ಚವರ್ಕಾಡ್‌ನಲ್ಲಿ ಅಂಚೆ ಕಚೇರಿ ಬೇಡಿಕೆ ಇಲಾಖೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಚವರ್ಕಾಡ್: ಚವರ್ಕಾಡ್‌ನಲ್ಲಿ ಹೊಸ ಅಂಚೆ ಕಚೇರಿ ಸ್ಥಾಪನೆಗೆ ಸಂಬAಧಿಸಿದAತೆ ಅಂಚೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚವರ್ಕಾಡ್ ಪ್ರದೇಶದ ಜನಸಂಖ್ಯೆ, ಸಾರ್ವಜನಿಕರ ಅಗತ್ಯತೆ, ಸುತ್ತಮುತ್ತಲಿನ ಗ್ರಾಮಗಳಿಗೆ ಲಭ್ಯವಿರುವ ಅಂಚೆ ಸೇವೆಗಳು ಹಾಗೂ ಸೂಕ್ತ ಕಟ್ಟಡದ ವ್ಯವಸ್ಥೆ ಸೇರಿದಂತೆ ವಿವಿಧ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಪ್ರದೇಶದ ಜನರು ಎದುರಿಸುತ್ತಿರುವ ಅಂಚೆ ಸೇವೆಗಳ ತೊಂದರೆಗಳನ್ನು ಸ್ಥಳೀಯ ನಿವಾಸಿಗಳು ಮತ್ತು ಮುಖಂಡರು ವಿವರಿಸಿ, ಶೀಘ್ರವೇ ಚವರ್ಕಾಡ್‌ನಲ್ಲಿ ಅಂಚೆ ಕಚೇರಿ ಆರಂಭಿಸುವAತೆ ಮನವಿ ಮಾಡಿದರು.ಚವರ್ಕಾಡ್ ಮತ್ತು ಸುತ್ತಮುತ್ತ ಲಿನ …

ಖಾಸಗಿ ಬಸ್ ವಲಯ ನಷ್ಟದಲ್ಲಿ: ತುರ್ತು ಕ್ರಮ ಸರಕಾರ  ಕೈಗೊಳ್ಳಬೇಕೆಂದು ಬಸ್ ಆಪರೇಟರ್ಸ್ ಫೆಡರೇಶನ್ ಬೇಡಿಕೆ

ಕಾಸರಗೋಡು: ಪ್ರಿಯದರ್ಶಿನಿ ಯೋಜನೆಯಿಂದಾಗಿ ರಾಜ್ಯದ ಖಾಸಗಿ ಬಸ್ ವಲಯ ತೀವ್ರ ಸಂದಿಗ್ಧತೆಯನ್ನು ಎದುರಿಸುತ್ತಿದೆ ಎಂದು, ಬಸ್ ವಲಯವನ್ನು ಸಂರಕ್ಷಿಸಲು ಸರಕಾರ ತುರ್ತು ಮಧ್ಯಪ್ರವೇಶ ಮಾಡಬೇಕೆಂದು  ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಆಗ್ರಹಿಸಿದೆ. ತೀವ್ರ ರೀತಿಯಲ್ಲಿ ಇಂಧನ ಬೆಲೆ ಹೆಚ್ಚಳ, ಬಿಡಿ ಭಾಗಗಳ ಬೆಲೆಯೇರಿಕೆ, ವಿಮಾ ಮೊತ್ತದಲ್ಲಿ ಉಂಟಾಗಿರುವ ಹೆಚ್ಚಳ ಎಂಬಿವುಗಳಿಂ ದಾಗಿ ಬಸ್ ವಲಯವನ್ನು ಮುಂದಕ್ಕೆ ಕೊಂಡೊಯ್ಯಲು ಸಂಕಷ್ಟಪಡುವ ಬಸ್ ಮಾಲಕರಿಗೆ ಪ್ರಿಯದರ್ಶಿನಿ ಯೋಜನೆ ಇಮ್ಮಡಿ ಹೊಡೆತವಾಗಿ ಬದಲಾಗಿದೆ ಎಂದು ಅವರು ದೂರಿದ್ದಾರೆ. …

ಲಕ್ಷ್ಮಿ ನಿಧನ

ಬದಿಯಡ್ಕ: ಪಳ್ಳತ್ತಡ್ಕ ಸಮೀಪದ ಚೊಟ್ಟತ್ತಡ್ಕ ನಿವಾಸಿ ಬಟ್ಯ ನಾಯ್ಕ್‌ರ ಪತ್ನಿ ಲಕ್ಷ್ಮಿ (68) ನಿಧನ ಹೊಂದಿ ದರು. ಮೃತರು ಪತಿ, ಮಕ್ಕಳಾದ ಚಂದ್ರ, ಗೀತ, ಜಯಶ್ರೀ, ಶಶಿಕಲ, ಅಳಿಯಂ ದಿರಾದ ಸುಬ್ರಾಯ, ಅಪ್ಪಯ ನಾಯ್ಕ, ಸೊಸೆ ಸೂಜಾತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಕೃಷ್ಣ ಈ ಹಿಂದೆ  ನಿಧನ  ಹೊಂದಿದ್ದಾರೆ.

