ಚುನಾವಣೆ ಪೂರ್ವಭಾವಿ ಸಿದ್ಧತೆ: ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಕಾರ್ಯಾಗಾರ

ಕಾಸರಗೋಡು: ಚುನಾವಣೆಯ ಪೂರ್ವಭಾವಿಯಾಗಿ ಬಿಜೆಪಿ ಕಾಸರ ಗೋಡು ಮಂಡಲ ಸಮಿತಿ ಕಾರ್ಯಾ ಗಾರ ನಡೆಯಿತು. ಮಂಡಲದ ಚುನಾವಣೆ ಚಟುವಟಿಕೆಗಳ ಹೊಣೆ ವಹಿಸಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ಜಯಪ್ರಕಾಶ್, ಸುಕುಮಾರ ಕುದ್ರೆಪ್ಪಾಡಿ, ಚಂದ್ರಶೇಖರ, ಶ್ರೀಧರ ಕೂಡ್ಲು ಮಾತನಾಡಿದರು.

ಶ್ರೀ ಸತ್ಯಸಾಯಿ ಪ್ರೇಮಪ್ರವಾಹಿನಿ ರಥಯಾತ್ರೆಗೆ ತಾಳಿಪಡ್ಪುನಲ್ಲಿ ಸ್ವಾಗತ

ಕಾಸರಗೋಡು: ಭಗವಾನ್ ಶ್ರೀ ಸತ್ಯಸಾಯಿ ಬಾಬಾರ ಜನ್ಮಶತಾಬ್ದಿ ಆಚರಣೆಯಂಗವಾಗಿ ದೇಶವ್ಯಾಪಕವಾಗಿ ಸಂಚರಿಸುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಗೆ ತಾಳಿಪಡ್ಪು ಸತ್ಯಸಾಯಿ ಅಭಯನಿಕೇತನದ ಆಶ್ರಯದಲ್ಲಿ ಸ್ವಾಗತ ನೀಡಲಾಯಿತು. ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಿಂದ ಆರಂಭಗೊಂಡ ಶೋಭಾಯಾತ್ರೆಗೆ ಉಜ್ವಲ ಸ್ವಾಗತವನ್ನು ನೀಡಲಾಗಿದ್ದು, ಬಳಿಕ ಪಾದುಕ ದರ್ಶನ, ಸತ್ಸಂಗ, ಧಾರ್ಮಿಕ ಸಭೆ ನಡೆಯಿತು. ಶ್ರೀ ಸತ್ಯಸಾಯಿ ಸೇವಾ ಕರ್ನಾಟಕ ರಾಜ್ಯ ಕೋ-ಆರ್ಡಿ ನೇಟರ್ ಜಗನ್ನಾಥ್ ನಾಡಿಗೇರ ಪ್ರಧಾನ ಭಾಷಣ ಮಾಡಿದರು. ಸತ್ಯಸಾಯಿ ಜಿಲ್ಲಾಧ್ಯಕ್ಷ ಎಚ್. ಮಹಾಲಿಂಗ ಭಟ್, ತಾಳಿಪಡ್ಪು …

ಲಿಟ್ಲ್ ಲಿಲ್ಲಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕುಂಬಳೆ: ಕೇರಳ ಸಯನ್ಸ್ ಅಕಾಡೆಮಿ ಆಶ್ರಯದಲ್ಲಿ ಕೃತಕ ಬುದ್ದಿಮತ್ತೆ ಮತ್ತು ಭೂ ವಿಜ್ಞಾನ ಬಗ್ಗೆ ನಾಯ್ಕಾಪು ಲಿಟ್ಲ್ ಲಿಲ್ಲಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ  ತರಗತಿ ನಡೆಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಚೆಯರ್ ಪರ್ಸನ್ ಸರಸ್ವತಿ ಎ. ಉದ್ಘಾಟಿಸಿದರು. ಸೆಂಟ್ರಲ್ ಯೂನಿ ವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಜಾಸ್ಮಿನ್ ಎಂ. ಶಾ ಅಧ್ಯಕ್ಷತೆ ವಹಿಸಿದರು. ಶಾಲೆಯ ಪ್ರಾಂಶುಪಾಲ ಚಂದ್ರ ಬೋಸ್ ಎಂ.ಜಿ. ಸ್ವಾಗತಿಸಿದರು. ಪ್ರೊಫೆಸರ್ ಸಿಜಿನ್ ಕುಮಾರ್ ಎ.ವಿ, ಡಾ. ಆದಿತ್ಯ ವಿ. …

