ಕಾಂಗ್ರೆಸ್ ಹಿರಿಯ ಕಾರ್ಯಕರ್ತ ನಿಧನ

ಉಪ್ಪಳ: ಜೋಡುಕಲ್ಲು ಪಟ್ಲ ನಿವಾಸಿ, ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ ಮೊಹಮ್ಮದ್ ಪಟ್ಲ (68) ಇತ್ತೀಚೆಗೆ ಅಲ್ಪಕಾಲದ ಅಸೌಖ್ಯ ದಿಂದ ನಿಧನರಾದರು. ಕಯ್ಯಾರು ವಾರ್ಡ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿದ್ದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಹಸೀನಾ, ಶಸೀನಾ, ನೌಶಾದ್ (ಪೈವಳಿಕೆ ಮಂಡಲ ಕಾಂಗ್ರೆಸ್ ಕಾರ್ಯದರ್ಶಿ), ನೌಫಲ್, ರೆಹಾನಾ, ರಂಸೀನ, ಶಂಸೀನ, ರಿಶಾನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ.ಎಸ್., ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಮೋಹನ ರೈ …

ನಾಗರಿಕರಿಗೆ ಕಿರಿಕಿರಿ ರಾತ್ರಿ 10ರ ಬಳಿಕ ಧ್ವನಿವರ್ದಕ ಬಳಕೆ ವಿರುದ್ಧ ಪೊಲೀಸರಿಂದ ಕ್ರಮಕ್ಕೆ ಚಾಲನೆ

ಮಂಜೇಶ್ವರ: ಸಮಾರಂಭ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ರಾತ್ರಿ 10ಗಂಟೆಯ ಬಳಿಕ ಧ್ವನಿವರ್ದಕ ಬಳಸಿದ್ದಲ್ಲಿ ಕ್ರಮಕೈಗೊಳ್ಳಲು ಪೊಲೀಸರು üತೀರ್ಮಾನಿಸಿದ್ದಾರೆ. ಈ ಹಿಂದೆಯೇ ಈ ಆದೇಶವಿದ್ದರೂ ಯಾರೂ ಪಾಲಿಸು ತ್ತಿರಲಿಲ್ಲ. ಆದರೆ ಅಪರಿಮಿತ ಶಬ್ದದಿಂದ ಕಿರಿ ಕಿರಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ದೂರು ವ್ಯಾಪಕಗೊಂಡಿರುವುದರಿAದ ಪೊಲೀಸ್ ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ರಾತ್ರಿ 10ಗಂಟೆಯ ಬಳಿಕ ಧ್ವನಿವರ್ದಕ ಬಳಸಿದ್ದಲ್ಲಿ ಅದನ್ನು ವಶಪಡಿಸಿ ಅವರ ವಿರುದ್ದ ಕ್ರಮಕೈಗೊಳ್ಳಲು ಎಲ್ಲಾ ಠಾಣೆಗಳಿಗೆ ಆದೇಶ ನೀಡಲಾಗಿದೆ. ಇದರಂತೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಕ್ರಮಕ್ಕೆ ಮುಂದಾಗಿದ್ದು, …

ವಿ.ಡಿ. ಸತೀಶನ್ ನೇತೃತ್ವದ ನವಯುಗ ಯಾತ್ರೆಗೆ ಕುಂಬಳಯಿಂದ ನಾಳೆ ಚಾಲನೆ

ಕಾಸರಗೋಡು: ಕೇರಳವನ್ನು ಮರುಗಳಿಸಿ ಎಂಬ ಸಂದೇಶದೊಂದಿಗೆ ಯುಡಿಎಫ್ ನೇತೃತ್ವದಲ್ಲಿ ವಿರೋಧಪಕ್ಷ ನಾಯಕ ವಿ.ಡಿ.ಸತೀಶನ್ ನಾಯಕತ್ವದಲ್ಲಿ ನಡೆಯುವ ನವಯುಗ ಯಾತ್ರೆಗೆ  ನಾಳೆ ಸಂಜೆ 4 ಗಂಟೆಗೆ ಕುಂಬಳೆ ಪೇಟೆಯಿಂದ ಚಾಲನೆ ದೊರಕಲಿದೆ. ಈ ಯಾತ್ರೆಯನ್ನು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಕೆ.ಸಿ. ವೇಣುಗೋಪಾಲ್ ಉದ್ಘಾಟಿಸುವರು. ಯುಡಿಎಫ್‌ನ ಎಲ್ಲಾ ಘಟಕ ಪಕ್ಷಗಳ ನೇತಾರರು ಇದರಲ್ಲಿ ಭಾಗವಹಿಸುವರೆಂದು ಈ ಪ್ರಯುಕ್ತ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಯುಡಿಎಫ್ ಜಿಲ್ಲಾ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಸಂಚಾಲಕ ಗೋವಿಂದನ್ ನಾಯರ್ ಮೊದಲಾದವರು …

