ಬಂದ್ಯೋಡಿನಲ್ಲಿ ಅಸ್ವಸ್ಥನಾಗಿ ಕಂಡುಬಂದ ವ್ಯಕ್ತಿಯನ್ನು ದೈಗೋಳಿ ಆಶ್ರಮಕ್ಕೆ ಸೇರಿಸಿದ ಸೇವಾಭಾರತಿ

ಉಪ್ಪಳ: ಹಲವು ದಿನಗಳಿಂದ ಬಂದ್ಯೋಡು ಪರಿಸರದಲ್ಲಿ ಅಲೆದಾಡುತಿದ್ದ ಮಾನಸಿಕ ಅಸ್ವಸ್ಥಗೊಂಡ ವ್ಯಕ್ತಿಯೋರ್ವರನ್ನು ನಿನ್ನೆ ಬೆಳಿಗ್ಗೆ ಮಂಗಲ್ಪಾಡಿ ಸೇವಾ ಭಾರತಿ ಕಾರ್ಯಕರ್ತರು ಅವರಿಗೆ ಆಹಾರ, ಪಾನೀಯವನ್ನು ನೀಡಿ ಕುಂಬಳೆ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿ ಬಳಿಕ ದೈಗೋಳಿಯ ಸಾಯಿನಿಕೇತನ ಆಶ್ರಮಕ್ಕೆ ಸೇರಿಸಿದ್ದಾರೆ. ಈ ಹಿಂದೆ ಕೂಡಾ ಅನೇಕ ಬಾರಿ ಸೇವಾಭಾರತಿ ಕಾರ್ಯಕರ್ತರು ಹಲವಾರು ಮಂದಿಯನ್ನು ಆಶ್ರಮಕ್ಕೆ ದಾಖಲಿಸಿ ಸೇವಾಕಾರ್ಯಗಳನ್ನು ನಡೆಸಿದ್ದಾರೆ. ಸಾಯಿನಿಕೇತನ ಆಶ್ರಮ ಇಂತಹ ನೂರಾರು ಮಂದಿಗೆ ಆಶ್ರಯ ನೀಡುತ್ತಾ ಬಂದಿದೆ.

ಬಜೆಟ್‌ನಲ್ಲಿ ಕಡಿತಗೊಳಿಸಿದ ಪರಿಶಿಷ್ಟ ಪಂಗಡಕ್ಕಿರುವ ಮೊತ್ತ ಪುನರ್‌ಸ್ಥಾಪಿಸಬೇಕು- ಎಕೆಎಸ್

ಪೆರ್ಲ: ಯುಡಿಎಫ್ ಸರಕಾರದ ಪ್ರಥಮ ಬಜೆಟ್‌ನಲ್ಲಿ ಆದಿವಾಸಿ ಪರಿಶಿಷ್ಟ ಪಂಗಡ ವಲಯಗಳಿಗಿರುವ ಮೊತ್ತ ಕಡಿತಗೊಳಿಸಿರುವುದನ್ನು ಪುನರ್ ಪರಿಶೀ ಲಿಸಬೇಕೆಂದು ಪರಿಶಿಷ್ಟ ಪಂಗಡ ಸೌಲಭ್ಯಗಳಿರುವ ಮೊತ್ತ ಸೂಕ್ತ ಸಮಯ ದಲ್ಲಿ ಮಂಜೂರು ಮಾಡಬೇಕೆಂದು ಆದಿವಾಸಿ ಕ್ಷೇಮ ಸಮಿತಿ ಕುಂಬಳೆ ಏರಿಯಾ ಸಮ್ಮೇಳನ ಆಗ್ರಹಿಸಿದೆ. ಪೆರ್ಲ ವ್ಯಾಪಾರಿಭವನದಲ್ಲಿ ನಡೆದ ಸಮ್ಮೇ ಳನವನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಅಶೋಕನ್ ಕುನ್ನೂಚಿ ಉದ್ಘಾಟಿಸಿದರು. ಏರಿಯಾ ಅಧ್ಯಕ್ಷ ಚೆನಿಯಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಿದರು. ಅಶೋಕ ಸಿ. ಹುತಾತ್ಮ ಠರಾವು, ವಿಜಯಕುಮಾರ್ ಸಂತಾಪ ಠರಾವು ಮಂಡಿಸಿದರು. …

