ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ವಿದ್ಯಾರ್ಥಿಗಳು ಮರಳಿ ಶಾಲೆಗೆ ಕಾರ್ಯಕ್ರಮ: ಖುರ್‌ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿಗಳಿಗೆ ಗೌರವ

ಮಂಜೇಶ್ವರ: ಕುಂಜತ್ತೂರಿನ ಪೀಸ್ ಕ್ರಿಯೇಟಿವ್ ಶಾಲೆ ೨೦೨೬ -೨೭ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಒಂದು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಶಾಲೆಯು ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಸ್ವಾಗತಿಸುವುದರೊಂದಿಗೆ, ಕುರ್‌ಆನ್ ಅನ್ನು ಸಂಪೂರ್ಣವಾಗಿ ಕಂಠಪಾಠ (ಹಿಫ್‌ಝ್) ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಸಾಹುಲ್ ಹಮೀದ್ – ರಜಿಯಾ ದಂಪತಿ ಪುತ್ರ ಹಾಫಿಲ್ ಮೊಹಿಯುದ್ದೀನ್ ಮಿಸಾಬ್ ಹಾಗೂ ಅಬ್ದುಲ್ ರಝಾಕ್ – ನಬೀಸಾ ದಂಪತಿ ಪುತ್ರ ಹಾಫಿಲ್ ಅಬ್ದುಲ್ ನೌಫಲ್ ಎಂಬೀ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಹಾಫಿಝ್ ಆಗಿರುವ ವಿದ್ಯಾರ್ಥಿಗಳು …

ಅನಂತಪುರ ಉದ್ದಿಮೆ ಪಾರ್ಕ್‌ನ ದುರ್ನಾತ ಪರಿಹಾರಕ್ಕೆ ಒತ್ತಾಯ: 8ರಂದು ಕ್ರಿಯಾ ಸಮಿತಿಯಿಂದ ಮಾರ್ಚ್, ಧರಣಿ

ಕುಂಬಳೆ: ಅನಂತಪುರ ಉದ್ದಿಮೆಪಾರ್ಕ್‌ನ ಫ್ಯಾಕ್ಟರಿಗಳಿಂದ ಹೊರಸೂಸುವ ದುರ್ನಾತಕ್ಕೆ ಪರಿಹಾರ ಕಾಣಲು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು, ಜನರ ಜೀವ ಹಾಗೂ ಸೊತ್ತಿಗೆ ಬೆದರಿಕೆ ಯಾಗುವ ಕೈಗಾರಿಕೆಗಳನ್ನು ಮುಚ್ಚುಗಡೆಗೊಳಿಸಬೇಕೆಂದು ಕ್ರಿಯಾ ಸಮಿತಿ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಫಾರಂನಲ್ಲಿ ಕರೆದ ಪತ್ರಿಕಾಗೋ ಷ್ಠಿಯಲ್ಲಿ ಒತ್ತಾಯಿಸಿದ್ದಾರೆ.  ಚರಂಡಿ ಇಲ್ಲದಿರುವುದರಿಂದ ಮಲಿನ ಜಲ ಹರಿದು ಕುಡಿಯುವ ನೀರು ಮೂಲ ಗಳಿಗೆ ತಲುಪಿ ಶುದ್ಧ ನೀರು ಕಲುಷಿ ತಗೊಳ್ಳುತ್ತಿದೆಯೆಂದು ಪದಾಧಿಕಾರಿಗಳು ಆರೋಪಿಸಿದ್ದಾರೆ. ನೂತನವಾಗಿ ಆರಂಭಿಸಲಿರುವ ಕೈಗಾರಿಕೆಗಳಿಗೆ ಅನುಮತಿ ನೀಡ ಕೂಡದು.  ಕೈಗಾರಿಕೆ ಹೆಸರಲ್ಲಿ …

ಮಗುವಿನ ಬರ್ಭರ ಕೊಲೆ: ಉಪ್ಪಳದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಉಪ್ಪಳ: ಕೇರಳದ ನೆಡುಮಂ ಙಾಡ್ ಎಂಬಲ್ಲಿ ಯುವತಿಯೊಬ್ಬಳು ಅನ್ಯಮತೀಯನಾದ ಪ್ರಿಯತಮನೊಂ ದಿಗೆ ಸೇರಿ  ಹೆತ್ತ ಕರುಳ ಕುಡಿಯನ್ನೇ ಕೊಲೆಗೈದಿರುವುದನ್ನು ಪ್ರತಿಭಟಿಸಿ ಹಿಂದೂ ಹಿತರಕ್ಷಣಾ ವೇದಿಕೆ ಮಂಗಲ್ಪಾಡಿ ಪಂಚಾಯತ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಭಾರತೀಯ ಜನತಾ ಪಕ್ಷದ ಕಲ್ಲಿಕೋಟೆ ವಲಯದ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ, ಕಾನೂನು ಬಾಹಿರವಾಗಿ ಒಂದಾಗಿ  ಜೀವಿಸಿ  ಪುಟ್ಟ ಮಗುವನ್ನು ಕೊಲೆಗೈದ ಅಸ್ಕರ್ ಹಾಗೂ ಅಖಿಲ  ಎಂಬಿವರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಸರಕಾರ ಕ್ರಮ ಕೈಗೊಳ್ಳಬೇಕೆಂದು   ಒತ್ತಾಯಿಸಿದರು. ರಾಷ್ಟ್ರೀಯ ಸ್ವಯಂ …

ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಹೊಸ ಮುಖ್ಯ ಸರ್ವೇಯರ್‌ನ್ನು ತುರ್ತಾಗಿ ನೇಮಿಸಬೇಕು-ವಲ್ಸರಾಜ್ ಕೆ.ಪಿ

ಉಪ್ಪಳ: ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಮೀಸಲು ವಿಭಾಗದಲ್ಲಿ ಮುಖ್ಯ ಸರ್ವೇಯರ್ ಇಲ್ಲದ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮಂಜೇಶ್ವರ ತಾಲೂಕು ಕಚೇರಿಯಲ್ಲಿ  ತಿಂಗಳುಗಳಿಂದ ಮುಖ್ಯ ಸರ್ವೇಯರ್ ಇಲ್ಲ. ಇರುವ ಮುಖ್ಯ ಸರ್ವೇಯರ್ ರಜೆಯಲ್ಲಿದ್ದಾರೆ.  ಬೇರೆ ಯಾವುದೇ ಅಧಿಕಾರಿಗೆ ಮುಖ್ಯ ಸರ್ವೇಯರ್‌ನ ಉಸ್ತುವಾರಿ ನೀಡಿಲ್ಲ. ಅನೇಕ  ಜನರು ಸರ್ವೇ ರಿಪೋರ್ಟ್ ನಡೆಸಿ ಹೆಡ್ ಸರ್ವೇಯರ್ ವರದಿಗಾಗಿ ಕಾಯುತ್ತಿದ್ದಾರೆ. ತಿಂಗಳಿಂದ ಎಷ್ಟೋ ಜನರು ತಾಲೂಕು ಕಚೇರಿಗೆ ಹೋಗಿ ಬರಿಗೈಯಲ್ಲಿ ಮರಳುತ್ತಿದ್ದಾರೆ. ಉನ್ನತ ಅಧಿಕಾರಿಗಳನ್ನು ವಿಚಾರಿಸಿದಾಗ ಹೊಸ  ಮುಖ್ಯ ಸರ್ವೇಯರ್ ಬಂದಿಲ್ಲವೆಂಬ …

ಪೆರ್ಮುದೆ- ಪೆರ್ಲ ರಸ್ತೆಯ ತಿರುವುಗಳಲ್ಲಿ ಕಾಡುಪೊದೆ ಬೆಳೆದು ವಾಹನ ಸವಾರರಿಗೆ ಆತಂಕ

ಉಪ್ಪಳ: ಪೆರ್ಮುದೆಯಿಂದ ಪೆರ್ಲಕ್ಕೆ ಸಂಚರಿಸುವ ದಾರಿ ಮಧ್ಯೆ ಹಲವು ತಿರುವುಗಳಲ್ಲಿ ಬೆಳೆದು ನಿಂತಿರುವ ಕಾಡುಪೊದೆಗÀಳು ವಾಹನ ಸವಾರರಲ್ಲಿ ಆತಂಕ ಉಂಟು ಮಾಡಿದೆ. ಅಂಗಡಿ ಮೊಗರು, ಬಾಡೂರು ಸಹಿತ ಹಲವಾರು ತಿರುವುಗಳು ಈ ರಸ್ತೆಯಲ್ಲಿ ಕಂಡು ಬರುತ್ತಿದ್ದು, ಇಕ್ಕೆಡೆಗಳಲ್ಲಿ ಕಾಡುಪೊದೆಗಳು ಬೆಳೆದು ಎದುರು ಭಾಗದಿಂದ ಬರುವ ವಾಹನಗಳು ಗಮನಕ್ಕೆ ಬಾರದೆ ಅಪಘಾತಕ್ಕೆ ಆಹ್ವಾ ನೀಡಿದಂತಾಗುತ್ತಿದೆ ಎಂದು ದೂರಲಾ ಗಿದೆ. ಅಚ್ಚು ಕಟ್ಟಾಗಿ ವ್ಯವಸ್ಥಿತ ವಾಗಿರುವ ಲೋಕೋಪಯೋಗಿ ಇಲಾಖೆಯ ಈ ರಸ್ತೆಯಲ್ಲಿ ವಾಹನ ಗಳು ವೇಗದಿಂದ ಸಂಚರಿಸುವಾಗ ತಿರುವುನಲ್ಲಿ ದ್ವಿಚಕ್ರ …

