ಕೇಂದ್ರ ಸಚಿವ ಗಡ್ಕರಿ ಬಂಗಲೆಯಲ್ಲಿ ಕಳವಿಗೆತ್ನ ಸೆಕ್ಯುರಿಟಿ ಗಾರ್ಡ್ ಬಂಧನ

ನಾಗ್ಪುರ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ  ನಾಗ್ಪುರದಲ್ಲಿರುವ ಪಿ.ಎ. ಬಂಗಲೆಯಲ್ಲಿ ಕಳವಿಗೆತ್ನಿಸಲಾಗಿದೆ. ಅದಕ್ಕೆ ಸಂಬಂಧಿಸಿ ಪ್ರಸ್ತುತ ಬಂಗಲೆಯ ಸೆಕ್ಯುರಿಟಿ ಗಾರ್ಡ್ ರತನ್ ಕಾರ್ತಿಕ್ ಕಸ್ತೂರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗಡ್ಕರಿಯ ಆಪ್ತ ಸಹಾಯಕ  ಕೌಸ್ತುಭ್ ನೀಡಿದ ದೂರಿನಂತೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ ೧೦.೫೫ರ ವೇಳಗೆ ಆರೋಪಿ  ಸಚಿವರ ಬಂಗಲೆಯ  ಕೊಠಡಿಗೆ ಅಕ್ರಮ ವಾಗಿ ಪ್ರವೇಶಿಸಿ ಕಳವುಗೈಯ್ಯ ಲೆತ್ನಿಸಿ ರುವುದಾಗಿ  ಪೊಲೀಸರಿಗೆ ನೀಡಲಾದ ದೂರಿನಲ್ಲಿ ಹೇಳಲಾಗಿದೆ.

ಸ್ಥಳೀಯಾಡಳಿತ ಚುನಾವಣೆ ಡಿಸೆಂಬರ್‌ನಲ್ಲಿ ಸಾಧ್ಯತೆ

ತಿರುವನಂತಪುರ: ರಾಜ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆ ಡಿಸೆಂಬರ್ 10ರ ಮೊದಲು ನಡೆ ಯುವ ಸಾಧ್ಯತೆ ಇದೆ. ನವೆಂಬರ್ 10ರ ಮುಂಚೆ ಈ ಸಂಬಂಧ ಘೋಷಣೆ ಉಂಟಾಗಲಿದೆ ಎಂದು ತಿಳಿದು ಬಂದಿದೆ. 1200 ಸ್ಥಳೀಯಾ ಡಳಿತ ಸಂಸ್ಥೆಗಳ ಪೈಕಿ ಮಟ್ಟನ್ನೂರು ನಗರಸಭೆಯನ್ನು ಹೊರತುಪಡಿಸಿ  ಚುನಾವಣೆ ನಡೆಯಲಿದೆ. ಮೀಸ ಲಾತಿ ವಾರ್ಡ್‌ಗಳ ಆಯ್ಕೆ ಈಗಾ ಗಲೇ ಪೂರ್ಣಗೊಂಡಿದೆ.  ಸ್ಥಳೀ ಯಾಡಳಿತ ಸಂಸ್ಥೆಗಳ ಅಧ್ಯಕ್ಷ, ಅಧ್ಯಕ್ಷೆ ಮೀಸಲಾತಿ ನಿರ್ಧಾರ ಹಾಗೂ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಇನ್ನಷ್ಟೇ ನಡೆಯಬೇಕಾಗಿದೆ. ಅಧ್ಯಕ್ಷರ ನಿರ್ಧಾರ ಈ …

ಪೋಕ್ಸೋ ಪ್ರಕರಣದ ಆರೋಪಿಗೆ 7 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಶ್ ಪಿ.ಎಂ. ಅವರು ಏಳು ವರ್ಷ ಕಠಿಣ ಸಜೆ ಹಾಗೂ 25000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಚೀಮೇನಿಗೆ ಸಮೀಪದ ಮಾಣಿಯೋಟ್ ಸೌತ್ ನಿವಾಸಿ ಪ್ರತೀಷ್ ಎ.ವಿ. (44) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿಆರೋಪಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2022 ಡಿಸೆಂಬರ್ ಮತ್ತು 2023 ಜನವರಿ ತಿಂಗಳ …

ನ.1ರಂದು ರೇಶನ್ ವ್ಯಾಪಾರಿಗಳಿಂದ ತಾಲೂಕು ಕೇಂದ್ರಗಳಲ್ಲಿ ಮಾರ್ಚ್, ಧರಣಿ ಮುಷ್ಕರ

ಕಾಸರಗೋಡು: ರೇಶನ್ ವ್ಯಾಪಾರಿಗಳ ವೇತನವನ್ನು ಸಮ ಯೋಚಿತ ರೀತಿಯಲ್ಲಿ ಹೆಚ್ಚಿಸಬೇಕು, ಕೇರಳ ಪಡಿತರ ಕಾನೂನಿನ ಲೋಪ ದೋಷಗಳನ್ನು ಪರಿಹರಿಸಬೇಕು, ರೇಶನ್ ವ್ಯಾಪಾರಿಗಳ ಕಲ್ಯಾಣ ನಿಧಿಯಲ್ಲಿ ಸರಕಾರದ  ಪಾಲನ್ನು ಪುನಃ ಸ್ಥಾಪಿಸಬೇಕು ಅದಕ್ಕೆ ತಯಾರಾಗ ದಿದದಲ್ಲಿ ವ್ಯಾಪಾರಿಗಳಿಂದ ಈತನಕ ಸ್ವೀಕರಿಸಲಾದ ಹಣವನ್ನು ಅವರಿಗೆ ಹಿಂತಿರುಗಿಸಬೇಕು, ರೇಶನ್ ವ್ಯಾಪಾರಿಗಳನ್ನು ಮೆಡಿಸೆಪ್ ಯೋಜನೆಯಲ್ಲಿ ಒಳಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕೇರಳ ರಾಜ್ಯ ರೂಪೀಕರಣ ದಿನವಾದ ನವಂಬರ್ 1ರಂದು ತಾಲೂಕು ಕೇಂದ್ರಗಳಲ್ಲಿ  ಮಾರ್ಚ್ ಮತ್ತು ಧರಣಿ ಮುಷ್ಕರ ಹೂಡಲು ರೇಶನ್ ವ್ಯಾಪಾರಿಗಳ ಸಂಘಟನೆ …

ಅನ್ಯಧರ್ಮದ ವ್ಯಕ್ತಿಯನ್ನು ಪ್ರೀತಿಸಿದ ಮಗಳು ಗೃಹಬಂಧನದಲ್ಲಿದ್ದಾಳೆಂಬ ಆರೋಪ ಸತ್ಯಕ್ಕೆ ದೂರ- ಕುಟುಂಬ

ಕಾಸರಗೋಡು: ಬೇರೆ ಧರ್ಮದ ವ್ಯಕ್ತಿಯನ್ನು ಪ್ರೀತಿಸಿದ ಹಿನ್ನೆಲೆಯಲ್ಲಿ ಮಗಳನ್ನು ಗೃಹಬಂಧನದಲ್ಲಿಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದೆಂದು ಸಿಪಿಎಂ ನೇತಾರನಾದ ಉದುಮ ಪಳ್ಳದ ಪಿ.ವಿ. ಭಾಸ್ಕರನ್ ಹಾಗೂ ಕುಟುಂಬ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ತನ್ನ ಮಗಳು ಮನೆಯಲ್ಲಿ ಸುರಕ್ಷಿತವಾಗಿದ್ದಾಳೆ. ಮಾಧ್ಯಮ ಕಾರ್ಯಕರ್ತರು ಮನೆಗೆ ಬಂದು ನೋಡಿ ವಿಷಯ ತಿಳಿದುಕೊಳ್ಳಬಹುದು. ಮಗಳು ಬಹಿರಂಗಗೊಳಿಸಿದ ವೀಡಿಯೋವನ್ನು ಮಾತ್ರ ಆಧಾರವಾಗಿಸಿ ಕೆಲವು ಮಾಧ್ಯಮಗಳು ಹಾಗೂ ಯುಟ್ಯೂಬರ್‌ಗಳು ನಡೆಸುವ ಪ್ರಚಾರ ಸತ್ಯಕ್ಕೆ ದೂರವಾದುದಾಗಿದೆ ಎಂದು ಭಾಸ್ಕರನ್ ತಿಳಿಸಿದ್ದಾರೆ. 2023ರಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮಗಳ ಬೆನ್ನೆಲುಬಿಗೆ  …