ಕೆ.ಕೆ. ಅಬ್ದುಲ್ ಗಫಾರ್ ನಿಧನ

ಕಾಸರಗೋಡು: ಕಲ್ಲಿಕೋಟೆ ಆರ್‌ಇಸಿಯಲ್ಲಿ ತುರ್ತು ಪರಿಸ್ಥಿತಿ ವೇಳೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಧ್ಯಾಪಕರಾಗಿದ್ದ ಚೌಕಿ ಕೆ.ಕೆ.ಪುರ ನಿವಾಸಿ ಪ್ರೊ. ಕೆ.ಕೆ. ಅಬ್ದುಲ್ ಗಫಾರ್ (89) ನಿಧನ ಹೊಂದಿದರು. ತುರ್ತುಪರಿಸ್ಥಿತಿ ಕಾಲದಲ್ಲಿ ಈ ಕಾಲೇಜಿನ ವಿದ್ಯಾರ್ಥಿ ಹಾಗೂ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಕಸ್ಟಡಿಗೆ ತೆಗೆದು ಕೊಲೆಗೈದು ನಿಗೂಢವಾಗಿ ಸಂಸ್ಕರಿಸಿರುವುದಾಗಿ ಈಗಲೂ ಆರೋಪಿಸಲಾಗುತ್ತಿರುವ ರಾಜನ್ ಎಂಬ ವಿದ್ಯಾರ್ಥಿಯ ಅಧ್ಯಾಪಕನೂ ಹಾಗೂ ಆ ಪ್ರಕರಣದ ಸಾಕ್ಷಿಯಾಗಿದ್ದರು. ಭಟ್ಕಳ್ ಇಂಜಿನಿಯ ರಿಂಗ್ ಕಾಲೇಜಿನ ಪ್ರಾಂಶುಪಾಲರಾ ಗಿಯೂ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪತ್ನಿ ಉಮ್ಮುಲ್ …

ಬಾಲಕೃಷ್ಣನ್ ನಿಧನ

ಮುಳ್ಳೇರಿಯ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಕಾರಡ್ಕ ಚಂದನಡ್ಕ ನಿವಾಸಿ ಆರ್.ಟಿ. ಬಾಲನ್ ಎಂದೇ ಕರೆಸಿಕೊಂಡಿದ್ದ ಬಾಲಕೃಷ್ಣನ್ (72) ನಿಧನ ಹೊಂದಿದರು. ಅಗ್ನಿಶಾಮಕದಳ ದಲ್ಲಿ ಪಾರ್ಟ್‌ಟೈಮ್ ನೌಕರನಾಗಿದ್ದರು. ಕಾರಡ್ಕ ಪರಿಸರದ ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯರಾಗಿದ್ದ ಇವರು ಕಾಡಗಂ ಫ್ರೆಂಡ್ಸ್ ಕಂಬೈನ್ಸ್ ಎಂಬ ನಾಟಕ ತಂಡವನ್ನು ರೂಪೀಕರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೃತರು ತಾಯಿ ಕುಂಬ, ಪತ್ನಿ ಸಿ.ಶಾಂತ, ಮಕ್ಕ ಳಾದ ಪ್ರಶಾಂತ್, ಪ್ರಸೀತ, ಸಹೋ ದರರಾದ ಅಂಬುಕ್ಕನ್ ಮುಳ್ಳೇರಿಯ, ಕಿಟ್ಟನ್ ಕೂಡ್ಲು, ನಾರಾಯಣನ್ ಪುದಿಯವಳಪ್, ಗೋಪಾಲನ್ ಕೋಡೋತ್, ಕುಂಞಿರಾಮನ್ …

ಬಿಜೆಪಿಯ ಮೂವರು ಶಾಸಕರು ವಿಧಾನಸಭೆಯಲ್ಲಿ ತ್ರಿಮೂರ್ತಿಗಳಂತೆ -ಸಿ.ಕೆ.ಪದ್ಮನಾಭನ್

ಮುಳ್ಳೇರಿಯ: ಕೇರಳ ವಿಧಾನಸಭೆ ಯಲ್ಲಿ ಬಿಜೆಪಿಯ ಮೂವರು ಶಾಸಕರು ಬ್ರಹ್ಮ,ವಿಷ್ಣು, ಮಹೇಶ್ವರರಂತೆ ಕಾರ್ಯಾ ಚರಿಸುತ್ತಿ ದ್ದಾರೆಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಅಭಿಪ್ರಾಯಪಟ್ಟಿದ್ದಾರೆ. ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಬದಿಯಡ್ಕ ಮಂಡಲ ಪ್ರಶಿಕ್ಷಣ್ ಮಹಾ ಅಭಿಯಾನ್ (ತರಬೇತಿ ಕಾರ್ಯಕ್ರಮ) ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜನಸಂಘದ ಕಾಲದಿಂದಲೇ ಕಾರ್ಯ ಕರ್ತರಿಗಾಗಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಅದು ಈಗಲೂ ಮುಂದುವರಿಯುತ್ತಿದೆಯೆಂದು ಅವರು ತಿಳಿಸಿದರು.  ಇಂದಿರಾಗಾಂಧಿ ಯವರ ಹತ್ಯೆಯ ಬಳಿಕ ನಡೆದ ಲೋಕಸಭಾ …

