ಎಲ್‌ಡಿಎಫ್‌ನ  ಅಭಿವೃದ್ಧಿ ಮುನ್ನಡೆ ಜಾಥಾಕ್ಕೆ ಅದ್ದೂರಿಯ ಚಾಲನೆ

ಕುಂಬಳೆ: ಕೇಂದ್ರ ಮುಂಗಡಪತ್ರದಲ್ಲಿ ಕೇರಳದ ಯಾವುದೇ ಬೇಡಿಕೆಗಳನ್ನು ಪರಿಗಣಿಸಿಲ್ಲ.  ಕೇರಳವನ್ನು ನಿರ್ಲಕ್ಷಿಸಲು ಈ ರಾಜ್ಯ ಯಾವುದರಲ್ಲಿ ಅನರ್ಹತೆಹೊಂ ದಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ. ನಿನ್ನೆ ಕುಂಬಳೆ ಯಿಂದ ಆರಂಭಗೊಂಡ ಎಲ್‌ಡಿಎಫ್‌ನ  ಉತ್ತರ ಕೇರಳ ಅಭಿವೃದ್ಧಿ ಮುನ್ನಡೆ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.   ಕೇರಳದಲ್ಲಿ ಕಡಲಾಮೆಗಳು ಮಾತ್ರವಲ್ಲ ಇರುವುದೆಂದು ತಿಳಿಸಿದ ಮುಖ್ಯಮಂತ್ರಿ, ಕೇರಳದೊಂದಿಗೆ ಕೇಂದ್ರ ಹೊಂದಿರುವ ನಿಲುವಿನಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲವೆಂದೂ   ತಿಳಿಸಿದರು. ಇದರ ಜೊತೆಗೆ ಕೇರಳದಲ್ಲಿ 2016ರಿಂದ ನಡೆದ ಅಭಿವೃದ್ಧಿ ಚಟುವಟಿಕೆಗಳನ್ನು ಮುಖ್ಯಮಂತ್ರಿ ವಿವರಿಸಿದರು. ಶಿಕ್ಷಣ …

ನಿವೃತ್ತ ಪೋಸ್ಟ್ ಮಾಸ್ಟರ್ ನಿಧನ

ಬೆಳ್ಳೂರು: ಕರ್ಕಟಗೋಳಿ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ಕೃಷ್ಣ ನಾಯ್ಕ (70) ನಿಧನ ಹೊಂದಿದರು. ಇವರು ಮುಳ್ಳೇರಿಯ, ನೆಟ್ಟಣಿಗೆ, ಕುಂಬಳೆ, ಪೈವಳಿಕೆ, ಉಪ್ಪಳ ಮೊದಲಾದ ಕಡೆಗಳಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶಾರದ, ಮಕ್ಕಳಾದ ಮಹೇಶ್, ಮನೋಜ್, ಪ್ರದೀಪ್, ಸೊಸೆಯಂದಿರಾದ ಶಾರದ, ಸುಪ್ರೀತ, ಜಯಂತಿ, ಸಹೋದರರಾದ ದಿವಾಕರ, ಅಣ್ಣು ನಾಯ್ಕ್, ಗಂಗಾಧರ, ನಾರಾಯಣ, ಸಹೋದರಿ ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬೇಕಲದಲ್ಲಿ ಗಡಿನಾಡ ಜಾನಪದ ಉತ್ಸವ, ಪುಸ್ತಕ ಬಿಡುಗಡೆ, ವಿಚಾರಸಂಕಿರಣ

ಕಾಸರಗೋಡು: ದೇಶದ ಉದ್ದಗಲ ಸಂಚರಿಸಿದಾಗ ಪ್ರತಿಯೊಂದೆಡೆಯೂ ವೈವಿಧ್ಯಮಯ ಭಾಷೆ, ಸಂಸ್ಕೃತಿ, ಜನಜೀವನ ಗಮನ ಸೆಳೆಯುತ್ತದೆ. ಇಂತಹ ವಿವಿಧತೆಯ ಮಧ್ಯೆ ಒಂದನ್ನೊAದು ಕೂಡಿ ಕಲೆತಾಗ ಉತ್ತಮ ಸಮಾಜ ರೂಪುಗೊಳ್ಳುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಅಭಿಪ್ರಾಯ ವ್ಯಕ್ತಪಡಿಸಿದರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಅರವತ್ತ್ ಬೇಕಲ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ …

ಅನಂತಪುರ ಕೈಗಾರಿಕಾ ಎಸ್ಟೇಟ್‌ನ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಬೆಂಕಿ ಅನಾಹುತ

ಕುಂಬಳೆ: ಅನಂತಪುರ ಕೈಗಾರಿಕಾ ಎಸ್ಟೇಟ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ  ಭಾರೀ ನಾಶನಷ್ಟ ಸಂಭವಿಸಿರು ವುದಾಗಿ ವರದಿಯಾಗಿದೆ. ಎಸ್ಟೇಟ್ ನಲ್ಲಿರುವ ಮಾರ್ಕ್ ವುಡ್ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಮುಂಜಾನೆ 4 ಗಂಟೆ ವೇಳೆ ಬೆಂಕಿ ಅನಾಹುತವುಂಟಾಗಿದೆ. ಕಾಸರ ಗೋಡು, ಉಪ್ಪಳ, ಕಾಞಂಗಾಡ್ ಹಾಗೂ ಕುತ್ತಿಕೋಲ್ ಅಗ್ನಿಶಾಮಕದ ಎಂಟು ಯೂನಿಟ್‌ಗಳು ಗಂಟೆಗಳ ಕಾಲ ನಡೆಸಿದ ಕಾರ್ಯಾ ಚರಣೆಯಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೇರಾಲ್‌ಕಣ್ಣೂರಿನ ಅಬ್ದುರಹಿಮಾನ್ ರ ಮಾಲಕತ್ವದಲ್ಲಿ ರುವ ಫ್ಯಾಕ್ಟರಿ ಇದಾಗಿದೆಯೆಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ 12 ಗಂಟೆ …

ಹೋಟೆಲ್‌ಗಳಿಂದ ಪ್ಲಾಸ್ಟಿಕ್ ಉತ್ಪನ್ನ ವಶ: ಕುಂಬಳೆಯಲ್ಲಿ ಆಹಾರ ವಿತರಣಾ ಕೇಂದ್ರಗಳಿಗೆ ವ್ಯಾಪಕ ದಾಳಿ

ಕುಂಬಳೆ: ಕುಂಬಳೆಯ ಹೋಟೆಲ್‌ಗಳು ಹಾಗೂ ಇತರ ಆಹಾರ ವಿತರಣಾ ಸಂಸ್ಥೆಗಳಿಗೆ ಆರೋಗ್ಯ ಇಲಾಖೆ, ಪಂಚಾಯತ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳು, ಪೇಪರ್ ಗ್ಲಾಸ್, ಪ್ಲೇಟ್‌ಗಳನ್ನು ವಶಪಡಿಸಲಾಗಿದೆ.  ಹೋಟೆಲ್‌ಗಳಲ್ಲಿ ಹಾಗೂ ಇತರ ಆಹಾರ ವಿತರಣಾ ಕೇಂದ್ರಗಳಲ್ಲಿ ಹಳಸಿದ ಆಹಾರ ಪದಾರ್ಥಗಳನ್ನು ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವುದಾಗಿ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಜಂಟಿ ತಪಾಸಣೆ ನಡೆಸಲಾಗಿದೆ. ಆದರೆ ಯಾವುದೇ ಕಡೆಯಲ್ಲಿ ಈ ರೀತಿಯ ಸಾಮಗ್ರಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಹೆಚ್ಚಿನ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳಾದ ಕವರ್, ಪ್ಲೇಟ್, …

