ಚುನಾವಣಾ ಕರ್ತವ್ಯಕ್ಕೆ ಮದ್ಯದಮಲಿನಲ್ಲಿ  ತಲುಪಿದ ಪೊಲೀಸ್ ಮಹಿಳಾ ಪ್ರಿಸೈಡಿಂಗ್ ಆಫೀಸರ್‌ರೊಂದಿಗೆ ಅನುಚಿತ ವರ್ತನೆ

ಕಾಸರಗೋಡು: ಮದ್ಯದಮಲಿನಲ್ಲಿ ಚುನಾವಣಾ ಕರ್ತವ್ಯಕ್ಕೆ ತಲುಪಿ ಮಹಿಳಾ ಪ್ರಿಸೈಂಡಿಂಗ್ ಆಫೀಸರ್‌ರೊಂ ದಿಗೆ ಅನುಚಿತವಾಗಿ ವರ್ತಿಸಿದ ಕಾಞಂಗಾಡ್ ಬೀಟಾ ಕಂಟ್ರೋಲ್ ರೂಂನ ಪೊಲೀಸ್‌ನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದೂರು ಪೊಲೀಸ್ ಇನ್‌ಸ್ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್‌ರ ದೂರಿ ನಂತೆ ಸಿಪಿಒ ಆಗಿರುವ ಸನೂಪ್ ಜೋನ್  ವಿರುದ್ಧ ಕೇಸು ದಾಖಲಿಸಲಾಗಿದೆ. ಮುಳಿಯಾರು ಪಂಚಾಯತ್‌ನ ಬೆಂಚ್ ಕೋರ್ಟ್ ವಾರ್ಡ್‌ನ ಮತಗಟ್ಟೆಯಾದ ಬೋವಿಕ್ಕಾನ ಎಯುಪಿ ಶಾಲೆಯಲ್ಲಿ  ನಿನ್ನೆ ಸಂಜೆ 4.30ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಈ ಕುರಿತು ಆದೂರು …

ಮಾದಕದ್ರವ್ಯ ಸಹಿತ ಇಂಜಿನಿಯರ್ ಸೇರಿ ಮೂವರ ಬಂಧನ: ತಪ್ಪಿಸಿಕೊಳ್ಳಲು ಮಾದಕದ್ರವ್ಯ ನೀರಲ್ಲಿ ಮಿಶ್ರಣಗೊಳಿಸಿದ ಆರೋಪಿಗಳು

ಕಾಸರಗೋಡು: ಕಾಸರಗೋಡು ಅಬಕಾರಿ ತಂಡ ಪಳ್ಳಿಕ್ಕರೆ ಕಲ್ಲಿಂಗಾಲ್ ನಲ್ಲಿ ನಡೆಸಿದ ಕಾರ್ಯಾಚರ ಣೆಯಲ್ಲಿ ಮಾದಕದ್ರವ್ಯವಾದ 4.813 ಗ್ರಾಂ ಮೆಥಾಫಿಟಾಮಿನ್ ಹಾಗೂ ಮಾದಕ ದ್ರವ್ಯ ಮಿಶ್ರಣಗೊಳಿಸಿದ 618 ಗ್ರಾಂ ನೀರನ್ನು  ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಚಟ್ಟಂಚಾಲ್ ಕುನ್ನಾರದ ಕೆ. ಅಬ್ಬಾಸ್ ಅರಾಫತ್ (26), ಮುಟ್ಟತ್ತೋಡಿ  ಸಂತೋಷ್‌ನಗರದ ಮೊಹಮ್ಮದ್  ಅಮೀನ್ (21) ಮತ್ತು ಪಳ್ಳಿಕ್ಕೆರೆ  ತೊಟ್ಟಿ ನಿವಾಸಿ ಟಿ.ಎಂ. ಫೈಸಲ್ (38) ಎಂಬ ವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇವರು ಬಳಸುತ್ತಿದ್ದ ಕಾರನ್ನು ಅಬಕಾರಿ ತಂಡ ವಶಕ್ಕೆ …

