ಇಂಧನ ಬೆಲೆಯೇರಿಕೆ ವಿರುದ್ಧ ಕುಂಬಳೆಯಲ್ಲಿ ಮಂಡಲ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕುಂಬಳೆ: ಕೇಂದ್ರ ಸರಕಾರ ದೇಶದಲ್ಲಿ ತೀವ್ರ ಇಂಧನ ಬೆಲೆ ಹೆಚ್ಚಳಕ್ಕೆ, ಆ ಮೂಲಕ ಅಗತ್ಯ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ, ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿರುವುದಾಗಿ  ಡಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪ್ರಭು ಅಭಿಪ್ರಾಯಪಟ್ಟರು. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ವಿರುದ್ಧ ಕೆಪಿಸಿಸಿ ಆಹ್ವಾನ ಪ್ರಕಾರ ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕರ್ಷಕ ಕಾಂಗ್ರೆಸ್ ಬ್ಲೋಕ್ ಕಾರ್ಯದರ್ಶಿ ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ …

ಕೆಎಸ್‌ಯುನಿಂದ ದ್ವಿಚಕ್ರ ವಾಹನಗಳನ್ನು ದೂಡಿಕೊಂಡು ಪ್ರತಿಭಟನೆ

ಕಾಸರಗೋಡು: ಪೆಟ್ರೋಲ್- ಡೀಸೆಲ್ ಬೆಲೆ ನಿರಂತರ ಹೆಚ್ಚಿಸುತ್ತಿ ರುವುದನ್ನು ಪ್ರತಿಭಟಿಸಿ ಬೈಕ್‌ಗಳನ್ನು ದೂಡಿಕೊಂಡು ಕೆಎಸ್‌ಯು ಪ್ರತಿಭಟಿಸಿದೆ. ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ಪ್ರೆಸ್‌ಕ್ಲಬ್ ಜಂಕ್ಷನ್‌ನ ಪೆಟ್ರೋಲ್ ಬಂಕ್‌ವರೆಗೆ ಕೆಎಸ್‌ಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೈಕ್, ಸ್ಕೂಟರ್‌ಗಳನ್ನು ದೂಡಿಕೊಂಡು ಪ್ರತಿಭಟಿಸಿದ್ದಾರೆ. ಮನಾಫ್ ನುಳ್ಳಿಪ್ಪಾಡಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಜವಾದ್ ಪುತ್ತೂರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಆದರ್ಶ್ ಕೆ. ಸ್ವಾಗತಿಸಿ, ಅನ್ಸಾರಿ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಖಿಲ್ ಜೋನ್, ವಿಷ್ಣು ಇರಿಯಣ್ಣಿ, ಸುಜಿತ್ ಎಸ್. ವೈಷ್ಣವ್ ಕೋಳಿಚ್ಚಾಲ್, ಶಜಾಹ್ …

ರಸ್ತೆಯಲ್ಲಿ ಬಿದ್ದು ಸಿಕ್ಕಿದ ಚಿನ್ನಾಭರಣ ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಕೂಲಿ ಕಾರ್ಮಿಕ

ಬದಿಯಡ್ಕ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಬಿದ್ದು ಸಿಕ್ಕಿದ ಒಂದೂವರೆ ಪವನ್ ಚಿನ್ನದ ಸರವನ್ನು ವಾರಸುದಾರರಿಗೆ ಹಸ್ತಾಂತರಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಕಿಳಿಂಗಾರು ನಿಡುಗಳದ ಕೂಲಿ ಕಾರ್ಮಿಕನಾದ ಮಹಾಲಿಂಗ ಎಂಬವರಿಗೆ ಕಿಳಿಂಗಾರು ರಸ್ತೆಯಲ್ಲಿ ಚಿನ್ನದ ಸರ ಬಿದ್ದು ಸಿಕ್ಕಿತ್ತು. ಕೂಡಲೇ ಅದರ ವಾರಸುದಾರರನ್ನು ಹುಡುಕಿದರೂ ಪತ್ತೆಹಚ್ಚಲಾಗಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನಾಭರಣವನ್ನು ಮಹಾಲಿಂಗ ಬದಿಯಡ್ಕ ಪೊಲೀಸರಿಗೆ ಒಪ್ಪಿಸಿದ್ದರು. ಈ ಮಧ್ಯೆ ಚಿನ್ನಾಭರಣ ಕಳೆದುಹೋದ ಪೆರಿಯಡ್ಕದ ಮಹೇಶ್ ವಿವಿಧೆಡೆ ಹುಡುಕಿದರೂ ಪತ್ತೆಯಾU ದುದರಿಂದ ಈ ಬಗ್ಗೆ ದೂರು ನೀಡಲು ಬದಿಯಡ್ಕ …

