ಬದಿಯಡ್ಕ ಪಂ. ಕುಟುಂಬಶ್ರೀ ‘ಆಷಾಡ ಗಂಜಿ’ ಉದ್ಘಾಟನೆ
ಬದಿಯಡ್ಕ: ಪಂಚಾಯತ್ ಕುಟುಂಬಶ್ರೀ ಮಾದರಿ ಸಿಡಿಎಸ್ನ ನೇತೃತ್ವದಲ್ಲಿ ಸಿಡಿಎಸ್ ಹಾಲ್ನಲ್ಲಿ ಜರಗಿದ `ಆಷಾಡ ಗಂಜಿ’ ಕಾರ್ಯ ಕ್ರಮವನ್ನು ಪಂಚಾಯತ್ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು. ಕುಟುಂಬಶ್ರೀ ಯವರ ಈ ರೀತಿಯ ಸಮಾಜಮುಖಿ ಹಾಗೂ ಸಂಸ್ಕೃತಿಯುಕ್ತ ಕಾರ್ಯಕ್ರಮ ಗಳು ಅಭಿನಂದನಾರ್ಹ ಎಂದರು. ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಂಚಾಯತ್ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಜಿಲ್ಲಾ ಪಂ.ಸದಸ್ಯ ರಾಮಪ್ಪ ಮಂ ಜೇಶ್ವರ, ಪಂಚಾಯತ್ ಸದಸ್ಯರಾದ …