ಹವ್ಯಾಸವನ್ನಾಗಿ ಮಾಡಿಕೊಂಡಿದ್ದ ಈತನಿಂದ ತಂದೆ ಫೋನ್ ಪಡೆದು ತೆಗೆದಿರಿಸಿದ್ದರು. ಆನ್‌ಲೈನ್ ಗೇಮ್‌ಗಳನ್ನು ಈತ ಖಾಯಂ ಆಗಿ ಆಡುತ್ತಿದ್ದನೆನ್ನಲಾಗಿದೆ. ಇದರಿಂದ ಮನೆಮಂದಿಗೆ ಹಲವು ಸಮಸ್ಯೆಗಳು ಸೃಷ್ಟಿಯಾಗಿತ್ತು. ಗೇಮ್ ಮೂಲಕ ಈತನಿಗೆ ತುಂಬಾ ಹಣ …

ಪ್ರತಿಭಟನೆ: ಬಿಜೆಪಿ ಜಿಲ್ಲಾಧ್ಯಕ್ಷೆ ಸೇರಿ 10 ಮಂದಿ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ಕುಂಬಳೆ ಜಿಎಚ್‌ಎಸ್‌ಎಸ್‌ನಲ್ಲಿ ನಿನ್ನೆ ಶಿಕ್ಷಣ ಸಚಿವರ ಎನ್. ಶಂಸುದ್ದೀನ್ ಭಾಗವಹಿಸಿದ  ಕಾರ್ಯಕ್ರಮದ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಸೇರಿದಂತೆ ಹತ್ತು ಮಂದಿ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಜಿಲ್ಲಾಧ್ಯಕ್ಷೆಯ ಹೊರತಾಗಿ ಬಿಜೆಪಿ ಇತರ ನೇತಾರರಾದ ಪಿ.ಆರ್. ಸುನಿಲ್, ಅಶ್ವಿನಿ, ಅಜಿ ಕುಮಾರ್, ಸಂದೀಪ್, ವಿಕ್ರಂ ಪೈ ಹಾಗೂ  ಇತರ ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಚಿವರು ಭಾಗವಹಿಸಿದ ಈ ಕಾರ್ಯ ಕ್ರಮ ನಡೆಯುತ್ತಿದ್ದ ಶಾಲೆಯ ಪ್ರವೇಶದ್ವಾರದತ್ತ ಪ್ರತಿಭಟನಾ …

ನಗರದ ವಸತಿಗೃಹದಲ್ಲಿ ಪಾಲಕುನ್ನು ನಿವಾಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಗರದ ಬ್ಯಾಂಕ್ ರಸ್ತೆ ಬಳಿಯ  ವಸತಿಗೃಹವೊಂದರಲ್ಲಿ  ಕೊಠಡಿ ಪಡೆದುಕೊಂಡ ಪಾಲಕುನ್ನು ನಿವಾಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ   ಪತ್ತೆಯಾಗಿದ್ದಾರೆ. ಪಾಲಕುನ್ನು ಕುರುಕನ್‌ಕುನ್ನು  ಕೋಟಪ್ಪಾರ ನಿವಾಸಿ  ಟಿ. ಬಾವ-ದೈನಾಬಿ ದಂಪತಿ ಪುತ್ರ ಹಮೀದ್ ಕೆ (52) ಮೃತಪಟ್ಟ ವ್ಯಕ್ತಿ. ಇವರು ಮೊನ್ನೆ ಈ ವಸತಿಗೃಹದ ಕೊಠಡಿ ಬಾಡಿಗೆಗೆ ಪಡೆದುಕೊಂಡಿದ್ದರು.  ಅವರು ಕೊಠಡಿಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ವಸತಿಗೃಹದವರು  ಪರಿಶೀಲಿಸಿದಾಗ ಕೊಠಡಿಯೊಳಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ವಿಷಯ ತಿಳಿದು ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹದ ಮಹಜರು ನಡೆಸಿದ ಬಳಿಕ ಅದನ್ನು ಜನರಲ್ …