ಮಳೆಗಾಲ ಆಗಮಿಸುವುದರೊಂದಿಗೆ ಕಳ್ಳರ ಭಯವೂ ಸೃಷ್ಟಿ: ಮಜೀರ್ಪಳ್ಳದಲ್ಲಿ ಜ್ಯುವೆಲ್ಲರಿ ಕಳವು ಯತ್ನ; ಆರೋಪಿಗಳಿಗಾಗಿ ವ್ಯಾಪಕ ಶೋಧ

ಕುಂಬಳೆ: ವರ್ಕಾಡಿ ಬಳಿ ಮಜೀರ್ಪಳ್ಳದ ಜ್ಯುವೆಲ್ಲರಿ ಕಳವಿಗೆ ಯತ್ನಿಸಿದ ಪ್ರಕರಣದಲ್ಲಿ  ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಶ್ರಫ್ ಹಾಗೂ ಶಹೀರ್ ಎಂಬವರು ಪಾಲುದಾರರಾಗಿರುವ ‘ಚೋಯ್ಸ್ ಗೋಲ್ಡ್’ ಎಂಬ ಜ್ಯುವೆಲ್ಲರಿಯಿಂದ ಕಳವು ಯತ್ನ ನಡೆದಿದೆ. ಎಂದಿನಂತೆ ಮೊನ್ನೆ ರಾತ್ರಿ 8 ಗಂಟೆಗೆ ಜ್ಯುವೆಲ್ಲರಿ ಮುಚ್ಚಿ ಇವರು ಮರಳಿದ್ದರು. ಇಲ್ಲಿ ಕಳವು ಯತ್ನ ನಡೆದಿರುವುದು ನಿನ್ನೆ ಬೆಳಿಗ್ಗೆ ಅರಿವಿಗೆ ಬಂದಿದೆ. ಮೊನ್ನೆ ರಾತ್ರಿ ಕಳ್ಳರು ಈ ಕೃತ್ಯ ನಡೆಸಿರಬಹುದೆಂದು ಅಂದಾಜಿಸಲಾಗಿದೆ. ಜ್ಯುವೆಲ್ಲರಿಯ ಮುಂಭಾಗದ ಶೆಟರ್‌ನ್ನು ಜಾಕಿ ಹಾಗೂ …

ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಅರೆನಗ್ನ ಫೊಟೋ ಪ್ರಚಾರ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಅರೆನಗ್ನ ಫೊಟೋವನ್ನು ವಾಟ್ಸಪ್‌ನಲ್ಲಿ ಪ್ರಚಾರ ಪಡಿಸಲಾಗಿದೆ ಎಂಬ ದೂರಿನಂತೆ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಚಿತ್ತಾರಿಕಲ್, ಕಡುಮೇನಿ ಕರಿಮಾಡಂ ಹೌಸ್‌ನ ಕೆ.ಎ. ಜೋರ್ಜ್‌ರ ದೂರಿನಂತೆ ಕಣ್ಣಿವಯಲ್, ಚಿರವಿಳಯಿಲ್ ಶಾಜಹಾನ್, ಚಿತ್ತಾರಿಕಲ್‌ನ ಸ್ನೇಹಜನ್ ಎಂಬಿವರ ವಿರುದ್ಧ ಚಿತ್ತಾರಿಕಲ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಈಸ್ಟ್ ಎಳೇರಿ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಅರೆನಗ್ನ ಫೊಟೋ ಪ್ರಚಾರಪಡಿಸಲಾಗಿದೆ ಎಂದು ದೂರಲಾಗಿತ್ತು. ನಕಲಿಯಾಗಿ ಸೃಷ್ಟಿಸಿ ಮುಖ್ಯಮಂತ್ರಿಗೆ ಅವಮಾನಕರವಾಗುವ ರೀತಿಯಲ್ಲಿ ಪ್ರಚಾರಪಡಿಸಿದ ಬಗ್ಗೆ ಕೇಸು ದಾಖಲಿಸಲಾಗಿದೆ.