ಬಿಎಂಎಸ್ ಕಾಸರಗೋಡು ನಗರಸಭಾ ಸಮಿತಿ ಸಮ್ಮೇಳನ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ್ ಕಾಸರಗೋಡು ನಗರಸಭಾ ಸಮಿತಿ ಸಮ್ಮೇಳನ ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಿದ್ದು, ಬಿಎಂಎಸ್ ವಲಯ ಅಧ್ಯಕ್ಷ ಬಾಲಕೃಷ್ಣ ನೆಲ್ಲಿಕುಂಜೆ ಉದ್ಘಾಟಿಸಿದರು. ಕೆ. ಕಮಲಾಕ್ಷ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್ ಪ್ರಧಾನ ಭಾಷಣ ಮಾಡಿದರು.  ಮಧೂರು ಪಂ. ಸದಸ್ಯ ವಸಂತ, ನಗರಸಭಾ ಕೌನ್ಸಿಲರ್‌ಗಳಾದ ಕೆ.ಆರ್. ಹರೀಶ್, ಕೆ. ರೇಷ್ಮ ಶುಭ ಕೋರಿದರು. ಬಿಎಂಎಸ್ ನಗರಸಭಾ ಜೊತೆ ಕಾರ್ಯದರ್ಶಿ ಕೆ. ಸೌಮ್ಯ ವರದಿ ಮಂಡಿಸಿದರು.  ಕೆ. ಗುರುದಾಸ್ ಸಂಘಟನಾ ಚರ್ಚೆ …

ಜಲ್‌ಜೀವಜಲ್‌ಜೀವನ್: ಕೋಟ್ಯಂತರ ರೂ. ವೆಚ್ಚ ಮಾಡಿದರೂ ಕುಡಿಯುವ ನೀರಿಲ್ಲ; ಯೋಜನೆಯನ್ನು ಗುತ್ತಿಗೆದಾರರಿಗೆ ಸಮರ್ಪಿಸಿದ ಅಧಿಕಾರಿಗಳು

ಕಾಸರಗೋಡು: ಸಂಪೂರ್ಣ ಗ್ರಾಮೀಣ ಮನೆಗಳಿಗೂ ಕುಡಿಯುವ ನೀರು ತಲುಪಿಸಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರ ಸರಕಾರ ಜ್ಯಾರಿಗೊಳಿಸಿದ ಜಲ್ ಜೀವನ್ ಯೋಜನೆ ರಾಜ್ಯದಲ್ಲಿ ಅಧಿಕಾರಿ ಗಳು ಗುತ್ತಿಗೆದಾರರಿಗೆ ಸಲ್ಲಿಸಿ ಕೈತೊಳೆದರು. ಕೋಟ್ಯಂತರ ರೂ. ವೆಚ್ಚ  ಮಾಡಿದ ಯೋಜನೆಯಲ್ಲಿ ನೀರು ಲಭಿಸುವುದಿಲ್ಲ. ಆದರೆ ಊರಿಡೀ ರಸ್ತೆಗಳನ್ನು ಅಗೆದು ಪೈಪ್ ಸ್ಥಾಪಿಸಲಾಗಿದೆ. ಶೌಚಾಲಯ ಗಳಿಗೂ ಅತ್ಯಾಧುನಿಕ ಟ್ಯಾಪ್‌ಗಳನ್ನು ಸ್ಥಾಪಿಸಲಾಗಿದೆ. ಆದರೆ ಪೈಪ್‌ನ ಮೂಲಕ ಹರಿದು ಟ್ಯಾಪ್‌ಗೆ ತಲುಪಲಿ ರುವ ನೀರಿನ ಮೂಲ ಮಾತ್ರ ಪತ್ತೆಹಚ್ಚಲು ಅಧಿಕಾರಿಗಳಿಗೆ ಸಮಯ ವಿಲ್ಲ ದಾಗಿದೆ ಎಂದು …

