ಮಾಧವ ಸುವರ್ಣ ನಿಧನ

ಉಪ್ಪಳ: ಐಲ ಪಾರೆಕಟ್ಟೆ ನಿವಾಸಿ ಮುಂಬೈ ಜೋಗೇಶ್ವರಿಯಲ್ಲಿ ಪ್ರಕಾಶ್ ವಾಚ್‌ವರ್ಕ್ಸ್ ಮಾಲಕ ರಾಗಿದ್ದ ಮಾಧವ ಸುವರ್ಣ (87) ನಿಧನ ಹೊಂದಿದರು. ಸಜಿಪ ಕೊಳಕೆ ತರವಾಡಿನ ಹಿರಿಯರಾಗಿ ದ್ದರು. ಮೃತರು ಪತ್ನಿ ಲೀಲಾವತಿ, ಮಕ್ಕಳಾದ ಪ್ರಕಾಶ್, ಗಣೇಶ್, ಸುಜಾತ, ಭಾರತಿ, ಸೊಸೆಯಂದಿರಾದ ವಾಣಿಶ್ರೀ, ಶಶಿಕಲಾ, ಅಳಿಯಂ ದಿರಾದ ಕೃಷ್ಣ ಸೂರತ್, ಸದಾಶಿವ ಬೆಜ್ಜ, ಸಹೋದರಿ ಸುಂದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸುಳ್ಯಪದವು ಸೇತುವೆ, ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಕಲ್ಲಗ ಚಂದ್ರಶೇಖರ ರಾವ್‌ರಿಂದ ಕರ್ನಾಟಕ ಮುಖ್ಯಮಂತ್ರಿಗೆ ಮನವಿ

ಬೆಳ್ಳೂರು: ಸುಳ್ಯಪದವು ಸೇತುವೆಯ ಪುನರ್ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಬೇಕೆಂದು ವಿನಂತಿಸಿ ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್ ಕಲ್ಲಗ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಮನವಿ ಸಲ್ಲಿಸಿದರು. ಮನವಿಯ ಪ್ರತಿಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೂ ಸಲ್ಲಿಸಲಾಗಿದೆ. ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇರಳ-ಕರ್ನಾಟಕ ಗಡಿ ಪ್ರದೇಶಗಳಲ್ಲಿರುವ ಸುಳ್ಯಪದವು ಸೇತುವೆ ಅಗಲಕಿರಿದಾಗಿದ್ದು, ಅಲ್ಲದೆ ಹೊಂಡಗಳಿಂದ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಮುಳ್ಳೇರಿಯ, ಬೆಳ್ಳೂರು, ಕಿನ್ನಿಂಗಾರು ಭಾಗದ ಜನರಿಗೆ …

1ನೇ ನಂಬ್ರ ಮಂಡಲ, 1ನೇ ನಂಬ್ರ ಮತಗಟ್ಟೆ, ಅಶ್ವಿನಿಯಿಂದ 1ನೇ ನಂಬ್ರ ಮತ ಚಲಾವಣೆ

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆ ಇತಿಹಾಸದಲ್ಲಿ ವಿಶೇಷವಾದ ಒಂದನೇ ನಂಬ್ರ ಸಾಧನೆ ಸ್ವಂತ ಮಾಡಿರುವುದು ಅಶ್ವಿನಿ ಎಂಬ ಮತದಾರೆಯಾಗಿದ್ದಾರೆ. ರಾಜ್ಯದ ಒಂದನೇ ನಂಬ್ರ ವಿಧಾನಸಭಾ ಮಂಡಲವಾದ ಮಂಜೇಶ್ವರದ ಒಂದನೇ ನಂಬ್ರ ಮತಗಟ್ಟೆಯಲ್ಲಿ ಒಂದನೆಯವಳಾಗಿ ಮತದಾನಗೈದಿರುವುದು ಅಶ್ವಿನಿಯಾಗಿದ್ದಾರೆ. ಜಿವಿಎಚ್‌ಎಸ್‌ಎಸ್ ಕುಂಜತ್ತೂರಿನ ೧ನೇ ನಂಬ್ರ ಬೂತ್‌ನಲ್ಲಿ ಅಶ್ವಿನಿ ಮತದಾನ ಮಾಡಿದ್ದಾರೆ. ಮಂಜೇಶ್ವರ ಗೇರುಕಟ್ಟೆಯ ಅಂಗನವಾಡಿಯಲ್ಲಿ ಈಕೆ ಅಧ್ಯಾಪಿಕೆಯಾಗಿದ್ದಾರೆ. ಈ ಬಾರಿ ಉದ್ಯಾವರ ಜಿಎಲ್‌ಪಿ ಶಾಲೆ ಬೂತ್ ಲೆವೆಲ್ ಆಫೀಸರ್ ಆಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ …

ವಿವಿಧ ಕಡೆಗಳಲ್ಲಿ ರಾತ್ರಿಯೂ ನಡೆದ ಮತದಾನ

ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ  ವಿವಿಧ ಕಡೆಗಳಲ್ಲಿ ನಿನ್ನೆ ಮತದಾನ ರಾತ್ರಿವರೆಗೆ ಮುಂದುವರಿದಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆ ತನಕ ಮತದಾನ ನಿಗದಿಯಾಗಿದ್ದರೂ  ಕೆಲವು ಕಡೆಗಳಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ  ಮತದಾನ ವಿಳಂಬಗೊಂಡಿತು. ಇದರಿಂದಾಗಿ ರಾತ್ರಿವರೆಗೂ ಮತದಾನ ನಡೆಸಬೇಕಾಗಿ ಬಂದಿದೆ.  ಸಂಜೆ 6 ಗಂಟೆ ತನಕ ಸರದಿ ಸಾಲಿನಲ್ಲಿ ನಿಂತವರಿಗೆ ಟೋಕನ್ ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಮಂಜೇಶ್ವರ ಹೊಸಬೆಟ್ಟು ಕಡಪ್ಪರದಲ್ಲಿ ರಾತ್ರಿ 8.15ರ ತನಕ ಮತದಾನ ಮುಂದುವರಿದಿದೆ. ಮಣ್ಣಂಗುಳಿ ಮೈದಾನ ಬಳಿಯ ಶಾಲೆಯ …

ಚಿಕ್ಕಮಗಳೂರು ಬಳಿ ಅರಣ್ಯದಲ್ಲಿ  ನಾಪತ್ತೆಯಾದ ಕೇರಳದ ಬಾಲಕಿಗಾಗಿ ಮುಂದುವರಿದ ಶೋಧ

ಚಿಕ್ಕಮಗಳೂರು: ಇಲ್ಲಿಗೆ ಸಮೀಪದ ಮುಳ್ಳಯ್ಯನಗಿರಿಗೆ ಪ್ರವಾಸಕ್ಕಾಗಿ ತಲುಪಿ ಬಳಿಕ ಕಾಡಿನಲ್ಲಿ ನಾಪತ್ತೆಯಾದ ಕೇರಳದ ಪಾಲಕ್ಕಾಡ್ ನಿವಾಸಿಯಾದ ಶ್ರೀನಂದನ (15) ಎಂಬಾಕೆಗಾಗಿ ಶೋಧ ಕಾರ್ಯ ಮುಂದುವರಿ ಯುತ್ತಿದೆ. ಹತ್ತನೇ ತರಗತಿ ವಿದ್ಯಾರ್ಥಿನಿಯಾದ ಬಾಲಕಿ ತನ್ನ ಪೋಷಕರು ಸಹಿತ ಸುಮಾರು 40 ಮಂದಿಯ ತಂಡದೊಂದಿಗೆ ಈ ತಿಂಗಳ ೭ರಂದು ಚಿಕ್ಕಮಗಳೂರಿಗೆ ತಲುಪಿದ್ದಳು. ಅಂದು ಸಂಜೆ 6 ಗಂಟೆ ವೇಳೆಗೆ ಚಂದ್ರದ್ರೋಣ ಪರ್ವತಶ್ರೇ ಣಿಯ ಮಾಣಿಕ್ಯಧಾರಾ ಸಮೀಪ ಬಾಲಕಿ ನಾಪತ್ತೆಯಾಗಿದ್ದಾಳೆ. ಈ ವಿಷಯ ಬಹಿರಂಗಗೊಂಡ ತಕ್ಷಣ ಸ್ಥಳೀಯರು ಹಾಗೂ ಪ್ರವಾಸಿಗರು ಶೋಧಕಾರ್ಯ …

ಮತದಾನ ಕೊನೆಗೊಂಡ ಬೆನ್ನಲ್ಲೇ ತಳಿಪರಂಬ,ಪಯ್ಯನ್ನೂರು ವಿಧಾನಸಭಾ ಕ್ಷೇತ್ರಗಳ ವಿವಿಧೆಡೆ ಆಕ್ರಮಣ: ಕಾಂಗ್ರೆಸ್ ಕಚೇರಿ, ಮನೆ, ವಾಹನಗಳಿಗೆ ಹಾನಿ