ಎ.ಎ. ಅಬ್ಬಾಸ್ ನಿಧನ

 ಕಾಸರಗೋಡು: ಅಡ್ಕತ್ತಬೈಲು ನಿವಾಸಿ ಎ.ಎ. ಅಬ್ಬಾಸ್ (73) ನಿಧನ ಹೊಂದಿದರು. ಮೃತರು ಪತ್ನಿ ಬಲ್ಕೀಸ್ ಚಟ್ಟಂಚಾಲ್, ಮಕ್ಕಳಾದ ಜಹನಾರ, ಆಶಿಫ್ ಫರ್ವೀಸ್, ಶುಹೈಬ್, ಸಜ್ವಾನ, ಅಳಿಯಂದಿರಾದ ಮುಹಮ್ಮದ್, ಸಜ್ಜಾದ್, ಸೊಸೆಯಂದಿರಾದ ಅಸೀಮ, ನಾಫಿಯ, ಸಹೋದರರಾದ ಎ. ಅಬ್ದುಲ್ಲ, ಎ. ಮೊಹಮ್ಮದ್ ಕುಂಞಿ, ಎ.ಕೆ. ಶಾಫಿ, ಎ. ಅಬ್ದುಲ್ ಗಫೂರ್, ಎ.ಎ. ರಫೀಕ್, ಸಹೋದರಿಯರಾದ ರಾಬಿಯ, ಖೈರುನ್ನಿಸ, ಬೀವಿ, ನಫೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸಾವಿತ್ರಿ ಅಮ್ಮನಿಧನ

ಬದಿಯಡ್ಕ: ಕೊಲ್ಲಂಗಾನ ಸಮೀಪದ ಪಜ್ಜ ಶಿವನಿಲಯದ ದಿ| ರಾಮಕೃಷ್ಣ ಭಟ್‌ರ ಪತ್ನಿ ಸಾವಿತ್ರಿ ಅಮ್ಮ (81) ಸ್ವ-ಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಗೋವಿಂದ ಶರ್ಮ(ಹರಿಹರ), ಸದಾಶಿವ ಶರ್ಮ ಕೋಳಾರಿ, ತಿರುಮಲೇಶ್ವರ ಭಟ್ ಪಜ್ಜ, ಶೈಲಜಾ ಮಲಪ್ಪುರಂ ಕೋಟೆಕ್ಕಡವು, ಸೊಸೆಯಂದಿರಾದ ರಾಜೇಶ್ವರಿ, ಸೌಮ್ಯಾ, ಅಳಿಯ ಪ್ರೇಮ್ ಕುಮಾರ್ ಕೋಟೆಕ್ಕಡವು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

 ಟಿ.ವಿ. ಬಾಲಕೃಷ್ಣನ್ ನಿಧನ

ಮಧೂರು: ಇಲ್ಲಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನೌಕರ ಟಿ.ವಿ. ಬಾಲಕೃಷ್ಣನ್ (62) ನಿಧನ ಹೊಂದಿದರು. ದಿ| ನಾರಾಯಣ ಮಾರಾರ್- ಕಲ್ಯಾಣಿ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ರಮಾದೇವಿ, ಮಕ್ಕಳಾದ ಧನಂಜಯನ್ (ಮಧೂರು ಸೇವಾ ಸಹಕಾರಿ ಬ್ಯಾಂಕ್), ಮಹೇಶ್, ಸಹೋದರಿಯರಾದ ಸರೋಜಿನಿ, ಶಾಂತ, ಭಾರ್ಗವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಯಿತು: ಕಾಸರಗೋಡಿನಲ್ಲಿ ಸಂಚಾರ ತಡೆಗೆ ಪರಿಹಾರವಿಲ್ಲ

ಕಾಸರಗೋಡು: ಅಣಂಗೂರಿ ನಿಂದ ಆರಂಭಗೊಂಡು ಹೊಸ ಬಸ್ ನಿಲ್ದಾಣ- ಚಂದ್ರಗಿರಿ ಟ್ರಾಫಿಕ್ ಜಂಕ್ಷನ್‌ವರೆಗೆ ವಾಹನ ಸಂಚಾರ ತಡೆ ತೀವ್ರಗೊಳ್ಳುತ್ತಿದೆ. ಇದು ಪ್ರಯಾಣಿಕರಿಗೆ ಸಂಕಷ್ಟ ತರುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಹೆಚ್ಚಾಗಿ ವಾಹನ ದಟ್ಟಣೆ ಕಂಡುಬರುತ್ತಿದ್ದು, ಸಂಚಾರ ತಡೆ ಉಂಟಾಗುತ್ತಿದೆ. ಉತ್ಸವ, ಆಚರಣೆ, ವ್ಯಾಪಾರ ಸೀಸನ್ ಸಮಯಗಳಲ್ಲಿ ಸಂಚಾರತಡೆ ತಾರಕಕ್ಕೇರುತ್ತಿದೆ. ಈ ಮಧ್ಯೆ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ ಯಾವುದಾದರೂ ಸಂಘಟನೆಗಳು, ರಾಜಕೀಯ ಪಕ್ಷ ಜಾಥಾ ನಡೆಸಿದರೆ ಆ ದಾರಿಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ಇದು …

ಯುವಕನ ಅಪಹರಣ ಪ್ರಕರಣ: ಆರೋಪಿಯನ್ನು ಸೆರೆಹಿಡಿಯಲು ಉಪ್ಪಳಕ್ಕೆ ತಲುಪಿದ ಪೊಲೀಸರ ಮೇಲೆ ಹಲ್ಲೆ; ಆರೋಪಿ ಸೆರೆ

ಕುಂಬಳೆ: ಕಾಞಂಗಾಡ್ ಮಾಣಿ ಕ್ಕೋತ್ ಕೊಳವಯಲ್ ನಿವಾಸಿ ಯನ್ನು ಅಪಹರಣಗೈದ ಪ್ರಕರಣದಲ್ಲಿ ಆರೋಪಿಯಾದ ಯುವಕನನ್ನು ಸೆರೆಹಿಡಿಯಲು ತಲುಪಿದ ಪೊಲೀಸರ ಮೇಲೆ ಹಲ್ಲೆಗೈದ ಘಟನೆ ನಡೆದಿದೆ. ಇದರಿಂದ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಗಾಯ ಗಂಭೀರವಾಗಿದೆ.  ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತಲುಪಿ ಆರೋಪಿಯಾದ ಉಪ್ಪಳ ಮಣಿಮುಂಡದ ಸುಹೈಲ್ (30)ಎಂಬಾತನನ್ನು ಬಂಧಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಆರೋ ಪಿಯೂ, ಗೂಂಡಾ ನೇತಾರನೂ, ಮಂಗಳೂರಿನಲ್ಲಿ ನಡೆದ ದಾಳಿಯಲ್ಲಿ ಕೊಲೆಗೈಯ್ಯಲ್ಪಟ್ಟ ಖಾಲಿಯಾ ರಫೀಕ್‌ನ ಮಗನಾಗಿದ್ದಾನೆ ಸುಹೈಲ್ ಎಂದು ಪೊಲೀಸರು …

ಆಸ್ಪತ್ರೆ ಶೌಚಾಲಯದಲ್ಲಿ ವಿದ್ಯಾರ್ಥಿನಿ ಹೆರಿಗೆ : ಮಗುವನ್ನು ವೆಂಟಿಲೇಶನ್ ಮೂಲಕ ಎಸೆದು ಕೊಲೆಗೆತ್ನ

