ಆರಿಕ್ಕಾಡಿಯ ಟೋಲ್ ಮುಚ್ಚಲಿರುವ ಕೇಂದ್ರ ಸರಕಾರದ ತೀರ್ಮಾನ ಜನಪರ ಹೋರಾಟಕ್ಕೆ ಸಂದಜಯ- ಶಾಸಕ ಎಕೆಎಂ ಅಶ್ರಫ್

ಕುಂಬಳೆ: ಆರಿಕ್ಕಾಡಿಯಲ್ಲಿ ಸ್ಥಾಪಿಸಿದ ಜನವಿರುದ್ಧ ಟೋಲ್ ಬೂತ್ ನಿಲುಗಡೆಗೊಳಿಸಿದ ಕೇಂದ್ರ ಸರಕಾರದ ತೀರ್ಮಾನ ಜನಪರ ಹೋರಾಟದ ಜಯವೆಂದು ಶಾಸಕ ಎಕೆಎಂ ಅಶ್ರಫ್ ನುಡಿದರು. ನಾಡು ಒಂದಾಗಿ ನಡೆಸಿದ ಜನಪರ ಹೋರಾಟದ ಮುಂದೆ ಮಣಿಯದ ಯಾವುದೇ ಅಧಿಕಾರ ಕೇಂದ್ರಗಳಿಲ್ಲ ವೆಂದು, ಹೈಕೋರ್ಟ್‌ನಲ್ಲಿ ಉಂಟಾದ ಪರಾಮರ್ಶೆಗಳು ಕೇಂದ್ರ ಸರಕಾರದ ನಿಲುವು ತಿದ್ದಲು ಸಹಾಯಕವಾಯಿತೆಂದು ಶಾಸಕರು ನುಡಿದರು. ಜನಪರ ಹೋರಾಟದ ಹೆಸರಲ್ಲಿ ಹಲವಾರು ಮಂದಿ ಕಾರ್ಯಕರ್ತರನ್ನು ಕಸ್ಟಡಿಗೆ ತೆಗೆಯಲಾಗಿದ್ದು, ಕೇಸಿನಲ್ಲಿ ಸಿಲುಕಿಸಿ ಈಗಲೂ ಜೈಲಿನಲ್ಲಿದ್ದಾರೆ. ಇವರಿಗೂ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರಿಗೂ, ಜಿಲ್ಲೆಯ …

ಬಿಎಂಎಸ್ ಕುಂಬಳೆ ಮೋಟಾರು ಯೂನಿಟ್ ಸಮ್ಮೇಳನ

ಕುಂಬಳೆ: ಬಿಎಂಎಸ್ ಕುಂಬಳೆ ಮೋಟಾರು ಯೂನಿಟ್ ಸಮ್ಮೇಳನ ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯಲ್ಲಿ ಜರಗಿತು. ಮೋಟಾರು ಯೂನಿಟ್ ಜಿಲ್ಲಾಧ್ಯಕ್ಷ ಶಿವರಾಮ ಪೆರ್ಲ, ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಭಾಗವಹಿಸಿದರು. ಕುಂಬಳೆ ಘಟಕ ಅಧ್ಯಕ್ಷ ಕೃಷ್ಣ ಪಿ.ಕೆ. ಅಧ್ಯಕ್ಷತೆ ವಹಿಸಿದರು. ಸದಸ್ಯ  ಕಮಲಾಕ್ಷ ಕಡಪ್ಪುರ ಸ್ವಾಗತಿಸಿ, ಕಾರ್ಯದರ್ಶಿ ದಿವಾಕರ ರೈ ಉಜಾರು ವಂದಿಸಿದರು. ಹಳೆಯ ಸಮಿತಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲು ತೀರ್ಮಾನಿಸಲಾಯಿತು.

