ಬೈಕ್‌ನಲ್ಲಿ ಮಾದಕದ್ರವ್ಯ ಸಾಗಾಟ: ಯುವಕ ಸೆರೆ

ಮಂಜೇಶ್ವರ: ಬೈಕ್‌ನಲ್ಲಿ ಮಾದಕದ್ರವ್ಯ ಸಾಗಿಸಿದ ಆರೋಪ ದಂತೆ ಅಬಕಾರಿ ತಂಡ ಓರ್ವನನ್ನು ಬಂಧಿಸಿದೆ. ಕುಂಜತ್ತೂರು ಪದವು ನಿವಾಸಿ ಯಾಸಿನ್ ಇಮ್ರಾಜ್ ಕೆ.ಎಂ. (36) ಬಂಧಿತ ಯುವಕ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಶೋಬ್‌ರ ನೇತೃತ್ವದ ತಂಡ ಕುಂಜತ್ತೂರಿನಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಮಾದಕದ್ರವ್ಯವಾದ 4 ಗ್ರಾಂ ಮೆಥಾಫಿಟಮಿನ್ ಸಾಗಿಸಿದ ಆರೋಪ ದಂತೆ ಯಾಸಿನ್ ಇಮ್ರಾಜ್‌ನನ್ನು ಸೆರೆ ಹಿಡಿದು ಆತನ ವಿರುದ್ಧ ಎನ್‌ಡಿಪಿಎಸ್ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ …

ತಿಮರೋಡಿ ನಿವಾಸಕ್ಕೆ ಚಿನ್ನಯ್ಯನನ್ನು ಕರೆದುಕೊಂಡು ಬಂದ ಎಸ್.ಐ.ಟಿ.: ಧರ್ಮಸ್ಥಳ ಪ್ರಕರಣದಲ್ಲಿ ಕುತೂಹಲ

ಉಜಿರೆ: ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ಮತ್ತು ಶವಗಳನ್ನು ಹೂತಿರುವ ಆರೋಪ ಮಾಡಿ ಬಂಧನಕ್ಕೊಳಗಾಗಿರುವ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಬೆಳಿಗ್ಗೆ ಉಜಿರೆಯ ಹೋರಾಟಗಾರ ತಿಮರೋಡಿಯವರ ಮನೆಗೆ ಕರೆತಂದು ಪರಿಶೀಲನೆ ಪ್ರಕ್ರಿಯೆ ನಡೆಸಿದರು. ಈ ಸಂದರ್ಭದಲ್ಲಿ ತಿಮರೋಡಿಯವರ ಮನೆಯ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬೆಳಿಗ್ಗೆ ಉಜಿರೆ ಕಡೆಗೆ ಆಗಮಿಸಿದ ಎಸ್‌ಐಟಿ ಅಧಿಕಾರಿಗಳ ತಂಡ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ಕರೆತಂದಿತ್ತು. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಅಧಿಕಾರಿಗಳು …

ಯುವತಿ ಕ್ವಾರ್ಟರ್ಸ್‌ನೊಳಗೆ ನೇಣುಬಿಗಿದು ಸಾವು

ಕಾಸರಗೋಡು: ಯುವತಿ ಯೋರ್ವೆ ಕ್ವಾರ್ಟರ್ಸ್‌ನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡ್ಲು ಮೀಪುಗುರಿ ನಿವಾಸಿ ಉದಯ ಎಂಬವರ ಪುತ್ರಿ ಸಜಿನಾ (18) ಮೃತಪಟ್ಟ ಯುವತಿಯಾಗಿದ್ದಾಳೆ. ನಿನ್ನೆ   ಈಕೆ ಮನೆಯಲ್ಲಿದ್ದಳು. ಕಾಸರಗೋ ಡಿನ ವ್ಯಾಪಾರ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ತಾಯಿ ಸುಜಾತ ಸಂಜೆ ೬.೪೦ರ ವೇಳೆ ಮನೆಗೆ ಮರಳಿ ಬಂದಾಗ ಸಜಿನಾ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತಳು ತಂದೆ, ತಾಯಿ, ಸಹೋದರಿಯರಾದ ಉಷಾ, ನಿಷಾ, …

ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ: ಆರೋಪಿಗೆ ಅವಳಿ ಜೀವಾವಧಿ ಸಜೆ, ಜುಲ್ಮಾನೆ

ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ 9 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಬಳಿಕ ಆಕೆಯ ಬೆಂಡೋಲೆಯನ್ನು ಕದ್ದ ಪ್ರಕರಣದ ಆರೋಪಿ ಮೂಲತಃ ಕರ್ನಾಟಕ ಕೊಡಗು ನಾಪೊಕ್ಲು ಪರಂಬೋಳಿ ಕುಂಜಿಲ ನಿವಾಸಿ ಹಾಗೂ  ಈಗ ಹೊಸದುರ್ಗ ಪೂಂಜಾವಿ ಬದ್ರಿಯಾ ಮಂಜಿಲ್‌ನಲ್ಲಿ ವಾಸಿಸುವ ಪಿ.ಎ. ಸಲೀಂ ಅಲಿಯಾಸ್ ಸಲ್ಮಾನ್(37)ಎಂಬಾತನಿಗೆ ಹೊಸದುರ್ಗ ವಿಶೇಷ ಕ್ಷಿಪ್ರ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ. ಸುರೇಶ್  ವಿವಿಧ ಸೆಕ್ಷನ್‌ಗಳ ಪ್ರಕಾರ ಅವಳಿ ಜೀವಾವಧಿ ಶಿಕ್ಷೆ , 2,71,000 ಜುಲ್ಮಾನೆ  ವಿಧಿಸಿ ತೀರ್ಪು …

ಮನೆಯೊಳಗೆ ಪ್ರಾಚ್ಯವಸ್ತು ಸಂಗ್ರಹ: ತಜ್ಞರಿಂದ ಪರಿಶೀಲನೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಕುಳಂನಲ್ಲಿ ಮುಚ್ಚುಗಡೆಗೊಳಿಸಿದ  ಮನೆ ಹಾಗೂ ಅಂಗಡಿಯೊಳಗೆ ಪತ್ತೆಯಾದ ಪ್ರಾಚ್ಯ ವಸ್ತುಗಳ ಕುರಿತು  ಪರಿಶೀಲನೆ ನಡೆಸಲು  ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆ ತಲುಪಿದ್ದಾರೆ.  ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ ತೃಶೂರ್ ವಲಯ ಕಚೇರಿಯ ಪ್ರಾಚ್ಯ ವಸ್ತು ತಜ್ಞರಾದ ಮೂರು ಮಂದಿ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ.  ಶಟರ್ ಮುಚ್ಚಿದ ಅಂಗಡಿಯಿಂದ ಈ ಹಿಂದೆ ಪತ್ತೆಹಚ್ಚಿ ಬೇಕಲ  ಪೊಲೀಸ್ ಠಾಣೆಯಲ್ಲಿ ಭದ್ರವಾಗಿರಿಸಿದ ಖಡ್ಗಗಳು ಹಾಗೂ ಬಂದೂಕುಗಳನ್ನು ಮೊದಲು ಪರಿಶೀಲನೆ ನಡೆಸಲಾಯಿತು.  ಅನಂತರ ಮನೆ …