ವಿದ್ಯಾರ್ಥಿ ನಾಪತ್ತೆ

ಕಾಸರಗೋಡು: ಮಧೂರು ಪಟ್ಲ ನಿವಾಸಿ 17ರ ಹರೆ ಯದ ಯುವಕ ನಾಪತ್ತೆಯಾಗಿ ರುವುದಾಗಿ ದೂರಲಾ ಗಿದೆ. ಕುಂಬಳೆ ನಿವಾಸಿ ಮೊಹಮ್ಮದ್ ಅರಾಫತ್ ನಾಪತ್ತೆಯಾದ ಯುವಕ. ತ್ವಾಹಿರಿಯ ಅಕಾಡೆಮಿಯ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದಾನೆ. ಈತ ಶಾಲೆಯಿಂದ ಹೊರ ಹೋಗುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭಿಸಿದೆ. ಕೆಂಪು ಟೀಶರ್ಟ್ ಧರಿಸಿರುವ ದೃಶ್ಯ ಲಭಿಸಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಎರಡನೇ ಲೈಂಗಿಕ ಪ್ರಕರಣದಲ್ಲೂ ರಾಹುಲ್‌ಗೆ ಶರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು: ಸರಕಾರ ಮೇಲ್ಮನವಿಯತ್ತ

ತಿರುವನಂತಪುರ: ತಿರುವನಂತಪು ರದ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿ ಬಲವಂತವಾಗಿ ಆಕೆಯ ಗರ್ಭಪಾತ ನಡೆಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ದಾಖಲಿಸಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ಕೇರಳ ಹೈಕೋರ್ಟ್ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಬೆಂಗಳೂರಿನ ನಿವಾಸಿಯಾಗಿರುವ ೨೪ರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲೂ ರಾಹುಲ್‌ಗೆ ತಿರುವನಂತಪುರ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಶರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮುಂದಿನ ಮೂರು ತಿಂಗಳಲ್ಲಿ ಎರಡು ದಿನಗಳಿಗೊಮ್ಮೆ ತನಿಖಾ ತಂಡದ …

ಸ್ಥಳೀಯಾಡಳಿತ ಚುನಾವಣೆಯಲ್ಲಿ ಐಕ್ಯರಂಗ ಭಾರೀ ಗೆಲುವು ಸಾಧಿಸಲಿದೆ- ಎಕೆಎಂ ಅಶ್ರಫ್

ಉಪ್ಪಳ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯಾದ್ಯಂತ, ಪ್ರತ್ಯೇಕವಾಗಿ ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ಐಕ್ಯರಂಗ ಭಾರೀ ಬಹುಮತ ಗಳಿಸಲಿದೆ ಎಂದು ಶಾಸಕ ಎಕೆಎಂ ಅಶ್ರಫ್ ನುಡಿದರು. ಕೇಂದ್ರ, ರಾಜ್ಯ ಸರಕಾರಗಳ ಆಡಳಿತದಿಂದ ಜನರು ಬಡತನದತ್ತ ತಳ್ಳಲ್ಪಟ್ಟಿದ್ದು, ಶ್ರೀಮಂತರು ಹಾಗೂ ಬಡವರ ಮಧ್ಯೆಗಿನ ಅಂತರ ಹೆಚ್ಚಾಗಿದೆ ಎಂದು ಅವರು ದೂರಿದರು. ಬೆಲೆಯೇರಿಕೆಯಿಂದಾಗಿ ಜನರು ಸಂಕಷ್ಟಪಡುತ್ತಿದ್ದು ಈ ಚುನಾವಣೆಯಲ್ಲಿ ಐಕ್ಯರಂಗಕ್ಕೆ ಮತ ನೀಡುವರು ಎಂದು ಅವರು ಅಭಿಪ್ರಾಯಪಟ್ಟರು. ಮಂಗಲ್ಪಾಡಿ ಪಂಚಾಯತ್ ಸಹಿತ ಐಕ್ಯರಂಗವನ್ನು ಸೋಲಿಸಲು ಜನಪರ ಅಭ್ಯರ್ಥಿ ಎಂಬ ಹೆಸರಲ್ಲಿ ಒಕ್ಕೂಟ …

ಮಹಿಳೆಯ ವಿಷಯದಲ್ಲಿ ಉಂಟಾದ ವಿವಾದ: 20ರ ಯುವಕನನ್ನು ಕೊಲೆಗೈದು ತುಂಡುಮಾಡಿ ಕೊಳವೆಬಾವಿಗೆ ಹಾಕಿದ ಗೆಳೆಯ