ಪಯ್ಯನ್ನೂರು: ವಿಧಾನಸಭಾ ಚುನಾವಣೆಯ ಮತದಾನ ಕೊನೆಗೊಂಡ ಬೆನ್ನಲ್ಲೇ ತಳಿಪರಂಬ ಹಾಗೂ  ಪಯ್ಯನ್ನೂರು ವಿಧಾನಸಭಾ ಕ್ಷೇತ್ರಗಳ ವಿವಿಧೆಡೆ ವ್ಯಾಪಕ ಆಕ್ರಮಣ ನಡೆದಿದೆ. ಪಯ್ಯನ್ನೂರು ಮಾವಿಚ್ಚೇರಿ ಎಂಬಲ್ಲಿ ಯುಡಿಎಫ್‌ನ ಸ್ವತಂತ್ರ ಅಭ್ಯರ್ಥಿ  ವಿ. ಕುಂಞಿಕೃಷ್ಣನ್‌ರ ಬೆಂಬಲಿಗನೂ, ಮಾಜಿ ಸಿಪಿಎಂ ನೇತಾರನಾದ ಟಿ. ಪುರುಷೋತ್ತಮನ್‌ರ ಮನೆ ಹಾಗೂ ಕಾರಿನ ಮೇಲೆ ಆಕ್ರಮಣ ನಡೆದಿದೆ. ಮನೆಯ ಕಿಟಿಕಿ ಗಾಜುಗಳನ್ನು ಹೊಡೆದು ಪುಡಿಗೈದ ದುಷ್ಕರ್ಮಿಗಳು ಅಂಗಳದಲ್ಲಿ ನಿಲ್ಲಿಸಿದ್ದ ಕಾರಿಗೆ  ಕಿಚ್ಚಿಡಲು ಯತ್ನಿಸಿದ್ದಾರೆ. ಟಿ. ಪುರುಷೋತ್ತಮನ್ ಮಾಜಿ ಸಂಸದ, ಸಿಪಿಎಂ ನೇತಾರನಾಗಿದ್ದ ಟಿ. ಗೋವಿಂದನ್‌ರ  ಅಳಿಯನಾಗಿ …

ರಾಜ್ಯದಲ್ಲಿ ಬೆಳಿಗ್ಗಿನಿಂದಲೇ ಭರ್ಜರಿ ಮತದಾನ: ಮಂಜೇಶ್ವರ ಕಯ್ಯಾರಿನ 128ನೇ ಮತಗಟ್ಟೆಯಲ್ಲಿ ನಕಲಿ ಮತದಾನ ಆರೋಪ: ಓರ್ವ ಸೆರೆ

ತಿರುವನಂತಪುರ: ಕೇರಳ ವಿಧಾನ ಸಭಾ ಚುನಾವಣೆಗಿರುವ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಕ್ಷಣದಿಂದಲೇ ರಾಜ್ಯದಾದ್ಯಂತವಾಗಿ ಭರ್ಜರಿ ಮತದಾನ ನಡೆಯುತ್ತಿದೆ. ಬೆಳಿಗ್ಗೆ 12.45 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ. 40.80ರಷ್ಟು ಮತದಾನ ನಡೆದಿದೆ. ಇದೇ ಸಮಯದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ.39.50 ಮತದಾನ ನಡೆದಿದೆ. ರಾಜ್ಯದ ಒಟ್ಟು 140 ವಿಧಾನಸಭಾ ಕ್ಷೇತ್ರಗಳಲ್ಲಿ   ಮತದಾರರ ಭಾರೀ ಸಾಲುಗಳೇ ಗೋಚರಿಸಿದ್ದು  ಇದು ಜನರು ಅತ್ಯುತ್ತಮ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆಂಬುದನ್ನು ಸೂಚಿಸುತ್ತದೆ. ಮತದಾನ ಪ್ರಕ್ರಿಯೆ ಈತನಕ ಶಾಂತರೀತಿಯಲ್ಲಿ ಮುಂದುವರಿದಿದೆ. ಎಲ್ಲಾ ಮತಗಟ್ಟೆಗಳಲ್ಲೂ …

