ಕಟ್ಟಡಕ್ಕೆ ನಂಬ್ರ ಲಭಿಸಲು ನಕಲಿ ದಾಖಲೆ ತಯಾರಿ: ಓರ್ವನ ವಿರುದ್ಧ ಕೇಸು

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನಿಂದ ಕಟ್ಟಡ ನಂಬ್ರ ಲಭಿಸಲು ವರ್ಗಾವಣೆಗೊಂಡ ಪಂಚಾಯತ್ ಕಾರ್ಯದರ್ಶಿಯ ಹೆಸರಲ್ಲಿ ನಕಲಿ ಪ್ರಮಾಣಪತ್ರ ಹಾಗೂ ನಕಲಿ ಹಣ ಪಾವತಿಸಿದ ರಶೀದಿ ತಯಾರಿಸಿದ ಆರೋಪದಂತೆ  ಓರ್ವನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬಳೆ ಪಂಚಾಯತ್ ಮಾಜಿ ಕಾರ್ಯದರ್ಶಿ ಕೋಟ್ಟಯಂ ನಿವಾಸಿಯಾದ ಸಿದ್ದಾರ್ಥನ್ ನೀಡಿದ ದೂರಿನಂತೆ ಕೊಡ್ಯಮ್ಮೆ ಪೂಕಟ್ಟೆಯ ಫಾರೂಕ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ ಜನವರಿ 14ರಂದು ಈ ಘಟನೆ ನಡೆದಿದೆ. ಫಾರೂಕ್‌ನ ಮಾಲಕತ್ವದಲ್ಲಿರುವ ಉಳ್ವಾರ್ ಎಂಬಲ್ಲಿನ ಕಟ್ಟಡಕ್ಕೆ ನಂಬ್ರ ಲಭಿಸಲು  …

ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ನಿಧನ

ಪುತ್ತಿಗೆ: ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ, ಬಡಗಿಯಾಗಿದ್ದ ಪುತ್ತಿಗೆ ನಾಗೇಶ್ ಆಚಾರ್ಯ (65) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೆಲಸದ ಮಧ್ಯೆ ತಲೆಸುತ್ತಿ ಬಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರ್‌ಎಸ್‌ಎಸ್ ಪುತ್ತಿಗೆ ಶಾಖಾ ಮುಖ್ಯ ಶಿಕ್ಷಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತನಾಗಿದ್ದ ಇವರ ಓರ್ವ ಪುತ್ರ ಪ್ರವೀಣ್  ಈ ಹಿಂದೆ ನಿಧನ ಹೊಂದಿದ್ದಾರೆ. ಇನ್ನೋರ್ವ ಪುತ್ರ ಕಳೆದ ದೀಪಾವಳಿ ಸಂದರ್ಭದಲ್ಲಿ ದೀಪಾಲಂಕಾರ ಮಧ್ಯೆ ವಿದ್ಯುತ್ ಶಾಕ್ ತಗಲಿ ಮೃತಪಟ್ಟಿದ್ದರು. ಮೃತರು ಪತ್ನಿ ಹೇಮಲತ, ಪುತ್ರ ಕಿರಣ್ …

ತಾಯಿ, ಮಗಳ ಮನೆಗಳಿಗೆ ನುಗ್ಗಿದ ಕಳ್ಳರು: ಚಿನ್ನಾಭರಣ ಕಳವು

ಬದಿಯಡ್ಕ: ಒಂದೇ ಹಿತ್ತಿಲಿನಲ್ಲಿರುವ ತಾಯಿ ಹಾಗೂ ಮಗಳ ಮನೆಗಳಿಗೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿದ್ದಾರೆ.  ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಚರ್ಲಡ್ಕದಲ್ಲಿರುವ ಮನೆಗಳಿಂದ ಕಳವು ನಡೆದಿದೆ. ಚರ್ಲಡ್ಕದ ಮರಿಯಮ್ಮ ಹಾಗೂ ಅವರ ಪುತ್ರಿ ಆಯಿಶಾನ ಎಂಬಿವರ ಮನೆಗಳಿಗೆ ಕಳ್ಳರು ನುಗ್ಗಿದ್ದು ಒಟ್ಟು 7 ಪವನ್ ಚಿನ್ನಾಭರಣ ಕಳವಿಗೀಡಾಗಿ ರುವುದಾಗಿ ಸೂಚನೆಯಿದೆ. ಈ ಎರಡು ಮನೆಗಳಿಗೆ ಬೀಗ ಜಡಿದು ಕುಟುಂಬ ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ತೆರಳಿದ್ದರು. ನಿನ್ನೆ ಸಂಜೆ ಮರಳಿ ಬಂದಾಗಲೇ ಮನೆಗೆ ಕಳ್ಳರು ನುಗ್ಗಿದ …