ಶಿಥಿಲಗೊಂಡ ಮನೆ: ಮನನೊಂದ ರಬ್ಬರ್ ಕೃಷಿಕ ನೇಣು

ಕಾಸರಗೋಡು: ಮನೆ ಜೀರ್ಣಗೊಂಡು ನಾಶವಾದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದ ರಬ್ಬರ್ ಕೃಷಿಕ ನೇಣು ಬಿಗಿದು ಆತ್ಮಹತ್ಯೆಗೈದಿರುವ ಘಟನೆ ನಡೆದಿದೆ. ಬೇಡಡ್ಕ ಕರಿವೇಡಗಂ ಪಳ್ಳಕ್ಕಾಟ್ ಹೌಸ್‌ನ ವಿ.ಎನ್. ಸುಕುಮಾರನ್ (76) ಮೃತಪಟ್ಟವರು. ನಿನ್ನೆ ಇವರು ಮನೆಯ ಮುಂಭಾಗದಲ್ಲಿರುವ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವನ್ನು ಪತ್ತೆಹಚ್ಚಲಾಗಿತ್ತು. ಬೇಡಡ್ಕ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಮೃತರು ಪತ್ನಿ ಪುಷ್ಪವಲ್ಲಿ, ಮಕ್ಕಳಾದ ಶಾಜಿ, ಶೈಜು, ಸೊಸೆಯಂದಿರಾದ ಸುಧಾ, ನವ್ಯ, ಸಹೋದರರಾದ ಶಿವನ್, ವಿಜಯನ್, ರಾಜನ್, ಸಹೋದರಿಯರಾದ ರಮಣಿ, ಕುಂಞಾಮಿನಿ, ತಂಗಮ್, …

ಹೃದಯಾಘಾತ ವ್ಯಾಪಾರಿ ನಿಧನ

ಉಪ್ಪಳ: ಮಜೀರ್ಪಳ್ಳ ನಿವಾಸಿ ಹಿರಿಯವ್ಯಾಪಾರಿಯಾದ ಪ್ರಭಾಕರ ಕೆ. (62) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ರಾತ್ರಿ 7.30 ರ ವೇಳೆ ಇವರಿಗೆ ಮನೆಯಲ್ಲಿ ಹೃದಯಾಘಾತವುಂಟಾಗಿದೆ. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸುತ್ತಿದ್ದಂತೆ ನಿಧನ ಸಂಭವಿಸಿದೆ. ಮಜೀರ್ಪಳ್ಳದಲ್ಲಿ ವ್ಯಾಪಾರಿಯಾಗಿದ್ದ ಇವರು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವರ್ಕಾಡಿ ಘಟಕದ ಮಾಜಿ ಉಪಾಧ್ಯಕ್ಷರಾಗಿದ್ದಾರೆ. ದಿವಂಗತರಾದ ಜಾಯಿರನ್- ಸೀತಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಶಕೀಲಾ, ಮಕ್ಕಳಾದ ಅಕ್ಷತಾ, ಅನುಷ, ಅಳಿಯಂದಿರಾದ ಅಭಿಲಾಶ್, ಮಂಜಿತ್, ಸಹೋದರ ದಿವಾಕರ ಎಸ್.ಜೆ (ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ …

ಹುಲ್ಲು ಹೆರೆಯುತ್ತಿದ್ದ ವೇಳೆ  ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು

ಬದಿಯಡ್ಕ:  ಹುಲ್ಲು ಹೆರೆಯುತ್ತಿದ್ದ ವೇಳೆ ಹೊಂಡಕ್ಕೆ ಬಿದ್ದು  ಗಾಯಗೊಂಡು ಚಿಕಿತ್ಸೆಯ ಲ್ಲಿದ್ದ ವ್ಯಕ್ತಿ ಮೃತಪಟ್ಟರು. ಮುಂಡ್ಯತ್ತಡ್ಕ ಸಮೀಪದ ಮಲಂಗರದ ಮುಹಮ್ಮದ್ (75) ಮೃತಪಟ್ಟ ವ್ಯಕ್ತಿ. ಈ ತಿಂಗಳ ೨೫ರಂದು ಸಂಜೆ  ಮನೆ ಸಮೀಪ ಹುಲ್ಲು ಹೆರೆಯುತ್ತಿದ್ದ ವೇಳೆ ಆಯತಪ್ಪಿ ಹೊಂಡಕ್ಕೆ ಬಿದ್ದಿದ್ದರೆನ್ನಲಾಗಿದೆ. ಇದರಿಂದ  ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನ ಸಂಭವಿಸಿದೆ. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಲತೀಫ್, ಬಶೀರ್, ಅಸೀಸ್,ಆಯಿಶ, ಅವ್ವಮ್ಮ, ನಫೀಸ, ಮೈಮೂನ,ಸಮೀರ,ಅಳಿಯ-ಸೊಸೆಯಂದಿರಾದ ಕಲಂದರ ಬೀವಿ, ಫಾಯಿಸ, …

ಮಧು ಲಾಟರಿಗೆ ಸುವರ್ಣಕೇರಳದ ದ್ವಿತೀಯ ಬಹುಮಾನ 30ಲಕ್ಷ ರೂ.

ಕಾಸರಗೋಡು: ಸುವರ್ಣ ಕೇರಳ ಲಾಟರಿಯ ದ್ವಿತೀಯ ಬಹುಮಾನ 30 ಲಕ್ಷ ರೂ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರದ ಮಧು ಲಾಟರಿ ಏಜೆನ್ಸಿಯಿಂದ ಮಾರಾಟ ಮಾಡಿದ ಟಿಕೆಟ್‌ಗೆ ಲಭಿಸಿದೆ. ಆರ್‌ವಿ೮೧೫೪೭೪ ನಂಬ್ರದ ಟಿಕೆಟ್‌ಗೆ ಈ ಬಹುಮಾನ ಲಭಿಸಿದೆ. ಇಲ್ಲಿ ಕೇರಳ ಲಾಟರಿಯ ಸಮ್ಮರ್ ಬಂಪರ್ ಟಿಕೆಟ್‌ಗಳ ಮಾರಾಟ ಆರಂಭಗೊಂಡಿದ್ದು ಪ್ರಥಮ ಬಹುಮಾನ 10 ಕೋಟಿ ರೂ. ಆಗಿದೆ ಎಂದು ಮಧು ಲಾಟರೀಸ್‌ನ ಮಾಲಕರು ತಿಳಿಸಿದ್ದಾರೆ.

ಹುಚ್ಚುನಾಯಿ ಕಚ್ಚಿ ಹಸು ಸಾವು: ಮನನೊಂದ ರೈತ ವಿಷಸೇವಿಸಿ ಆತ್ಮಹತ್ಯೆ; ನಾಡಿನಲ್ಲಿ ಶೋಕಸಾಗರ

ಬೋವಿಕ್ಕಾನ: ಹುಚ್ಚುನಾಯಿ ಕಡಿತಕ್ಕೊಳಗಾಗಿ ದನ ಸಾವನ್ನಪ್ಪಿರು ವುದರಿಂದ ಮನನೊಂದ ರೈತ ವಿಷ ಪ್ರಾಶನಗೈದು ಆತ್ಮಹತ್ಯೆಗೈದ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮುಳಿಯಾರು ಪಾಣೂರು ಬಾಲನಡ್ಕದ ನಾರಾಯಣನ್ (80) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಮೊನ್ನೆ ಬೆಳಿಗ್ಗೆ  ಹಿತ್ತಿಲಲ್ಲಿ ಗಂಭೀರಾ ವಸ್ಥೆಯಲ್ಲಿ ಕಂಡುಬಂದಿದ್ದು ಅವರನ್ನು ಮನೆಯವರು ತಕ್ಷಣ ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಭತ್ತ, ಕಂಗು ಹಾಗೂ ಹೈನುಗಾರಿಕಾ ಕೃಷಿಕರಾಗಿರುವ ನಾರಾಯಣನ್‌ರ ಎರಡು ವರ್ಷ ಪ್ರಾಯದ ಹಸುವನ್ನು …