ಹಿರಿಯ ವ್ಯಾಪಾರಿ, ಕಾರವಲ್ ಏಜೆಂಟ್ ನಿಧನ

ವರ್ಕಾಡಿ: ಬೋರ್ಕಳ ನಿವಾಸಿ ಹಾಗೂ ಬೇಕರಿ ಜಂಕ್ಷನ್‌ನಲ್ಲಿ ವ್ಯಾಪಾರಿಯಾಗಿದ್ದ ವಾಮನ ಬೋರ್ಕಳ (56) ನಿಧನ ಹೊಂದಿ ದರು. ಹೃದಯ ಸಂಬಂಧ ಕಾಯಿಲೆ ಯಿಂದ ಬಳಲುತ್ತಿದ್ದ ಇವರು ಮಂ ಗಳೂರಿನ ಆಸ್ಪತ್ರೆಯಲ್ಲಿ ದಾಖಲಾ ಗಿದ್ದರು. ನಿನ್ನೆ ಮಧ್ಯಾಹ್ನ ನಿಧನ ಸಂಭವಿಸಿದೆ. ಕಾರವಲ್ ಪತ್ರಿಕೆ ಏಜೆಂಟ್ ಆಗಿದ್ದರು. ವಿವಿಧ ಪತ್ರಿಕೆ ಗಳಿಗೆ ಸ್ಥಳೀಯ ಸುದ್ಧಿಗಳನ್ನು ಬರೆದು ಕಳುಹಿಸುತ್ತಿದ್ದರು. ಯಕ್ಷಗಾನಪ್ರೇಮಿ ಯಾಗಿದ್ದ ಇವರು ಹಲವಾರು ಕಾರ್ಯಕ್ರಮಗಳಿಗೆ ಪ್ರಾಯೋಜ ಕತ್ವ ವಹಿಸಿದ್ದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ  ರಂಗಗಳಲ್ಲೂ ಗುರುತಿಸಿ ಕೊಂಡಿದ್ದರು. ಮೃತರು ಪತ್ನಿ …

ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕ ಸಾವು

ಕಾಸರಗೋಡು: ಕಾರು-ಸ್ಕೂಟರ್ ಢಿಕ್ಕಿ ಹೊಡೆದು ಗಂಭೀರ ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಸಾವ ನ್ನಪ್ಪಿದ ಘಟನೆ ನಡೆದಿದೆ.  ಚೆಟ್ಟುಂಗುಳಿ ಕೆ.ಎಸ್. ಅಬ್ದುಲ್ಲ ಆಂಗ್ಲಮಾಧ್ಯಮ ಹೈಯರ್ ಸೆಕೆಂಡರಿ ಶಾಲೆ ಸಮೀಪದ ಸಿ.ಎಚ್. ಮಂಜಿಲ್‌ನ ಮೊಹಮ್ಮದ್ ನಿಹಾಲ್ (19) ಸಾವನ್ನಪ್ಪಿದ ಯುವಕ. ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಳೆದ ವರ್ಷ ವಿಎಚ್‌ಸಿಇ ಪರೀಕ್ಷೆಯಲ್ಲಿ ಉತ್ತೀರ್ಣನಾದ ಮೊಹಮ್ಮದ್ ನಿಹಾಲ್ ಬಳಿಕ ವಿದ್ಯಾನಗರದ ಸುಗಂಧ ದ್ರವ್ಯ ಮಾರಾಟದಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದನು.  ಮೊಹಮ್ಮದ್ ನಿಹಾಲ್ ಸ್ಕೂಟರ್‌ನಲ್ಲಿ ಕಳೆದ ರವಿವಾರ ಉಳಿಯತ್ತಡ್ಕ ಇಸ್ಸತ್‌ನಗರದ …

ಉದಯಗಿರಿ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ನಾಳೆಯಿಂದ

ವಿದ್ಯಾನಗರ: ಉದಯಗಿರಿ ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಒತ್ತೆಕೋಲ ಮಹೋತ್ಸವ ನಾಳೆಯಿಂದ 12ರ ತನಕ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರಿಗೆ ಪೂರ್ಣಕುಂಭ ಸ್ವಾಗತ, 7.30ಕ್ಕೆ ಆನೆಚಪ್ಪರ ಏರಿಸುವುದು, ಗಣಪತಿ ಹೋಮ, ತಂಬಿಲ, ಸಂಜೆ 4 ಗಂಟೆಗೆ  ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಕೈಲಾಸಪುರ ಶ್ರೀ ರಕ್ತೇಶ್ವರಿ ಗುಳಿಗ ಸನ್ನಿಧಿಯಿಂದ ಆರಂಭ, ಉಗ್ರಾಣ ತುಂಬಿಸುವುದು ನಡೆಯಲಿದೆ. 6.30ಕ್ಕೆ ದೀಪಾರಾಧನೆ, 7.30ರಿಂದ ಕೈಕೊಟ್ಟಿ ಕಳಿ, 8ಕ್ಕೆ ಮೆಗಾ ಫ್ಯೂಶನ್ ಡ್ಯಾನ್ಸ್, 9 ಗಂಟೆಗೆ ಪೂರಕಳಿ …