ಕೆಎಸ್‌ಆರ್‌ಟಿಸಿ ಬಸ್ ಮುಂಭಾಗದಲ್ಲಿ ಅಪಾಯಕರ ರೀತಿಯಲ್ಲಿ ಕಾರು ಚಲಾಯಿಸಿದ ವ್ಯಕ್ತಿಯ ಲೈಸನ್ಸ್ ರದ್ದು ಶಿಫಾರಸು

ಹೊಸದುರ್ಗ: ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗದಲ್ಲಿ ಅಪಾಯಕರ ವಾದ ರೀತಿಯಲ್ಲಿ ಕಾರು ಚಲಾಯಿಸಿದ ಘಟನೆಯಲ್ಲಿ ಮೋಟಾರುವಾಹನ ಇಲಾಖೆ ಚಾಲಕನ ಲೈಸನ್ಸ್ ರದ್ದು ಗೊಳಿಸಲು ಶಿಫಾರಸು ಮಾಡಿದೆ. ಚೆರುವತ್ತೂರು ನಿವಾಸಿ ಶಾಹಿದ್ ಶಾಹುಲ್ ವಿರುದ್ಧ ಮೋಟಾರು ವಾಹನ ಇಲಾಖೆ ಈ ಕ್ರಮ ಕೈಗೊಂಡಿದೆ. ಮಲಪ್ಪುರಂ ಎಡಪ್ಪಾಲ್‌ನ ಚಾಲನಾ ತರಬೇತಿ ಕೇಂದ್ರದಲ್ಲಿ ಐದು ದಿನದ ಕಡ್ಡಾಯ ತರಬೇತಿಗೂ, ನ್ಯಾಯಾಲಯ ದಲ್ಲಿ ದಂಡ ಪಾವತಿಸಲು ಮೋಟಾರು ವಾಹನ ಇಲಾಖೆ ಶಿಫಾರಸು ಮಾಡಿದೆ. ಕೆಎಸ್‌ಆರ್‌ಟಿಸಿ ನೀಡಿದ ದೂರಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕಾಞಂಗಾಡ್ ಅಸಿಸ್ಟೆಂಟ್ …

ಕೇರಳ ಸಂಸ್ಕೃತ ಶಿಕ್ಷಕರ ಫೆಡರೇಶನ್ ಜಿಲ್ಲಾ ಸಮ್ಮೇಳನ

ಕಾಸರಗೋಡು: ಕೇರಳ ಸಂಸ್ಕೃತ ಶಿಕ್ಷಕರ ಒಕ್ಕೂಟದ ಕಾಸರಗೋಡು ಜಿಲ್ಲಾ ಸಮ್ಮೇಳನ ಕಾಸರಗೋಡು ಬಿಇಎಂ ಶಾಲೆಯಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಹರಿಕುಮಾರ್ ಇ.ಎ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಪುರಸಭೆ ಉಪಾಧ್ಯಕ್ಷ ಕೆ.ಎಂ. ಹನೀಫ್ ಉದ್ಘಾಟಿಸಿದರು.ಸೇವೆಯಿಂದ ನಿವೃತ್ತರಾಗುತ್ತಿರುವ ರಮಾನಂದ ಮಾಸ್ಟರ್‌ರನ್ನು ಅಭಿನಂದಿಸಲಾಯಿತು. ರಾಜ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮುಖ್ಯ ಭಾಷಣ ಮಾಡಿದರು. ರಾಜ್ಯ ಉಪಾಧ್ಯಕ್ಷ ನೀಲಮನ ಶಂಕರನ್ ಮಾಸ್ಟರ್, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಜಸೀತಾ ಕೆ.ಕೆ, ಟಿ.ಪಿ. ಪದ್ಮಕುಮಾರ್, ಮಧು ಕೆ, ಪ್ರಸೀತಾ ಕೆ.ಸಿ, ಮನೋಜ್ ಕುಮಾರ್, ನೀಲಮನ ಉಮಾ, ಮಧು …

