ಬದಿಯಡ್ಕ ಪಂ. ಕುಟುಂಬಶ್ರೀ ‘ಆಷಾಡ ಗಂಜಿ’ ಉದ್ಘಾಟನೆ

ಬದಿಯಡ್ಕ: ಪಂಚಾಯತ್ ಕುಟುಂಬಶ್ರೀ ಮಾದರಿ ಸಿಡಿಎಸ್‌ನ ನೇತೃತ್ವದಲ್ಲಿ ಸಿಡಿಎಸ್ ಹಾಲ್‌ನಲ್ಲಿ ಜರಗಿದ `ಆಷಾಡ ಗಂಜಿ’ ಕಾರ್ಯ ಕ್ರಮವನ್ನು ಪಂಚಾಯತ್ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು. ಕುಟುಂಬಶ್ರೀ ಯವರ ಈ ರೀತಿಯ ಸಮಾಜಮುಖಿ ಹಾಗೂ ಸಂಸ್ಕೃತಿಯುಕ್ತ ಕಾರ್ಯಕ್ರಮ ಗಳು ಅಭಿನಂದನಾರ್ಹ ಎಂದರು. ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಂಚಾಯತ್ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಜಿಲ್ಲಾ ಪಂ.ಸದಸ್ಯ ರಾಮಪ್ಪ ಮಂ ಜೇಶ್ವರ, ಪಂಚಾಯತ್ ಸದಸ್ಯರಾದ …

ಕಾಸರಗೋಡು ರೈಲು ನಿಲ್ದಾಣದ ಹಳೆಯ ಕಾಲ್ನಡೆ  ಮೇಲ್ಸೇತುವೆಗೆ ಬೀಗ: ಪ್ರಯಾಣಿಕರಿಗೆ ಸಂಕಷ್ಟ

ಕಾಸರಗೋಡು: ರೈಲ್ವೇ ನಿಲ್ದಾಣದ ಹಳೆಯ ಕಾಲ್ನಡೆ ಮೇಲ್ಸೇತುವೆ ಮುಚ್ಚಲಾಗಿದೆ. ಇದರಿಂದಾಗಿ ಪ್ರಯಾಣಿಕರು ಸಂಕ್ಕಷ್ಟಕ್ಕೀಡಾಗಿದ್ದಾರೆ. ಇನ್ನು ರೈಲ್ವೇ ನಿಲ್ದಾಣಕ್ಕೆ ತಲುಪುವ ಪ್ರಯಾಣಿಕರು ತೆಂಕಣ ಭಾಗದಲ್ಲಿರುವ ಮೇಲ್ತೇಸುವೆಯ ಮೂಲಕ ಸಂಚರಿಸಿ ೧ನೇ ನಂಬ್ರದ ಪ್ಲಾಟ್ ಫಾರ್ಮ್‌ಗೆ ಹಾಗೂ ಅಲ್ಲಿಂದ ವಾಪಸ್ ನಡೆದುಹೋಗಬೇಕಾಗಿದೆ. ಈ ಕಾಲ್ನಡೆ ಮೇಲ್ಸೇತುವೆಯ ಲಿಫ್ಟ್ ಹಾನಿಯಾದ ಹಿನ್ನೆಲೆಯಲ್ಲಿ ವೃದ್ದರು ಹಾಗೂ ಭಿನ್ನ ಸಾಮರ್ಧ್ಯದವರು, ರೋಗಿಗಳು ಬಹಳ ತೊಂದರೆ ಅನುಭವಿಸಿದರು. ಹೆಚ್ಚಿನ ಸಮಯಗಳಲ್ಲಿ ಲಿಫ್ಟ್ ಹಾನಿಯಾಗುತ್ತಿದೆ ಎಂದು ಪ್ರಯಾಣಿಕರು ತಿಳಿಸುತ್ತಾರೆ. ಒಂದು ವಾರದ ಹಿಂದೆ ಪಾಲಕ್ಕಾಡ್ ಡಿವಿಶನ್‌ನ ಡಿಆರ್‌ಎಂ …

