ಮಂಜೇಶ್ವರ ಠಾಣೆ ನೂತನ ಸಿ.ಐಯಾಗಿ ಅಜಿತ್ ಕುಮಾರ್ ಪಿ. ಅಧಿಕಾರ ಸ್ವೀಕಾರ

ಮಂಜೇಶ್ವರ: ಮಂಜೇಶ್ವರ ಪೋಲೀಸ್ ಠಾಣೆಯಲ್ಲಿ ನೂತನ ಇನ್ಸ್ಫೆಕ್ಟರ್ ಆಗಿ ಅಜಿತ್ ಕುಮಾರ್. ಪಿ ನಿನ್ನೆ ಅಧಿಕಾರ ಸ್ವೀಕರಿಸಿಕೊಂಡಿ ದ್ದಾರೆ. ಈ ಹಿಂದೆ ಇವರು ಕಾಞಂ ಗಾಡ್ ಠಾಣೆಯಲ್ಲಿ ಕರ್ತವ್ಯದಲಿ ್ಲದ್ದರು. ಮಂಜೇಶ್ವರ ಠಾಣೆಯಲ್ಲಿ ಈ ಹಿಂದೆ ಸಿ.ಐ ಯಾಗಿದ್ದ ಅನೂಪ್ ಕುಮಾರ್ ಕಾಞಂಗಾಡ್‌ಗೆ ವರ್ಗಾವಣೆ ಗೊಂಡಿದ್ದಾರೆ. ಅಲ್ಲದೆ ಮಂಜೇ ಶ್ವರ ಠಾಣೆಯಲ್ಲಿ ನೂತನ ಎಸ್.ಐ ಆಗಿ ವೈಷ್ಣವ್ ಹಾಗೂ ಪ್ರೊಬೇ ಶನಲ್ ಎಸ್.ಐ ಆಗಿ ಶಬರಿಕೃಷ್ಣ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

ಬಾಟ್ಲಿಯ ಮುಚ್ಚಳ ಗಂಟಲಲ್ಲಿ ಸಿಲುಕಿ ಮಗು ಮೃತ್ಯು

ತೃಶೂರು: ಬಾಟ್ಲಿಯ ಮುಚ್ಚಳ ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ತೃಶೂರು ಎರುಮಪೆಟ್ಟಿ ಎಂಬಲ್ಲಿ ಸಂಭವಿಸಿದೆ. ಆದೂರ್ ಕಂಡೇರಿವಳಪ್ಪಿಲ್ ಉಮ್ಮರ್ -ಮುಫೀದ ದಂಪತಿಯ ಪುತ್ರ ಮಹಮ್ಮದ್ ಶಹಲ್ ಮೃತಪಟ್ಟ ಮಗು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಆಹಾರ ಸೇವಿಸುತ್ತಿದ್ದ ಮಧ್ಯೆ ಬಾಟ್ಲಿಯ ಮುಚ್ಚಳವನ್ನು ಮಗು ನುಂಗಿರುವುದಾಗಿ ತಿಳಿದುಬಂದಿದೆ. ಉಸಿರಾಟ ಸಾಧ್ಯವಾಗದೆ ಚಡಪಡಿಸುತ್ತಿದ್ದ ಮಗುವಿನ ಬಾಯಿ ತೆರೆದು  ಮನೆಯವರು ನೋಡಿದಾಗ ಮುಚ್ಚಳ ಗಂಟಲಲ್ಲಿ ಸಿಲುಕಿರುವುದು ಕಂಡುಬಂದಿದೆ.   ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಮಗುವಿನ ಜೀವ ರಕ್ಷಿಸಲಾಗಲಿಲ್ಲ.

ಕುರ್ನೂಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ದುರ್ಘಟನೆ:ಬಸ್‌ಗೆ ಬೆಂಕಿ ತಗಲಿ 32 ಮಂದಿ ಸಜೀವ ದಹನ