ವ್ಯಕ್ತಿಪಲ್ಲಟ ನಡೆಸಿ ನಕಲಿ ದಾಖಲೆ ತಯಾರಿಸಿ ವಾಹನ ಮಾರಾಟ: ತಲೆಮರೆಸಿಕೊಂಡ ಆರೋಪಿ 19 ವರ್ಷಗಳ ಬಳಿಕ ಸೆರೆ

ಕಾಸರಗೋಡು: ವ್ಯಕ್ತಿ ಪಲ್ಲಟ ನಡೆಸಿ ನಕಲಿ ದಾಖಲೆ ತಯಾರಿಸಿ  ವಾಹನ ಮಾರಾಟಗೈದ ಪ್ರಕರಣದಲ್ಲಿ  ತಲೆಮರೆಸಿಕೊಂಡ ಆರೋಪಿ 16 ವರ್ಷಗಳ ಬಳಿಕ ಸೆರೆಗೀಡಾಗಿದ್ದಾನೆ.  ಕರ್ನಾಟಕದ ಮುಲ್ಕಿ ಹಳೆಯಂಗಡಿ ಚಂದ್ರಮೌಳೀಶ್ವರ ಕ್ಷೇತ್ರ ಸಮೀಪದ ಗಣೇಶ್ ಶೆಟ್ಟಿ (50) ಎಂಬಾತನನ್ನು ಕಣ್ಣೂರು, ಕಾಸರಗೋಡು ರೇಂಜ್ ಕ್ರೈಂ ಬ್ರಾಂಚ್ ಎಸ್ಪಿ ಕೆ.ವಿ. ವೇಣುಗೋಪಾಲ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ  ಕಾಸರಗೋಡು ಕ್ರೈಂಬ್ರಾಂಚ್ ಡಿವೈಎಸ್ಪಿ ಟಿ. ಮಧುಸೂದನನ್ ಬಂಧಿಸಿದ್ದಾರೆ. ೨೦೦೨ರಲ್ಲಿ  ಮಂಜೇಶ್ವರ ಪೊಲೀಸರು ಗಣೇಶ್ ಶೆಟ್ಟಿಯನ್ನು ಆರೋಪಿಯಾಗಿಸಿ   ಕೇಸು ದಾಖಲಿ ಸಿಕೊಂಡಿದ್ದರು. ಕ್ವಾಲಿಸ್ ವಾಹನವನ್ನು ನಕಲಿ …

ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಶ್ರೀ ಕೃಷ್ಣ ಜನ್ಮಾಷ್ಟಮಿ ಬಾಲದಿನಾಚರಣೆ ಸಮಿತಿ ಇದರ ಆಶ್ರಯದಲ್ಲಿ ಸೆಪ್ಟೆಂಬರ್ 4ರಂದು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರಗುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ವೇಣುಗೋಪಾಲ್ ಕೆ.ಎನ್. ಕೊರಕೋಡು ಇವರು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಮಾಜಿ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ಜಗದೀಶ್‌ರಿಗೆ ನೀಡುವ ಮೂಲಕ ಉದ್ಘಾಟಿಸಿದರು.ಕಾಸರಗೋಡು ಗೋಕುಲ ಜಿಲ್ಲಾ ರಕ್ಷಾಧಿಕಾರಿ ಜಯರಾಮ ಶೆಟ್ಟಿ ಕೌನ್ಸಿಲರ್ ಕೆ.ಎನ್. ರಾಮಕೃಷ್ಣ ಹೊಳ್ಳ, ವಿ.ಎಚ್.ಪಿ. ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಸಮಿತಿ ಕಾರ್ಯದರ್ಶಿ ರಾಜೇಂದ್ರ ಕುಂಟಾರು, ಗುಣಪಾಲ …