ಯೋಜನಾ ಮೊತ್ತ ಕಡಿತ: ಮೀಂಜ ಪಂ.ಗೆ ಎಲ್‌ಡಿಎಫ್ ಮಾರ್ಚ್

ಮಂಜೇಶ್ವರ: ಸ್ಥಳೀಯಾಡಳಿತ ಸಂಸ್ಥೆಗಳ ಯೋಜನಾ ನಿಧಿ ಕಡಿತಗೊಳಿಸಿದ, ಸ್ತ್ರೀ ಸುರಕ್ಷಾ ಪಿಂಚಣಿ ರದ್ದುಗೊಳಿಸಿದ, ಲೈಫ್ ಭವನ ಯೋಜನೆಯನ್ನು ಬುಡಮೇಲುಗೊಳಿಸಿದ, ಉದ್ಯೋಗ ಖಾತರಿ ಯೋಜನೆಯ ಮೊತ್ತ ಕಡಿತಗೊಳಿಸಿದ ಯುಡಿಎಫ್ ಸರಕಾರದ ಜನದ್ರೋಹ ನೀತಿಗೆದುರಾಗಿ ಎಡರಂಗದ ನೇತೃತ್ವದಲ್ಲಿ ಮೀಂಜ ಪಂಚಾಯತ್ ಕಚೇರಿ ಮಾರ್ಚ್ ನಡೆಸಲಾಯಿತು. ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಕಮಲಾಕ್ಷ ದೇರಂಬಳ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಏರಿಯಾ ಸಮಿತಿ ಸದಸ್ಯ ಹಾರಿಸ್ ಪೈವಳಿಕೆ, ಸಿಪಿಐ ನೇತಾರ ಮುಸ್ತಫಾ ಕಡಂಬಾರ್ ಮಾತನಾಡಿದರು. ಲೋಕೇಶ ಚಿನಾಲ, ರಾಮಚಂದ್ರ …

ಯೋಗದಲ್ಲಿ ಅನ್ಶಿಕಗೆ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್

ಕಾಸರಗೋಡು: ಮೆಡೋನ್ಹಾ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅನ್ಶಿಕ ಎಂ. ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಯೋಗದಲ್ಲಿ ಅತ್ಯಂತ ಕ್ಲಿಷ್ಟಕರ ಆಸನವಾದ ಪತಂಗಾಸನವನ್ನು ಒಂದು ನಿಮಿಷ 35 ಸೆಕೆಂಡ್ ಕೈಗೊಂಡು,  ಕೌಂಟಿನ್ಯಾಸನದಲ್ಲಿ ಎರಡು ನಿಮಿಷ ಯೋಗ ಕೈಗೊಂಡು ಈಕೆ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಪಡೆದುಕೊಂಡಿದ್ದಾಳೆ. ಕರಂದಕ್ಕಾಡ್ ಯೋಗ ಫಾರ್ ಕಿಡ್ಸ್‌ನಲ್ಲಿ ಯೋಗ ತರಬೇತಿ ಪಡೆಯುತ್ತಿರುವ ಈಕೆಗೆ ಅಧ್ಯಾಪಿಕೆ ತೇಜ ಕುಮಾರಿ ಯೋಗ ತರಬೇತಿ ನೀಡುತ್ತಿದ್ದಾರೆ. ಕುತ್ತಿಕ್ಕೋಲ್ ವಳವ್‌ನ ಬಾಲಕೃಷ್ಣನ್- ಪ್ರದೀಪ ದಂಪತಿ ಪುತ್ರಿಯಾಗಿದ್ದಾಳೆ.

ಕರ್ಕಾಟಕ ಅಮವಾಸ್ಯೆ: ಪಿತೃತರ್ಪಣಕ್ಕೆ ಕ್ಷೇತ್ರಗಳಲ್ಲಿ ಸಿದ್ಧತೆ

ಕಾಸರಗೋಡು:  ಕರ್ಕಾಟಕ ಅಮವಾಸ್ಯೆ ಹಿನ್ನೆಲೆಯಲ್ಲಿ ಪಿತೃತರ್ಪಣ ನಡೆಸುವುದಕ್ಕೆ ತೀರ್ಥ ಕ್ಷೇತ್ರಗಳು ಸಿದ್ಧತೆನಡೆಸುತ್ತಿವೆ. ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ತೃಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ಕ್ಷೇತ್ರದಲ್ಲಿ ಬಲಿತರ್ಪಣ 12ರಂದು ಬೆಳಿಗ್ಗೆ 5.30ರಿಂದ ಆರಂಭಗೊಳ್ಳಲಿದೆ. ಅರ್ಚಕ ನವೀನ್‌ಚಂದ್ರ ಕಾಯರ್‌ತ್ತಾಯ, ಪುರೋಹಿತ ರಾಜೇಂದ್ರ ಅರಳಿತ್ತಾಯ ಎಂಬಿವರು ನೇತೃತ್ವ ನೀಡುವರು. ೨೦ರಷ್ಟು ವೈದಿಕರು ಇಲ್ಲಿ ಬಲಿತರ್ಪಣ ನಡೆಸಿಕೊಡುವರು. ಭಕ್ತರಿಗೆ ಕುಡಿಯುವ ನೀರು, ಔಪಹಾರ, ಪೊಲೀಸ್, ಹೆಲ್ತ್ ವಿಭಾಗಗಳ ಸೇವೆ, ಸಾರಿಗೆ ಸೌಕರ್ಯ ಎಂಬಿವುಗಳನ್ನು ಏರ್ಪಡಿಸಲಾಗಿದೆ. ತೃಕ್ಕನ್ನಾಡ್ ಹೊರತಾಗಿ ಚಟ್ಟಂಚಾಲ್ ಶ್ರೀ ಮಹಿಷ ಮರ್ದಿನಿ ಕ್ಷೇತ್ರ ತ್ರಿವೇಣಿ …