ಮುಂಬಯಿ: ಮಹಿಳೆಯ ವಿಷಯದಲ್ಲಿ ಉಂಟಾದ ವಿವಾದದ ಬೆನ್ನಲ್ಲೇ 20 ವರ್ಷದ ಯುವಕನನ್ನು ಕೊಲೆಗೈದ ಬಳಿಕ ಮೃತದೇಹವನ್ನು ತುಂಡು ತುಂಡಾಗಿ ಮಾಡಿ ಗೆಳೆಯ ಕೊಳವೆ ಬಾವಿಯಲ್ಲಿ ಹಾಕಿದ ಘಟನೆ ನಡೆದಿದೆ. ಗುಜರಾತ್‌ನ ನಕತ್ರಾಣದಲ್ಲಿ ದಾರುಣ ಘಟನೆ ಸಂಭವಿಸಿದೆ. ಆರು ದಿನಗಳಿಂದ ನಾಪತ್ತೆಯಾಗಿದ್ದ 20ರ ಹರೆಯದ ಯುವಕನನ್ನು ಪೊಲೀಸರು ನಡೆಸಿದ ತನಿಖೆಯಲ್ಲಿ ಕೊಲೆಗೈದಿ ರುವುದು ಪತ್ತೆಹಚ್ಚಲಾಗಿದೆ. ಓರ್ವೆ ಮಹಿಳೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಗೆಳೆಯ ಕೊಲೆಗೈದಿರುವು ದಾಗಿ ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ 2ರಂದು ನಕತ್ರಾಣದ ನುರು ಗ್ರಾಮದಲ್ಲಿ ನಾಪತ್ತೆಯಾಗಿದ್ದ …

ವಂದೇಭಾರತ್ ಸ್ಲೀಪರ್ ರೈಲು ಈ ತಿಂಗಳ ಕೊನೆಯಲ್ಲಿ ಸಂಚಾರ ಆರಂಭ

ಚೆನ್ನೈ: ಪ್ರಯಾಣಿಕರು ಬಹಳ ಕಾಲದಿಂದ ಕಾಯುತ್ತಿದ್ದ ವಂದೇ ಭಾರತ್ ಸ್ಲೀಪರ್ ಗಾಡಿಯ ಉದ್ಘಾಟನೆ ಈ ತಿಂಗಳ ಕೊನೆಯಲ್ಲಿ ಉಂಟಾಗಬಹುದೆಂದು ರೈಲ್ವೇ ಮೂಲಗಳು ತಿಳಿಸಿವೆ. ಮೊದಲ ಸಂಚಾರ ದೆಹಲಿ ಹಾಗೂ ಪಾಟ್ನಾ ಮಧ್ಯೆ  ಇರಲಿದೆ. ಎರಡು ನಗರಗಳನ್ನು ಜೋಡಿಸುವ ರಾತ್ರಿ ಕಾಲ ಸಂಚಾರ ನಡೆಯಲಿದೆ. ತೇಜಸ್, ರಾಜಧಾನಿ ರೈಲುಗಾಡಿಗಳಿಗೆ ಸಮಾನವಾದ ಆಧುನಿಕ ಸೌಕರ್ಯಗಳೊಂದಿಗೆ ವಂದೇ ಭಾರತ್ ಸ್ಲೀಪರ್ ಸಂಚಾರ ನಡೆಸಲಿದೆ. ಇದಕ್ಕಿರುವ ಕೋಚ್‌ಗಳು ಬೆಂಗಳೂರಿನ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ (ಬೆಮಲ್) ನಿರ್ಮಿಸಿದೆ. 16 ಕೋಚ್‌ಗಳಿರುವ ಎರಡು ರೈಲುಗಾಡಿಗಳನ್ನು …

ಮಂಗಲ್ಪಾಡಿ, ಮಡಿಕೈ ಪಂ.ನ ತಲಾ 1 ವಾರ್ಡ್‌ಗಳಲ್ಲಿ ಮತದಾನವಿಲ್ಲ: ಅವಿರೋಧ ಆಯ್ಕೆ, ಅಭ್ಯರ್ಥಿ ಸಾವು ಹಿನ್ನೆಲೆಯಲ್ಲಿ ಕೆಲವು ಕಡೆ ಮತದಾನ ರದ್ದು