ಅಪಘಾತಕ್ಕೀಡಾದ ಕಾರಿನಲ್ಲಿ ಮದ್ಯ ಪತ್ತೆ: ಬಂಧಿತ ಆರೋಪಿಗೆ ರಿಮಾಂಡ್

ಉಪ್ಪಳ: ಕಾರಿನಲ್ಲಿ ಬೃಹತ್ ಪ್ರಮಾಣದ ಮದ್ಯ ಸಾಗಾಟ ವೇಳೆ ಸೆರೆಗೀಡಾದ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕುಳೂರು ಚಾರ್ಲ ಕೆಮ್ಮಜಲು ನಿವಾಸಿ ಪ್ರಜ್ವಲ್ (25) ಎಂಬಾತ ರಿಮಾಂಡ್‌ಗೊಳಗಾದ ಆರೋಪಿಯಾಗಿದ್ದಾನೆ. ಪ್ರಜ್ವಲ್  ಮದ್ಯ ಸಾಗಿಸುತ್ತಿದ್ದ ಕಾರು ಮೊನ್ನೆ ರಾತ್ರಿ 11.20ರ ವೇಳೆ ಉಪ್ಪಳ ಗೇಟ್ ಬಳಿ ಸರ್ವೀಸ್ ರಸ್ತೆಯಲ್ಲಿ ಚರಂಡಿಗಾಗಿ ತೋಡಿದ ಹೊಂಡಕ್ಕೆ ಬಿದ್ದಿತ್ತು. ವಿಷಯ ತಿಳಿದು ಮಂಜೇ ಶ್ವರ ಪೊಲೀಸರು ಅಲ್ಲಿಗೆ ತಲುಪಿ ಕಾರನ್ನು ಪರಿಶೀಲಿಸಿದಾಗ ಕರ್ನಾಟಕ ನಿರ್ಮಿತ 180 ಎಂಎಲ್‌ನ 1483 ಬಾಟ್ಲಿ ಮದ್ಯ, 90 …

ಮಲಗುವ ಕೊಠಡಿಯಲ್ಲಿ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಬೇಕಲ ಕೋಟಿಕುಳಂ ಕೋಟಪ್ಪಾರದಲ್ಲಿ  ಮನೆಯ ಮಲಗುವ ಕೊಠಡಿ ಯಲ್ಲಿ ನೇಣು ಬಿಗಿದ ಸ್ಥಿತಿ ಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮುಹಮ್ಮದ್ ಅನ್ಸಾಫ್ (30) ಮೃತಪಟ್ಟ ಯುವಕ. ನಿನ್ನೆ ಅಪರಾಹ್ನ 2.30ರಿಂದ ಸಂಜೆ 6.30ರ ಮಧ್ಯೆ ನೇಣು ಬಿಗಿದಿರ ಬೇಕೆಂದು ಶಂಕಿಸಲಾಗಿದೆ. ಆದರೆ ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಎಸ್‌ಎಫ್‌ಐ ಸ್ಥಾಪಿಸಿದ ಬ್ಯಾನರ್ ತೆರವು: ಪ್ರತಿಭಟನೆ ನಡೆಸಿದ ಪಂಚಾಯತ್ ಅಧ್ಯಕ್ಷರೂ ಸೇರಿ 42 ಮಂದಿ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ಶಾಲಾ ಪ್ರವೇಶೋತ್ಸವದಂಗವಾಗಿ ಎಸ್‌ಎಫ್‌ಐ ಸ್ಥಾಪಿಸಿದ್ದ ಬ್ಯಾನರ್‌ನ್ನು ಪೊಲೀಸರು ತೆರವುಗೊಳಿಸಿರುವುದನ್ನು ಪ್ರತಿಭಟಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮ ಪಂಚಾಯತ್ ಅಧ್ಯಕ್ಷರೂ ಸೇರಿದಂತೆ 42 ಮಂದಿ ವಿರುದ್ಧ ಅಂಬಲತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುಲ್ಲೂರು ಪೆರಿಯ ಪಂಚಾಯತ್ ಅಧ್ಯಕ್ಷೆ ಸಿ.ಕೆ. ಸಬಿತ, ಜ್ಯೋತಿಬಸು,ಅನೂಪ್,ಮಂಜೂಷ, ನಾರಾಯಣ ಬಂಗ್ಲಾವ್ ಸೇರಿದಂತೆ ೪೨ ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪುಲ್ಲೂರು ಇರಿಯ ಸರಕಾರಿ ಪ್ರೌಢಶಾಲೆಯಲ್ಲಿ ಪ್ರವೇಶೋತ್ಸವ ದಂಗವಾಗಿ ಎಸ್‌ಎಫ್‌ಐ ಸ್ವಾಗತ ಬ್ಯಾನರ್ ಸ್ಥಾಪಿಸಿತ್ತು.  ಶಾಲೆಯಲ್ಲಿ  ವಿದ್ಯಾರ್ಥಿ ರಾಜಕೀಯ ಸಲ್ಲದೆಂಬ ನಿಲುವನ್ನು ಪ್ರಸ್ತುತ ಶಾಲೆಯ …