ಡಾಕ್ಟರ್‌ಗಳಿಲ್ಲ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಂಕಷ್ಟ, ಪ್ರತಿಭಟನೆಗೆ ಸಿದ್ಧತೆ

ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶೋಚನೀಯಾವಸ್ಥೆ, ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಬೇಕೆಂದು ಆಗ್ರಹಿಸಿ ಸಮಾಜಸೇವಕ ಮೆಹಮೂದ್ ಕೈಕಂಬ ಆಸ್ಪತ್ರೆ ಮುಂಭಾಗದಲ್ಲಿ ಜನಪರ ಸಹಕಾರದೊಂದಿಗೆ ಅನಿರ್ದಿಷ್ಟ ಕಾಲ ಉಪವಾಸ ಮುಷ್ಕರ ನಡೆಸುವ ಸಿದ್ಧತೆಯಲ್ಲಿದ್ದಾರೆ. ದಿನಂಪ್ರತಿ ನೂರಾರು ರೋಗಿಗಳು ಚಿಕಿತ್ಸೆಗಾಗಿ ತಲುಪುವ ಈ ಆಸ್ಪತ್ರೆಯಲ್ಲಿ ಡಾಕ್ಟರ್ ಗಳು ಇಲ್ಲದ ಕಾರಣ ಸಮಸ್ಯೆಯಾಗುತ್ತಿದೆ. ಮಂಗಲ್ಪಾಡಿ ತಾಲೂಕಿನ ವಿವಿಧ ಭಾಗಗಳಿಂದ ಹಾಗೂ ಒಳ ಪ್ರದೇಶಗಳಿಂದ ತಲುಪುವ ಬಡ ರೋಗಿಗಳು ಗಂಟೆಗಳ ಕಾಲ ಕಾದು ನಿಂತರೂ ಚಿಕಿತ್ಸೆ ಲಭಿಸದೆ ಹಿಂತಿರುಗಬೇಕಾಗುತ್ತಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸಂದಣಿ …

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿ ಬಂಧನ

ಕಾಸರಗೋಡು:   ಯುವಮೋರ್ಛಾ ದ.ಕ. ಜಿಲ್ಲಾ ಕಾರ್ಯಕಾರಿ ಸದಸ್ಯ     ಪ್ರವೀಣ್ ನೆಟ್ಟಾರು ಅವರನ್ನು   ಕೊಲೆಗೈದ ಪ್ರಕರಣ ದಲ್ಲಿ ತಲೆಮರೆಸಿಕೊಂಡ ಆರೋಪಿ ಉಮ್ಮರ್ ಫಾರೂಕ್ ಎಂಬಾತ ಸೆರೆಗೀಡಾಗಿದ್ದಾನೆ. ಎನ್‌ಐಎ ಈತನನ್ನು ಕೊಚ್ಚಿಯಿಂದ ಬಂಧಿಸಿದೆ.  ಈತನ ಕುರಿತು ಮಾಹಿತಿ ನೀಡುವವರಿಗೆ ಎನ್‌ಐಎ  4 ಲಕ್ಷ ರೂಪಾಯಿ  ಪಾರಿತೋಷಕ ಘೋಷಿ ಸಿತ್ತು.  2022 ಜುಲೈ 26ರಂದು ಪ್ರವೀಣ್ ನೆಟ್ಟಾರುರನ್ನು ತಂಡವೊಂ ದು ಮಾರಕಾಯುಧ ಗಳಿಂದ ಆಕ್ರ ಮಿಸಿ ಕೊಲೆಗೈದಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಹಲವು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಮಾದಕದ್ರವ್ಯ ವ್ಯವಹಾರಕ್ಕೆ ನಕಲಿ ದಾಖಲುಪತ್ರ ತಯಾರಿ: ಕಾಸರಗೋಡು ನಿವಾಸಿ ಸಹಿತ ಇಬ್ಬರ ಬಂಧನ; ನಕಲಿ ದಾಖಲುಪತ್ರಗಳನ್ನು ತಯಾರಿಸುತ್ತಿರುವುದು ಬೆಂಗಳೂರಿನಲ್ಲಿ