ಪೈವಳಿಕೆ ನಗರ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ 27ರಿಂದ

ಕುಂಬಳೆ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಈ ತಿಂಗಳ 27ರಿಂದ 30ರ ವರೆಗೆ ಪೈವಳಿಕೆ ನಗರ ಜಿಎಚ್‌ಎಸ್‌ಎಸ್‌ನಲ್ಲಿ ನಡೆಯಲಿದೆ. ಈ ಬಗ್ಗೆ ಸ್ವಾಗತ ಸಮಿತಿ ಪದಾಧಿಕಾರಿ ಗಳು  ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉಪಜಿಲ್ಲೆಯ 113 ಶಾಲೆಗಳಿಂದ 5 ಸಾವಿರದಷ್ಟು ವಿದ್ಯಾರ್ಥಿಗಳು ವಿವಿಧ ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುವರು. ನಾಲ್ಕು ದಿನಗಳಲ್ಲಾಗಿ ೨೭ ವೇದಿಕೆ ಗಳಲ್ಲಿ  ಕಲೋತ್ಸವ ನಡೆಯಲಿದೆ. ಶಾಲಾ ಕ್ಯಾಂಪಸ್, ಪಂಚಾಯತ್ ಕಚೇರಿ ಮೈದಾನ, ಪಯ್ಯಕ್ಕಿ ಉಸ್ತಾದ್ ಕಾಂಪೌಂಡ್ ಎಂಬೆಡೆಗಳಲ್ಲಾಗಿ ಪ್ರಧಾನ ವೇದಿಕೆಗಳು ಇರಲಿದೆ. 27ರಂದು ವೇದಿ …

ಜಿಲ್ಲೆಯ ವೋಟರ್ ಡಿಲೀಶನ್ ಪ್ರಕ್ರಿಯೆ ಬುಡಮೇಲುಗೊಳಿಸಲು ಯತ್ನ-ಎಂ.ಎಲ್. ಅಶ್ವಿನಿ

ಕಾಸರಗೋಡು: ತಮ್ಮ ಭದ್ರ ಕೋಟೆಗಳಲ್ಲಿ ವೋಟರ್ ಡಿಲೀಶನ್ ಪ್ರಕ್ರಿಯೆಯನ್ನು ಬುಡಮೇಲು ಗೊಳಿಸಲು ಲೀಗ್, ಎಸ್‌ಡಿಪಿಐ, ಸಿಪಿಎಂ ಯತ್ನಿಸುತ್ತಿದೆ ಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಅವಳಿ ಮತಗಳು, ವಿವಾಹದ ಬಳಿಕ ಬದಲಾಗಿ ಹೋದ ಮಹಿಳೆಯರು ಎಂಬಿವರ ಮಾಹಿತಿ ಗಳನ್ನು ಲಿಖಿತವಾಗಿ ಸ್ಪಷ್ಟವಾಗಿ ಸಲ್ಲಿಸಿದರೂ ಅವರನ್ನು ಮತದಾರರ ಪಟ್ಟಿಯಿಂದ ತೆರವುಗೊಳಿಸಲಾಗಿಲ್ಲ. ವರ್ಕಾಡಿ ಪಂಚಾಯತ್‌ನಲ್ಲಿ ೧೦೦ರಷ್ಟು ಮತಗಳು ತೆರವುಗೊಳಿಸಲಿದೆ. ಇವರನ್ನು ತೆರವುಗೊಳಿಸಬೇಕೆಂದು ಅರ್ಜಿ ನೀಡಿದ  ಬಿಜೆಪಿ ಮುಖಂಡ ರನ್ನು ಹಾಗೂ ಕಾರ್ಯಕರ್ತರನ್ನು, ಪಂಚಾಯತ್ ಅಧಿಕಾರಿಗಳನ್ನು ಎಸ್‌ಡಿಪಿಐ-ಲೀಗ್ ಮುಖಂಡರು ಬೆದರಿಕೆಯೊಡ್ಡಿ  …