ಅಂಗಡಿ ಜಗಲಿಯಲ್ಲಿ ಮಲಗಿದ್ದ ಹಸುವನ್ನು ಕಳವುಗೈದು ಸಾಗಿಸಿದ ಇಬ್ಬರು ಆರೋಪಿಗಳ ಬಂಧನ

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಪ್ಪಾಡಿಯಲ್ಲಿ ಅಂಗಡಿ ಜಗಲಿಯಲ್ಲಿ ಮಲಗಿದ್ದ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಿಸಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಹಸು ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಲಾಗಿದೆ.  ಇತರ ಮೂವರು ಆರೋಪಿಗಳಿಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮಂಗಳೂರು ಜೋಕಟ್ಟೆ ಬಜ್ಪೆಯ ರಾಸಿಕ್ (21),ಉಳ್ಳಾಲ ಅಳಿಕೆಯ ಮುಹಮ್ಮದ್ ಇಬ್ರಾಸ್ (26) ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 16ರಂದು  ಮುಂಜಾನೆ 1.30ರ ವೇಳೆ ಕನ್ಯಪ್ಪಾಡಿ ರಹ್ಮತ್ ಮಂಜಿಲ್‌ನ ಕೆ.ಎಂ. ಮುಹಮ್ಮದ್‌ರ ಮನೆಯ ಮುಂಭಾಗದಲ್ಲಿರುವ ಅಂಗಡಿಯ  ಜಗಲಿಯಲ್ಲಿ ಮಲಗಿದ್ದ ಹಸುವನ್ನು …

ಕಾರಿನಲ್ಲಿ ಸಾಗಿಸುತ್ತಿದ್ದ 30 ಕಿಲೋ ಗಾಂಜಾ ಸಹಿತ ಅಂತಾರಾಜ್ಯ ಆರೋಪಿ ಲಾಲಾಕಬೀರ್, ಸಹಚರನ ಬಂಧನ

ಕುಂಬಳೆ: ಆಪರೇಶನ್ ತೂಫಾನ್ ಯೋಜನೆಯಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಧೀನದಲ್ಲಿರುವ ಡಾನ್ಸಾಫ್ ಟೀಂ ಹಾಗೂ  ಕುಂಬಳೆ  ಪೊಲೀಸರು ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ  ಅಂತಾರಾಜ್ಯ ಆರೋಪಿ ಲಾಲಾ ಕಬೀರ್ ಹಾಗೂ ಆತನ ಸಹಚರರನ್ನು ಬಂಧಿಸಲಾಗಿದೆ. ಇವರು ಸಂಚರಿಸುತ್ತಿದ್ದ ಹೋಂಡಾ ಸಿಟಿ ಕಾರಿನಿಂದ ೩೧ ಕಿಲೋ ಗಾಂಜಾ ವಶಪಡಿಸಲಾಗಿದೆ. ಕಾಞಂಗಾಡ್ ನಿವಾಸಿಯಾದ ಲಾಲಾ ಕಬೀರ್‌ನೊಂದಿಗೆ ಸಹಚರನಾದ ಮುಹಮ್ಮದ್ ನಿಹಾಲ್ ಎಂಬಾತನೂ ಸೆರೆಗೀಡಾಗಿದ್ದಾನೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಿಕ್ಕಾಡಿ ಟೋಲ್ ಪ್ಲಾಸಾ ಸಮೀಪದಿಂದ …

ಜುಲೈ 6ರಂದು ಖಾಸಗಿ ಬಸ್ ಮುಷ್ಕರ

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಿಯದರ್ಶಿನಿ ಯೋಜನೆ ಪ್ರಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿರುವು ದರಿಂದ ಖಾಸಗಿ ಬಸ್‌ಗಳಿಗೆ ಉಂಟಾಗುತ್ತಿರುವ ನಷ್ಟ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಸರಕಾರ ಪರಿಹಾರ ಕಂಡುಕೊಳ್ಳದೇ ಇರುವುದನ್ನು ಪ್ರತಿಭಟಿಸಿ ಜುಲೈ.೬ರಂದು ಖಾಸಗಿ ಬಸ್‌ಗಳ ಸೇವೆಯನ್ನು ಮೊಟಕುಗೊಳಿಸಿ ಸೂಚನಾ ಮುಷ್ಕರ ಹಾಗೂ ಮಾರ್ಚ್ ನಡೆಸಲಾಗು ವುದೆಂದು ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಸಂಯುಕ್ತ ಟ್ರೇಡ್ ಯೂನಿಯನ್ ಪದಾಧಿ ಕಾರಿಗಳು ತಿಳಿಸಿದ್ದಾರೆ. ಖಾಸಗಿ ಬಸ್‌ಗಳ ದೈನಂದಿನ ಗಳಿಕೆಯಲ್ಲಿ ಕನಿಷ್ಠ 3000 …