ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಡಂಗುರ ಶೋಭಾಯಾತ್ರೆ ನಾಳೆ

ಮೊಗ್ರಾಲ್: ೬೪ನೇ ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಡಂಗುರ ಶೋಭಾಯಾತ್ರೆ ನಾಳೆ ಸಂಜೆ ೪ ಗಂಟೆಗೆ ಕುಂಬಳೆಯಿಂದ ಆರಂಭಗೊಳ್ಳಲಿದೆ. ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಮಾಪ್ತಿಗೊಳ್ಳಲಿದೆ. ಕಲೋತ್ಸವವನ್ನು ಗ್ರೀನ್ ಪ್ರೊಟೋಕಾಲ್ ಪಾಲಿಸಿ ನಡೆಸಲು ಸಮಿತಿ ಕಾರ್ಯಾಚರಣೆ ನಡೆಸುತ್ತಿದೆ. ಇದರಂಗವಾಗಿ ತೆಂಗಿನ ಮಡಲು ಹೆಣೆಯುವ ಸ್ಪರ್ಧೆ, ಗ್ರೀನ್ ವಾಲೆಂಟಿಯರ್‌ಗಳಿಗೆ ತರಗತಿಗಳನ್ನು ಹಮ್ಮಿಕೊಳ್ಳಲಾಯಿತು. ಶುಚಿತ್ವ ಮಿಷನ್ ಜಿಲ್ಲಾ ಕೋ-ಆರ್ಡಿನೇಟರ್ ಪಿ. ಜಯನ್, ಪ್ರೋಗ್ರಾಂ ಆಫೀಸರ್ ರಂಜಿತ್ ಕೆ.ವಿ, ಶುಚಿತ್ವ ಮಿಷನ್ ರಿಸೋರ್ಸ್ ಪರ್ಸನ್ ರಂಜಿನಿ ಕಾರಡ್ಕ ತರಗತಿಗೆ …

ಅಶ್ರಫ್ ಪಚ್ಲಂಪಾರೆ ಮನೆಗೆ ಆಕ್ರಮಣ : ಆರೋಪಿಗಳ ಬಂಧನಕ್ಕೆ ಕ್ರಿಯಾ ಸಮಿತಿ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ 2ನೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅಶ್ರಫ್ ಪಚ್ಲಂಪಾರೆಯವರ ಮನೆಗೆ ಆಕ್ರಮಣಗೈದು ನಾಲ್ಕು ತಿಂಗಳ ಗರ್ಭಿಣಿಯಾದ ಮಹಿಳೆಯನ್ನು, ಮಕ್ಕಳನ್ನು ಆಕ್ರಮಿಸಿ ದಾಂಧಲೆ ನಡೆಸಿದ ಅಕ್ರಮಿಗಳನ್ನು ರಕ್ಷಿಸಲಿರುವ ಪೊಲೀಸರ ಕ್ರಮವನ್ನು ಉಪೇಕ್ಷಿಸಬೇಕೆಂದು ಕ್ರಿಯಾ ಸಮಿತಿ ಆಗ್ರಹಿಸಿದೆ. ಎರಡುಮೂರು ಕಿಲೋಮೀಟರ್ ದೂರದಿಂದ ಬಂದ ಅಕ್ರಮಿಗಳು ಗೇಟ್‌ನ ಹೊರಗಿನಿಂದ ಮನೆಗೆ ಪಟಾಕಿಗಳನ್ನೆಸೆದು ಬಳಿಕ ಒಳಗೆ ನುಗ್ಗಿ ಆಕ್ರಮಿಸಿದ್ದು, ಗಾಯಗೊಂಡ ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಹಿಳೆಯರ ಮಾನಹಾನಿ ಹಾಗೂ ಮನೆಗೆ ನಷ್ಟ ಉಂಟುಮಾಡಿದ ಅಕ್ರಮಿಗಳ ವಿರುದ್ಧ ಕೌಂಟರ್ …