ಟೋಲ್ ಬೂತ್ ಹೋರಾಟಕ್ಕೆ ಸಂದ ಜಯ: ಯೂತ್ ಲೀಗ್‌ನಿಂದ ನಗರದಲ್ಲಿ ಮೆರವಣಿಗೆ

ಕಾಸರಗೋಡು: ಆರಿಕ್ಕಾಡಿಯ ಟೋಲ್ ಬೂತ್ ನಿಲುಗಡೆಗೊಳಿಸು ವುದಕ್ಕೆ ಬೇಕಾಗಿ ಹೋರಾಟ ನಡೆಸಿದ ಶಾಸಕ ಎಕೆಎಂ ಅಶ್ರಫ್, ಮುಷ್ಕರ ಸಮಿತಿಗೆ ಬೆಂಬಲ ಸೂಚಿಸಿ ಮುಸ್ಲಿಂ ಯೂತ್ ಲೀಗ್ ಕಾಸರಗೋಡು ನಗರಸಭಾ ಸಮಿತಿಯ ನೇತೃತ್ವದಲ್ಲಿ ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ಮುಸ್ಲಿಂ ಯೂತ್ ಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಹೀರ್ ಆಸಿಫ್, ನಗರಸಭಾ ಅಧ್ಯಕ್ಷ ಮುಸಾಮಿಲ್ ಫಿರ್ದೋಸ್‌ನಗರ್, ಪ್ರಧಾನ ಕಾರ್ಯದರ್ಶಿ ಅನಸ್ ಕಂಡತ್ತಿಲ್, ಕೋಶಾಧಿಕಾರಿ ಸಫ್ವಾನ್ ಅಣಂಗೂರು, ಕಾರ್ಯದರ್ಶಿ ತಾಜು, ಎಂಎಸ್‌ಎಫ್ ಜಿಲ್ಲಾ ಕಾರ್ಯದರ್ಶಿ ನಾಫಿ …

ಇಲಿ ವಿಷಬಿದ್ದ ಲೋಟದಲ್ಲಿ ನೀರು ಕುಡಿದ ಗೃಹಿಣಿ ದಾರುಣ ಸಾವು

ಹೊಸದುರ್ಗ: ಇಲಿಯನ್ನು ಕೊಲ್ಲಲು ವಿಷ ಇರಿಸುವ ಮದ್ಯೆ ಅಚಾತುರ್ಯದಿಂದ ವಿಷ ಬಿದ್ದ ಲೋಟೆಯಲ್ಲಿ ನೀರು ಕುಡಿದ ಗೃಹಿಣಿ ದಾರುಣವಾಗಿ ಮೃತಪಟ್ಟಿದ್ದಾರೆ. ರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪನತ್ತಡಿ, ಕೋಳಿಚ್ಚಾಲ್ ಮೊಟ್ಟಂಕೊಚ್ಚಿ ನಿವಾಸಿ ಬಿ.ಪಿ. ಶೋಭನ (53) ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜನವರಿ ೨೮ರಂದು ರಾತ್ರಿ ೯.೩೦ರ ವೇಳೆ ಇಲಿಯನ್ನು ಕೊಲ್ಲಲೆಂದು ವಿಷ ಇರಿಸಿದ್ದರು. ಈ ಮಧ್ಯೆ ಅಲ್ಪ ವಿಷ ಅಲ್ಲಿದ್ದ ಲೋಟೆಯೊಳಗ್ಗೆ ಬಿದ್ದಿತ್ತೆನ್ನಲಾಗಿದೆ. ಈ ವಿಷಯ ತಿಳಿಯದೆ ಶೋಭನಾ ಅದೇ ಗ್ಲಾಸ್‌ನಲ್ಲಿ ನೀರು ಸೇವಿಸಿರುವುದಾಗಿ …

