ಸೋಂಕಾಲಿನ ಮನೆ ಅಂಗಳದಲ್ಲಿ ಸತ್ತು ಬಿದ್ದ ನಾಯಿ ಮರಿ: ಸ್ಥಳೀಯರಿಗೆ ದುರ್ನಾತ ಸಮಸ್ಯೆ

ಉಪ್ಪಳ: ನೂತನ ಮನೆಯ ಅಂಗಳದಲ್ಲಿ ಬೀದಿ ನಾಯಿಯ ಐದು ಮರಿಗಳು ನಿಗೂಢವಾಗಿ ಸತ್ತು ಬಿದ್ದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುರ್ವಾಸನೆಯಿಂದ ಪರಿಸರ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಮಂಗಲ್ಪಾಡಿ ಪಂಚಾಯತ್‌ನ 20ನೇ ವಾರ್ಡ್ ಪ್ರತಾಪನಗರ ರಸ್ತೆಯ ಸೋಂಕಾಲಿನಲ್ಲಿ ಈ ಘಟನೆ ನಡೆದಿದೆ. ಬಾಯಾರು ನಿವಾಸಿ ಯೋರ್ವರು ನೂತನವಾಗಿ ನಿರ್ಮಿಸಿ ಕೆಲಸ ಪೂರ್ತಿಗೊಂಡ ಮನೆಯ ಅಂಗಳದ ಹಾಗೂ ಸಿಟ್‌ಔಟ್‌ನಲ್ಲಿ ಒಟ್ಟು ಐದು ನಾಯಿ ಮರಿಗಳು ಎರಡು ದಿನಗಳ ಹಿಂದೆ ಸತ್ತು ಹೋಗಿ ಕೊಳೆತ ಸ್ಥಿತಿಯಲ್ಲಿ ಸ್ಥಳೀಯರ ಗಮನಕ್ಕೆ ಬಂದಿದೆ. ಇದು …

ಕಾಸರಗೋಡು ನಗರದಲ್ಲಿ ಆರೋಗ್ಯ ಸಚಿವೆಯ ಪ್ರತಿಕೃತಿ ದಹಿಸಿ ಕೆಎಸ್‌ಯು ಪ್ರತಿಭಟನೆ

ಕಾಸರಗೋಡು: ನಿರಂತರ ಲೋಪಗಳು ಮಾತ್ರ ಸಂಭವಿಸುತ್ತಿರುವ ಆರೋಗ್ಯ ಇಲಾಖೆಯ ಆಡಳಿತ ಪರಾಜಯವನ್ನು ಮರೆಮಾಚಿ ಸುಳ್ಳು ಕತೆಗಳನ್ನು ಹಬ್ಬಿಸುತ್ತಿರುವ ಎಸ್‌ಎಫ್‌ಐ, ಡಿವೈಎಫ್‌ಐ ಕಾರ್ಯಕರ್ತರು ಕೇರಳವನ್ನು ಕಲಾಪಭೂಮಿಯನ್ನಾಗಿ ಮಾಡಲು ಸಚಿವೆ ವೀಣಾ ಜೋರ್ಜ್ ಯತ್ನಿಸುತ್ತಿರುವುದಾಗಿ ಕೆಎಸ್‌ಯು ಜಿಲ್ಲಾಧ್ಯಕ್ಷ ಜವಾದ್ ಪುತ್ತೂರು ಆರೋಪಿಸಿದರು. ಕಾಸರಗೋಡು ನಗರದಲ್ಲಿ ಕೆಎಸ್‌ಯು ಜಿಲ್ಲಾ ಸಮಿತಿ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ಸಚಿವೆ ವೀಣಾ ಜೋರ್ಜ್‌ರ ಪ್ರತಿಕೃತಿಯನ್ನು ದಹಿಸಲಾಯಿತು. ಪೊಲೀಸರ ಸಹಾಯದೊಂದಿಗೆ ಕೆಎಸ್‌ಯು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಆಕ್ರಮಿಸಿ ಪಕ್ಷದ ಧ್ವಜ ಪತಾಕೆಗಳನ್ನು …

ಕೆ.ಎಸ್.ಯು ಪ್ರತಿಭಟನೆ ಮಧ್ಯೆ ಆರೋಗ್ಯ ಸಚಿವೆಗೆ ಗಾಯ: ಐವರು ಕೆ.ಎಸ್.ಯು ಕಾರ್ಯಕರ್ತರ ವಿರುದ್ಧ ಹತ್ಯೆಯತ್ನ ಪ್ರಕರಣ ದಾಖಲು, ನ್ಯಾಯಾಂಗ ಬಂಧನ; ಸಿಪಿಎಂನಿಂದ ವ್ಯಾಪಕ ಪ್ರತಿಭಟನೆ ಕಣ್ಣೂರಿನಲ್ಲಿ ಸಂಘರ್ಷಾವಸ್ಥೆ