ಎರಡು ತಿಂಗಳ ಹಿಂದೆ ಆತ್ಮಹತ್ಯೆಗೈದ ಯುವತಿಯ ಸಹೋದರ ಲಾಡ್ಜ್‌ನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಸಹೋದರಿ ನೇಣುಬಿಗಿದು ಸಾವಿಗೆ ಶರಣಾದ ಎರಡು ತಿಂಗಳಲ್ಲೇ  ಸಹೋದರನೂ  ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಬೇಕಲ ಪಳ್ಳಿಕ್ಕರೆ ಮುಕ್ಕೂಡ್ ನಿವಾಸಿಯಾದ ಮಹೇಶ್ ಎಂಬವರ ಪುತ್ರ ಅರ್ಜುನ್ ಮಹೇಶ್ (24)ರ ಮೃತದೇಹ ನಿನ್ನೆ ಮಧ್ಯಾಹ್ನ ಮಂಗಳೂರಿನ ಲಾಡ್ಜ್‌ನಲ್ಲಿ  ಪತ್ತೆಯಾಗಿದೆ.  ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರ್ ಎಂಬಲ್ಲಿನ ಲಾಡ್ಜ್‌ನಲ್ಲಿ ಅರ್ಜುನ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.  ಅರ್ಜುನ್ ಮಹೇಶ್‌ರ ಸಹೋದರಿ ಐಜ ಆರ್ ಮಹೇಶ್ ಜೂನ್  ಮೊದಲ ವಾರ ಪಾಲಾದ ಹಾಸ್ಟೆಲ್‌ವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಳು. ಕೂಡಲೇ …

ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಯುವಕನೋರ್ವ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.  ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಬೈತ್ಯಡ್ಕ ಉನ್ನತಿಯ ನಿವಾಸಿಯಾದ ಬಾಬು ಎಂಬವರ ಪುತ್ರ ಹರೀಶ್ (22) ಮೃತ ಯುವಕ.  ಇವರು ಕೂಲಿ ಕಾರ್ಮಿಕನಾಗಿದ್ದರು. ಮೊನ್ನೆ ರಾತ್ರಿ ಮನೆ ಸಮೀಪದ ಮರದಲ್ಲಿ ಇವರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಘಟನೆ ಬಗ್ಗೆ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಹರೀಶ್‌ರ ತಾಯಿ ಸುಶೀಲ ಮೂರು ತಿಂಗಳ ಹಿಂದೆಯಷ್ಟೇ ಅಸೌಖ್ಯ ಬಾಧಿಸಿ …

ಕಲೆಕ್ಟ್ರೇಟ್‌ನ ಸೀನಿಯರ್ ಕ್ಲರ್ಕ್ ಸಾವು: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ವರದಿ ಸಲ್ಲಿಸಲು ಎಡಿಎಂಗೆ ಜಿಲ್ಲಾಧಿಕಾರಿ ನಿರ್ದೇಶ

ಕಾಸರಗೋಡು: ಕಲೆಕ್ಟ್ರೇಟ್‌ನ ಸೀನಿಯರ್ ಕ್ಲರ್ಕ್ ಎ. ಆಶಾಲತಾರ ಸಾವಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಎಡಿಎಂಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿರ್ದೇಶ ನೀಡಿದ್ದಾರೆ. ಶುಕ್ರವಾರ ನೌಕರೆ 3 ಪ್ಯಾಕೆಟ್ ಇಲಿವಿಷ ಪೇಸ್ಟ್ ಐಸ್‌ಕ್ರೀಂನಲ್ಲಿ ಮಿಶ್ರಣ ಮಾಡಿ ಸೇವಿಸಿದ್ದರು. ತಾನು ಇಲಿವಿಷ ಸೇವಿಸಿರುವುದು ಮನೆ ಹಾಗೂ ಕಚೇರಿಯಲ್ಲಿ ಏಕಾಂಗಿಯಾಗಿದ್ದೇನೆಂಬ ಚಿಂತನೆಯಿಂದಿರುವ ಮೆಂಟಲ್ ಸ್ಟ್ರೆಸ್ ಕಾರಣದಿಂದಾಗಿ ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿರುವುದಾಗಿಯೂ ಇವರು ವಿದ್ಯಾನಗರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತನಗೆ ಯಾರ ವಿರುದ್ಧವೂ ದೂರಿಲ್ಲವೆಂದು, ನಾನು  …

ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರು ಸಂಗ್ರಹಿಸಿದ  ತ್ಯಾಜ್ಯದೊಂದಿಗೆ 30 ಸಾವಿರ ರೂ., 2 ಪವನ್ ಚಿನ್ನ ಪತ್ತೆ

 ಕಾಸರಗೋಡು: ಪ್ಲಾಸ್ಟಿಕ್ ತ್ಯಾಜ್ಯಗಳ ಮಧ್ಯೆ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರಿಗೆ ಎರಡು ಪವನ್ ಚಿನ್ನಾಭರಣ ಹಾಗೂ ೩೦ ಸಾವಿರ   ರೂಪಾಯಿಗಳು ಪತ್ತೆಯಾಗಿದ್ದು   ಅದನ್ನು ಕೂಡಲೇ  ವಾರಸುದಾರರಿಗೆ ಹಸ್ತಾಂತರಿಸಿ ಮಾದರಿಯಾದರು. ಪಳ್ಳಿಕ್ಕರೆ ಪಂಚಾಯತ್‌ನ 10 ಹಾಗೂ 11ನೇ ವಾರ್ಡ್‌ಗಳ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರಾದ ಕಮಲ ಎನ್ ಹಾಗೂ ಮಮತ ಎಂಬಿವರು ಪ್ರಾಮಾಣಿಕತೆ ಮೆರೆದಿದ್ದಾರೆ. ಪೊಯಿನಾಚಿ ಪರಂಬ್‌ನ ಕೃಷ್ಣ ಎಂಬವರ ಮನೆಯಿಂದ ತ್ಯಾಜ್ಯ ಸಂಗ್ರಹಿಸುತ್ತಿದ್ದಾಗ  ಚಿನ್ನ ಹಾಗೂ ಹಣ ಪತ್ತೆಯಾಗಿದೆ.  ತ್ಯಾಜ್ಯವನ್ನು ಬೇರ್ಪಡಿಸುತ್ತಿದ್ದಾಗ  ಪ್ಲಾಸ್ಟಿಕ್ ಚೀಲವೊಂದರಲ್ಲಿ ಇವು ಕಂಡುಬಂದಿದೆ. …

ಜಿಲ್ಲೆಯ ಸ್ವಾತಂತ್ರ್ಯ ದಿನಾಚರಣೆ: ಸಚಿವ ಕೆ.ಎಂ. ಶಾಜಿ ಧ್ವಜಾರೋಹಣ

ಕಾಸರಗೋಡು: ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭಾ ಮೈದಾನದಲ್ಲಿ ನಡೆಯುವ ಪರೇಡ್‌ನಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಂ. ಶಾಜಿ  ಧ್ವಜಾರೋಹಣ ಗೈದು ಅಭಿವಂದನೆ ಸ್ವೀಕರಿಸುವರು. ಸ್ವಾತಂತ್ರ್ಯ ದಿನಾಚರಣೆಯ ಪೂರ್ವಸಿದ್ಧತೆಗಳು ನಡೆಸಲಾಗುತ್ತಿದ್ದು, ನಿನ್ನೆ ಅಭ್ಯಾಸ ಪರೇಡ್ ಆರಂಭಗೊಂಡಿದೆ. ಪರೇಡ್‌ನಲ್ಲಿ ಸಶಸ್ತ್ರ ಸೇನೆಗಳು, ಪೊಲೀಸ್, ಅಬಕಾರಿ, ವೊಕೇಶನಲ್ ಹೈಯರ್ ಸೆಕೆಂಡರಿ, ಸ್ಟುಡೆಂಟ್ಸ್ ಪೊಲೀಸ್ ಕೆಡೆಟ್‌ಗಳು, ಎನ್‌ಸಿಸಿ, ಶಾಲಾ ಬ್ಯಾಂಡ್‌ಸೆಟ್‌ಗಳು ಸಹಿತ 16 ತಂಡಗಳು ಭಾಗವಹಿಸಲಿವೆ. ಸ್ವಾತಂತ್ರ್ಯ ಹೋರಾಟಗಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, …

ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದಿಂದ ವ್ಯಾಪಾರಿ ದಿನಾಚರಣೆ

ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದ ನೇತೃತ್ವದಲ್ಲಿ ವ್ಯಾಪಾರಿ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಘಟಕದ ಅಧ್ಯಕ್ಷ ನರೇಂದ್ರನ್ ಧ್ವಜಾರೋಹಣಗೈದರು. ಪೇಟೆಯಲ್ಲಿ ಮೆರವಣಿಗೆ ನಡೆಯಿತು. ವ್ಯಾಪಾರಿ ಸಂಗಮವನ್ನು ನರೇಂದ್ರನ್‌ರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಸಿ.ಐ ಅನೂಪ್‌ಕೃಷ್ಣ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಕುಂಜಾರು ಮೊಹಮ್ಮದ್ ಹಾಜಿ ಪ್ರಧಾನ ಭಾಷಣ ಮಾಡಿದರು. ಇದೇ ವೇಳೆ ಸದಸ್ಯತ್ವ ವಿತರಣೆ ನಡೆಯಿತು. ಮಾಜಿ ಅಧ್ಯಕ್ಷ ಎಸ್.ಎನ್. ಮಯ್ಯ, ಉಪಾಧ್ಯಕ್ಷ ರಾಜು ಸ್ಟೀಫನ್, ಹಮೀದ್, ಕಾರ್ಯದರ್ಶಿಗಳಾದ ಉದಯಶಂಕರ್, ವಿಶ್ವನಾಥನ್, ರತ್ನಾಕರ ಓಡಂಗಲ್ಲು, …

ಚರಿತ್ರೆಯನ್ನು ರಾಜಕೀಯ ಕನ್ನಡಕದ ಮೂಲಕ ನೋಡಬಾರದು- ಎನ್‌ಟಿಯು

ಕಾಸರಗೋಡು: ಚರಿತ್ರೆಯನ್ನು  ರಾಜಕೀಯ ಕನ್ನಡಕದ ಮೂಲಕ ನೋಡಬಾರದೆಂದು ಎನ್‌ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಅನೂಪ್ ಕುಮಾರ್ ನುಡಿದರು. ಕುಂಬಳೆ ಉಪಜಿಲ್ಲೆಯಲ್ಲಿ ನಡೆದ ಶಾಲಾ ಮಟ್ಟದ ಫ್ರೀಡಂ ಕ್ವಿಜ್ ಸ್ಪರ್ಧೆಯ ಒಂದು ಪ್ರಶ್ನೆಯಲ್ಲಿ ವೀರ ಸಾವರ್ಕರ್‌ರ ಹೆಸರು ಉತ್ತರವಾಗಿ ಬಂದಿರುವ ಹೆಸರಲ್ಲಿ ಅಧ್ಯಾಪಕನ ವಿರುದ್ಧ ಕೈಗೊಂಡ ಅಮಾನತು ಸಹಿತವಿರುವ ಶಿಸ್ತು ಕ್ರಮ ಹಿಂತೆಗೆಯಬೇಕೆಂದು ಆಗ್ರಹಿಸಿ ಎನ್‌ಟಿಯು ನಡೆಸಿದ ಕಾಸರಗೋಡು ಡಿಡಿಇ ಕಚೇರಿ ಮಾರ್ಚ್, ಧರಣಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಚರಿತ್ರೆಯ ಒಂದು ಅಂಶ ರಸಪ್ರಶ್ನೆ ಯಲ್ಲಿ ಉಪಯೋಗಿಸಿರುವುದನ್ನು …