ಸರಕಾರ ಹಾಗೂ ಆರೋಗ್ಯ ಸಚಿವ ಬದಲಾವಣೆಯಾಗುತ್ತಿದೆ,ಆದರೆ ಜಿಲ್ಲೆಯ ಆರೋಗ್ಯ ಕೇಂದ್ರಗಳು ಯಥಾಸ್ಥಿತಿ

ಕುಂಬಳೆ: ಸರಕಾರ, ಆರೋಗ್ಯಸಚಿವ ಬದಲಾವಣೆಯಾಗುವುದಲ್ಲದೆ ಜಿಲ್ಲೆಯ ಆರೋಗ್ಯ ಕೇಂದ್ರಗಳಿಗೆ ಯಾವುದೇ ಬದಲಾವಣೆ ಉಂಟಾಗುತ್ತಿಲ್ಲವೆಂದು ಸ್ಥಳೀಯರು ದೂರುತ್ತಾರೆ. ಜಿಲ್ಲೆಯ ಹೆಚ್ಚಿನ ಆರೋಗ್ಯ ಕೇಂದ್ರಗಳು ಕೂಡಾ ವೆಂಟಿಲೇಟರ್, ಐಸಿಯುವಿನಲ್ಲಾಗಿದೆ ಎಂದು ಇವರು ಅಭಿಪ್ರಾಯಪಡುತ್ತಾರೆ. ಜ್ವರ ತಗಲಿ ಆಸ್ಪತ್ರೆಗೆ ತಲುಪುವ ರೋಗಿಗಳನ್ನು ತಪಾಸಣೆ ನಡೆಸಲು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಡಾಕ್ಟರ್‌ಗಳಿಲ್ಲ. ಜಿಲ್ಲೆಯ ಹೆಚ್ಚಿನ ಆರೋಗ್ಯ ಕೇಂದ್ರಗಳಲ್ಲೂ ಡಾಕ್ಟರ್‌ಗಳ ಕುರ್ಚಿ ಖಾಲಿಯಾಗಿವೆ. ಇದನ್ನು ಭರ್ತಿಗೊಳಿಸಲು ಯಾವುದೇ ಕ್ರಮವೂ ಉಂಟಾಗುತ್ತಿಲ್ಲ. ಕುಂಬಳೆಯ ತೀರ ವಲಯದ ಸರಕಾರದ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ ಕಳೆದೆರಡು ದಶಕಗಳಿಂದ …

ಶತಾಯುಷಿ ನಿಧನ

ಉಪ್ಪಳ :ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯ ಕರ್ತರಾಗಿದ್ದ ಮಂಗಲ್ಪಾಡಿಯ ದಿ| ರಮಾನಾಥ ಶೆಣೈ ಅವರ ಪತ್ನಿ ಶತಾಯುಷಿ ಸೀತಾ ಭಾಯಿ (100) ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ರಾದರು. ಮೃತರು ಮಕ್ಕಳಾದ ಪ್ರಭಾಕರ ಶೆಣೈ, ರಾಜಾರಾಮ ಶೆಣೈ, ಸುದರ್ಶನ ಶೆಣೈ, ಶಿವರಾಯ ಶೆಣೈ, ಗುರುದಾಸ ಶೆಣೈ , ಭಾರತಿ ಶೆಣೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರ ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ …

ಸ್ನೇಹಿತೆಯ 16ರ ಹರೆಯದ ಮಗಳಿಗೆ ಕಿರುಕುಳ ನೀಡಿದ ಯುವತಿ ಸೆರೆ: ಆರೋಪಿ ಯುವತಿ ವಿರುದ್ಧ 4ಪೋಕ್ಸೋ ಪ್ರಕರಣಗಳು