ಹೈದರಾಬಾದ್: ಆಂಧ್ರಪ್ರದೇಶದ ಕುರ್ನೂಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ  ಬಸ್‌ಗೆ ಬೆಂಕಿ ತಗಲಿ 32 ಮಂದಿ ಪ್ರಯಾಣಿಕರು ಸಜೀವ ದಹನಗೊಂಡು ಇನ್ನೂ ಹಲವರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.  ಆಂಧ್ರಪ್ರದೇಶದ ಕುರ್ನೂಲ್ ಜಿಲ್ಲೆಯ  ರಾಷ್ಟ್ರೀಯ ಹೆದ್ದಾರಿ-44ರ ಚಿನ್ನತೇಕೂರು ಗ್ರಾಮದಲ್ಲಿ ಇಂದು ಮುಂಜಾನೆ 3.30ರ ವೇಳೆ ಈ ದುರ್ಘಟನೆ ಉಂಟಾಗಿದೆ. ಬೆಂಕಿ ತಗಲಿದ ಬಸ್ಸಿನಲ್ಲಿ ೪೦ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.  ಬಸ್ ಬೆಂಗಳೂರಿಗೆ ಬರುತ್ತಿದ್ದ ವೇಳೆ ಧಾರಾಕಾರ ಮಳೆ ಸುರಿಯುತ್ತಿತ್ತು.  ಈ ವೇಳೆ ಶಿವಶಂಕರ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಅಮಿತ ವೇಗದಲ್ಲಿ ಬಂದು …

ಶಬರಿಮಲೆ ಚಿನ್ನ ಕೊಳ್ಳೆ : ಮಾಹಿತಿ ಸಂಗ್ರಹಕ್ಕಾಗಿ ಉಣ್ಣಿಕೃಷ್ಣನ್ ಪೋತ್ತಿಯನ್ನು ಬೆಂಗಳೂರಿಗೆ ಕೊಂಡೊಯ್ದ ತನಿಖಾ ತಂಡ; ಇನ್ನಷ್ಟು  ಮಂದಿಯ ಬಂಧನ ಸಾಧ್ಯತೆ

ತಿರುವನಂತಪುರ: ಶಬರಿಮಲೆ ಕ್ಷೇತ್ರದಿಂದ ಚಿನ್ನ ಸಾಗಿಸಿದ ಪ್ರಕರಣದಲ್ಲಿ ಸೆರೆಗೀಡಾದ ಉಣ್ಣಿಕೃಷ್ಣನ್ ಪೋತ್ತಿಯನ್ನು ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ಬೆಂಗಳೂರಿಗೆ ಕರೆದೊಯ್ದಿದೆ. ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್‌ಗೂ ತಲುಪಿಸಿ ಮಾಹಿತಿ ಸಂಗ್ರಹಿಸಲು ತನಿಖಾ ತಂಡ ತೀರ್ಮಾನಿಸಿದೆ. ಇದೇ ವೇಳೆ ಪ್ರಕರಣದಲ್ಲಿ ಆರೋಪಿ ಪಟ್ಟಿಯಲ್ಲಿರುವ ಇನ್ನಷ್ಟು ಮಂದ ದೇವಸ್ವಂ ಅಧಿಕಾರಿಗಳ ಬಂಧನ ಶೀಘ್ರ ನಡೆಯಲಿದೆಯೆಂಬ ಸೂಚನೆಯಿದೆ. ಕ್ಷೇತ್ರದ ದ್ವಾರಪಾಲಕ ಶಿಲ್ಪದ ಚಿನ್ನವನ್ನು ಸಾಗಿಸಿದ ಸಂಬಂಧ ಹತ್ತು ಮಂದಿ ಆರೋಪಿಗಳಿದ್ದಾರೆ. ಇದರಲ್ಲಿ ಉಣ್ಣಿಕೃಷ್ಣನ್ ಪೋತ್ತಿ ಹಾಗೂ ಮುರಾರಿಬಾಬುವನ್ನು ಮಾತ್ರವೇ ಇದುವರೆ ಬಂಧಿಸಲಾಗಿದೆ.  ಇದೇ ವೇಳೆ …

ಕಾರು ಢಿಕ್ಕಿ ಹೊಡೆದು ಸ್ಕೂಟಿ ಸವಾರ ಗಾಯ

ಕಾಸರಗೋಡು: ನಗರದ ಕರಂದಕ್ಕಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಕಾರು ಮತ್ತು ಸ್ಕೂಟಿ ಢಿಕ್ಕಿ ಹೊಡೆದು ಸ್ಕೂಟಿ ಸವಾರ ಉಳಿಯತ್ತಡ್ಕದ ಮುನೀರ್ (5೦) ಎಂಬವರು ಗಾಯಗೊಂಡಿದ್ದಾರೆ. ಅದನ್ನು ಕಂಡ ಕಾಸರಗೋಡು ಅಗ್ನಿಶಾಮಕದಳ  ಗಾಯಾಳುವನ್ನು ತಕ್ಷಣ ಆಂಬುಲೆನ್ಸ್‌ನಲ್ಲಿ  ಆಸ್ಪತ್ರೆಗೆ  ಸಾಗಿಸಿದರು.  ಅಪಘಾತಕ್ಕೀಡಾದ ಸ್ಕೂಟಿಯಲ್ಲಿ ಮುನೀರ್‌ರ ಪುತ್ರಿಯೂ ಇದ್ದರು. ಅವರಿಗೆ ಯಾವುದೇ ಗಾಯವುಂಟಾಗಿಲ್ಲ.