ರಾ. ಹೆದ್ದಾರಿ ಕುಂಬಳೆಯಲ್ಲಿ ಟೋಲ್ ಬೂತ್ ರದ್ದು: ಬಿಜೆಪಿ, ಕ್ರಿಯಾ ಸಮಿತಿಯಿಂದ ಹರ್ಷ ಮೆರವಣಿಗೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಆರಂಭಿಸಲಾ ಗಿದ್ದ ಟೋಲ್ ಬೂತ್‌ನ ಚಟುವಟಿಕೆ ಯನ್ನು ಕೇಂದ್ರ ಸರಕಾರ ನಿಲುಗಡೆಗೊಳಿ ಸಿದೆ. ಈ ಬಗ್ಗೆ ಕೇಂದ್ರ ಸರಕಾರದ ಮಾಹಿತಿ ಲಭಿಸಿರುವು ದಾಗಿ ಬಿಜೆಪಿ ನೇತಾರರಾದ ಎಂ.ಎಲ್. ಅಶ್ವಿನಿ ಹಾಗೂ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಟೋಲ್ ಪ್ಲಾಜಾದ ವಿರುದ್ಧ ವ್ಯಾಪಕ ಪ್ರತಿಭಟನೆ ಹುಟ್ಟಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ನಿರಂತರ ಮಧ್ಯಪ್ರವೇಶಿಸಿ, ಸಂಬಂಧ ಪಟ್ಟವರಿಗೆಲ್ಲಾ ಹಲವು ಬಾರಿ ಮನವಿ ಸಲ್ಲಿಸಿ ಟೋಲ್ ಸಂಗ್ರಹ ನಿಲುಗಡೆ ಗೊಳಿಸಬೇಕೆಂದು ಒತ್ತಾಯಿಸಿತ್ತು. ಜಿಲ್ಲಾ ಸಮಿತಿಯ ಮನವಿಗೆ …

23.4 ಲೀಟರ್ ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ:  ಕರ್ನಾಟಕ ನಿರ್ಮಿತ ವಿದೇಶ ಮದ್ಯ ಕೈವಶವಿರಿಸಿಕೊಂಡಿದ್ದ ಓರ್ವನನ್ನು ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಮಂಗಲ್ಪಾಡಿ ಅಡ್ಕ ಭಗವತಿ ನಗರ ನಿವಾಸಿ ಹರೀಶ್ ಎ. (36) ಎಂಬಾತನನ್ನು ಕುಂಬಳೆ ಅಬಕಾರಿ ರೇಂಜ್ ಪ್ರಿವೆಂಟಿವ್ ಆಫೀಸರ್ ಜಿಜಿನ್ ಎಂ.ವಿ. ನೇತೃತ್ವದ ತಂಡ ಬಂಧಿಸಿದೆ. ಬಂಧಿತನ ಕೈಯಿಂದ 23.4 ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಅಡ್ಕ ಅಂಗನವಾಡಿ ಸಮೀಪದಿಂದ 180 ಮಿಲ್ಲಿಯ 130 ಟೆಟ್ರಾಪ್ಯಾಕೆಟ್ ಮದ್ಯ ಸಹಿತ ಈತನನ್ನು ಬಂಧಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್‌ಗಳಾದ …

ಪೆರಿಯ ಬಳಿ ಚಿರತೆಯನ್ನು ಹೋಲುವ ಪ್ರಾಣಿ ಪತ್ತೆ

ಕಾಸರಗೋಡು : ಪೆರಿಯ ಬಳಿ ಯ ಆಯಂಬಾರ ಉರುಳಂಕೋಡಿ ಎಂಬಲ್ಲಿ ಚಿರತೆಯನ್ನು ಹೋಲುವ ಪ್ರಾಣಿ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ನಿನ್ನೆ ಸಂಜೆ ೫.೩೦ರ ವೇಳೆ ಉರುಳಂಕೋಡಿಯ ಕಂಗಿನ ತೋಟದಲ್ಲಿ ವನ್ಯಜೀವಿ ಪ್ರತ್ಯಕ್ಷಗೊಂಡಿದೆ.  ಈ ವೇಳೆ ಅಲ್ಲಿದ್ದ ತೋಟದ ಮಾಲಕ ಆ ಪ್ರಾಣಿಯ ದೃಶ್ಯವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಪ್ರಾಣಿ  ಯಾವುದೆಂದು ಖಚಿತಪಡಿಸಲು ವೀಡಿಯೋವನ್ನು ಅರಣ್ಯಇಲಾಖೆ ಅಧಿಕಾರಿಗಳಿಗೆ ಕಳುಹಿಸಿಕೊಡ ಲಾಗಿದೆ. ಅಡಿಕೆ ತೋಟ ಸಮೀಪದ ತೋಡಿನಿಂದ ಹತ್ತಿ ಬಂದ ಪ್ರಾಣಿ ತೋಟದ ಬದಿಯಲ್ಲಾಗಿ ನಡೆದು ಹೋಗಿದೆ.  ಇದೇ ವೇಳೆ  …