ಕಾಸರಗೋಡು: ಮಾದಕದ್ರವ್ಯ ಮಾರಾಟ ಹಾಗೂ ಇತರ ವಂಚನೆಗಳಿಗಾಗಿ ಬ್ಯಾಂಕ್ ಖಾತೆಗಳನ್ನು ತೆರೆಯಲು ನಕಲಿ ದಾಖಲುಪತ್ರಗಳನ್ನು ತಯಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಸೇರಿ ಇಬ್ಬರನ್ನು ತಲಶ್ಶೇರಿ ಎಎಸ್‌ಪಿ ಡಾ. ಎಂ ನಂದಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಕಾಸರಗೋಡು ಮೊಗ್ರಾಲ್ ಕೂಟ್ಟಾಯಂ ವಳಪ್ಪಿಲ್ ಅಬ್ದುಲ್ ರಹ್ಮಾನ್ (36) ಮತ್ತು ಎರ್ನಾಕುಳಂ ಪಳ್ಳುತುರುತ್ತಿಯ ಕೆ.ಎಂ. ರಿಶಾದ್ (41) ಬಂಧಿತ ಆರೋಪಿಗ ಳಾಗಿದ್ದಾರೆ. ಬೆಂಗಳೂರಿನಿಂದ ಈ  ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ನೂರರಷ್ಟು ಆಧಾರ್ ಕಾರ್ಡ್‌ಗಳು,  ಪಾನ್‌ಕಾರ್ಡ್‌ಗಳು, ಹಲವು ನಕಲಿ ಸರ್ಟಿಫಿಕೇಟ್‌ಗಳು, …

ಹೃದಯಾಘಾತದಿಂದ ಅರ್ಚಕ ನಿಧನ

ಮುಳ್ಳೇರಿಯ: ಎದೆನೋವು ಕಾಣಿಸಿಕೊಂಡು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ  ಅರ್ಚಕ ಹೃದಯಾಘಾತದಿಂದ ನಿಧನಹೊಂದಿದರು.  ಮೂಲತಃ ಅನಂತಪುರ ನಿವಾಸಿಯೂ, ಪ್ರಸ್ತುತ ಕುಂಟಾರು  ಬಳಿಯ ಮಣಿಯೂರಿ ನಲ್ಲಿ ವಾಸಿಸುತ್ತಿದ್ದ ಮುರಳೀಧರ ಪೆರ್ಲಾಯ  (46) ಮೃತಪಟ್ಟ ವ್ಯಕ್ತಿ.  ಇವರಿಗೆ ಮೊನ್ನೆ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದ ರಿಂದ ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆನಿನ್ನೆ ಹೃದಯಾಘಾತ ವುಂಟಾಗಿ ದೆಯೆಂದು ತಿಳಿದುಬಂದಿದೆ.  ಮುರಳೀಧರ ಪೆರ್ಲಾಯ  ಅವರು ಕಳೆದ ೨೫ ವರ್ಷಗಳಿಂದ ಕುಂಟಾರು ದೇವಸ್ಥಾನ ಹಾಗೂ ತಾಂತ್ರಿಕ ಸದನದಲ್ಲಿ  ವೈದಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. …

ಸಹಪಾಠಿಗಳೊಂದಿಗೆ ಆಟವಾಡುತ್ತಿದ್ದ ಮಗುವಿನ ಕಣ್ಣಿಗೆ ಪೆನ್ಸಿಲ್ ಚುಚ್ಚಿ ಗಂಭೀರ

ಕುಂಬಳೆ:  ಶಾಲೆಯಲ್ಲಿ ಸಹ ಪಾಠಿಗಳೊಂದಿಗೆ ಆಟವಾಡುತ್ತಿದ್ದ ಮಗುವಿನ ಕಣ್ಣಿಗೆ ಪೆನ್ಸಿಲ್ ಚುಚ್ಚಿ ಗಂಭೀರ ಗಾಯಗೊಂಡ ಘಟನೆ ನಡೆ ದಿದೆ. ಈಗಾಗಲೇ ಎರಡು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆದರೆ ದೃಷ್ಟಿ ಪೂರ್ವಸ್ಥಿತಿಗೆ ತಲುಪದ ಹಿನ್ನೆಲೆ ಯಲ್ಲಿ ತಜ್ಞ ಚಿಕಿತ್ಸೆಗಾಗಿ ಮಗುವನ್ನು ಕೊಯಂಬತ್ತೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಉಪ್ಪಳದ ಎಎಲ್‌ಪಿ ಶಾಲೆಯೊಂದರ  ಎಲ್‌ಕೆಜಿ ವಿದ್ಯಾರ್ಥಿಯೂ ಉಪ್ಪಳ ಕೈಕಂಬ ನಿವಾಸಿಯಾದ  ಮೂರರ ಹರೆಯದ ಮಗುವಿನ ಕಣ್ಣಿಗೆ ಗಾಯವಾಗಿದೆ.   ಜುಲೈ ೨೯ರಂದು ಮಗುವಿನ  ಕಣ್ಣಿಗೆ ಪೆನ್ಸಿಲ್ ಚುಚ್ಚಿ ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಮಕ್ಕಳು ಆಟವಾಡುತ್ತಿದ್ದಂತೆ  ಈ ಮಗುವಿನ …