ಅಡ್ಕ ಶ್ರೀ ಭಗವತೀ ಮಹಿಳಾ ಸಂಘದ ವತಿಯಿಂದ ಹೂವಿನ ಪೂಜೆ, ಸನ್ಮಾನ

ಉಪ್ಪಳ: ಅಡ್ಕ ಶ್ರೀ ಭಗವತೀ ಮಹಿಳಾ ಸಂಘದ ವತಿಯಿಂದ ವಿಶೇಷ ಹೂವಿನ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ಪಿ.ಕೃಷ್ಣ ಅಡ್ಕ ಅಧ್ಯಕ್ಷತೆ ವಹಿಸಿದರು.ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಾಯಕ ಪ್ರಾಧ್ಯಾಪಿಕೆ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಧಾರ್ಮಿಕ ಭಾಷಣ ಮಾಡಿದರು. ತೀಯಾ ಸಮಾಜ ಬೆಂ ಗಳೂರು ಪ್ರಧಾನ ಕಾರ್ಯದರ್ಶಿ ಸದಾನಂದ.ಕೆ, ಮಮತಾ ಶಶಿಧರ ಶೆಟ್ಟಿ ಗ್ರಾಮಚಾವಡಿ ಶಿರಿಯ, ಮಹಿಳಾ ಸಂಘದ ಅಧ್ಯಕ್ಷೆ ಅಮಿತಾ ಆನಂದ …

ಮುಗು ಕ್ಷೇತ್ರದಲ್ಲಿ ಗರ್ಭಗುಡಿಗೆ ದಾರಂದ ಮುಹೂರ್ತ

ಮುಂಡಿತ್ತಡ್ಕ: ಶೇಣಿ- ಮುಗು ಉಭಯ ಗ್ರಾಮಗಳ ಪ್ರಸಿದ್ಧ ಕ್ಷೇತ್ರವಾದ ಮುಗು ಶ್ರೀ ಸುಬ್ರಾಯದೇವ ದೇವಸ್ಥಾನದಲ್ಲಿ ಶಿಲಾಮಯ ಗರ್ಭಗುಡಿಯ ದಾರಂದ ಮುಹೂರ್ತ ಕಿರುಷಷ್ಠಿಯಾದ ನಿನ್ನೆ ಜರಗಿತು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಗರ್ಭಗುಡಿ ನಿರ್ಮಾಣ ನಡೆಯುತ್ತಿದೆ. ಈ ವರ್ಷದ ಕಿರು ಷಷ್ಠಿ ಮಹೋತ್ಸವದಂಗವಾಗಿ ದೇವರಿಗೆ ನವಕಾಭಿಷೇಕ, ಪರಿವಾರ ದೈವಗಳಿಗೆ ಹಾಗೂ ನಾಗ ತಂಬಿಲ ಸೇವೆ, ಬಲಿವಾಡು ಕೂಟ ಜರಗಿತು.

ನಾಯ್ಕಾಪುನಲ್ಲಿ ಟೈಲರಿಂಗ್ ತರಬೇತಿ ಸಮಾರೋಪ

ಕುಂಬಳೆ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ವನಿತ ಮಹಿಳಾ ಸಮಾಜ ನಾಯ್ಕಾಪು ಕುಂಬಳÉ ಇವರ ಜಂಟಿ ಆಶ್ರಯದಲ್ಲಿ 3 ತಿಂಗಳ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.  ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ್ ಮಾತನಾಡಿ, ತರಬೇತಿ ಪಡೆದ ಮಹಿಳೆಯರು  ಬ್ಯಾಂಕ್ ಸಾಲ ಸೌಲಭ್ಯ ಪಡೆದು ತಮ್ಮದೇ ವ್ಯಾಪಾರ ಮಾಡಿ ಬೇರೆ ಮಹಿಳೆಯರಿಗೆ ಮಾದರಿಯಾಗಬೇಕು ಎಂದರು. ಭಾರತೀಯ ವಿಕಾಸ ಟ್ರಸ್ಟ್ …

ಹೊಯ್ಗೆ ದಂಧೆಕೋರರ ಪತ್ತೆಗೆ ಮಫ್ತಿ ವೇಷದಲ್ಲಿ ಪೊಲೀಸ್ ಕಾರ್ಯಾಚರಣೆ: 2 ದೋಣಿ ವಶ;  ಗಾಳ ಹಾಕುತ್ತಿದ್ದ ಪೊಲೀಸರನ್ನು ಕಂಡು ತಂಡ ಪರಾರಿ