ಪೊಲೀಸ್ ಅಧಿಕಾರಿಯ ಕಾರಿಗೆ ಹಾನಿಗೈದು ಬ್ಯಾಟರಿ ಕಳವು: ಇಬ್ಬರ ಬಂಧನ

ಕಾಸರಗೋಡು:  ತೃಕ್ಕರಿಪುರ ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ  ಪೊಲೀಸ್  ಅಧಿಕಾರಿಯ ಕಾರಿನ ಗಾಜು ಪುಡಿಗೈದು ಬ್ಯಾಟರಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.  ಪಿಲಿಕ್ಕೋಡ್ ಮೇಲ್ಮಟ್ಟಲಾಯಿ ನಿವಾಸಿಗಳಾದ ಕೆ. ರೋಬಿನ್ ಯಾನೆ ಸಚ್ಚು (20), ಎ.ಶಾನಿಲ್ (28) ಬಂಧಿತ ವ್ಯಕ್ತಿಗಳಾಗಿದ್ದಾರೆ.  ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ ಶಂಸೀರ್‌ರ ಕಾರಿನ ಗಾಜು ಪುಡಿಗೈದು ಆರೋಪಿಗಳು ಬ್ಯಾಟರಿ ಕಳವು ನಡೆಸಿದ್ದರು.  ಶಂಸೀರ್ ಕಾರನ್ನು ತೃಕ್ಕರಿಪುರ ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿ ಕರ್ತವ್ಯಕ್ಕೆ ತೆರಳಿದ್ದರು.  ಕೆಲಸ ಮುಗಿಸಿ …

ಸಹೋದರರ ಮಧ್ಯೆ ಜಗಳ: ಓರ್ವನಿಗೆ ಇರಿತ

ಕಾಸರಗೋಡು: ಕಾಞಂಗಾಡ್ ರಾವಣೇಶ್ವರದಲ್ಲಿ ಇಬ್ಬರು ಸಹೋದರರ ಮಧ್ಯೆ ನಡೆದ ಜಗಳದ ವೇಳೆ ಓರ್ವನಿಗೆ ಗಂಭೀರ ಇರಿತ ಉಂಟಾಗಿದೆ. ರಾವಣೇಶ್ವರ ಪಾಣಂ ತೋಡು ನಿವಾಸಿ ಶಾಜಿ (45) ಇರಿತದಿಂದ ಗಂಭೀರ ಗಾಯಗೊಂ ಡಿದ್ದು, ಇವರನ್ನು ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಅಪರಾಹ್ನ ಶಾಜಿ ಹಾಗೂ ಸಹೋದರ ಶೈಜು ಮಧ್ಯೆ ವಾಗ್ವಾದ ನಡೆದಿದ್ದು, ಇದು ಬಳಿಕ ಹೊಕೈಗೆ ತಲುಪಿದೆ. ಈ ವೇಳೆ  ಮದ್ಯದಮಲಿ ನಲ್ಲಿದ್ದ ಶೈಜು ಅಣ್ಣ ಶಾಜಿಗೆ  ಇರಿದು ಗಾಯಗೊಳಿಸಿರುವುದಾಗಿ ಹೇಳಲಾಗುತ್ತಿದೆ.  ತಕ್ಷಣ ಶಾಜಿಯನ್ನು  ಪರಿಯಾರಂ ಮೆಡಿಕಲ್ ಕಾಲೇಜು …