ಕಾಸರಗೋಡಿಗೆ ಬರುತ್ತಿದ್ದ ಯುವಕ ರೈಲಿನಿಂದ  ಬಿದ್ದು ಮೃತ್ಯು

ಕಾಸರಗೋಡು: ಸಂಚರಿಸುತ್ತಿ ರುವ ರೈಲಿನಿಂದ ಕೆಳಕ್ಕೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಸಾವನ್ನಪ್ಪಿದ ಯುವಕನನ್ನು ಅಸ್ಸಾಂ ನಿವಾಸಿ ಸುಂದರ್ ಸೋರಾನ್ (33) ಎಂದು ಗುರುತಿಸಲಾಗಿದೆ. ತೃಕರಿಪುರ ರಾಮವಿಲ್ಯಂ ಕಳಗದ ಬಳಿಯ ರೈಲು ಹಳಿಯಲ್ಲಿ ಈತನ ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿದೆ. ಈತ ಧರಿಸಿದ ಶರ್ಟ್‌ನ ಜೇಬಿನಲ್ಲಿ ಪಾಲ ಕ್ಕಾಡ್‌ನಿಂದ ಕಾಸರಗೋಡಿಗೆ ತೆಗೆದ ರೈಲ್ವೇ ಟಿಕೆಟ್  ಪತ್ತೆಯಾಗಿದೆ.  ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.  ಘಟನೆ ಬಗ್ಗೆ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕ್ಷೇತ್ರ ವಾದ್ಯ ಕಲಾವಿದ ನಿಧನ

ಕಾಸರಗೋಡು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಕ್ಷೇತ್ರ ವಾದ್ಯ ಕಲಾವಿದ ಮೃತಪಟ್ಟರು.  ಪುಲ್ಲೂರು ವಿಷ್ಣುಮಂಗಲ ನಿವಾಸಿಕೆ. ನಂದಕುಮಾರ್ ಮಾರಾರ್ (46) ಮೃತ ವ್ಯಕ್ತಿ.  ಚಿಕಿತ್ಸೆ ಮಧ್ಯೆ ನಿನ್ನೆ ರಾತ್ರಿ ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಯಲ್ಲಿ ನಿಧನ ಸಂಭವಿಸಿದೆ.  ಇವರು ಕಳೆದ ೨೫ ವರ್ಷಗಳಿಂದ ಕ್ಷೇತ್ರ ವಾದ್ಯ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದರು. ಗೋಪಾಲನ್ ಮಾರಾರ್-ದಿ| ಕಾರ್ತ್ಯಾಯಿನಿ ಮಾರಸ್ಯಾರ್  ದಂಪತಿ ಪುತ್ರನಾದ ಮೃತರು ಸಹೋದರಿ ಯರಾದ ಇಂದುಮತಿ, ರಜನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

ನೆಲ್ಲಿಕುಂಜೆ ಕಡಪ್ಪುರ-ಚೀರುಂಬಾ ರಸ್ತೆಯಲ್ಲಿ ಹೊಂಡಗಳು: ಜನಸಂಚಾರಕ್ಕೆ ಸಂಕಷ್ಟ; ದುರಸ್ತಿಗೆ ಹಣ ಮಂಜೂರಾದರೂ ಕಾಮಗಾರಿ ಆರಂಭಗೊಂಡಿಲ್ಲ

ಕಾಸರಗೋಡು: ನೆಲ್ಲಿಕುಂಜೆ ಕಡಪ್ಪುರ  ಫಿರ್ದೋಸ್ ನಗರ ಜಂಕ್ಷನ್‌ನಿಂದ ಚೀರುಂಬಾ ರಸ್ತೆ ಹೊಂಡಗಳಿಂದ ತುಂಬಿಕೊಂಡು ಶೋಚನೀಯಾವಸ್ಥೆಯಲ್ಲಿದ್ದು ಜನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ರಸ್ತೆಯಲ್ಲಿ  ಬೃಹತ್ ಹೊಂಡ ಗಳು ಸೃಷ್ಟಿಯಾಗಿದ್ದು, ಅದರಲ್ಲಿ ಮಳೆ ನೀರು ತುಂಬಿಕೊಳ್ಳುತ್ತಿದೆ. ಇದರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಹೊಂಡಗಳಿಂದಾಗಿ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ಪ್ರಯಾಣಿ ಕರು ಗಾಯಗೊಳ್ಳುವ ಘಟನೆ ಪದೇ ಪದೇ ಸಂಭವಿಸುತ್ತಿದೆ. ನಗರಸಭಾ ಚೆಯರ್‌ಮೆನ್ ಪ್ರತಿನಿಧೀಕರಿಸುವ ವಾರ್ಡ್‌ನಲ್ಲಿ ಈ ರಸ್ತೆಯಿದ್ದರೂ ದುರಸ್ತಿಗೆ ಕ್ರಮ ಉಂಟಾಗಿಲ್ಲವೆಂದು ನಾಗರಿಕರು ದೂರುತ್ತಿದ್ದಾರೆ. …

ಜೈಲಿಗೂ ಮಾದಕ ದ್ರವ್ಯ ಪೂರೈಸುವ ತಂಡ ರಾಜ್ಯದಲ್ಲಿ ಸಕ್ರಿಯ: ಓರ್ವ ಸೆರೆ; ಇಬ್ಬರು ಪರಾರಿ

ಕಾಸರಗೋಡು: ರಾಜ್ಯದಲ್ಲಿ ಜೈಲುಗಳಿಗೂ ಮಾದಕದ್ರವ್ಯ ಪೂರೈಸುವ ತಂಡ ಸಕ್ರಿಯವಾಗಿ ಕಾರ್ಯವೆಸಗುತ್ತಿದೆ. ಹೀಗೆ ಕಣ್ಣೂರು ಸೆಂಟ್ರಲ್ ಜೈಲಿಗೆ ಮಾದಕ ದ್ರವ್ಯ ಪೂರೈಸುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಪುದಿಯಪೆರು ಪನಯಂಕಾವು ಕೂಂಬನ್ ಹೌಸಿನ ಕೆ.ಅಕ್ಷಯ್ (27) ಬಂಧಿತ ವ್ಯಕ್ತಿ. ಆತನ ಜೊತೆಗಿದ್ದ ಇದೇ ತಂಡದ ಇಬ್ಬರು  ಆ ವೇಳೆ ಪರಾರಿಯಾಗಿದ್ದಾರೆ. ಜೈಲಿನಲ್ಲಿ ಕಳೆಯುತ್ತಿರುವ ಖೈದಿಗಳಿಗೆ ಮಾದಕ ದ್ರವ್ಯ, ಮೊಬೈಲ್ ಫೋನ್, ಬೀಡಿ, ಸಿಗರೇಟ್ ಇತ್ಯಾದಿಗಳನ್ನು ಪೂರೈಸುವ ತಂಡವಾಗಿದೆ ಇದು. ಮಾದಕದ್ರವ್ಯ ವ್ಯಸನಿಗಳಾದ ಖೈದಿಗಳು ಮಾದಕ ದ್ರವ್ಯದ ಅಗತ್ಯವಿದ್ದಲ್ಲಿ ಅದನ್ನು …

ರಾಷ್ಟ್ರೀಯ ಹೆದ್ದಾರಿ ಆರಿಕ್ಕಾಡಿಯಲ್ಲಿ ಟೋಲ್ ಬೂತ್: ಕ್ರಿಯಾ ಸಮಿತಿಯಿಂದ ಪ್ರತಿಭಟನೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಟೋಲ್ ಬೂತ್ ನಿರ್ಮಿಸುವುದರ ವಿರುದ್ಧ ಕ್ರಿಯಾ ಸಮಿತಿ ಮಾರ್ಚ್ ನಡೆಸಿತು. ಕುಂಬಳೆ -ಬದಿಯಡ್ಕ ರಸ್ತೆಯಿಂದ ಆರಂಭಿಸಿದ ಬಹುಜನ ಮಾರ್ಚನ್ನು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ ಉದ್ಘಾಟಿಸಿದರು. ರಘುದೇವನ್ ಮಾಸ್ತರ್, ಪುತ್ತಿಗೆ ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಕುಂಬಳೆ ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಮೊದಲಾದವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಸಂಚಾರಕ್ಕೆ ತಡೆ ಸೃಷ್ಟಿಸಿರುವುದಕ್ಕೆ ಮುಷ್ಕರ ಸಮಿತಿ ಮುಖಂಡರು, ವಿವಿಧ ಪಕ್ಷಗಳ ಪದಾಧಿಕಾರಿಗಳು ಸಹಿತ ೧೦ ಮಂದಿ ವಿರುದ್ಧ ಪೊಲೀಸರು …