ಕುಂಬಳೆ: ಹೊಳೆಯಿಂದ ಹೊಯ್ಗೆ ಅನಧಿಕೃತವಾಗಿ ಸಂಗ್ರಹಿಸಿ ಸಾಗಾಟ ನಡೆಸಲು ದಂಧೆಕೋರರು ನಡೆಸುವ ತಂತ್ರಗಾರಿಕೆಯನ್ನು ಕುಂಬಳೆ ಪೊಲೀಸರು ಉಪಾಯ ದಿಂದ ಪತ್ತೆಹಚ್ಚಿದ್ದಾರೆ. ಈ ಮೂಲಕ ಮೊಗ್ರಾಲ್ ಅಳಿವೆ ಬಾಗಿಲಿನಲ್ಲಿ ಹೊಯ್ಗೆ ಸಂಗ್ರಹಿಸಲು ಬಳಸುತ್ತಿದ್ದ ೨ ದೋಣಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರನ್ನು ಕಂಡೊಡನೆ ಹೊಯ್ಗೆ ಸಂಗ್ರಹಗಾರರು ಓಡಿ ಪರಾರಿಯಾಗಿದ್ದಾರೆ. ಈ ಹಿಂದೆ ದೋಣಿ ಮೂಲಕ ಸಂಗ್ರಹಿಸಿದ ಹೊಯ್ಗೆಯನ್ನು  ದಡಕ್ಕೆ ತಲುಪಿಸಿ ಅಲ್ಲಿಂದ ಟಿಪ್ಪರ್ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ಪೊಲೀಸರು ಅದರ ವಿರುದ್ಧ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸಂಗ್ರಹಿಸಿದ ಹೊಯ್ಗೆಯನ್ನು …

ನಿವೃತ್ತ ತಹಶೀಲ್ದಾರ್, ಗುರುಸ್ವಾಮಿ ಶಂಕರ ದೇವಾಂಗ ನಿಧನ

ಕಾಸರಗೋಡು: ಅಣಂಗೂರು ಶಾರದಾನಗರ ನಿವಾಸಿಯೂ ನಿವೃತ್ತ ತಹಶೀಲ್ದಾರ್ ಬಿ. ಶಂಕರ ದೇವಾಂಗ (86) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. 51 ವರ್ಷಗಳ ಕಾಲ ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ ಇವರು ಗುರುಸ್ವಾಮಿಯಾಗಿ ದ್ದರು. ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಗುರುಸ್ವಾಮಿ ಯಾಗಿದ್ದರು. ಕಾಸರಗೋಡು ಶ್ರೀ ಅಯ್ಯಪ್ಪ ಸೇವಾ ಸಂಘದ ಸದಸ್ಯ, ಕುಂಬಳೆ ನಾಯ್ಕಾಪು ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಮಾಜಿ ಅಧ್ಯಕ್ಷರೂ ಆಗಿದ್ದರು. ಮೃತರು ಪತ್ನಿ ಪಾರ್ವತಿ, ಮಕ್ಕಳಾದ ಪ್ರಶಾಂತ್ (ವ್ಯಾಪಾರಿ), ಪವಿತ್ರನ್ (ವ್ಯಾಪಾರಿ), …

ಯುವಕನಿಗೆ ಬೆದರಿಕೆಯೊಡ್ಡಿ ಹಣ ಲಪಟಾಯಿಸಿದ ಪ್ರಕರಣ: ನಾಲ್ವರ ಸೆರೆ

ಕಾಸರಗೋಡು: ಆಲಂಪಾಡಿ ಮಿಹ್ರಾಜ್ ಹೌಸ್‌ನ ಪಿ.ಎಂ. ಖಮರುದ್ದೀನ್ ಎಂಬವರನ್ನು  ಬೆದರಿಸಿ 1,01,000 ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಉಳಿಯತ್ತಡ್ಕ ನೇಶನಲ್ ನಗರದ ಸುಲೈಮಾನ್ ಆದಿಲ್ (18), ಮಂಜತ್ತಡ್ಕದ ಅಹಮ್ಮದ್ ಕಬೀರ್ (26), ಉಳಿಯತ್ತಡ್ಕದ ರೈಯೀಸ್ ಅಹಮ್ಮದ್ (19) ಮತ್ತು ಪಳ್ಳಂ ನಿವಾಸಿಯಾಗಿರುವ 17ರ  ಅಪ್ರಾಪ್ತ ಬಾಲಕ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಈ ತಿಂಗಳ 24ರಂದು ರಾತ್ರಿ 9.30ಕ್ಕೆ ನಗರದ ನೆಲ್ಲಿಕುಂಜೆಯಲ್ಲಿ ದೂರುಗಾರ ಖಮರುದ್ದೀನ್‌ರನ್ನು ತಡೆದು ನಿಲ್ಲಿಸಿ ಬೆದರಿಕೆಯೊಡ್ಡಿ ಅವರ  ಪರ್ಸ್‌ನ್ನು …

ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರ ಕಾರ್ಪೋರೇಶನ್  ಮೇಯರ್ ಆಗಿ ವಿ.ವಿ. ರಾಜೇಶ್

ತಿರುವನಂತಪುರ: ಕೇರಳ ಮಾತ್ರ ವಲ್ಲದೆ ಭಾರತದ ಗಮನ ಸೆಳೆಯಲ್ಪಟ್ಟ ತಿರುವನಂತಪುರ ಕಾರ್ಪೋರೇಶನ್ ಮೇಯರ್ ಆಗಿ ಬಿಜೆಪಿಯ ವಿ.ವಿ. ರಾಜೇಶ್ ಆಯ್ಕೆಗೊಂಡಿದ್ದಾರೆ.  ತಿರುವನಂತಪುರ ಕಾರ್ಪೋರೇ ಶನ್‌ನ ಕಣ್ಣಾಮೂಲ ವಾರ್ಡ್‌ನಿಂದ ಪಕ್ಷೇತರರಾಗಿ ಗೆದ್ದು ಬಂದ ಪಾಟೂರು ರಾಧಾಕೃಷ್ಣನ್ ಕೂಡಾ ಬಿಜೆಪಿಗೆ ಬೆಂಬಲ ಘೋಷಿಸಿದ್ದು ಆ ಮೂಲಕ ತಿರುವನಂತಪುರ  ಕಾರ್ಪೋರೇಶನ್‌ನ ಒಟ್ಟು ೩ ಸದಸ್ಯರ ಬಲದಲ್ಲಿ ಬಿಜೆಪಿ  51 ಸದಸ್ಯರ ಬೆಂಬಲದೊಂದಿಗೆ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಬಿಜೆಪಿ 50 ವಾರ್ಡ್‌ಗಳಲ್ಲಿ ಏಕಾಂಗಿಯಾಗಿ ಗೆದ್ದಿದೆ.  ಕೇರಳದ ಕಾರ್ಪೋರೇಶನ್ ಒಂದರಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ  …

ಬೆಳ್ಳೂರು: ಕೆ. ಗೀತಾ, ನರೇಂದ್ರ ಗೌಡ ಮರಳಿ ಬಿಜೆಪಿಗೆ ಸೇರ್ಪಡೆ

ಬೆಳ್ಳೂರು: ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಕೆ. ಗೀತಾ ಮತ್ತು ನರೇಂದ್ರ ಗೌಡ ಅವರ ಮೇಲಿನ ಸಂಘಟನಾ ಕ್ರಮವನ್ನು  ಪಕ್ಷ ಹಿಂತೆಗೆದುಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ತಿಳಿಸಿದ್ದಾರೆ. ಪಂಚಾಯತ್ ಚುನಾವಣೆಯಲ್ಲಿ ಕೆ. ಗೀತಾ ಬೆಳ್ಳೂರು ಪಂಚಾಯತ್‌ನ 5ನೇ ವಾರ್ಡ್‌ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಚುನಾವಣಾ ಸಮಯದಲ್ಲಿ ಇವರು ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗೀತಾರನ್ನು ಹಾಗೂ ನರೇಂದ್ರ ಗೌಡ ಅವರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು. ಬಳಿಕ ಪಕ್ಷದ …