ಸಂಚರಿಸುತ್ತಿದ್ದ ಆಟೋ ರಿಕ್ಷಾ ಚಾಲಕನ ದೇಹಕ್ಕೆ ಹತ್ತಿದ ಹಾವು

ಕುಂಬಳೆ: ಸಂಚರಿಸುತ್ತಿದ್ದ ಆಟೋ ರಿಕ್ಷಾದೊಳಗೆ ಹಾವೊಂದು ಚಾಲಕನ ದೇಹಕ್ಕೆ ಹತ್ತಿದ್ದು ಕೂಡಲೇ ಚಾಲಕ ರಿಕ್ಷಾವನ್ನು ನಿಲ್ಲಿಸಿ  ಕೆಳಗಿಳಿದುದರಿಂದ ಅಪಾಯದಿಂದ ಪಾರಾಗಿದ್ದಾರೆ. ಅನಂತರ ಹಾವು ಹಿಡಿಯುವವರು ತಲುಪಿ ಹಾವನ್ನು   ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟಿದ್ದಾರೆ. ನಿನ್ನೆ ಬೆಳಿಗ್ಗೆ  ಚೇವಾರ್‌ನಲ್ಲಿ ಈ ಘಟನೆ ನಡೆದಿದೆ. ಪೈವಳಿಕೆ ಚೇವಾರಿ ನಲ್ಲಿ ಆಟೋ ರಿಕ್ಷಾ ಬಾಡಿಗೆ ನಡೆಸುವ ಪಿಯುಸ್ ಡಿ’ಸೋಜಾ ನಿನ್ನೆ ಬೆಳಿಗ್ಗೆ ಇಬ್ಬರು ಪ್ರಯಾಣಿಕರನ್ನು ಸುಬ್ಬಯ್ಯಕಟ್ಟೆಗೆ ಕರೆದೊಯ್ಯುತ್ತಿದ್ದರು. ಆಟೋ ರಿಕ್ಷಾ ಸಂಚರಿಸುತ್ತಿದ್ದಂತೆ ಪಿಯುಸ್ ಡಿ’ಸೋಜಾರ ಕೈಗೆ  ಯಾವುದೋ ಜೀವಿ ಹತ್ತಿದ ಅನುಭವವುಂ ಟಾಯಿತು. …

ವಿದ್ಯುತ್ ಬೆಳಕಿಲ್ಲದ ಮನೆಗೆ ಕೊನೆಗೂ ವಿದ್ಯುತ್ ಸಂಪರ್ಕ: ಕುಟುಂಬದ ಸಂತಸದಲ್ಲಿ ಭಾಗಿಯಾದ ಬಿಜೆಪಿ ನೇತಾರರು, ಸ್ಥಳೀಯರು

ಕುಂಬಳೆ: ವಿದ್ಯುತ್ ದೀಪಗಳು ತಮ್ಮ ಮನೆಯಲ್ಲೂ ಬೆಳಗತೊಡಗುವು ದರೊಂದಿಗೆ ಬಡ ಕುಟುಂಬವೊಂದು ಹಲವು ವರ್ಷಗಳಿಂದ ಬಯಸುತ್ತಿದ್ದ ಆಗ್ರಹ ಕೊನೆಗೂ ಈಡೇರಿದೆ.  ಕುಂಬಳೆ ಕುಂಟಂಗೇರಡ್ಕ ಶಾಂತಿನ ಗರದ ಎಸ್‌ಸಿ ಉನ್ನತಿಯ ಅಭಿಮಾನ್ ಎಂಬವರ ಮನೆಗೆ ಕೊನೆಗೂ ವಿದ್ಯುತ್ ಸಂಪರ್ಕ ಲಭಿಸಿದ್ದು, ಇದು ಇವರ ಕುಟುಂಬಕ್ಕೆ  ಅತೀ ಸಂತೋಷದ ವಿಷಯವಾಗಿದೆ. ಅಭಿಮಾನ್‌ರ ಮಕ್ಕಳೂ ವಿದ್ಯಾರ್ಥಿಗಳಾದ ಕುಮಾರ, ಅಜಯ್ ಕುಮಾರ್, ಪಂಚಮಿ ಎಂಬಿವರು ದೀಪದ ಬೆಳಕಿನಲ್ಲೇ  ಓದಬೇಕಾದ ಸ್ಥಿತಿ ಇದುವರೆಗೆ ಉಂಟಾಗಿತ್ತು. ಮಾತ್ರವಲ್ಲದೆ ಮನೆಯಲ್ಲೂ ಬೆಳಕಿಗಾಗಿ ಚಿಮಿಣಿ ದೀಪ ಅಥವಾ ಮೇಣದ …