ಜಾರಿ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮಹಿಳೆ ನಿಧನ

ಮಂಜೇಶ್ವರ: ಮನೆಯ ಬಚ್ಚಲು ಕೋಣೆಯಲ್ಲಿ ಜಾರಿ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮಹಿಳೆಯೋರ್ವರು ನಿಧನ ಹೊಂದಿದ್ದಾರೆ. ಕಡಂಬಾರು ಕೆÀಳಗಿನಮನೆ ನಿವಾಸಿ ದಿ| ಸೀತಾರಾಮ ಸಪಲ್ಯರ ಪತ್ನಿ ಯಮುನ (68) ನಿಧನ ಹೊಂದಿದ್ದಾರೆ. ಸೋಮವಾರ ರಾತ್ರಿ ಮನೆಯ ಬಚ್ಚಲು ಕೋಣೆಯಲ್ಲಿ ಜಾರಿ ಬಿದ್ದಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಹಾಗೂ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ನಿಧನ ಹೊಂದಿದರು. ಮೃತರು ಮಕ್ಕಳಾದ ದೇವದಾಸ್, ಶಾಂತರಾಮ, ನವೀನ, ಸೊಸೆಯಂದಿರಾದ ಸುಜಾತ, ಬೇಬಿ, ಅಳಿಯ ಕೇಶವ, …

ವಿ.ಹಿಂ.ಪ ಕಾಸರಗೋಡು ಪ್ರಖಂಡದಿಂದ ಸಾಮೂಹಿಕ ಗೋಪೂಜೆ

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ವತಿಯಿಂದ ಸಾಮೂಹಿಕ ಗೋಪೂಜೆ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ಜರಗಿತು. ವೇದಮೂರ್ತಿ ನಾಗೇಂದ್ರ ಭಟ್ ಉದ್ಘಾಟಿಸಿ ಗೋವಿನ ಮಹತ್ವದ ಬಗ್ಗೆ ವಿವರಿಸಿ ದರು. ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಯಾಗಿದ್ದ ಚಂದ್ರಮೋಹನ್ ಗೋಪೂಜೆ ಬಗ್ಗೆ ವಿವರಿಸಿದರು. ವಿ.ಎಚ್.ಪಿ. ಹಿರಿಯ ಕಾರ್ಯಕರ್ತ ಎ.ಟಿ.ನಾಯಕ್ ಉಪಸ್ಥಿತರಿದ್ದರು. ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಾದ ಅನುಶ್ರೀ ಮತ್ತು ಛಾಯಾಶ್ರೀ ಗೋವಿನ ಹಾಡಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಖಂಡ …

ಪ್ರತಾಪನಗರ ಗಣೇಶ ಮಂದಿರದಲ್ಲಿ ಸಾಮೂಹಿಕ ಗೋಪೂಜೆ

ಮಂಗಲ್ಪಾಡಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಾಪನಗರ ಶ್ರೀ ಗೌರೀ ಗಣೇಶ ಮಂದಿರದಲ್ಲಿ ಸಾಮೂ ಹಿಕ ಗೋಪೂಜೆ ನಿನ್ನೆ ಸಂಜೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಬೆಳಿಗ್ಗೆ ನಟೇಶ ಬಳ್ಳಕ್ಕು ರಾಯರವರ ಪೌರೋಹಿತ್ವದಲ್ಲಿ ಗಣಹೋಮದೊಂದಿಗೆ ಆರಂಭಗೊAಡು, ಸಂಜೆ ಭಜನೆ, ಗಣಪತಿ ಪೂಜೆ, ಭಾರತ ಮಾತೆಗೆ ಪುಷ್ಪಾರ್ಚನೆ, ಬಳಿಕ ಸಾಮೂಹಿಕ ಗೋಪೂಜೆ ಜರಗಿತು. ಉಪಹಾರದೊಂದಿಗೆ ಸಮಾಪ್ತಿಗೊಂ ಡಿತು. ಮಾತೆಯರ ಸಹಿತ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.