ಕಾಸರಗೋಡು: ಸ್ನೇಹಿತೆಯ 16ರ ಹರೆಯದ ಮಗಳಿಗೆ  ಕಿರುಕುಳ ನೀಡಿದ ಪ್ರಕರಣದಲ್ಲಿ ಯುವತಿ ಸೆರೆಗೀಡಾಗಿದ್ದಾಳೆ.  ತಳಿಪರಂಬ ಪುಳಿಪರಂಬ್ ನಿವಾಸಿಯಾದ ಸ್ನೇಹ ಮೆರ್ಲಿ (25) ಎಂಬಾಕೆಯನ್ನು ಮಾತಿಲ್ ಪೊಲೀಸರ ಸಹಾಯ ದೊಂ ದಿಗೆ ಮೇಲ್ಪರಂಬ  ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಪಿ. ರಾಘವನ್ ನೇತೃತ್ವದ ತಂಡ ಬಂಧಿಸಿದೆ. 4 ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಸ್ನೇಹ ಮೆರ್ಲಿ ಮಾತಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಬಂಧಿಕರ ಮನೆಯಲ್ಲಿ  ವಾಸಿಸುತ್ತಿ ದ್ದಾಳೆಂಬ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ದಾಳಿ ವೇಳೆ ಯುವತಿ ಸೆರೆಗೀಡಾಗಿ ದ್ದಾಳೆ. …

ದಂಪತಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಹಲ್ಲೆಗೈದು 12 ಪವನ್ ಚಿನ್ನಾಭರಣ ದರೋಡೆಗೈದ ಆರೋಪಿ ಬಂಧನ

ಕಾಸರಗೋಡು: ಮನೆ ಬಾಡಿಗೆಗೆ ಪಡೆಯಲೆಂಬ ನೆಪದಲ್ಲಿ ತಲುಪಿ ದಂಪತಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ  ಹಲ್ಲೆಗೈದ ಬಳಿಕ 12 ಪವನ್ ಚಿನ್ನಾಭರಣ ಗಳನ್ನು ದರೋಡೆಗೈದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ. ಕಾಞಂಗಾಡ್ ಮಾವುಂಗಾಲ್ ಆನಂದಾಶ್ರಮ ಬಳಿಯ ಏಚಿಕಾನ ನಿವಾಸಿ ಚಾಮ ಕುಟ್ಟಿ ಹೌಸ್‌ನ ರಾಜ್‌ಮೋಹನ್ (42) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕಳೆದ ಸೋಮವಾರ ಮಧ್ಯಾಹ್ನ ೧ ಗಂಟೆ ವೇಳೆ ಆಲಪ್ಪುಳ ಬಳಿಯ ಕಣಿಯಾಂಕುಳಂ ಜಂಕ್ಷನ್ ಸಮೀಪದ ಮನೆಯಲ್ಲಿ ದರೋಡೆ ನಡೆದಿದೆ. ಕೈದವನ ಕಣಿಯಾಂ …

ಅರಣ್ಯದಲ್ಲಿ ಜೀರ್ಣಿಸಿದ ಸ್ಥಿತಿಯಲ್ಲಿ ಗಂಡಸಿನ ರುಂಡವಿಲ್ಲದ ಮೃತದೇಹ ಪತ್ತೆ

ಕಾಸರಗೋಡು: ಅರಣ್ಯದಲ್ಲಿ ಅಪರಿಚಿತ ಗಂಡಸಿನ ರುಂಡ ಬೇರ್ಪಟ್ಟ ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ರಾಜಪುರಂಗೆ ಸಮೀಪದ ವಟ್ಟಕಯಂ ಎನ್‌ಎಸ್‌ಎಸ್ ಎಸ್ಟೇಟಿಗೆ ಸಮೀಪದ ಕರಿಂಕೋಲ್‌ನ ಅರಣ್ಯದಲ್ಲಿ ಮೃತದೇಹ ಪತ್ತೆಯಾಗಿದೆ. ಅಣಬೆ ಸಂಗ್ರಹಿಸಲೆಂದು ನಿನ್ನೆ ಈ ಕಾಡಿಗೆ ಹೋದವರು ಮೊದಲು ಈ ಮೃತದೇಹ ಕಂಡಿದ್ದು, ನಂತರ ಅವರು ನೀಡಿದ ಮಾಹಿತಿಯಂತೆ ರಾಜಪುರಂ ಪೊಲೀಸರು ಮತ್ತು ಪನತ್ತಡಿ ಸೆಕ್ಷನ್ ಅರಣ್ಯಾಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಾತ್ರವಲ್ಲ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿ ಅಗತ್ಯದ ಮಾಹಿತಿಗಳನ್ನು …