ಆಲಪ್ಪುಳ: ಹೊಟ್ಟೆನೋವು ಚಿಕಿತ್ಸೆಗಾಗಿ ಆಸ್ಪತ್ರೆಗೆ ತಲುಪಿದ ವಿದ್ಯಾರ್ಥಿನಿ ಅಲ್ಲಿನ ಶೌಚಾಲ ಯದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಹರಿಪ್ಪಾಡ್ ಸರಕಾರಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 1 ಗಂಟೆಗೆ ಈ ಘಟನೆ ನಡೆದಿದೆ. ಹೆರಿಗೆಯಾದ ಕೂಡಲೇ ಮಗುವನ್ನು ವೆಂಟಿಲೇಶನ್ ಮೂಲಕ ಹೊರಗೆ ಎಸೆದಿದ್ದಾಳೆ. ಮಗು  ಬೀದಿ ನಾಯಿಗಳು ಬೀಡು ಬಿಟ್ಟಿರುವ ಸ್ಥಳದಲ್ಲಿ ಬಿದ್ದಿದೆ.  ಮಗುವಿನ ಅಳು ಕೇಳಿ ಭದ್ರತಾ ನೌಕರರು ಹಾಗೂ ಆಸ್ಪತ್ರೆ ನೌಕರರು ಸ್ಥಳಕ್ಕೆ ತಲುಪಿದ್ದು, ಮಗುವನ್ನು ಮೇಲೆತ್ತಿ ಅಪಾಯದಿಂದ ಪಾರುಮಾಡಿದ್ದಾರೆ. ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರುಗಳಾದ ನಿಶಾ,ಆಲ್ಫಿ, ನರ್ಸಿಂಗ್ …

ಶಬರಿಮಲೆಗೆ ಯುವತಿ ಪ್ರವೇಶದ ವಿರುದ್ಧ ಹೋರಾಟ: ಗಂಭೀರವಲ್ಲದ ಪ್ರಕರಣಗಳನ್ನು ಹಿಂತೆಗೆಯಲು ಸರಕಾರ ತೀರ್ಮಾನ

ತಿರುವನಂತಪುರ: ಶಬರಿಮಲೆ ದೇಗುಲಕ್ಕೆ ಪರಂಪರಾಗತ ಆಚಾರಗಳನ್ನು ಉಲ್ಲಂಘಿಸಿ ಯುವತಿಯರಿಗೆ  ಈ ಹಿಂದಿನ ಎಡರಂಗ ಸರಕಾರ ನೀಡಿದ ಪ್ರವೇಶಾನುಮತಿಯನ್ನು ಪ್ರತಿಭಟಿಸಿ ನಡೆದ ಹೋರಾಟಗಳಿಗೆ ಸಂಬಂಧಿಸಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣಗಳ ಪೈಕಿ ಗಂಭೀರವಲ್ಲದ ಎಲ್ಲಾ ಪ್ರಕರಣಗಳನ್ನು ತೆಗೆದುಕೊ ಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಗಂಭೀರ ರೂಪದ ದಾಳಿ  ಹಾಗೂ ಇತರ ಗಂಭೀರ ಸ್ವರೂಪದ ಪ್ರಕರಣಗಳನ್ನು ಹೊರತುಪಡಿಸಿ ಇತರ ಎಲ್ಲಾ ಪ್ರಕರಣಗಳನ್ನು ಹಿಂತೆಗೆದು ಕೊಳ್ಳಲು ಸರಕಾರ ತೀರ್ಮಾನಿಸಿದೆ. ಶಬರಿಮಲೆ ಕ್ಷೇತ್ರದಲ್ಲಿನ ಪರಂಪರಾಗತ ಆಚಾರ ಮತ್ತು ಅನುಷ್ಠಾನಗಳಿಗೆ ತದ್ವಿರುದ್ಧವಾಗಿ ಯುವತಿಯರಿಗೆ ಪ್ರವೇಶ ನೀಡಬಾರದೆಂಬ …