ಕಣ್ಣೂರು: ಕಣ್ಣೂರು ರೈಲು ನಿಲ್ದಾಣ ದಲ್ಲಿ ಕೆಎಸ್‌ಯು ಕಾರ್ಯಕರ್ತರು ಕಪ್ಪು ಪತಾಕೆ ಬೀಸಿ ಪ್ರತಿಭಟಿಸುತ್ತಿದ್ದ ಮಧ್ಯೆ ಆರೋಗ್ಯ ಸಚಿವೆ ವೀಣಾ ಜೋರ್ಜ್ ಗಾಯಗೊಂಡ ಘಟನೆಗೆ ಸಂಬಂಧಿಸಿ ಕೆಎಸ್‌ಯುನ ಕಣ್ಣೂರು ಜಿಲ್ಲಾಧ್ಯಕ್ಷ ಎಂ.ಸಿ. ಅತುಲ್, ಜಿಲ್ಲಾ ಕೋಶಾಧಿಕಾರಿ ಅಕ್ಷಯ್ ಮಾಟ್ಟೂಲ್, ಸಿ.ಎಚ್. ಮುಬಾಸ್ ಬಿತುನ್ ಬಾಲನ್ ಮತ್ತು ಮೊಹಮ್ಮದ್ ಯಾಸಿನ್ ಎಂಬಿ ವರ ವಿರುದ್ದ ಪೊಲೀಸರು ಹತ್ಯೆಯತ್ನ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ. ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇದು ಸಚಿವರನ್ನು ಹತ್ಯೆಗೈಯ್ಯಲು ನಡೆಸಿದ …

ಕಳೆದ ವಾರ ಗಲ್ಫ್‌ನಿಂದ ಊರಿಗೆ ಬಂದ ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಗಲ್ಫ್‌ನಿಂದ ಕಳೆದ ವಾರ ಊರಿಗೆ ಬಂದಿದ್ದ ವ್ಯಕ್ತಿ ಇಂದು ಬೆಳಿಗ್ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಡಿಯಡ್ಕ ದೇವಸ್ಥಾನ ಬಳಿಯ ನಿವಾಸಿ ವೆಂಕಟ್ರಮಣ ಆಚಾರ್ಯ (58) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಮನೆಯಲ್ಲಿ ಊಟಮಾಡಿ ನಿದ್ರಿಸಿದ್ದ ಇವರು ಇಂದು ಬೆಳಿಗ್ಗೆ ೫ ಗಂಟೆಗೆ ನಾಪತ್ತೆಯಾಗಿದ್ದರು. ಇದರಿಂದ ಮನೆಯವರು ಹುಡುಕಾಟ ನಡೆಸುತ್ತಿದ್ದಾಗ ಮನೆ ಬಳಿಯ ಮರದಲ್ಲಿ ವೆಂಕಟ್ರಮಣ ಆಚಾರ್ಯ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ ಪಂಚನಾಮೆ ನಡೆಸಿದ …

ಹೊಸಂಗಡಿ ವಸತಿಗೃಹದಲ್ಲಿ ಯುವತಿ, ಯುವಕನನ್ನು ಬೆದರಿಸಿದ ತಂಡದ ಕೊಂಡಿ ಮಹಿಳಾ ಪೊಲೀಸ್‌ನ ಕೈ ಬೆರಳು ಮುರಿದು ಪರಾರಿಯಾದ ಆರೋಪಿ ಸೆರೆ

ಕಾಸರಗೋಡು: ಬಂಧಿಸಲಿರುವ ಯತ್ನದ ಮಧ್ಯೆ ಮಹಿಳಾ ಪೊಲೀಸ್‌ನ ಕೈಯ ಬೆರಳನ್ನು ಮುರಿದು ಪರಾರಿಯಾಗಲು ಯತ್ನಿಸಿದ ಆರೋಪಿ ಸೆರೆಯಾಗಿದ್ದಾನೆ. ಹೊಸಬೆಟ್ಟು ನಿವಾಸಿ ಮೊಯ್ದೀನ್ ಸಮಾನ್ (33)ನನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ತಂಡ ಸೆರೆ ಹಿಡಿದಿದೆ. ಇಂದು ಮುಂಜಾನೆ ಮಂಗಳೂರು, ಕಲ್ಲಾಪು ತರಕಾರಿ ಮಾರುಕಟ್ಟೆಯಿಂದ ಸೆರೆ ಹಿಡಿಯಲಾಗಿದೆ. ಆರೋಪಿ ಮಾರುಕಟ್ಟೆಯಲ್ಲಿದ್ದಾನೆಂಬ ಮಾಹಿತಿ ಲಭಿಸಿದ ಆಧಾರದಲ್ಲಿ ಪೊಲೀಸ್ ತಂಡ ತಲುಪಿ ಬಂಧಿಸಿದೆ. ಈತನ ಜೊತೆಗಿದ್ದ ಆರೋಪಿಗಳಾದ ಮಂಜೇಶ್ವರ ಪಿರಾರಮೂಲೆಯ ಕೆ.ಎ. ಹಾರಿಸ್ (40), ಬಡಾಜೆ ಕಾಜೂರ್ ಮಾಲಿ …