ನಾಯ್ಕಾಪು: ಬಿಎಂಎಸ್ ಕುಟುಂಬ ಸಂಗಮ

ಕುಂಬಳೆ: ಬಿ.ಎಂ.ಎಸ್ ಶಾಸ್ತಾ ಆಟೋ ಸ್ಟಾ ್ಯಂಡ್ ನಾಯ್ಕಾಪ್ ಇದರ ಚಾಲಕರ ಕುಟುಂಬ ಸಂಗಮ ಸಭೆ ನಾರಾಯಣ ಮಂಗಲ ಗಣೇಶ ಮಂದಿರದಲ್ಲಿ ಜರಗಿತು. ಯೂನಿಟ್ ಅಧ್ಯಕ್ಷ ಲೋಹಿತಾಕ್ಷ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ನಿರ್ಮಾಣ ಸಂಘದ ಜಿಲ್ಲಾ ಕೋಶಾಧಿಕಾರಿ ಐತ್ತಪ್ಪ ನಾರಾಯಣ ಮಂಗಲ ಉದ್ಘಾಟಿಸಿದರು. ಆಗಲಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಜಿ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸುನಿಲ್ ಕುಮಾರ್ ಸ್ವಾಗತಿಸಿ, ಪುರುಷೋತ್ತಮ .ವಂದಿಸಿದರು. ಭಾಸ್ಕರ ಎನ್. ನಿರೂಪಿಸಿದರು

ಪೆರುವೋಡಿಯಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ತಡೆ

ಬಾಯಾರು: ಭಾರೀ ಮಳೆಗೆ ಮುಳಿಗದ್ದೆ ಬಳ್ಳೂರು ರಸ್ತೆಯ ಪೆರ್ವೋಡಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಮುರಿದು ರಸ್ತೆಗೆ ಬಿದ್ದ ಘಟನೆ ನಿನ್ನೆ ಬೆಳಿಗ್ಗೆ ನಡೆದಿದೆ.ಇದರಿಂದ ಅಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬಳಿಕ ಪಂಚಾಯತ್ ಸದಸ್ಯ ರಾಮಕೃಷ್ಣ ಬಲ್ಲಾಳ್, ಅಶೋಕ, ಗಣೇಶ, ಶಕೀರ್, ಹರಿಪ್ರಸಾದ್, ಶೀನ ತಲುಪಿ ಮರವನ್ನು ತೆರವುಗೊಳಿಸಿದರು. ಬಳಿಕ ವಾಹನ ಸಂಚಾರ ಆರಂಭಿಸಿತು.

ಕನ್ನಡ ಪತ್ರಕರ್ತರ ಕುಟುಂಬ ಮಿಲನ ‘ಸ್ನೇಹತರಂಗ’ 16ರಂದು

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆ.ಯು.ಡಬ್ಲ್ಯೂ.ಜೆ.) ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ‘ಸ್ನೇಹ ತರಂಗ’ ಪತ್ರಕರ್ತರ ಕುಟುಂಬ ಮಿಲನ ಕಾರ್ಯಕ್ರಮ ಆ.೧೬ರಂದು ಬೆಳಗ್ಗೆ 9.30ರಿಂದ ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿಯ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಹಾಲ್‌ನಲ್ಲಿ ನಡೆಯಲಿದೆ.ಹಿರಿಯ ಪತ್ರಕರ್ತ, ಕನ್ನಡಪರ ಹೋರಾಟಗಾರ ಅಶೋಕ ಯಂಕಪ್ಪ ಚಂದರಗಿ ಬೆಳಗಾವಿ ಉದ್ಘಾಟಿಸುವರು. ಶಾಸಕ ಕಲ್ಲಟ್ರ ಮಾಹಿನ್ ಹಾಜಿ, ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಗಡಿನಾಡ …

ಓಣಂ: ಬೆಲೆ ಏರಿಕೆ ನಿಯಂತ್ರಿಸಲು ಸಾರ್ವಜನಿಕ ವಿತರಣಾ ಕೇಂದ್ರಗಳ ಮೂಲಕ 1.65 ಲಕ್ಷ ಮೆಟ್ರಿಕ್ ಟನ್ ಅಕ್ಕಿ ವಿತರಣೆ-ಸಚಿವ

ಕಾಸರಗೋಡು: ಓಣಂ ಹಬ್ಬದ  ವೇಳೆ ತೆರೆದ ಮಾರುಕಟ್ಟೆಗಳಲ್ಲಿ ಅಕ್ಕಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾರ್ವಜನಿಕ ವಿತರಣಾ ಕೇಂದ್ರಗಳ ಮೂಲಕ 1.65 ಲಕ್ಷ ಮೆಟ್ರಿಕ್ ಟನ್ ಅಕ್ಕಿ ವಿತರಿಸಲಾಗುವುದೆಂದು ರಾಜ್ಯ ಆಹಾರ-ಸಾರ್ವಜನಿಕ ಸರಬರಾಜು ಖಾತೆ ಸಚಿವ ಅನೂಪ್ ಜೇಕಬ್ ತಿಳಿಸಿದ್ದಾರೆ. ಗೋತ್ರ ವಿಭಾಗ ಉನ್ನತಿ ಯೋಜನೆಯಂತೆ ರೇಶನ್ ಸಾಮಗ್ರಿಗಳನ್ನು ಗೋತ್ರ ವಿಭಾಗದವರ ಮನೆಗಳಿಗೆ ನೇರವಾಗಿ ತಲುಪಿಸಲು ಆಂಭಿಸಲಾದ ‘ಸಂಚರಿಸುವ ರೇಶನ್‌ಅಂಗಡಿ’ ಇದರ ರಾಜ್ಯಮಟ್ಟದ ಉದ್ಘಾಟನೆಯನ್ನು ವೆಳ್ಳರಿಕುಂಡ್‌ನಲ್ಲಿ ನಿನ್ನೆ ನಿರ್ವಹಿಸಿ ಸಚಿವರು ಮಾತನಾಡುತ್ತಿದ್ದರು. ಆದ್ಯತಾ ರೇಶನ್ ಕಾರ್ಡ್‌ಗಳ ವಿತರಣೆಗೆ ರಾಜ್ಯ …

ಯುವಮೋರ್ಚಾ ಕಾರ್ಯಕರ್ತರಿಂದ ಕಲೆಕ್ಟ್ರೇಟ್ ಮಾರ್ಚ್:ಪಿಣರಾಯಿ ಸತೀಶನ್ ಸರ್ವೀಸ್ ಕಮಿಶನ್ ಆಗಿ ಪಿಎಸ್‌ಸಿ ಅಧಃಪತನ- ವರುಣ್ ಪ್ರಸಾದ್

ಕಾಸರಗೋಡು: ಉದ್ಯೋಗ ಅರಸುತ್ತಿರುವ ಯುವಕರನ್ನು, ಪಿಎಸ್‌ಸಿ ರ‍್ಯಾಂಕ್ ವಿಜೇತರನ್ನು ವಂಚಿಸುವ ವಿಷಯದಲ್ಲಿ ವಿ.ಡಿ. ಸತೀಶನ್ ಸರಕಾರ, ಪಿಣರಾಯಿ ಸರಕಾರದ ಹಾದಿಯಲ್ಲೇ ಸಾಗುತ್ತಿದೆ ಎಂದು ಪಿಎಸ್‌ಸಿ ಎಂದರೆ ಈಗ ‘ಪಿಣರಾಯಿ ಸತೀಶನ್ ಸರ್ವೀಸ್ ಕಮಿಶನ್’ ಆಗಿ ಬದಲಾಗಿದೆ ಎಂದು ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವರುಣ್ ಪ್ರಸಾದ್ ಆರೋಪಿಸಿದರು. ಪಿಎಸ್‌ಸಿ ಅವ್ಯವಹಾರ   ವಿರುದ್ಧ ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ನಡೆಸಿದ ಕಲೆಕ್ಟ್ರೇಟ್ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಹಾಗೂ ಪ್ರಸ್ತುತ ಯುವಜನಕ್ಷೇಮ ಸಚಿವರಾಗಿ …