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯ ದ್ವಿತೀಯ ಹಂತದ ಮತದಾನ ಇಂದು ನಡೆಯುತ್ತಿರುವಂತೆ ಕೆಲವು ಕಡೆಗಳಲ್ಲಿ ಮತದಾನವನ್ನು ರದ್ದುಗೊಳಿಸಲಾಗಿದೆ. ಕಣ್ಣೂರು ಜಿಲ್ಲೆಯ ಆಂತೂರು ನಗರಸಭೆಯ ಐದು ವಾರ್ಡ್‌ಗಳಲ್ಲಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹಾಗೂ ಮಲಪ್ಪುರಂ ಜಿಲ್ಲೆಯ ಮುತ್ತೇಡಂ ಪಂಚಾಯತ್‌ನ ಪಾಯಿಂಬಾಡ 7ನೇ ವಾರ್ಡ್‌ನಲ್ಲಿ ಅಭ್ಯರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಮತದಾನ ಇಂದು ನಡೆಯುತ್ತಿಲ್ಲ. ಕಾಸರಗೋಡು ಜಿಲ್ಲೆಯ ಎರಡು ಗ್ರಾಮ ಪಂಚಾಯತ್‌ಗಳ ಒಂದೊಂದು ವಾರ್ಡ್‌ನಲ್ಲಿ ಇಂದು ಮತದಾನ ನಡೆಯುತ್ತಿಲ್ಲ. ಕಣ್ಣೂರು ಜಿಲ್ಲೆಯಲ್ಲಿ ಒಟ್ಟು 9 ಕಡೆಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮತದಾನವನ್ನು …

11.5 ಕೋಟಿ ರೂ.ಗಳ ಚಿನ್ನ  ಸಹಿತ ಐದು ಮಂದಿ ಸೆರೆ

ಚೆನ್ನೈ:  ವಿಮಾನ ನೌಕರ  ಒಳಗೊಂಡ ಚಿನ್ನ ಸಾಗಾಟ ತಂಡವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೆರೆಹಿಡಿದಿದ್ದಾರೆ.  11.5 ಕೋಟಿ ರೂ. ಮೌಲ್ಯದ 9.46 ಕಿಲೋ ಚಿನ್ನವನ್ನು ಇವರಿಂದ ವಶಪಡಿಸ ಲಾಗಿದೆ.  ದುಬಾಯಿಯಿಂದ ಬಂದ ವಿಮಾನದ ನೌಕರ ಎದೆ, ಹೊಟ್ಟೆಯ ಲ್ಲಿ ಚಿನ್ನವನ್ನು ಬಚ್ಚಿಟ್ಟು  ಬೆಲ್ಟ್‌ನಲ್ಲಿ ಬಿಗಿದಿಟ್ಟಿದ್ದನು. ಚಿನ್ನವನ್ನು ಪಡೆಯಲು ಬಂದ ಮೂವರು  ಹಾಗೂ ಚಿನ್ನ ಕಳ್ಳಸಾಗಾಟಕ್ಕೆ ಸಹಾಯ ವೊದಗಿಸಲು ತಲುಪಿದ ಓರ್ವನನ್ನು ಈ ಸಂಬಂಧ ಸೆರೆಹಿಡಿಯಲಾಗಿದೆ.

ವಿವಾಹ ವಿಚ್ಛೇಧನ ಬಗ್ಗೆ ಸಂದೇಶ ಹಾಕಿದ ಕಿರುತೆರೆ ನಟಿ ಹರಿತಾ ಜಿ. ನಾಯರ್

ತಿರುವನಂತಪುರ: ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಹರಿತಾ ಜಿ. ನಾಯರ್ ಪತಿ ವಿನಾಯಕನೊಂದಿಗಿನ ಸಂಬಂಧವನ್ನು ವಿಚ್ಛೇಧಿಸಿರುವುದಾಗಿ ಸಂದೇಶ ನೀಡಿದ್ದಾರೆ. ತನ್ನ ಸೋಷ್ಯಲ್ ಮೀಡಿಯಾ ಪೇಜ್‌ನಲ್ಲಿ ಈ ಮಾಹಿತಿಯನ್ನು ಈಕೆ ಬಹಿರಂಗಪಡಿಸಿದ್ದಾರೆ. ಚಿಕ್ಕಂದಿನಲ್ಲೇ ಇವರಿಬ್ಬರು ಗೆಳೆಯರಾಗಿದ್ದು, 15 ವರ್ಷದ ಗೆಳೆತನದ ಬಳಿಕ ೨೦೨೩ರಲ್ಲಿ ವಿವಾಹವಾಗಿದ್ದರು. ನರ್ಸಿಂಗ್ ಕಲಿಯುತ್ತಿದ್ದ ಹರಿತಾ ಜಿ. ನಾಯರ್ ಅನಿರೀಕ್ಷಿತವಾಗಿ ರಿಯಾಲಿಟಿ ಶೋಗೆ ತಲುಪಿದ್ದು, ಅಲ್ಲಿಂದ ಅಭಿನಯರಂಗಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ ಹಲವಾರು ಹಿಟ್ ಧಾರಾವಾಹಿಗಳಲ್ಲಿ ವೇಷ ಹಾಕಿದ್ದ ಈಕೆ ಈಗ ‘ಚೆಂಬರತ್ತಿ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. …