ಜಿಲ್ಲೆಯಲ್ಲಿ ಗೃಹಿಣಿ ಸಹಿತ ಮೂವರು ಯುವತಿಯರು ನಾಪತ್ತೆ

ಕಾಸರಗೋಡು: ಜಿಲ್ಲೆಯಲ್ಲಿ  ಕಳೆದದಿನ ಗೃಹಿಣಿ ಸಹಿತ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ. ಈ ಪೈಕಿ ಓರ್ವೆ ಪ್ರಿಯತಮನನ್ನು ಮದುವೆಯಾದ ಬಳಿಕ ಪೊಲೀಸ್ ಠಾಣೆಯಲ್ಲಿಹಾಜರಾಗಿದ್ದಾಳೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೋಂ ಅದಿರುಮಾವಿನ ಪಿ.ಕೆ. ಮಧು ಎಂಬವರ ಪುತ್ರಿ ಬೀನಾ (19) ಪ್ರಿಯತಮನಾದ ರಂಜಿತನ ಜೊತೆ ಪರಾರಿಯಾಗಿ ಮದುವೆಯಾಗಿದ್ದಾಳೆ. ಮಂಗಳವಾರ ಸಂಜೆ ಬೀನಾ ನಾಪತ್ತೆಯಾಗಿದ್ದಳು. ತಂದೆ ನೀಡಿದ ದೂರಿನಂತೆ  ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ನಿನ್ನೆ ಮಧ್ಯಾಹ್ನ ಬೀನಾ ಪೊಲೀಸ್ ಠಾಣೆಗೆ ತಲುಪಿದ್ದಾಳೆ. ಜೊತೆಗೆ ಪ್ರಿಯತಮ ರಂಜಿತ್ …

ಧಾರ್ಮಿಕರಂಗದಲ್ಲಿ ಸಕ್ರಿಯನಾಗಿದ್ದ  ಉದಯಗಿರಿ ನಿವಾಸಿ ಮಹೇಶ್ ನಿಧನ

ವಿದ್ಯಾನಗರ: ಉದಯಗಿರಿ ಶ್ರೀ ವಿಷ್ಣುಮೂರ್ತಿ ಸೇವಾ ಸಂಘದ ಉಪಾಧ್ಯಕ್ಷ ನಾಗಿ, ವಿದ್ಯಾನಗರ ಗ್ರಾಮಸಮಿತಿಯ ಸಕ್ರಿಯ ಕಾರ್ಯಕರ್ತ, ಕಲಾ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಿಸು ತ್ತಿದ್ದ ಉದಯಗಿರಿ ನೆಲ್ಕಳಂ ನಿವಾಸಿ ಮಹೇಶ್ ಎನ್. ಅಲಿಯಾಸ್ ಮಣಿ (58) ನಿಧನ ಹೊಂ ದಿದರು. ದಿ| ರಾಮನ್ ಕೆ.ಎನ್‌ರ ಪುತ್ರನಾಗಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ತಾಯಿ ಲಲಿತ,  ಪತ್ನಿ ಬೇಬಿ ಕೆ.ಬಿ, ಮಕ್ಕಳಾದ ನಿಶಾ ಕಾಞಂಗಾಡ್, ನಿತಿನ್ ಉದಯಗಿರಿ, ನಿಖಿಲೇಶ್ ಉದಯಗಿರಿ, ಸಹೋದರರಾದ ವಿಜಯನ್ …