ಕನ್ಯಪ್ಪಾಡಿಯಲ್ಲಿ ರಸ್ತೆ ಮಧ್ಯೆ ಕಾಡುಕೋಣ ಪ್ರತ್ಯಕ್ಷ

ಬದಿಯಡ್ಕ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ    ಭಾರೀ ಗಾತ್ರದ ಕಾಡುಕೋಣ ಪತ್ತೆಯಾಗಿದೆ.  ನೀರ್ಚಾಲು ಬಳಿಯ ಕನ್ಯಪ್ಪಾಡಿಯಲ್ಲಿ ನಿನ್ನೆ ರಾತ್ರಿ 12 ಗಂಟೆ ವೇಳೆ  ಕಾಡುಕೋಣ ಕಂಡುಬಂದಿದೆ. ಇಲ್ಲಿನ ಬಸ್ ಪ್ರಯಾಣಿಕರ ತಂಗುದಾಣದ ಮುಂದೆ ದೀರ್ಘ ಹೊತ್ತು ನಿಂತಿದ್ದ ಕಾಡು ಕೋಣದ ಚಿತ್ರವನ್ನು ಈ ರಸ್ತೆಯಲ್ಲಿ ಸಂಚರಿಸಿದವರು ತೆಗೆದಿದ್ದರು.  ಈ ಪ್ರದೇಶದಲ್ಲಿದ್ದ ಬೀದಿ ನಾಯಿಗಳು ಕಾಡುಕೋಣವನ್ನು ಸುತ್ತುವರಿದು ದಾಳಿಗೆ ಮುಂದಾಗಿ ದ್ದವು. ಇದರಿಂದ ಕಾಡುಕೋಣ ಅಲ್ಲಿಂದ ಪರಾರಿಯಾಗಿದೆ. ಕೆಲವು ದಿನಗಳ ಹಿಂದೆಯೂ ಕನ್ಯಪ್ಪಾಡಿಯಲ್ಲಿ ಕಾಡುಕೋಣವನ್ನು ಕಂಡಿರುವುದಾಗಿ ಹೇಳಲಾಗುತ್ತಿದೆ. ಆದರೆ ಅಂದು …

ಕೋಳಿ ಅಂಕ:5 ಮಂದಿ ಸೆರೆ; 7 ಕೋಳಿ ವಶ

ಬದಿಯಡ್ಕ: ಪುತ್ತಿಗೆ ಮುಗು ಚೇವ ಎಂಬಲ್ಲಿನ ಕೋಳಿ ಅಂಕ ಕೇಂದ್ರಕ್ಕೆ ನಿನ್ನೆ ರಾತ್ರಿ ಬದಿಯಡ್ಕ ಪೊಲೀಸರು ದಾಳಿ ನಡೆಸಿ ಕೋಳಿಅಂಕದಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಬಂಧಿಸಿದ್ದಾರೆ. ಮಾತ್ರವಲ್ಲ 7 ಹುಂಜಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡಂಬಾರ್ ನಿವಾಸಿ ಯತೀಶ್ ಬಿ. (36), ಮುಗು ನಿವಾಸಿಗಳಾದ ಬಾಬು ರೈ (70), ಸುಧಾಕರ ರೈ (48), ನಾರಾಯಣ ಕೆ. (42) ಮತ್ತು ಗಿರೀಶ್ ರೈ (40) ಎಂಬವರನ್ನು ಈ ಸಂಬಂಧ ಬಂಧಿಸಲಾಗಿದೆ.

ಎಂಟು ತಿಂಗಳು ಪ್ರಾಯದ ಮಗುವನ್ನು ರೈಲಿನಲ್ಲಿ ಸಹಪ್ರಯಾಣಿಕನಿಗೆ ನೀಡಿ ಪರಾರಿಯಾದ ಯುವತಿ

ಕಲ್ಲಿಕೋಟೆ: ಶೌಚಾಲಯಕ್ಕೆ ಹೋಗಿ ಬರುತ್ತೇ ನೆಂದು ತಿಳಿಸಿ 8 ತಿಂಗಳ ಪ್ರಾಯದ ಮಗುವನ್ನು  ಸಹ ಪ್ರಯಾಣಿಕನ ಕೈಯಲ್ಲಿ ನೀಡಿ ಯುವತಿ ಪರಾರಿಯಾಗಿದ್ದು, ಬಳಿಕ   ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆಕೆಯನ್ನು ಪತ್ತೆಹಚ್ಚಲಾಗಿದೆ.   ಕಲ್ಲಿಕೋಟೆಯಿಂದ ಶೋರ್ನೂರಿಗೆ  ಬೆಳಿಗ್ಗೆ 10.15 ಕ್ಕೆ  ಹೊರಡುವ ರೈಲಿನಲ್ಲಿ ಈ ಘಟನೆ ನಡೆದಿದೆ.  ಮಗುವಿನೊಂದಿಗೆ ರೈಲಿನಲ್ಲಿ ಕುಳಿತಿದ್ದ ಯುವತಿ ರೈಲು ಪ್ರಯಾಣ ಆರಂಭಿಸಲು  ಕೆಲವೇ ನಿಮಿಷಗಳಿರುವಾಗ  ಶೌಚಾಲಯಕ್ಕೆ ಹೋಗಿ ಬರುತ್ತೇನೆಂದೂ ಅದುವರೆಗೆ ಮಗುವನ್ನು ಹಿಡಿದುಕೊಳ್ಳುವಂತೆ ರೈಲಿನಲ್ಲಿದ್ದ ಪ್ರಯಾಣಿಕನಲ್ಲಿ ಯುವತಿ ತಿಳಿಸಿದ್ದಾಳೆ. ಇದರಂತೆ ಸಹಪ್ರಯಾ ಣಿಕ ಮಗುವನ್ನು  …

ಕಡ್ಡಾಯ ಮಲೆಯಾಳ ಮಸೂದೆ: ಕರ್ನಾಟಕ ವಿಧಾನಪರಿಷತ್‌ನಲ್ಲಿ ವಿಷಯ ಪ್ರಸ್ತಾಪಿಸಿದ ಬಲ್ಕೀಸ್ ಬಾನು

ಬೆಂಗಳೂರು: ಕೇರಳ ವಿಧಾನಸಭೆ ಮಂಡಿಸಿದ ಕಡ್ಡಾಯ ಮಲೆಯಾಳ ಮಸೂದೆ ವಿರುದ್ಧ ಕರ್ನಾಟಕ ಎಂಎಲ್‌ಸಿ ಬಲ್ಕೀಸ್ ಬಾನು ವಿಧಾನಪರಿಷತ್‌ನಲ್ಲಿ ಧ್ವನಿ ಎತ್ತಿದರು. ಕಾಸರಗೋಡು ಗಡಿನಾಡು ಪ್ರದೇಶದ ಕನ್ನಡಿಗರ ಸಮಸ್ಯೆಗಳ ಬಗ್ಗೆ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಕರ್ನಾಟಕ ಸರಕಾರದ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಮೊದಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಕಡ್ಡಾಯ ಮಲೆಯಾಳ ಮಸೂದೆಯನ್ನು ಹಿಂತೆಗೆಯಲು ಒತ್ತಾಯಿಸಿದ್ದರು. ಪ್ರಸ್ತುತ ಕಾಂಗ್ರೆಸ್ ಮುಖಂಡೆಯಾಗಿರುವ ಬಲ್ಕೀಸ್ ಬಾನು ಕರ್ನಾಟಕ ವಿಧಾನಪರಿ ಷತ್‌ನಲ್ಲಿ ಪ್ರಸ್ತಾಪಿಸಿ ಕೇರಳದ …

ಬೇಸಿಗೆ ಮಳೆ : ಹಳ್ಳದಂತಾದ ಪೆರಿಯ ಹೆದ್ದಾರಿ ಸರ್ವಿಸ್ ರಸ್ತೆ

ಕಾಸರಗೋಡು: ನಿನ್ನೆ ರಾತ್ರಿ ಸುರಿದ ಬೇಸಿಗೆ ಮಳೆಯಿಂದ ಪೆರಿಯ ಬಜಾರ್ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ.  ರಾತ್ರಿ ೧೦.೩೦ರ ವೇಳೆ ಸುರಿಯತೊಡಗಿದ ಮಳೆ ಸುಮಾರು ೧೫ ನಿಮಿಷಗಳ ಕಾಲ ಮುಂದುವರಿದಿದೆ. ಇದೇ ವೇಳೆ  ಬೇಸಿಗೆ ಮಳೆಗೆ ರಸ್ತೆಯಲ್ಲಿ ನೀರು ತುಂಬಿಕೊಂಡರೆ  ಮಳೆಗಾಲದಲ್ಲಿ ಏನಾಗಿರಲಿದೆಯೆಂಬ ಬಗ್ಗೆ  ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.  ಎರಡೂ ಭಾಗಗಳಿಂದ ಹರಿದು ಬರುವ ಮಳೆ ನೀರು   ಪೆರಿಯ ಬಜಾರ್ ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆ ಸಮೀಪ ತುಂಬಿಕೊಳ್ಳುತ್ತಿದೆ. ಇಲ್ಲಿಂದ  ಮಳೆ ನೀರು ಹರಿದುಹೋ …

ಕಾಸರಗೋಡು ನಗರದಲ್ಲಿ ರಾತ್ರಿ ಕಾಲ ಆಟೋ ಚಾಲಕರಲ್ಲಿ ಕೆಲವರು ನೈತಿಕ ಪೊಲೀಸರಾಗುತ್ತಿರುವುದಾಗಿ ಬಿಎಂಎಸ್ ಆರೋಪ

ಕಾಸರಗೋಡು: ನಗರದಲ್ಲಿ ರಾತ್ರಿ ಕಾಲ ಆಟೋ ಚಾಲಕರಲ್ಲಿ ಕೆಲವರು ನೈತಿಕ ಪೊಲೀಸ್‌ಗಿರಿ ತೋರಿಸುತ್ತಿರುವು ದಾಗಿ ಬಿಎಂಎಸ್ ಆರೋಪಿಸಿದೆ. ರಾತ್ರಿ ಕಾಲದ ಗೂಂಡಾ ಪ್ರವೃತ್ತಿಯನ್ನು ಕೊನೆಗೊಳಿಸಬೇಕೆಂದು ಪೊಲೀಸರಲ್ಲಿ ಬಿಎಂಎಸ್ ಆಗ್ರಹಿಸಿದೆ. ಪೇಟೆಯಲ್ಲಿ ರಾತ್ರಿ ಕಾಲಗಳಲ್ಲಿ ಆಟೋ ನಿಲುಗಡೆ ಸ್ಥಳಗಳಲ್ಲಿ ನಿಲ್ಲಿಸುವ ಆಟೋ ರಿಕ್ಷಾಗಳ ಚಾಲಕರಲ್ಲಿ ಸ್ಟಾಂಡ್‌ನಿಂದ ಆಟೋ ವನ್ನು ತೆಗೆಯಬೇಕೆಂದು ಆಗ್ರಹಿಸುತ್ತಿ ರುವುದಾಗಿಯೂ, ತೆಗೆಯದಿದ್ದರೆ ಆಕ್ರಮಣ ನಡೆಸುವುದಾಗಿಯೂ ಬೆದರಿಕೆಯೊಡ್ಡುತ್ತಿರುವುದಾಗಿ ಬಿಎಂಎಸ್ ಸಭೆ ಆರೋಪಿಸಿದೆ. ಫೆಬ್ರವರಿ ೨೫ರಂದು ರಾತ್ರಿ ಕೆಎಸ್‌ಆರ್‌ಟಿಸಿ ಕಿಂಗ್ ಕೋಬ್ರಾ ಆಟೋ ಸ್ಟಾಂಡ್‌ನಲ್ಲಿ ಸ್ಥಿರವಾಗಿ ನಿಲುಗಡೆ ಮಾಡುವ …

ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘಕ್ಕೆ ಸಹಕಾರಿ ರತ್ನ ಪುರಸ್ಕಾರ

ಕಾಸರಗೋಡು:  ತೃಶೂರು ಕೇಂದ್ರವಾಗಿ ಕಾರ್ಯಾಚರಿಸುವ ಟೀಮ್ ಕೋ-ಆಪರೇಟಿವ್‌ನ ಸಹಕಾರಿ ರತ್ನ ಪುರಸ್ಕಾರ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘಕ್ಕೆ ಲಭಿಸಿದೆ. ಸಂಘದ ಸ್ತುತ್ಯರ್ಹವಾದ ಚಟುವಟಿಕೆ, ನೂತನ ಸಹಕಾರಿ ಮಾದರಿಗಳು ಎಂಬಿವುಗಳನ್ನು ಪರಿಗಣಿಸಿ ಪುರಸ್ಕಾರ ಲಭಿಸಿದೆ. ಕಲ್ಲಿಕೋಟೆ ನಳಂದ ಸಭಾಂಗಣದಲ್ಲಿ ನಡೆದ ಸಹಕಾರಿ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಂಘಕ್ಕೆ ಬೇಕಾಗಿ ಕಾರ್ಯದರ್ಶಿ ಪ್ರದೀಪ್ ಕೆ. ಪುರಸ್ಕಾರ ಸ್ವೀಕರಿಸಿದರು. ಅಗ್ರಿಕಲ್ಚರ್ ಕೋ-ಓಪರೇಟಿವ್ ಸ್ಟಾಫ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನ ಮಾಜಿ ನಿರ್ದೇಶಕ ಬಿ.ಪಿ. ಪಿಳ್ಳ, ಐ.ಸಿ.ಎಂ. ಮಾಜಿ ನಿರ್ದೇಶಕ ಎಂ.ವಿ. ಶಶಿಕುಮಾರ್, …