ಕೊರಿಯರ್ ಲವ್ ಗೇಮ್  ವಿರೋಧಿಸಿದ ಹೆತ್ತವರು: ಸಹೋದರಿಯರು  ಆತ್ಮಹತ್ಯೆ

ಘಾಸಿಯಾಬಾದ್: ಆನ್‌ಲೈನ್ ಮೂಲಕದ ಕೊರಿಯರ್ ಲವ್‌ಗೇಮ್ ವೀಕ್ಷಿಸುವುದನ್ನು ಹೆತ್ತವರು ವಿರೋಧಿಸಿ ದಾಗ ಮನನೊಂದು ಮೂವರು ಸಹೋದರಿಯರು 9 ಅಂತಸ್ತಿನ ಅಪಾರ್ಟ್ ಮೆಂಟ್‌ನಿಂದ ಕೆಳಕ್ಕೆ ಧುಮುಕಿ ಆತ್ಮಹತ್ಯೆ ಗೈದ ಘಟನೆ ಇಂದು ಮುಂಜಾನೆ ನಡೆದಿದೆ. ಉತ್ತರ ಪ್ರದೇಶದ ಘಾಸಿಯಾ ಬಾದ್‌ನ ಅಪಾರ್ಟ್‌ಮೆಂಟೊಂದರಲ್ಲಿ ವಾಸಿಸುತ್ತಿರುವ  ಫಖಿ (12), ಪ್ರಾಚಿ (14), ವಿಶಿಕ (19) ಎಂಬವರು ಆತ್ಮಹತ್ಯೆಗೈದ ಸಹೋದರಿಯರು. ಇವರು ಪ್ರತಿದಿನ ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ಕೊರಿಯರ್ ಲವ್ ಗೇಮ್ ವೀಕ್ಷಿಸುತ್ತಿದ್ದರು. ಅದನ್ನು ಗಮನಿಸಿದ ಮನೆಯವರು  ಆಕ್ಷೇಪ ವ್ಯಕ್ತಪಡಿಸಿದಾಗ   ಆ ಮೂವರು …

ತಂದೆಯ ಇರಿತಕ್ಕೆ ಬಲಿಯಾದ ಪುತ್ರಿ, ಸಂಬಂಧಿಕನ ಮೃತದೇಹ ನೂರಾರು ಮಂದಿಯ ಅಂತಿಮ ನಮನದ ಬಳಿಕ ಅಂತ್ಯಸಂಸ್ಕಾರ

ಮಂಜೇಶ್ವರ: ತೂಮಿನಾಡಿನಲ್ಲಿ ತಂದೆಯ ಇರಿತಕ್ಕೆ ಬಲಿಯಾದ ಪುತ್ರಿ ಹಾಗೂ ಸಂಬಂಧಿಕನ ಮೃತದೇಹಗಳನ್ನು ನಿನ್ನೆ ನೂರಾರು ಮಂದಿಯ ಅಂತಿಮ ನಮನದ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು. ತೂಮಿನಾಡು ಹಿಲ್‌ಟಾಪ್ ನಗರದ ಶೇಕುಂಞಿ 63) ಹಾಗೂ ಇವರ ಪತ್ನಿಯ ಸಹೋದರಿಯ ಪುತ್ರಿ ಮರಿಯಂ ಜುಮೈಲ (18) ಎಂಬಿವರ ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ  ಹಿಲ್‌ಟಾಪ್ ನಗರದ ಮನೆಗೆ ತಲುಪಿಸುವಾಗ ನಾಡಿನ ವಿವಿಧೆಡೆಗಳಿಂದ ಸಂಬಂಧಿಕರ ಸಹಿತ ನೂರಾರು ಮಂದಿ ಅಲ್ಲಿ ಸೇರಿದ್ದು ಪ್ರತಿಯೊಬ್ಬರ ಮುಖದಲ್ಲೂ ದುಃಖ ಉಮ್ಮಳಿಸುತ್ತಿತ್ತು.  …