ನಾಪತ್ತೆಯಾದ ಯುವಕ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾದ ಯುವಕ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.  ಕಾಸರಗೋಡು ನೆಲ್ಲಿಕುಂಜೆ ಚೀರುಂಬಾ ರಸ್ತೆ ಬಳಿ ನಿವಾಸಿ  ದಿ| ಕುಮಾರನ್-ಸುಗಂಧಿ ದಂಪತಿ ಪುತ್ರ ಇಂಟೀರಿಯರ್ ಡೆಕೋರೇಟರ್ ಕಾರ್ಮಿಕ ರತೀಶ್ (39) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಬೆಳಿಗ್ಗೆ ನಾಪತ್ತೆಯಾಗಿದ್ದರು. ಇವರಿಗಾಗಿ ಮನೆಯವರು ಹುಡುಕಾಟ ಆರಂಭಿಸಿದಾಗ ಕಾಸರಗೋಡು ಹಾರ್ಬರ್ ಸಮೀಪದ ಗಾಳಿಮರದಲ್ಲಿ  ಇಂದು ಬೆಳಿಗ್ಗೆ  ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಸರಗೋಡು ಪೊಲೀಸರು  ಈ ಬಗ್ಗೆ ತನಿಖೆ ನಡೆಸಿ ಮೃತದೇಹವನ್ನು  ಜನರಲ್ ಆಸ್ಪತ್ರೆಗೆ ಸಾಗಿಸಿದರು. ಮೃತರು …

ಶಬರಿಮಲೆ ಚಿನ್ನ ಕಳವು ಪ್ರಕರಣದ ಕಾವು:  ಸ್ಪೀಕರ್ ಪೀಠದ ಮೇಲೇರಲು ಯತ್ನಿಸಿದ ವಿಪಕ್ಷೀಯ ಶಾಸಕರು; ವಿಧಾನಸಭೆಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿ

ತಿರುವನಂತಪುರ: ಶಬರಿಮಲೆ ಚಿನ್ನ ಕಳವು ವಿಷಯದಲ್ಲಿ ಆಡಳಿತ ಮತ್ತು ವಿಪಕ್ಷೀಯರ ಮಧ್ಯೆ ತೀವ್ರ ವಾಗ್ವಾದ ಉಂಟಾಗಿ ಅದು ವಿಧಾನಸಭೆಯಲ್ಲಿ ಸಂಘರ್ಷಭರಿತ ವಾತಾವರಣ ಸೃಷ್ಟಿಸಿದ ನಾಟಕೀಯ ಬೆಳವಣಿಗೆ ಇಂದು ಬೆಳಿಗ್ಗೆ ನಡೆಯಿತು.  ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್, ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಸರಕಾರ ಬುಡಮೇಲುಗೊಳಿಸಲೆತ್ನಿಸುತ್ತಿದೆಯೆಂದೂ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಸಹಜವಾದ ರೀತಿಯ ಜಾಮೀನು ಲಭಿಸುವಂತೆ ಮಾಡಲು ಮುಖ್ಯಮಂತ್ರಿಯವರ ಕಚೇರಿಗೆ  ಸಹಾಯ ಲಭಿಸುತ್ತಿದೆಯೆಂದು ಆರೋಪಿಸಿದ್ದರು. ಮಾತ್ರವಲ್ಲ …

ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಪದ್ಮ ಸ್ಟಿಕ್ಕರ್ ಕಟ್ಟಿಂಗ್ ಮಾಲಕ ನಿಧನ

ಕಾಸರಗೋಡು: ಕರಂದಕ್ಕಾಡಿನಲ್ಲಿ ಸ್ಟಿಕರ್ ಕಟ್ಟಿಂಗ್ ಸಂಸ್ಥೆ ಮಾಲಕರಾಗಿದ್ದ ಪದ್ಮನಾಭ ಆಚಾರ್ಯ (59) ನಿಧನ ಹೊಂದಿದರು. ಅಸೌಖ್ಯ ತಗಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕಳೆದ ಒಂದು ವಾರದಿಂದ ತೀವ್ರನಿಗಾ ಘಟಕದಲ್ಲಿದ್ದ ಇವರು ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಸಂಧ್ಯಾರಾಣಿ, ಮಕ್ಕಳಾದ ಆಕಾಶ್‌ಪದ್ಮ, ಸುಜೀಶ್‌ಪದ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಗ್ಯಾಸ್ ಟ್ಯಾಂಕರ್ ಹಿಂಬದಿಗೆ ಗೂಡ್ಸ್ ಟೆಂಪೊ ಢಿಕ್ಕಿ ಹೊಡೆದು ಇಬ್ಬರು ಗಾಯ

ಉಪ್ಪಳ: ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್‌ನ ಹಿಂಭಾಗಕ್ಕೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ರಾಷ್ಟಿಯ ಹೆದ್ದಾರಿ ಹನಫಿ ಬಜಾರ್‌ನಲ್ಲಿ ನಿನ್ನೆ ಸಂಜೆ ನಡೆದಿದೆ. ಟೆಂಪೋದಲ್ಲಿದ್ದ ಉಳ್ಳಾಲ ನಿವಾಸಿ ಬದ್ರುದ್ದೀನ್ (50), ನೌಷಾದ್ (30) ಎಂಬವರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಮಂಗಳೂರು ಭಾಗದಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಗೂಡ್ಸ್ ಟೆಂಪೋ ಎದುರಿನಿಂದ ಸಂಚರಿಸುತಿದ್ದ ಗ್ಯಾಸ್ ಟ್ಯಾಂಕರ್‌ನ ಹಿಂಭಾಗಕ್ಕೆ ಡಿಕ್ಕಿಹೊಡೆದು ಅಪಘಾತ ಉಂಟಾಗಿದೆ. ಇದರಿಂದ ಟೆಂಪೋದ ಎದುರು ಭಾಗ ನಜ್ಜು-ಗುಜ್ಜಾಗಿದ್ದು, ಇಬ್ಬರು ಅದರೊಳಗೆ ಸಿಲುಕಿದ್ದರು. ಮಾಹಿತಿ ತಿಳಿದು …

ಎದೆಹಾಲು ಗಂಟಲಲ್ಲಿ ಸಿಲುಕಿ 50 ದಿನ ಪ್ರಾಯದ ಮಗು ಮೃತ್ಯು

ಕುಂಬಳೆ: ಎದೆಹಾಲು ಗಂಟಲಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ 50ದಿವಸ ಪ್ರಾಯದ ಮಗು ಮೃತಪಟ್ಟ ಘಟನೆ ನಡೆದಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಮೊಗ್ರಾಲ್, ಪೇರಾಲು ಮಡಿಮೊಗರು ನಿವಾಸಿ ಮುಹಮ್ಮದ್ ರಾಹಿದ್- ಮರಿಯಮ್ಮತ್ ಸಾಬಿರ ದಂಪತಿ ಪುತ್ರ ಲಸಿನ್ ಇಮಾತ್ ಮೃತಪಟ್ಟ ಮಗು. ನಿನ್ನೆ ರಾತ್ರಿ ಘಟನೆ ನಡೆದಿದೆ. ಅಸ್ವಸ್ಥ ಸ್ಥಿತಿಯಲ್ಲಿ ಮಗುವನ್ನು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತ ಮಗು ಸಹೋದರ ಸಯಾನ್ ಹಾಗೂ ತಂದೆ, ತಾಯಿಯನ್ನು ಅಗಲಿದೆ. ಇತ್ತೀಚೆಗೆ …

75.11 ಗ್ರಾಂ ಎಂಡಿಎಂಎ ಪತ್ತೆ: ಓರ್ವ ಸೆರೆ

ಕಾಸರಗೋಡು: ಕಾಸರಗೋಡು  ಎಕ್ಸೈಸ್ ಎನ್‌ಫೋರ್ಸ್‌ಮೆಂಟ್  ಆಂಡ್ ಆಂಟಿ ನಾರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ನೇತೃತ್ವದ ಅಬಕಾರಿ ತಂಡ ಪೆರಿಯ ತಾನ್ನೋಟ್ ಕಲಾಂನಗರದ ವಸತಿಗೃಹವೊಂದಕ್ಕೆ ನಡೆಸಿದ ದಾಳಿಯಲ್ಲಿ  ಮಾದಕದ್ರವ್ಯ ವಾದ 75.11 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ  ಕೊಳತ್ತೂರು ಗ್ರಾಮದ ಮಂಜನಡ್ಕ ನಿವಾಸಿ ಅಬ್ದುಲ್ ಶರೀಫ್ ಕೆ ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ ವಿಷ್ಣುಪ್ರಕಾಶ್, ಅಸಿ. ಎಕ್ಸೈಸ್ ಇನ್‌ಸ್ಪೆಕ್ಟರ್  ಸಿಕೆವಿ ಸುರೇಶ್ ಮತ್ತು ಇತರ …