ಕಿರುಕುಳ ಪ್ರಕರಣ: ಮೂರು ದಶಕಗಳ ಬಳಿಕ  ಶರಣಾದ ಆರೋಪಿ

ಕಣ್ಣೂರು: ಪ್ರಾಯಪೂರ್ತಿಯಾ ಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿ ಮೂರು ದಶಕಗಳ ಬಳಿಕ ನ್ಯಾಯಾಲಯದಲ್ಲಿ ಶರಣಾಗಿ ದ್ದಾನೆ. ತಲಶ್ಶೇರಿ ನಿವಾಸಿ ಮುಹಮ್ಮದ್ ಶಕೀಲ್ (58) ನ್ಯಾಯಾಲಯದಲ್ಲಿ ಶರಣಾದ ಆರೋಪಿಯಾಗಿದ್ದಾನೆ. 1989 ರಲ್ಲಿ ಬಾಲಕಿಗೆ ಕಿರುಕುಳಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿ ದ್ದಾನೆ. ಈತನ ವಿರುದ್ಧ ಪೊಲೀಸರು ಕೇಸು ದಾಖಲಿಸುವುದರೊಂದಿಗೆ ವಿದೇಶಕ್ಕೆ ಪರಾರಿಯಾಗಿದ್ದನು. ತಲಶ್ಶೇರಿ ಎಎಸ್‌ಪಿ ಡಾ. ನಂದಗೋಪನ್‌ರ ನಿರ್ದೇಶ ಪ್ರಕಾರ ರೂಪೀಕರಿಸಿದ ಪ್ರತ್ಯೇಕ ಸ್ಕ್ವಾಡ್ ಆರೋಪಿಯನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುವುದರೊಂದಿಗೆ ಈತ ಶರಣಾಗಿದ್ದಾನೆ.  ಕೇಸು ದಾಖಲಿಸಿದ ಬಳಿಕ …

ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿನಿ ಮೃತ್ಯು

ಕಾಸರಗೋಡು: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ 10ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಳು. ಕುಣಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಆಯಿಷತ್ ಮೆಹಸಿನ್ (15) ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟವಳು. 3 ತಿಂಗಳ ಹಿಂದೆ ಹೊಟ್ಟೆನೋವು ತಗಲಿದ ಈಕೆಗೆ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು. ತಿರುವನಂತಪುರ ಸಹಿತದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯಗೊಳಿಸಲಾಯಿತಾದರೂ ರೋಗ ವಾಸಿಯಾಗಲಿಲ್ಲ. ಕುಣಿಯದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮಜೀದ್- ರಸಿಯ ದಂಪತಿ  ಪುತ್ರಿಯಾಗಿದ್ದಾಳೆ. ಮೃತಳು ತಂದೆ, ತಾಯಿ, ಸಹೋದರ ಕೆ.ಎಂ. ಅಬ್ದುಲ್ ರಶೀದ್, ಸಹೋದರಿ ಕೆ.ಎಂ. …

ವಿಧಾನಸಭಾ ಚುನಾವಣೆ: ಉದುಮದಲ್ಲಿ ಸಿ.ಎಚ್. ಕುಂಞಂಬು, ತೃಕ್ಕರಿಪುರದಲ್ಲಿ ವಿ.ಪಿ.ಪಿ. ಮುಸ್ತಫ ಎಡರಂಗದ ಅಭ್ಯರ್ಥಿಗಳು; ಶಾನವಾಸ್ ಪಾದೂರು ಕಾಸರಗೋಡು ಅಥವಾ ಮಂಜೇಶ್ವರದಲ್ಲಿ ಸ್ಪರ್ಧೆ

ಕಾಸರಗೋಡು: ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಜ್ಯಾರಿಗೊಳ್ಳುವ ಮೊದಲೇ ಜಿಲ್ಲೆಯಲ್ಲಿ ಸಿಪಿಎಂ ತನ್ನ ಅಭ್ಯರ್ಥಿಗಳನ್ನು ಖಚಿತಪಡಿಸಿದೆ. ಇದರಂತೆ ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿನ ಹಾಲಿ ಶಾಸಕ ಸಿ.ಎಚ್. ಕುಂಞಂಬುರನ್ನು ಮತ್ತೆ ಕಣಕ್ಕಿಳಿಸಲು ಸಿಪಿಎಂ ತೀರ್ಮಾನಿಸಿದ್ದು, ತೃಕ್ಕರಿಪುರ ಕ್ಷೇತ್ರದಲ್ಲಿ ನ್ಯಾಯವಾದಿ ವಿ.ಪಿ.ಪಿ. ಮುಸ್ತಫಾರನ್ನು ಅಭ್ಯರ್ಥಿಯ ನ್ನಾಗಿಸಲು ಪಕ್ಷ ನಿರ್ಧರಿಸಿದೆ. ಕಾಸರಗೋಡು ಜಿಲ್ಲಾ ಪಂಚಾ ಯತ್‌ನ ಈ ಹಿಂದಿನ ಉಪಾಧ್ಯಕ್ಷ ಶಾನವಾಸ್ ಪಾದೂರುರನ್ನು ಕಾಸರ ಗೋಡು ಅಥವಾ ಮಂಜೇಶ್ವರದಲ್ಲಿ ಸ್ಪರ್ಧೆಗಿಳಿಸುವ ಬಗ್ಗೆ ಸಿಪಿಎಂ ಚಿಂತನೆ ನಡೆಸಿದೆ. ಸಿಪಿಎಂ ಕೇಂದ್ರ ಸಮಿತಿ ಸದಸ್ಯ …