ಸುರತ್ಕಲ್‌ನಲ್ಲಿ ಯುವಕರಿಗೆ ಇರಿತ: ಅಕ್ರಮಿಗಳ ಬಗ್ಗೆ ಸೂಚನೆ

ಮಂಗಳೂರು: ಸುರತ್ಕಲ್‌ನಲ್ಲಿ ಬೈಕ್ ತಡೆದು ನಿಲ್ಲಿಸಿ ಯುವಕರನ್ನು ಆಕ್ರಮಿಸಿದ ಘಟನೆ ನಡೆದಿದೆ. ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ನಿಜಾಮ್ (23),ಕೃಷ್ಣಾಪುರ ಹಿಲ್‌ಸೈಡ್ ನಿವಾಸಿ ಹಸನ್ ಮುರ್ಶಿದ್ (18) ಎಂಬಿವರಿಗೆ ಇರಿಯಲಾಗಿದೆ. ಇವರಲ್ಲಿ ನಿಜಾಮ್‌ನ ಸ್ಥಿತಿ ಗಂಭೀರವಾಗಿದೆ. ನಿನ್ನೆ ರಾತ್ರಿ ೧೦ ಗಂಟೆ ವೇಳೆಗೆ ಚೊಕ್ಕಬೆಟ್ಟು ಕಾನದಲ್ಲಿ  ಪೆಟ್ರೋಲ್ ಬಂಕ್ ಸಮೀಪ ಘಟನೆ ನಡೆದಿದೆ. ಗಾಯಗೊಂಡು ಆಸ್ಪತ್ರೆಯಲ್ಲಿ ಇರುವವರು ಹಾಗೂ 3 ಮಂದಿ ಗೆಳೆಯರು ಎರಡು ಬೈಕ್‌ಗಳಲ್ಲಾಗಿ ತೆರಳುತ್ತಿದ್ದರು. ಈ ಮಧ್ಯೆ  ಪೆಟ್ರೋಲ್ ತುಂಬಿಸಲೆಂದು ಒಂದು ಬೈಕ್ ಪೆಟ್ರೋಲ್ ಬಂಕ್‌ಗೆ …

ಮಾದಕದ್ರವ್ಯ ಸಾಗಾಟ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು:  ಮಾದಕದ್ರವ್ಯ  ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಾನು ಎಸ್ ಪಣಿಕ್ಕರ್ ೭ ವರ್ಷ ಕಠಿಣ ಸಜೆ ಮತ್ತು 1 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಹೆಚ್ಚುವರಿ ಕಠಿಣ ಸಜೆ ಅನುಭವಿಸ ಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಹೊಸದುರ್ಗ ಆರಂಗಾಡಿ ಅರಾಯಿಕಡವು ನಿವಾಸಿ ಅಬ್ದುಲ್ ಶೆಫೀಕ್ (39) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. 2019 ಫೆಬ್ರವರಿ 13ರಂದು  ಮುಳ್ಳೇರಿಯ-ಕುಂಟಾರಿನಲ್ಲಿ  ಆದೂರು ಪೊಲೀಸರು ನಡೆಸಿದ …

ಶೆಡ್‌ನಿಂದ 116 ಕಿಲೋ ಗಾಂಜಾ ವಶಪಡಿಸಿದ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಮಡಿಕೇರಿಯಿಂದ ಸೆರೆ

ಮಂಜೇಶ್ವರ: ಕೊಡ್ಲಮೊಗರು ಬಳಿಯ ಸುಳ್ಯಮೆಯ ಮನೆಯ ಶೆಡ್‌ನಲ್ಲಿ ಬಚ್ಚಿಟ್ಟಿದ್ದ 116 ಕಿಲೋ ಗಾಂಜಾ ಪತ್ತೆಹಚ್ಚಿದ ಪ್ರಕರಣದ ಆರೋಪಿಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ರತೀಶ್ ಗೋಪಿಯವರ ನೇತೃತ್ವದ ತಂಡ  ಮಡಿಕೇರಿಯಿಂದ ಬಂಧಿಸಿದೆ. ಮಂಗಳೂರು  ತೊಕ್ಕೋಟು ನಿವಾಸಿ ಸೆನೋಹರ್ (28) ಬಂಧಿತ ಆರೋಪಿ. ಗಾಂಜಾ ಪತ್ತೆಯಾದ ದಿನದಿಂದ ಈತ ತಲೆಮರೆಸಿಕೊಂಡಿದ್ದನು. ಈತನ ಗೂಗಲ್ ಪೇ ಅಕೌಂಟ್  ಟ್ರಾಕ್ ಮಾಡಿ  ಅದರ ಜಾಡು ಹಿಡಿದು ನಡೆಸಿದ  ಪರಿಶೀಲನೆಯಲ್ಲಿ ಆರೋಪಿ ಮೈಸೂರು ಮತ್ತಿತರೆಡೆಗಳಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅದರ …