ಬಿಜೆಪಿ ಬದಿಯಡ್ಕ ಮಂಡಲ ಕಾರ್ಯಕರ್ತರ ಶಿಬಿರ

ಬದಿಯಡ್ಕ: ಬಿಜೆಪಿ ಬದಿಯಡ್ಕ ಮಂಡಲ ಕಾರ್ಯಕರ್ತರ ಶಿಬಿರ ಮಾರ್ಪನಡ್ಕದಲ್ಲಿ ಜರಗಿದ್ದು, ಬೆಳ್ತಂಗಡಿ ಶಾಸಕ ಹಾಗೂ ಕಾಸರಗೋಡು ವಿಧಾನಸಭಾ ಮಂಡಲ ಚುನಾವಣಾ ಪ್ರಭಾರಿ ಹರೀಶ್ ಪೂಂಜ ಉದ್ಘಾಟಿಸಿದರು. ಬಿಜೆಪಿ ಕೇರಳದಲ್ಲೂ ಅಧಿಕಾರಕ್ಕೇರಬೇಕಾದುದು ಕಾಲ ಘಟ್ಟದ ಅನಿವಾರ್ಯತೆ ಎಂದು, ಸ್ಥಳೀಯಾಡಳಿತ ಚುನಾವಣೆಯಲ್ಲಿ ಕೇರಳದಾದ್ಯಂತ ಗಳಿಸಿದ ಮುನ್ನಡೆ ವಿಧಾನಸಭಾ ಚುನಾವಣೆಯಲ್ಲೂ ಪ್ರತಿಫಲಿಸಲಿದೆ ಎಂದು ಅವರು ನುಡಿದರು. ಮಂಡಲ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಕೆ. ಶ್ರೀಕಾಂತ್, ಸುಧಾಮ ಗೋಸಾಡ, ಎಂ.ಎಲ್. ಅಶ್ವಿನಿ, ಮಣಿಕಂಠ ರೈ, ಶ್ರೀಧರ ಬೆಳ್ಳೂರು, ರವೀಂದ್ರ …

ಮಹಿಳೆಯರನ್ನು ಗೌರವಿಸುವುದು ಭಾರತೀಯ ಸಂಸ್ಕಾರ- ಬ್ರಹ್ಮಚಾರಿಣಿ ದಿಶಾ ಚೈತನ್ಯ

ಕಾಸರಗೋಡು: ಮಹಿಳೆಯರನ್ನು ಗೌರವಿಸುವುದು, ಅಂಗೀಕರಿಸುವ ಸಂಸ್ಕಾರ ಭಾರತೀಯ ಸಂಸ್ಕಾರವಾಗಿದೆ ಎಂದು ಚಿನ್ಮಯ ಮಿಷನ್‌ನ ಬ್ರಹ್ಮಚಾರಿಣಿ ದಿಶಾ ಚೈತನ್ಯ ನುಡಿದರು. ಭಾರತೀಯ ಅಭಿಭಾಷಕ ಪರಿಷತ್‌ನ ಆಶ್ರಯದಲ್ಲಿ ನಡೆಸಿದ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯವಾದಿ ಬೀನ ಕೆ.ಎಂ. ಅಧ್ಯಕ್ಷತೆ ವಹಿಸಿದರು. ಅಭಿಭಾಷಕ ಪರಿಷತ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್, ನ್ಯಾಯವಾದಿಗಳಾದ ಬಿ. ರವೀಂದ್ರನ್, ಹರ್ಷಿತ, ಜಾಹ್ನವಿ ಮಾತನಾಡಿದರು.

ಎಕೆಪಿಎ ಈಸ್ಟ್ ಘಟಕದಿಂದ ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಗೆ ಅಭಿನಂದನೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಈಸ್ಟ್ ಘಟಕದ ವತಿಯಿಂದ ನಡೆದ ಮಹಿಳಾ ದಿನಾಚರಣೆಯಂಗವಾಗಿ ಹಸಿರು ಕ್ರಿಯಾಸೇನೆಯಲ್ಲಿ ಕಳೆದ 9 ವರ್ಷದಿಂದ ದುಡಿಯುತ್ತಿರುವ ಗಾಯತ್ರಿ ಕಿಣಿಯವರನ್ನು ಅಭಿನಂದಿಸಲಾಯಿತು. ಈಸ್ಟ್ ಯೂನಿಟ್ ಅಧ್ಯಕ್ಷ ರಾಜಶೇಖರ ಅಭಿನಂದಿಸಿದರು. ಕಾರ್ಯದರ್ಶಿ ಅಖಿಲ್, ಕೋಶಾಧಿಕಾರಿ ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ರಾಜೇಂದ್ರನ್, ಜಿಲ್ಲಾ ಸಮಿತಿ ಸದಸ್ಯ ಸಂಜೀವ್ ರೈ, ವಲಯ ಕೋಶಾಧಿಕಾರಿ ಅಜಿತ್ ಕುಮಾರ್, ಘಟಕ ಸದಸ್ಯರಾದ ಫೈಸಲ್, ಸುರೇಶ್ ಬಿ.ಜೆ. ಭಾಗವಹಿಸಿದರು.

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ: ಅಡುಗೆ ಅನಿಲ ಬೆಲೆ ಹೆಚ್ಚಳ

ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಶಮನಗೊಳ್ಳದೆ ಇನ್ನೂ ಮುಂದುವರಿಯುತ್ತಿರುವ ವೇಳೆಯಲ್ಲೇ ಭಾರತಕ್ಕೂ ಅದರ ಬಿಸಿ ತಟ್ಟಿದ್ದು, ಇದರ ಪರಿಣಾಮ ಅಡುಗೆ ಅನಿಲ ಬೆಲೆ ಇಂದು ಬೆಳಿಗ್ಗಿನಿಂದ ಗಗನಕ್ಕೇರಿದೆ.  ಮಧ್ಯಪ್ರಾಚ್ಯ ಯುದ್ದದ ಪರಿಸ್ಥಿತಿಯೇ ಬೆಲೆಯೇರಿಕೆಗೆ ಕಾರಣವೆಂದು ವಿಶ್ಲೇಷಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ತಲಾ 60 ರೂ.ನಂತೆ  ಇಂದಿನಿಂದ ಹೆಚ್ಚಿಸಲಾಗಿದೆ. ಇದರಿಂದಾಗಿ 14 ಕೆಜಿ ಸಿಲಿಂಡರೊಂದರ ಬೆಲೆ ಈಗ 915 ರೂ.ಗೇರಿದೆ. ಇನ್ನು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲೂ ಹೆಚ್ಚಳ ತರಲಾಗಿದೆ. ಇದರಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ …

ಜಸೀಲಾ ಆತ್ಮಹತ್ಯೆ ಪ್ರಕರಣ: ನೆರೆಮನೆ ನಿವಾಸಿ ಮಹಿಳೆ ಸೆರೆ

ಕಾಸರಗೋಡು: ಚಿನ್ನ ಕಳವುಗೈದಿರುವುದಾಗಿ ಹೊರಿಸಲಾದ ಆರೋಪದಿಂದ ಮನನೊಂದು ಆಲಂಪಾಡಿ ನಾಲತ್ತಡ್ಕ ನಿವಾಸಿ ಜಸೀಲಾ (24) ಎಂಬಾಕೆ ವಿಷಸೇವಿಸಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ಮನೆಯ ನೆರೆಮನೆ ನಿವಾಸಿಯಾದ ಮಹಿಳೆಯನ್ನು ಬಳಿಕ ವಿದ್ಯಾನಗರ  ಠಾಣೆಯ ಎಸ್‌ಐ ಸಫ್ವಾನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮುಳಿಯಾರು ಪೊವ್ವಲ್ ಬೆಂಚ್‌ಕೋರ್ಟ್‌ಗೆ ಸಮೀಪದ ಆಯಿಷಾ (48) ಬಂಧಿತಳಾದ ಆರೋಪಿ. ನಂತರ ನ್ಯಾಯಾಲಯದ ಆದೇಶ ಪ್ರಕಾರ ಆಕೆಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಆಕೆಯ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ವಿಷಪ್ರಾಶನಗೈದ …

ಪೊಲೀಸರನ್ನು ಕಂಡು ಪರಾರಿಯಾಗಲೆತ್ನ ಎಂಡಿಎಂಎ ಸಹಿತ ಯುವಕ ಸೆರೆ

ಬದಿಯಡ್ಕ: 3.01 ಗ್ರಾಂ ಎಂಡಿಎಂಎ ಹಾಗೂ 16,700 ರೂಪಾಯಿ ಸಹಿತ ಯುವಕನನ್ನು  ಬಂಧಿಸಲಾಗಿದೆ. ಚೆಂಗಳ ರಹ್ಮತ್ ನಗರದ ಮನಿಯಡ್ಕಂ ನಿವಾಸಿ  ಸಿ.ಝೆಡ್. ನುಹ್‌ಮ (25) ಎಂಬಾತನನ್ನು ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್  ಅನೂಪ್ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ಮಧ್ಯಾಹ್ನ 1.30ರ ವೇಳೆ ನೀರ್ಚಾಲು ಬಳಿಯ ಕನ್ಯೆಪ್ಪಾಡಿಯಿಂದ ಈತನನ್ನು ಬಂಧಿಸಲಾಗಿದೆ. ಎಸ್‌ಐ ಪಿ. ರೂಪೇಶ್ ಹಾಗೂ  ಪೊಲೀಸರು ಪಟ್ರೋಲಿಂಗ್ ನಡೆಸುತ್ತಾ ಕನ್ಯೆಪ್ಪಾಡಿಗೆ ತಲುಪಿದ್ದರು. ಈ ವೇಳೆ ಅಲ್ಲಿದ್ದ ಯುವಕ ಪೊಲೀಸರನ್ನು ಕಂಡು  ಓಡಿ ಪರಾರಿಯಾಗಲು ಯತ್ನಿಸಿದ್ದನು. ಇದರಿಂದ ಸಂಶಯಗೊಂಡ …

ವೈದ್ಯರಿಗೆ ಹಲ್ಲೆ : ಇಬ್ಬರ ಸೆರೆ

ಉಪ್ಪಳ: ವೈದ್ಯರಿಗೆ ಹಲ್ಲೆಗೈದು ಗಾಯಗೊಳಿಸಿದ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಕೋಡಿಬೈಲು ನಿವಾಸಿ ಉಮ್ಮರ್ (45), ಈತನ ಸಹೋದರ ಕೋಡಿಬೈಲು ಅಡ್ಕತ್ತೊಟ್ಟಿಯ ಹೈದರಾಲಿ (33) ಎಂಬಿವರು ಬಂಧಿತ ಆರೋಪಿಗಳಾ ಗಿದ್ದಾರೆ.  ಉಪ್ಪಳ ರೈಲು ನಿಲ್ದಾಣ ರಸ್ತೆಯ ದೇವಿಪ್ರಸಾದ್ ಮಾವೆ ಆಸ್ಪತ್ರೆಯ ವೈದ್ಯ ಕುಮಾರ್ ಶಾಶ್ವತ್(೪೨)ರಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸ ಲಾಗಿದೆ.  ಈ ತಿಂಗಳ 4ರಂದು ರಾತ್ರಿ 8.30ಕ್ಕೆ ಆಸ್ಪತ್ರೆ ಆವರಣ ದೊಳಗೆ ಆರೋಪಿಗಳು ವೈದ್ಯರಿಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ.

ನೇಂದ್ರ ಬಾಳೆಯನ್ನು ಕೈಬಿಟ್ಟ ಬೆಲೆಯೇರಿಕೆ: ರಂಜಾನ್ ಮಾಸದಲ್ಲೂ ದರ ಕುಸಿತದಿಂದ ಕೃಷಿಕರು ಕಂಗಾಲು

ಕಾಸರಗೋಡು: ನಿತ್ಯೋಪಯೋಗ ಸಾಮಗ್ರಿ, ಹಣ್ಣುಹಂಪಲುಗಳ ಬೆಲೆಯೇರಿಕೆ ಕಾಲವಾದ ರಂಜಾನ್ ಮಾಸದಲ್ಲಿ ಬೆಲೆಯೇರಿಕೆಯಾಗದ ಹಣ್ಣಾಗಿದೆ ನೇಂದ್ರ ಬಾಳೆಹಣ್ಣು. ಮೂರು ಕಿಲೋ ನೇಂದ್ರ ಹಣ್ಣಿಗೆ ಇತ್ತೀಚೆಗೆ 100 ರೂ. ಆಗಿತ್ತು ಬೆಲೆ. ಆದರೆ ವಿದೇಶ ಹಣ್ಣುಗಳಿಗೆ ಬೆಲೆ ಕಡಿತ ಕಂಡು ಬರುವುದಿಲ್ಲ. ವ್ಯಾಪಾರಿಗಳಿಗೆ ನಾಲ್ಕು ಕಿಲೋ ನೇಂದ್ರ ಬಾಳೆ ಹಣ್ಣು 100 ರೂ.ಗೆ ಲಭಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಕೃಷಿಕರು ಕಂಗಾಲಾಗಿದ್ದಾರೆ. ರಂಜಾನ್ ಮಾಸಾರಂಭದಲ್ಲೇ ಮಾವಿನ ಹಣ್ಣಿಗೆ 180ರಿಂದ 300 ರೂ.ವರೆಗೆ ಬೆಲೆ ಏರಿಕೆಯಾಗಿತ್ತು. ಆಪಲ್‌ಗೂ ದರ ಹೆಚ್ಚಳವಿದೆ. ತುರ್ಕಿ, …

ಮುಳ್ಳೇರಿಯ ಕುಟುಂಬಾರೋಗ್ಯ ಕೇಂದ್ರ ಆವರಣದೊಳಗಿಂದ ಮರ ಸಾಗಾಟ: ಓರ್ವನ ವಿರುದ್ಧ ಕೇಸು

ಮುಳ್ಳೇರಿಯ: ಮುಳ್ಳೇರಿಯ ಕುಟುಂಬಾರೋಗ್ಯ ಕೇಂದ್ರದ ಆವರಣದೊಳಗೆ ಅತಿಕ್ರಮಿಸಿ ನುಗ್ಗಿ ಮರ ಕಡಿದು ಸಾಗಿಸಿರುವುದಾಗಿ  ದೂರಲಾಗಿದೆ. ಈ ಬಗ್ಗೆ ನೌಕರನಾದ ಎಸ್.ಎಂ .ಸಾಜಿರ್ ನೀಡಿದ ದೂರಿ ನಂತೆ ಮುಳ್ಳೇರಿಯದ ಉದಯನ್ ಎಂಬಾತನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕಳೆದ ಮಂಗಳವಾರ ಸಂಜೆ 5 ಗಂಟೆಯಿಂದ ಬುಧವಾರ ಬೆಳಿಗ್ಗೆ 10 ಗಂಟೆ ಮಧ್ಯೆ ಕುಟುಂಬಾರೋಗ್ಯ ಕೇಂದ್ರದ ಸ್ಥಳಕ್ಕೆ ನುಗ್ಗಿ ಮರ ಕಡಿದು ಸಾಗಿಸಿರುವುದಾಗಿಯೂ ಇದರಿಂದ  15 ಸಾವಿರ ರೂ.ಗಳ ನಷ್ಟ ವುಂಟಾಗಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಆದೂರು ಶಾಲೆಯಲ್ಲಿ ನಡೆದ ರ‍್ಯಾಗಿಂಗ್ ವಿವಾದದ ಹೆಸರಲ್ಲಿ ಹೊಡೆದಾಟ: ಎರಡೂ ಪ್ರದೇಶಗಳ ಯುವಕರ ಮಧ್ಯೆ ಘರ್ಷಣೆಯತ್ತ

ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಹಿಂದೆ ನಡೆದ ರ‍್ಯಾಗಿಂಗ್‌ನ ಹೆಸರಲ್ಲಿ ವಿದ್ಯಾರ್ಥಿಗಳ ಮಧ್ಯೆ ಉಂಟಾದ ಹೊಡೆದಾಟ ಎರಡೂ ಪ್ರದೇಶಗಳ ಯುವಕರ ಮಧ್ಯೆ ಘರ್ಷಣೆಗೆ ಕಾರಣವಾಗಿದೆ.  ಮೊನ್ನೆ ಸಂಜೆ ಮುಳ್ಳೇರಿಯ ಜುಮಾ ಮಸೀದಿಯಲ್ಲಿ  ನಮಾಜು ನಿರ್ವಹಿಸಿದ ಬಳಿಕ ಮರಳುತ್ತಿದ್ದ ಮೂರು ಮಂದಿ ಮೇಲೆ ಹಲ್ಲೆ ನಡೆಯುವುದರೊಂದಿಗೆ ಸ್ಥಿತಿ ಇನ್ನಷ್ಟು ಗಂಭೀರಾವಸ್ಥೆಗೆ ತಲುಪಲಿದೆಯೆಂಬ ಆತಂಕವುಂಟಾಗಿದೆ. ಆದೂರು ಸಿಎ ನಗರದ ಆಸಿಫ್ (28), ಪೂತಪಲದ ರಹೀಸ್ (18) ಸಹಿತ ಮೂರು ಮಂದಿ ಹಲ್ಲೆಯಿಂದ ಗಾಯಗೊಂಡಿದ್ದರು. ಈ ಪೈಕಿ …